Mathru TV ಮಾತೃ ಟಿವಿ

Mathru TV ಮಾತೃ ಟಿವಿ Contact information, map and directions, contact form, opening hours, services, ratings, photos, videos and announcements from Mathru TV ಮಾತೃ ಟಿವಿ, News & Media Website, 6th cross heggnhalli, Bangalore.
(2)

12/10/2025

ರಸ್ತೆಯ ಗುಂಡಿಯಲ್ಲಿ ಪೈರು ನಾಟಿ ಮಾಡುವ ಮೂಲಕ ತೋರೆಮಾವಿನಹಳ್ಳಿ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ

ತುರುವೇಕೆರೆ : ತಾಲೂಕಿನಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಮಧ್ಯಭಾಗದಿಂದ ಹಾದು ಹೋಗುವ ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150 ಎ ನಿಂದ ಸಂಪರ್ಕಿಸುವ ತೊರೆ ಮಾವಿನಹಳ್ಳಿ ಗ್ರಾಮದ ಮೂಲಕ ತಿಪಟೂರು ಜಿಲ್ಲಾ ರಸ್ತೆಗೆ ಸಂಪರ್ಕಿಸುವ ಮಾರ್ಗದಳ್ಳಿ ರಸ್ತೆಯುದ್ಧಕ್ಕೂ ಆಳುದ್ದದ ಗುಂಡಿಗಳಾಗಿವೆ, ತಾಲೂಕು ಕೇಂದ್ರಕ್ಕೆ ಕೇವಲ ಒಂದು ಕಿಲೋಮೀಟರ್ ಸಮೀಪವಿರುವ ತೊರೆಮಾವಿಹಳ್ಳಿ ಗ್ರಾಮ ಇದ್ದು

ಈ ಗ್ರಾಮದ ಮೂಲಕ ಓಡಾಡುವ ಸುಮಾರು 8 ರಿಂದ 10 ಹಳ್ಳಿಗಳ ಶಾಲಾ,ಕಾಲೇಜು,ವಿದ್ಯಾರ್ಥಿಗಳು ನೌಕರರು ಸಾರ್ವಜನಿಕರು ಮಹಿಳೆಯರು ಇದೇ ಮಾರ್ಗದಲ್ಲಿಯೇ ಸಂಚರಿಸುತ್ತಾರೆ.

ಈ ರಸ್ತೆಯು ತುಂಬಾ ಗುಂಡಿಗಳಿಂದ ಕೂಡಿದ್ದು ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ನಿಂತುಕೊಂಡು ಕೆರೆಯಂತಾಗಿದ್ದು ತಮ್ಮ ಗ್ರಾಮಗಳಿಗೆ ತೆರಳುವ ದ್ವಿಚಕ್ರ ವಾಹನ ಹಾಗೂ ಇನ್ನಿತರೇ ವಾಹನ ಸವಾರರು ಹರಸಾಹಸ ಪಟ್ಟು ಬಿದ್ದು ಎದ್ದು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದ್ದು

ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಪ್ರಯೋಜನವಾಗಿರದ ಹಿನ್ನೆಲೆಯಲ್ಲಿ ತೊರೆಮಾವಿನಹಳ್ಳಿಯ ಗ್ರಾಮಸ್ಥರು ರಸ್ತೆಯ ಗುಂಡಿಯಲ್ಲಿಯೇ ಫೈರು ನಾಟಿ ಮಾಡುವ ಮೂಲಕ ವಿನೋತನವಾಗಿ ಪ್ರತಿಭಟನೆ ಮಾಡಿದರು

ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ನರೇಂದ್ರ ಮಾತನಾಡಿ ತಾಲೂಕಿನ ಶಾಸಕರು ಈ ಬಗ್ಗೆ ಗಮನಹರಿಸಿ ಬೇಗನೆ ಶಾಶ್ವತವಾಗಿ ರಸ್ತೆ ಮಾಡಿಸಿ ಕೊಡಬೇಕಾಗಿ ಮನವಿ ಮಾಡಿ

ಈ ರಸ್ತೆಯು ಇತಿಹಾಸ ಪ್ರಸಿದ್ದ ಮಲ್ಲಾಘಟ್ಟ ಗಂಗಾಕ್ಷೇತ್ರಕ್ಕೆ ಸಂಪರ್ಕಿಸುತ್ತದೆ, ನೆರೆಯ ತಾಲೂಕಿನ ಗ್ರಾಮಗಳ ದೇವರ ಮೂರ್ತಿಗಳನ್ನು ಪುಣ್ಯ ಸ್ನಾನ ಮಾಡಿಸಲು ಈ ಮಾರ್ಗವಾಗಿಯೇ ಆಗಮಿಸುತ್ತಾರೆ

ಹಾಗೂ ಈ ಮಾರ್ಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಕತ್ತಲಾದ ಸಮಯದಲ್ಲಿ ಬೇಗನೆ ಮನೆ ಸೇರುವ ಆತುರದಲ್ಲಿ ಗುಂಡಿಗಳಲ್ಲಿ ಜನರು ಬಿದ್ದು ಅನಾಹುತ ಮಾಡಿಕೊಂಡಿರುವಂತಹ ಅನೇಕ ಉದಾಹರಣೆಗಳಿದ್ದು

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇದರತ್ತ ಗಮನಹರಿಸಿ ರಸ್ತೆ ನಿರ್ಮಿಸಿ ಕೊಡಬೇಕೆಂದು ಮನವಿ ಮಾಡಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು

ನಂತರ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತ (ಅಂಬೇಡ್ಕರ್ ವಾದ) ತಾಲೂಕು ಘಟಕದ ಸಂಚಾಲಕ
ಬಿ ಆರ್ ಕೃಷ್ಣ ಸ್ವಾಮಿ ಮಾತನಾಡಿ ತಾಲೂಕಿನ ಶಾಸಕರು ಹಾಗೂ ಕೇಂದ್ರ ಸಚಿವರಾದ ವಿ ಸೋಮಣ್ಣನವರು ಈ ರಸ್ತೆಯ ಬಗ್ಗೆ ಗಮನಹರಿಸಿ ತೊರೆಮಾವಿನಹಳ್ಳಿ ಗ್ರಾಮದ ಮೂಲಕ ಓಡಾಡುವ ಜನರಿಗೆ ತೊಂದರೆಯಿಂದ ಮುಕ್ತಿ ಕೊಡಿಸಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ರಸ್ತೆ ಮಾಡಿಸ ಕೊಡಬೇಕೆಂದು ಹೇಳಿ

ನಿರ್ಮಿಸಿಕೊಡದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟವನ್ನು ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರುಗಳೊಂದಿಗೆ ನಡೆಸಲಾಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ರಂಗಸ್ವಾಮಿ ,ರಾಕೇಶ್,ಸಣ್ಣ ನಂಜಯ್ಯ,ಬಸವರಾಜು ಮಲ್ಲಿಕಾರ್ಜುನಯ್ಯ, ಕುಮಾರ ಮಂಜಣ್ಣ,ಶ್ರೀನಿವಾಸ್ ಸೇರಿದಂತೆ ಹಲವಾರು ಪಾಲ್ಗೊಂಡಿದ್ದರು

ವರದಿ : ಸುರೇಶ್ ಬಾಬು ಎಂ ತುರುವೇಕೆರೆ.

12/10/2025

ತುಮಕೂರು ಬಿಗ್ ಬ್ರೇಕಿಂಗ್

ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಅವ್ಯವಸ್ಥೆ

ಸರ್ಕಾರಿ ಜಾಗಕ್ಕೆ ಮನ ಬಂದಂತೆ ಖಾತೆ ಮಾಡಿಕೊಟ್ಟ ಪಿಡಿಒ

ಸರ್ಕಾರಿ ಜಾಗ ನಮ್ಮದಲ್ಲ ಎಂದ RI ಪುರುಷೋತ್ತಮ ಎಂದು ಹೇಳುತ್ತಿರುವ ಉಪತಹಸಿಲ್ದಾರ ಜಗದೀಶ್ ರವರು
RI ಪುರುಷೋತ್ತಮಾ ಹಾಗೂPDO ಶ್ರೀಧರನ ದ್ವಂದ್ವ ಹೇಳಿಕೆಗೆ ನಲುಗಿದ ಕಂಪಲಪುರ ಗ್ರಾಮಸ್ಥರು ಆಗು ಹುಲಿಯೂರುದುರ್ಗ ಮುಖಂಡರು ಸಾರ್ವಜನಿಕರು
ಇದಕ್ಕೆ ಸಾಕ್ಷಿಯಂತೆ ಪಿಡಿಒ ಶ್ರೀಧರನ ದೂರವಾಣಿ ಸಂಭಾಷಣೆ ಹಾಗೂ ಉಪ ತಾಸಿಲ್ದಾರ್ ಜಗದೀಶ್ ರವರ ಸಂಭಾಷಣೆಯ ಸಾಕ್ಷಿ
ಆರ್ ಐ ಪಿ ಡಿ ಓ ಮಧ್ಯದಲ್ಲಿ ತಾಲೂಕು ದಂಡಾಧಿಕಾರಿಗಳು ಹಾಗೂ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಮೂಕ ಪ್ರೇಕ್ಷಕರು
ಎತ್ತ ಸಾಗುತ್ತಿದೆ ಕುಣಿಗಲ್ ತಾಲೂಕು
ಭ್ರಷ್ಟರ ಕೂಪದಲ್ಲಿ ಉಂಡವನೇ ಜಾಣ ಎಂಬಂತೆ ಕಣ್ಣು ಮುಚ್ಚಿ ಕುಳಿತ ಇರಿ ಅಧಿಕಾರಿಗಳು
ಎತ್ತ ಸಾಗುತ್ತಿದೆ ಕುಣಿಗಲ್ನ ಆಡಳಿತ ವ್ಯವಸ್ಥೆಯೆಂಬುದೇ ತಿಳಿಯುತಿಲ್ಲ
ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವರ ಕಾದುನೋಡಬೇಕಿದೆ

10/10/2025

ಇಲಕಲ್ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ
ಮಹಿಳಾ ಮತ್ತು ಮಕ್ಕಳ ಇಲಾಖೆ ಬಾಗಲಕೋಟ, ಶಿಶು ಅಭಿವೃದ್ಧಿ ಇಲಾಖೆ
ಹುನಗುಂದ, 2025 ರ ಪೋಶಣ್ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ. ಬಸವರಾಜ ಅಳ್ಳೊಳ್ಳಿ
ಉದ್ಘಾಟಕರು : ಶ್ರೀ ಮಹಾಂತೇಶ್ ಕಡಿವಾಲ್ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು
ಹಾಗೂ ಶ್ರೀ ಮೊಹಮ್ಮದ್ ಸಾಬ್ ಬಾವಿಕಟ್ಟಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು

ಮುಖ್ಯ ಅತಿಥಿಗಳು: ಶ್ರೀ ರಹಿಮಾನ್ ಸಾಬ್ ಭಗವಾನ್ ( ಗ್ರಾಮ ಪಂಚಾಯಿತಿ ಸದಸ್ಯರು )
ಶ್ರೀಮತಿ ಶರಣಮ್ಮ ಭಜಂತ್ರಿ (ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು)
ಶ್ರೀಮತಿ ಸರಸ್ವತಿ ಸಿಟಿ ಸಂಜೀವಿನಿ ಒಕ್ಕೂಟ ಅಧ್ಯಕ್ಷರು ನಂದವಾಡಗಿ
ಶ್ರೀ ಪ್ರಹ್ಲಾದ್ ಜೋಶಿ ಆರೋಗ್ಯ ಇಲಾಖೆ ಅಧಿಕಾರಿಗಳು
ಶಂಕರ್ ಕಾಳಿ ಪ್ರಸಾದ್ ಗ್ರಂಥಾಲಯ ಮೇಲ್ವಿಚಾರಕರು
ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು



ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರು ಬಿ ಆರ್ ಗೌಡರ್ ಪ್ರಾಸ್ತಾವಿಕವಾಗಿ ಮಾತನಾಡಿ ಫಲಾನುಭವಿಗಳಿಗೆ ಮಾಹಿತಿಯನ್ನು ನೀಡಿದರು.

ನಂತರ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಮಗುವಿಗೆ ನಾಮಕರಣ, ಮಗುವಿಗೆ ಹುಟ್ಟು ಹಬ್ಬ, ಮಗುವಿಗೆ ಅನ್ನ ಪ್ರಾಶಾಯನ,
ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕವನ್ನು ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮ, ಅಂಗನವಾಡಿ ಕಾರ್ಯಕರ್ತೆಯರಿಂದ ವೇದಿಕೆ ಮೇಲಿದ್ದ ಸರ್ವ ಸದಸ್ಯರಿಗೂ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.

ನಂತರ ಮಾತನಾಡಿದ ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷರು ಶ್ರೀಮತಿ ಸರಸ್ವತಿ ಈಟಿ, ಹಾಗೂ ರಹಿಮಾನ್ ಸಾಬ್ ಭಾಗವಾನ್, ಶ್ರೀ ಪ್ರಹ್ಲಾದ್ ಜೋಷಿ ಆರೋಗ್ಯ ಇಲಾಖೆ ಅಧಿಕಾರಿಗಳು
ಮಾತನಾಡಿ ಫಲಾನುಭವಿಗಳಿಗೆ ಸರಿಯಾದ ಮಾಹಿತಿಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಕಂದಗಲ್ ವಲಯದ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು, ಆಶಾ ಕಾರ್ಯಕರ್ತರು ಫಲಾನುಭವಿಗಳು, ಮುದ್ದು ಮಕ್ಕಳು ಉಪಸ್ಥಿತರಿದ್ದರು.

ವರದಿ: ಪ್ರಶಾಂತ ಪಲ್ಲೇದ

10/10/2025

ತುಮಕೂರು ಬಿಗ್ ಬ್ರೇಕಿಂಗ್.......
ತ್ರಿಮೂರ್ತಿಗಳ ಅವಳಿಗೆ ನಲುಗಿದ ಕುಣಿಗಲ್ ತಾಲೂಕು
ಸರ್ಕಾರಿ ಗೋಮಾಳ ಜಾಗವನ್ನೇ ನುಂಗಿ ನೀರು ಕುಡಿದ ಸರ್ಕಾರಿ ಅಧಿಕಾರಿಗಳು

ಸಾರ್ವಜನಿಕರ ಸೇವೆಗೆಂದು ಮುಡಿಪಾಗಬೇಕಿದ್ದ ಸರ್ಕಾರಿ ನೌಕರಿಗಳು ತಮ್ಮ ಸ್ವಾರ್ಥಕ್ಕಾಗಿ ಪ್ರಜೆಗಳನ್ನು ಕಿತ್ತು ತಿನ್ನುವ ರಣ ಹದ್ದುಗಳಂತೆ ಆಗಿರುವ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಕಂಪಲಾಪುರ ವ್ಯಾಪ್ತಿಯಲ್ಲಿ ನೆಡೆದಿದೆ

ಸ್ಥಳೀಯ ಶಾಸಕರಾದ ರಂಗನಾಥ್ ಕ್ಷೇತ್ರದಲ್ಲಿ ಅಧಿಕಾರಿಗಳು ಆಡಿದ್ದೆ ಆಟ ಊದಿದ್ದೆ ಲಗ್ಗೆ ಯಂತೆಯಾಗಿದೆ

ಇಲ್ಲಿನ ಅಧಿಕಾರಿಗಳು ಹಣಗೊಸ್ಕರ ಅಸಲಿ ದಾಖಲೆಗಳನ್ನೇ ನಕಲಿಯಾಗಿ ಸೃಷ್ಟಿಸಿ
ಅಸಲಿ ದಾಖಲೆಗಳನ್ನು ಮುಚ್ಚಿ ಹಾಕಲು ಯತ್ನಕ್ಕೆ ಕೈ ಹಾಕಿದ್ದರೆಂದು ಸ್ಥಳೀಯರ ಆರೋಪ

ಹುಲಿಯೂರುದುರ್ಗ ಕಮಲಾಪುರ ಗ್ರಾಮದ ಸರ್ಕಾರಿ ಗೋಮಾಳವನ್ನೇ ನುಂಗಲು ಮುಂದಾದ ನುಂಗಣ್ಣರು

ಕoಪಲಾಪುರ ಗ್ರಾಮದ ಸರ್ವೇ ನಂ 15 ರಲ್ಲಿರುವ ಕೋಟ್ಯಾಂತರ ಬೆಲೆಬಾಳುವ ಸರ್ಕಾರಿ ಜಾಗವನ್ನು ಕಬಳಿಸಲು ಮುಂದಾದ ಫಾರೆಸ್ಟ್ ಇಲಾಖೆ ನೌಕರ ಕೆಕೆ ರಾಜ ಆಂಡ್ ಗ್ಯಾಂಗ್

ಇವನಿಗೆ ಬೆನ್ನೆಲುಬಾಗಿ ನಿಂತವರೇ ಪಿಡಿಒ ಶ್ರೀಧರ ಮತ್ತು RI ಪುರುಷೋತ್ತಮ.......

ಸರ್ವೇ ನಂಬರ್ 46/5 ಕೆಕೆ ರಾಜ ಹೆಂಡತಿ ಶಶಿಕಲಾ ಹೆಸರಿನಲ್ಲಿ ಈ ಖಾತೆ ಮಾಡಿಸಿರುವುದು ಸರಿ ಅಷ್ಟೇ ಅಸಲಿಬೇರೇನೆ ಇದೆ

ಈ ಖಾತೆ ಪಡೆದ ಜಾಗ ಸರ್ವೇ ನಂಬರ್ 46/5 ಆದರೆ ಮನೆ ನಿರ್ಮಾಣ ಮಾಡುತ್ತಿರುವ ಜಾಗ ಸರ್ಕಾರಿ ಗೋಮಾಳ ಸರ್ವೇ ನಂಬರ್ 15ರಲ್ಲಿ

ಇದನ್ನು ತಡೆಯಬೇಕಿದ್ದ ಸರ್ಕಾರಿ ಅಧಿಕಾರಿಗಳು ತಡೆಯದೆ ಕೆಕೆ ರಾಜ ಅಂಡ್ ಗ್ಯಾಂಗ್ ಗೆ ಬೆನ್ನೆಲುಬಾಗಿ ನಿಂತವರೇ ಪಿ ಡಿ ಓ ಶ್ರೀಧರ ಹಾಗೂ RI ಪುರುಷೋತ್ತಮ

ಸಾರ್ವಜನಿಕರಿಂದ ದೂರ ಬಂದರು ಕ್ಯಾರೆ ಎನ್ನದ ತ್ರಿಮೂರ್ತಿಗಳು

ಸಾರ್ವಜನಿಕರ ಒತ್ತಡಕ್ಕೆ ಮಣಿದು ನೆಪ ಮಾತ್ರಕ್ಕೆ ಸರ್ವೇ ಮಾಡಲು ಪತ್ರ ಬರೆದ ಪಿಡಿಒ ಶ್ರೀಧರ

ಪತ್ರ ಬರೆದು ನಾಲ್ಕು ಮಾಸಗಳೇ ಕಳೆದರೂ ಸರ್ವೇ ಮಾಡಿ ಒಂದು ಮಾಸ ಕಳೆದರೂ ಸ್ಪಷ್ಟೀಕರಣ ನೀಡದ ತ್ರಿಮೂರ್ತಿಗಳು

ಇನ್ನೂ ಸರ್ಕಾರಿ ರಜೆಯoದೇ ಕಟ್ಟಡ ನಿರ್ಮಾಣ ಮಾಡಲು ಮುಂದಾದ ಕೆ ಕೆ ರಾಜ ಅಂಡ್ ಗ್ಯಾಂಗ್ ಪ್ರಯತ್ನ

ಕೆಲಸ ನಿಲ್ಲಿಸುವಂತೆ RI ಪುರುಷೋತ್ತಮನಿಗೆ ಸಾರ್ವಜನಿಕರು ಕರೆ ಮಾಡಿದರೆ ನಾನು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ನನ್ನದು ಎಲೇಟೆಡ್ ಬಾಡಿ ನಾನು ಸರ್ಕಾರಿ ನೌಕರರ ಹಿತಾಸಕ್ತಿ ಕಾಯುವುದು ಮುಖ್ಯ ಎಂದು ಉಡಾಫೆ ಉತ್ತರ ನೀಡುವ ಪುರುಷೋತ್ತಮ

ಇನ್ನಾದರೂ ತಾಲೂಕು ದಂಡಾಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತಾರಾ ಸರ್ಕಾರಿ ಜಾಗ ಉಳಿಯುತ್ತಾ ಅಥವಾ ನುಂಗುಬಾಕರ ಕೈ ಸೇರುತ್ತ ಕಾದು ನೋಡಬೇಕಾಗಿದೆ

10/10/2025

ತುರುವೇಕೆರೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗವಾಯಿ ಅವರ ಮೇಲೆ ಹಿರಿಯ ವಕೀಲನೊಬ್ಬ ಶೂ ಎಸೆದಿದ್ದು ಇದು ಸಂವಿಧಾನಕ್ಕೆ ಮಾಡಿದಂತ ಅಪಚಾರವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ತಾಲೂಕು ಘಟಕದ ಅಧ್ಯಕ್ಷ ಬಿ ಆರ್ ಕೃಷ್ಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ ಅವರು ದಿನಾಂಕ 13.10:25 ರಂದುಸೋಮವಾರ ಬೆಳಗ್ಗೆ 10 ಗಂಟೆಗೆ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ವರೆವಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿ.ಇದೊಂದು ಘೋರ ಕೃತ್ಯ ಖಂಡನೀಯವಾಗಿದ್ದು ಇದು ಸಮ ಸಮಾಜ ತಲೆ ತಗ್ಗಿಸುವಂತಹ ಹಾಗೂ ಸಂವಿಧಾನದ ಮೇಲೆ ಆದಂತಹ ದಾಳಿಯಾಗಿದ್ದು 144 ಕೋಟಿ ಭಾರತೀಯರ ಮೇಲೆ ಆದಂತಹ ಅಪಮಾನ ತಾಲೂಕಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಕುರುಬ ಸಮಾಜದ ಮುಖಂಡ ಕಲ್ಕೆರೆ ರಾಘು ಮಾತನಾಡಿ ರಾಷ್ಟ್ರದಲ್ಲಿ ಎಲ್ಲಾ ಜಾತಿ ವರ್ಗಗಳಲ್ಲಿಯೂ ತುಂಬಾ ಬಡವರು ಇದ್ದಾರೆ ಅವರುಗಳಿಗೆ ಏನಾದರೂ ರಕ್ಷಣೆ ಸಿಗುತ್ತಿದೆ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದಂತ ಸಂವಿಧಾನದಿಂದ ಮಾತ್ರ ವಿಪರ್ಯಾಸವೆಂದರೆ ದೇಶದಲ್ಲಿ ಸಂವಿಧಾನಕ್ಕೆ ಅಪಾಯ ಬಂದಾಗ ದಲಿತರು ಮಾತ್ರ ಹೋರಾಟ ಮಾಡುತ್ತಾರೆ, ಅಪಾಯದ ಅಂಚಿನಲ್ಲಿ ಇರುವ ಸಂವಿಧಾನದ ರಕ್ಷಣೆಗೆ ಎಲ್ಲಾ ಭಾರತೀಯ ಮುಂದಾಗಬೇಕು ಹಿರಿಯ ವಕೀಲರಾಗಿ ಈ ವ್ಯಕ್ತಿ ಮಾಡಿರುವ ಕೃತ್ಯ ಘನ ಘೋರವಾದಂತದ್ದು ಇದು ಖಂಡನೀಯ ಈತನ ತಲೆಯಲ್ಲಿ ಅಜ್ಞಾನ ತುಂಬಿಕೊಂಡಿದ್ದು ಈ ರೀತಿಯ ಅಪಚಾರ ಮಾಡಿದ್ದಾನೆ ಬಹುಸಂಖ್ಯಾತ ದೇಶದ ದಲಿತರು,ಹಿಂದುಳಿದವರು ಸ್ವಾಭಿಮಾನದಿಂದ ಬದುಕಬೇಕು ಎಲ್ಲರಿಗೂ ಗೌರವದಿಂದ ಬದುಕುವಂತೆ ಮಾಡಬೇಕು,ಈ ರೀತಿ ನಡವಳಿಕೆಗಳನ್ನು ಪ್ರತಿಯೊಬ್ಬರು ವಿರೋಧಿಸಬೇಕು ಇದರ ವಿರುದ್ಧ ಹೋರಾಟಕ್ಕೆ ಜಾತ್ಯತೀತವಾಗಿ ಕೈ ಜೋಡಿಸಬೇಕು ನಾನು ಕೂಡಾ ಕುರುಬ ಸಮಾಜದ ಪರವಾಗಿ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೀಚನಹಳ್ಳಿ ರಾಮಕೃಷ್ಣ,ತಾಲೋಕು ಛಲವಾದಿ ಮಹಾಸಭಾ ಅಧ್ಯಕ್ಷ ಡೊಂಕಿಹಳ್ಳಿ ರಾಮಣ್ಣ, ಟೌನ್ ಬ್ಯಾಂಕ್ ನಿರ್ದೇಶಕ ಬಡಾವಣೆ ಶಿವರಾಜ್,ಬಿಗನೇನಹಳ್ಳಿ ಪುಟ್ಟರಾಜು, ಪುರ ರಾಮಚಂದ್ರಯ್ಯ, ಜಯ ಕರ್ನಾಟಕ ವೇದಿಕೆಯ ವೆಂಕಟೇಶ್, ಆಟೋ ಸಂಘದ ಅಧ್ಯಕ್ಷ ಗಂಗಾಧರ್, ಬೀಚನಹಳ್ಳಿ ಮಹಾದೇವಯ್ಯ, ಹೆಗ್ಗೆರೆ ನರಸಿಂಹಯ್ಯ, ಬುಗುಡನಹಳ್ಳಿ ರಂಗನಾಥ್, ಬುಗುಡನಹಳ್ಳಿ ರವೀಶ್, ಮಾಚೇನಹಳ್ಳಿಮಂಜುಳಾ ,ನಂದಿನಿ, ಸಾವಿತ್ರಮ್ಮ, ವಸಂತ್ ಬೊಮ್ಮೇನಹಳ್ಳಿ ಸೇರಿದಂತೆ ಹಲವು ಮುಖಂಡರುಗಳು ಉಪಸ್ಥಿತರಿದ್ದರು

ವರದಿ : ಸುರೇಶ್ ಬಾಬು ಎಂ ತುರುವೇಕೆರೆ.

09/10/2025

ತುರುವೇಕೆರೆ: ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಗವಾಯಿರವರ ಮೇಲೆ ವಕೀಲನೊಬ್ಬ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೂಲ ಮಾತೃ ಸಮಿತಿಯ ತುಮಕೂರು ಜಿಲ್ಲಾ ಸಂಘಟನಾ ಸಂಚಾಲಕ ದಂಡಿನ ಶಿವರಕುಮಾರ್ ಹಾಗೂ ತುರುವೇಕೆರೆ ತಾಲೂಕು ಸಂಚಾಲಕ ಮಲ್ಲೂರ್ ತಿಮ್ಮೇಶ್ ರವರ ಮುಖಂಡತ್ವದಲ್ಲಿ ವಕೀಲನ ನಡೆ ಖಂಡಿಸಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಘೋಷ್ಠಿ ನಡೆಸಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗೆ ಮಾಡಿದಂತಹ ಅಪಮಾನವು ಸಂವಿಧಾನಕ್ಕೆ ಮಾಡಿದಂತ ಅಪಚಾರವಾಗಿದೆ ಎಂದು ದಂಡಿನ ಶಿವರಕುಮಾರ್ ಹೇಳಿಕೆಯನ್ನು ನೀಡಿ ನಾಳೆ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಮತ್ತು ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಗುವುದು ಈ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರ ಹೋರಾಟಗಾರರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ

ಈ ಸುದ್ದಿಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿಕೆ ಚಿದಾನಂದ್, ನಿವೃತ್ತ ಶಿಕ್ಷಕರಾದ ಬೋರಪ್ಪ,ಹಿರಿಯ ಮುಖಂಡರಾದ ರಾಮಕೃಷ್ಣಯ್ಯ,ಮುನಿಯೂರು ರಂಗಸ್ವಾಮಿ, ಕಡೆಹಳ್ಳಿ ರಂಗಸ್ವಾಮಿ, ಮೇಲಿನ ಹಳ್ಳಿ ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು
ವರದಿ ಸುರೇಶ್ ಬಾಬು ತುರುವೇಕೆರೆ

06/10/2025

ಕಿರಾತಕ ಪೊಲೀಸರು ಕೆ ಆರ್ ಎಸ್ ಪಕ್ಷದ 70ಕ್ಕೂ ಹೆಚ್ಚು ಸೈನಿಕರ ಮೊಬೈಲ್ಗ'ಳನ್ನು ವಶಪಡಿಸಿಕೊಂಡು ನಮ್ಮ ಧ್ವನಿಯನ್ನು ಕಿತ್ತುಕೊಂಡಿರುವ ....

05/10/2025

ಕಿರಾತಕ ಪೊಲೀಸರು ಕೆ ಆರ್ ಎಸ್ ಪಕ್ಷದ 70ಕ್ಕೂ ಹೆಚ್ಚು ಸೈನಿಕರ ಮೊಬೈಲ್ಗ'ಳನ್ನು ವಶಪಡಿಸಿಕೊಂಡು ನಮ್ಮ ಧ್ವನಿಯನ್ನು ಕಿತ್ತುಕೊಂಡಿರುವ ಈ ಸಂದರ್ಭದಲ್ಲಿ ರಾಜ್ಯà1pದ ಜನರಾದ ನೀವುಗಳು ನಮ್ಮ ಧ್ವನಿಯಾಗುತ್ತೀರಿ ಎಂದು ನಾವು ನಂಬಿದ್ದೇವೆ.
ನಮ್ಮ ಮೇಲೆ ನಡೆದ ದೌರ್ಜನ್ಯಕ್ಕೆ ನ್ಯಾಯ ಸಿಗಬೇಕೆಂದರೆ ನೀವುಗಳು ಧ್ವನಿ ಎತ್ತಬೇಕು. ನಿಮ್ಮಗಳ ಧ್ವನಿಯಲ್ಲಿ ನ್ಯಾಯ ಅಡಗಿದೆ. ನಮಗೆ ಅನ್ಯಾಯ ಆಗಲು ನೀವು ಬಿಡುವುದಿಲ್ಲವೆಂಬ ವಿಶ್ವಾಸದಲ್ಲಿ ನಾವಿದ್ದೇವೆ. ಕೆ ಆರ್ ಎಸ್ ಪಕ್ಷದ ಕಾರ್ಯಾಧ್ಯಕ್ಷರಾದ ರಘು ಜಾಣಗೆರೆ ಆಕ್ರೋಶ ಹೊರ ಹಾಕಿದ್ದಾರೆ

ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ಅಸ್ಪೃಶ್ಯತೆ,ಅಧಿಕಾರಿಗಳಿಂದ ಶಾಂತಿ ಸಭೆ ನಡೆದರು ಧಾರ್ಮಿಕವಾಗಿ ಅಸ್ಪೃಶ್ಯತೆ ಇನ್ನೂ ಜೀವಂತ
05/10/2025

ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ಅಸ್ಪೃಶ್ಯತೆ,ಅಧಿಕಾರಿಗಳಿಂದ ಶಾಂತಿ ಸಭೆ ನಡೆದರು ಧಾರ್ಮಿಕವಾಗಿ ಅಸ್ಪೃಶ್ಯತೆ ಇನ್ನೂ ಜೀವಂತ

Enjoy the videos and music you love, upload original content, and share it all with friends, family, and the world on YouTube.

05/10/2025

ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ಅಸ್ಪೃಶ್ಯತೆ,ಅಧಿಕಾರಿಗಳಿಂದ ಶಾಂತಿ ಸಭೆ ನಡೆದರು ಧಾರ್ಮಿಕವಾಗಿ ಅಸ್ಪೃಶ್ಯತೆ ಇನ್ನೂ ಜೀವಂತ.

ತುರುವೇಕೆರೆ:ತಾಲೂಕಿನ ಕಸಬಾ ಹೋಬಳಿ ಕುಣಿಕೇನಹಳ್ಳಿ ಗ್ರಾಮದಲ್ಲಿ ಕೆಂಪಮ್ಮ ದೇವಾಲಯ ಹಾಗೂ ಜಾತ್ರಾ ಮಹೋತ್ಸವ ವಿಷಯದಲ್ಲಿ ಅಸ್ಪೃಶ್ಯತೆ ಇದೆ ಎಂದು ಕಳೆದ ಒಂದುವರೆ ವರ್ಷಗಳಿಂದ ಸವರ್ಣಿಯರ ಮತ್ತು ದಲಿತರ ನಡುವೆ ಕಂದಕ ಏರ್ಪಟ್ಟಿತ್ತು. ಈ ವಿಚಾರವಾಗಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಗ್ರಾಮದಲ್ಲಿಯೇ ಹಲವಾರು ಬಾರಿ ಶಾಂತಿ ಸಭೆ ನಡೆಸಿ ಯಶಸ್ವಿಯಾಗಿದ್ದರು ಈ ಜಾತ್ರೆಗೆ ಕುಣಕೇನಹಳ್ಳಿ ಗ್ರಾಮದ ಸುತ್ತಮುತ್ತಲಿನ ಏಳರಿಂದ ಎಂಟು ಗ್ರಾಮಗಳ ಸೇರುತ್ತವೆ ಗ್ರಾಮ ದೇವತೆಗಳಾದ ರಂಗನಾಥ ಸ್ವಾಮಿ, ಕೆಂಪಮ್ಮದೇವಿ, ಚಿಕ್ಕಮ್ಮದೇವಿ ಯ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಪ್ರತಿ ವರ್ಷವೂ ಈ ಜಾತ್ರೆಗೆ 2000ಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ಕ್ಷೇತ್ರವಾಗಿದ್ದು , ದಲಿತರಿಗೆ ಸವರ್ಣೀಯರಿಂದ ಜಾತ್ರಾ ಮಹೋತ್ಸವ ವಿಚಾರದಲ್ಲಿ ಧಾರ್ಮಿಕವಾಗಿ ಅಸ್ಪೃಶ್ಯತೆ ನಡೆಸುತ್ತಿದ್ದಾರೆ ಎಂಬ ದೂರುಗಳು ಸಹ ಚರ್ಚೆಗೆ ಗ್ರಾಸವಾಗಿದ್ದು ಇದೆ ವಿಷಯವಾಗಿ ಈ ವರ್ಷ ಈ ಜಾತ್ರಾ ಮಹೋತ್ಸವ ನಡಿಯುತ್ತೋ ಇಲ್ಲವೋ ಎಂಬುದೇ ಕೆಲವು ಗೊಂದಲಗಳಿಂದ ಪ್ರಶ್ನೆಯಾಗಿ ಉಳಿದಿತ್ತು,

ಇದಕ್ಕೆ ಸಂಬಂಧಪಟ್ಟಂತೆ ಆಗಸ್ಟ್ 14 ರಂದು ಕುಣಿಕೇನಹಳ್ಳಿ ಗ್ರಾಮಕ್ಕೆ ತಿಪಟೂರು ಉಪವಿಭಾಗಾಧಿಕಾರಿ, ತುರುವೇಕೆರೆ ತಾಲೂಕು ದಂಡಾಧಿಕಾರಿ, ಅಡಿಷನಲ್ ಎಸ್ ಪಿ, ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ತಾಲೂಕು ಆಡಳಿತದ ಉಪಸ್ಥಿತಿಯಲ್ಲಿ ದೇವಸ್ಥಾನದ ಆವರಣದಲ್ಲಿ ಶಾಂತಿ ಸಭೆ ನಡೆಸಿ ಎಲ್ಲಾ ಸಮುದಾಯದವರು ಒಟ್ಟುಗೂಡಿ ಜಾತ್ರೆಯನ್ನು ನಡೆಸಬೇಕೆಂಬ ತೀರ್ಮಾನದೊಂದಿಗೆ ಅಧಿಕಾರಿ ವರ್ಗ ಕೂಡ ಕೊನೆಯ ಸುತ್ತಿನ ಶಾಂತಿ ಸಭೆ ನಡೆಸಿ ಇದಕ್ಕೆ ಎಲ್ಲ ಗ್ರಾಮಸ್ಥರು ಸಹ ಒಪ್ಪಿಗೆ ಸೂಚಿಸಿ ಶಾಂತಿ ಸಭೆ ಯಶಸ್ವಿ ಕೂಡ ಆಗಿತ್ತು,

ಈ ಶಾಂತಿ ಸಭೆ ಎರಡನೆಯ ಶಾಂತಿ ಸಭೆಯು ಕೂಡ ಹೌದು ಇದರ ವಿಚಾರವಾಗಿ ತಿಪಟೂರು ಉಪವಿಬಾಗಧಿಕಾರಿ
ಶ್ರೀಮತಿ ಸಪ್ತಶ್ರೀ ಮಾಧ್ಯಮದ ಮುಂದೆ ಮಾತನಾಡಿ ಪ್ರತಿ ವರ್ಷವೂ ನಡೆಯುವಂತೆ ಈ ವರ್ಷವೂ ಜಾತ್ರಾ ಮಹೋತ್ಸವ ನಡೆಯುವಾಗ ಎಲ್ಲರೂ ಕೂಡ ಸಮಾನತೆಯಿಂದ ಸರಿದೂಗಿಸಿಕೊಂಡು ಒಗ್ಗಟ್ಟಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಬೇಕು ಎಂದು ನಾವುಗಳು ಸೂಚನೆ ನೀಡಿದ್ದೇವೆ, ಆದರೂ ಕೆಲಸಮೆಯ ವಾದ ವಿವಾದಗಳ ಗೊಂದಲದಿಂದ ಕೂಡಿದ್ದ ಶಾಂತಿ ಸಭೆ ಸಭೆ ಕೊನೆಗೆ ಅಂತ್ಯವಾಗಿ ಎಲ್ಲರೂ ಒಗ್ಗಟ್ಟಾಗಿ ಜಾತ್ರಾ ಮಹೋತ್ಸವ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾತನ್ನು ಸಹ ಈ ಹಿಂದೆ ಹೇಳಿದ್ದರು,

ಆದರೆ ದಸರಾ ಹಬ್ಬದ ವಿಜಯದಶಮಿಯ ವಿಶೇಷ ಪೂಜೆ ಗಾಗಿ ಕುಣಿಕೇನಹಳ್ಳಿ ಗ್ರಾಮದಲ್ಲಿರುವ ಎಲ್ಲಾ ದೇವತೆಗಳು ಗ್ರಾಮದಲ್ಲಿ ಪೂಜೆಗೆ ಸಜ್ಜಾಗಿ ಮೆರವಣಿಗೆಯೊಂದಿಗೆ ಹೊರಟು ಎಲ್ಲವೂ ಕೂಡ ಸುಸೂತ್ರವಾಗಿ ನಡೆದು ಕೊನೆಗೆ ಇನ್ನೇನು ದೇವಸ್ಥಾನದ ಒಳಗೆ ದೇವರನ್ನು ಕರೆದೊಯ್ಯುವ ಮುನ್ನ ಎಲ್ಲಾ ದೇವರಿಗೂ ನಮಸ್ಕರಿಸಿ ಕೊನೆ ಪೂಜೆಗಾಗಿ ಅಕ್ಕ ಪಕ್ಕದಲ್ಲಿರುವ ದೇವಸ್ಥಾನಕ್ಕೆ ತೆರಳುವ ವೇಳೆ ದಲಿತರಿಗಾಗಿ ಇರುವ ಚಿಕ್ಕಮ್ಮ ದೇವಸ್ಥಾನದ ಬಳಿ ಪೂಜೆಗೆ ಬರಲು ಕೆಂಪಮ್ಮ ದೇವಿ ಮತ್ತು ಕೆಂಚರಾಯ ದೇವರು ಪೂಜೆಗೆ ಬಾರದೆ ಅಸ್ಪೃಶ್ಯತೆ ಆಚರಣೆ ಮಾಡಿದೆ ಎಂಬ ಆರೋಪ ದಲಿತ ಮುಖಂಡರುಗಳಿಂದ ಕೇಳಿ ಬಂದಿದೆ,

ಜೊತೆಗೆ ಇದೇ ಸಮಯದಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ ರಂಗನಾಥ ಸ್ವಾಮಿ ದೇವರನ್ನು ದಲಿತರು ಎತ್ತಿಕೊಳ್ಳಲು ಹೋದಾಗ ಅವರಿಗೆ ಮುಜರಾಯಿ ಇಲಾಖೆಗೆ ಸೇರಿದ ದೇವರನ್ನು ದಲಿತರಿಗೆ ಹೊರಲು ಬಿಟ್ಟು ಅವಸರವಾಗಿ ಮಿಕ್ಕ ಕೆಂಪಮ್ಮದೇವಿ ಕೆಂಚರಾಯಸ್ವಾಮಿ ದೇವರನ್ನು ಗುಡಿದುಂಬಿಸಿ ಹೊರಟಿದ್ದಾರೆ ಎಂದು ದಲಿತ ಕುಟುಂಬಗಳು ದೂರುತ್ತಿದ್ದು,

ಇದರಲ್ಲಿ ಯಾರ ತಪ್ಪಿದೆ ಎಂಬುದೇ ಒಂದು ಪ್ರಶ್ನೆಯಾಗಿದೆ, ಇದಲ್ಲದೆ ಪಾಪ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ದೇವರನ್ನು ಅಲ್ಲಿಯೇ ಬಿಟ್ಟ ಪರಿಣಾಮ ದಲಿತರೆಲ್ಲ ಸೇರಿ ಮುಜರಾಯಿ ಇಲಾಖೆಗೆ ಸೇರಿದ ರಂಗನಾಥ ಸ್ವಾಮಿ ದೇವರನ್ನು ದಲಿತರ ದೇವಸ್ಥಾನದ ಮುಂಭಾಗ ಇಟ್ಟು ದಲಿತರೆ ಇದನ್ನು ಕಾವಲು ಕಾಯುವಂತ ಪರಿಸ್ಥಿತಿ ಕಣ್ಮುಂದೆ ಎದ್ದು ಕಾಣುತ್ತಿತ್ತು,

ಈ ವೇಳೆ ಮಾಧ್ಯಮದೊಂದಿಗೆ ತಾಲೂಕು ಚಲವಾದಿ ಮಹಾಸಭಾ ಕಾರ್ಯದರ್ಶಿ ಜಗದೀಶ್ ಹಾಗೂ ದಲಿತ ಮಹಿಳೆಯರು ಮಾತನಾಡಿ ನಮ್ಮ ಗ್ರಾಮದಲ್ಲಿ ಇನ್ನೂ ಕೂಡ ಅಸ್ಪೃಶ್ಯತೆ ಮುಂದುವರೆದಿದೆ ಯಾವೊಬ್ಬ ಅಧಿಕಾರಿಯು ಬಂದು ಶಾಂತಿ ಸಭೆ ನಡೆಸಿದರು ಪ್ರಯೋಜನವಾಗದೆ ಸಮಾನತೆ ಎಂಬುದು ಇಲ್ಲಿ ನಡೆಯದೆ ಕೇವಲ ಅಸ್ಪೃಶ್ಯತೆಗೆ ಆಚರಿಸುತ್ತಿದ್ದಾರೆ

ಹಾಗಾಗಿ ಕೂಡಲೇ ತಾಲೂಕು ಆಡಳಿತ ಸ್ಥಳಕ್ಕೆ ಧಾವಿಸಿ ಮುಜರಾಯಿ ಇಲಾಖೆಗಳೊಂದಿಗೆ ಚರ್ಚಿಸಿ ಈ ಕ್ಷಣದಿಂದಲೇ ಕುಣಿಕೇನಹಳ್ಳಿ ಗ್ರಾಮದಲ್ಲಿರುವ ಮುಜರಾಯಿ ಇಲಾಖೆಗೆ ಸೇರಿರುವ ರಂಗನಾಥ ಸ್ವಾಮಿ ಜೊತೆಗೆ ನಮ್ಮ ಗ್ರಾಮದಲ್ಲಿರುವ ಎಲ್ಲಾ ದೇವರುಗಳನ್ನು ತಮ್ಮ ವಶಕ್ಕೆ ಪಡೆದು ಮುಂದಿನ ತೀರ್ಮಾನದವರೆಗೆ ಯಾವುದೇ ತರಹದ ಪೂಜಾ ಕಾರ್ಯವನ್ನು ನೆರವೇರಿಸದೆ ನಮಗೂ ಸಹ ಸಮಾನತೆಯನ್ನ ನೀಡಿ

ಅಸ್ಪೃಶ್ಯತೆಯಿಂದ ದೂರ ಮಾಡಿ ಎಲ್ಲರಂತೆ ಬದುಕಲು ನಮ್ಮನ್ನು ಸಹ ಬಿಡಿ ಇಲ್ಲವಾದರೆ ಕುಣಿಕೇನಹಳ್ಳಿ ಗ್ರಾಮದಿಂದ ತಾಲೂಕು ಆಡಳಿತ ಕಚೇರಿಯವರಿಗೆ ಕಾಲ್ನಡಿಗೆಯಲ್ಲಿ ಅರಬೆತ್ತಲೆಯಾಗಿ ಪಾದಯಾತ್ರೆ ಮೂಲಕ ತಾಲೂಕು ಆಡಳಿತ ಕಚೇರಿ ಮುಂಭಾಗ ನಾವೆಲ್ಲರೂ ಧರಣಿ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿ ಈ ಕೂಡಲೇ ಎಲ್ಲಾ ದೇವಸ್ಥಾನಗಳನ್ನು ತಮ್ಮ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿದರು,

ಕೊನೆಗೆ ತಹಶೀಲ್ದಾರ್ ಸೂಚನೆಯಂತೆ ಸಮಯಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಸ್ಪೃಶ್ಯತೆ ಆಚರಣೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬರುತ್ತಿರುವ ಕೆಂಪಮ್ಮ ದೇವಿ ಉತ್ಸವ ಮೂರ್ತಿ ಇರುವ ಮತ್ತು ಕೆಂಚಾರಾಯ ದೇವರು ಇರುವ ದೇವಸ್ಥಾನಕ್ಕೆ ತಾತ್ಕಾಲಿಕವಾಗಿ ಬೀಗ ಹಾಕಿ ಅಲ್ಲೇ ಇದ್ದ ಮುಜರಾಯಿ ಇಲಾಖೆಗೆ ಸೇರಿದ ಉತ್ಸವ ಮೂರ್ತಿ ರಂಗನಾಥ ಸ್ವಾಮಿಯನ್ನು ದೇವಸ್ಥಾನಕ್ಕೆ ಗುಡಿದುಂಬಿಸಿ ಸಂಜೆ ಆಗಿರುವ ಕಾರಣದಿಂದ ಇದರ ವಿಚಾರವಾಗಿ ನಾಳೆ ನಿಮ್ಮ ಬಳಿ ಚರ್ಚಿಸಲಾಗುವುದು ಎಂದು ಕಂದಾಯ ಇಲಾಖೆ ಸಿಬ್ಬಂದಿಗಳು ಅಲ್ಲಿಂದ ತೆರಳಿದ್ದಾರೆ ಎಂಬ ಮಾತುಗಳು ಕೆಲವು ಮೂಲಗಳಿಂದ ತಿಳಿದು ಬಂದಿದೆ.

ಒಟ್ಟಾರೆ ಕುಣಿಕೇನಹಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಇದೆ ಎಂಬ ಕೂಗು ಹೇಳಿ ಬರುತ್ತಿದ್ದು ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಎಸಿ, ಅಡಿಷನಲ್ ಎಸ್ ಪಿ, ತಹಶೀಲ್ದಾರ್, ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಎಷ್ಟೇ ಇಲಾಖೆಗಳು ಬಂದರೂ ಇದನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡತೊಡಗಿದೆ, ಮುಂದಿನ ದಿನಗಳಲ್ಲಿ ಈ ಗ್ರಾಮದಲ್ಲಿ ಇರುವ ಎಲ್ಲಾ ದೇವರುಗಳನ್ನು ಮುಜರಾಯಿ ಇಲಾಖೆಗೆ ಸೇರಿಸಿ ಎಲ್ಲರನ್ನೂ ಸಮಾನತೆಯಿಂದ ಅಸ್ಪೃಶ್ಯತೆ ಇಲ್ಲದೆ ಜಾತ್ರಾ ಮಹೋತ್ಸವವನ್ನು ನಡೆಸಲು ಮುಂದಾಗುತ್ತದೆಯೇ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಎಂಬುದನ್ನು ಕಾದು ನೋಡಬೇಕು.

ವರದಿ : ಸುರೇಶ್ ಬಾಬು ಎಂ ತುರುವೇಕೆರೆ

04/10/2025

ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವ ಕುಣಿಗಲ್ ತಾಲೂಕು ಅಧ್ಯಕ್ಷರಾದ ಪುರುಷೋತ್ತಮ್ ಅವರು ಕುಣಿಗಲ್ ತಾಲೂಕು, ಅಮೃತೂರು ಹೋಬಳಿ ಜಿನ್ನಾಗ್ರ ಗ್ರಾಮ ದಲ್ಲಿ ದೇವಸ್ಥಾನ ಪೂಜಾ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಸಿಎನ್ ಮಂಜುನಾಥ್ ಅವರ ಜೊತೆಯಲ್ಲಿ ಭಾಗವಹಿಸಿದರು ಹಾಗೂ ಹಲವಾರು ಗ್ರಾಮದ ಮುಖಂಡರು ರೈತ ಸಂಘದ ಮುಖಂಡರು ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವ

Address

6th Cross Heggnhalli
Bangalore
562091

Alerts

Be the first to know and let us send you an email when Mathru TV ಮಾತೃ ಟಿವಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to Mathru TV ಮಾತೃ ಟಿವಿ:

Share