Ravi Belagere Prakashana -ರವಿ ಬೆಳಗೆರೆ ಪ್ರಕಾಶನ

  • Home
  • India
  • Bangalore
  • Ravi Belagere Prakashana -ರವಿ ಬೆಳಗೆರೆ ಪ್ರಕಾಶನ

Ravi Belagere Prakashana -ರವಿ ಬೆಳಗೆರೆ ಪ್ರಕಾಶನ ರವಿ ಬೆಳಗೆರೆ ಪ್ರಕಾಶನ, ಶ್ರೀ ರವಿ ಬೆಳಗೆರೆ ಅವರ ಆಯ್ದ ಬರಹಗಳನ್ನು ಓದುಗರ ಮುಂದಿಡುವ ನೂತನ ಸಂಸ್ಥೆಯಾಗಿದೆ

I have reached 200 followers! Thank you for your continued support. I could not have done it without each of you. 🙏🤗🎉
20/05/2024

I have reached 200 followers! Thank you for your continued support. I could not have done it without each of you. 🙏🤗🎉

https://www.youtube.com/watch?v=wsGip632ycg&feature=youtu.beಪುಸ್ತಕ ಬಿಡುಗಡೆ ಕಾರ್ಯಕ್ರಮದ ವಿಡಿಯೋ ತುಣುಕು ..
27/07/2023

https://www.youtube.com/watch?v=wsGip632ycg&feature=youtu.be

ಪುಸ್ತಕ ಬಿಡುಗಡೆ ಕಾರ್ಯಕ್ರಮದ ವಿಡಿಯೋ ತುಣುಕು ..

ನಕ್ಸಲೀಯರ ನಾಡಿನಲ್ಲಿ ರವಿ ಬೆಳಗೆರೆ ಪುಸ್ತಕ ಬಿಡುಗಡೆ ಸಮಾರಂಭಆಶ್ರಯ : ರವಿ ಬೆಳಗೆರೆ ಪ್ರಕಾಶನಕಾರ್ಯಕ್ರಮದ ಅಧ್ಯಕ್ಷತೆ : ವಿಜಯಮ್ಮ (....

ದಿನಾಂಕ 23 07 ೨೦೨೩ ಸಂಜೆ ೫ ಘಂಟೆಗೆ ರವಿ ಬೆಳಗೆರೆ ಅವರ ನಕ್ಸಲೀಯರ ನಾಡಿನಲ್ಲಿ ಪುಸ್ತಕ ಬಿಡುಗಡೆ ಸಮಾರಾಂಭ ನಡೆಯಲಿದೆ ದಯವಿಟ್ಟು ಫೇಸ್ಬುಕ್ ಲೈವ...
20/07/2023

ದಿನಾಂಕ 23 07 ೨೦೨೩ ಸಂಜೆ ೫ ಘಂಟೆಗೆ ರವಿ ಬೆಳಗೆರೆ ಅವರ ನಕ್ಸಲೀಯರ ನಾಡಿನಲ್ಲಿ ಪುಸ್ತಕ ಬಿಡುಗಡೆ ಸಮಾರಾಂಭ ನಡೆಯಲಿದೆ ದಯವಿಟ್ಟು ಫೇಸ್ಬುಕ್ ಲೈವ್ನಲ್ಲಿ ವೀಕ್ಷಿಸಿ..
ಕೆಳಗೆ ನೀಡಿರುವ ಲಿಂಕ್ನಲ್ಲಿ ವೀಕ್ಷಿಸಿ

https://fb.me/e/1lfSM1cWk

13/07/2023

Coming Soon..ಶೀಘ್ರದಲ್ಲಿ ನಿಮ್ಮ ಮುಂದೆ..

ನಕ್ಸಲೀಯರ ಒಡನಾಟದಲ್ಲಿ ರವಿ ಬೆಳಗೆರೆ ಅವರಿಗಾದ ಅನುಭವಗಳ ರೋಚಕ ಕಥಾನಕ.. ತಮ್ಮ ಎಂದಿನ fire Brand ಜರ್ನಲಿಸಂ ಶೈಲಿಯಲ್ಲಿ ನಕ್ಸಲ್( ಪೀಪಲ್'ಸ್ ವ...
07/06/2023

ನಕ್ಸಲೀಯರ ಒಡನಾಟದಲ್ಲಿ ರವಿ ಬೆಳಗೆರೆ ಅವರಿಗಾದ ಅನುಭವಗಳ ರೋಚಕ ಕಥಾನಕ.. ತಮ್ಮ ಎಂದಿನ fire Brand ಜರ್ನಲಿಸಂ ಶೈಲಿಯಲ್ಲಿ ನಕ್ಸಲ್( ಪೀಪಲ್'ಸ್ ವಾರ್ ಗ್ರೂಪ್ ) ಸಂಸ್ಥಾಪಕ ಕೊಂಡಪಲ್ಲಿ ಸೀತಾರಾಮಯ್ಯ ಅವರ ಕುತೂಹಲಕಾರಿ ಸಂದರ್ಶನ..

"ರವಿ ಬೆಳಗೆರೆ ಪ್ರಕಾಶನ"ದ ವತಿಯಿಂದ ಅತಿ ಶೀಘ್ರದಲ್ಲಿ ಪುಸ್ತಕ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ..ನಿರೀಕ್ಷಿಸಿ..ಶೀಘ್ರವೇ ನಿಮ್ಮ ಕೈಗೆ..

ಸಂದರ್ಶನದ ಮುಂದುವರೆದ ಭಾಗ..ರವಿ ಬೆಳೆಗೆರೆಯವರನ್ನ ಭೇಟಿ ಆಗುವವರೆಗೂ ಅವರು ಗೊತ್ತಿರಲಿಲ್ಲ..!
05/06/2023

ಸಂದರ್ಶನದ ಮುಂದುವರೆದ ಭಾಗ..

ರವಿ ಬೆಳೆಗೆರೆಯವರನ್ನ ಭೇಟಿ ಆಗುವವರೆಗೂ ಅವರು ಗೊತ್ತಿರಲಿಲ್ಲ..!

...

ರವಿ ಬೆಳೆಗೆರೆಯವರ ಮನಸ್ಸು ಗೆದ್ದ ಯಶೋಮತಿ ಯಾರು.? ವಿಕ್ರಮ ಪಾಡ್ಕ್ಯಾಸ್ಟ್ ನಲ್ಲಿ ಬಂದ ಒಂದು ಚೆಂದದ ಸಂದರ್ಶನ..ವೀಕ್ಷಿಸಿ ಅಭಿಪ್ರಾಯ ತಿಳಿಸಿ..ಧ...
05/06/2023

ರವಿ ಬೆಳೆಗೆರೆಯವರ ಮನಸ್ಸು ಗೆದ್ದ ಯಶೋಮತಿ ಯಾರು.?
ವಿಕ್ರಮ ಪಾಡ್ಕ್ಯಾಸ್ಟ್ ನಲ್ಲಿ ಬಂದ ಒಂದು ಚೆಂದದ ಸಂದರ್ಶನ..ವೀಕ್ಷಿಸಿ ಅಭಿಪ್ರಾಯ ತಿಳಿಸಿ..ಧನ್ಯವಾದಗಳು,
ನಿಮ್ಮ ಯಶೋಮತಿ

...

17/05/2023

ಇಮೇಲ್ ಮೂಲಕ ಮಂಡ್ಯದ ಮಾಲಾ ಕೆ ಎಂಬ ಓದುಗರೊಬ್ಬರು ಕಳುಹಿಸಿದ ಅನಿಸಿಕೆ..

ತಥ್ !!
ಈ ಪುಸ್ತಕ ಓದೋವಾಗ ಪ್ರೇಮಲೀಲಾ , ಗೋವಿಂದಭಟ್ರು , ಸಂಧ್ಯಾ , ಭೂಯಾರ್ ಅವ್ರ್ ಅಕ್ಕ , ಮಲ್ಲಿಕಾ ಇವ್ರ್ ಬಗ್ಗೆ ಎಲ್ಲಾ ಹೊಟ್ಟೆಕಿಚ್ಚಾಗ್ತಾ ಇತ್ತು , ಓದ್ ಮುಗ್ಸುದೆ. ಇಷ್ಟ್ ಬೇಗ ಮುಗ್ದೋಯ್ತಾ ಅನ್ನುಸ್ತಿದೆ. ಬಿಜಾಪುರದ ಮಂಜುನಾಥ್ ಅವರ ಬರವಣಿಗೆ ಮೈ ಜುಮ್ ಅನ್ನುಸ್ತು ಅದರಲಿರೋ ಕವಿತಾ ನಾನೇ ಅನ್ನಿಸ್ ಬಿಡ್ತು. ಬೆಳಿಗ್ಗೆನೇ ಎದ್ ಪುಸ್ತಕ ಹಿಡ್ದವ್ಳು ಮುಗ್ದ್ದಾಗ ಮಧ್ಯಾಹ್ನ 1.30.
ನಮ್ಮದೇ ಪುಸ್ತಕ, ನಮ್ಮವನೇ "ರವಿಬೆಳಗೆರೆ " , ನಮ್ಮದೇ ಬರಹ ಅಂಡ್ ಓದು ನಮ್ದೇ.
ಸುಮ್ನೆ ಯಾರ್ ಯಾರನ್ನೋ ಈ ಮನ್ಸು ಸುಲ್ಭಕ್ಕೆ ' ನಮ್ಮವ್ರು ' ಅನ್ನಲ್ಲ ಕಣ್ರೀ. ಮನ್ಸಿಂದ ಮಾತಾಡ್ವಾಗ ಆ ದನಿಲ್ಲೊಂದ್ ಗತ್ತು , ಗದರಿಸೋ ಸ್ಟೈಲಲ್ಲಿ ಇರೋ ಆ ಸೆಕ್ಯೂರ್ ಫೀಲ್ ರವಿ ಸರ್ ಗ್ ಅಲ್ದೇ ಇನ್ಯಾವ್ ಲೆಜೆಂಡ್ಗೂ ಯಾವ ಫೀಲ್ಡಲ್ಲೂ ಇಲ್ಲಾ .
" ಓದುಗ ದೊರೆಯ
ತೀರದ ನೆನಪುಗಳು " ಪುಸ್ತಕ ಬಂದು ಇವತ್ತಿಗ್ಗೆ ಸರ್ಯಾಗಿ ಹದಿನಾಲ್ಕ್ ದಿನ . ನಾ ಊರಲ್ಲಿರ್ಲಿಲ್ಲ ಅಂತ ಚಿಕ್ಕಮ್ಮನ ಮನೆ ಸೇರಿತ್ತು. ಈಗ ನನ್ ಕೈಲಿದೆ .
ಮುಖಪುಟ ರವಿ ಸರ್ ಲುಕ್, ಯಶುಮತಿಯವರ " ಓದುಗ ದೊರೆ.... " ಅವರ ಸಹಿ ಜೊತೆ, ಸರ್ ಅವ್ರ ಪ್ರೀತಿಪಾತ್ರದ /ರ ' ಹಿಮವಂತ್' copy right , ಯಶೋಮತಿಯವರ 'ಬೆಳೆಯುತ್ತಲೇ ಹೋದ ಬೆಳಗೆರೆ ರವಿ ' ಲೇಖನದಿಂದ ಶುರುವಾಗಿ 62 ಬರಹಗಾರರ ಅನುಭವ / ನೆನಪು , " ನನ್ನ ಓದುಗನೊಂದಿಗೆ ನಾನು ಮಾತನಾಡುತ್ತೇನೆ.... " ಎಂಬ ರವಿಬೆಳಗೆರೆಯವರ ನಗು ಹಾಗು ಬರಹದೊಟ್ಟಿಗೆ ಕೊನೆಯಾದ ಬಣ್ಣಗಳ ಪೇಜ್ ಎಲ್ಲವನ್ನು ಅದೇಷ್ಟ್ ಬಾರಿ ಸವರಿ ಸವರಿ ಎದೆಗಪ್ಪಿಕೊಂಡೆನೋ!!!!
ಬೆಳಿಗ್ಗೆಯಿಂದ ಓದ್ತಾ ಇದ್ರೆ ಪುಸ್ತಕದಲ್ಲಿರೋ ಸಂಭಾಷಣೆಗಳು - ನಾನು ರವಿ ಸರ್ ಆಫೀಸಲ್ಲಿ ಇರೋ ಹಾಗೇ , ಸರ್ ಇಲ್ಲೇ ಎಲ್ಲೋ ನನ್ ಹತ್ರ ದಲ್ಲೇ ಕೂತ್ ಮಾತಾಡ್ತಾ ಇದ್ದಾರೆ ಅನ್ನೋ ಹಾಗೇ ಭಾಸ .
ಅವ್ರ್ ಯಾವುದೇ ಬರಹ ರೂಪದ ಮಾತಿಗೆ ಎದೆಯಲ್ಲಿ ಅಚ್ಚಾಗಿರೋ ಆ ದನಿನ ಸೇರಿಸಿ ಓದ್ಬಲ್ಲೇ , ಅಂತ ಯೂನಿಕ್ ವಾಯ್ಸ್ ❤.
ಬಿಜಾಪುರದ ಮಂಜುನಾಥ್ ಅವರ ಬರವಣಿಗೆ ಮೈ ಜುಮ್ ಅನ್ನುಸ್ತು ಅದರಲಿರೋ ಕವಿತಾ ನಾನೇ ಅನ್ನಿಸ್ ಬಿಡ್ತು.
ಏನ್ ಮಾತಾಡೋದು , ಎಷ್ಟ್ ಮಾತಾಡೋದು ಭಾವುಕಳಾಗ್ತಾ ಇದ್ದೀನಿ 😔. ರವಿ ಸರ್ ಅವ್ರ್ ಪ್ರತಿ ಪುಸ್ತಕ ಓದೋವಾಗ್ಲೂ ಪಾಪಪ್ರಜ್ಞೆ ಕಾಡುತ್ತೆ , ನನ್ ದಡ್ ತನ ಎದ್ ಕಾಣುತ್ತೆ " ರವಿಬೆಳಗೆರೆ ಮೀಟ್ ಮಾಡ್ಲೇ ಬೇಕು , ಮಾತಾಡ್ಲೇ ಬೇಕು ಅನ್ನೋ ಹಠಕ್ಕ್ಯಾಕೆ ಬೀಳ್ಲಿಲ್ಲಿ ಈ ದರಿದ್ರ ಮನ್ಸು . ಇದೊಂದ್ ನ್ಯೂನ್ಯತೆ ನಾ ಇರೋವರ್ಗು ಉಳ್ಕೋ ಬುಡುತ್ತೆ , nothing can compensate this loss 😔.
ಯಶೋಮತಿ & ಜೂನಿಯರ್ ನಾದ್ರು ಭೇಟಿ ಆಗೋ ಅವಕಾಶ ಮತ್ತು ಸ್ನೇಹ ಸಿಗ್ಲಿ 🙏💐, better luck ಮಾಲ.... 😊
ಮಾಲಾ. ಕೆ, ಮಂಡ್ಯ

15/05/2023

ಸಿಂಗಾರ ಸಿರಿ ಗೀತಾ ಅವರ ಓದುಗ ದೊರೆಯ ತೀರದ ನೆನಪುಗಳು ಪುಸ್ತಕದ ಬಗೆಗಿನ ಅನಿಸಿಕೆಗಳು.. ಬೆಳಗೆರೆ ಬಳಗ

"ಓದುಗ ದೊರೆಯ ತೀರದ ನೆನಪುಗಳು”
ಈಗಷ್ಟೇ ಓದಿ ಮುಗಿಸಿದೆ❤️.

ವಾವ್……🙏🏻
ಅಮೂಲ್ಯ ಜೀವಂತ ನೆನಪಿನ ಕಲರ್ಫುಲ್ ಯಾನ.
ಅಕ್ಷರ ಲೋಕದ ತಿಕ್ಕಲನಿಗೆ ಸಲ್ಬೇಕಾದ ಗೌರವಗಾನ.

ಪುಸ್ತಕದ “ ಕಿರು ಪರಿಚಯ “ನಿಮಗಾಗಿ ಡಿಯರ್ ಫ್ರೆಂಡ್ಸ್💞.

ಒಬ್ಬ ಮನೆ ಮನೆಗೆ ಹಾಲು ಹಾಕುವ ಹುಡುಗ , ಓದುಗ ಗೃಹಿಣಿಯಿಂದ ಮೊದಲ್ಗೊಂಡು ,
ಕನ್ನಡ ಸಾಹಿತ್ಯ ಪರಿಶತ್ತಿನ ಗೌರವ ಕಾರ್ಯದರ್ಶಿಗಳು , ವಕೀಲರು, ವಿಶ್ರಾಂತ ಕುಲಪತಿಗಳು, ವಿಶ್ರಾಂತ ಪೋಲೀಸ್ ಅಧಿಕಾರಿ, ಅನೇಕ ಪತ್ರಕರ್ತರು, ಶಿಕ್ಷಕರು, ಗೆಳೆಯರು, ಗೆಳತಿಯರು, ಸಾಹಿತಿಗಳು, ಆತ್ಮೀಯರು, ಬರಹಗಾರರು ಎಲ್ಲರೂ ಅವರವರ ಬದುಕಿನಲಿ ಹಾದುಹೋದಂತಹ ರವಿಕಿರಣದ ನೆನಪುಗಳ ಸಿಹಿ ಸವಿಯನ್ನು ಓದುಗರೆದೆಯಲ್ಲಿ ಬತ್ತದಂತೆ ಬಿತ್ತಿದ್ದಾರೆ.

ರವಿ ಬಾಸ್ ಕೆಲವ್ರಿಗೆ ಅಕ್ಷರದ ವಿಟಮಿನ್ ಆಗಿ ಕಂಡರೆ ಮತ್ಕೆಲವರಿಗೆ ಗೆಳೆಯ, ಆತ್ಮೀಯ, ಗುರು, ಅಕ್ಷರಪ್ರೇಮಿ, ಸೃಜನಶೀಲ ಅಕ್ಷರ ಅಧಿಪತಿ, ಅಕ್ಷರ ರಾಕ್ಷಸ, ಬಂಧುವಾಗಿ
ಒಂದು ತಲೆಮಾರಿನ ಅಕ್ಷರ ಪ್ರೇಮಿಗಳಿಗೆ ಓದುವ ಹುಚ್ಚಿಡಿಸಿದ ಓದುಗ ದೊರೆಯ ಖಾಸಾಗಿ ಮೇಷ್ಟ್ರಾಗಿ ರೂಪುಗೊಳ್ತಾರೆ.

ಅವರ ವಿಭಿನ್ನ ವರ್ಚಸ್ಸಿನಿಂದ ವಿಶಿಷ್ಟಪೂರ್ಣ ಬರಹಗಾರನಾಗಿ, ಲಕ್ಶಾಂತರ ಪದಗಳನ್ನು ಎಲ್ಲೆಲ್ಲಿಂದಲೋ ಹೆಕ್ಕಿ ತೆಗೆದ ಮುತ್ತಿನ ಹಾರಗಾರನಾಗಿ, ಹಲವರ ಬಾಳಿಗೆ ಬೆಳಕಾಗಿ, ಬೆರಗಾಗಿ, ಬಿಂಬವಾಗಿ, ಭಾವನಾತ್ಮಕ ಎಳೆಗಳಾಗಿ, ಮಾತಿನ ಮಾಂತ್ರಿಕನಾಗಿ, ಭಾವನೆಗಳಿಗೆ ಭಾವರೂಪ ಕೊಡೋ ಭಾವರೂಪಿಯಾಗಿ, ಸಾಹಿತ್ಯಕ್ಕೆ ಪ್ರೇರಕವಾಗಿ, ಪ್ರತಿಕ್ಶಣವೂ ಪ್ರೀತಿಗೆ ಅರ್ಹನಾಗಿ , ಸ್ಟಾರ್ ಸೆಲಬ್ರಿಟಿ ಪತ್ರಕರ್ತರಾಗಿ , ದಿಲ್ದಾರ್ ಮನುಷ್ಯನಾಗಿ , ಕೋಪಬಂದಾಗ ಸಾಕ್ಷಾತ್ ಅಗ್ನಿಕುಂಡದಂತಾಗಿ, ತಾರಾ ವರ್ಚಸ್ಸಿನ ಅಜಾನುಬಾಹುವಾಗಿ ಜೀವನದ ಮೌಲ್ಯಗಳ ಅರಹುವ ಜೀವನ್ಮುಖಿಯಾಗಿ, ಸಮಾಧಾನ ಪುಸ್ತಕ ರೂಪದಲ್ಲಿ ಎಷ್ಟೋ ದುಃಖಿತ ಮನಗಳಿಗೆ ಸಾಂತ್ವಾನಿಗರಾಗಿ,
ಅಕ್ಷರ ಲೋಕದ ನಕ್ಷತ್ರ , ದೈತ್ಯ, ತೀಕ್ಷ್ಣ , ಪವರ್ಫುಲ್ ಮಾತುಗಾರಿಕೆಯ ತಂತ್ರಿಯಾಗಿ,
ಬದುಕಿನಲಿ ಬಡತನ , ಹಸಿವು, ಅಸಹಾಯಕತೆ, ಅವಮಾನಗಳ ಉರಿಯಲ್ಲಿ ಬೆಂದು ನೊಂದ ನಂದಾದೀಪವಾಗಿ, ಲಕ್ಶ್ಮಿಯ ನೆಚ್ಚಿನ ಮಾವನಾಗಿ, ಓದುಗರ ಹೃದಯಕ್ಕೆ ಲಗ್ಗೆಯಿಟ್ಟ ನೇರ ದಿಟ್ಟವಾಗಿ, ಮಮತೆ ವಾತ್ಸಲ್ಯ ತುಂಬಿದ ತಾಯಿಮನಸಿಗನಾಗಿ, ಗುಣ ಪಕ್ಷಪಾತಿಯಾಗಿ, ಶ್ರೀಸಾಮಾನ್ಯರಿಗೆ ಅಸಮಾನ್ಯನಾಗಿ,
ಕೆಲವರಿಗೆ ಅನ್ನವಿಟ್ಟು ಅಕ್ಷರ ದಾಸೋಹ ಧಾರೆಯೆರೆದ ಗುರುವಾಗಿ, ಸಮಾಜಮುಖಿ ಕೆಲಸಗಾರನಾಗಿ, ಅಭಿಮಾನಿಗಳ ಪಾಲಿನ ಪಂಚ್ಲೈನರ್ ಆಗಿ,
ಓದುಗರನ್ನು ಪತ್ರಿಕೆ ಪುಸ್ತಕಗಳ ಪರ್ಮನೆಂಟ್ ಭಕ್ತರನ್ನಾಗಿ ಮೋಡಿ ಮಾಡಿ, ಶ್ರೇಷ್ಟವಾಗ್ಮಿಯಾಗಿ, ಮಾಸದ ನೂರೆಂಟು ನೆನಪಿನ ನಾಯಕನಾಗಿ, ಹಲವೊಮ್ಮೆ ದಿವ್ಯಮೌನಿ ನೈಜ್ಯನಿರೂಪಕ ಕಪ್ಪುಸುಂದರಿಯ ಜಾದೂಗಾರ
ನಾಗಿ ಅವರಿಟ್ಟ ಹೆಜ್ಜೆಗಳು ಎಂದಿಗೂ ದಿಟ್ಟ🙏🏻💞.

ಬೇಬಕ್ಕರ ನಿರ್ವಾಜ್ಯ ನಿಲುಗಡೆಯ ನಿಲ್ಗಾಣವಾದ ರವಿ ಕೆಲವರ ಪಾಲಿನ ಬೆರಗು.
ಫಸ್ಟ್ಹಾಫ್ ನಲ್ಲಿಯೇ ಫುಲ್ಟೈಂ ಬದುಕಿದ ಜೀವನಪ್ರೇಮಿ ಭಾರತದ ನಂ ವನ್ ಪತ್ರಕರ್ತನಾಗಿ,
ಒಂದ್ರಾಶಿ ಪ್ರಶಸ್ತಿಗಳಿಗೆ ಭಾಜನರಾಗಿ, ಅಡ್ನಾಡಿ ಬದುಕಿನ ಆಕರ್ಷಕ ವ್ಯಕ್ತಿಯಾಗಿ,
ಫ್ಯಾನ್ಸ್ಗಳ ಫೇವರೆಟ್ ಬರಹಗಾರನಾಗಿ, ಹಿಡಿದ ಛಲ ಬಿಡದ ಹುಕಿ ಮನುಷ್ಯನಾಗಿ ಬಂಧುಗಳ ಪಾಲಿಗೆ ರಸಿಕನಾಗಿ, ಪತ್ರಿಕಾರಂಗದ ರವಿಮಾಮನಾಗಿ, ಪ್ರೀತಿಯ ಬರಹಗಾರನಾಗಿ ತೆರೆದ ಪುಸ್ತಕದ ರಂಗಿನ ವ್ಯಕ್ತಿಯಾಗಿ, ಹಾಯ್ ಬಳಗದ ಕೆಲಸಗಾರರಿಗೆ ಸ್ನೇಹಮಯ ಬಾಸ್ ಆಗಿ ರವಿಯಣ್ಣನಾಗಿ…………………….ಉಫ್🙏🏻.

ಇಂತಿಪ್ಪ ರವಿ ಬೆಳೆಗೆರೆಯವರ ಸಾಧನೆ , ಸಾಹಸ, ಸಾಮರಸ್ಯಗಳ ಸುದೀರ್ಘ ಲೇಖನದ ಭಂಡಾರವೇ
" ಓದುಗ ದೊರೆಯ ತೀರದ ನೆನಪು”.
ಎಲ್ಲಾ ೬೩ ಲೇಖಕರಿಗೂ ಅಭಿನಂದನೆಗಳು💐❤️.

ಪುಸ್ತಕ ಕೈಗೆತ್ತಿಕೊಂಡ್ರೆ ಮುಗೀತು ಕಣ್ರಿ ಬ್ರೇಕೆ ಕೊಡಲು ಮನಸ್ಸಾಗದು .
ಕೆಲ ದೌರ್ಬಲ್ಯಗಳ ನಡುವೆಯೂ ಲಕ್ಷಾಂತರ ಮಂದಿಯ ಹೃದಯ ಮಂದಿರದಲ್ಲಿ ಹಾಸು ಹೊಕ್ಕಾಗಿ ಕುಂತಿದಾರೆ ನಲ್ಮೆಯ ರವಿಬಾಸ್.
ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕವಿದು. ಇನ್ನೇಕೆ ತಡ ನೀವೂ ಕೈಗೆತ್ತಿಕೊಳ್ಳಿ ಅದರಲ್ಲೇ ಕಳೆದು ಹೋಗೋದು ಖಚಿತ. ಇಂತಿಪ್ಪ ಚೆಂದ ನೆನಪುಗಳಲ್ಲಿ ಕಳೆದ್ಹೋದ ಖುಶಿ ನಂಗಿದೆ.

ನನ್ನ ಅಚ್ಚುಮೆಚ್ಚಿನ ಬರಹಗಾರನ ನೆನಪಿನ್ಹೊತ್ತಿಗೆಯಲ್ಲಿ ಮೊಟ್ಟ ಮೊದಲಬಾರಿ ನನ್ನದೂ ಒಂದು ಲೇಖನ ಪ್ರಕಟವಾದ ರಾಶಿ ಖುಶಿ ನಂಗಿದೆ😍😃. ಇದಕ್ಕೆ ಅವಕಾಶ ಮಾಡಿಕೊಟ್ಟ ಹಿಮಾಯ್ಶು ( ಹಿಮವಂತ ಯಶೋಮತಿ🥰) ರವರಿಗೆ ಒಂದ್ರಾಶಿ ಥ್ಯಾಂಕ್ಸ್💗💐.

ಇತೀ ನಿಮ್ಮ ಗೀತಾನಾಗರಾಜ್❤️.

15/05/2023

ಸಿಂಗಾರ ಸಿರಿ ಗೀತಾ ಅವರ ಯಶೋವಾಣಿ ಪುಸ್ತಕದ ಬಗೆಗಿನ ಅನಿಸಿಕೆಗಳು..

ಯಶೋಮತಿ ರವಿಬೆಳಗೆರೆಯವರ "ಯಶೋವಾಣಿ "
ಈಗಷ್ಟೇ ಓದಿ ಮುಗಿಸಿದೆ . ಪುಸ್ತಕದ ಕಿರು ಪರಿಚಯ ನಿಮಗಾಗಿ ನಲ್ಮೆಯ ಸ್ನೇಹಗಳೇ….🙏🏻❤️.

ಅಸ್ತಿತ್ವಕ್ಕೆ , ಜೀವಂತಿಕೆಗೆ ಕಾರಣವಾಗುವ ಸಂಗತಿಯನ್ನು "ಓದುವಿಕೆ "ಯೆಂದು ಕರೆಯುತ್ತಾರೆ. ಓದದೆ ಇರುವಾಗ ಅದು ಬಿಳಿ ಹಾಳೆಯ ಮೇಲೆ ಮಾಡಿದ ಕರಿಯ ಗುರುತುಗಳು ಮಾತ್ರ " ಎನ್ನುತ್ತಾರೆ ಒಬ್ಬ ಹಿರಿಯ ಬರಹಗಾರರು.
ಎಷ್ಟು ಸತ್ಯವಲ್ವೇ ಈ ಮಾತು. ಪುಸ್ತಕಗಳನ್ನು ಓದ್ತಾ ಓದ್ತಾ ನಮ್ಮೊಳಗೊಂದು ಒಂದೊಳ್ಳೆ
ಬದಲಾವಣೆ ಮೂಡುವುದನ್ನು ನಾ ಮುಂಚಿನಿಂದಲೂ ಗಮನಿಸಿದ್ದೇನೆ. ಅದು ವ್ಯಕ್ತಿತ್ವಕ್ಕೆ ಒಂದು ಮೆರಗನ್ನು ಸಹ ತಂದುಕೊಡುತ್ತದೆಂಬುದನ್ನು ಅಲ್ಲಗೆಳೆಯುವಂತಿಲ್ಲ.
ಇಂತಹ ಎಷ್ಟೋ ಬದಲಾವಣೆ ನನ್ನಲ್ಲಿ ತಂದೊಡ್ಡಿದ ಪುಸ್ತಕ ಯಶೋಮತಿ ರವಿ ಬೆಳೆಗೆರೆಯವರ " ಯಶೋವಾಣಿ” .

ಕ್ಯೂಟ್ ಲೇಖನಗಳಿಂದ ತುಂಬಿರುವ ಚೆಂದ ಪುಸ್ತಕ.
ಸಮಾಜ ಸುಧಾರಣೆಯತ್ತ ದಿಟ್ಟಹೆಜ್ಜೆಯಿರಿಸಿದ ಸಾಧಕರ ಬಗ್ಗೆಯ ಬರಹದಿಂದ ಮೊದಲುಗೊಂಡು ,
ನಮ್ಮ ನಡುವೆಯೇ ಚಲಿಸೊ ಮೂರನೆಯವರೆಂಬ ಮಾಯಾವಿಗಳು,
ಸಮಾಜ , ಮನೆಯವರು ಎನ್ನದೆ ಎಲ್ಲರನ್ನೂ ಎದುರಿಸಿ ನಿಲ್ಲೋ ದಿಟ್ಟ ನೀನಾಗುಪ್ತರ ಕತೆ,
ಗುರುವಿಲ್ಲದೆ ಗುರಿ ಏರಲು ಸಾಧ್ಯವೇ ? ಗುರುಶಿಷ್ಯರ ನಡುವಿನ ಅನುಬಂಧ,
ಸೌದೆ ಒಲೆಯೆಂಬ ಸುಲಕ್ಷಣೆ ಮಾಯವಾಗಿ ಗ್ಯಾಸ್ ಸ್ಟವ್ ಎಂಬ ಮಾಯಾವಿ ಅಡುಗೆ ಮನೆ ಹೊಕ್ಕ ಲೇಖನವಂತು ಚೊಕ್ಕ.
ಸಾವಿರ ಮೋಸಗಳ ಕಂಡರೂ , ಅವರಂತವರಲ್ಲ ಎಂದು ನಂಬುವ ಕುರುಡು ನಂಬಿಕೆ ಮುಗ್ಧತೆ, ಸ್ವಾರ್ಥ ಯುಗದಲ್ಲಿ ಸಹ, ಸಂಘ ಜೀವನದಲ್ಲಿ ಮೌನವಾಗಿ ಎಲ್ಲವನ್ನೂ ಗಮನಿಸುತ್ತಾ ಅವರಿಗೆ ಹತ್ತಿರವಾಗಿರುವುದೊಂದು ಕಲೆ, ಆ ಕಲೆಯ ಕುರಿತಾದ ಲೇಖನ ಅದ್ಭುತ.

ಸಂಗೀತವಾತಾವರಣದಲ್ಲಿ ಹುಟ್ಟಿ ಬೆಳೆದು ನಮ್ಮ ಸಂಸ್ಕೃತಿಯ ಧಿರುಸು ಧರಿಸಿ ರ್ಯಾಂಪ್ ಹಾಡುಗಳನ್ನಾಡುವ ಉಷಾಉತುಪ್ ರ ಜೀವನಗಾಥೆ,
ಮಹಿಷನಗರ ಮೈಸೂರಿನ ಸಂಪದ್ಭರಿತ ಮಾಹಿತಿ,
ಚಿಂತೆಯೇ ಚಿತೆಗೆ ಬಿದ್ದು ದಹಿಸುವಂತೆ ಒತ್ತಡದ ಬದುಕಲ್ಲೂ ಮೊಗದಲ್ಲಿ ಮೂಡಿಸಿಕೊಳ್ಳೋ ಒಂದು ಕಿರುನಗೆಯ ಚೇತೋಹಾರಿ ಬರಹ,
ಕಿರಿದಾಗಿ ಕಿಡಿಯಾಗಿ ಕಾಣುವ ನಕ್ಷತ್ರದ ಬಗ್ಗೆ ಹಿರಿದಾದ ದಿವ್ಯ ಬರಹ,
ಆಗಷ್ಟೇ ಬುದ್ದಿ ಬಂದು ಅಪ್ಪನ ಹೆಗಲಿಡಿದು ಜೀಕಬೇಕಿದ್ದ ಕಂದನಿಗೆ ಅಪ್ಪನ ಅಗಲಿಕೆ ಅದಿನ್ನೆಷ್ಟು ದುಃಖವನ್ನು ತಂದೊಡ್ಡಬಲ್ಲದು ಆಮಗುವಿಗೆ ಸಮಾಧಾನ ಹೇಳೋ ಮಹಾತಾಯಿಯ ಒತ್ತಡ ಆತಂಕ ಅದಿನ್ನೆಂತಹದ್ದು ಅದರೊಂದಿಗೆ ತಂದೆಯ ಪೂರ್ವಜರನ್ನು ಪರಿಚಯಿಸಿರೋ ಬರಹ ಅನನ್ಯ.

ಕನ್ನಡ ನಾಡು ನುಡಿಗಾಗಿ ಜೀವ ಮೀಸಲಿಟ್ಟ ನಮ್ ಅಪ್ಪು , , ,ಮಹಾನ್ ಬೊಗಸೆ ಕಂಗಳ ಕನಸುಗಾರ
ಶಂಕರನಾಗ್ ರ ದಿವ್ಯ ಸ್ಮರಣೆ ,
ಬಾಲ್ಯದಿಂದಲೇ ಮಧುರ ಗಾನದಿಂದ ಎಲ್ಲರನ್ನೂ ರಂಜಿಸುತ್ತಾ ಇಂದಿನವರೆಗೂ ನಮ್ಮೆಲ್ಲರ ನಡುವೆ ತನ್ನಿರುವಿಕೆಯನ್ನು ಸಾರಿರುವ ರೇಡಿಯೋ ಆಕಾಶವಾಣಿಯ ಬಗ್ಗೆ ಒಂದುತ್ತಮ ಮಾಹಿತಿ,
ಪ್ರೀತಿಯ ಜಾಗದಲ್ಲಿ ದ್ವೇಷವೆಂದೂ ಮೂಡದಿರಲೆನ್ನುತ್ತಾ
ಯುವ ಪ್ರೇಮಿಗಳಿಗೆ , ಪ್ರೀತಿಯಲ್ಲಿ ಬಿದ್ದವರಿಗೆ ಬೀಳಲಿಚ್ಚಿಸುವವರಿಗೆಂದೇ ರವಿ ಬಾಸ್
ರೇ ನಿಂತು ಹೇಳಿ ಬರೆಸಿದಂತಹ ಬರಹ
" ನಿನ್ನ ಚೆಲುವಿನಷ್ಟೇ ಗಾಢ ಪ್ರೀತಿ ನನ್ನದು " ಖಂಡಿತ ಓದಲೇ ಬೇಕಾದ ಸ್ವೀಟ್ ಲೇಖನ.

ಕಲಿಕೆಗೆ ಅಂತ್ಯವೇ ಇಲ್ಲ, ಕಲಿತಷ್ಟೂ ಇನ್ನಷ್ಟು ಮಗದಷ್ಟು ಬೆಟ್ಟದಷ್ಟು ತೆರೆದುಕೊಳ್ಳುವ ವಿಸ್ಮಯ ಬರಹ,
ಮನುಷ್ಯನ ಜೀವಿತಾವಧಿಯುದ್ದಕ್ಕೂ ಉತ್ತರವೇ ಸಿಗದ ರಹಸ್ಯಗಳಲ್ಲಿ ಆತ್ಮಗಳವೂ ಒಂದು ಇದರ ಕುರಿತಾಗಿ ಪುಸ್ತಕದಲ್ಲಿಯೇ ಓದಿ ತಿಳಿಯಬೇಕು.
ಹೈಸ್ಕೂಲು ಕಾಲೇಜಿನಲ್ಲಿದ್ದಾಗ ಊರುಗಳಲ್ಲಿರ್ತಿದ್ದ ಕಸೀನ್ಸ್, ಪ್ರೀತಿಯಲ್ಲಿ ಬಿದ್ದಾಗ ಒಲವಿಗೆ ,
ಮದುವೆಯಾನಂತರ ಸ್ನೇಹಗಳಿಗೆ ಬರೆಯುತ್ತಿದ್ದ ಪತ್ರಗಳು ಪೋಸ್ಟ್ ಮ್ಯಾನ್ ಮನೆಮುಂದೆ ಸೈಕಲ್ ತುಳಿತಾ ಇಲ್ಲವೆಂಬಂತೆ ಕೈ ತಿರುವಿ ಸಾಗಿಹೋಗುವಾಗ ಆತಂಕ ದುಗುಡದಿಂದ ಮರು ಪತ್ರಗಳಿಗೆ ಕಾಯುವಿಕೆ, ಆ ಚೆಂದ ದಿನಗಳ ನೆನಪನ್ನು ಮತ್ತೆ ಚಿಗುರಿಸಿದ್ದಕ್ಕೊಂದು ಥ್ಯಾಂಕ್ಸ್ ಹೇಳ್ಲೇ ಬೇಕು.

ಪದೇ ಪದೇ ನಿಗ್ರಹಿಸಲಾರದಂತಹ ಕೋಪ ಬರ್ತಿದೆಯಾ? " ಕೆಣಕಿದರೆ ಕೆಂಡದಂತಾ ಕೋಪ” ಓದಿ ಕೋಪ ಕೊಂಚ ಕಡಿಮೆಯಾಗಬಹುದು.
ಜೀವನದ ಮರೆಯಾದ ಮಧುರ ನೆನಪುಗಳ ಮೆರವಣಿಗೆ,
ಮುಂಬರುವ ಹೊಸವರುಷಗಳಲ್ಲಿ ನವ ಪೀಳಿಗೆಗೆ ಪುಸ್ತಕ ಹುಳುವಾಗದೆ ಆಯ್ಕೆಯ ಸ್ವತಂತ್ರ್ಯಕೊಟ್ಟು ಎಲ್ಲೋ ಒಂದೆಡೆ ನಿಲ್ಲದೆ ಚಲಿಸುವಂತಾಗಬೇಕೆಂಬ ಪ್ರೇರಣದಾಯಕ ಬರಹ.

ಪ್ರತಿಮುಂಜಾವಿನಲಿ ಮನೆಮನೆಯಲಿ ತಮ್ಮ ಕೋಕಿಲಕಂಠದಿಂದ ಸುಪ್ರಭಾತವೆಂಬ ಗಾನಕಡಲಲಿ ಮೈಮರೆಸಿ ತಲ್ಲೀನಗೊಳಿಸುವ ಎಂ , ಎಸ್ , ಸುಬ್ಬಲಕ್ಷ್ಮಿಯವರ ಕುರಿತಾದ ಕ್ರೀಯಾಶೀಲ ಲೇಖನ.
ಸಂಕ್ರಮಣ ಬರ್ತಲೇ ಇರ್ತದೆ, ಕಾಲ ಸರಿಯುತ್ಲೇ ಇರ್ತದೆ. ಈಸಬೇಕು ಇದ್ದು ಜೈಸಬೇಕು ಲೇಖಕಿಯವರ ಮನದಿಂಗಿತ ಕುರಿತಾದ ಕಾಡುವ ಲೇಖನ,
ದುರಂತದಲ್ಲಿ ಅಂತ್ಯವಾದ ಪಂಜಾಬಿನ ನಟಿ ಪ್ರಿಯಾ ರಾಜವಂಶರ ವಿಷಾಧ ಪ್ರೇಮಕತೆಯ ಲೇಖನ ,
ಖಾಲಿಯಾದಂತೆಲ್ಲಾ ಅವರೇ ನಿಂತು ಬರೆಸುತ್ತಿದ್ದಾರೆ ಸುಳ್ಳಲ್ಲ ಇದೊಂದು ಆತ್ಮಸ್ಥೈರ್ಯದ ಬರಹ " ಸಾಗುತ್ತಿರುವ ಹಾದಿಯಲಿ”.
ಜಗದ ಜಂಜಡದಲ್ಲಿ ಅಭಲೆಯೆಂಬ ಹೆಸರನ್ನು ಪಕ್ಕಕ್ಕೆ ಸರಿಸಿ ಸಭಲೆಯಾಗಿ ನಿಂತ ಹೆಣ್ಣಿನ ಬಗ್ಗೆ ಒಂದು ಗೌರವಸೂಚೀ ಲೇಖನ,
ಸ್ವಾರ್ಥ ಪರ್ಪಂಚದಲ್ಲಿ ಕೈಗೆಟುಕೋ ಒಂದೊಳ್ಳೆ ಪ್ರೀತಿ ಉಳಿಸಿ ಬೆಳೆಸಿ ಕಳಚಿಹೋಗದಂತೆ ಹಿಡಿದಿಟ್ಟುಕೊಳ್ಳಬೇಕೆ ಓದಲೇ ಬೇಕು " ಒಲವಿನ ಪೂಜೆಗೆ ಒಲವೇ ಮಂದಾರ”,

ಮನೆಯ ಮಕ್ಕಳು ವೃಕ್ಷಗಳಾಗಬೇಕೆ ಹೊರತು ಬಳ್ಳಿಯಲ್ಲ ಮಕ್ಕಳನ್ನು ಬೆಳೆಸುವ ಮುನ್ನ ಪೋಷಕರಿಗೆ ಕಿವಿಮಾತಾದ ಪ್ರೌಢಲೇಖನ ,
ಒಂದು ಯುಧ್ದ ಎಂತಹ ಯಾತನಾದಾಯಕ ನೋವನ್ನು ತಂದೊಡ್ಡಬಹುದೆಂಬುದನ್ನು " ರಣರಂಗದೊಳಗೆ ಪಾಪ ಪುಣ್ಯಗಳ ಭೀತಿಯಲ್ಲಿ ಓದಿದಾಗ ಅರಿವಾಯ್ತು.
ಕಡೆಯದಾಗಿ ಪುರುಷನ ಹಿಂದೆ ಮೌನಸಾಧಕಿಯಾಗಿ ನಿಂತ ಸ್ವಯಂಪ್ರಭೆ ಸ್ತ್ರೀಮೂರ್ತಿಯ ಸಾಧನೆಯ ಅನುಭಾವ ಲೇಖನ " ಸ್ತ್ರೀ ಎಂದರೆ ಅಷ್ಟೇ ಸಾಕೇ…..”.🙏🏻.

ಈ ಪುಸ್ತಕ ಅರ್ಪಣೆಗೆ ಶ್ರಮಿಸಿದ ಎಲ್ಲರಿಗೂ ಪ್ರೀತಿಪೂರ್ವಕ ವಂದನೆಗಳು 🙏🏻.
ಒಂದೊಳ್ಳೆ ಲೇಖನ ಬಂಢಾರ ಓದಿದ ಖುಶಿಯಿದೆ .

ಯಶೋಮತಿ ಮ್ಯಾಮ್ ಒಂದಷ್ಟು ತಿಳಿಯದಿದ್ದ ಅರಿಯದಿದ್ದ ಒಂದಷ್ಟು ವಿಷಯಗಳನ್ನು ಪುಸ್ತಕದಿಂದ ಮಸ್ತಕದೊಳಕ್ಕೆ ಕಾಪೀ ಪೇಸ್ಟ್ ಮಾಡಿಸಿದ್ರೀ ಥ್ಯಾಂಕ್ಸ್ ಅ ಲಾಟ್…😍❤️.
ಇನ್ಯಾಕ್ ತಡ ಫ್ರೆಂಡ್ಸ್ ನೀವು ಪುಸ್ತಕ ಕೈಗೆತ್ತಿಕೊಳ್ಳಿ 😍💞.

"ಯಶೋವಾಣಿ" ಪುಸ್ತಕದ ಬಗೆಗೆ ಓದುಗರೊಬ್ಬರ ಅನಿಸಿಕೆಗಳು..ನಿಮ್ಮ ಅಭಿಮಾನಕ್ಕೆ ಚಿರಋಣಿ..ಯಶೋವಾಣಿ ಪುಟ ೧೯ರಲ್ಲಿ ಅಧ್ಯಾತ್ಮ ಎಂದರೆ "ತನ್ನನ್ನು ತಾನ...
15/05/2023

"ಯಶೋವಾಣಿ" ಪುಸ್ತಕದ ಬಗೆಗೆ ಓದುಗರೊಬ್ಬರ ಅನಿಸಿಕೆಗಳು..ನಿಮ್ಮ ಅಭಿಮಾನಕ್ಕೆ ಚಿರಋಣಿ..

ಯಶೋವಾಣಿ ಪುಟ ೧೯ರಲ್ಲಿ ಅಧ್ಯಾತ್ಮ ಎಂದರೆ "ತನ್ನನ್ನು ತಾನು ಅರಿಯುವ ಕ್ರಿಯೆ" ಎಂದು ಬರೆದಿದ್ದೀರಿ. ಅಧ್ಯಾತ್ಮ ಅಂದರೆ ಅದಲ್ಲ. 'ಅಧಿ' ಅಂದರೆ ಕುರಿತು ಅಂತ. ಇಂಗ್ಲಷಿನ About. ಅಧ್ಯಾತ್ಮ ಅಂದರೆ ಆತ್ಮವನ್ನು ಕುರಿತ ಜಿಜ್ಞಾಸೆ. ಸರಳವಾಗಿ ಹೇಳುವುದಾದರೆ-೧."ನಾನು" "ನಾನು" ಎಂದುಕೊಳ್ಳುವ ಜೀವ.೨. ಆ ಜೀವದ ಅನುಭವದಲ್ಲಿ ಇರುವ ಪ್ರಪಂಚ.೩.ಜೀವ ಮತ್ತು ಪ್ರಪಂಚ ಈ ಎರಡಕ್ಕೂ ಮೂಲ ಕಾರಣವಾಗಿರುವ ಒಂದು ವಿಶೇಷ ಶಕ್ತಿ ಅಥವಾ ಒಂದು ವಸ್ತು ಅಂತ ಇದ್ದರೆ ಆ ಪರವಸ್ತುವೇ ಈಶ್ವರ‌. ಹೀಗೆ ಜೀವ, ಜಗತ್ತು, ಈಶ್ವರ ಈ ಮೂರರ ಒಟ್ಟಿನ ಅರಿವೇ ಅಧ್ಯಾತ್ಮ ಅಥವಾ ತತ್ತ್ವಜ್ಞಾನ.ಇನ್ನು ನೀವು ಹೇಳಿದಂತೆ ತನ್ನನ್ನು ತಾನು ಅರಿಯುವುದು.ನಮ್ಮನ್ನು ನಾವು ವಾಕ್ಯೂಮಲ್ಲಿ ಅರಿಯಲಾಗುವುದಿಲ್ಲ. ಅದಕ್ಕೆ ಜಗತ್ತಿನ, ಜನರ ಸಂಪರ್ಕ ಬೇಕು. ಅಷ್ಟರಲ್ಲಿ ನಮ್ಮ ಅನುಭವ ಲೆಕ್ಕವಿಲ್ಲದಷ್ಟು ಆಗಿರುತ್ತದೆ. ಅರಿವು ಮುಗಿಯುವುದೇ ಇಲ್ಲ. ಏನೋ ಹೇಳಿದೆ. ಕ್ಷಮಿಸಿ.
- G N Bhatta

Address

Rajarajeshwari Nagar
Bangalore
560098

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Telephone

+919845556005

Website

Alerts

Be the first to know and let us send you an email when Ravi Belagere Prakashana -ರವಿ ಬೆಳಗೆರೆ ಪ್ರಕಾಶನ posts news and promotions. Your email address will not be used for any other purpose, and you can unsubscribe at any time.

Share

Category