28/05/2025
ಕುರಿಮಂದೆಯಲ್ಲಿ ಸೇರಿಹೋದ ಸಿಂಹದ ಮರಿಯ ಕಥೆ ಗೊತ್ತಲ್ಲ!
ತಾನು ಯಾರು? ತನ್ನ ಸಾಮರ್ಥ್ಯ ಏನು? ಸ್ವಭಾವ ಏನು? - ಇದಾವುದರ ಪರಿವೆಯೂ ಇಲ್ಲದೆ ಕುರಿಮರಿಗಳೊಂದಿಗೆ ಅವುಗಳಂತೆಯೇ ಉಳಿದ ಆ ಸಿಂಹದ ಮರಿಯಂತಾಗಿದ್ದಾರೆ, ಇಂದಿನ ಹಿಂದೂ ತರುಣ-ತರುಣಿಯರು. ಸೆಕ್ಯೂಲರಿಸಂ ಎಂಬ ಮಾಯಾಜಾಲ ಶಿಕ್ಷಣ-ಸಾಹಿತ್ಯ-ಮಾಧ್ಯಮ-ಸಿನೆಮಾ ಸೇರಿದಂತೆ ವಿವಿಧರೂಪಗಳಲ್ಲಿ ಅವರನ್ನು ಆವರಿಸಿಕೊಂಡು, ಕುರಿಗಳನ್ನಾಗಿ ಮಾಡಿ, ಅಂತಿಮವಾಗಿ ಮತಾಂಧ ತೋಳಗಳ ಕೈಗೆ ಒಪ್ಪಿಸುತ್ತಿದೆ. ಅದರ ಪರಿಣಾಮವೇ ಲವ್ ಜಿಹಾದ್ ಸೇರಿದಂತೆ ವಿವಿಧ ಸಮಸ್ಯೆಗಳು!
ಇದಕ್ಕೆ ಪರಿಹಾರ ಏನು?
ನಮ್ಮ ತರುಣ-ತರುಣಿಯರಿಗೆ ನಮ್ಮ ಪರಂಪರೆ, ಧರ್ಮ, ಇತಿಹಾಸಗಳನ್ನು ಕುರಿತು ಪ್ರಾಥಮಿಕ ಮಾಹಿತಿಯನ್ನಾದರೂ ತಿಳಿಸಬೇಕು. ಸನಾತನಧರ್ಮದ ಮೂಲ ಲಕ್ಷಣಗಳನ್ನು, ನಂಬಿಕೆಗಳನ್ನು, ಜೀವನದೃಷ್ಟಿಯನ್ನು ಅವರು ಅರ್ಥಮಾಡಿಕೊಳ್ಳುವಂತಾಗಬೇಕು.
ಈ ಹಿನ್ನೆಲೆಯಲ್ಲಿ ರೂಪಗೊಂಡ ಕೃತಿ: #ಸನಾತನ_ಧರ್ಮ. ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ, ಮನೆಮಂದಿಗೆ ಆಪ್ತರಿಗೆ ಓದಿಸಲೇಬೇಕಾದ ಪ್ರಾಥಮಿಕ ಪುಸ್ತಕ ಇದು.
ನಿಮ್ಮ ಪ್ರತಿಗಳನ್ನು ಖರೀದಿಸಲು, ಪರಿಚಿತರಿಗೆ ಆಪ್ತರಿಗೆ ಉಡುಗೊರೆಯಾಗಿ ಕೊಡಲು, WhatsApp ಮಾಡಿ: ಸಾಹಿತ್ಯಭಾರತೀ - 074836 81708