ಸಾಹಿತ್ಯಭಾರತೀ/ Sahityabharatee

ಸಾಹಿತ್ಯಭಾರತೀ/ Sahityabharatee ರಾಷ್ಟ್ರಿಯ/ಸಾಂಸ್ಕೃತಿಕ/ಸದಭಿರುಚಿಯ ಸಾಹಿತ್ಯದ ಪ್ರಚಾರ ಹಾಗೂ ಪ್ರಸಾರಕ್ಕಾಗಿ ಸಾಹಿತ್ಯಭಾರತಿ.

ಗಮನಿಸಿ, ನೋಂದಣಿಗಾಗಿನ ದಿನಾಂಕವನ್ನು ವಿಸ್ತರಿಸಲಾಗಿದೆ! #ಸದಾತನ ಏರ್ಪಡಿಸಿರುವ, ಶಿಕ್ಷಕರಿಗಾಗಿನ, ರಾಜ್ಯಮಟ್ಟದ ಪ್ರಬಂಧಸ್ಪರ್ಧೆಗೆ ಹೆಸರು ನೋಂದ...
22/11/2025

ಗಮನಿಸಿ, ನೋಂದಣಿಗಾಗಿನ ದಿನಾಂಕವನ್ನು ವಿಸ್ತರಿಸಲಾಗಿದೆ!

#ಸದಾತನ ಏರ್ಪಡಿಸಿರುವ, ಶಿಕ್ಷಕರಿಗಾಗಿನ, ರಾಜ್ಯಮಟ್ಟದ ಪ್ರಬಂಧಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಲು ನವೆಂಬರ್ 20 ಕೊನೆಯ ದಿನವಾಗಿತ್ತು.
ಆದರೆ ಈಗ, ಎರಡು ದಿನದಿಂದ ಅನೇಕಜನ ಶಿಕ್ಷಕರು ನೋಂದಾಯಿಸುವುದಕ್ಕಾಗಿ ಸಂಪರ್ಕಿಸುತ್ತಿದ್ದಾರೆ. ರಾಜ್ಯಸರ್ಕಾರ ನಡೆಸಿದ ಗಣತಿ ಸೇರಿದಂತೆ ಈ ಬಾರಿಯ ದಸರಾ ರಜದಲ್ಲೂ ಶಿಕ್ಷಕಸಮುದಾಯ ತೀವ್ರ ಒತ್ತಡದಲ್ಲಿ ಇದ್ದುದರಿಂದಾಗಿ, 'ಈ ಸ್ಪರ್ಧೆಯನ್ನು ಕುರಿತ ಮಾಹಿತಿ ಬಂದಿದ್ದರೂ ಅತ್ತ ಗಮನ ಕೊಡುವುದು ಸಾಧ್ಯವಾಗಲಿಲ್ಲ. ಹಾಗಾಗಿ ದಿನಾಂಕ ವಿಸ್ತರಿಸಬಹುದೆ?' ಎಂಬುದು ಹಲವರು ಶಿಕ್ಷಕರ ಬೇಡಿಕೆ.

ಈ ಹಿನ್ನೆಲೆಯಲ್ಲಿ, ಪ್ರಬಂಧಸ್ಪರ್ಧೆಗೆ ಹೆಸರು ನೋಂದಾಯಿಸಲು ನವೆಂಬರ್ 30ರ ವರೆಗೂ ಅವಕಾಶ ಕಲ್ಪಿಸಲಾಗಿದೆ.

ಶಿಕ್ಷಕ ಸಮುದಾಯ ಇದನ್ನು ಗಮನಿಸಿ, ಪೂರ್ಣಪ್ರಮಾಣದಲ್ಲಿ ಸ್ಪಂದಿಸುವುದೆಂದು ಭಾವಿಸುತ್ತೇವೆ.

ಇನ್ನು, ನಾವು, ನಮ್ಮ ಬಳಗದಲ್ಲಿ-ಪರಿಚಯದಲ್ಲಿ-ಪರಿಸರದಲ್ಲಿ ಇರುವ ಶಿಕ್ಷಕರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗಾಗಿ WhatsApp ಮಾಡಿ: ಸಾಹಿತ್ಯಭಾರತೀ - 074836 81708

ಯುವಜನತೆಗೆ ಮಹಾಭಾರತವನ್ನು ಪರಿಚಯಿಸುವುದಕ್ಕಾಗಿ ಸಿದ್ಧಪಡಿಸಲಾಗಿರುವ ಒಂದು ವಿಶಿಷ್ಟ ಕೃತಿ : The Essential Mahabharata for the Young. ಶ...
10/11/2025

ಯುವಜನತೆಗೆ ಮಹಾಭಾರತವನ್ನು ಪರಿಚಯಿಸುವುದಕ್ಕಾಗಿ ಸಿದ್ಧಪಡಿಸಲಾಗಿರುವ ಒಂದು ವಿಶಿಷ್ಟ ಕೃತಿ : The Essential Mahabharata for the Young.

ಶ್ರೀ ಹರಿ ರವಿಕುಮಾರ್ ಮತ್ತು ಶ್ರೀ ಅರ್ಜುನ್ ಭಾರದ್ವಾಜ್ ಸಿದ್ಧಪಡಿಸಿರುವ ಈ ಸರಳ ಸುಂದರ ಕೃತಿಯಲ್ಲಿ, ಮಹಾಭಾರತಕ್ಕೆ ಸಂಬಂಧಿಸಿದ ಉತ್ಕೃಷ್ಟ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಆ ಪ್ರತಿಯೊಂದು ಚಿತ್ರವನ್ನೂ ಬರೆದವರು, ಪ್ರಸಿದ್ಧ ಚಿತ್ರಕಾರ, ಚಂದಮಾಮದ ಪ್ರತೀ ಸಂಚಿಕೆಯನ್ನೂ ಸಂಗ್ರಹಯೋಗ್ಯವಾಗಿಸಿದ್ದ ಕಲಾವಿದ ಎಂ.ಟಿ.ವಿ. ಆಚಾರ್ಯ.

ಮಹಾಭಾರತದ ಕಥೆ ಗೊತ್ತಿರುವವರೂ ಕೂಡಾ ಅಪೂರ್ವ ಚಿತ್ರಗಳಿಗಾಗಿ ಸಂಗ್ರಹಿಸಲೇಬೇಕಾದ ಕೃತಿ ಇದು.

ರೂ.500.00 ಮುಖಬೆಲೆಯ ಈ ಕೃತಿಯನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

  is a unique work prepared by Hari Ravikumar and Arjun Bharadwaj to introduce the Mahabharata to young people.​The artw...
10/11/2025

is a unique work prepared by Hari Ravikumar and Arjun Bharadwaj to introduce the Mahabharata to young people.

​The artwork of the famous artist M. T. V. Acharya, who made every issue of Chandamama attractive, enhances the value of this book.

​To purchase this book, which must be in every home, please WhatsApp:
Sahitya Bharati - 074836 81708

ಕನ್ನಡ ನವೋದಯಕಾಲದ ಸಾಹಿತಿಗಳಲ್ಲಿ ಗಣ್ಯರಾದವರು 'ವಿಸೀ' ಎಂದೇ ಪರಿಚಿತರಾದ ವಿ. ಸೀತಾರಾಮಯ್ಯನವರು. ಕಾವ್ಯ, ಪ್ರಬಂಧ, ವಿಮರ್ಶೆ ಸೇರಿದಂತೆ ಸಾಹಿತ್...
20/10/2025

ಕನ್ನಡ ನವೋದಯಕಾಲದ ಸಾಹಿತಿಗಳಲ್ಲಿ ಗಣ್ಯರಾದವರು 'ವಿಸೀ' ಎಂದೇ ಪರಿಚಿತರಾದ ವಿ. ಸೀತಾರಾಮಯ್ಯನವರು. ಕಾವ್ಯ, ಪ್ರಬಂಧ, ವಿಮರ್ಶೆ ಸೇರಿದಂತೆ ಸಾಹಿತ್ಯದ ಹಲವು ಮುಖಗಳಲ್ಲಿ ಕೆಲಸಮಾಡಿದವರು ಅವರು. ಅವರ ಸಮಗ್ರ ಕಾವ್ಯ ಸಂಪುಟ #ಸ್ನೇಹ_ವಿಶ್ವಾಸ.

ಇದರಲ್ಲಿ, ವಿ.ಸೀ. ಅವರ #ಗೀತಗಳು, #ದೀಪಗಳು, #ನೆಳಲು_ಬೆಳಕು, #ದ್ರಾಕ್ಷಿ_ದಾಳಿಂಬೆ, #ಹೆಜ್ಜೆಪಾಡು, #ಅರಲು_ಬರಲು, #ಹಗಲು_ಇರುಳು, #ನೋವು_ನಲಿವು ಕವನಸಂಕಲನಗಳು ಸೇರಿವೆ.

"ಮಣಿಯದಿಹ ಮನವೊಂದು, ಸಾಧಿಸುವ ಹಟವೊಂದು
ನಿಜದ ನೇರಕೆ ನಡೆವ ನಿಶ್ಚಲತೆಯೊಂದು
ಅನ್ಯಾಯಕೆಂದೆಂದು ಬಾಗದೆಚ್ಚರವೊಂದು
ಮರುಕಕ್ಕೆ ಪ್ರೇಮಕ್ಕೆ ಚಿರತೆರೆದ ಎದೆಯೊಂದು
___ ಅಭೀಃ! ಅಭೀಃ! ಅಭೀಃ! ಎಂಬ ತಾರಕ ವಾಕ್ಯ
ನಾಡಿಯನು ನಡಸುತಿರೆ, ಬಾಳನ್ನು ತಿದ್ದುತಿರೆ
ನಡೆ ಮುಂದಕೆನ್ನುತ್ತೆ ಕೂಗುತಿವೆ ನುಗ್ಗಿಸುತಿವೆ."

ಎಂಬ ಗೀತೆಯಿರಬಹುದು,

"ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿಡಲು ತಂದಿರುವೆವು,
ಕೊಳ್ಳಿರೀ ಮಗುವನ್ನು ಎಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನು ತುಂಬಲೊಪ್ಪಿಸುವೆವು"

ಎಂಬ, ಮದುವೆಮನೆಗಳಲ್ಲಿ ಸದಾ ಕೇಳುವ ಭಾವಪೂರ್ಣ ಪದ್ಯವಿರಬಹುದು,

ಇವು ವಿಸೀಯವರದೇ ರಚನೆಗಳು. ಇಂಥ ಹಲವು ಭಾವಪೂರ್ಣ ಪದ್ಯಗಳು ಈ ಸಮಗ್ರಸಂಪುಟದಲ್ಲಿವೆ.

ಆಸಕ್ತರು #ಸ್ನೇಹ_ವಿಶ್ವಾಸ ಕೃತಿಯನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708

ಶಿಕ್ಷಕರ ಗಮನಕ್ಕೆ...ಈಗಾಗಲೇ ರಾಜ್ಯಮಟ್ಟದ ಪ್ರಬಂಧಸ್ಪರ್ಧೆಯನ್ನು ಕುರಿತು ಮಾಹಿತಿ ನೀಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಶಿಕ್ಷಕರು ಉತ್ಸಾಹದಿಂ...
12/10/2025

ಶಿಕ್ಷಕರ ಗಮನಕ್ಕೆ...

ಈಗಾಗಲೇ ರಾಜ್ಯಮಟ್ಟದ ಪ್ರಬಂಧಸ್ಪರ್ಧೆಯನ್ನು ಕುರಿತು ಮಾಹಿತಿ ನೀಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಶಿಕ್ಷಕರು ಉತ್ಸಾಹದಿಂದ ಸ್ಪಂದಿಸುತ್ತಿದ್ದಾರೆ; ನೋಂದಣಿ ಮಾಡಿಸಿ, ಭಾಗವಹಿಸುವಿಕೆಯನ್ನು ಖಾತ್ರಿಪಡಿಸುತ್ತಿದ್ದಾರೆ. ಅದರ ಜೊತೆಯಲ್ಲೇ ಬಹಳಷ್ಟು ಜನ ಶಿಕ್ಷಕರು #ಸನಾತನಧರ್ಮ ಪುಸ್ತಕವೂ ಬೇಕು ಎಂದು ಕೇಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಕಳೆದಬಾರಿಯಂತೆ ಈ ಸಲವೂ ನೋಂದಣಿ ಮಾಡಿಸಿದ ಸ್ಪರ್ಧಿಗಳೆಲ್ಲರಿಗೂ ರೂ.250.00 ಮುಖಬೆಲೆಯ #ಸನಾತನಧರ್ಮ ಕೃತಿಯನ್ನು ಕಳುಹಿಸಲಾಗುವುದು. ಅದಕ್ಕಾಗಿ, ನೋಂದಣಿ ಸಮಯದಲ್ಲಿ ಶಿಕ್ಷಕರು ತಮ್ಮ ಶಾಲೆಯ ಪೂರ್ಣ ವಿಳಾಸವನ್ನು 7483681708 ಈ ನಂಬರಿಗೆ WhatsApp ಮಾಡಬೇಕು.

ಆಸಕ್ತರು ಹೆಚ್ಚಿನ ವಿವರಗಳಿಗಾಗಿ WhatsApp ಮಾಡಿ: ಸಾಹಿತ್ಯಭಾರತೀ - 074836 81708

11/10/2025

ಪ್ರತಿಯೊಬ್ಬರ ಮನೆಯಲ್ಲೂ ಇರಲೇಬೇಕಾದ, ಮತ್ತೆ ಮತ್ತೆ ಓದಬೇಕಾದ #ಸನಾತನಧರ್ಮ ಪುಸ್ತಕವನ್ನು ಖರೀದಿಸಲು WhatsApp ಮಾಡಿ: 074836 81708

11/10/2025
ಆಸಕ್ತರ ಗಮನಕ್ಕೆ....ಒಂದು ಅಪೂರ್ವ ಕೃತಿ. ನಿಮ್ಮ ಪ್ರತಿಗಳನ್ನು ಖರೀದಿಸಲು WhatsApp ಮಾಡಿ: 074836 81708
10/10/2025

ಆಸಕ್ತರ ಗಮನಕ್ಕೆ....

ಒಂದು ಅಪೂರ್ವ ಕೃತಿ.

ನಿಮ್ಮ ಪ್ರತಿಗಳನ್ನು ಖರೀದಿಸಲು WhatsApp ಮಾಡಿ: 074836 81708

Address

Bangalore

Opening Hours

Monday 10am - 8pm
Tuesday 10am - 8pm
Wednesday 10am - 8pm
Thursday 10am - 8pm
Friday 10am - 8pm
Saturday 10am - 8pm

Telephone

+917483681708

Website

Alerts

Be the first to know and let us send you an email when ಸಾಹಿತ್ಯಭಾರತೀ/ Sahityabharatee posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸಾಹಿತ್ಯಭಾರತೀ/ Sahityabharatee:

Share