28/07/2025
ವಡವನಘಟ್ಟ ಪಂಚಾಯ್ತಿಯಲ್ಲಿನ ನರೇಗಾ 2015 ರಿಂದ 2020 ರ ವರೆಗೆಗಿನ ಕಾಮಗಾರಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಗುಳುಂ
ತುರುವೇಕೆರೆ: ಅಮಾಯಕರ ಪಹಣಿ ಆಧಾರ್ ಕಾರ್ಡನ್ನು ಬಳಸಿಕೊಂಡು ನಕಲು ಸಹಿ ಮಾಡಿ ನರೇಗಾ ಕಾಮಗಾರಿಗಳಲ್ಲಿ ಅಕ್ರಮ ಎಸಗಿದ್ದಾರೆ ಇದರ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿ.ಇ.ಓ ರವರಿಗೆ ದೂರು ನೀಡಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಾರಿಕೊಂಡಿದ್ದಾರೆ ಇದರಿಂದ ನಮಗೆ ಅನ್ಯಾಯವಾಗಿದೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಮತ್ತು ಶಾಮೀಲಾಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಎಂದು ಆಯರಹಳ್ಳಿ ಗ್ರಾಮಸ್ಥರ ಆಗ್ರಹ.
ತಾಲೂಕಿನ ಮಾಯಸಂದ್ರ ಹೋಬಳಿ ವಡವನಘಟ್ಟ ಪಂಚಾಯಿತಿಯ ನರೇಗಾ ಕಾಮಗಾರಿಯಲ್ಲಿ ಭಾರಿ ವ್ಯವಹಾರ ನಡೆದಿದ್ದು ಗ್ರಾಮದಲ್ಲಿ ನಡೆದಿರುವ ಸುಮಾರು 15 ರಿಂದ 20 ಕಾಮಗಾರಿ ಕಾಮಗಾರಿಗಳಲ್ಲಿ ಭಾರಿ ಆವ್ಯವಹಾರ ನೆಡೆದಿದೆ ಎಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯರಹಳ್ಳಿ ಗ್ರಾಮದ ನರೇಗಾ ಕಾಮಗಾರಿ ನಡೆದಿದೆ ಎನ್ನಲಾದ ಸ್ಥಳದಲ್ಲಿ ದಾಖಲೆಗಳ ಸಮೇತ ಗ್ರಾಮಸ್ಥರ ಪರವಾಗಿ ಆಯರಹಳ್ಳಿ ಗ್ರಾಮದ ಯುವಕ ಗಿರೀಶ್ ಗೌಡ ಮಾಧ್ಯಮದವರ ಮುಂದೆ ಕಾಮಗಾರಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟು
ನಮ್ಮ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಕಾಮಗಾರಿಯ ಅಂದಾಜು ಪಟ್ಟಿ ಮತ್ತು ಹಣ ಬಿಡುಗಡೆ ಕಾಮಗಾರಿಗಳ ವಿವರವನ್ನು ಸಂಗ್ರಹಿಸಿ ನರೇಗಾ ಓಬುಡ್ಸಮನ್ ರಿಗೆ ದೂರು ನೀಡಿದ್ದೆವು
ಅದರಂತೆ ಸಂಬಂಧ ಪಟ್ಟ ತಾಲೂಕು ನಿರ್ವಹಣಾಧಿಕಾರಿಗಳಿಗೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕರು ತಾಂತ್ರಿಕ ಅಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರು ಸದಸ್ಯರು ಹಾಗೂ ನನಗೆ ನೋಟಿಸ್ ನೀಡಿ ದಿನಾಂಕ 15 -7 -25ರಂದು ತನಿಖೆ ನಡೆಸುವುದಾಗಿ ಸೂಚನೆ ನೀಡಲಾಗಿತ್ತು
ಆದರೆ ಗ್ರಾಮ ಪಂಚಾಯಿತಿಯ ಬಳಿ ಬೆಳಗಿನಿಂದಲೂ ಓಂಬುಡ್ಸಮೆನ್ ಬರುವಿಕೆಗಾಗಿ ಗ್ರಾಮಸ್ಥರುಗಳು ಕಾಯುತಿದ್ದರೂ ಮಧ್ಯಾಹ್ನವಾದರೂ ಯಾವುದೇ ಅಧಿಕಾರಗಳು ಇತ್ತ ಸುಳಿಯದಿರುವುದು ಹಾಗೂ ಮೊಬೈಲ್ ಕಾಲ್ ಮಾಡಿದರು ಸಹ ಕರೆಯನ್ನು ಸ್ವೀಕರಿಸುತ್ತಿಲ್ಲ
ನಮಗೆ ಇವರು ಭ್ರಷ್ಟಾಚಾರಿಗಳ ಜೊತೆ ಶಾಮೀಲಾಗಿ ಕಾರ್ಯ ನಿರ್ವಹಿಸುತ್ತಿದ್ದಾರ ಎಂಬ ಆನುಮಾನಗಳು ಮೂಡುತ್ತಿವೆ ಅದರಂತೆ ಇವರ ವರ್ತನೆಕೂಡ ಇದೆ ಇದರಿಂದ ನಮಗೆ ಇಲ್ಲಿಯೂ ಸಹ ನ್ಯಾಯ ಸಿಗದಂತಾಗಿದೆ ಸಾರ್ವಜನಿಕರ ತೆರಿಗೆ ಹಣವನ್ನು ಕೆಲವರು ಲೂಟಿ ಮಾಡುತ್ತಿರುವುದು ಕಂಡುಬಂದಿದ್ದು
2015 ನೇ ಸಾಲಿನಿಂದ ಇದುವರೆಗೂ ದಾಖಲಾತಿಗಳನ್ನು ನೋಡಿದಾಗ ಈ ಅವಧಿಯಲ್ಲಿ ನಮ್ಮ ಗ್ರಾಮದ ಸದಸ್ಯ ಹುಚ್ಚಮ್ಮ ಕೋಂ ನಂಜಪ್ಪ ಅವರ ಅವಧಿಯಲ್ಲಿ ಆಕೆಯ ಮಗ ಅನಂತರಂಗೇಗೌಡ,ಆಗಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಣುಕಪ್ಪನವರ ಜೊತೆ ಶಾಮೀಲಾಗಿ ಕಾಮಗಾರಿಯಲ್ಲಿ ಬಾರಿ ಭ್ರಷ್ಟಾಚಾರ ನೆಡೆಸಿದ್ದಾರೆ ಎಂದು ಆರೋಪಿಸಿ.
ಆಯರಹಳ್ಳಿ ಗ್ರಾಮದಲ್ಲಿ ನೆಡೆದಿರುವ ಸುಮಾರು 15 ರಿಂದ 20 ಕಾಮಗಾರಿಯಲ್ಲಿ ನಡೆಸದೇಯೇ ಬಿಲ್ ಮಾಡಿಕೊಂಡಿರುವುದು ಈ ಕಾಮಗಾರಿ ನಡೆದಿದೆ ಎನ್ನುವ ಜಾಗವನ್ನು ನೋಡಿದರೆ ಅಲ್ಲಿ ಕೆಲಸವೇ ನಡೆದಿಲ್ಲ
ಹಲವಾರು ಕಾಮಗಾರಿಗಳಲ್ಲಿ ಈ ತರಹದ ಹಲವಾರು ಪೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಆನ್ಲೈನ್ ನಲ್ಲಿ ಅಪ್ಲೋಡ್ ಆಗಿವೆ ಸಹಿ ಮಾಡಲು ಬರದಂತಹ ಅಮಾಯಕರ ಪಹಣಿ ಆಧಾರ್ ಕಾರ್ಡನ್ನು ಬಳಸಿಕೊಂಡು ನಕಲು ಸಹಿ ಮಾಡಿ ಅಕ್ರಮ ಎಸಗಿದ್ದಾರೆ ಇದರ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿ.ಇ.ಓ ರವರಿಗೆ ದೂರು ನೀಡಿದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಾರಿಕೊಂಡಿದ್ದಾರೆ
ಇದರಿಂದ ನಮಗೆ ಅನ್ಯಾಯವಾಗಿದೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಮತ್ತು ಶಾಮೀಲಾಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ವಾಪಸ್ ಬರಿಸಬೇಕು
ಇಲ್ಲಿಯೂ ನಮಗೆ ನ್ಯಾಯ ಸಿಗದಿದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಹಾಗೂ ಗಜಿಲ್ಲಾ ಪಂಚಾಯ್ತಿಯ ಮುಂದೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗೌತಮ್,ನವೀನಕುಮಾರ್,ಮಂಜುನಾಥ್,ನಾಗರಾಜ್,ಜಗದೀಶ್,ರಮೇಶ್,ಶಂಕರಲಿಂಗೇಗೌಡ, ನಂಜುಂಡೇಗೌಡ,ಉಮೇಶ್,ಕಿರಣ್ ಸೇರಿದಂತೆ ಗ್ರಾಮಸ್ಥರುಗಳು ಇದ್ದರು.
ವರದಿ : ಸುರೇಶ್ ಬಾಬು ಎಂ ತುರುವೇಕೆರೆ