ಕಾರ್ಮಿಕರ ಕ್ರಾಂತಿ ನ್ಯೂಸ್

ಕಾರ್ಮಿಕರ ಕ್ರಾಂತಿ ನ್ಯೂಸ್ ನೈಜ್ಯ ಸುದ್ದಿ ಕಾರ್ಮಿಕರ ಕ್ರಾಂತಿ ನ್ಯೂಸ್

13/09/2025

ನಂಜನಗೂಡು : ಮೃತಪಟ್ಟ ಮಗು ಶವ ಆಸ್ಪತ್ರೆಯಿಂದ ಪಡೆಯಲು ಹಣದ ಕೊರತೆ...ಗ್ರಾಮದಲ್ಲಿ ಭಿಕ್ಷೆ ಬೇಡಿದ ದೊಡ್ಡಮ್ಮ...ನಂಜನಗೂಡಿನಲ್ಲೊಂದು ಮನಕಲುಕುವ ಘಟನೆ...ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಡ ಮಗುವಿನ ಶವ ಪಡೆಯಲು ಹಣದ ಕೊರತೆಯಾದ ಹಿನ್ನಲೆ ದೊಡ್ಡಮ್ಮ ಗ್ರಾಮದಲ್ಲಿ ಸೆರಗು ಚಾಚಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿದ ಮನಕಲುಕುವ ಘಟನೆ ಬೆಳಕಿಗೆ ಬಂದಿದೆ.ಮೈಸೂರಿನಖಾಸಗಿ ಆಸ್ಪತ್ರೆಯ ವರ್ತನೆಗೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ.
ನಂಜನಗೂಡು ತಾಲ್ಲೂಕಿನ ಹೆಡೆತಲೆ ಗ್ರಾಮದಲ್ಲಿ ಘಟನೆ ನಡೆದಿದೆ.
ಹೆಡತಲೆ ಗ್ರಾಮದ ಮಹೇಶ್ ಮತ್ತು ರಾಣಿ ಎಂಬ ದಂಪತಿಯ
ಐದು ವರ್ಷದ ಮಗು ಆದ್ಯ ಮೃತಪಟ್ಟಿದೆ.
ಮಂಗಳವಾರ ಸಂಜೆ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ಚಾಮರಾಜನಗರ ಮತ್ತು ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು.
ಅಪಘಾತದಲ್ಲಿ ಹೆಮ್ಮರಗಾಲ ಗ್ರಾಮದ ಮೂವರಿಗೆ ಮತ್ತು ಹೆಡತಲೆ ಗ್ರಾಮದ ಮಹೇಶ್, ರಾಣಿ ಎಂಬ ದಂಪತಿಗಳು ಸೇರಿ ಮಗುವಿಗೂ ಗಂಭೀರ ಗಾಯಗಳಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಐದು ವರ್ಷದ ಆದ್ಯ ಎಂಬ ಮಗು ಸಾವನ್ನಪ್ಪಿದೆ.
ಮಗುವಿನ ತಂದೆ ತಾಯಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಮೃತಪಟ್ಟಿರುವ ಮಗುವಿನ ಶವವನ್ನು ಪಡೆಯಲು ಹಣದ ಕೊರತೆ ಎದುರಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆ ಚಿಕಿತ್ಸೆ ವೆಚ್ಚ ಸರಿಸುಮಾರು ಒಂದುವರೆ ಲಕ್ಷ ಹಣವನ್ನು ಕಟ್ಟಿ ನಂತರ ಶವವನ್ನು ತೆಗೆದುಕೊಂಡು ಹೋಗುವಂತೆ ಕುಟುಂಬಸ್ಥರಿಗೆ ತಾಕೀತು ಮಾಡಿದ್ದಾರೆ.ಅಷ್ಟೊಂದು ಹಣವನ್ನು ಬಡ ಕುಟುಂಬ ಕಟ್ಟಲಾಗದೆ ತಮ್ಮ ಗ್ರಾಮಕ್ಕೆ ಬಂದು ಗ್ರಾಮದ ಪ್ರತಿಯೊಂದು ಮನೆಗೆ ಮಗುವಿನ ದೊಡ್ಡಮ್ಮ ಮಂಗಳಮ್ಮ ಸೆರಗೊಡ್ಡಿ ಭಿಕ್ಷೆ ಬೇಡಿದ್ದಾರೆ.ಸುಮಾರು 80 ಸಾವಿರ ಹಣವನ್ನು ಸಂಗ್ರಹಿಸಿದ್ದಾರೆ.ಭಿಕ್ಷೆ ಬೇಡುತ್ತಿರುವ ದೃಶ್ಯಕಂಡು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.ನೊಂದ ಕುಟುಂಬಕ್ಕೆ ಪ್ರತಿ ಮನೆಯ ಕುಟುಂಬಸ್ಥರು ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಮಾನವೀಯತೆ ಇಲ್ಲದ ಖಾಸಗಿ ಆಸ್ಪತ್ರೆ ಸಾವಿನಲ್ಲೂ ಸುಲಿಗೆ ಮಾಡುತ್ತಿರುವ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ...

13/09/2025

ರಣಬೀಕರ ಅಪಘಾತ :ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಕ್ಯಾಂಟರ್ ನುಗ್ಗಿದ ಪರಿಣಾಮ 8 ಜನ ಸಾವನ್ನಪ್ಪಿದ್ದು,20 ಕ್ಕು ಹೆಚ್ಚು ಜನ ಗಂಭೀರ ಗಾಯಗೊಂಡಿದ್ದಾರೆ...

12/09/2025

ದೊಡ್ಡಬಳ್ಳಾಪುರ ಸಾರ್ವಜನಿಕರ ದೂರುಗಳ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರಿಂದ ವಿಚಾರಣೆ ನಡೆಸುತ್ತಿದ್ದಾರೆ.

12/09/2025

*ಹೈದರಾಬಾದ್ ನಿಂದ ಖಾಸಗಿ ಸ್ಲೀಪರ್ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟಿದ್ದ ೧೫ ವರ್ಷದ ಅಪ್ರಾಪ್ತ ಬಾಲಕಿ. ಬಸ್ಸಿನಲ್ಲಿ ಡ್ರೈವರ್ ಬಳಿ ಮೊಬೈಲ್ ಚಾರ್ಜ್ಗೆ ಹಾಕಿದ್ದ ಬಾಲಕಿ.. ಕಿಸ್ ಕೊಟ್ಟರೆ ಮೊಬೈಲ್ ವಾಪಸ್ ಕೊಡುವುದಾಗಿ ಬಾಲಕಿಗೆ ಹೇಳಿದ ಸ್ಪೇರ್ ಡ್ರೈವರ್ ಆರೀಫ್. ಬಸ್ಸು ಚಲಿಸುವಾಗ ಮಲಗಿದ್ದ ಸೀಟ್ಗೆ ಬಂದು ಪದೇ ಪದೇ ಲೈಂಗಿಕ ಕಿರುಕುಳ..
ವಿಷಯ ಕರೆಮಾಡಿ‌ ಅಣ್ಣನಿಗೆ ತಾಯಿಗೆ ತಿಳಿಸಿದ ಬಾಲಕಿ..
ಚಾಲುಕ್ಯ ಸರ್ಕಾಲ್ ಬಳಿ‌ ಬರುತ್ತಿದ್ದಂತೆ ಬಸ್ಸು ಅಡ್ಡ ಹಾಕಿದ ಬಾಲಕಿಯ ತಾಯಿ ಹಾಗೂ ಅಣ್ಣ..
ಆರೀಫ್ ನನ್ನ ಬಸ್ಸಿನಿಂದ ಕೆಳಗೆ ಇಳಿಸಿ ಹಿಡಿದು ಹಿಗ್ಗಾಮುಗ್ಗ ಥಳಿಸಿದರು.ಆರೀಫ್ ನನ್ನ ವಶಕ್ಕೆ ಪಡೆದು ಕರೆದೊಯ್ದ ವಿಧಾನಸೌಧ ಪೊಲೀಸರು..

12/09/2025

12/09/2025 ಇಂದು ಲೋಕಾಯುಕ್ತ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆ ಬೆಂಗಳೂರು : ಕರ್ನಾಟಕ ರಾಜ್ಯ ಲೋಕಾಯುಕ್ತ ಸಂಸ್ಥೆಯಿಂದ ಜಿಲ್ಲೆಯಲ್ಲಿ ಬಾಕಿ ಇರುವ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯನ್ನು ಸೆಪ್ಟೆಂಬರ್ 12 ರ ಶುಕ್ರವಾರ (ಇಂದು) ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಉಪಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಳಾದ ಡಾ.ಕೆ.ಎನ್ ಅನುರಾಧ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಕೆ. ಬಾಬ, ಕರ್ನಾಟಕ ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ವಂಶಿಕೃಷ್ಣ , ಕರ್ನಾಟಕ ಲೋಕಾಯುಕ್ತ ವಿಚಾರಣೆಗಳು-1 ಉಪ ನಿಬಂಧಕರಾದ ಅರವಿಂದ ಎನ್‌.ವಿ, ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಶೈಲ್ ಭೀಮಸೇನ ಬಗಾಡಿ ಅವರು ಉಪಸ್ಥಿತರಿರುತ್ತಾರೆ.

12/09/2025
https://youtu.be/yeX3IoP8wKs?si=coh6JWsX1wX4MCfQಸುದ್ದಿ - ಜಾಹೀರಾತುಗಳಿಗೆ ಸಂಪರ್ಕಿಸಿ: 9035931778-9620225389(ಕಾರ್ಮಿಕರ ಕ್ರಾಂತಿ...
12/09/2025

https://youtu.be/yeX3IoP8wKs?si=coh6JWsX1wX4MCfQ
ಸುದ್ದಿ - ಜಾಹೀರಾತುಗಳಿಗೆ ಸಂಪರ್ಕಿಸಿ: 9035931778-9620225389(ಕಾರ್ಮಿಕರ ಕ್ರಾಂತಿ ನ್ಯೂಸ್)
YOUTUB: //youtube.com/?si=JEasMe80QUQYjTWy , WHATSAPP GROUP: https://chat.whatsapp.com/JdxAN1L4LoI6p0eSjJTt8r?mode=ac_t , INSTAGRAM: https://www.instagram.com/karmikarakranthinews?igsh=YmFsY2cydHk5ZTNw , WHATSAPP STETAS: https://whatsapp.com/channel/0029Vb60lao8vd1GUPacU03F
page: https://www.facebook.com/share/1BkZcTC3c8/

Enjoy the videos and music you love, upload original content, and share it all with friends, family, and the world on YouTube.

11/09/2025

ಅದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಕ ಸಾಮಾನ್ಯ ಸಭೆ

10/09/2025

ಇಂದು ನಡೆದ ರಾಜಾನುಕುಂಟೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ 2 ನೇ ಹಂತದ ಮದ್ಯ ವೆಸನೆಯ ಶಿಬಿರದ ಸಭೆ ಹಮ್ಮಿಕೊಂಡಿದ್ದು ಚರ್ಚೆ ನಡೆಸಲಾಯಿತು ಈ ಸಂದರ್ಬದಲ್ಲಿ ಸಭೆಯ ವ್ಯವಸ್ಥಾಪನ ಅಧ್ಯಕ್ಷರಾದ ಮಂಜುನಾಥ್ ರವರು,
ಗೌರವಾಧ್ಯಕ್ಷರಾದ ಕೆಂಪೇಗೌಡ, ಜನಜಾಗೃತಿ ಸದಸ್ಯರು, ಊರಿನ ಗಣ್ಯರು ಪ್ರಕಾಶ್, ಜನಜಾಗೃತಿ ಸದಸ್ಯರು ಶಶಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರು ಚಿಕ್ಕಣ್ಣ, ಗ್ರಾಮ ಪಂಚಾಯತಿ ಸದಸ್ಯರು ಮಂಜುನಾಥ್ ಎಸ್,ಪ್ರಕಾಶ್ ಟಿಟಿ ರವರು ತರ ಹುಣಸೆ. ತಿಮ್ಮೇಗೌಡರು ಮಾಜಿ ಅಧ್ಯಕ್ಷರು ಅರಕೆರೆ ಗ್ರಾಮ ಪಂಚಾಯಿತಿ. ಮುನಿದಾಸಪ್ಪ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು. ಅಪ್ಪಣ್ಣ ಗೌಡ ರವರು ಸಾದೇನಹಳ್ಳಿ. ಪ್ರಕಾಶ್ ರವರು ಪ್ರೀಪಲ್ ಟ್ರಸ್ಟ್. ರಾಜೇಂದ್ರ ಕುಮಾರ್ ಮೆಡಿಕಲ್ ರಾಜನಕುಂಟೆ. ವಿಜಯ್ ಕುಮಾರ್ ಕೆ ಪಿ ರವರು ಜನತಾ ಬಜಾರ್ ರಾಜನಕುಂಟೆ. ಆರತಿ ಮಂಜುನಾಥ್ ಸಮಾಜ ಸೇವಕರು ರಾಜನಕುಂಟೆ. ಮಂಜುನಾಥ್ ಎಸ್ ರವರು ಮಾಜಿ ಉಪಾಧ್ಯಕ್ಷರು ಅರಕೆರೆ ಗ್ರಾಮ ಪಂಚಾಯಿತಿ. ಹಾಗೂ ಧರ್ಮಸ್ಥಳ ಸಂಘದ ಸದಸ್ಯರುಗಳು ಒಕ್ಕೂಟ ಸದಸ್ಯರುಗಳು ತಾಲೂಕು ಯೋಜನಾಧಿಕಾರಿ ಸವಿತಾ ಶೆಟ್ಟಿ ರವರು, ಸಭೆ ಉದ್ಘಾಟನೆ ಮಾಡಿ ಶಿಬಿರದ ಮಹತ್ವದ ಬಗ್ಗೆ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚೆ ಮಾಡಲಾಯಿತು

10/09/2025

ಬಾಗಲಕೋಟೆಯಲ್ಲಿ ಹುಡುಗಿಯನ್ನು ಚುಡಾಯಿಸಿದ ಅಂತ‌ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿತ.ಥಳಿಸಿದ ವೀಡಿಯೋ ವೈರಲ್

09/09/2025

ಅರಣ್ಯಾಧಿಕಾರಿಗಳನ್ನು ಬೋನಿನಲ್ಲಿ ಕೂಡಿ ಹಾಕಿದ ಗುಂಡ್ಲುಪೇಟೆ ರೈತರು.

09/09/2025

ಕಾರ್ಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Address

Bangalore

Website

Alerts

Be the first to know and let us send you an email when ಕಾರ್ಮಿಕರ ಕ್ರಾಂತಿ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Share