V7 Kannada

V7 Kannada ಕರ್ನಾಟಕ ನಂ.1 ನ್ಯೂಸ್ ಚಾನಲ್

25/03/2026
ಭಾಗ್ಯವಂತ ಚಿತ್ರದ ವಾರ ಬಂತಮ್ಮ ಗುರುವಾರ ಬಂತಮ್ಮ... ಹಾಡಿನ ಚಿತ್ರೀಕರಣದ ಮಂತ್ರಾಲಯದಲ್ಲಿ ನಡೆಯುವಾಗ, ಡಾಃ ರಾಜ್ ರವರೊಂದಿಗೆ ನಟ ಹಾಗೂ ಸಹ ನಿರ್...
10/03/2026

ಭಾಗ್ಯವಂತ ಚಿತ್ರದ ವಾರ ಬಂತಮ್ಮ ಗುರುವಾರ ಬಂತಮ್ಮ... ಹಾಡಿನ ಚಿತ್ರೀಕರಣದ ಮಂತ್ರಾಲಯದಲ್ಲಿ ನಡೆಯುವಾಗ, ಡಾಃ ರಾಜ್ ರವರೊಂದಿಗೆ ನಟ ಹಾಗೂ ಸಹ ನಿರ್ದೇಶಕ‌ ಹೊನ್ನವಳ್ಳಿ ಕೃಷ್ಷ ರವರು. ಹಾಡಿನ ಪ್ರಾರಂಭದಲ್ಲೇ ಡಾಃ ರಾಜ್ ರವರು ತುಂಗಾ ನದಿಯಲ್ಲಿ ನೀರಿನಿಂದ ಮೇಲೆಳುವುದನ್ನು ತೋರಿಸುತ್ತಾರೆ.🎬✨🟡🔴
ಭಾಗ್ಯವಂತ' (1981) ಚಿತ್ರದ ಈ ಹಾಡು ಕನ್ನಡ ಚಿತ್ರರಂಗದ ಭಕ್ತಿಪ್ರಧಾನ ಗೀತೆಗಳಲ್ಲಿ ಅತ್ಯಂತ ಪ್ರಸಿದ್ಧವಾದುದು.
ಈ ಚಿತ್ರೀಕರಣದ ಬಗ್ಗೆ ಕೆಲವು ಆಸಕ್ತಿದಾಯಕ ಅಂಶಗಳು ಇಲ್ಲಿವೆ:
ಚಿತ್ರೀಕರಣದ ವಿಶೇಷತೆಗಳು🎬📽️🟡🔴
ಮಂತ್ರಾಲಯದ ತುಂಗಾ ನದಿ: ಹಾಡಿನ ಆರಂಭದಲ್ಲಿ ಡಾ. ರಾಜ್‌ಕುಮಾರ್ ಅವರು ತುಂಗಾ ನದಿಯಲ್ಲಿ ಮುಳುಗಿ ಮೇಲೆ ಬರುವ ದೃಶ್ಯ ಬಹಳ ಭಕ್ತಿಯಿಂದ ಕೂಡಿದೆ. ಆ ಸಮಯದಲ್ಲಿ ನದಿಯಲ್ಲಿ ಸಾಕಷ್ಟು ನೀರಿದ್ದ ಕಾರಣ ದೃಶ್ಯ ಬಹಳ ನೈಜವಾಗಿ ಮೂಡಿಬಂದಿದೆ.🎬🟡🔴
ಹೊನ್ನವಳ್ಳಿ ಕೃಷ್ಣ ಅವರ ಪಾತ್ರ: ನೀವು ಗುರುತಿಸಿದಂತೆ, ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಅವರು ಆ ಸಮಯದಲ್ಲಿ ಸಹ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದರು. ಚಿತ್ರದ ದೃಶ್ಯಗಳಲ್ಲಿ ಅವರು ಅಪ್ಪು (ಪುನೀತ್ ರಾಜ್‌ಕುಮಾರ್) ಜೊತೆಗೆ ಕಾಣಿಸಿಕೊಳ್ಳುತ್ತಾರೆ.🟡🔴🎬
ಮಾಸ್ಟರ್ ಲೋಹಿತ್ (ಪುನೀತ್): ಈ ಹಾಡಿನಲ್ಲಿ ಬಾಲನಟನಾಗಿ ಪುನೀತ್ ರಾಜ್‌ಕುಮಾರ್ ಅವರ ಅಭಿನಯ ಮತ್ತು ಡಾ. ರಾಜ್ ಅವರ ಧ್ವನಿ ಇಂದಿಗೂ ಮಂತ್ರಾಲಯಕ್ಕೆ ಹೋಗುವ ಭಕ್ತರ ಬಾಯಲ್ಲಿ ನೆಲೆಸಿದೆ.
ಹಾಡಿನ ಮಧುರ ನೆನಪು📽️🎬🟡🔴✨
ಈ ಹಾಡನ್ನು ಜಿ.ಕೆ. ವೆಂಕಟೇಶ್ ಅವರು ಸಂಯೋಜಿಸಿದ್ದು, ಅಣ್ಣಾವ್ರ ಗಂಭೀರ ಧ್ವನಿ ರಾಘವೇಂದ್ರ ಸ್ವಾಮಿಗಳ ಮೇಲಿರುವ ಭಕ್ತಿಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದೆ.🎬📽️✨🟡🔴
"ವಾರ ಬಂತಮ್ಮ ಗುರುವಾರ ಬಂತಮ್ಮ... ಸದ್ಗುರು ರಾಘವೇಂದ್ರ ರಾಯರ ಪಾದವ ಪೂಜಿಸ ಬಾರಮ್ಮ..." 🟡🔴🎬
#ವಿದ್ಯಾರ್ಥಿದಿನ #ಎಪಿಜೆಅಬ್ದುಲ್‌ಕಲಾಂ #ಪ್ರೇರಣಸ್ಥಾನ #ಪ್ರೇರಣಸ್ಥಳ #ಕಲಿಕೆಯ #ಪರಂಪರೆ #ಮೈಸೂರಿನ_ಕಥೆಗಳು #ನಮ್ಮ #ನಾಡು #ನಮ್ಮ #ಕರ್ನಾಟಕ #ಸಂಸ್ಕೃತಿ #ಕರುನಾಡ

ನಾಡು ಕಂಡ ಮೂರು‌ ಬೆಳ್ಳಿಚುಕ್ಕಿಗಳು, ನಾಡ ಸ್ವಾಭಿಮಾನಕ್ಕೆ ದಕ್ಕೆ ಆದಾಗ, ನಮ್ಮ ಭೂಮಿಯ ಮೇಲೆ ಪರರು ಬಂದು ನಿಂತಾಗ! ಸ್ವಾಭಿಮಾನದ ಕಹಳೆ ಊದಿ! ವೈರ...
10/03/2026

ನಾಡು ಕಂಡ ಮೂರು‌ ಬೆಳ್ಳಿಚುಕ್ಕಿಗಳು, ನಾಡ ಸ್ವಾಭಿಮಾನಕ್ಕೆ ದಕ್ಕೆ ಆದಾಗ, ನಮ್ಮ ಭೂಮಿಯ ಮೇಲೆ ಪರರು ಬಂದು ನಿಂತಾಗ! ಸ್ವಾಭಿಮಾನದ ಕಹಳೆ ಊದಿ! ವೈರಿ ಎಷ್ಟೆ ಬಲಿಷ್ಠನಿದ್ದರೂ ಹೆದರದೆ ನಾಡ ರಕ್ಷಣೆಗೆ ಪಣತೊಟ್ಟು, ಎಂತೆಂತಹ ಗಂಡೆದೆಯ ಗುಂಡಿಗೆಗಳ ಎದೆಗೊದ್ದು ಕನ್ನಡಿಗರ ಮಾನ ಪ್ರಾಣಗಳು ಆಚಂದ್ರಾದ್ರಿತವಾಗಿ ನಿಲ್ಲುವಂತೆ ಮಾಡಿದ ನಮ್ಮ ಹೆಮ್ಮೆಹ ಸ್ವಾಭಿಮಾನದ ಸಿಂಹಿಣಿಗಳು.

#ಕೆಳದಿಚೆನ್ನಮ್ಮ - ಬಲಿಷ್ಠ ಮೊಗಲ ದೊರೆ ಧರ್ಮಾಂದ ಔರಂಗಜೇಬ್ ಮರಾಠಾ ಸಾಮ್ರಾಜ್ಯದ ಮೇಲೆ ಆಕ್ರಮಣ ಮಾಡಿದಾಗ ಶಿವಾಜಿ ಮಗ ಹೆದರಿ ಓಡಿಬಂದು ಕೆಳದಿ ಚೆನ್ನಮ್ಮನ ಆಶ್ರಯ ಕೇಳಿತ್ತಾನೆ, #ಚೆನ್ನಮ್ಮ ಹೆದರದೆ #ಶಿವಾಜಿಮಗನಿಗೆ (ಛತ್ರಪತಿ ರಾಜಾರಾಮ) ಆಶ್ರಯ ನೀಡುತ್ತಾಳೆ, ಇದನ್ನ ಕೇಳಿ ಔರಂಗಜೇಭ ಸಿಟ್ಟಾಗಿ ೨.೫ ಲಕ್ಷ ದಷ್ಟು ಬಲಿಷ್ಠ ಸೇನೆಯನ್ನು ಕೆಳದಿ ಆಕ್ರಮಣಕ್ಕೆ ಕಳಿಸುತ್ತಾನೆ! ಚೆನ್ನಮ್ಮ ಹೆದರದೆ ಕನ್ನಡ ನಾಡ ಗಂಡುಪಡೆಗೂಡಿ ಔರಂಗಜೇಬನ ಅಷ್ಟೂ ಸೈನ್ಯವನ್ನು ನಿರ್ನಾಮ ಮಾಡಿ ದೆಲ್ಲಿಯ ದೊರೆಗೆ ಕನಸಿನಲ್ಲೂ ಹೆದರಿಕೆ ಹುಟ್ಟುಸಿದ್ದು ಕನ್ನಡಿಗರು ಮಾತ್ರ, ಆಗ ಔರಂಗಜೇಭನ ಕೈಯಲ್ಲಿ ಇಡೀ ಭರತಖಂಡ ತಲೆಭಾಗಿ ವಶವಾಗಿರುತ್ತೆ, ಭರತ ಭೂಮಿಯ ಎಲ್ಲ ಗಂಡಸರು ತಲೆಭಾಗಿದ್ದಾಗ ಒಂದು ಪುಟ್ಟ ಸ್ವತಂತ್ರ ಕನ್ನಡಿಗರ ಸಾಮ್ರಾಜ್ಯ ಎರಡು ಬಾರಿ ದೆಲ್ಲಿಯ ಸುಲ್ತಾನನಿಗೆ ಸೋಲುಣಿಸಿ #ಶಿವಾಜಿ ಮಗನನ್ನ ಕಾಪಾಡಿದ್ದು ಸಾಹಸಿ‌ ಕನ್ನಡಿಗರು, ಮುಂದೆ ಇದೆ ಛತ್ರಪತಿ #ರಾಜಾರಾಮ ಬದುಕಿ ಮಕ್ಕಳು‌ ಮಾಡಿ ಮಾರಾಠ ಸಾಮ್ರಾಜ್ಯವನ್ನು ಬೆಳೆಸಿದ ಅನ್ನುವುದನ್ನ Rajpurohit, Keshav Pandit ಅವರು Sanskrit ದಲ್ಲಿ ಬರೆದಿಟ್ಟಿರುವ ಮರಾಠಿ ಬಕೈರು ಮತ್ತು ಗೀತೆಗಳೆ ಸಾಕ್ಷಿ.

#ಕಿತ್ತೂರಚೆನ್ನಮ್ಮ ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಸೋಲುಣಿಸಿದ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಕರುನಾಡ ಹೆಮ್ಮೆ ನಮ್ಮ #ಚೆನ್ನವತಾಯಿ.

#ಬೆಳವಡಿಮಲ್ಲಮ್ಮ ಗಂಡೆದೆ ವೀರನೆಂದು ಮೆರೆಯುತ್ತ ಸಿಕ್ಕಸಿಕ್ಕಲ್ಲಿ ದೋಚುತ್ತ ದಾರವಾಡದ ಯಾದವಾಡದಲ್ಲಿ ಮಲ್ಲಮ್ಮನ ಸಾಮ್ರಾಜ್ಯದ ಮೇಲೆ ಆಕ್ರಮಣ ಮಾಡಿದಾಗ ಕನ್ನಡಿಗರ ಸ್ವಾಭಿಮಾನದ ಉತ್ತರ ಶಿವಾಜಿಯನ್ನ ತತ್ತರ ಮಾಡಿದ್ದು ಸುಳ್ಳಲ್ಲ.

ಇಂತಹ ಮಹೋನ್ನತ ಮಹಿಳೆಯರನ್ನ ಪಡೆದ ಕನ್ನಡ ನಾಡು ಧನ್ಯ, ಎಲ್ಲರಿಗೂ ಹೆಣ್ಣುಮಕ್ಕಳ ದಿನದ ನಲ್ವಾರೈಕೆಗಳು‌.

#ಕನ್ನಡಕುಡಿ

Spectacular win for India over england in the semifinal, congratulations and all the best for the finals !
05/03/2026

Spectacular win for India over england in the semifinal, congratulations and all the best for the finals !

28/02/2026

ಇಂದು ಪೀಯೂಸಿ ಎರಡನೆ ವರುಷದ ಪರೀಕ್ಷೆಗೆ ಹೋಗುವ ಪ್ರತಿ ಮಗವಿಗೂ ಹಾರ್ದಿಕ ಶುಭಾಶಯಗಳು .ನಿರ್ಭೀತಿಯಿಂದ ಬರೆದು ತೇರ್ಗಡೆಯಾಗರಿ.♥️♥️🌷🌷

21/02/2026

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆಯಲ್ಲಿರುವ ಹೆಸರುಗಳು: ಕೆ ಅಣ್ಣಾಮಲೈ, ಸಂಬಿತ್ ಪಾತ್ರ, ರವೀಂದ್ರ ರೈನಾ, ರಾಮ್ ಮಾಧವ್ ಮತ್ತು ಅರವಿಂದ್ ಮೆನನ್. 🚩

Address

Shanthi Nagar
Bangalore

Alerts

Be the first to know and let us send you an email when V7 Kannada posts news and promotions. Your email address will not be used for any other purpose, and you can unsubscribe at any time.

Share