Sri Raghavendra Swami Vaibhava

Sri Raghavendra Swami Vaibhava ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏
(2)

ನಾಳೆ ಸೋಮವಾರ ಷಷ್ಠಿ ಪ್ರಯುಕ್ತ|| ಶ್ರೀ ಸುಬ್ರಹ್ಮಣ್ಯಾಷ್ಟಕಮ್ ||                          **********************ಪ್ರಣಮ್ಯ ಶಿರಸಾ ದೇವ...
02/02/2025

ನಾಳೆ ಸೋಮವಾರ ಷಷ್ಠಿ ಪ್ರಯುಕ್ತ

|| ಶ್ರೀ ಸುಬ್ರಹ್ಮಣ್ಯಾಷ್ಟಕಮ್ ||
**********************
ಪ್ರಣಮ್ಯ ಶಿರಸಾ ದೇವಂ ಶಂಕರಂ ಲೋಕ ಶಂಕರಮ್ |
ಕೈಲಾಸವಾಸಿನಂ ಶಾಂತಂ ತಥಾ ಗೌರೀಂ ಸುಮಂಗಳಾಮ್ ||೧||

ಭಾವಾರ್ಥ:-ಶಾಂತನೂ,ಲೋಕಕ್ಕೆ ಸುಖವನ್ನುಂಟು ಮಾಡುವವನೂ,ಕೈಲಾಸವಾಸಿಯೂ ಆಗಿರುವ ದೇವನಿಗೂ, ಅದೇ ರೀತಿಯಾಗಿ ಸೌಭಾಗ್ಯದಾಯಿನಿಯಾದ ಗೌರಿಗೂ ತಲೆಬಾಗಿ ನಮಸ್ಕರಿಸುವೆ.

ಸುಬ್ರಹ್ಮಣ್ಯಾಷ್ಟಕಂ ಸ್ತೋತ್ರಂ ಪಠೇದಾರೋಗ್ಯಸಿದ್ದಯೇ |
ಧನಧಾನ್ಯಾದಿಸಿದ್ಧ್ಯರ್ಥಂ ದೃಢಕಾಯತ್ವಸಿದ್ಧಯೇ ||೨||

ಭಾವಾರ್ಥ:-ಧನ ಧಾನ್ಯಾದಿ ಸಿದ್ಧಿಗೋಸ್ಕರವಾಗಿಯೂ,ದೃಢ ಶರೀರಕ್ಕಾಗಿಯೂ,ಆರೋಗ್ಯ ಸಿದ್ಧಿಗಾಗಿಯೂ ಸುಬ್ರಹ್ಮಣ್ಯಾಷ್ಟಕ ಸ್ತೋತ್ರಗಳನ್ನು ಪಠಿಸಬೇಕು.

ಕಾರ್ತಿಕೇಯಂ ಮಹಾತ್ಮಾನಂ ಕುಮಾರಸ್ವಾಮಿನಂ ಪ್ರಭುಮ್ |
ಆಯುರಾರೋಗ್ಯದಾತಾರಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೩||

ಭಾವಾರ್ಥ:-ಕಾರ್ತಿಕೇಯನೂ,ಮಹಾತ್ಮನೂ,ಕುಮಾರಸ್ವಾಮಿಯೂ,ದೊರೆಯೂ,ಆಯುರಾರೋಗ್ಯವನ್ನು ಕರುಣಿಸುವವನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.

ಈಶಪುತ್ರಂ ಪ್ರೇಮಪುತ್ರಂ ಗೌರೀಪುತ್ರಂ ದಯಾನಿಧಿಮ್ |
ಜ್ಞಾನವೈರಾಗ್ಯಸಂಪನ್ನಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೪||

ಭಾವಾರ್ಥ:-ಶಿವ ತನಯನೂ ಗೌರೀ ಪುತ್ರನೂ,ಅವರೀರ್ವರ ಪ್ರೀತಿಯ ಮಗನೂ,ದಯಾನಿಧಿಯೂ,ಜ್ಞಾನ,ವೈರಾಗ್ಯಗಳಿಂದ ಕೂಡಿರುವಂತಹವನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.

ಸ್ಕಂದಂ ಷಾಣ್ಮಾತುರಂ ಪ್ರಾಜ್ಞಂ ಸರ್ವ ಶತ್ರುವಿಮರ್ದನಮ್ |
ಸಮರ್ಥಂ ಭಾಗ್ಯದಾತಾರಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೫||

ಭಾವಾರ್ಥ:-ಸ್ಕಂದನೂ,ಕಾರ್ತಿಕೇಯನೂ,ಕುಶಲಮತಿಯೂ, ಸರ್ವ ಶತ್ರುಗಳನ್ನು ಸಂಹರಿಸುವವನೂ, ಸಮರ್ಥನೂ ಭಾಗ್ಯವನ್ನು ಕರುಣಿಸುವವನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.

ಮಹಾಸೇನಂ ಮಹಾಪ್ರಾಜ್ಞಂ ಸರ್ವಜ್ಞಂ ಚ ಷಡಾನನಮ್ |
ಪಾರ್ವತೀನಂದನಂ ಕಾಂತಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೬||

ಭಾವಾರ್ಥ:-ದೊಡ್ಡ ಪಡೆಯನ್ನು ಹೊಂದಿರುವವನೂ, ಮಹಾ ನಿಪುಣನೂ, ಎಲ್ಲವನ್ನೂ ಬಲ್ಲವನೂ,ಆರು ಮುಖಗಳನ್ನು ಹೊಂದಿರುವವನೂ,ಪಾರ್ವತೀ ತನಯನೂ,ಷಣ್ಮುಖ ಸ್ವಾಮಿಯೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.

ಗುಹಂ ಧೀರಂ ತಥಾ ವೀರಂ ಹಸಂತಂ ಶಿಖಿವಾಹನಮ್ |
ಸತ್ಸಂತಾನ ಪ್ರದಾತಾರಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೭||

ಭಾವಾರ್ಥ:-ಗುಹನೂ,ಧೀರನೂ, ಹಾಗೆಯೇ ವೀರನೂ,ಮಂದಸ್ಮಿತನೂ,ಸತ್ಸಂತಾನವನ್ನು ಕರುಣಿಸುವವನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.

ಶ್ರೀವಲ್ಲ್ಯಾ ಸಹಿತಂ ಶಾಂತಂ ದೇವಸೇನ್ಯಾ ಸುಸೇವಿತಂ |
ಪಿತೃಭಕ್ತಂ ಮಾತೃ ಭಕ್ತಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೮||

ಭಾವಾರ್ಥ:-ಸಂಪತ್ಪ್ರದವಾಗಿರುವ ನೆಲ್ಲಿಕಾಯಿಯ ಸಹಿತವಾಗಿರುವ,ಶಾಂತನೂ,ದೇವಸೇನೆಯಯಿಂದ ಸೇವಿಸಲ್ಪಡುವವನೂ,ಪಿತೃ ಭಕ್ತನೂ,ಮಾತೃಭಕ್ತನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.

ಸದ್ಗೃಹಸ್ತಂ ಚ ಸತ್ಪುತ್ರಂ ಸದಾಚಾರ್ಯಂ ಸದಾಶ್ರಯಮ್ |
ಸದಾ ಸದ್ಗುಣ ಸಂಪೂರ್ಣಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೯||

ಭಾವಾರ್ಥ:-ಉತ್ತಮ ಗೃಹಸ್ಥನೂ, ಉತ್ತಮ ಪುತ್ರನೂ,ಉತ್ತಮ ಆಚಾರವಂತನೂ,ಉತ್ತಮರಿಗೆ ಆಶ್ರಯದಾತನೂ,ಯಾವತ್ತೂ ಸದ್ಗುಣಗಳಿಂದ ಪರಿಪೂರ್ಣನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.

ಬ್ರಹ್ಮಣ್ಯಂ ಬ್ರಹ್ಮಸಂಪನ್ನಂ ವೇದವೇದಾಂತಕೋವಿದಮ್ |
ವೇದವೇದಾಂತಸಂವೇದ್ಯಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೧೦||

ಭಾವಾರ್ಥ:-ಪುಣ್ಯರೂಪಿಯೂ,ತತ್ವ ಜ್ಞಾನಿಯೂ, ವೇದ ವೇದಾಂತಗಳನ್ನು ಬಲ್ಲವನೂ, ಅವುಗಳಿಂದ ತಿಳಿಯಲ್ಪಡುವಂತಹವನೂ ಆಗಿರುವ ಸುಬ್ರಹ್ಮಣ್ಯನನ್ನು ನಾನು ಭಜಿಸುವೆ.

ಸುಬ್ರಹ್ಮಣ್ಯಾಷ್ಟಕಂ ಸ್ತೋತ್ರಂ ಯ: ಪಠೇತ್ ಸತತಂ ನರ: |
ಆಯುರಾರೋಗ್ಯದಂ ಪುಣ್ಯಂ ಸರ್ವಸೌಭಾಗ್ಯದಾಯಕಮ್ ||೧೧||

ಭಾವಾರ್ಥ:-ಈ ಸುಬ್ರಹ್ಮಣ್ಯಾಷ್ಟಕಗಳನ್ನು ಸತತವಾಗಿ ಯಾವ ಮನುಷ್ಯನು ಓದುವನೋ ಅವನು ಆಯುರಾರೋಗ್ಯಗಳಿಂದ ಕೂಡಿ ಪುಣ್ಯಶಾಲಿಯಾಗಿ ಸರ್ವ ಸೌಭಾಗ್ಯವನ್ನೂ ಹೊಂದುವನು.

ಸರ್ವಾನ್ ಕಾಮಾನವಾಪ್ನೋತಿ ವಿದ್ಯಾಂ ಬುದ್ಧಿಂ ಯಶೋ ಧನಂ |
ನಿತ್ಯಾರೋಗ್ಯಂ ಚ ಲಭತೇ ಸುಬ್ರಹ್ಮಣ್ಯಪ್ರಸಾದತ: ||೧೨||

ಭಾವಾರ್ಥ:-ಸಮಸ್ತ ವಾಂಛಿತಾರ್ಥಗಳು ಲಭಿಸುವುದರೊಂದಿಗೆ ವಿದ್ಯೆ, ಬುದ್ಧಿ,ಯಶಸ್ಸು,ಧನ,ನಿತ್ಯಾರೋಗ್ಯಗಳು ಶ್ರೀ ಸುಬ್ರಹ್ಮಣ್ಯ ಪ್ರಸಾದದಿಂದ ಲಭಿಸುತ್ತವೆ
++++++++++++++++++++++++++++++++++++++++++++++++++++++++++++++++++++++++ || ಇತಿ ವಿದ್ವಾನ್ ಶ್ರೀ ಕೆ.ಜಿ.ಸುಬ್ರಾಯ ಶರ್ಮ ವಿರಚಿತ ಶ್ರೀ ಸುಬ್ರಹ್ಮಣ್ಯಾಷ್ಟಕಮ್ ||
|| ಈ ರೀತಿಯಾಗಿ ವಿದ್ವಾನ್ ಶ್ರೀ ಕೆ.ಜಿ.ಸುಬ್ರಾಯ ಶರ್ಮರಿಂದ ರಚಿಸಲ್ಪಟ್ಟ ಶ್ರೀ ಸುಬ್ರಹ್ಮಣ್ಯಾಷ್ಟಕಂಗಳ ಭಾವಾರ್ಥವು ||
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲರಾಜೇಶ್
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

ರಥಸಪ್ತಮಿ ಪ್ರಯುಕ್ತ  ರಂಗೋಲಿ ಹಾಕುವವರಿಗೆ ಈ ಮಾಹಿತಿಸೂರ್ಯದೇವನ ರಥೋತ್ಸವ ದಿನದ ರಂಗೋಲಿ ಯಲ್ಲಿಒಂದೇ ಚಕ್ರ ಬರೆಯಬೇಕು ಕಾರಣ ಕೆಳಗೆ ಇರುವ ಮಾಹಿತ...
02/02/2025

ರಥಸಪ್ತಮಿ ಪ್ರಯುಕ್ತ ರಂಗೋಲಿ ಹಾಕುವವರಿಗೆ ಈ ಮಾಹಿತಿ
ಸೂರ್ಯದೇವನ ರಥೋತ್ಸವ ದಿನದ ರಂಗೋಲಿ ಯಲ್ಲಿ
ಒಂದೇ ಚಕ್ರ ಬರೆಯಬೇಕು ಕಾರಣ ಕೆಳಗೆ ಇರುವ ಮಾಹಿತಿ ಓದಿ ತಿಳಿಯಿರಿ.

🙏 ಸೂರ್ಯ-ದೇವರ ರಥ

ಸಪ್ತಕುದುರೆಗಳ ರಥವೇರುವ ಸೂರ್ಯನಿಗೆ ನಮಸ್ಕಾರ.

ಓಂ ಭದ್ರಂ ಕರ್ಣೇಭಿಶೃಣುಯಾಮ ದೇವಾ:। ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾ:। ಸ್ಥಿರೈರಂಗೈಸ್ತುಷ್ಟುವಾಗ್‌ಂಸಸ್ತನೂಭಿ:। ವ್ಯಶೇಮ ದೇವಹಿತಂ ಯದಾಯು:। ಸ್ವಸ್ತಿ ನ ಇಂದ್ರೋ ವೃದ್ಧಶ್ರವಾ:। ಸ್ವಸ್ತಿ ನ: ಪೂಷಾ ವಿಶ್ವವೇದಾ:। ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟನೇಮಿ:। ಸ್ವಸ್ತಿನೋ ಬೃಹಸ್ಪತಿರ್ದಧಾತು। ಓಂ ಶಾಂತಿ: ಶಾಂತಿ: ಶಾಂತಿ:।।

ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು.

ಅವನ ರಥದ ಸಾರಥಿ ಅರುಣ.

ಅಂದು ವೇದ ಮಂತ್ರಗಳ ಭಾಗವಾದ ಕೃಷ್ಣ ಯಜುರ್ವೇದ ತೈತ್ತಿರೀಯಾರಣ್ಯಕದಲ್ಲಿ ಪ್ರಸ್ತಾಪಿಸಿರುವ ಅರುಣಪ್ರಶ್ನ ರೀತ್ಯಾ ಸೂರ್ಯ ನಮಸ್ಕಾರಗಳನ್ನು ಮಾಡುವುದು ಪದ್ದತಿ

ಸೂರ್ಯನ ರಥಕ್ಕೆ ಏಳು ಕುದುರೆಗಳು.

ಅವುಗಳ ಹೆಸರುಗಳು ಗಾಯತ್ರಿ, ಬೃಹತೀ, ಉಷ್ಣಿಕ್‌, ಜಗತೀ, ತ್ರಿಷ್ಟುಪ್‌, ಅನುಷ್ಟುಪ್‌ ಮತ್ತು ಪಂಕ್ತಿ.

ಸೂರ್ಯನ ಏಳು ಕುದುರೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ - ಗಾಯತ್ರಿ, ಬ್ರಾಹತಿ, ಉಸ್ನಿಕ್, ಜಗತಿ, ಟ್ರಿಸ್ಟಪ್, ಅನುಸ್ತಪ್ ಮತ್ತು ಪಂಕ್ತಿ . ಋಗ್ವೇದ [1.164.1-5] ಹೇಳುತ್ತಾರೆ:
ಹೆಚ್ಚಿನ ವಿದ್ವಾಂಸರು ಏಳು ಕುದುರೆಗಳು ವಾರದ ದಿನಗಳನ್ನು ಸಹ ಎಸ್ ಪ್ರತಿನಿಧಿಸುತ್ತವೆ ಎಂದು ನಂಬುತ್ತಾರೆ . ಪ್ರಾಚೀನ ಭಾರತೀಯರು ಶ್ರೇಷ್ಠ ಖಗೋಳಶಾಸ್ತ್ರಜ್ಞರಾಗಿದ್ದರು ಮತ್ತು ಇದು ನಿಜವಾಗಬಹುದು. ಆದಾಗ್ಯೂ, ನಾನು ನಂಬಿಕೆ, ಏಳು ಕುದುರೆಗಳು ಬಹುಶಃ ಪ್ರತಿನಿಧಿಸಲು ಸೂರ್ಯ ಏಳು ಬಣ್ಣಗಳನ್ನು ಬೆಳಕು!

ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರೂಢಿಯಲ್ಲಿದೆ.

ಸೂರ್ಯನ 108 ಹೆಸರುಗಳನ್ನು ಉಚ್ಚರಿಸಿ ನಮಸ್ಕಾರಗಳನ್ನು ಮಾಡುವರು. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಅರುಣ ಪ್ರಶ್ನದ ಮಂತ್ರ ಪಠಿಸಿ ನಮಸ್ಕಾರ ಮಾಡುವರು.

ಹೀಗೆ 108 ನಮಸ್ಕಾರಗಳನ್ನು ಮಾಡುವರು. 108 ಆಗದಿದ್ದವರು 12 ನಾಮಗಳನ್ನು ಜಪಿಸಿ ನಮಸ್ಕಾರ ಮಾಡುವರು. ಅವಾವುದೆಂದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ. ಈ ಹನ್ನೆರಡು ಹೆಸರುಗಳು ಹನ್ನೆರಡು ತಿಂಗಳುಗಳ ಸೂಚಕ.

ಇದೇ ತರಹ ಸೂರ್ಯನಿಗೆ ಇನ್ನೂ ಹನ್ನೆರಡು ಹೆಸರುಗಳಿವೆ. ಅವುಗಳು ಯಾವುವೆಂದರೆ, ಆದಿತ್ಯ, ಸವಿತಾ, ಸೂರ್ಯ, ಮಿಹಿರ, ಅರ್ಕ, ಪ್ರಭಾಕರ, ಮಾರ್ತಾಂಡ, ಭಾಸ್ಕರ, ಭಾನು, ಚಿತ್ರಭಾನು, ದಿವಾಕರ ಮತ್ತು ರವಿ. 12 ಜನ ಋತ್ವಿಕರನ್ನು ಮನೆಗೆ ಕರೆಯಿಸಿ ನಮಸ್ಕಾರ ಮಾಡಿಸುವುದೂ ರೂಢಿಯಲ್ಲಿದೆ.

ಆ ಹನ್ನೆರಡು ಜನ ಋತ್ವಿಕರ ಅರುಣ ಪ್ರಶ್ನ್ಯ ರೀತ್ಯಾ ಒಂದು ನಮಸ್ಕಾರವನ್ನು 12 ಎಂದು ಲೆಕ್ಕಕ್ಕೆ ತೆಗೆದುಕೊಳ್ಳುವರು.

ಆ ಸಂದರ್ಭದಲ್ಲಿ ಸೂರ್ಯನಿಗೆ ಪ್ರಿಯವಾದ ರವೆಯ ಪಾಯಸವನ್ನು ನೈವೇದ್ಯಕ್ಕಿರಿಸಿ, ಅದನ್ನು ಪ್ರಸಾದವಾಗಿ ಋತ್ವಿಕರಿಗೆ ಕೊಡುವರು ಮತ್ತು ಇತರರೂ ಸೇವಿಸುವರು.

ಒರಿಸ್ಸಾ ರಾಜ್ಯದಲ್ಲಿನ ಕೊನಾರ್ಕದ ಸೂರ್ಯನ ದೇವಸ್ಥಾನ, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ, ಗುಜರಾತ್‌ ರಾಜ್ಯದ ಮೊಧೆರಾ, ಮಧ್ಯಪ್ರದೇಶದ ಉನಾವು (ಚರ್ಮ ರೋಗಗಳ ನಿವಾರಣೆಗಾಗಿ ಜನರು ಇಲ್ಲಿಗೆ ಹೋಗುವರು), ಅಸ್ಸಾಮಿನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂನ ಸೂರ್ಯನ ದೇವಸ್ಥಾನ ಇವುಗಳು ಭಾರತದಲ್ಲಿರುವ ಪ್ರಮುಖ ದೇವಸ್ಥಾನಗಳು.

ಪುರಾಣಗಳ ಪ್ರಕಾರ ಸೂರ್ಯನಿಗೆ ಇಬ್ಬರು ಪತ್ನಿಯರು - ಸಂಜನಾ ಮತ್ತು ಛಾಯಾ. ಅವನ ಮಕ್ಕಳಲ್ಲಿ ಪ್ರಮುಖರೆಂದರೆ, ಮನು, ಯಮ, ಯಮುನಾ, ಕರ್ಣ, ಸುಗ್ರೀವ ಇತ್ಯಾದಿ. ಶ್ರೀ ರಾಮನು ಸೂರ್ಯನ ವಂಶಸ್ತನು.

ಸೂರ್ಯ ಜ್ಞಾನವನ್ನು ನೀಡುವ ಅಜ್ಞಾನದಿಂದ ಜ್ಞಾನದ ಕಡೆ ಕರೆದುಕೊಂಡು ಹೋಗುವ.

ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ | ತಮೋರಿಯಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||

ಇದನ್ನು ಮಾರ್ಗಶಿರ ಮಾಸದಲ್ಲಿ ನಲ್ವತ್ತು ಬಾರಿ ಜಪಿಸಿ

ಭಗವದ್ಗೀತೆಯಲ್ಲಿ ಕೃಷ್ಣ ನವಗ್ರಹ ಗಳಲ್ಲಿ ತಾನು ಸೂರ್ಯನೆಂದು ಹೇಳಿದ್ದಾನೆ, ನಮಸ್ಕಾರ ಪ್ರಿಯೋ ಭಾನು ಅಂದರೆ ಸೂರ್ಯದೇವನು ನಮಸ್ಕಾರ ಪ್ರಿಯನು,

ಅಂತೆಯೆ ಯೋಗಗಳಲ್ಲಿ ಸೂರ್ಯ ನಮಸ್ಕಾರ ಅತೀ ಪ್ರಮಖ, ಸೂರ್ಯನು ಏಕ ಚಕ್ರದ ರಥವನ್ನು ಹೊಂದಿದ್ದಾನೆ,

ಗರುಡನ ತಮ್ಮನಾದ ಅರುಣ( ಕಾಲುಗಳಿಲ್ಲದ ) ನನ್ನು ಸಾರಥಿ ಯನ್ನು ಹೊಂದಿದ್ದಾನೆ

ಸೂರ್ಯನಮಸ್ಕಾರ ಯೋಗಾಸನಗಳಲ್ಲಿ ಪ್ರಮುಖ ಆಸನ ಸೂರ್ಯನ ೭ ಕುದೆರೆಗಳು ೭ ಬಣ್ಣಗಳನ್ನು ಹೊಂದಿರುತ್ತವೆ, ಸತರ್ವ ಪಾಪಹರಣ ಮಾಡುತ್ತಾನೆ ಕಣ್ಣಿಗೆ ಕಾಣುವ ದೇವರು ಸೂರ್ಯ, ಸುರ್ಯನಾರಾಯಣ ನಿಂದಲೆ ನಮ್ಮ ಗುರುಗಳು ಶುಕ್ಲಯಜುರ್ವೇದವನ್ನು ಪಡೆದರು,

ಕರ್ನಾಟಕದ ಹಂಪೆ, ಮುಳಬಾಗಿಲು, ಸೊಗಲ, ಸೇರಿದಂತೆ ಹಲವು ಕಡೆ ಸೂರ್ಯದೇವಾಲಯಗಳಿವೆ, ಕ್ಷತ್ರಿಯರಲ್ಲಿ ಇಂದಿಗೂ ಸೂರ್ಯವಂಶ ಕ್ಷತ್ರಿಯ ರಿದ್ದಾರೆ ಬಿಹಾರ ರಾಜ್ಯದಲ್ಲಿ ಸೂರ್ಯ ಆರಾಧನೆ ಪ್ರಮುಖವಾಗಿ ಮಾಡುತ್ತಾರೆ,

ರಥಸಪ್ತಮಿ ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ದೇವತೆಗಳ ಉಪಾಸನೆ, ವಿವಿಧ ವ್ರತಗಳು ಮತ್ತು ಉತ್ಸವಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ಕೆಲವು ಕನಿಷ್ಠ ದೇವತೆಗಳ ಉಪಾಸನೆಯೂ ಮಾಡುತ್ತಾರೆ.

ಇದರಲ್ಲಿ ಸೂರ್ಯ, ಚಂದ್ರ, ಅಗ್ನಿ, ವಾಯು, ವರುಣ ಮತ್ತು ಇಂದ್ರ ಪ್ರಮುಖ ಕನಿಷ್ಠ ದೇವತೆಗಳಾಗಿದ್ದಾರೆ. ಮನುಷ್ಯನ ಮತ್ತು ಇತರೆ ಜೀವಿಗಳ ಜೀವನದಲ್ಲಿ ಈ ಕನಿಷ್ಠ ದೇವತೆಗಳು ಬಹುಮುಖ್ಯ ಪಾತ್ರ ವಹಿಸುತ್ತಾರೆ.

ಭಾರತೀಯ ಸಂಸ್ಕೃತಿಯು ಎಲ್ಲರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಕಲಿಸುತ್ತದೆ. ಇದಕ್ಕನುಸಾರ, ಸೂರ್ಯದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ರಥಸಪ್ತಮಿಯ ಹಬ್ಬವನ್ನು ಆಚರಿಸಲಾಗುತ್ತದೆ.

ಈ ದಿನದಂದು ಸೂರ್ಯೋಪಸನೆಯನ್ನು ಮಾಡಲಾಗುತ್ತದೆ. ಮಹತ್ವ ಸಂಖ್ಯೆಗಳಲ್ಲಿ '೭' ಈ ಸಂಖ್ಯೆಗೆ ಹೆಚ್ಚು ಮಹತ್ವ ಇದೆ. ಸಪ್ತಮಿಯಂದು ಶಕ್ತಿ ಮತ್ತು ಚೈತನ್ಯದ ಸಂಗಮ ಆಗಿರುತ್ತದೆ.

ಸೂರ್ಯ ಸೂರ್ಯೋಪಾಸನೆಯ ಮಹತ್ವ : ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದಲ್ಲಿ ಸೂರ್ಯನ ಉಪಾಸನೆಗೆ ಅಪಾರ ಮಹತ್ವ ನೀಡಿದ್ದಾರೆ.

ಸೂರ್ಯೋಪಾಸನೆಯಿಂದ ಶರೀರದಲ್ಲಿರುವ ಚಂದ್ರನಾಡಿಯು ಪೂರ್ಣಪ್ರಮಾಣದಲ್ಲಿ ಮುಚ್ಚಿ ಹೋಗಿ ಸೂರ್ಯನಾಡಿಯು ಬೇಗ ಕಾರ್ಯರತವಾಗಲು ಸಹಾಯವಾಗುತ್ತದೆ.

ಚಂದ್ರನ ಉಪಾಸನೆಗಿಂತ ಸೂರ್ಯನ ಉಪಾಸನೆ ಅಧಿಕ ಶ್ರೇಷ್ಠವಾಗಿದೆ. ಸೂರ್ಯನಿಗೆ ಬೆಳೆಗ್ಗೆ ಅರ್ಘ್ಯ ಅರ್ಪಿಸಿ ಅವನ ದರ್ಶನ ಪಡೆದರೆ ಸಾಕು, ಅವನು ಪ್ರಸನ್ನನಾಗುತ್ತಾನೆ.

ಸೂರ್ಯನ ದರ್ಶನ ಪಡೆಯುವುದು ಅವನ ಉಪಾಸನೆಯ ಒಂದು ಭಾಗವೇ ಆಗಿದೆ. ಉದಯಿಸುತ್ತಿರುವ ಸೂರ್ಯನೆಡೆಗೆ ನೋಡಿ 'ತ್ರಾಟಕ'ವನ್ನು ಮಾಡಿದರೆ ಕಣ್ಣುಗಳ ಕ್ಷಮತೆಯು ಹೆಚ್ಚುತ್ತದೆ.

ಸೂರ್ಯನಮಸ್ಕಾರ ಮಾಡುವುದು: ಯೋಗಾಸನಗಳಲ್ಲಿ ಸೂರ್ಯನಮಸ್ಕಾರ ಮಹತ್ವದ ವ್ಯಾಯಾಮವಾಗಿದೆ. ಇದರಲ್ಲಿ ಸ್ಥೂಲ ಶರೀರದ ಉಪಯೋಗ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುತ್ತಾರೆ. ಹೀಗೆ ೨೦ ವರ್ಷ ನಿತ್ಯವೂ ಸೂರ್ಯನಮಸ್ಕಾರ ಮಾಡಿದರೆ ಸೂರ್ಯದೇವನು ಪ್ರಸನ್ನನಾಗುತ್ತಾನೆ.
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*

*ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು*
ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲ ರಾಜೇಶ್
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

ರಥ ಸಪ್ತಮಿ ದಿನದ ಚಿಕ್ಕ ಮಾಹಿತಿಮಾಘಮಾಸದ ಶುಕ್ಲಪಕ್ಷ ಸಪ್ತಮಿಯಂದು ಸೂರ್ಯನ ಜನನ ವಾಯಿತು. ಕಶ್ಯಪ ಮತ್ತು ಅದಿತಿ ದೇವಿಯರ ಪುತ್ರ. ಹುಟ್ಟಿದೊಡನೆ ಏ...
02/02/2025

ರಥ ಸಪ್ತಮಿ ದಿನದ ಚಿಕ್ಕ ಮಾಹಿತಿ

ಮಾಘಮಾಸದ ಶುಕ್ಲಪಕ್ಷ ಸಪ್ತಮಿಯಂದು ಸೂರ್ಯನ ಜನನ ವಾಯಿತು. ಕಶ್ಯಪ ಮತ್ತು ಅದಿತಿ ದೇವಿಯರ ಪುತ್ರ.

ಹುಟ್ಟಿದೊಡನೆ ಏಳು ಅಶ್ವಗಳು ಎಳೆಯುವ ರಥವನ್ನೇರಿ , ಏಳು ಲೋಕಗಳ ಸಂಚಾರಕ್ಕೆ ಹೊರಟ. ಆದಕ್ಕೆ ಇದು ರಥಸಪ್ತಮಿ.

ಶಿವನಿಗೆ ಹೇಗೆ ‘ಬಿಲ್ವಪತ್ರ ’ಪ್ರಿಯವೊ, ವಿಷ್ಣವಿಗೆ’ತುಳಸಿ’ ಪ್ರಿಯವೊ ಹಾಗೆ ಸೂರ್ಯನಿಗೆ ‘ಅರ್ಕ’ದ ಎಲೆ ಪ್ರಿಯವಂತೆ.

🎙️ ಸ್ನಾನ ಕ್ರಮ::--

ಆಚಮನಾದಿಗಳನ್ನು ಮಾಡಿ, ಸಂಕಲ್ಪದಲ್ಲಿ '......ಮುಖ್ಯಪ್ರಾಣಾಂತರ್ಗತ ಸವಿತೃನಾಮಕ ಶ್ರೀ ಲಕ್ಷ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಷ್ಮೀನಾರಾಯಣ ಪ್ರಿತ್ಯರ್ಥಂ ರಥಸಪ್ತಮೀ ಮಹಾಪರ್ವಕಾಲನಿಮಿತ್ತ ಅರುಣೋದಯೇ ಮಾಘಸ್ನಾನಂ ಕರಿಷ್ಯೇ'/ ಎಂದು ಸೇರಿಸಿಕೊಳ್ಳಬೇಕು.

ನದಿಗಳಲ್ಲಿ ಪ್ರವಾಹಾಭಿಮುಖವಾಗಿ, ಇತರ ಜಲಾಶಯಗಳಲ್ಲಿ ಸೂರ್ಯಾಭಿಮುಖವಾಗಿ ಮುಳುಗಬೇಕು. ಪ್ರತೀ ಒಬ್ಬರು ಮಾಡಲೇ ಬೇಕಾದ ವೃತ ಇದು. ರಥ ಸಪ್ತಮೀ ದಿನ ತೀರ್ಥ ಸ್ನಾನಕ್ಕೆ ಬಹಳ ಮಹತ್ವವಿದೆ . ಆದಿನ ಎಲ್ಲಿಯೂ ತೀರ್ಥಸ್ನಾನಕ್ಕೆ ಹೋಗಲು ಅನಕೂಲವಾಗದಿದ್ದರೆ ಮನೆಯಲ್ಲೇ ಸ್ನಾನದ ವಿಧಿಯನ್ನು ಮಾಡಿ ...

ರಥಸಪ್ತಮಿ ದಿನ ಏಳು ಅರ್ಕದ ಎಲೆಗಳನ್ನು (ಒಂದು ತಲೆಯ ಮೇಲೆ, ಎರಡೆರಡುಭುಜಗಳು಼, ಎದೆ, ಪಾದಗಳಲ್ಲಿ ಎರಡು, ಹಾಗೂ ತೊಡೆಗಳಮೇಲೆ) ಇಟ್ಟು ಕೊಂಡು ಏಳು ಸಲ ನದಿ ನೀರಿನಲ್ಲಿ ಅಥವಾ ಸರೋವರಗಳಲ್ಲಿ ಮುಳುಗಿ ಸ್ನಾನ ಮಾಡಿದರೆ ಏಳು ಜನ್ಮಗಳ ಷಾಪ ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ.ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು಼, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

🎙️ ಪಾಪಗಳಲ್ಲಿ ಏಳು ವಿಧ ::--

1.ಈ ಜನ್ಮದಲ್ಲಿ ಮಾಡಿದ ಪಾಪಗಳು,
2. ಹಿಂದಿನ ಆರು ಜನ್ಮಗಳ ಪಾಪಗಳು,
3. ಕಾಯ(ಶರೀರದ/ದೇಹದ) ಮೂಲಕಮಾಡಿದ ಪಾಪಗಳು
4. ವಾಚ( ಮಾತಿನ) ಮೂಲಕ ಮಾಡಿದ ಪಾಪಗಳು
5. ಮನಸಾ(ಮನಸಿಸನ) ಮೂಲಕ ಮಾಡಿದ ಪಾಪಗಳು 6.ತಿಳಿದು ಮಾಡಿದ ಪಾಪಗಳು
7. ತಿಳಿಯದೇ ಮಾಡಿದ ಪಾಪಗಳು.

🎙️ ಸ್ನಾನದ ವಿಧಿ ಸಂಕಲ್ಪ....

ಮಮ ಇಹ ಜನ್ಮನಿ ಜನ್ಮಾಂತರೇ ಚ ಸಪ್ತವಿಧವಾಪಕ್ಷಯಾರ್ಥಂ ತೀರ್ಥ ಸ್ನಾನಂ ಕರಿಷ್ಯೇ.

🎙️ರಥಸಪ್ತಮಿ ಮಂತ್ರಗಳು ::--

ಏಳುಬಗೆಯ ಪಾಪಪರಿಹಾರಕ್ಕಾಗಿ ಏಳುಬಾರಿ ಮುಳಗಬೇಕು. ಆ ಪಾಪಗಳನ್ನು ಉಲ್ಲೇಖಿಸಿ, ಅವುಗಳಿಂದ ಪರಿಹಾರ ಒದಗಿಸುವಂತೆ ಪ್ರಾರ್ಥಿಸುತ್ತ ಪಠಿಸಬೇಕಾದ ಮಂತ್ರಗಳು ಹೀಗಿವೆ -

ಯದಾಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ||
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜಾತೆ ಚ ಯೇ ಪುನಃ ||
ಇತಿ ಸಪ್ತವಿಧಂ ಪಾಪಂ ಸ್ನಾನಾಮ್ನೇ ಸಪ್ತ ಸಪ್ತಿಕೇ |
ಸಪ್ತವ್ಯಾದಿಸಮಾಯುಕ್ತಂ ಹರ ಮಾಕರಿ ಸಪ್ತಮೀ ||

ಮಾ - ಎಂದರೆ ಸಂಪತ್ತು ಹಾಗೂ ವಿದ್ಯೆ - ಇವೆರಡನ್ನೂ ನೀಡಬಲ್ಲ ರಥಸಪ್ತಮಿಯ ಅಭಿಮಾನಿದೇವತೆ ಸೂರ್ಯನನ್ನು ಸಂಬೋಧಿಸಿ, ತಾನು ಎಸಗಿದ ಏಳು ಬಗೆಯ ಪಾಪದ ಪರಿಹಾರಕ್ಕಾಗಿ ನಿವೇದಿಸಿಕೊಳ್ಳಲಾಗುವದು.

ನಂತರ ಯಥಾ ಶಕ್ತಿ ಯಿಂದು ಒಂದು ಮಣೆ ಮೇಲೆ ಸೂರ್ಯ ರಥದಲ್ಲಿರುವಂತೆ ರಂಗವಲ್ಲಿಹಾಕಿ .....ಪ್ರಾರ್ಥನೆ ಮಾಡಿಕೊಳ್ಳಬೇಕು ..

ಜನನಿ ಸರ್ಮ ಲೋಕಾನಾಂ ಸಪ್ತಮೀ ಸಪ್ತಸಪ್ತಿಕೆ l
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯ ಮಂಡಲೇ ll🙏

ನಂತರ ಗಂಧ ಅಕ್ಷತೆ ಹೂವುಗಳಿಂದ ಪೂಜಿಸಿ ನಮಸ್ಕಾರ ಮಾಡಿ,

ನಮಃ ಸವಿತ್ರೇ ಜಗದೇಕ ಚಕ್ಷುಷೇ ಜಗತ್ ಪ್ರಸೂತಿಸ್ಥಿತಿ ನಾಶಹೇತವೇ lತ್ರಯಾಮಯಾಯ ತ್ರಿಗುಣಾತ್ಮ ಧಾರಿಣೆ
ವಿರಿಂಚಿನಾರಾಯಣ ಶಂಕರಾತ್ಮನೇ ll 🙏

🎙️ ಸೂರ್ಯಾಂತರ್ಗತ ಸವಿತೃನಾರಾಯಣನಿಗೆ ಅರ್ಘ್ಯ:

ಸೂರ್ಯಾಂತರ್ಗತ ಸವಿತೃನಾರಾಯಣನಿಗೆ ಹೀಗೆ ಅರ್ಘ್ಯ ಕೊಡಬೇಕು -

🎙️ ಸೂರ್ಯನಿಗೆ ಹನ್ನೇರಡು ಅರ್ಘ್ಯವನ್ನು ಕೊಡಬೇಕು ..

ಮಿತ್ರಾಯನಮಃ 🙏 ಇದಮರ್ಘ್ಯಂ ದತ್ತಂ ನಮಮ
ರವಯೇ ನಮಃ. 🙏
ಸೂರ್ಯಾಯ ನಮಃ 🙏
ಭಾನವೇ ನಮಃ 🙏
ಖಗಾಯ ನಮಃ 🙏
ಪೂಷ್ಣೇ ನಮಃ 🙏
ಹಿರಣ್ಯಗರ್ಭಾಯ ನಮಃ 🙏
ಮರೀಚಯೇ ನಮಃ 🙏
ಆದಿತ್ಯಾಯ ನಮಃ 🙏
ಸವಿತ್ರೇ ನಮಃ 🙏
ಅರ್ಕಾಯ ನಮಃ 🙏
ಭಾಸ್ಕರಾಯ ನಮಃ 🙏
ಇದಮರ್ಘ್ಯಂ ದತ್ತಂ ನಮಮ
ನಂತರ ಇದ್ದಿಲುಒಲೆ ಇಟ್ಟು ರಂಗವಲ್ಲಿಹಾಕಿ ಇದ್ದಿಲು ಹಾಕಿ ಹಚ್ಚಿ ಅದಕ್ಕೆ ಅರಿಷಿಣ ಕುಂಕುಮ ಎರಿಸಿ ಪೂಜಿಸಿ ಹಾಲನ್ನು ಉಕ್ಕಿಸಿ ಅದೇ ಹಾಲಿನಿಂದ ಗೋದಿ ಪಾಯಸ ಮಾಡಿ ಸೂರ್ಯನಿಗೆ ನೈವಿದ್ಯ ಮಾಡಿದಲ್ಲಿ ಖಂಡಿತ ನೌಮ್ಮ ದಾರಿದ್ರ್ಯ ಹೋಗುತ್ತದೆ಼....

ಸಪ್ತಸಪ್ತಿಬಹುಪ್ರೀತ ಸರ್ವಲೋಕಪ್ರದೀಪನ |
ಸಪ್ತಮೀಸಹಿತೋ ದೇವ ಗೃಹಣಾರ್ಘ್ಯಂ ದಿವಾಕರ ||🙏

#ರಥಸಪ್ತಮಿ

ಈ ದಿನ ಸೂರ್ಯೋದಯದ ಒಳಗೇ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ಕೊಡಲೇಬೇಕು.

ನಿತ್ಯ ಜೀವನ ಕೊಡುವ ದೇವ ಸೂರ್ಯ. ನಮ್ಮ ಪಾಪ ಪುಣ್ಯಗಳಿಗೆ ಸಾಕ್ಷಿ ಸೂರ್ಯದೇವ. ಅಂತಹ ಸೂರ್ಯದೇವನ ಹುಟ್ಟಿದ ದಿನ .

ನಿತ್ಯ ಸೂರ್ಯನಿಗೆ ಯಾರು ಸ್ವಾಗತ ಮಾಡುತ್ತಾರೆ ಅವರ ಆಯುಷ್ಯ ಸೌಭಾಗ್ಯ ವಿದ್ಯೆ ಜ್ಙಾನ ಬುದ್ಧಿಗಳ ಅಭಿವೃದ್ಧಿ. ನಿತ್ಯವೂ ಸೂರ್ಯನೇ ಬಂದು ಯಾರನ್ನು ಎಬ್ಬಿಸುತ್ತಾನೆ ಅವರಿಗೆ ರೋಗ ದಾರಿದ್ರ್ಯ ಅಶಾಂತಿ ಇವುಗಳೇ ಹೆಚ್ಚು.

ನಿತ್ಯದ ಸ್ಥಿತಿ ಏನಾದರಾಗಲಿ ಕನಿಷ್ಠ ನಾಳೆಯೊಂದು ದಿನವಾದರೂ ಸೂರ್ಯೋದಯಕ್ಕೆ ಮೊದಲು ಮಕ್ಕಳು ಮರಿಗಳಿಂದ ಸಹಿತವಾಗಿ ಸ್ನಾನ ಮಾಡಿ ಸೂರ್ಯದೇವನಿಗೆ ಅರ್ಘ್ಯಕೊಡೋಣ.

#ಸ್ನಾನದ ಫಲ.

ಯದ್ಯಜ್ಜನ್ಮ ಕೃತಂ ಪಾಪಂ
ಮಯಾ ಸಪ್ತಸು ಜನ್ಮಸು.
ತನ್ಮಮೇ ರೋಗಂ ಚ ಶೋಕಂ ಚ
ಮಾಕರೀ ಹಂತು ಸಪ್ತಮೀ.

ಯಾವ ಯಾವ ಜನ್ಮದಲ್ಲಿ ಎಷ್ಟೆಲ್ಲ ಪಾಪಗಳನ್ಜು ಮಾಡುದ್ದೆನೆಯೋ ಆ ಎಲ್ಲ ಪಾಪಗಳು ಹಾಗೂ ಪಾಪ ನಿಮಿತ್ತಕವಾಗಿ ಬಂದ ಎಲ್ಲ ಮನೋರೋಗ, ದೇಹದ ರೋಗ ಹಾಗೂ ದುಃಖಗಳನ್ನು ಮಕರಮಾಸದಲ್ಲಿಯ ಸಪ್ತಮೀ ಸ್ನಾನವು ನಾಶಮಾಡುತ್ತದೆ.

"ಏತಜ್ಜನ್ಮ ಕೃತಂ ಪಾಪಂ
ಯಚ್ಚ ಜನ್ಮಾಂತರಾರ್ಚಿತಮ್ .
ಮನೋವಾಕ್ಕಾಯಜಂ ಯಚ್ಚ
ಜ್ಙಾತಾಜ್ಙಾತಂ ಚ ಯತ್ಪುನಃ.
ಇತಿ ಸಪ್ತವಿಧಂ ಪಾಪಂ
ಸ್ನಾನಾನ್ಮೇ ಸಪ್ತ ಸಪ್ತಕೇ.
ಸಪ್ತವ್ಯಾಧಿ ಸಮಾಯುಕ್ತಂ
ಹರ ಮಾಕರಿ ಸಪ್ತಮೀ"

೧)ಈ ಜನ್ಮದಲ್ಲಿ ಮಾಡಿದ ಪಾಪಗಳು, ೨) ಜನ್ಮಾಂತರಗಳಲ್ಲಿ ಮಾಡಿದ ಪಾಪಗಳು. ೩) ಮನಸ್ಸು ೪) ಮಾತು (ಎಲ್ಲ ಇಂದ್ರಿಯಗಳು). ೫) ದೇಹ ಇವುಗಳಿಂದ ಮಾಡಿದ ಪಾಪಗಳು. ೬) ತಿಳಿದು ಮಾಡಿದ ಪಾಪ. ೭) ತಿಳಿಯದೇ ಮಾಡಿದ ಪಾಪ ಹೀಗೇ ಏಳುವಿಧ ಪಾಪಗಳು ನಾಳೆಯ ಬೆಳಿಗ್ಗೆ ಮಾಡುವ ಸ್ನಾನದಿಂದ ನಾಶವಾಗುತ್ತವೆ.

* #ಅರ್ಘ್ಯಮಂತ್ರ*
"ಸಪ್ತಸಪ್ತಿವಹಪ್ರೀತ ಸಪ್ತಲೋಕಪ್ರದೀಪನ.
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ"

ಈಮಂತ್ರ ದಿಂದ ಅರ್ಘ್ಯವನ್ನೂ ಕೊಡಬೇಕು.

ಹಾಗಾದರೆ ನಾಳೆ ದಿನ ಸೂರ್ಯೋದಯಕ್ಕೂ ಮೊದಲೇ ಎಕ್ಕೆ ಎಲೆಯನ್ನು ಏಳು ಸ್ಥಳದಲ್ಲಿ ಇಟ್ಟುಕೊಂಡು, ಸ್ನಾನ ಮಾಡಿ ಅರ್ಘ್ಯಕೋಡೋಣ ಅಲ್ವೇ.....

ಏನೇನೋ ಸುದ್ದಿಗಳನ್ಮು ಕೇಳಿ ಬೆಂಡಾದ ನಮಗೆ ಸೂರ್ಯದೇವ ತನ್ನ ಕರುಣೆಯಿಂದ ಬೆಳಿಗ್ಗೆ ಏಳುವದರಲ್ಲೆ ಒಳ್ಳೊಳ್ಳೆ ಸುದ್ದಿಗಳನ್ನೆ ಕರುಣಿಸಲಿ. ಅನುಗ್ರಹಿಸಲಿ. ಜ್ಙಾನಾದಿಗಳನ್ನು ಅಭಿವೃದ್ಧಿಸಲಿ. ತನ್ನ ಭಕ್ತನನ್ನಾಗಿ ಮಾಡಿಕೊಳ್ಳಲಿ.
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲ ರಾಜೇಶ್
▬▬▬▬▬▬ஜ۩۞۩ஜ▬▬▬▬▬▬

🌹🌺  ಸುಪ್ರಭಾತಂ 🌺🌹🙏ರಥಸಪ್ತಮಿ ಶುಭಾಶಯಗಳು🙏🙏ಸೂರ್ಯಗ್ರಹ ಕವಚಸ್ತೋತ್ರಂ🙏🌹🌹🌹🌹🌹🌹🌹🌹🌹🌹ಓಂ -ಅಸ್ಯ ಶ್ರೀ ಆದಿತ್ಯ ಕವಚ ಸ್ತೋತ್ರ ಮಹಾ ಮಂತ್ರಸ್ಯ, ಅಗಸ್...
02/02/2025

🌹🌺 ಸುಪ್ರಭಾತಂ 🌺🌹
🙏ರಥಸಪ್ತಮಿ ಶುಭಾಶಯಗಳು🙏

🙏ಸೂರ್ಯಗ್ರಹ ಕವಚಸ್ತೋತ್ರಂ🙏
🌹🌹🌹🌹🌹🌹🌹🌹🌹🌹

ಓಂ -ಅಸ್ಯ ಶ್ರೀ ಆದಿತ್ಯ ಕವಚ ಸ್ತೋತ್ರ ಮಹಾ ಮಂತ್ರಸ್ಯ,
ಅಗಸ್ತ್ಯೋ ಭಗವಾನ್ ಋಷಿಃ,
ಅನುಷ್ಟುಪ್ ಛಂದಃ,
ಆದಿತ್ಯೋ ದೇವತಾ,
ಘ್ರೀಂ ಬೀಜಂ,
ಣೀಂ - ಶಕ್ತಿಃ,
ಸೂಂ ಕೀಲಕಂ,
ಮಮ ಆದಿತ್ಯ ಪ್ರಸಾದ ಸಿದ್ಧ್ಯರ್ಥೇ ಸ್ತೋತ್ರ ಮಂತ್ರ ಜಪೇ ವಿನಿಯೋಗಃ||

ಧ್ಯಾನಂ ||
ಜಪಾಕುಸುಮಸಂಕಾಶಂ
ದ್ವಿಭುಜಂ ಪದ್ಮಹಸ್ತಕಂ|
ಸಿಂಧೂರಾಂಬರಮಾಲ್ಯಂ ಚ
ರಕ್ತಗಂಧಾನುಲೇಪನಂ||

ಮಾಣಿಕ್ಯ ರತ್ನ ಖಚಿತಂ
ಸರ್ವಾಭರಣಭೂಷಿತಂ|
ಸಪ್ತಾಶ್ವ ರಥವಾಹಂತು
ಮೇರುಂ ಚೈವ ಪ್ರದಕ್ಷಿಣಂ||

ದೇವಾಸುರವರೈರ್ವಂದ್ಯಂ
ಸೃಣಿಭಿಃ ಪರಿಸೇವಿತಂ|
ಧ್ಯಾಯೇತ್ ಪಠೇತ್ಸುವರ್ಣಾಭಂ
ಸೂರ್ಯಸ್ಯ ಕವಚಂ ಮುದಾ||

ಘೃಣಿಃ ಪಾತು ಶಿರೋದೇಶಂ|
ಸೂರ್ಯಃ ಪಾತು ಲಲಾಟಕಂ||
ಆದಿತ್ಯೋ ಲೋಚನೇ ಪಾತು|
ಶ್ರುತಿಂ ಪಾತು ದಿವಾಕರಃ||
ಘ್ರಾಣಂ ಪಾತು ಸದಾ ಭಾನುಃ|
ಮುಖಂ ಪಾತು ಸದಾ ರವಿಃ||
ಜಿಹ್ವಾಂ ಪಾತು ಜಗನ್ನೇತ್ರಃ|
ಕಂಠಂ ಪಾತು ವಿಭಾವಸುಃ||
ಸ್ಕಂಧೌ ಗ್ರಹಪತಿಃ ಪಾತು|
ಭುಜೌ ಪಾತು ಪ್ರಭಾಕರಃ||
ಕರವಬ್ಜ ಕರಃ ಪಾತು|
ಹೃದಯಂ ಪಾತು ಭಾನುಮಾನ್||
ಮಧ್ಯಂ ಪಾತು ಸುಸಪ್ತಾಶ್ವೋ|
ನಾಭಿಂ ಪಾತು ನಭೋಮಣಿಃ||
ದ್ವಾದಶಾತ್ಮಾ ಕಟಿಂ ಪಾತು|
ಸವಿತಾ ಪಾತು ಸಕ್ಥಿನೀ||
ಊರೂ ಪಾತು ಸುರಶ್ರೇಷ್ಠೋ|
ಜಾನುನೀ ಪಾತು ಭಾಸ್ಕರಃ||
ಜಂಘೇ ಮೇ ಪಾತು ಮಾರ್ತಾಡೋ|
ಗುಲ್ಫೌ ಪಾತು ತ್ವಿಷಾಂಪತಿಃ||
ಪಾದೌ ಪಾತು ದಿನಮಣಿಃ |
ಪಾತು ಮಿತ್ರೋಖಿಲಂವಪುಃ||

ಆದಿತ್ಯ ಕವಚಂ ಪುಣ್ಯಮಭೇದ್ಯಂ ವಜ್ರ ಸನ್ನಿಭಂ||
ಸರ್ವರೋಗಭಯಾದಿಭ್ಯೋ
ಮುಚ್ಯತೇ ನಾತ್ರ ಸಂಶಯಃ||
ಸಂವತ್ಸರ ಮುಪಾಸಿತ್ವಾ
ಸಾಮ್ರಾಜ್ಯ ಪದವೀಂ ಲಭೇತ್||

ಧ್ಯಾನಂ||
ಅನೇಕ ರತ್ನ ಸಂಯುಕ್ತಂ
ಸ್ವರ್ಣಮಾಣಿಕ್ಯ ಭೂಷಣಂ|
ಕಲ್ಪವೃಕ್ಷಸಮಾಕೀರ್ಣಂ
ಕದಂಬ ಕುಸುಮ ಪ್ರಿಯಂ||

ಅಶೇಷ ರೋಗ ಶಾಂತ್ಯರ್ಥಂ|
ಧ್ಯಾಯೇದಾದಿತ್ಯ ಮಂಡಲಂ||

ಸಿಂಧೂರವರ್ಣಾಯ
ಸುಮಂಡಲಾಯ|
ಸುವರ್ಣ ರತ್ನಾಭರಣಾಯ ತುಭ್ಯಂ||
ಪದ್ಮಾಭಿನೇತ್ರಾಯ ಸುಪಂಕಜಾಯ|
ಬ್ರಹ್ಮೇಂದ್ರನಾರಾಯಣಶಂಕರಾಯ||
ಸರಕ್ತಚೂರ್ಣಂ
ಸಸುವರ್ಣತೋಯಂ|
ಸಕುಂಕುಮಾಭಂ
ಸಕುಶಂ ಸಪುಷ್ಪಂ||
ಪ್ರದತ್ತಮಾದಾಯ ಚ ಹೇಮಪಾತ್ರೆ|
ಪ್ರಶಸ್ತನಾದಂ ಭಗವಾನ್ ಪ್ರಸೀದ||

ಇತಿ ಶ್ರೀ ಪದ್ಮಪುರಾಣೇ
ಆದಿತ್ಯ ಕವಚಂ ಸಂಪೂರ್ಣಂ||

🙏ಓಂ ತತ್ಸತ್ 🙏
🙏ಬ್ರಹ್ಮಾರ್ಪಣಮಸ್ತು 🙏

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲ ರಾಜೇಶ್
▬▬▬▬▬▬ஜ۩۞۩ஜ▬▬▬▬▬▬

02/02/2025

ಇಂದಿನ ರಾಯರ ಮಂಗಳಾರತಿ. 02/02/2025

ಪೌರಾಣಿಕ ಹಿನ್ನೆಲೆದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮನನಿಗ...
02/02/2025

ಪೌರಾಣಿಕ ಹಿನ್ನೆಲೆ

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ.

ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮನನಿಗೆ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ.

ಈ ಬಗ್ಗೆ ಜ್ಯೋತಿಷಿಗಳಿಂದ ಮಾಹಿತಿ ಪಡೆದು ಸಂಚಿತಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಚರಿಸಲು ಹೇಳಿದ್ದರು.

ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು. ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು.

ಅಲ್ಲದೆ ರಾವಣನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ ಆದಿತ್ಯಹೃದಯದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ.

ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.

ಶ್ರೀರಾಮ ಸೂರ್ಯವಂಶದವನಾದರೆ ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಯಮ ಸೂರ್ಯನ ಪುತ್ರರಾಗಿದ್ದಾರೆ.

ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ.

ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣಗಳು ಸಾರಿ ಸಾರಿ ಹೇಳುತ್ತಿವೆ.

ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಇನ್ನು, ‘ಭೂರ್ಭುವಸ್ವಃ'. . . ಎಂಬ ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುತ್ತದೆ.

ಎಕ್ಕದೆಲೆಯ ಸ್ನಾನ
ಸೂರ್ಯನ ಕಿರಣಗಳಲ್ಲಿನ ಸತ್ವಗಳನ್ನು ಹೀರಿಕೊಂಡಿರುವ ಅರ್ಕದೆಲೆ ಅಥವಾ ಎಕ್ಕದೆಲೆಗಳನ್ನು ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದಗಳ ಮೇಲಿರಿಸಿ ಸ್ನಾನ ಮಾಡುವುದು ರಥಸಪ್ತಮಿಯ ವಿಶೇಷತೆಗಳಲ್ಲೊಂದು.

ಎಕ್ಕದ ಎಲೆಗಳಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ, ಅಷ್ಟೇ ಅಲ್ಲದೇ, ದೇಹದಲ್ಲಿನ ಕೀಲು ನೋವು, ಹಲ್ಲು ನೋವು, ಹೊಟ್ಟೆ ನೋವುಗಳಿಗೂ ಸಹ ಎಕ್ಕದ ಗಿಡ, ಅದರ ಎಲೆಗಳಲ್ಲಿರುವ ಔಷಧೀಯ ಅಂಶಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿಯೇ ಈ ದಿನ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

ಮುಂದುವರೆಯುತ್ತದೆ..

ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿತಿಥಿಗೆ ಅರ್ಘ್ಯ -ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ...
02/02/2025

ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿತಿಥಿಗೆ ಅರ್ಘ್ಯ -

ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯಜನನಿಯಾದ ಸಪ್ತಮೀ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.

ಸೂರ್ಯಾರ್ಘ್ಯ ಮಂತ್ರ -

*ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ |*

*ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ ||*

ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು.

ಸಪ್ತಮೀ ಅರ್ಘ್ಯಮಂತ್ರ -

*ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ |*

*ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ ||*

ಎಂದು ಸಪ್ತಮೀ ತಿಥಿಯ ಕುರಿತು ಅರ್ಘ್ಯ ಕೊಡಬೇಕು.

ರಥಸಪ್ತಮಿಯ ಪರ್ವ ಎಲ್ಲಾ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದ.

ರಥಸಪ್ತಮಿ ಸೂರ್ಯನ ಆರಾಧಿಸುವ ಅವನ ಕಾಂತಿಯಿಂದ ನಮ್ಮ ಬಾಳಿನ ಕತ್ತಲು ಸರಿದು ಹೊಸ ಬೆಳಕು ಮೂಡಲಿ ಸರ್ವರಲಿ.
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*

*ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು*
ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲ ರಾಜೇಶ್
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

*ಶ್ರೀ ಸೂರ್ಯಾಂಜನೇಯ ಸ್ವಾಮಿ*  *ಸೂರ್ಯದೇವ* ಮತ್ತು *ಆಂಜನೇಯಸ್ವಾಮಿ*   ಒಂದೇ ಕಡೆ ನೆಲೆಸಿರುವ *ಏಕೈಕ   ದೇವಾಲಯ  ಸೂರ್ಯಪುರ ಸೂರ್ಯಾಂಜನೇಯ ಸ್ವ...
02/02/2025

*ಶ್ರೀ ಸೂರ್ಯಾಂಜನೇಯ ಸ್ವಾಮಿ*

*ಸೂರ್ಯದೇವ* ಮತ್ತು *ಆಂಜನೇಯಸ್ವಾಮಿ* ಒಂದೇ ಕಡೆ ನೆಲೆಸಿರುವ *ಏಕೈಕ ದೇವಾಲಯ ಸೂರ್ಯಪುರ ಸೂರ್ಯಾಂಜನೇಯ ಸ್ವಾಮಿ ದೇವಾಲಯ.*.

*ಗುರು ಶಿಷ್ಯರು* ಒಂದೇ ಕಡೆ ನೆಲೆಸಿರುವ ಏಕೈಕ ಪುಣ್ಯಕ್ಷೇತ್ರ *ಶ್ರೀ ಕ್ಷೇತ್ರ ಸೂರ್ಯಪುರ*.

ಬಹಳಷ್ಟು ಜನಕ್ಕೆ ಪುರಾಣ ಪ್ರಸಿದ್ದ ಐತಿಹಾಸಿಕ ಪುಣ್ಯಕ್ಷೇತ್ರ *ಸೂರ್ಯಪುರ* ದ ಬಗ್ಗೆ ಗೊತ್ತಿಲ್ಲ. ಆಂಜನೇಯನು ತನ್ನ ಗುರುವಾದ ಭಗವಾನ್ ಸೂರ್ಯದೇವನಿಂದ ವಿದ್ಯೆ ಕಲಿತ ಭೂಮಿ. ಹಾಗೂ ಸೂರ್ಯಪುರದಲ್ಲಿ ಆಂಜನೇಯ ಸ್ವಾಮಿ *ದಕ್ಷಿಣಾಭಿ ಮುಖವಾಗಿದ್ದು ಸಂಪೂರ್ಣ ವಾಸ್ತುವಿನಿಂದ ಕೂಡಿದ್ದು ಭಕ್ತರ ಸಕಲ . ಕೋರಿಕೆಗಳನ್ನು ನೆರವೇರಿಸುತ್ತಿರುವ ಅಪಾರ* *ಮಹಿಮೆಯನ್ನ ಹೊಂದಿರುವ* ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ
ಸೂರ್ಯಪುರ ಎಲ್ಲರಿಗೂ ತಿಳಿಯುವಂತಾಗಲಿ.

*ಕ್ಷೇತ್ರದ ಇತಿಹಾಸ*

👍ಸುಂದರ ಪ್ರಕೃತಿಯ ನಿಸರ್ಗದ ತಾಣ ಸೂರ್ಯಪುರ. ಪುರಾತನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಸೂರ್ಯಪುರ, ಧ್ಯಾನ,ಯೋಗ ಮತ್ತು ಮನಃಶಾಂತಿಗೆ ಸೂಕ್ತವಾದ ಸ್ಥಳ.

👍 ಸೂರ್ಯಪುರ ಗ್ರಾಮದ ಮನೆಯೊಳಗಿನ *ಒಲೆ* ಒಂದರಲ್ಲಿ *ಹುಣಸೆಗಿಡ* ಹುಟ್ಟಿದಾಗ ಅದು ಅಪಶಕುನ ಎಂದು ಜನರು ಈ ಗ್ರಾಮವನ್ನೆ ಖಾಲಿ ಮಾಡಿ ಬೇರೆ ಪ್ರದೇಶಗಳಿಗೆ ವಲಸೆ ಹೋಗಿ ನೆಲೆಸಿದ್ದಾರೆ.

👍ಇತ್ತೀಚೆಗೆ ಅಳಿದುಳಿದ
ಈ ಗ್ರಾಮದ ದೇವಾಲಯಗಳನ್ನು *ಸೂರ್ಯಪುರ ಆಶ್ರಮ (ಮಠ)ದ ಟ್ರಸ್ಟ್* ವತಿಯಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ.ಸೂರ್ಯನಿಗೆ ಪ್ರಿಯವಾದ ವಾರ ಬಾನುವಾರ.ಆಂಜನೇಯನಿಗೆ ಮಂಗಳವಾರ ಮತ್ತು ಶನಿವಾರ ಹೀಗಾಗಿ *ಬಾನುವಾರ,ಮಂಗಳವಾರ ಮತ್ತು ಶನಿವಾರ ಹಾಗೂ ಹಬ್ಬಗಳು ಮತ್ತು ಸರ್ಕಾರಿ ರಜಾದಿನಗಳಲ್ಲಿ*
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

👍ಸೂರ್ಯಪುರ
ಗ್ರಾಮದಲ್ಲಿ ಮುಂಚೆ ನೆಲೆಸಿದ್ದವರ ವಂಶಸ್ಥರು ಈಗಲೂ ಕೂಡ ಅನಾದಿಕಾಲದಿಂದಲೂ ನೆಲೆಸಿರುವ ಇಲ್ಲಿನ *ಗ್ರಾಮ ದೇವತೆ* ಮಾರಮ್ಮನಿಗೆ ಮತ್ತು *ಹರಿಹರೇಶ್ವರ* ಹಾಗೂ *ಸೂರ್ಯಾಂಜನೇಯ* ಸ್ವಾಮಿಗೆ ನಡೆದುಕೊಳ್ಳುತ್ತಾರೆ.

👍ಹಿಂದೆ ಈ ಗ್ರಾಮದಲ್ಲಿ ಜನವಸತಿ ಇತ್ತು ಮತ್ತು ಕೋಟೆ ಕೊತ್ತಲುಗಳಿಂದ ಕೂಡಿತ್ತು ಈ ಗ್ರಾಮ ಎಂಬುದಕ್ಕೆ ನಿದರ್ಶನವಾಗಿ ಇಲ್ಲಿನ *ಗುಟ್ಟೆ* ಮೇಲೆ ಕುರುಹುಗಳನ್ನು ಕಾಣಬಹುದು.
👍 ಋಷಿಮುನಿಗಳು ತಪಸ್ಸುಗೈದ ಸ್ಥಳವಾಗಿದ್ದ *ಸೂರ್ಯಪುರ*, ವಿಜಯನಗರ ಸಾಮ್ರಾಜ್ಯದ ಪತನಾನಂತರ ತನ್ನ ಭವ್ಯತೆಯನ್ನು ಕಳೆದುಕೊಂಡಿತು.

👍ಮಾನವನಿಗೆ ಹಣಕ್ಕಿಂತ ಆರೋಗ್ಯವೇ ಮುಖ್ಯ . *ಆರೋಗ್ಯವೇ ಭಾಗ್ಯ* ಎಂಬ ಗಾದೆ ಇದೆ. ಆದರೆ ಆರೋಗ್ಯವನ್ನು ಕೊಡುವ ಸೂರ್ಯ ದೇವಾಲಯಗಳು ಇರುವುದು ಅಪರೂಪ. ಅದರಲ್ಲಿಯ *ಗುರು ಶಿಷ್ಯರು* ಒಂದೇ ಕಡೇ ನೆಲೆಸಿರುವ *ಏಕೈಕ ಕ್ಷೇತ್ರ*. ಜೀವನದಲ್ಲಿ ಒಮ್ಮೆಯಾದರೂ *ಹಿಂದೂಗಳು* ಇಂತಹ ಅಪರೂಪದ ಪುಣ್ಯಕ್ಷೇತ್ರ ದರ್ಶನ ಮಾಡಬೇಕು.

👍ಆರೋಗ್ಯಕ್ಕೆ ಅಧಿಪತಿಯಾದ *ರವಿ* ಯನ್ನು ಪ್ರತಿನಿತ್ಯ ಪೂಜಿಸುವುದರಿಂದ *ಆರೋಗ್ಯ* ಲಭಿಸುವುದರ ಜೊತೆಗೆ *ಹೃದಯಾಘಾತ(Heart Attack)* ಸಂಭವಿಸುವುದಿಲ್ಲ.
👍ಪ್ರತಿ ನಿತ್ಯ *ಸೂರ್ಯ ನಮಸ್ಕಾರ*(ಯೋಗ) ಮಾಡುವುದರಿಂದ ಆರೋಗ್ಯ ಲಭಿಸುತ್ತದೆ.
👍ಆರೋಗ್ಯದ ಸಮಸ್ಯೆಗಳು,ಕಣ್ಣು ಮತ್ತು ಹೃದಯದ ಸಮಸ್ಯೆಗಳಿದ್ದಾಗ *ವ್ಯಾಪಾರ, ವ್ಯವಹಾರ, ಕೋರ್ಟ್ ಕೇಸ್ ಗಳು, ಹಾಗೂ ಚುನಾವಣೆಗಳಲ್ಲಿ ಜಯಗಳಿಸಲು *ಪ್ರಸಿದ್ಧ ಜ್ಯೋತಿಷಿ* ಗಳು ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡಿ ಬರುವಂತೆ ಸಲಹೆ ನೀಡುತ್ತಾರೆ. ಹಾಗೂ ಆರೋಗ್ಯದಿಂದ ಚೇತರಿಸಿಕೊಳ್ಳಲು ಸ್ವಾಮಿ ಸನ್ನಿಧಿಯಲ್ಲಿಪೂಜೆ ಮತ್ತು *ಹೋಮ* ನಡೆಸುತ್ತಾರೆ.

👍 *ಆದಿತ್ಯ ಹೃದಯ* ಸ್ತೋತ್ರ ಪಠಿಸುವುದರಿಂದ ಕೋರ್ಟ್,ಕಛೇರಿ,ವ್ಯಾಪಾರ,ವ್ಯವಹಾರಗಳಲ್ಲಿ ಜಯ ಲಭಿಸುತ್ತದೆ. ಶ್ರೀರಾಮನು *ಆಗಸ್ತ್ಯ ಮುನಿ* ಗಳ ಸಲಹೆಯಂತೆ *ಆದಿತ್ಯ ಹೃದಯ ಸ್ತೋತ್ರ* ಪಠಿಸಿ ರಾವಣನನ್ನು ಜಯಿಸಿದನು ಎಂಧು ರಾಮಾಯಣದಲ್ಲಿ ಉಲ್ಲೇಖವಾಗಿದೆ.

👍ನವಗ್ರಹಗಳ ಆದಿಪತಿ *ಸೂರ್ಯ*. ಹಾಗೂ *ಆಂಜನೇಯ* ಸ್ವಾಮಿ ಒಟ್ಟಿಗೆ ಇರುವ *ಏಕೈಕ ದೇವಾಲಯ*

👍ಪ್ರತಿ ವರ್ಷ ಮಾಘ ಮಾಸ ಶುಕ್ಲ ಪಕ್ಷ ಸಪ್ತಮಿ *(ರಥಸಪ್ತಮಿ)* ದಿನ
ಸೂರ್ಯಪುರದಲ್ಲಿ ಶ್ರೀ ಸೂರ್ಯಾಂಜನೇಯ ಸ್ವಾಮಿ *ರಥೋತ್ಸವ*
ಜರುಗುತ್ತದೆ.

👍 ಆರೋಗ್ಯಕ್ಕೆ ಅಧಿಪತಿಯಾದ *ಸೂರ್ಯ* ಹುಟ್ಟಿದ ದಿನ ವಾದ *ರಥಸಪ್ತಮಿ* ದಿನ ಪ್ರತಿ ವರ್ಷ ಪುರುಷರು ಮತ್ತು ಮಹಿಳೆಯರು *ಸೂರ್ಯಮಾಲೆ* ಧರಿಸಿ ಶ್ರೀ ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡುತ್ತಾರೆ. *ಸೂರ್ಯಮಾಲೆ* ಧರಿಸಿ ಸೂರ್ಯದೇವನ ದರ್ಶನ ಮಾಡಿದರೆ *ಆರೋಗ್ಯ* ದಿಂದ ಇರುತ್ತಾರೆ, ಹಾಗೂ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿದೆ.

👍 *ಸೂರ್ಯಪುರ*
ಇಲ್ಲಿ ಯಾವುದೇ ರೀತಿಯ *ಅಂಗಡಿಗಳು* ಇರುವುದಿಲ್ಲವಾದ್ದರಿಂದ *ಹೂ ಹಣ್ಣು* ಮುಂತಾದ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಬೇಕು.
👍ಪ್ರತಿದಿನ *ಪ್ರಸಾದ* ವ್ಯವಸ್ಥೆ ಇರುತ್ತದೆ. ಹಾಗೂ ಭಕ್ತರು ಉಳಿದುಕೊಳ್ಳಲು *ರೂಮು* ಗಳು ದೊರೆಯುತ್ತವೆ.

👍 ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ *ಓಂ ಶ್ರೀ ಸೂರ್ಯಾಂಜನೇಯ ಸ್ವಾಮಿ ನಮಃ* ಎಂದು
*48* ಬಾರಿ ಬರೆದು ಸ್ವಾಮಿಯ ಮುಂದೆ ಎಳ್ಳು ಬತ್ತಿ ಹಚ್ಚಿ ಹರಕೆ ಮಾಡಿಕೊಂಡು ಅರಿಶಿಣ ಹಚ್ಚಿ *ಕಾಣಿಕೆ* ಇಟ್ಟು ನಂತರ ಕೋರಿಕೆ ಪತ್ರವನ್ನು ಹುಂಡಿಯಲ್ಲಿ ಹಾಕಿ ಹೋದರೆ ಖಂಡಿತವಾಗಿ ತಮ್ಮ ಕೋರಿಕೆ ನೆರವೇರುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.

👍ಸೂರ್ಯಪುರದ ಗುಟ್ಟೆಯ ಮೇಲಿರುವ *ಗುಟ್ಟೆ ಗಣಪತಿ* ದರ್ಶನ ಮೊದಲು ಮಾಡಿ ನಂತರ ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡುವುದು ಇಲ್ಲಿನ ಸಂಪ್ರದಾಯ.

👍 ಆರೋಗ್ಯ,ಆಯುಸ್ಸು ಐಶ್ವರ್ಯ, ಸಂತಾನ ಬಾಗ್ಯ, ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ, *ಅಪಾರ ಮಹಿಮೆ* ಯನ್ನು ಹೊಂದಿರುವ *ಶ್ರೀ ಸೂರ್ಯಾಂಜನೇಯ ಸ್ವಾಮಿ* ನೆಲೆಸಿರುವ *ಸೂರ್ಯಪುರ* ಒಂದು ಪುಣ್ಯ ಕ್ಷೇತ್ರವಾಗಿದೆ.
ಸೂರ್ಯಪುರ ಇಲ್ಲಿಗೆ ಭೇಟಿ ಕೊಡುವ ಭಕ್ತರು *ಗೂಗಲ್ ಮ್ಯಾಪ್* ನಲ್ಲಿ ಈ ರೀತಿ ಸರ್ಚ್ ಮಾಡಿ ನೋಡಬಹುದು.
*Suryanjaneya temple*
ಸೂರ್ಯಾಂಜನೇಯ ದೇವಸ್ಥಾನ
*Suryapura mutt*
ಸೂರ್ಯಪುರ ಮಠ

ಸುಂದರ ಪ್ರಕೃತಿಯ ನಿಸರ್ಗದ ಮಡಿಲಲ್ಲಿ ಕಂಗೊಳಿಸುತ್ತಿರುವ
*ಶ್ರೀ ಕ್ಷೇತ್ರ ಸೂರ್ಯಪುರ* ಬೆಂಗಳೂರು ಇಲ್ಲಿಂದ 60.ಕಿ.ಮೀ. ಮತ್ತು ತುಮಕೂರು ಇಲ್ಲಿಂದ 24 ಕಿ.ಮೀ. ಹಾಗೂ ಕೊರಟಗೆರೆ ಇಲ್ಲಿಂದ 19 .ಕಿ.ಮೀ. ಮತ್ತು ಕೋಳಾಲ ಇಲ್ಲಿಂದ 6.ಕಿ.ಮೀ.ದೂರದಲ್ಲಿದೆ.

ಹೆಚ್ಚಿನ ವಿವರಗಳಿಗೆ *ಸೂರ್ಯಪುರ ಆಶ್ರಮ*
ದ ಮೊಬೈಲ್ ಸಂಖ್ಯೆ 09448270327 ಅಥವಾ 09008335288. ಸಂಪರ್ಕಿಸಬಹುದು.

ಸಂಗ್ರಹ ಮಾಹಿತಿ

Mantralayam Maha Prabu Sri Guru Raghavendra Swamy and Vadheendra Thirtar Dharshana-Sunday, 2 February 2025. 💐Sri Raghave...
02/02/2025

Mantralayam Maha Prabu Sri Guru Raghavendra Swamy and Vadheendra Thirtar Dharshana-Sunday, 2 February 2025.
💐Sri Raghavendraya Namaha💐
🪷Sri Gurubyo Namaha🌸

*ಶ್ರೀ ಪರಿಮಳ ಆಚಾರ್ಯ ಗುರು ರಾಘವೇಂದ್ರ ಸ್ವಾಮಿಗಳ ಇಂದಿನ ಅಲಂಕಾರ ದರ್ಶನ ಮಂತ್ರಾಲಯ... 02/02/25*
02/02/2025

*ಶ್ರೀ ಪರಿಮಳ ಆಚಾರ್ಯ ಗುರು ರಾಘವೇಂದ್ರ ಸ್ವಾಮಿಗಳ ಇಂದಿನ ಅಲಂಕಾರ ದರ್ಶನ ಮಂತ್ರಾಲಯ... 02/02/25*

ಗೌರಿ ವ್ರತದ ವಿಶೇಷ ಎಂದರೆ ಈ ವ್ರತದ ಕಥೆಯಲ್ಲಿ ಒಬ್ಬ ವ್ಯಕ್ತಿ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎಂದು ಹೇಳುವುದಷ್ಟೇ ಅಲ್ಲ, ಆ ಪಾಪದಿಂದ ಹೇಗೆ...
02/02/2025

ಗೌರಿ ವ್ರತದ ವಿಶೇಷ ಎಂದರೆ ಈ ವ್ರತದ ಕಥೆಯಲ್ಲಿ ಒಬ್ಬ ವ್ಯಕ್ತಿ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎಂದು ಹೇಳುವುದಷ್ಟೇ ಅಲ್ಲ, ಆ ಪಾಪದಿಂದ ಹೇಗೆ ಮುಕ್ತಿ ಪಡೆಯಬೇಕು ಎಂಬುದನ್ನೂ ಹೇಳಲಾಗಿದೆ. ತಿಳಿದೋ ತಿಳಿಯದೆಯೋ ಪಾಪ ಮಾಡುವುದು ಮನುಷ್ಯ ಸಹಜ ಗುಣ. ನಾವು ಮಾಡಿದ ಪಾಪಗಳಿಗೆ ಬೆಲೆ ತೆರಬೇಕಾಗುತ್ತದೆ. ಅದರಿಂದಾಗಿಯೇ ನಾವು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ. ಎಂದೋ ಮಾಡಿದ ಪಾಪಗಳ ಫಲವಾಗಿ ಈ ಜೀವನದಲ್ಲಿ ಏನೆಲ್ಲಾ ತೊಂದರೆಗಳು ಎದುರಾಗುವ ಮೂಲಕ ಅಮೂಲ್ಯವಾದ ನಮ್ಮ ಜೀವನ ವ್ಯರ್ಥವಾಗುತ್ತದೆ.

ʼಆದರೆ ತಪ್ಪು ಮಾಡಿದ್ದರೆ ಪಶ್ಚಾತ್ತಾಪ ಪಡುತ್ತಾ ಜೀವನವಿಡಿ ಅಂತಹ ತಪ್ಪುಗಳನ್ನು ಪುನಃ ಮಾಡದೇ ಒಳ್ಳೆಯ ಕೆಲಸ ಮಾಡಿ, ಭಕ್ತಿ-ಭಾವದೊಂದಿಗೆ ಬದುಕು ಸಾಗಿಸುವುದರಿಂದ ಯಾವುದೇ ವ್ಯಕ್ತಿಯು ದೇವರ ಕೃಪೆಗೆ ಪಾತ್ರರಾಗಲು ಸಾಧ್ಯʼ ಎಂದು ಚಿಲಕಮರ್ತಿಗಳು ಹೇಳುತ್ತಾರೆ.

ಮಾಘ ಸ್ನಾನ ವ್ರತವೆಂಬ ಸರಳ ಸಾಧನದಿಂದ ಮಾನವೀಯತೆಗೆ ಸರಿಯಾದ ಮಾರ್ಗವನ್ನು ತೋರಿಸುವುದೇ ನಮ್ಮ ಸನಾತನ ಸಂಪ್ರದಾಯದ ಆಚರಣೆಗಳ ಉದ್ದೇಶವೆಂದು ತೋರುತ್ತದೆ. ಮಾಘ ಪುರಾಣದ ಎರಡು ಮತ್ತು ಮೂರು ಅಧ್ಯಾಯಗಳಲ್ಲಿನ ಸಾರಾಂಶವು ಇದಕ್ಕೆ ಉದಾಹರಣೆಯಾಗಿದೆ. ಎರಡನೆಯ ಅಧ್ಯಾಯದಲ್ಲಿ ಮಾಡಬಾರದ ಪಾಪಕರ್ಮಗಳು ಮತ್ತು ಅವುಗಳಿಂದ ಜನ್ಮಜನ್ಮಾಂತರಗಳಿಗೆ ಆಗುವ ಹಾನಿಯ ವಿವರಗಳಿವೆ.

ಎರಡನೆಯ ಅಧ್ಯಾಯದ ಕೊನೆಯಲ್ಲಿ ಮೂರನೆಯ ಅಧ್ಯಾಯದಲ್ಲಿ ಬೆಳಗಿನ ಸ್ನಾನದ ಫಲದಿಂದ ಆ ಪಾಪಗಳ ನಿವಾರಣೆಯ ಉಲ್ಲೇಖವಿದೆ. ಈ ಸಲಹೆಯನ್ನು ಬೆಂಬಲಿಸುವಂತೆ, ಸುದೇವ ಎಂಬ ವೇದ ವಿದ್ವಾಂಸರ ಮಗಳ ಕಥೆಯನ್ನು ಪರಮೇಶ್ವರ ಸ್ವತಃ ಪಾರ್ವತಿದೇವಿಗೆ ಹೇಳುತ್ತಾನೆ.

ಗೌರಿ ವತ್ರದ ಕಥೆ
ಹಿಂದೆ ಸೌರಾಷ್ಟ್ರ ದೇಶದಲ್ಲಿ ಬೃಂದಾರಕಂ ಎಂಬ ಗ್ರಾಮವಿತ್ತು. ಅಲ್ಲಿ ವೇದ ವಿದ್ವಾಂಸರಾಗಿದ್ದ ಸುದೇವ ಎಂಬ ಗುರುವಿನ ಬಳಿ ಅನೇಕರು ವಿದ್ಯಾಭ್ಯಾಸ ಮಾಡುತ್ತಿದ್ದರು. ಗುರುಗಳಿಗೆ ಮಹಾಸುಂದರಿಯಾಗಿದ್ದ ಮಗಳಿದ್ದಳು. ಸುದೇವ ಅವಳನ್ನು ಸೂಕ್ತ ವರನೊಂದಿಗೆ ಮದುವೆ ಮಾಡಲು ಪ್ರಯತ್ನಿಸುತ್ತಿದ್ದನು. ಆ ಗುರುವಿಗೆ ಸುಮಿತ್ರ ಎಂಬ ಶಿಷ್ಯನಿದ್ದನು. ಗುರುಪುತ್ರಿಕೆಯು ಸುಮಿತನನ್ನು ಅಧರ್ಮದ ರೀತಿಯಲ್ಲಿ ಬಯಸುತ್ತಾಳೆ.

ಗುರುಗಳ ಮಗಳು ಸಹೋದರಿಯ ಸಮಾನ, ಅವಳೊಂದಿಗೆ ಅನೈತಿಕವಾಗಿರಬಾರದು ಎಂದು ಸುಮಿತ್ರ ಹೇಳಿದರೂ ಆಕೆ ಕೇಳುವುದಿಲ್ಲ. ಕೊನೆಗೆ ಸುಮಿತ್ರ ಅವಳ ದಾರಿಯನ್ನೇ ಹಿಡಿಯಬೇಕಾಯಿತು. ಸ್ವಲ್ಪ ಸಮಯದ ನಂತರ, ಸುದೇವನು ತನ್ನ ಮಗಳನ್ನು ಕೋಲನಿರಗೆ ಮದುವೆ ಮಾಡುತ್ತಾನೆ. ಮದುವೆಯಾದ ಕೆಲವೇ ದಿನಗಳಲ್ಲಿ ಕೋಲನಿರ ಅಕಾಲಿಕ ಮರಣ ಹೊಂದುತ್ತಾನೆ.

ಸುದೇವ ತನ್ನ ಮಗಳ ದುರ್ದೈವದ ಬಗ್ಗೆ ಸಂಕಟಪಡುತ್ತಾರೆ. ಸ್ವಲ್ಪ ಸಮಯ ಹಾಗೆ ಕಳೆಯುತ್ತದೆ. ಒಂದು ದಿನ ಒಬ್ಬ ಬಲಿಷ್ಠ ಯೋಗಿ ಸುದೇವನ ಆಶ್ರಮದ ಕಡೆಗೆ ಬಂದ. ಸುದೇವನು ಯೋಗಿಗೆ ನಮಸ್ಕರಿಸಿ ತನ್ನ ಮಗಳ ಕಷ್ಟವನ್ನು ವಿವರಿಸುತ್ತಾನೆ. ತಾನು ಯಾವ ಪಾಪವನ್ನೂ ಮಾಡಿಲ್ಲ ಎಂದ ಅವರು, ತಮ್ಮ ಮಗಳು ಯಾಕೆ ಇಷ್ಟೊಂದು ಕಷ್ಟ ಪಡಬೇಕಾಯಿತು ಎಂದು ತಿಳಿಯುತ್ತಿಲ್ಲ ಎಂದು ಮಗಳ ಬಗ್ಗೆ ಹೇಳಿಕೊಳ್ಳುತ್ತಾರೆ.

ಯೋಗಿಯು ತನ್ನ ದಿವ್ಯದೃಷ್ಟಿಯಿಂದ ಹಿಂದಿನ ಘಟನೆಗಳನ್ನು ನೋಡುತ್ತಾರೆ. ಆಗ ಸುದೇವನ ಮಗಳು ತನ್ನ ಪತಿಯನ್ನು ಹಿಂಸಿಸುವುದು ಮತ್ತು ಹಿಂದಿನ ಜನ್ಮದಲ್ಲಿ ಮಾಡಬಾರದ ಕೆಲಸಗಳನ್ನು ಮಾಡಿರುವುದು ಅವರ ದಿವ್ಯದೃಷ್ಟಿಗೆ ಗೋಚರವಾಗುತ್ತದೆ. ಆದರೆ ಅವಳು ಮಾಘ ಮಾಸದ ಒಂದು ದಿನ ಆಕಸ್ಮಿಕವಾಗಿ ಸರಸ್ವತಿ ನದಿಯ ದಡದಲ್ಲಿ ಗೌರಿ ವ್ರತವನ್ನು ನೋಡಿರುತ್ತಾಳೆ. ಆ ಕಾರಣ ಅವಳ ಹಿಂದಿನ ಜನ್ಮದ ಪಾಪದಿಂದ ಮುಕ್ತಳಾಗಿ ಮುಂದಿನ ಜನ್ಮದಲ್ಲಿ ಅವಳು ಅತ್ಯುತ್ತಮ ಸುದೇವನ ಮನೆಯಲ್ಲಿ ಜನಿಸಿರುತ್ತಾಳೆ. ಆದರೆ ಹಿಂದಿನ ಜನ್ಮದ ಪಾಪ ಇನ್ನೂ ಕಾಡುತ್ತಿರುವ ಕಾರಣ ಈ ಜನ್ಮದಲ್ಲಿ ಸುಮಿತ್ರನ ಜೊತೆ ಅನೈತಿಕ ಸಂಬಂಧ ಹೊಂದಿರುತ್ತಾಳೆ. ಈ ವಿಷಯಗಳೆಲ್ಲ ತಿಳಿದ ಸುದೇವನಿಗೆ ಬಹಳ ದುಃಖವಾಗುತ್ತದೆ.

ಇನ್ನು ಮುಂದೆ ಎಲ್ಲಾ ಪಾಪಗಳು ದೂರವಾಗುವಂತೆ ಮಗಳ ಪುಣ್ಯಕ್ಕೆ ಏನಾದರೂ ಉಪಾಯ ಹೇಳು ಎಂದು ಸುದೇವ ಯೋಗಿಯನ್ನು ಕೇಳಿಕೊಳ್ಳುತ್ತಾರೆ. ಆಗ ಆ ಯೋಗಿಯು ಮಾಘ ಶುದ್ಧ ತದಿಗೆಯಂದು ಗೌರಿ ವ್ರತ ಮತ್ತು ಸುವಾಸಿನಿ ಪೂಜೆಯನ್ನು ಮಾಡಿದರೆ ಇನ್ನು ಮುಂದೆ ಸಕಲ ಪಾಪಗಳು ನಾಶವಾಗುತ್ತವೆ ಎಂದು ಹೇಳುತ್ತಾರೆ.

ತಕ್ಷಣವೇ ಗುರುಗಳು ತಮ್ಮ ಮಗಳ ಕೈಯಿಂದ ಗೌರಿವ್ರತವನ್ನು (ಕಾತ್ಯಾಯನಿ ವ್ರತಂ) ಮಾಡಿಸುತ್ತಾರೆ. ಮಾಘಶುದ್ಧ ತದಿಗೆಯಂದು ಮಾಡಿದ ಆ ವ್ರತದ ಫಲವಾಗಿ ನಂತರದ ಕಾಲದಲ್ಲಿ ಆಕೆ ತನ್ನ ಪುಣ್ಯದ ಫಲವಾಗಿ ಭೋಗಗಳನ್ನು ಪಡೆದಳು ಎಂದು ಚಿಲಕಮರ್ತಿಗಳು ಹೇಳುತ್ತಾರೆ.

ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲ ರಾಜೇಶ್

ಆಗ ಆ ಯೋಗಿಯು ಮಾಘ ಶುದ್ಧ ತದಿಗೆಯಂದು ಗೌರಿ ವ್ರತ ಮತ್ತು ಸುವಾಸಿನಿ ಪೂಜೆಯನ್ನು ಮಾಡಿದರೆ ಇನ್ನು ಮುಂದೆ ಸಕಲ ಪಾಪಗಳು ನಾಶವಾಗುತ್ತವೆ ಎಂದು ಹೇಳುತ್ತಾರೆ.

ತಕ್ಷಣವೇ ಗುರುಗಳು ತಮ್ಮ ಮಗಳ ಕೈಯಿಂದ ಗೌರಿವ್ರತವನ್ನು (ಕಾತ್ಯಾಯನಿ ವ್ರತಂ) ಮಾಡಿಸುತ್ತಾರೆ. ಮಾಘಶುದ್ಧ ತದಿಗೆಯಂದು ಮಾಡಿದ ಆ ವ್ರತದ ಫಲವಾಗಿ ನಂತರದ ಕಾಲದಲ್ಲಿ ಆಕೆ ತನ್ನ ಪುಣ್ಯದ ಫಲವಾಗಿ ಭೋಗಗಳನ್ನು ಪಡೆದಳು ಎಂದು ಚಿಲಕಮರ್ತಿಗಳು ಹೇಳುತ್ತಾರೆ.

ಅಹಲ್ಯಾಶಾಪಶಮನ ಪ್ರಭು ಶ್ರೀ ರಾಮಚಂದ್ರನ ಆದಿತ್ಯ (02-02-2025) ವಾರ ದಿನದ‌ ಅಮೋಘ ದರ್ಶನ... 🪷🚩 ಜೈ ಶ್ರೀ ರಾಮ್ 🚩🪷
02/02/2025

ಅಹಲ್ಯಾಶಾಪಶಮನ ಪ್ರಭು ಶ್ರೀ ರಾಮಚಂದ್ರನ ಆದಿತ್ಯ (02-02-2025) ವಾರ ದಿನದ‌ ಅಮೋಘ ದರ್ಶನ... 🪷🚩 ಜೈ ಶ್ರೀ ರಾಮ್ 🚩🪷

🕉ಒಂದು ಜನ್ಮದಲ್ಲಿ ಸಾಕ್ಷಾತ್ಕಾರವಾಗದಿದ್ದರೆ ಎಲ್ಲಾ ಸಾಧನೆ ವ್ಯರ್ಥವೇ ?ಸಾಧನೆಯ ಬಗ್ಗೆ ಹೇಳುವ ಮೊದಲು ಕೃಷ್ಣ ನಮಗೆ ಬರಬಹುದಾದ ಒಂದು ಸಂಶಯವನ್ನು ...
02/02/2025

🕉ಒಂದು ಜನ್ಮದಲ್ಲಿ ಸಾಕ್ಷಾತ್ಕಾರವಾಗದಿದ್ದರೆ ಎಲ್ಲಾ ಸಾಧನೆ ವ್ಯರ್ಥವೇ ?

ಸಾಧನೆಯ ಬಗ್ಗೆ ಹೇಳುವ ಮೊದಲು ಕೃಷ್ಣ ನಮಗೆ ಬರಬಹುದಾದ ಒಂದು ಸಂಶಯವನ್ನು ಭಗವದ್ಗೀತೆಯ ಎರಡನೆಯ ಅಧ್ಯಾಯದ ಈ ಶ್ಲೋಕದಲ್ಲಿ ಪರಿಹರಿಸಿದ್ದಾನೆ.

ನೇಹಾಭಿಕ್ರಮನಾಶೋSಸ್ತಿ ಪ್ರತ್ಯವಾಯೋ ನ ವಿದ್ಯತೇ ।
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ॥೪೦॥

ಎಲ್ಲರನ್ನೂ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ, ಮೊದಲು ಹುಟ್ಟು, ಆನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರುಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು ! ಇದರಿಂದ ಏನು ಉಪಯೋಗ. ಒಂದು ಜನ್ಮದಲ್ಲಿ ಬ್ರಹ್ಮಸಾಕ್ಷಾತ್ಕಾರವಾಗದೇ ಇದ್ದರೆ ಆ ಎಲ್ಲಾ ಸಾಧನೆ ವ್ಯರ್ಥವೇ ? ಖಂಡಿತವಾಗಿ ಇಲ್ಲ ಎನ್ನುತ್ತಾನೆ ಕೃಷ್ಣ. ನಮ್ಮ ಜೀವನದಲ್ಲಿ ಗಳಿಸಿದ ಐಹಿಕ ಸಂಪತ್ತು (ಧನ, ಒಡವೆ, ಕೀರ್ತಿ, ಆಸ್ತಿ ಇತ್ಯಾದಿ) ಸತ್ತ ನಂತರ ನಮ್ಮೊಂದಿಗೆ ಬಾರದು ನಿಜ. ಆದರೆ ಅಧ್ಯಾತ್ಮ ಸಾಧನೆ ಹಾಗಲ್ಲ. ಒಂದು ಜನ್ಮದಲ್ಲಿ ಮಾಡಿದ ಅಧ್ಯಾತ್ಮ ಸಾಧನೆ ಎಂದೂ ನಾಶವಾಗದು. ಈ ಜನ್ಮದಲ್ಲಿ ಅಧ್ಯಾತ್ಮದ ಒಂದು ಮೆಟ್ಟಿಲನ್ನು ಹತ್ತಿದರೆ ಮುಂದಿನ ಜನ್ಮದಲ್ಲಿ ಹುಟ್ಟುವಾಗಲೇ ನಾವು ಎರಡನೇ ಮೆಟ್ಟಲಲ್ಲಿರುತ್ತೇವೆ. ಹಿಂದಿನ ಜನ್ಮದಲ್ಲಿ ಎಲ್ಲಿ ನಿಂತಿದ್ದೇವೋ ಅಲ್ಲಿಂದ ಮುಂದುವರಿಯುವ ಪರಿಸರದಲ್ಲಿ ನಮ್ಮ ಜನನವಾಗುತ್ತದೆ. ಸಾಮಾಜಿಕವಾಗಿ ನೀವು ಅಸಾಧಾರಣ ಪ್ರತಿಭೆಯುಳ್ಳ ಮಕ್ಕಳು ಜನಿಸುವುದನ್ನು, ಹಾಗೂ ಅತ್ಯಂತ ಕಡಿಮೆ ಸಮಯದಲ್ಲಿ ಮಹಾನ್ ಸಾಧನೆ ಮಾಡುವುದನ್ನು ಕಾಣುತ್ತೀರಿ. ಇದು ಅವರು ಹಿಂದಿನ ಜನ್ಮದಿಂದ ಪಡೆದು ಬಂದ ಜ್ಞಾನ. ಹಿಂದಿನ ಜನ್ಮದ ಅಧ್ಯಾತ್ಮದ ಸಾಧನೆಯ ಮುಂದುವರಿದ ಭಾಗವೇ ಈ ಜನ್ಮ. ನಾವು ಆ ಜನ್ಮದಲ್ಲಿ ಎಲ್ಲಿ ನಿಲ್ಲಿಸಿದ್ದೇವೋ ಅಲ್ಲಿಂದಲೇ ಈ ಜನ್ಮದ ಸಾಧನೆ ಪ್ರಾರಂಭವಾಗಿ ಮುಂದುವರಿಯುತ್ತದೆ.

ಒಂದು ವೇಳೆ ನಮಗೆ ಅಧ್ಯಾತ್ಮ ಸಾಧನೆ ಮಾಡಬೇಕು ಎನ್ನುವ ಅಂತರಂಗದ ತುಡಿತವಿದ್ದು, ಅದನ್ನು ಈ ಜನ್ಮದಲ್ಲಿ ಸಾಧಿಸಲಾಗದಿದ್ದಲ್ಲಿ ಮುಂದಿನ ಜನ್ಮದಲ್ಲಿ ಸಾಧನೆಗೆ ಬೇಕಾದ ವಾತಾವರಣದಲ್ಲಿ, ವಿದ್ವಾಂಸರ ಸಂಗವಿರುವ ಕಡೆ ನಮ್ಮ ಜನ್ಮವಾಗುತ್ತದೆ.
ಆದ್ದರಿಂದ ನಮ್ಮ ಅಧ್ಯಾತ್ಮ ಚಿಂತನೆಯಲ್ಲಿ ನಮ್ಮ ಒಂದೊಂದು ಜನ್ಮ ಒಂದೊಂದು ತರಗತಿ ಇದ್ದಂತೆ. ಒಂದು ಗ್ರಂಥವನ್ನು ಸಂಪೂರ್ಣ ತಿಳಿಯಲು ನಾವು ಅನೇಕ ಜನ್ಮ ಸಾಧನೆ ಮಾಡಬೇಕು.
ಈ ಕಾರಣದಿಂದ ಅಧ್ಯಾತ್ಮ ಸಾಧನೆ ಎಂದೂ ವ್ಯರ್ಥವಲ್ಲ. ಇಂದು ನೀವು ನಿಮ್ಮ ಜೀವನದ ಯಾವ ಘಟ್ಟದಲ್ಲಿದ್ದರೂ ಸರಿ, ಅಧ್ಯಾತ್ಮ ಸಾಧನೆಗೆ ಇದು ಸಕಾಲ. ಇಂದೇ ನಿಮ್ಮ ಸಾಧನೆಯನ್ನು ಆರಂಭಿಸಿ. ಅದು ನಿಮ್ಮನ್ನು ಮೋಕ್ಷ ಮಾರ್ಗದತ್ತ ಕೊಂಡೊಯ್ಯುತ್ತದೆ ಎನ್ನುವುದು ಕಟುಸತ್ಯ.
ಅಧ್ಯಾತ್ಮ ಪ್ರದರ್ಶನದ ವಸ್ತುವಲ್ಲ, ಅದು ಅಂತರಂಗದ ಸಾಧನೆ. ನಮ್ಮ ಜನ್ಮದಲ್ಲಿ ನಾವು ಅಧ್ಯಾತ್ಮದ ಕಿಂಚಿತ್ ಸಾಧನೆ ಮಾಡಿದರೂ ಕೂಡಾ, ಅದು ನಮ್ಮನ್ನು ಭಯದಿಂದ ಪಾರು ಮಾಡುತ್ತದೆ. ಭಯದಿಂದ ಅಭಯದತ್ತ ನಮ್ಮನ್ನು ಸಾಗಿಸುವ ಏಕಮಾತ್ರ ಸಾಧನ ಅಧ್ಯಾತ್ಮ.
OM SRI GURU RAGHVENDRAYA NAMAHA.
🙏🙏🙏🙏

**ರಾಮಾಯಣದಲ್ಲಿ ಪ್ರಧಾನ ಪಾತ್ರವಹಿಸಿದಾತ ದಶರಥ* ಈತನ ಜೀವನಾವಧಿಯೇ ಒಂದು ವಿಶೇಷತೆ. 60,000 ವರ್ಷ ಒಂದು ಸಾಮ್ರಾಜ್ಯವನ್ನು ಆಳಿದ ಚಕ್ರವರ್ತಿ. ಸೂ...
01/02/2025

**ರಾಮಾಯಣದಲ್ಲಿ ಪ್ರಧಾನ ಪಾತ್ರವಹಿಸಿದಾತ ದಶರಥ* ಈತನ ಜೀವನಾವಧಿಯೇ ಒಂದು ವಿಶೇಷತೆ. 60,000 ವರ್ಷ ಒಂದು ಸಾಮ್ರಾಜ್ಯವನ್ನು ಆಳಿದ ಚಕ್ರವರ್ತಿ. ಸೂರ್ಯವಂಶದ ಪ್ರಭಾವಿ ಅರಸ ಅಜ ಮಹಾರಾಜನ ಮಗನಾದ ದಶರಥನಿಗೆ ಬಹುಕಾಲ ಮಕ್ಕಳಿರಲಿಲ್ಲ. ಕೋಸಲದ ಭಾನುಮಂತನ ಮಗಳು ‘ಕೌಸಲ್ಯೆ’, ಮಗಧದ ‘ಸುಮಿತ್ರೆ’ ಮತ್ತು ಕೇಕೈಯಿಯ ‘ಕೈಕೇಯೆ’ ಈತನ ಮೂವರು ಪತ್ನಿಯರು. ಮಕ್ಕಳಾಗದ ಚಿಂತೆಯಲ್ಲಿದ್ದಾಗ, ಗುರುವೊಬ್ಬರು, ಪುತ್ರಕಾಮೇಷ್ಟಿ ಯಾಗ ಕೈಗೊಂಡರೆ ಮಕ್ಕಳಾಗುವುದು ಎಂದು ಸಲಹೆ ನೀಡುತ್ತಾರೆ. ದಶರಥ ಋಷಿಗಳನ್ನೆಲ್ಲಾ ಸೇರಿಸಿ, ಋಷ್ಯಶೃಂಗನ ಮೂಲಕ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸುತ್ತಾನೆ. ಈ ಋಷ್ಯಶೃಂಗನಿಗೆ ದಶರಥನು ತನ್ನ ಮಗಳಾದ ಶಾಂತೆಯನ್ನು ಕೊಟ್ಟು ವಿವಾಹ ಮಾಡಿರುತ್ತಾನೆ.

ಒಂದು ನೆಲೆಯಲ್ಲಿ ಗಮನಿಸಿದಾಗ ಪುತ್ರಕಾಮೇಷ್ಟಿ ಯಾಗದ ಫಲವಾಗಿ ದಶರಥನಿಗೆ ಮಕ್ಕಳಾಗಬೇಕು. ಮತ್ತೊಂದು ನೆಲೆಯಲ್ಲಿ ಯಾಗ, ಮಕ್ಕಳ ವಿಷಯಗಳು ಬೇರೆ ಎರಡು ಸಂಗತಿಗಳಿಂದ ನಿರ್ದೇಶಿಸಲ್ಪಟ್ಟಿದೆ. ಅಂದರೆ ಒಬ್ಬ ವ್ಯಕ್ತಿ ತನ್ನನ್ನೇ ನಂಬಿಕೊಂಡು, ತನ್ನಿಂದಲೇ ಸಾಧ್ಯ ಎಂಬುದು ಭಾವಿಸುವುದು ಒಂದಾದರೆ, ಇನ್ಯಾವುದೋ ಗೊತ್ತಿಲ್ಲದ ಸೂತ್ರ ಹಿಡಿದ ಕೈ ಇದನ್ನೆಲ್ಲಾ ನಿರ್ದೇಶಿಸುತ್ತಿರುತ್ತದೆ. ಇದೇ ಸಂದರ್ಭದಲ್ಲಿ ರಾವಣನಂತಹ ರಾಕ್ಷಸರ ಹಾವಳಿ ವಿಪರೀತಕ್ಕೆ ಏರಿತ್ತು. ಇದನ್ನು ತಡೆಯಲಾಗದೇ, ದೇವತೆಗಳೆಲ್ಲಾ ಒಟ್ಟುಗೂಡಿ ಮಹಾವಿಷ್ಣುವಿನಲ್ಲಿ “ಸ್ವಾಮಿ ರಾಕ್ಷಕರ ಹಾವಳಿ ಮಿತಿ ಮೀರುತ್ತಿದೆ. ಇದಕ್ಕೆ ಪರಿಹಾರವನ್ನು ನೀಡಿ” ಎಂದು ಲೋಕವನ್ನು ರಕ್ಷಿಸಲು ಭಿನ್ನವಿಸಿಕೊಳ್ಳುತ್ತಾರೆ. ಆಗ ಮಹಾವಿಷ್ಣು “ನಾನು, ದಶರಥ ಮತ್ತು ಕೌಸಲ್ಯೆ ದಂಪತಿಗಳಿಗೆ ರಾಮನಾಗಿ ಹುಟ್ಟುತ್ತೇನೆ” ಎಂದು ಹೇಳುತ್ತಾನೆ.

ರಾಮ ಹುಟ್ಟುವುದಕ್ಕೆ ಒಂದು ಹಿನ್ನಲೆ ಇದೆ. ರಾವಣ ಬ್ರಹ್ಮದೇವನಿಂದ, ತನಗೆ ಮನುಷ್ಯರನ್ನು ಬಿಟ್ಟು ಬೇರೆ ಯಾವ ಜೀವಿಯಿಂದಲೂ ಮರಣ ಬಾರದಿರಲಿ ಎಂಬ ವರವನ್ನು ಪಡೆದಿರುತ್ತಾನೆ. ಹೀಗಾಗಿ ವಿಷ್ಣು ಮನುಷ್ಯನಾಗಿ ಜನಿಸುತ್ತಾನೆ. ಮತ್ತೊಂದು ಹಿನ್ನಲೆಯಲ್ಲಿ ದಶರಥನ ಹಿಂದಿನ ತಲೆಮಾರುಗಳ ಅನರಣ್ಯ ಎಂಬ ಅರಸ, ರಾವಣನಿಗೆ “ನನ್ನ ವಂಶದಲ್ಲಿ ಹುಟ್ಟುವ ರಾಮನಿಂದಲೇ ನಿನ್ನ ಮರಣವಾಗಲಿ” ಎಂದು ಶಾಪ ಕೊಟ್ಟಿದ್ದ. ಇಂತಹ ಹಿನ್ನಲೆಗಳನ್ನು ಗ್ರಹಿಸಿ, ದಶರಥ ಪುತ್ರಕಾಮೇಷ್ಟಿ ಯಾಗ ಮಾಡಿಸಿ, ಮಕ್ಕಳನ್ನು ಪಡೆಯುವ ಅನಿವಾರ್ಯಕ್ಕೆ ಮತ್ತೊಂದು ಮುನಿಯ ಶಾಪವೂ ಕೂಡ ಎದುರಾಗುತ್ತದೆ.

ಒಮ್ಮೆ ರಾತ್ರಿ ವೇಳೆಯಲ್ಲಿ ದಶರಥ ಬೇಟೆಗೆ ಹೋಗಿರುತ್ತಾನೆ. ಸರಾಯು ಎಂಬ ನದಿ ತೀರದಲ್ಲಿ ಆಯುಧ ಹಿಡಿದುಕೊಂಡು ಕುಳಿತಿರುವಾಗ, ದೂರದಲ್ಲಿ ಗುಳುಗುಳು ಎಂಬ ಶಬ್ದ ಕೇಳಿಸುತ್ತದೆ. “ಇದು ಆನೆಯ ಶಬ್ದ, ಬಹುಶಃ ನೀರು ಕುಡಿಯುತ್ತಿರಬಹುದು” ಎಂದು ಊಹಿಸಿ, ಬಾಣ ಪ್ರಯೋಗ ಮಾಡುತ್ತಾನೆ. ದುರದೃಷ್ಟವಶಾತ್ ಒಬ್ಬ ತಪಸ್ವಿ ಯುವಕ ತಾನು ತಂದಿದ್ದ ಬಿಂದಿಗೆಗೆ ನೀರು ತುಂಬುವ ಕಾರ್ಯದಲ್ಲಿ ನಿರತನಾಗಿದ್ದ, ದಶರಥನಿಗೆ ಗಜಭ್ರಾಂತಿ ಹುಟ್ಟಿದ್ದರಿಂದ ಬಾಣ ಬಿಟ್ಟಿರುತ್ತಾನೆ. ಈ ಬಾಣದ ಹೊಡೆತದಿಂದ ಈ ತಪಸ್ವಿ ಮರಣ ಸ್ಥಿತಿಯಲ್ಲಿರುತ್ತಾನೆ. ಅನಂತರ ಕೂಲಂಕುಶವಾಗಿ ವಿಚಾರಸಿದಾಗ, ಈ ಯುವ ತಪಸ್ವಿ ತನ್ನ ವೃದ್ಧ ತಂದೆತಾಯಿಯನ್ನು ಕರೆದುಕೊಂಡು ಬರುತ್ತಾ, ಅವರಿಗೆ ಕುಡಿಯಲು ನೀರು ಕೊಡಲು ನದಿಯ ಬಳಿ ಬಂದಿರುವ ವಿಚಾರ ತಿಳಿಯುತ್ತದೆ.

ಜೀವ ಹೋಗುತ್ತಿರುವಾಗ ಯುವ ತಪಸ್ವಿ “ದೇಹಕ್ಕೆ ಚುಚ್ಚಿಕೊಂಡಿರುವ ಬಾಣವನ್ನು ತೆಗೆ, ಹೇಗಿದ್ದರೂ ನಾನು ಸಾಯುತ್ತೇನೆ. ನನ್ನ ತಂದೆತಾಯಂದಿರಿಗೆ ಈ ವರ್ತಮಾನವನ್ನು ತಿಳಿಸು” ಎಂದು ದಶರಥನಿಗೆ ಹೇಳುತ್ತಾನೆ. ಆ ವೇಳೆ ದಶರಥ ಕಂಗೆಟ್ಟಿದ್ದ. ಮನುಷ್ಯರನ್ನು ಕೊಲ್ಲುವುದು ಈತನ ಉದ್ದೇಶವಾಗಿರುವುದಿಲ್ಲ ಅಥವಾ ಕ್ಷತ್ರಿಯನಾಗಿ ಕೊಲ್ಲುವುದಾದರೆ, ವಿರೋಧಿಗಳನ್ನು ಮಾತ್ರ ಕೊಲ್ಲಬೇಕು. ಹೀಗಾಗಿ ಯುವಕನ ದೇಹದಿಂದ ಬಾಣ ಹೊರತೆಗೆದ ತಕ್ಷಣ, ಆತ ಮರಣ ಹೊಂದುತ್ತಾನೆ. ಅನಂತರ ದಶರಥ ವೃದ್ಧರ ಬಳಿ ತೆರಳಿದಾಗ, ಅವರು ಕುರುಡರಾಗಿರುವುದನ್ನು ಗಮನಿಸುತ್ತಾನೆ. ಹೆಜ್ಜೆಯ ಶಬ್ದವನ್ನು ಕೇಳಿದ ತಂದೆ – ತಾಯಿ “ಮಗ ಬಂದೆಯಾ” ಎಂದು ಕೇಳಿದಾಗ ದಶರಥ “ಮಗ ಬರಲಿಲ್ಲ. ಮಗನನ್ನು ಕೊಂದವನು ಬಂದಿದ್ದೇನೆ” ಎಂದು ಉತ್ತರಿಸುತ್ತಾನೆ. ಕೊನೆಗೆ ವೃದ್ಧರಿಗೆ ಸತ್ಯ ತಿಳಿದು “ನಮ್ಮ ಕೊನೆಗಾಲದಲ್ಲಿ, ನಾವು ಪುತ್ರ ಶೋಕದಿಂದ ಸಾಯುವಂತಾಯಿತಲ್ಲ. ನಿನಗೂ ನಾಳೆ ಪುತ್ರ ಶೋಕದಿಂದಲೇ ಮರಣ ಬರಲಿ” ಎಂದು ಶಾಪ ಕೊಡುತ್ತಾರೆ. ಅಂದರೆ “ಮಕ್ಕಳು ನಿನ್ನ ಜೊತೆ ಇಲ್ಲದಿದ್ದಾಗ, ನಿನಗೆ ಸಾವು ಬರಲಿ” ಎಂಬುದು.

ಗಮನಿಸಬೇಕಾದ ಸಂಗತಿಯೆಂದರೇ ದಶರಥನಿಗೆ ಮಕ್ಕಳೇ ಆಗಿರಲಿಲ್ಲ. ಆದರೆ ಶಾಪ ಫಲಿಸಬೇಕಾದರೆ ಆತನಿಗೆ ಮಕ್ಕಳಾಗಬೇಕು. ಮುಖ್ಯವಾಗಿ ಈತನ ದುಃಖವೇ ಮಕ್ಕಳು ಇಲ್ಲದಿರುವುದು. ಹಾಗಾಗಿ ಮಕ್ಕಳು ಜನಿಸಬೇಕು. ಮಕ್ಕಳು ದೂರವಿದ್ದಾಗ ಈತ ಸಾಯಬೇಕು. ಅಂದರೆ ಇದು ಶಾಪವೋ? ಅಥವಾ ವರವೋ? ಇಂತಹ ಚೋದ್ಯಗಳನ್ನು ನಾವು ಹಿನ್ನಲೆಯಾಗಿ ಭಾವಿಸಬೇಕು. ದಶರಥನಿಗೆ ಪುತ್ರಕಾಮೇಷ್ಟಿ ಮೂಲಕ ಮಕ್ಕಳಾಗುವುದು ಎಲ್ಲವೂ ಅನಿವಾರ್ಯ ಮತ್ತು ಅಗತ್ಯ. ಇದು ಕಾಲದ, ಜಗತ್ತಿನ ಒಂದು ಯುಗದ ಅಗತ್ಯವಾಗಿ ಕಾಣುತ್ತದೆ.

ಈ ಎಲ್ಲಾ ಹಿನ್ನಲೆಯಿರುವುದರಿಂದ ದಶರಥನು ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸುತ್ತಾನೆ. ಈ ಸಮಯದಲ್ಲಿ ಯಜ್ಞಕುಂಡದಿಂದೊಬ್ಬ ಯಜ್ಞಪುರುಷ ಬಂದು ಪಾಯಸ ತುಂಬಿರುವಸ ಪಾತ್ರೆಯನ್ನು ದಶರಥನಿಗೆ ನೀಡಿ “ಈ ಪಾಯಸವನ್ನು ನಿನ್ನ ಹೆಂಡತಿಯರಿಗೆ ಕೊಡು” ಎಂದು ಹೇಳುತ್ತಾನೆ. ಈ ಪಾಯಸದ ಹಂಚಿಕೆಯಲ್ಲಿ ಬೇರೆ ಬೇರೆ ಕಥನಗಳಿವೆ. ವಾಲ್ಮೀಕಿ ರಾಮಾಯಣದಲ್ಲಿ ದಶರಥ, ಪಾಯಸ ಇರುವ ಪಾತ್ರೆಯನ್ನು ಸ್ವೀಕರಿಸಿ ಎರಡು ಭಾಗ ಮಾಡುತ್ತಾನೆ. ಒಂದು ಭಾಗವನ್ನು ಕೌಸಲ್ಯೆಗೆ ಕೊಡುತ್ತಾನೆ. ಉಳಿದ ಒಂದು ಭಾಗವನ್ನು ಮತ್ತೆರಡು ವಿಭಾಗ ಮಾಡಿ ಸುಮಿತ್ರೆಗೆ ಮತ್ತು ಕೈಕೇಯಿಗೆ ಕೊಡುತ್ತಾನೆ. ಮತ್ತೊಂದು ಕಥೆಯಲ್ಲಿ ಎರಡು ಭಾಗ ಮಾಡಿದ ಪಾಯಸವನ್ನು ಹಿರಿಯ ರಾಣಿಗೆ ಮತ್ತು ಕಿರಿಯ ರಾಣಿಗೆ ನೀಡಿ, ಅನಂತರ ಈ ಇಬ್ಬರು ಕುಡಿದು, ಉಳಿದ ಪಾಲನ್ನು ಸುಮಿತ್ರೆಗೆ ಕೊಟ್ಟರು ಎಂಬುದು ಕಥೆ.

ಮೂವರು ಪತ್ನಿಯರು ಪಾಯಸವನ್ನು ಸೇವಿಸಿದ ನಂತರದ ದಿನಗಳಲ್ಲಿ ನಾಲ್ಕು ಮಕ್ಕಳು ಹುಟ್ಟುತ್ತಾರೆ. ಕೌಸಲ್ಯೆಗೆ ರಾಮ, ಕೈಕೇಯಿಗೆ ಭರತ ಮತ್ತು ಸುಮಿತ್ರೆಗೆ ಲಕ್ಷ್ಮಣ ಹಾಗೂ ಶತ್ರುಘ್ನ. ಅನಂತರ ಈ ರಾಣಿಯರೊಂದಿಗೆ ಮಕ್ಕಳು ಅನ್ಯೋನ್ಯವಾಗಿ ಬೆಳೆಯುತ್ತಾರೆ. ದಶರಥನಿಗೆ ರಾಮನ ಮೇಲೆ ವಿಪರೀತವಾದ ಪ್ರೀತಿ. ಈ ಪ್ರೀತಿಯನ್ನು ಯಕ್ಷಗಾನದ ಕವಿ ಪಾರ್ತಿಸುಬ್ಬನ ಪ್ರಸಂಗದ ಒಂದು ಸನ್ನಿವೇಶದಲ್ಲಿ ಈ ರೀತಿ ಹೇಳಲಾಗಿದೆ, ಮಕ್ಕಳೆಲ್ಲಾ ಆಟವಾಡುತ್ತಿರುವುದನ್ನು ದಶರಥ ನೋಡಿ, ರಾಮನನ್ನು ಅದ್ಭುತವಾಗಿ ಮಾತನಾಡಿಸುತ್ತಾನೆ. ಅನಂತರ ಭರತನ ಬಳಿಗೆ ತೆರಳಿ, ಶತ್ರುಘ್ನನನ್ನು “ಇವನ್ಯಾರು?” ಎಂದು ಕೇಳುತ್ತಾನೆ. ಅಂದರೆ ತಂದೆಯಾದರೂ, ತನ್ನ ಉಳಿದ ಮಕ್ಕಳ ಕಡೆಗೆ ಲಕ್ಷ್ಯವನ್ನು ನೀಡಿರಲಿಲ್ಲ. ರಾಮಾಭಿಮಾನ ಎಂಬುದು ಬಹಳ ವಿಶೇಷವಾಗಿತ್ತು.

ಹೀಗೆ ಮಕ್ಕಳು ಬೆಳೆಯುತ್ತಾರೆ, ಮದುವೆಯೂ ಆಗುತ್ತದೆ. ರಾಮನ ಪಟ್ಟಾಭಿಷೇಕ ನಿರ್ಣವಾಗುತ್ತದೆ. ಅನಂತರ ದಶರಥನ ಜೀವನದ ಮತ್ತೊಂದು ದುರಂತ ಅಧ್ಯಾಯ ಪ್ರಾರಂಭವಾಗುತ್ತದೆ. ಇವೆಲ್ಲವೂ ಮೇಲಿಂದ ಮೇಲೆ ನಮ್ಮ ಕಣ್ಣೆದುರು ಘಟಿಸುವ ಘಟನೆಯಾಗಿ ಕಂಡರೂ, ಅದನ್ನು ನಿಯಂತ್ರಿಸುವ ಶಕ್ತಿ ಇನ್ಯಾವುದೋ ರೀತಿಯಲ್ಲಿ ಮೊದಲೇ ಪ್ರಭಾವಿಸಿರುತ್ತದೆ.

ದಶರಥನು ಕೈಕೇಯಿಯನ್ನು ಮದುವೆಯಾದ ನಂತರ, ತಿಮಿಧ್ವಜ ಅಥವಾ ಶಂಭನೆಂಬ ರಾಕ್ಷಸನ ಜೊತೆಗಿನ ಯುದ್ಧದಲ್ಲಿ, ಕೈಕೇಯಿ ದಶರಥನಿಗೆ ಸಹಾಯ ಮಾಡಿರುತ್ತಾಳೆ. ಈ ಸಹಾಯವನ್ನು ಮೆಚ್ಚಿದ ದಶರಥ, ಕೈಕೇಯಿಗೆ “ನೀನು ಮಾಡಿದ ಸಹಾಯಕ್ಕೆ ನಿನಗೆ ಎರಡು ವರ ಕೊಡುತ್ತೇನೆ” ಎಂದಾಗ ಕೈಕೇಯಿಯು “ಈಗ ಬೇಡ. ಅಗತ್ಯದ ಸಮಯದಲ್ಲಿ ನಾನೇ ಆ ವರವನ್ನು ಪಡೆಯುತ್ತೇನೆ” ಎಂದು ಉತ್ತರಿಸುತ್ತಾಳೆ.

ದಶರಥನು ರಾಮನನ್ನು ಉತ್ತರಾಧಿಕಾರಿಯಾಗಿ ನೇಮಿಸಿರುವ ವಿಚಾರವನ್ನು ಪ್ರಜೆಗಳಿಗೆ ತಿಳಿಸುತ್ತಾನೆ. ಪ್ರತಿಯೊಬ್ಬರೂ ಇದನ್ನು ತಿಳಿದು ಸಂಭ್ರಮಿಸುತ್ತಾರೆ. ಕವಿಯೊಬ್ಬ ಪ್ರಜೆಗಳ ಈ ಸಂತೋಷವನ್ನು ಕುರಿತು “ಮುಂಗಾರನ್ನು ಕಂಡ ನವಿಲುಗಳಂತೆ ಕುಣಿದರು” ಎಂದು ಹೇಳಿದ್ದಾನೆ. ತನ್ನ ಅಧಿಕಾರವನ್ನು ಹಸ್ತಾಂತರ ಮಾಡುವಾಗಲೂ ದಶರಥನಿಗೆ ಸ್ವಯಂ ಸಂದೇಹವೊಂದಿತ್ತು. ಹೀಗಾಗಿ ಪ್ರಜೆಗಳ ಬಳಿ “ನನ್ನಿಂದ ನಿಮಗೆ ಏನಾದರು ಬೇಸರವಾಗಿದೆಯೇ? ರಾಮನೇ ಏತಕ್ಕಾಗಿ ಬೇಕು?” ಎಂದು ಪ್ರಶ್ನಿಸುತ್ತಾನೆ. ಆಗ ಪ್ರಜೆಗಳು ರಾಮನ ಗುಣ ವಿಶೇಷವನ್ನು ವರ್ಣಿಸಿದಾಗ ಸಂತೋಷಗೊಳ್ಳುತ್ತಾನೆ. ಆದರೆ ರಾಮನಿಗೆ ಪಟ್ಟಾಭಿಷೇಕ ಮಾಡಲು ಮುಂದಾದಾಗ, ಕೈಕೇಯಿಯು ವರವನ್ನು ಕೇಳಲು ಮುಂದಾಗುತ್ತಾಳೆ. ಅದರ ಪ್ರಕಾರ “ರಾಮ, 14 ವರ್ಷ ವನವಾಸ ಮಾಡಬೇಕು. ಭರತನಿಗೆ ಪಟ್ಟವನ್ನು ಕಟ್ಟಬೇಕು” ಎಂದು ನಿರ್ಧರಿತವಾಗುತ್ತದೆ.

ದಶರಥನಿಗೆ ಕೈಕೇಯಿ ಕೇಳಿದ ವರವನ್ನು ಕೊಡಲು ಮನಸ್ಸಿರಲಿಲ್ಲ. ಆದರೆ ಬೇರೆ ದಾರಿಯೂ ಇರಲಿಲ್ಲ. ಬಹಳ ಆರ್ಥನಾಗಿ “ಇದನ್ನು ಬಿಟ್ಟು. ಬೇರೇನಾದರೂ ವರವನ್ನು ಕೇಳು” ಎಂದು ಭಿನ್ನೈಸಿಕೊಳ್ಳುತ್ತಾನೆ. ಆದರೆ ಕೈಕೇಯಿ ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ. ಅಂದರೆ ಯಾವ ಉದ್ದೇಶಕ್ಕೆ ದಶರಥ ಈ ವರ ಕೊಟ್ಟಿದ್ದಾನೋ, ಆ ಉದ್ದೇಶ ವ್ಯತಿರೇಕವಾಗಿ ಬಳಸಲ್ಪಟ್ಟಿರುತ್ತದೆ.

ಯುದ್ಧದಲ್ಲಿ ಕೈಕೇಯಿಯು ದಶರಥನ ಪ್ರಾಣವನ್ನು ಉಳಿಸಿದ್ದಳು. ಚಕ್ರವರ್ತಿಯ ಪ್ರಾಣ ಉಳಿಸಿದಳು ಎಂಬ ಕಾರಣಕ್ಕೆ ಪುರಸ್ಕಾರವಾಗಿ ವರವನ್ನು ದಶರಥನು ನೀಡಿದ್ದ. ಆದರೆ ಈ ವರವೇ ಆತನಿಗೆ ಶಾಪವಾಯಿತು. ಮುನಿಯ ಶಾಪ ಮತ್ತು ರಾಮನ ಮೇಲಿನ ಅಪರಿಮಿತವಾದ ಪ್ರೀತಿ. ಇವೆರಡೂ ದಶರಥನ ಮರಣಕ್ಕೆ ಕಾರಣವಾದ ಸಂಗತಿಗಳು.

ಕೈಕೇಯಿ ವರ ಕೇಳಿದ್ದರಿಂದ ರಾಮ ಮತ್ತು ಲಕ್ಷ್ಮಣ ವನವಾಸಕ್ಕೆ ತೆರಳಿದರು. ಭರತ ಮತ್ತು ಶತ್ರುಘ್ನರು ಕೈಕೇಯಿಯ ದೇಶದಲ್ಲಿರುತ್ತಾರೆ. ಹೀಗಾಗಿ ಯಾವ ಮಕ್ಕಳು ದಶರಥನ ಬಳಿಯಿರಲಿಲ್ಲ. ಮುನಿ ಶಾಪದಿಂದ, ಪುತ್ರಶೋಕದಿಂದ ಮರಣ ಬರಲೇಬೇಕು. ಹೀಗೆ ಯಾವುದು ಚಕ್ರವರ್ತಿಯಾದ ದಶರಥನನ್ನು ಉಳಿಸುವುದಕ್ಕಾಗಿ ಮಾಡಿದ ಪ್ರಯತ್ನಕ್ಕೆ ಸಿಕ್ಕಿದ ವರವೋ, ಅದೇ ಅವನ ಮರಣಕ್ಕೂ ಕಾರಣವಾಯಿತು. ನಮ್ಮ ಜೀವನದ ಅನೇಕ ವಿಸಂಗತಿಗಳಲ್ಲಿ ಇಂತಹದ್ದೂ ಇವೆ. ದಶರಥ, ಸುಧೀರ್ಘವಾಗಿ ಬದುಕಿ, ಮಕ್ಕಳಿಗಾಗಿ ಹಂಬಲಿಸಿ, ಶಾಪವನ್ನೇ ವರವನ್ನಾಗಿಸಿಕೊಂಡು ನಾಲ್ಕು ಮಕ್ಕಳನ್ನು ಪಡೆದು, ಚಾರಿತ್ರಿಕವಾಗಿ ಒಂದು ವ್ಯಕ್ತಿತ್ವವನ್ನು ಸ್ಥಾಪಿಸಿ, ತಾನು ಕೊಟ್ಟ ವರದ ಕಾರಣಕ್ಕೆ ಮರಣ ಹೊಂದುವ ಸನ್ನಿವೇಶ ಎದುರಾಗುತ್ತದೆ.

ರಾಮಾಯಣದಲ್ಲಿ ಮತ್ತೊಂದು ಕಡೆ ದಶರಥ ಕಾಣಿಸಿಕೊಳ್ಳುತ್ತಾನೆ. ಲಂಕೆಯಿಂದ ಸೀತೆ ಮರಳಿ, ಅಗ್ನಿ ಪ್ರವೇಶ ಮಾಡಿ ಹೊರಗೆ ಬಂದಾಗ, ದಶರಥ ದೇವತೆಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾನೆ. ರಾಮನಿಗೆ “ಸೀತೆ ಪವಿತ್ರಳು. ಅವಳನ್ನು ಸ್ವೀಕರಿಸುವುದರಲ್ಲಿ ತಪ್ಪಿಲ್ಲ” ಎಂದು ಮನಗಾಣಿಸಿ, ನಂತರ ದೇವಲೋಕವನ್ನು ಸೇರುತ್ತಾನೆ. ಹೀಗೆ ದಶರಥನ ಜೀವನ ಚಿತ್ರ ಎಂಬುದು ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರಿಗೆ ಹಿನ್ನಲೆಯ ಭವ್ಯವಾದ ಪರದೆಯಾಗಿ ನಿಲ್ಲುತ್ತಾನೆ.

ಮತ್ತೊಂದು ವಿಷಯದಲ್ಲೂ ದಶರಥ ಪ್ರಸಿದ್ಧ. ರೋಹಿಣಿ ನಕ್ಷತ್ರವನ್ನು ಶನಿ ಆಕ್ರಮಿಸಿದ ಸಂದರ್ಭದಲ್ಲಿ ದಶರಥನು ಶನಿಯನ್ನು ಎದುರಿಸುತ್ತಾನೆ. ಇವನ ಪರಾಕ್ರಮಕ್ಕೆ ಶನಿ ಅಂಜಿ, ಶರಣಾಗುತ್ತಾನೆ. ಆಗ ದಶರಥ “ನೀನು ಎಂದಿಗೂ ರೋಹಿಣಿ ನಕ್ಷತ್ರದ ತಂಟೆಗೆ ಬರಬಾರದು” ಎಂದು ನಿರ್ದೇಶಿಸುತ್ತಾನೆ. ಹೀಗೆ ದಶರಥ ಒಂದು ಗ್ರಹವನ್ನೂ ನಿಯಂತ್ರಿಸುವ ಯೋಗ್ಯತೆವುಳ್ಳವನಾಗಿದ್ದನು.

ದಶರಥನಿಗೆ ದಶರಥ ಎಂಬ ಹೆಸರು ಹೇಗೆ ಬಂದಿತ್ತು ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಿರುತ್ತಾರೆ. ಈತನಿಗೆ ‘ನೇಮಿ’ ಎಂಬ ಹೆಸರೂ ಇದೆ. ದೇವಲೋಕದಲ್ಲಿ ತಿಮಿಧ್ವಜ ಎಂಬ ರಾಕ್ಷಸನ ಜೊತೆ ಯುದ್ಧವಾಗುತ್ತದೆ. ಆದರೆ ಈ ರಾಕ್ಷಸ ಮಾಯಾವಿ. 10 ರೂಪ ತಾಳಿ, 10 ದಿಕ್ಕಿನಿಂದ ಆಕ್ರಮಣ ಮಾಡುತ್ತಾನೆ. ಈ ರಾಕ್ಷಸನನ್ನು ದಶರಥ, 10 ದಿಕ್ಕುಗಳಿಂದ ಎದುರಿಸುವುದಕ್ಕಾಗಿ ತನ್ನ 10 ರಥಗಳನ್ನು ತಿರುಗಿಸಿ ಹೋರಾಟ ಮಾಡುತ್ತಾನೆ. ಹೀಗಾಗಿ ದಶರಥ ಎಂಬ ಹೆಸರು ಬಂದಿತು ಎಂಬುದು ಕಥೆ. ಹಾಗೆ ತಿರುಗುವ ಸಂದರ್ಭದಲ್ಲಿ ರಥದ ಕೀಲು ತಪ್ಪಿದಾಗ, ಕೈಕೇಯಿ ತನ್ನ ಬೆರಳು ಕೊಟ್ಟು ಕಾಪಾಡಿದಳು ಎಂಬುದು ಮತ್ತೊಂದು ಕಥೆ.

ದಶರಥ, ವೀರ ಚಕ್ರವರ್ತಿಯಾಗಿ, 60 ಸಾವಿರ ವರ್ಷ ಆಳಿದವನಾಗಿ ಲೋಕೋದ್ಧಾರಕರಾದ ನಾಲ್ಕು ಮಕ್ಕಳನ್ನು ಪಡೆದ ಕೃತಾರ್ಥತೆಯೊಂದಿಗೆ ಈ ಪಾತ್ರ ಕಾವ್ಯದಲ್ಲಿ ನಿರ್ಗಮಿಸಿದೆ. ದಶರಥನ ವ್ಯಕ್ತಿತ್ವ, ರಾಮಾಯಣದಲ್ಲಿ ಹಿನ್ನಲೆಯಾಗಿ, ಮಾತ್ರವಲ್ಲದೆ ಮುನ್ನಲೆಯಾಗಿ ಒಂದು ಸುದೀರ್ಘವಾದ ಸಾರ್ಥಕ ಜೀವನಕ್ಕೆ ಸಂಕೇತವಾಗಿ ನಮ್ಮ ಕಣ್ಣೆದುರು ಸದಾ ನಿಂತಿರುತ್ತದೆ. — at Vijaya Gardens,Baridih,Jamshedpur.

Address

C35/1, 2nd Floor, 80 Feet Road, Stage 1, KHB Colony, Basaveshwar Nagar
Bangalore
560079

Alerts

Be the first to know and let us send you an email when Sri Raghavendra Swami Vaibhava posts news and promotions. Your email address will not be used for any other purpose, and you can unsubscribe at any time.

Contact The Business

Send a message to Sri Raghavendra Swami Vaibhava:

Videos

Share

ಓಂ ಶ್ರೀ ಗುರು ರಾಘವೇಂದ್ರಾಯ ನಮಃ

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ