Vinu Manthana - ವಿನು ಮಂಥನ

Vinu Manthana - ವಿನು ಮಂಥನ Contact information, map and directions, contact form, opening hours, services, ratings, photos, videos and announcements from Vinu Manthana - ವಿನು ಮಂಥನ, Media/News Company, 1311, 3rd floor, 6th Cross, Chandra Layout, Behind Vinayaka Hospital, Bangalore.

16/05/2023

ಆರ್ಥಿಕ ಅಪರಾಧಿಗಳಿಗೆ ಶ್ರೀದಲ್ಲೇ ವಿಶಿಷ್ಟ "ಬಿಲ್ಲೆ' ಸಂಖ್ಯೆ'
ಆರ್ಥಿಕ ಅಪರಾಧಗಳನ್ನು ಎಸಗಿ, ಪರದೇಶಗಳಿಗೆ ಓಡಿ, ಹೋಗಿ ತಲೆಮರೆಸಿಕೊಳ್ಳುವವರು ಇನ್ನು ಮುಂದೆ ಎಚ್ಚರಿಕೆಯಿಂದ ಇರುವುದು ಒಳಿತು. ಏಕೆಂದರೆ, ಕೇಂದ್ರ ವಿತ್ತ ಸಚಿವಾಲಯ ಆರ್ಥಿಕ ಅಪರಾಧಿಗಳೆಲ್ಲರಿಗೂ ವಿಶಿಷ್ಟವಾದ "ಬಿಲ್ಲೆ' ಸಂಖ್ಯೆಗಳನ್ನು ಕೊಡಲು ನಿರ್ಧರಿಸಿದೆ. ಈ ಬಿಲ್ಲೆ ಸಂಖ್ಯೆಯನ್ನು ವ್ಯಕ್ತಿಗತವಾಗಿ ಅಪರಾಧ ಎಸಗಿದವರಿಗೆ ಅಷ್ಟೇ ಅಲ್ಲ, ಕಂಪನಿಗಳಿಗೂ ಕೊಡಲಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಕೇಂದ್ರ ವಿತ್ತ ಸಚಿವಾಲಯದ ವ್ಯಾಪ್ತಿಗೆ ಬರುವ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯುರೋ ಈಗಾಗಲೆ ವಿಜಯ್​ ಮಲ್ಯ, ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ, ದೆಹಲಿಯ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಸೇರಿ ಇದುವರೆಗೆ 2.5 ಲಕ್ಷಆರ್ಥಿಕ ಅಪರಾಧಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ. ಇವರೆಲ್ಲರಿಗೂ ವಿಶಿಷ್ಟ ಬಿಲ್ಲೆ ಸಂಖ್ಯೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಹೀಗಿರಲಿದೆ ಬಿಲ್ಲೆ ಸಂಖ್ಯೆ: ವ್ಯಕ್ತಿಗತವಾಗಿ ಆರ್ಥಿಕ ಅಪರಾಧ ಎಸಗಿದ್ದರೆ ಆ ವ್ಯಕ್ತಿಯ ಆಧಾರ್​ಕಾರ್ಡ್​ ಸಂಖ್ಯೆ, ಕಂಪನಿಯಾಗಿದ್ದರೆ ಕಂಪನಿಯ ಪಾನ್​ಕಾರ್ಡ್​ ಆಧರಿಸಿ, ವಿಶಿಷ್ಟ ಬಿಲ್ಲೆ ಸಂಖ್ಯೆಯನ್ನು ಸೃಜಿಸಲಾಗುತ್ತದೆ. ಆಧಾರ್​ಕಾರ್ಡ್​ ಅಥವಾ ಪಾನ್​ ಸಂಖ್ಯೆಯನ್ನು ಆಧರಿಸಿ, ಸೃಜಿಸಲಾಗುವ ಈ ಬಿಲ್ಲೆ ಸಂಖ್ಯೆಯನ್ನು ವಿಶಿಷ್ಟ ಆರ್ಥಿಕ ಅಪರಾಧಿ ಕೋಡ್​ ಎಂದು ಕರೆಯಲಾಗುತ್ತದೆ. ಹಾಗೂ ಈ ಸಂಖ್ಯೆಯನ್ನು ವೈಯಕ್ತಿಕ ಅಪರಾಧವಾಗಿದ್ದರೆ, ಅವರ ಆಧಾರ್​ಕಾರ್ಡ್​ಗೆ ಹಾಗೂ ಕಂಪನಿಯಾಗಿದ್ದರೆ, ಕಂಪನಿಯ ಪಾನ್​ಕಾರ್ಡ್​ನೊಂದಿಗೆ ಜೋಡಣೆ ಮಾಡಲಾಗುತ್ತದೆ.
ಹೀಗೆ ಮಾಡುವುದರಿಂದ, ಆರ್ಥಿಕ ಅಪರಾಧ ಎಸಗಿರುವ ಆರೋಪ ಕೇಳಿ ಬಂದಾಗ ಬಹುತನಿಖಾ ಸಂಸ್ಥೆಗಳ ತನಿಖೆಯನ್ನು ಏಕಕಾಲಕ್ಕೇ ಆರಂಭಿಸಲು ಅನುಕೂಲವಾಗುತ್ತದೆ. ಸದ್ಯ ಇರುವ ವ್ಯವಸ್ಥೆಯಲ್ಲಿ ಆರ್ಥಿಕ ಅಪರಾಧ ಎಸಗಿರುವವರ ವಿರುದ್ಧ ಯಾವುದಾದರೂ ಒಂದು ಸಂಸ್ಥೆ ತನಿಖೆ ನಡೆಸಿ, ಆರೋಪಪಟ್ಟಿ ಇಲ್ಲವೇ ವಿಚಾರಣೆಯ ದೂರು ದಾಖಲಿಸಿಕೊಳ್ಳುವವರೆಗೂ ಬೇರೆ ತನಿಖಾ ಸಂಸ್ಥೆಗಳು ಕಾಯುತ್ತಾ ಕೂಡಬೇಕಾಗುತ್ತದೆ.

ಎಲ್ಲಿ ಸಿಗುತ್ತದೆ ಈ ಮಾಹಿತಿ: ಆರ್ಥಿಕ ಅಪರಾಧ ಎಸಗಿಸದವರ ಎಲ್ಲಾ ಮಾಹಿತಿಗಳು ಬೆರಳಿನ ತುದಿಯಲ್ಲೇ ಲಭ್ಯವಾಗುವ ರೀತಿಯಲ್ಲಿ ರಾಷ್ಟ್ರೀಯ ಆರ್ಥಿಕ ಅಪರಾಧ ದಾಖಲೆಗಳು (ನಿಯೋರ್​ & ಎನ್​ಇಒಆರ್​) ಎಂಬಲ್ಲಿ ಶೇಖರಣೆ ಮಾಡಲಾಗುತ್ತದೆ. ಇದರಿಂದಾಗಿ, ಆರ್ಥಿಕ ಅಪರಾಧ ಎಸಗಿದವರ ವಿವರಗಳು ಕ್ಷಣಾರ್ಧದಲ್ಲಿ ಲಭ್ಯವಾಗುತ್ತದೆ.

11/05/2023

ಕಳೆದ ಸಾಲಿನಲ್ಲಿ 34 ಲಕ್ಷ ಗೃಹಸಾಲ ವಿತರಣೆ

ಬ್ಯಾಂಕ್​ಗಳು ಮತ್ತು ಇತರ ಹಣಕಾಸು ಸಂಸ್ಥೆಗಳು 2022ನೇ ಸಾಲಿನಲ್ಲಿ ಒಟ್ಟು 34 ಲಕ್ಷ ಗೃಹಸಾಲಗಳನ್ನು ವಿತರಿಸಿವೆ. ಈಕ್ವಿ್ಯಾಕ್ಸ್​ ಮತ್ತು ಆಂಡ್ರೊಮೆಡಾ ಸಂಸ್ಥೆಗಳು ಕೊಟ್ಟಿರುವ ಮಾಹಿತಿಯ ಪ್ರಕಾರ ಒಟ್ಟು 9 ಲಕ್ಷ ಕೋಟಿ ರೂಪಾಯಿಗಳನ್ನು ಸಾಲವಾಗಿ ನೀಡಲಾಗಿದೆ.

2022ರ ಜನವರಿಯಿಂದ ಡಿಸೆಂಬರ್​ವರೆಗಿನ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ಸಾಲ ವಿತರಣೆ ಪ್ರಮಾಣ ಶೇ.18 ಇತ್ತು. ಗೃಹಸಾಲ ವಿತರಣೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ.17ರ ವೃದ್ಧಿ ದಾಖಲಾಗಿದೆ.

25 ಲಕ್ಷ ರೂ.ವರೆಗಿನ ಗೃಹಸಾಲ ವಿತರಣೆ ಪ್ರಮಾಣ ಶೇ.67, 75 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗಿನ ಗೃಹಸಾಲ ವಿತರಣೆ ಪ್ರಮಾಣ ಶೇ.36, ಹೆಚ್ಚಳ ದಾಖಲಿಸಿವೆ.

ಇದೇ ಅವಧಿಯಲ್ಲಿ ವೈಯಕ್ತಿಕ ಸಾಲದ ವಿಭಾಗವು ಶೇ.57 ಹೆಚ್ಚಳ ದಾಖಲಿಸಿದೆ. ವೈಯಕ್ತಿಕ ಸಾಲ ವಿತರಣೆ ವಿಭಾಗದಲ್ಲಿ 54 ಕೋಟಿ ಸಾಲಗಳು ಕ್ರಿಯಾಶೀಲವಾಗಿದ್ದು, ಸಾಲ ವಿತರಣೆ ಪ್ರಮಾಣ 100 ಲಕ್ಷ ಕೋಟಿ ರೂ.ಗಳನ್ನು ದಾಟಿದೆ.

ಸುಲಭವಾಗಿ ಸಾಲ ದೊರೆಯುವಿಕೆ ಮತ್ತು ಸಾಲ ವಿತರಿಸುವ ಸಂಸ್ಥೆಗಳ ನಡುವೆ ಆರೋಗ್ಯಕರ ಪೈಪೋಟಿ ಇರುವುದರಿಂದ, ಭಾರತದಲ್ಲಿ ವೈಯಕ್ತಿಕ ಸಾಲಗಳ ಬೇಡಿಕೆ ಹೆಚ್ಚಾಗುತ್ತಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

6.5 ಕೋಟಿ ಗೃಹಬಳಕೆವಸ್ತುಗಳ ಸಾಲ ವಿತರಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವಿಭಾಗದಲ್ಲಿ ಶೇ.48 ಹೆಚ್ಚಳವಾಗಿದೆ.

11/05/2023

ಮ್ಯೂಚುಯಲ್​ ಫಂಡ್​ಗೆ ಹರಿದು ಬಂತು 1.21 ಲಕ್ಷ ಕೋಟಿ ರೂ.
ಪ್ರಸಕ್ತ ಆರ್ಥಿಕ ವರ್ಷ (2023-24) ಆರಂಭದ ತಿಂಗಳು ಏಪ್ರಿಲ್​ನಲ್ಲಿ ಮು್ಯೂಚುಯಲ್​ ಫಂಡ್​ ವಿಭಾಗಕ್ಕೆ ಒಟ್ಟು 1.21 ಲಕ್ಷ ಕೋಟಿ ರೂ. ಹೂಡಿಕೆ ಹರಿದುಬಂದಿದೆ. 42 ಸಂಸ್ಥೆಗಳು ಈ ವಿಭಾಗದಲ್ಲಿ ಕ್ರಿಯಾಶೀಲವಾಗಿದ್ದು, ಡೆಟ್​ ಆಧಾರಿತ ಯೋಜನೆಗಳಲ್ಲಿ ಹೂಡಿಕೆಯ ಆಕರ್ಷಣೆಯಿಂದಾಗಿ, ಗ್ರಾಹಕರು ಆ ವಿಭಾಗದಲ್ಲಿ ಹೆಚ್ಚಿನ ಹೂಡಿಕೆ ಮಾಡಿದ್ದಾರೆ. ಈ ವಿಭಾಗದಲ್ಲಿ ಒಟ್ಟು 1.06 ಲಕ್ಷ ಕೋಟಿ ರೂ. ಹೂಡಿಕೆ ಬಂದಿದೆ.

ಮಾರ್ಚ್​ನಲ್ಲಿ ದಾಖಲೆಯ 20,534 ಕೋಟಿ ರೂ. ಹೂಡಿಕೆ ಕಂಡಿದ್ದ ಈಕ್ವಿಟಿ ಮ್ಯೂಚಯಲ್​ ಫಂಡ್​ ವಿಭಾಗದಲ್ಲಿನ ಏಪ್ರಿಲ್​ನ ತಿಂಗಳ ಹೂಡಿಕೆ ಗಣನೀಯವಾಗಿ ಕಡಿಮೆಯಾಗಿದೆ. ಈ ತಿಂಗಳಿನಲ್ಲಿ ಕೇವಲ 6,480 ಕೋಟಿ ರೂ. ಹೂಡಿಕೆ ಬಂದಿದೆ.

ಈ ಅವಧಿಯಲ್ಲಿ ಷೇರುಪೇಟೆಯಲ್ಲಿ ತೀವ್ರ ಏರಿಕೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಜನರು ಹೆಚ್ಚುವರಿ ಲಾಭದ ಮೊತ್ತವನ್ನು ಹಿಂಪಡೆದುಕೊಳ್ಳುವ ಜತೆಗೆ, ಹೊಸ ಹೂಡಿಕೆಗಳನ್ನು ಮಾಡದಿರುವ ಮನೋಭಾವ ತೋರಿದ್ದು, ಈಕ್ವಿಟಿ ಮ್ಯೂಚಯಲ್​ ಫಂಡ್​ಗಳಲ್ಲಿನ ಹೂಡಿಕೆ ಕಡಿಮೆಯಾಗಲು ಕಾರಣ ಇರಬಹುದು ಎಂದು ಉದ್ಯಮದ ಮಂದಿ ಶಂಕೆ ವ್ಯಕ್ತಪಡಿಸಿದ್ದಾರೆ.

12/03/2023

ಶೇ.7 ಲಾಭಾಂಶದೊಂದಿಗೆ ತೆರಿಗೆ ಉಳಿತಾಯ!
ಆರ್ಥಿಕ ವರ್ಷ ಕೊನೆಗೊಳ್ಳುವ ಕ್ಷಣಗಳು ಹತ್ತಿರಾಗುತ್ತಿದ್ದಂತೆ, ವಿವಿಧ ಯೋಜನೆಗಳಡಿ ತೆರಿಗೆ ಉಳಿಸಲು ಜನರು ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಇಂಥವರಿಗಾಗಿ ಭಾರತೀಯ ಅಂಚೆ ಕಚೇರಿ ವಿವಿಧ ಹೂಡಿಕೆ ಅವಕಾಶಗಳನ್ನು ಕಲ್ಪಿಸುತ್ತಿದೆ. ಅಧಿಕ ಲಾಭಾಂಶದ ಜತೆಗೆ ತೆರಿಗೆ ಉಳಿತಾಯಕ್ಕೆ ಈ ಯೋಜನೆಗಳು ಬಹುಉಪಯೋಗಿ ಆಗಿವೆ. ಈ ಯೋಜನೆಗಳಲ್ಲಿ ಪೋಸ್ಟ್ ಆಫೀಸ್ ಟ್ಯಾಕ್ಸ್ ಸೇವಿಂಗ್ ಸ್ಕೀಂ ತುಂಬಾ ಸಹಕಾರಿಯಾಗಿದೆ.
ಪೋಸ್ಟ್ ಆಫೀಸ್ ಟ್ಯಾಕ್ಸ್ ಸೇವಿಂಗ್ ಸ್ಕೀಂ ಅಡಿ ಜನರು ಹಣವನ್ನು 5 ವರ್ಷಗಳವರೆಗೆ ಹೂಡಿಕೆ ಮಾಡಬಹುದಾಗಿದೆ. ಈ ಹೂಡಿಕೆಗೆ ವಾರ್ಷಿಕವಾಗಿ ಶೇ.7 ಲಾಭಾಂಶವೂ ದೊರೆಯುತ್ತದೆ. ಅಲ್ಲದೆ, ಆದಾಯ ತೆರಿಗೆ ಕಾಯ್ದೆ-1961ರ ಪರಿಚ್ಛೇದ 80ಸಿ ಪ್ರಕಾರ ತೆರಿಗೆ ಉಳಿತಾಯಕ್ಕೂ ಸಹಕರಿಸುತ್ತದೆ. ಆದಾಯ ತೆರಿಗೆ ಪಾವತಿದಾರರ ವಲಯದಲ್ಲಿ ಈ ಯೋಜನೆ ಅತ್ಯಂತ ಜನಪ್ರಿಯವಾಗಿದೆ.
ಪೋಸ್ಟ್ ಆಫೀಸ್ ಟ್ಯಾಕ್ಸ್ ಸೇವಿಂಗ್ ಸ್ಕೀಂ ಒಂದು ವರ್ಷದಿಂದ ಆರಂಭವಾಗಿ 5 ವರ್ಷಗಳ ಅವಧಿಗೆ ಲಭ್ಯವಿದೆ. ಒಂದು ವರ್ಷದ ಹೂಡಿಕೆ ಮಾಡುವವರಿಗೆ ವಾರ್ಷಿಕವಾಗಿ ಶೇ.6.6 ಲಾಭಾಂಶ ದೊರೆಯುತ್ತದೆ. ಅಂತೆಯೇ ಎರಡರಿಂದ ಮೂರು ವರ್ಷದ ಅವಧಿಗೆ ಹೂಡಿಕೆ ಮಾಡುವವರಿಗೆ ಶೇ.6.8ರಿಂದ ಶೇ.6.9 ಲಾಭಾಂಶ ಸಿಗುತ್ತದೆ. 5 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ, ಶೇ.7 ಲಾಭಾಂಶ ದೊರೆಯುತ್ತದೆ.
ಆದಾಯ ತೆರಿಗೆ ಕಾಯ್ದೆ-1961ರ ಪರಿಚ್ಛೇದ 80ಸಿ ಪ್ರಕಾರ 1.5 ಲಕ್ಷ ರೂ.ವರೆಗಿನ ಹೂಡಿಕೆಗಳಿಗೆ ತೆರಿಗೆ ವಿನಾಯಿತಿ ದೊರೆಯುತ್ತದೆ. ಈ ನಿಯಮವು ಐದು ವರ್ಷಗಳವರೆಗಿನ ಹೂಡಿಕೆಗಳಿಗೆ ಮಾತ್ರ ಅನ್ವಯವಾಗುತ್ತದೆ. 5ಕ್ಕಿಂತ ಕಡಿಮೆ ಅವಧಿಗೆ ಅಂದರೆ ಅಲ್ಪಾವಧಿಗೆ ಮಾಡುವ ಹೂಡಿಕೆಗಳಿಗೆ ಲಾಭಾಂಶ ದೊರೆಯುತ್ತದೆ ಹೊರತು ತೆರಿಗೆ ವಿನಾಯಿತಿ ಸಿಗುವುದಿಲ್ಲ.

Address

1311, 3rd Floor, 6th Cross, Chandra Layout, Behind Vinayaka Hospital
Bangalore

Telephone

+919986218990

Website

Alerts

Be the first to know and let us send you an email when Vinu Manthana - ವಿನು ಮಂಥನ posts news and promotions. Your email address will not be used for any other purpose, and you can unsubscribe at any time.

Contact The Business

Send a message to Vinu Manthana - ವಿನು ಮಂಥನ:

Share