C24kannada

C24kannada C24Kannada is a promptly news communication team
(1)

09/06/2026

ಆನೇಕಲ್‌
ಆನೇಕಲ್‌ ರೈಲ್ವೆ ಗೇಟ್‌ ಬಳಿ ನಿಲ್ಲುವ ಸರತಿ ಸಾಲಿನ ವಾಹನಗಳ ದಟ್ಟಣೆ, ಮಳೆಗಾಲದಲ್ಲಿ ರೈಲ್ವೆ ಕೆಲ ಸೇತುವೆಗಳಲ್ಲಿ ನಿಲ್ಲುವ ನೀರು ಹೆದ್ದಾರಿಗಳ ಅವಾಂತರ ವೀಕ್ಷಿಸಲು ಸಂಸದ ಡಾ ಮಂಜುನಾಥ್‌ ಇಂದು ಆನೇಕಲ್‌ ರೈಲ್ವೇ, ಹೆದ್ದಾರಿ ಹಾಗು ಕಾಡ ಚೂಡಹಳ್ಳಿಗೆ ಆಗಮಿಸಿದ್ದರು.
ಸ್ಥಳೀಯರ ಪ್ರಕಾರ ನಾವು ನೋಡಿದ ಹಾಗೆ ಆನೇಕಲ್ ನಾದ್ಯಂತ ರಸ್ತೆ ಹಾಳಾಗಿದೆ ರಾಜ್ಯ ಸರ್ಕಾರ ರಸ್ತೆಗಳನ್ನ ಸರಿಪಡಿಸಬೇಕು, ಈ ಭಾಗಕ್ಕೆ ಕೇಂದ್ರ ಸಿಹಿ ಸುದ್ದಿಯನ್ನು ನೀಡುತ್ತಿದೆ. ಎಸ್ಟಿಆರ್ಆರ್ ಈಸ್ಟ್ ಜಂಕ್ಷನ್ ಎಂಬ ವೈಟ್ ಫೀಲ್ಟ್-ಬಾಗಲೂರು-ಹೊಸೂರು ಕಡೆ ಹೊರಡುವ ಬಾರಿ ವಾಹನಗಳು ಟ್ರಕ್ಗಳು ನೇರವಾಗಿ ಈ ಮಾರ್ಗದಲ್ಲಿ ಸಾಗುವುದರಿಂದ ಆನೇಕಲ್ ಸುತ್ತ ಸಂಚಾರ ದಟ್ಟಣೆಯಾಗಲಿ ಬಾರಿ ವಾಹನಗಳ ಓಡಾಟದ ಜಂಜಾಟವಿರುವುದಿಲ್ಲ. ಈಗಾಗಲೇ ಎರಡೂ ಕಡೆ ತ್ರಿಪಥ ಜೋಡಿ ರಸ್ತೆಗಳು ನಿರ್ಮಾಣಗೊಳ್ಳುತ್ತಿವೆ. ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ನಲ್ಲಿ ಕಾಮಗಾರಿ ಮುಗಿಯಲಿದೆ ಎಂದು ಸಂಸದ ಡಾ ಮಂಜುನಾಥ್ ನುಡಿದರು.
ಅತ್ತಿಬೆಲೆ-ಆನೇಕಲ್ ರಸ್ತೆಯ ಮುಖ್ಯ ರೈಲ್ವೆ ಗೇಟ್ 112 ಲೆವೆಲ್ ಕ್ರಾಸಿಂಗ್ ಸಮಸ್ಯೆಗೆ ಕಳೆದ ಫೆಬ್ರವರಿಯಲ್ಲಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗು ಸೋಮಣ್ಣರವರನ್ನ ಭೇಟಿಯಾಗಿದ್ದೆ. ಅದಾಗಿ ಯೋಜನಾ ವರದಿ ಸಿದ್ದಗೊಂಡಿದ್ದು 70 ಕೋಟಿಗೆ ಎಸ್ಟಿಮೇಟ್ ಮಾಡಿದ್ದಾರೆ. ಈಘಾಗಲೇ ಹುಬ್ಬಳ್ಳಿಗೆ ಅನುಮೋದನೆಗಾಗಿ ಹೋಗಿದ್ದು ಇನ್ನೇನು ಕೆಲ ತಿಂಗಳಲ್ಲಿಯೇ ಸ್ಥಳ ವೀಕ್ಷಣೆಗೆ ಬರಲಿದ್ದಾರೆಂದು ಭರವಸೆ ನೀಡಿದರು.
ರೈಲ್ವೆ ಸ್ಟೇಷನ್ ನಿಂದ ಆನೇಕಲ್ ಮುಖ್ಯರಸ್ತೆಗೆ ಬರುವ ರಸ್ತೆ ಕಾಮಗಾರಿಗೆ 45 ಲಕ್ಷ ಬಿಡುಗಡೆಗೊಂಡಿದೆ ಈಗಾಗಲೇ ಟೆಂಡರ್ ಕರೆದಿದ್ದಾರೆ ಇನ್ನೇನು ಮೂರ್ನಾಲ್ಕು ತಿಂಗಳಲ್ಲಿ ಈ ರಸ್ತೆಯೂ ಸೆಟ್ಟೇರಲಿದೆ ಎಂದರು.
ಇನ್ನು ಆನೇಕಲ್ ಮಣ್ಣಿನ ಮಗ ಮಾಜಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಮಾತನಾಡಿ ಈಗಾಗಲೇ ಬಿಜೆಪಿ ಹೋರಾಟದ ವಿರುದ್ದ ಪ್ರಕರಣ ದಾಖಲಾಗಿರುವುದನ್ನು ಖಂಡಿಸುತ್ತಲೇ ಮಾತು ಮುಂದುವರೆಸಿದರು

ಆನೇಕಲ್ ಸಂಚಾರ ದಟ್ಟಣೆ ತಗ್ಗಿಸಲು ತಮಿಳುನಾಡಿಂದ ಬರುವ ಭಾರಿ ಬೃಹತ್ ಲಾರಿಗಳನ್ನ ತಡೆದು ಕ್ರಮ ಜರುಗಿಸುತ್ತಿರುವ ಆನೇಕಲ್ ಪೊಲೀಸರು.
09/06/2026

ಆನೇಕಲ್ ಸಂಚಾರ ದಟ್ಟಣೆ ತಗ್ಗಿಸಲು ತಮಿಳುನಾಡಿಂದ ಬರುವ ಭಾರಿ ಬೃಹತ್ ಲಾರಿಗಳನ್ನ ತಡೆದು ಕ್ರಮ ಜರುಗಿಸುತ್ತಿರುವ ಆನೇಕಲ್ ಪೊಲೀಸರು.

09/06/2026

ದೊಮ್ಮಸಂದ್ರ ಗ್ರಾ ಪಂ ಮಾಜಿ ಸದಸ್ಯ ಮೊದಲಿಯಾರ್ ನಾರಾಯಣಸ್ವಾಮಿರವರ ೬೨ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ .
ದೊಮ್ಮಸಂದ್ರ ಚರ್ಚಿನಲ್ಲಿ ತಮ್ಮ ಕುಟುಂಬದಿಂದ ಮಹಿಳೆಯರಿಗೆ ಸೀರೆ, ಕಾಲೇಜು ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸುವ ಮೂಲಕ ವಿನೂತನವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ದಸಂಸ ಪರಿವರ್ತನಾವಾದದ ದೊಮ್ಮಸಂದ್ರ ಮುನಿರಾಜು ಹಾಗು ಗೋಪಸಂದ್ರ ವೆಂಕಟೇಶ್‌ ಮತ್ತಿತರರು ಭಾಗವಹಿಸಿದ್ದರು.

08/06/2026

ಜಾಗತಿಕ ಮಟ್ಟದಲ್ಲಿ ಜೂ15ರಂದು ಕನ್ನಡಿಗರ ವ್ಯಾಪಾರ ವೇದಿಕೆಯಿಂದ ಹೊಸ ಹೆಜ್ಜೆ

08/06/2026

ಕಾಂಗ್ರೆಸ್ ಸಾಧನೆ ಬಗ್ಗೆ ದಾಖಲೆ ಸಮೇತ ಬಹಿರಂಗ ಚರ್ಚೆಗೆ ನಾವು ಸಿದ್ದ ವೇದಿಕೆ ರೆಡಿಯಾಗಲಿ, ಸವಾಲ್..

05/06/2026

ಯಾರೇ ಕೂಗಾಡಲಿ, ಊರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ.... ಅನ್ನೋ ಹಾಗೆ ಯಾರ ಜೀವ ಹೋದ್ರೂ ಪರವಾಯಿಲ್ಲ ನಾವು ಪಾರ್ಕ್ ಮಾಡೋದೇ ಹೀಗೆ... ಏನಿವಾಗ ಎನ್ನುತ್ತಿವೆ... ರಸ್ತೆಯ ಪಾರ್ಕಿಂಗ್ ಜನರು?

05/06/2026

ನಿರುದ್ಯ್ಯೋಗ ಸಮಸ್ಯೆಗೆ ಇಲ್ಲಿದೆ ನೋಡಿ ನವನೂತನ ಆಪ್. ಬೆರಳ ತುದಿಯಲ್ಲಿಯೇ ನಿಮಗಿರುವ ಕೌಶಲ್ಯಕ್ಕೆ ತಕ್ಕ ಬೇಡಿಕೆ ಬೇಕಾದರೆ ಈ 'ಸೇವಾ' ಆಪ್ ಬಳಸಿ...
ಕೆಲಸ ಕೊಡುವ ಇಚ್ಚೆ ಹಾಗು ಸೌಕರ್ಯ ನಿಮಗಿದ್ದು ಸೇವೆ ಒದಗಿಸುವ ಹಾಗಿದ್ದರೆ 'ಪ್ರೊವೈಡರ್' ಆಪ್ ಮೂಲಕ ಎನ್ರೋಲ್ ಆಗಿ ಬಳಸಿ ಇದು ಸಂಪೂರ್ಣ ಉಚಿತ ಆಪ್ ಆಗಿದ್ದು ಗೂಗಲ್ ಪ್ಲೇಸ್ಟೋರ್, .
ಆಪ್ಸ್ಟೋರ್ ನಲ್ಲಿಯೂ ಲಭ್ಯ ಎಲ್ಲ ತರಹದ ಸೇವೆಗಳೂ ಒಂದೇ ಆಪ್ನಲ್ಲಿ. ಕೂಡಲೇ ಬೆರಳ ತುದಿಯಲ್ಲಿಯೇ ಏನೂ ಖರ್ಚಿಲ್ಲದೆ ಉಪಯೋಗಿಸಿ ಹಾಗೆಯೇ ಇನ್ನಿತರರಿಗೂ ಹೇಳಿ... ಉದ್ಯಮಿ ರಾಜಕಾರಣಿ, ತಮ್ಮನಾಯಕನಹಳ್ಳಿ ಡಿ ಶ್ರೀನಿವಾಸ್ ಕರೆ.

05/06/2026

ಆನೇಕಲ್ ಮಿರ್ಜಾ ರಸ್ತೆಯ ಒತ್ತುವರಿಯಿಂದಲೇ ಅಪಘಾತ, ಕೂಡಲೇ ತೆರವುಗೊಳಿಸುತ್ತೇವೆ. ಮಾಜಿ ಅಧ್ಯಕ್ಷ ಎನ್ಎಸ್ ಪದ್ಮನಾಭ್ ಭರವಸೆ.

05/06/2026

ರಸ್ತೆ ಗುಂಡಿ ಮುಚ್ಚಲು ಸ್ವತಃ ರಸ್ತೆಗಿಳಿದ ಆನೇಕಲ್ ಪೊಲೀಸರಿಗೊಂದು ಸೆಲ್ಯೂಟ್

05/06/2026

ಜಿಗಣಿ ಕುಮಾರ್ ಆರ್ಗ್ಯಾನಿಕ್ ಕಾರ್ಖಾನೆ ಕೆಮಿಕಲ್ ರಿಯಾಕ್ಷನ್ ಇಬ್ಬರು ಕಾರ್ಮಿಕರ ಸಾ*ವು.

Address

Chandapura Road, Anekal
Bangalore
562106

Website

Alerts

Be the first to know and let us send you an email when C24kannada posts news and promotions. Your email address will not be used for any other purpose, and you can unsubscribe at any time.

Share