24/08/2026
ಭಾವಪೂರ್ಣ ಶ್ರದ್ಧಾಂಜಲಿ
ಆತ್ಮೀಯರು ಕನ್ನಡಪರ ಹೋರಾಟದ ಒಡನಾಡಿಗಳು ಹಾಗೂ ಜಯ ಕರ್ನಾಟಕ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷರು ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಸ್ನೇಹಮಯಿ ಶ್ರೀಯುತ ಚಂದ್ರಪ್ಪಅಣ್ಣ ನವರು ನಿಧನರಾದ ಸುದ್ದಿ ಅತ್ಯಂತ ದುಃಖ ಮತ್ತು ನೋವನ್ನುಂಟು ಮಾಡಿದೆ ಕನ್ನಡ ನಾಡು ನುಡಿ ನೆಲದ ಪರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಅನೇಕ ಕನ್ನಡಪರ ಹೋರಾಟಗಾರರಿಗೆ ಒಡನಾಡಿಯಾಗಿ ಆತ್ಮೀಯ ಸ್ನೇಹಿತರಾಗಿ ಬದುಕಿದ ಅವರ ನೆನಪುಗಳು ಸದಾ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿವೆ ಅವರ ಅಗಲಿಕೆ ಕನ್ನಡಪರ ಹೋರಾಟದ ಬಳಗಕ್ಕೆ ಹಾಗೂ ಅವರ ಕುಟುಂಬ, ಬಂಧು-ಬಳಗ ಮತ್ತು ಅಪಾರ ಸ್ನೇಹಿತರ ವಲಯಕ್ಕೆ ತುಂಬಲಾರದ ನಷ್ಟ ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಕುಟುಂಬಕ್ಕೆ ಹಾಗೂ ಬಂಧು-ಬಳಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ
ಶ್ರೀಯುತ ಚಂದ್ರಪ್ಪನವರಿಗೆ ಭಾವಪೂರ್ಣ ಶ್ರದ್ಧಾಂಜಲಿ.