22/11/2025
ಗಮನಿಸಿ, ನೋಂದಣಿಗಾಗಿನ ದಿನಾಂಕವನ್ನು ವಿಸ್ತರಿಸಲಾಗಿದೆ!
#ಸದಾತನ ಏರ್ಪಡಿಸಿರುವ, ಶಿಕ್ಷಕರಿಗಾಗಿನ, ರಾಜ್ಯಮಟ್ಟದ ಪ್ರಬಂಧಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಲು ನವೆಂಬರ್ 20 ಕೊನೆಯ ದಿನವಾಗಿತ್ತು.
ಆದರೆ ಈಗ, ಎರಡು ದಿನದಿಂದ ಅನೇಕಜನ ಶಿಕ್ಷಕರು ನೋಂದಾಯಿಸುವುದಕ್ಕಾಗಿ ಸಂಪರ್ಕಿಸುತ್ತಿದ್ದಾರೆ. ರಾಜ್ಯಸರ್ಕಾರ ನಡೆಸಿದ ಗಣತಿ ಸೇರಿದಂತೆ ಈ ಬಾರಿಯ ದಸರಾ ರಜದಲ್ಲೂ ಶಿಕ್ಷಕಸಮುದಾಯ ತೀವ್ರ ಒತ್ತಡದಲ್ಲಿ ಇದ್ದುದರಿಂದಾಗಿ, 'ಈ ಸ್ಪರ್ಧೆಯನ್ನು ಕುರಿತ ಮಾಹಿತಿ ಬಂದಿದ್ದರೂ ಅತ್ತ ಗಮನ ಕೊಡುವುದು ಸಾಧ್ಯವಾಗಲಿಲ್ಲ. ಹಾಗಾಗಿ ದಿನಾಂಕ ವಿಸ್ತರಿಸಬಹುದೆ?' ಎಂಬುದು ಹಲವರು ಶಿಕ್ಷಕರ ಬೇಡಿಕೆ.
ಈ ಹಿನ್ನೆಲೆಯಲ್ಲಿ, ಪ್ರಬಂಧಸ್ಪರ್ಧೆಗೆ ಹೆಸರು ನೋಂದಾಯಿಸಲು ನವೆಂಬರ್ 30ರ ವರೆಗೂ ಅವಕಾಶ ಕಲ್ಪಿಸಲಾಗಿದೆ.
ಶಿಕ್ಷಕ ಸಮುದಾಯ ಇದನ್ನು ಗಮನಿಸಿ, ಪೂರ್ಣಪ್ರಮಾಣದಲ್ಲಿ ಸ್ಪಂದಿಸುವುದೆಂದು ಭಾವಿಸುತ್ತೇವೆ.
ಇನ್ನು, ನಾವು, ನಮ್ಮ ಬಳಗದಲ್ಲಿ-ಪರಿಚಯದಲ್ಲಿ-ಪರಿಸರದಲ್ಲಿ ಇರುವ ಶಿಕ್ಷಕರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಬಹುದು.
ಹೆಚ್ಚಿನ ವಿವರಗಳಿಗಾಗಿ WhatsApp ಮಾಡಿ: ಸಾಹಿತ್ಯಭಾರತೀ - 074836 81708