Mathru TV ಮಾತೃ ಟಿವಿ

Mathru TV ಮಾತೃ ಟಿವಿ Contact information, map and directions, contact form, opening hours, services, ratings, photos, videos and announcements from Mathru TV ಮಾತೃ ಟಿವಿ, News & Media Website, 6th cross heggnhalli, Bangalore.

16/08/2025

ಕುಣಿಗಲ್ ತಾಲೂಕು ಕೊತ್ತಗೇರೇ ಗ್ರಾಮ ಪಂಚಾಯಿತಿಯಲ್ಲಿ ರಾತ್ರಿ 7:30ಯಾದರೂ ಪಂಚಾಯಿತಿ ಓಪನ್ ಮಾಡಿಕೊಂಡು ಏನ್ ಎಂ ಆರ್ ತೆಗೆಯುತ್ತಾ ಇದ್ದಾರೆ ಶಂಕರ್ ಲಿಂಗೇಗೌಡ ಬೆಂಬಲಿಗರಿಂದ ಪಂಚಾಯಿತಿಯ ಮುಂದೆ ಹೋರಾಟ

15/08/2025

@@@ಕುಣಿಗಲ್ ತಾಲೂಕಿನಲ್ಲಿ ತಾಲೂಕು ಪಂಚಾಯಿತಿಯಲ್ಲಿ ಸೆಕ್ರೆಟರಿಗಳು ಕೆಲಸ ಮಾಡಬೇಕಾದಂತಹ ಜಾಗಗಳಲ್ಲಿ ಪಿಡಿಒಗಳನ್ನು ನೇಮಿಸಿದ್ದು ಪಿಡಿಒಗಳು ಕೆಲಸ ಮಾಡಬೇಕಾದ ಅಂತಹ ಪಂಚಾಯಿತಿಗಳಿಗೆ ಸೆಕ್ರೆಟರಿಗಳನ್ನು ನೇಮಕ ಮಾಡಿ ಗ್ರಾಮ ಪಂಚಾಯಿತಿಗಳನ್ನು ಅದಗೆಡಿಸುತ್ತಿರುವ ಈ ಓ ಸಿ ಈ ಓ ಅಧಿಕಾರಿಗಳು ಇದರ ಬಗ್ಗೆ ಇಂದು ಕುಣಿಗಲ್ ನಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ರೈತ ಮುಖಂಡರಾದ ದೇವೇಗೌಡ ಹಾಗೂ ವಿಜಯ ಗೌಡ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದರು

10/08/2025

ಕುಣಿಗಲ್ ತಾಲೂಕು ಎಲಗಲವಾಡಿ ಗ್ರಾಮ ಉತ್ರಿದುರ್ಗ ಹೋಬಳಿಯ ಸಿದ್ದಲಿಂಗಯ್ಯ ಎಂಬ ಸುಮಾರು 65ವರ್ಷ ವಯಸ್ಸಾದ ವಯೋ ವೃದ್ಧನ ಜಮೀನಿನಲ್ಲಿ ಅನಧಿಕೃತವಾಗಿ ಅತಿಕ್ರಮ ಪ್ರವೇಶ ಮಾಡಿ ಕೆಲ ಕಿಡಿಗೇಡಿಗಳು ರೈತ ಬೆಳೆಸಿದ್ದ ಬೃಹದಾಕಾರದ ಮೂರು ತ್ಯಾಗದ ಮರಗಳನ್ನು ತಿಳಿಯದ ಹಾಗೆ ಕದ್ದು ಕಳ್ಳ ಸಾಗಣೆ ಮಾಡಿರುತ್ತಾರೆ ಇದರ ಬಗ್ಗೆ ಈ ವ್ರುದ್ಧ ದೂರು ನೀಡಿದ್ದರು ಒಂದು ತಿಂಗಳಾದರೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ

06/08/2025
06/08/2025

ಕುಣಿಗಲ್ ತಾಲೂಕು ಕೊತ್ತಗೇರೇ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡದೆ ಬಿಲ್ ಪಾಸ್ ಮಾಡಿರುವ ಬಗ್ಗೆ ಶಂಕರಗೌಡರಿಂದ ಹೋರಾಟ

02/08/2025

ತುರುವೇಕೆರೆ ::ವಡವನಗಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಲಜೀವನ್ ಮಿಷನ್ ಯೋಜನೆ ಅಡಿ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿಯಲ್ಲಿ ಭಾರಿ ಪ್ರಮಾಣದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ

ವಡವನಗಟ್ಟ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಆಯರನಹಳ್ಳಿ ಗ್ರಾಮದಲ್ಲೀ ಸಿಮೆಂಟ್ ಗಟ್ಟಿಯಾಗಿದ್ದರೂ ಅದನ್ನೇ ಬಳಸಿ ಕಾಮಗಾರಿ ನಡೆಸುತ್ತಿದ್ದು ಅದನ್ನು ಕೇಳಲು ಹೋದ ಹೈರನಳ್ಳಿ ಗ್ರಾಮಸ್ಥರ ಮೇಲೆ ಅವ್ವ್ಯಾಪ್ಚ ಶಬ್ದಗಳಿಂದ ನಿಂದಿಸಿ ಉತ್ತಮ ಗುಣಮಟ್ಟವಲ್ಲದ ಸಿಮೆಂಟ್ ಅನ್ನು ಬಳಸಿ ಕಾಮಗಾರಿ ನಡೆಸಿರುತ್ತಾರೆ
ಇದನ್ನು ನೋಡಿದ ಗ್ರಾಮಸ್ಥರು ಕಣ್ಣು ಮುಂದೆ ಈ ರೀತಿ ಕಾಮಗಾರಿ ನಡೆಯುತ್ತಿದೆ , ಇನ್ನೂ ತಾಲೂಕಿನಾದ್ಯಂತ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಭರಿತರಾಗಿದ್ದು ಇನ್ನಾದರೂ ಅಧಿಕಾರಿಗಳು ಹೆಚ್ಚೆತ್ತು ಈ ಕಳಪೆ ಗುಣಮಟ್ಟದ ಕಾಮಗಾರಿ ಮಾಡುತ್ತಿರುವ ಗುತ್ತಿಗೆರೆ ಆಧಾರ ರನ್ನು ಹೊರಹಾಕಿ ಉತ್ತಮ ಗುತ್ತಿಗೆದಾರರಿಗೆ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು

01/08/2025

ತುರುವೆ ಕೆರೆ ಪಟ್ಟಣದ ಒಳಗೆ ಸಾವಿಗಾಗಿ ಬಾಯಿ ತೆರೆದು ಕುಂತ ಯಮಕಿಂಕರ ಗುಂಡಿಗಳು

01/08/2025

ತುರುವೇಕೆರೆ ಹೃದಯ ಭಾಗ ತುರುವೇಕೆರೆ ನಗರದ ಒಳಗೆ ಸಾವಿಗಾಗಿ ಬಾಯಿ ತೆರೆದು ಕುಳಿತ ಯಮಕಿಂಕರ ಗುಂಡಿಗಳು

31/07/2025

ವಡವಣಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ

28/07/2025

ವಡವನಘಟ್ಟ ಪಂಚಾಯ್ತಿಯಲ್ಲಿನ ನರೇಗಾ 2015 ರಿಂದ 2020 ರ ವರೆಗೆಗಿನ ಕಾಮಗಾರಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಗುಳುಂ

ತುರುವೇಕೆರೆ: ಅಮಾಯಕರ ಪಹಣಿ ಆಧಾರ್ ಕಾರ್ಡನ್ನು ಬಳಸಿಕೊಂಡು ನಕಲು ಸಹಿ ಮಾಡಿ ನರೇಗಾ ಕಾಮಗಾರಿಗಳಲ್ಲಿ ಅಕ್ರಮ ಎಸಗಿದ್ದಾರೆ ಇದರ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿ.ಇ.ಓ ರವರಿಗೆ ದೂರು ನೀಡಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಾರಿಕೊಂಡಿದ್ದಾರೆ ಇದರಿಂದ ನಮಗೆ ಅನ್ಯಾಯವಾಗಿದೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಮತ್ತು ಶಾಮೀಲಾಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಎಂದು ಆಯರಹಳ್ಳಿ ಗ್ರಾಮಸ್ಥರ ಆಗ್ರಹ.

ತಾಲೂಕಿನ ಮಾಯಸಂದ್ರ ಹೋಬಳಿ ವಡವನಘಟ್ಟ ಪಂಚಾಯಿತಿಯ ನರೇಗಾ ಕಾಮಗಾರಿಯಲ್ಲಿ ಭಾರಿ ವ್ಯವಹಾರ ನಡೆದಿದ್ದು ಗ್ರಾಮದಲ್ಲಿ ನಡೆದಿರುವ ಸುಮಾರು 15 ರಿಂದ 20 ಕಾಮಗಾರಿ ಕಾಮಗಾರಿಗಳಲ್ಲಿ ಭಾರಿ ಆವ್ಯವಹಾರ ನೆಡೆದಿದೆ ಎಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯರಹಳ್ಳಿ ಗ್ರಾಮದ ನರೇಗಾ ಕಾಮಗಾರಿ ನಡೆದಿದೆ ಎನ್ನಲಾದ ಸ್ಥಳದಲ್ಲಿ ದಾಖಲೆಗಳ ಸಮೇತ ಗ್ರಾಮಸ್ಥರ ಪರವಾಗಿ ಆಯರಹಳ್ಳಿ ಗ್ರಾಮದ ಯುವಕ ಗಿರೀಶ್ ಗೌಡ ಮಾಧ್ಯಮದವರ ಮುಂದೆ ಕಾಮಗಾರಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟು

ನಮ್ಮ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಕಾಮಗಾರಿಯ ಅಂದಾಜು ಪಟ್ಟಿ ಮತ್ತು ಹಣ ಬಿಡುಗಡೆ ಕಾಮಗಾರಿಗಳ ವಿವರವನ್ನು ಸಂಗ್ರಹಿಸಿ ನರೇಗಾ ಓಬುಡ್ಸಮನ್ ರಿಗೆ ದೂರು ನೀಡಿದ್ದೆವು

ಅದರಂತೆ ಸಂಬಂಧ ಪಟ್ಟ ತಾಲೂಕು ನಿರ್ವಹಣಾಧಿಕಾರಿಗಳಿಗೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕರು ತಾಂತ್ರಿಕ ಅಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರು ಸದಸ್ಯರು ಹಾಗೂ ನನಗೆ ನೋಟಿಸ್ ನೀಡಿ ದಿನಾಂಕ 15 -7 -25ರಂದು ತನಿಖೆ ನಡೆಸುವುದಾಗಿ ಸೂಚನೆ ನೀಡಲಾಗಿತ್ತು

ಆದರೆ ಗ್ರಾಮ ಪಂಚಾಯಿತಿಯ ಬಳಿ ಬೆಳಗಿನಿಂದಲೂ ಓಂಬುಡ್ಸಮೆನ್ ಬರುವಿಕೆಗಾಗಿ ಗ್ರಾಮಸ್ಥರುಗಳು ಕಾಯುತಿದ್ದರೂ ಮಧ್ಯಾಹ್ನವಾದರೂ ಯಾವುದೇ ಅಧಿಕಾರಗಳು ಇತ್ತ ಸುಳಿಯದಿರುವುದು ಹಾಗೂ ಮೊಬೈಲ್ ಕಾಲ್ ಮಾಡಿದರು ಸಹ ಕರೆಯನ್ನು ಸ್ವೀಕರಿಸುತ್ತಿಲ್ಲ

ನಮಗೆ ಇವರು ಭ್ರಷ್ಟಾಚಾರಿಗಳ ಜೊತೆ ಶಾಮೀಲಾಗಿ ಕಾರ್ಯ ನಿರ್ವಹಿಸುತ್ತಿದ್ದಾರ ಎಂಬ ಆನುಮಾನಗಳು ಮೂಡುತ್ತಿವೆ ಅದರಂತೆ ಇವರ ವರ್ತನೆಕೂಡ ಇದೆ ಇದರಿಂದ ನಮಗೆ ಇಲ್ಲಿಯೂ ಸಹ ನ್ಯಾಯ ಸಿಗದಂತಾಗಿದೆ ಸಾರ್ವಜನಿಕರ ತೆರಿಗೆ ಹಣವನ್ನು ಕೆಲವರು ಲೂಟಿ ಮಾಡುತ್ತಿರುವುದು ಕಂಡುಬಂದಿದ್ದು

2015 ನೇ ಸಾಲಿನಿಂದ ಇದುವರೆಗೂ ದಾಖಲಾತಿಗಳನ್ನು ನೋಡಿದಾಗ ಈ ಅವಧಿಯಲ್ಲಿ ನಮ್ಮ ಗ್ರಾಮದ ಸದಸ್ಯ ಹುಚ್ಚಮ್ಮ ಕೋಂ ನಂಜಪ್ಪ ಅವರ ಅವಧಿಯಲ್ಲಿ ಆಕೆಯ ಮಗ ಅನಂತರಂಗೇಗೌಡ,ಆಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಣುಕಪ್ಪನವರ ಜೊತೆ ಶಾಮೀಲಾಗಿ ಕಾಮಗಾರಿಯಲ್ಲಿ ಬಾರಿ ಭ್ರಷ್ಟಾಚಾರ ನೆಡೆಸಿದ್ದಾರೆ ಎಂದು ಆರೋಪಿಸಿ.

ಆಯರಹಳ್ಳಿ ಗ್ರಾಮದಲ್ಲಿ ನೆಡೆದಿರುವ ಸುಮಾರು 15 ರಿಂದ 20 ಕಾಮಗಾರಿಯಲ್ಲಿ ನಡೆಸದೇಯೇ ಬಿಲ್ ಮಾಡಿಕೊಂಡಿರುವುದು ಈ ಕಾಮಗಾರಿ ನಡೆದಿದೆ ಎನ್ನುವ ಜಾಗವನ್ನು ನೋಡಿದರೆ ಅಲ್ಲಿ ಕೆಲಸವೇ ನಡೆದಿಲ್ಲ

ಹಲವಾರು ಕಾಮಗಾರಿಗಳಲ್ಲಿ ಈ ತರಹದ ಹಲವಾರು ಪೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಆನ್ಲೈನ್ ನಲ್ಲಿ ಅಪ್ಲೋಡ್ ಆಗಿವೆ ಸಹಿ ಮಾಡಲು ಬರದಂತಹ ಅಮಾಯಕರ ಪಹಣಿ ಆಧಾರ್ ಕಾರ್ಡನ್ನು ಬಳಸಿಕೊಂಡು ನಕಲು ಸಹಿ ಮಾಡಿ ಅಕ್ರಮ ಎಸಗಿದ್ದಾರೆ ಇದರ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿ.ಇ.ಓ ರವರಿಗೆ ದೂರು ನೀಡಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಾರಿಕೊಂಡಿದ್ದಾರೆ

ಇದರಿಂದ ನಮಗೆ ಅನ್ಯಾಯವಾಗಿದೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಮತ್ತು ಶಾಮೀಲಾಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ವಾಪಸ್ ಬರಿಸಬೇಕು

ಇಲ್ಲಿಯೂ ನಮಗೆ ನ್ಯಾಯ ಸಿಗದಿದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಹಾಗೂ ಗಜಿಲ್ಲಾ ಪಂಚಾಯ್ತಿಯ ಮುಂದೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗೌತಮ್,ನವೀನಕುಮಾರ್,ಮಂಜುನಾಥ್,ನಾಗರಾಜ್,ಜಗದೀಶ್,ರಮೇಶ್,ಶಂಕರಲಿಂಗೇಗೌಡ, ನಂಜುಂಡೇಗೌಡ,ಉಮೇಶ್,ಕಿರಣ್ ಸೇರಿದಂತೆ ಗ್ರಾಮಸ್ಥರುಗಳು ಇದ್ದರು.

ವರದಿ : ಸುರೇಶ್ ಬಾಬು ಎಂ ತುರುವೇಕೆರೆ

26/07/2025

ಕಳಪೆ ಕಾಮಗಾರಿ ಆರೋಪ : ಶರಣಗೌಡ ಪಾಟೀಲ್ ಬಯ್ಯಾಪುರ ಪರಿಶೀಲನೆ ಲಿಂಗಸುಗೂರು:ಲಿಂಗಸುಗೂರು: ಪಟ್ಟಣದ ಕರಡಕಲ್ ಹೊರ ವಲಯದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಯೋಜನೆಯಲ್ಲಿ 7 ಕೋಟಿ ರೂ ವೆಚ್ಚದ ಬಹು ಮಹಡಿ ಕಟ್ಟಡ ..ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ದೂರುಗಳು ಕೇಳಿ ಬಂದ ಹಿನ್ನೆಲೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಕಟ್ಟಡದ ಎಲ್ಲ ಕೆಲಸ ಮುಗಿಸಲಾಗಿದೆ ಎಂದು ಶರಣಗೌಡ ಎ ಪಾಟೀಲ್ ಬಯ್ಯಾಪುರ ರವರು ಆವಾಸಸ್ಥಾನ ಕೇಂದ್ರ, , ಕೆಎಚ್‌ಬಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು ಮೇಲೆ ಅಂತಸ್ತಿನ ಕಟ್ಟಡ ಕಾಮಗಾರಿಯನ್ನು ಶುಕ್ರವಾರರಂದು ವೀಕ್ಷಿಸಿದ ನಂತರ ಅವರು ಮಾತನಾಡುತ್ತಾ
ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಕಟ್ಟಡದ ಬಳಸಿದ ಹಲೋ ಬ್ಲಾಕ್ ಇಟ್ಟಿಗೆ ಗುಣಮಟ್ಟ ಒಂದಿಲ್ಲ . ಹೇಳಿದರು ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನೆ ಅಧ್ಯಕ್ಷ ಪಾಮಯ್ಯ ಮುರಾರಿ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಭೂಪನಗೌಡ ಪಾಟೀಲ್ ಕರಡಕಲ್ ಪುರಸಭಾ ಸದಸ್ಯ ಪ್ರಮೋದ್ ಕುಲಕರ್ಣಿ ಇನ್ನಿತರೂ ಇದ್ದರು

Address

6th Cross Heggnhalli
Bangalore
562091

Alerts

Be the first to know and let us send you an email when Mathru TV ಮಾತೃ ಟಿವಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to Mathru TV ಮಾತೃ ಟಿವಿ:

Share