09/07/2021
ದುನಿಯಾ ವಿಜಿ ತಾಯಿ ಕೋಮಾದಲ್ಲಿದ್ದಾಗ ನವೀನ್ ಸಜ್ಜು ಮಾಡಿದ್ದೇನು?
ನಟ ದುನಿಯಾ ವಿಜಯ್ ತಾಯಿ ಗುರುವಾರ ವಿಧಿವಶರಾಗಿದ್ದು, ಅವರನ್ನು ಗಾಯಕ ನವೀನ್ ಸಜ್ಜು ಒಳಿತು ಮಾಡು ಮನಸು, ನೀ ಇರೋದು ಮೂರೇ ದಿವಸ ಹಾಡಿನ ಮೂಲಕ ಸ್ಮರಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಘಟನೆ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ನವೀನ್ ಸಜ್ಜು ವಿಜಯ್ ತಾಯಿ ಅವರನ್ನು ನೆನೆದಿದ್ದಾರೆ, ಮನೆಗೆ ಹೋದಾಗಲೆಲ್ಲಾ ಅಮ್ಮ ಮಗನೇ ಎಂದೆ ಬಾಯಿ ತುಂಬಾ ಕರೆಯುತ್ತಿದ್ದರು. ನಮ್ಮನ್ನು ಅವರು ನೋಡಿಕೊಳ್ಳುತ್ತಿದ್ದ ಪ್ರೀತಿಗೆ ಸರಿಸಾಟಿಯೇ ಇಲ್ಲ.. ಅವರಿಗೆ ನಾನು ಹಾಡುವ 'ಒಳಿತು ಮಾಡು ಮನುಸ, ನೀ ಇರೋದು ಮೂರೇ ದಿವಸ..' ಹಾಡೆಂದರೆ ಬಹಳ ಇಷ್ಟ.. ಅವರಿಗೆ ಇಷ್ಟವಾದಾಗಲೆಲ್ಲ ಈ ಹಾಡು ಹೇಳಪ್ಪ ಎಂದು ಕೇಳುತ್ತಿದ್ದರು. ಹಾಡು ಕೇಳಿ ಮೌನವಾಗಿ ಕಣ್ಣಂಚಲ್ಲಿ ನೀರು ತಂದುಕೊಳ್ಳುತ್ತಿದ್ದರು ಎಂದು ಬರೆದಿದ್ದಾರೆ. ಇನ್ನು, ಕೆಲವು ದಿನಗಳ ಹಿಂದೆ ಕೋಮಾ ಸ್ಥಿತಿಗೆ ತೆರಳಿದ ಅಮ್ಮ ಯಾರನ್ನು ಗುರುತು ಹಿಡಿಯುವ, ಮಾತಾಡುವ ಶಕ್ತಿ ಕಳೆದುಕೊಂಡಿದ್ದರು. ಒಮ್ಮೆ ವಿಜಿಯಣ್ಣ ವಿಡಿಯೋ ಕಾಲ್ ಮಾಡಿ ಈ ಹಾಡನ್ನು ಹಾಡುವಂತೆ ಹೇಳಿದರು. ಬಹುಶಃ ಹಾಡನ್ನು, ನನ್ನನ್ನು ಗುರುತಿಸುತ್ತಾರಾ? ಎಂಬ ಆಸೆಯಿಂದ ಹೀಗೆ ಮಾಡಿದ್ದರು ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ