10/03/2026
ನಾಡು ಕಂಡ ಮೂರು ಬೆಳ್ಳಿಚುಕ್ಕಿಗಳು, ನಾಡ ಸ್ವಾಭಿಮಾನಕ್ಕೆ ದಕ್ಕೆ ಆದಾಗ, ನಮ್ಮ ಭೂಮಿಯ ಮೇಲೆ ಪರರು ಬಂದು ನಿಂತಾಗ! ಸ್ವಾಭಿಮಾನದ ಕಹಳೆ ಊದಿ! ವೈರಿ ಎಷ್ಟೆ ಬಲಿಷ್ಠನಿದ್ದರೂ ಹೆದರದೆ ನಾಡ ರಕ್ಷಣೆಗೆ ಪಣತೊಟ್ಟು, ಎಂತೆಂತಹ ಗಂಡೆದೆಯ ಗುಂಡಿಗೆಗಳ ಎದೆಗೊದ್ದು ಕನ್ನಡಿಗರ ಮಾನ ಪ್ರಾಣಗಳು ಆಚಂದ್ರಾದ್ರಿತವಾಗಿ ನಿಲ್ಲುವಂತೆ ಮಾಡಿದ ನಮ್ಮ ಹೆಮ್ಮೆಹ ಸ್ವಾಭಿಮಾನದ ಸಿಂಹಿಣಿಗಳು.
#ಕೆಳದಿಚೆನ್ನಮ್ಮ - ಬಲಿಷ್ಠ ಮೊಗಲ ದೊರೆ ಧರ್ಮಾಂದ ಔರಂಗಜೇಬ್ ಮರಾಠಾ ಸಾಮ್ರಾಜ್ಯದ ಮೇಲೆ ಆಕ್ರಮಣ ಮಾಡಿದಾಗ ಶಿವಾಜಿ ಮಗ ಹೆದರಿ ಓಡಿಬಂದು ಕೆಳದಿ ಚೆನ್ನಮ್ಮನ ಆಶ್ರಯ ಕೇಳಿತ್ತಾನೆ, #ಚೆನ್ನಮ್ಮ ಹೆದರದೆ #ಶಿವಾಜಿಮಗನಿಗೆ (ಛತ್ರಪತಿ ರಾಜಾರಾಮ) ಆಶ್ರಯ ನೀಡುತ್ತಾಳೆ, ಇದನ್ನ ಕೇಳಿ ಔರಂಗಜೇಭ ಸಿಟ್ಟಾಗಿ ೨.೫ ಲಕ್ಷ ದಷ್ಟು ಬಲಿಷ್ಠ ಸೇನೆಯನ್ನು ಕೆಳದಿ ಆಕ್ರಮಣಕ್ಕೆ ಕಳಿಸುತ್ತಾನೆ! ಚೆನ್ನಮ್ಮ ಹೆದರದೆ ಕನ್ನಡ ನಾಡ ಗಂಡುಪಡೆಗೂಡಿ ಔರಂಗಜೇಬನ ಅಷ್ಟೂ ಸೈನ್ಯವನ್ನು ನಿರ್ನಾಮ ಮಾಡಿ ದೆಲ್ಲಿಯ ದೊರೆಗೆ ಕನಸಿನಲ್ಲೂ ಹೆದರಿಕೆ ಹುಟ್ಟುಸಿದ್ದು ಕನ್ನಡಿಗರು ಮಾತ್ರ, ಆಗ ಔರಂಗಜೇಭನ ಕೈಯಲ್ಲಿ ಇಡೀ ಭರತಖಂಡ ತಲೆಭಾಗಿ ವಶವಾಗಿರುತ್ತೆ, ಭರತ ಭೂಮಿಯ ಎಲ್ಲ ಗಂಡಸರು ತಲೆಭಾಗಿದ್ದಾಗ ಒಂದು ಪುಟ್ಟ ಸ್ವತಂತ್ರ ಕನ್ನಡಿಗರ ಸಾಮ್ರಾಜ್ಯ ಎರಡು ಬಾರಿ ದೆಲ್ಲಿಯ ಸುಲ್ತಾನನಿಗೆ ಸೋಲುಣಿಸಿ #ಶಿವಾಜಿ ಮಗನನ್ನ ಕಾಪಾಡಿದ್ದು ಸಾಹಸಿ ಕನ್ನಡಿಗರು, ಮುಂದೆ ಇದೆ ಛತ್ರಪತಿ #ರಾಜಾರಾಮ ಬದುಕಿ ಮಕ್ಕಳು ಮಾಡಿ ಮಾರಾಠ ಸಾಮ್ರಾಜ್ಯವನ್ನು ಬೆಳೆಸಿದ ಅನ್ನುವುದನ್ನ Rajpurohit, Keshav Pandit ಅವರು Sanskrit ದಲ್ಲಿ ಬರೆದಿಟ್ಟಿರುವ ಮರಾಠಿ ಬಕೈರು ಮತ್ತು ಗೀತೆಗಳೆ ಸಾಕ್ಷಿ.
#ಕಿತ್ತೂರಚೆನ್ನಮ್ಮ ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಸೋಲುಣಿಸಿದ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಕರುನಾಡ ಹೆಮ್ಮೆ ನಮ್ಮ #ಚೆನ್ನವತಾಯಿ.
#ಬೆಳವಡಿಮಲ್ಲಮ್ಮ ಗಂಡೆದೆ ವೀರನೆಂದು ಮೆರೆಯುತ್ತ ಸಿಕ್ಕಸಿಕ್ಕಲ್ಲಿ ದೋಚುತ್ತ ದಾರವಾಡದ ಯಾದವಾಡದಲ್ಲಿ ಮಲ್ಲಮ್ಮನ ಸಾಮ್ರಾಜ್ಯದ ಮೇಲೆ ಆಕ್ರಮಣ ಮಾಡಿದಾಗ ಕನ್ನಡಿಗರ ಸ್ವಾಭಿಮಾನದ ಉತ್ತರ ಶಿವಾಜಿಯನ್ನ ತತ್ತರ ಮಾಡಿದ್ದು ಸುಳ್ಳಲ್ಲ.
ಇಂತಹ ಮಹೋನ್ನತ ಮಹಿಳೆಯರನ್ನ ಪಡೆದ ಕನ್ನಡ ನಾಡು ಧನ್ಯ, ಎಲ್ಲರಿಗೂ ಹೆಣ್ಣುಮಕ್ಕಳ ದಿನದ ನಲ್ವಾರೈಕೆಗಳು.
#ಕನ್ನಡಕುಡಿ