Samatha News

Samatha News YouTube ಚಾನಲ್ bell 🔔 ಬಟನ್ ಕ್ಲಿಕ್ ಮಾಡಿ it,s a news portal's

15/05/2023
17/06/2022

*ಮಾನ್ಯ ಮುಖ್ಯಮಂತ್ರಿ ಗಳಿಗೊಂದು ಬಹಿರಂಗ ಪತ್ರ*

ಪ್ರಜಾಪ್ರಭುತ್ವದ ಮಾನ್ಯ ಮಹಾನಾಯಕರೆ ಕನ್ನಡ ಸಾಹಿತ್ಯಕ್ಕೆ ಸುಮಾರು ಮೂರು ವರೆಸಾವಿರ ವರ್ಷದ ಇತಿಹಾಸವಿದೆ. ನೆಲಜಲ ಸಂಸ್ಕೃತಿಗೆ ಮನಸೋತಿರುವ ಎಷ್ಟೋ ಮನಸುಗಳು ಈ ಕನ್ನಡ ನೆಲದಲ್ಲಿ ನೆಲೆಸಿವೆ. ಕನ್ನಡ ನಾಡು ಕಾವೇರಿ ನದಿಯಿಂದ ಶುರುವಾಗಿ ವಿಶ್ವದ್ಯಂತ ಪಸರಿಸಿದೆ
ನಮ್ಮ ನಾಡಿಗೊಂದು ತಮ್ಮದೇ ಆದ ಇತಿಹಾಸವಿದೆ. ಇಂತಹ ಇತಿಹಾಸವನ್ನು ಸೃಷ್ಠಿಸಿರುವ ಮಹಾನ್ ನಾಯಕರನ್ನು ಅವಮಾಣಿಸಿರುವ ವಿಕೃತ ಮನಸಿರುವ ರೋಹಿತ್ ಚಕ್ರತೀರ್ಥನೆಂಬ ಅವಿವೇಕಿಯನ್ನು ಮುಗ್ದ ಮಕ್ಕಳ ಪಠ್ಯದ ಪರಿಷ್ಕರಣೆಗಾಗಿ ಸರ್ವಾಧಿಕಾರಿ ಅಧ್ಯಕ್ಷ ನನ್ನಾಗಿ ಮಾಡಿರುವುದು ಎಷ್ಟು ಸರಿ???
ನಾಡಗಿತೆಯನ್ನು ಹೆಂಡದಂಗಡಿಗೆಗಳಿಗೆ ಹೋಲಿಸಿ,ಕನ್ನಡ ಬಾವುಟವನ್ನು ತನ್ನ ಲಂಗೋಟಿಗೆ ಹೋಲಿಸಿ ಬರೆದ ರೋಹಿತ್ ಚಕ್ರತೀರ್ಥ ನಿನಗೊಂದು ನಮ್ಮ ಧಿಕ್ಕಾರ.
ಈ ನಾಡಿನ ಅಸ್ಮಿತೆಯನ್ನು ಉಳಿಸಿದ ಕುವೆಂಪು ಅವರು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ನಾಯಕ ಬಸವಣ್ಣನವರು, ನಾರಾಯಣ ಗುರು, ಪೆರಿಯಾರ್,ಬಾಬಾ ಸಾಹೇಬ್ ಅಂಬೇಡ್ಕರ್ ಹಿಹೆ ಮುಂತಾದ ಅನೇಕ ನಾಯಕರ ಪಠ್ಯ ಕಿತ್ತುಹಾಕಿ ಪರಿಷ್ಕರಣೆ ಮಾಡಿ ಅವಮಾನಿಸಿದ್ದಾನೆ.
ಈತ ಶಿಕ್ಷಕನಲ್ಲ, ಇತಿಹಾಸತಜ್ಞನಲ್ಲ, ಸಂಶೋಧಕನಲ್ಲ,ಸಾಹಿತಿಯಲ್ಲ, ವಿದ್ವಾಂಸನಲ್ಲ,ಇವನೊಬ್ಬ ಯೂಟ್ಯೂಬ್ ಟ್ವಿಟ್ಟರ್, ಟ್ರೋಲಗಿರಾಕಿ ಒಬ್ಬ ಟ್ಯುಟೋರಿಯಲ್ ಗಿರಾಕಿಯನ್ನು ತಂದು ಘಟನೋತ್ತರ ಅನುಮತಿ ನೀಡಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಕೂರಿಸಿದ್ದೀರಿ.ತಾವು ಹೇಳುತ್ತೀರಿ. ಧರ್ಮದ ವಿಚಾರ ಬಂದಾಗ ಸರ್ಕಾರ ಕ್ರಿಯೆಗೆ ಪ್ರತಿ ಕ್ರಿಯೆ ಶೀಘ್ರ ಎನ್ನುತ್ತೀರಿ.ಈ ನಾಡಿನ ಧ್ವಜ,ನಾಡಗೀತೆ, ನಾಡಿನ ನಾಯಕರುಗಳನ್ನು ಅವಮಾನಿಸಿರುವ ಈ ಟ್ರೋಲ್ ಗಿರಾಕಿ ಚಕ್ರಿಗೆ ನೀವು ಕೊಟ್ಟ ಶಿಕ್ಷೆ ಏನು?
ಈ ಹಿಂದೆ ಇದ್ದ ಬರಗೂರು ಸಮಿತಿಯಲ್ಲಿ ಪರಿಷ್ಕರಣೆ ಗೊಂಡ ಮಾದರಿ ನೋಡಿದರೆ ಸುಮಾರು7 ಹಂತಗಳಲ್ಲಿ ಚರ್ಚೆಯಾಗಿ ಅಂತಿಮವಾಗಿ ಪಠ್ಯ ಹೊರತಂದು ಮಕ್ಕಳ ಹಿತ ಚಿಂತನೆ ಬಯಸಿತ್ತು. ರೋಹಿತ್ ಚಕ್ರತೀರ್ಥನೆಂಬ ಅವಿವೇಕಿಯ ಎಕಾ ಚಕ್ರಾದಿ ಪತ್ಯದಲ್ಲಿ ಮುಗ್ದ ಮಕ್ಕಳ ಪಠ್ಯವನ್ನು, ಕುಡಿದ ಅಮಲಿನಲ್ಲಿ ಪರಿಸ್ಕರಿಸಿ ವಿಕೃತ ವಾಗಿ ಆನಂದಿಸಿದಾನೆ. ಸೌಹಾರ್ದತೆಯ,ಶಾಂತಿಯ ಸಹಬಾಳ್ವೆಯ,ದೇಶಕಟ್ಟುವ,ನಾಡುನಿರ್ಮಿಸುವ ನೆಲ ಜಲ, ಸಂಸ್ಕೃತಿಯನ್ನು ಸಾರುವ, ಸಾಲು ಸಾಲುಗಳ ಬರೆದ ದೇವನೂರು ಮಹಾದೇವರನ್ನು ಸರ್ಕಾರಿ ಸಾಹಿತಿಯೆಂದು ಹಂಸಲೇಖ, ಅನುಪಮ ನಿರಂಜನ, ಸಾರ ಅಬೂಬಕ್ಕರ್,ಪೆರಿಯಾರ್, ನಾರಾಯಣ ಗುರು,ಸಾವಿತ್ರಿ ಬಾಪುಲೆ, ನಾಲ್ವಡಿ ಒಡೆಯರ್, ಟಿಪ್ಪುಸುಲ್ತಾನ್, ಮುಂತಾದ ಹೆಸರಾಂತ ಸಾಲು ಸಾಲು ನಾಯಕರ ಪಠ್ಯ ವನ್ನು ತಿರುಚಿ,ಕಿತ್ತುಹಾಕಿ ಅವಮಾನಿಸಿರುವ ಸಾಮಾಜಿಕ ಜಾಲತಾಣಗಳಲ್ಲಿಟ್ರೋಲರ್ ರೋಹಿತ್ ಚಕ್ರತೀರ್ಥಗೆ ನಾಡಿನ ಜನರು ನಿಜವಾಗಿ ಕ್ಷಮಿಸಲಾರರು
27 ಉಪಸಮಿತಿಗಳು,172 ವಿಷಯತಜ್ಞರು,30ಕ್ಕೂ ಹೆಚ್ಚು ಸಮಾಲೋಚನೆ ಸಭೆ ನಡೆಸಿ ಸಲಹೆಗಳನ್ನು ಪಡೆದುಕೊಂಡು ಪಠ್ಯ ಪರಿಸ್ಕರಿಸಿದ ಬರಗೂರು ಸಮಿತಿಯ ಪಠ್ಯವನ್ನು ಕೈಬಿಟ್ಟಿರುವುದು ಎಷ್ಟು ಸಮಂಜಸ??
ಎಡಪಂಥೀಯ,ಬಲಪಂಥೀಯ ಗುಂಗಿನಲ್ಲಿ ಶಿಕ್ಷಣಪಂಥೀಯವನ್ನು ಅವಮಾನಿಸಿರುವುದು ಕನ್ನಡ ಅಸ್ಮಿತೆಯನ್ನು ಉಳಿಸಿಕೊಳ್ಳದೆ ಆಯಾ ವಯೋಮಾನದ
ಮಕ್ಕಳ ಮಾನಸಿಕ ಪ್ರಭಾವ ಬಿರುವುದು ಆರೋಗ್ಯಕರವೇ??
ನಾಡೋಜ ಬರಗೂರು ರಾಮಚಂದ್ರಪ್ಪನವರ ಸಮಿತಿಯನ್ನು ಬರಗೂರು ಗ್ಯಾಂಗ್ ಎಡಪಂಥೀಯ,ತುಕಡೆ ತುಕಡೆ ಗ್ಯಾಂಗ್, ಎಂದು ಮಿಥ್ಯಆರೋಪಗಳನ್ನು ಮಾಡಿ
ಬಸವಣ್ಣನವರು ನುಡಿದರೆ ಮುತ್ತಿನ ಹಾರದಂತಿರಬೇಕು. ಕುವೆಂಪುರವರ ಅಖಂಡ ಕನ್ನಡದ ಅಸ್ಮಿತೆಗೆ ಕಾರಣರಾದವರು. ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದ ಸಂವೇಧನೆಗೆ ಈ ಎಲ್ಲಾ ಆದರ್ಶಗಳಿಗೆ ವಿರುದ್ದವಾಗಿ ನಡೆದುಕೊಂಡು ಈ ನಾಡಿಗೆ ದ್ರೋಹವೆಸಗಿರುವ ರೋಹಿತ್ ಚಕ್ರತೀರ್ಥ ನಿನಗೊಂದು ನಮ್ಮ ಸಂಘಟನೆಯಿಂದ ಮತ್ತೊಂದು ಧಿಕ್ಕಾರವಿರಲಿ.
ನಮ್ಮ ಮಕ್ಕಳು ಓದುವ ಪುಸ್ತಕವನ್ನು ಕೆಡಿಸಿ ಪುರೋಹಿತ, ರೊಹಿತ್ ಚಕ್ರತೀರ್ಥ ದೇಶಭಕ್ತಿ ನಾಡಪ್ರೇಮ, ನುಡಿಪ್ರೇಮ ಸಾರುವ ಕುವೆಂಪು ನಾಡಗೀತೆಯನ್ನು ಇಡೀ ನಾಡೇ ಒಪ್ಪಿಕೊಂಡಿದೆ. ನಾಡಗೀತೆಗಳ ಸಾಲನ್ನು ಹೆಂಡದಂಗಡಿಗಳು, ಮಟನ್ ಅಂಗಡಿಗಳಾಗಿವೆ. ಕುಡಿಯೋಣ, ತಿನ್ನೋಣ ಎಂದು ನೋಡಿ, ಕೇಳಿ, ಬೆಂಬಲಿಸಿ. ವಿಕೃತ ಮನಸ್ಸಿನಿಂದ ಆನಂದಿಸುತ್ತಾನೆ. ಈ ಚಕ್ರತೀರ್ಥ ದೇಶದ್ರೋಹ, ನಾಡದ್ರೋಹ, ನಾಡದ್ವಜವನ್ನು ತನ್ನ ಒಳ ಉಡುಪಿಗೆ ಹೋಲಿಸಿ ಬರೆದನು. ಎಲ್ಲಿದೆ ಪ್ರಜಾಪ್ರಭುತ್ವೀಕರಣ?

ಬೇಡಿಕೆಗಳು :
ನಾಡಗೀತೆಯನ್ನು ಅವಮಾನಿಸುವ ರೋಹಿತ್ ಚಕ್ರತೀರ್ಥನನ್ನು ಬಂಧಿಸಿ ಶಿಕ್ಷಿಸುವುದು.
ದೇಶದ್ರೋಹದ ಅಡಿಯಲ್ಲಿ ಕ್ರಿಮಿನಲ್ ಕೇಸ್ ಹಾಕುವುದು.
ಈ ಹಿಂದೆ ಇದ್ದ ಬರಗೂರು ಸಮಿತಿಯ ಪಠ್ಯವನ್ನು ಮುಂದುವರೆಸಬೇಕು.
ಶಿಕ್ಷಣ ಮಂತ್ರಿಯಾದ ಶ್ರೀ ನಾಗೇಶ್‌ರವರು ಕೂಡಲೇ ರಾಜೀನಾಮೆ ನೀಡಬೇಕು.

ಜಿ.ಗೋಪಾಲ್
ಸಾಮಾಜಿಕ ಹೋರಾಟಗಾರರು

19/05/2022

ಆತ್ಮೀಯರೇ ನಮಸ್ಕಾರ,

"ನುಡಿ ನಮನ"

ಹಿರಿಯ ಸಮಾಜವಾದಿಯೊಬ್ಬರ ನಿರ್ಗಮನ

ಭ್ರಷ್ಟರು ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ಧ ಕೊನೆಯವರೆಗೂ ಮಾತುˌ ಬರಹಗಳಲ್ಲಿ ಸಿಡಿಯುತ್ತಲೇ ಇದ್ದ ಹಿರಿಯ ಸಾಹಿತಿ ಡಿ.ಎಸ್.ನಾಗಭೂಷಣ ದೀರ್ಘ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಗ್ರಾಮವೊಂದರಲ್ಲಿ ಹುಟ್ಟಿ ಬೆಂಗಳೂರು ದಿಲ್ಲಿ ಮೈಸೂರು ಚಿತ್ರದುರ್ಗದಲ್ಲಿ ಬೆಳೆದು ಶಿವಮೊಗ್ಗದಲ್ಲಿ ಅಂತಿಮವಾಗಿ ನೆಲೆ ಕಂಡವರು. ತಮ್ಮ ಕೃತಿ ಭಾಷಣ ಉಪನ್ಯಾಸ ಮತ್ತು ಸಮಾಜವಾದಿ ಅಧ್ಯಯನ ಶಿಬಿರಗಳಿಂದ ರಾಜ್ಯದ ಯುವಜನರು ವಿದ್ಯಾರ್ಥಿಗಳು ಮತ್ತು ಕಲಾವಿದರ ನೆಚ್ಚಿನ ಗುರುಗಳಾಗಿದ್ದರು.

ಜೆ.ಪಿ.,ಲೋಹಿಯಾ, ಗಾಂಧೀಜಿ,ಬುದ್ಧ, ಕುವೆಂಪು, ಬಸವಣ್ಣ,ರಮಣ ಮಹರ್ಷಿಗಳ ಸಾಹಿತ್ಯ ಮತ್ತು ವಿಚಾರಗಳಿಂದ ಪ್ರಭಾವಿತರಾಗಿದ್ದ ಹಿರಿಯ ಸಾಹಿತಿ. ಶಾಲಾ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಲಿಲ್ಲವೆಂದು ರಾಜ್ಯೋತ್ಸವ ಪ್ರಶಸ್ತಿಯನ್ನು ನಿರಾಕರಿಸಿದ್ದರು.

ಬಾಬಾ ಸಾಹೇಬರ ಬಗ್ಗೆ ಅತ್ಯಂತ ಗೌರವ ಹೊಂದಿದ್ದರು. ಅಂಬೇಡ್ಕರ್ ಹೆಸರು ಹೇಳಿಕೊಂಡು, ಅಂಬೇಡ್ಕರ್ರವರ ಆದರ್ಶಗಳನ್ನು ಗಾಳಿಗೆ ತೂರಿಕೊಂಡು ಬದುಕುತ್ತಿರುವವರ ಬಗ್ಗೆ ಬೇಸರ ಹೊಂದಿದ್ದರು. ಅದೇ ರೀತಿ ಗಾಂಧಿಯವರ ಆದರ್ಶಗಳನ್ನು ಗಾಳಿಗೆ ತೂರಿರುವ ಕಾಂಗ್ರೆಸ್ಸಿಗರು, ಮಜಾವಾದಿಗಳಾಗಿರುವ ಸಮಾಜವಾದಿಗಳ ಬಗ್ಗೆಯೂ ವ್ಯಂಗ್ಯ ವಾಡುತ್ತಿದ್ದರು.

ಸ್ನಾತಕೋತ್ತರ,PhD ವಿದ್ಯಾರ್ಥಿನಿಯರನ್ನು ಶೋಷಣೆಗೆ ಒಳಪಡಿಸುವ ಯೂನಿವರ್ಸಿಟಿ ಮೇಷ್ಟ್ರು ಗಳಿಗಿಂತ ಸಾವಿರ ಪಾಲು ದೊಡ್ಡ ಮನುಷ್ಯ ಡಿ ಎಸ್ ನಾಗಭೂಷಣ. MSc,M phil., mathematics ಓದಿದ್ದರೂ ಅವರ ಒಲವು ಕನ್ನಡ ಸಾಹಿತ್ಯ, ವೈಚಾರಿಕ ಬರಹಗಳ ಕಡೆಗೆ.

ಆಕಾಶವಾಣಿಯಲ್ಲಿ ಎರಡೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಶ್ರೀ ಜಿಎಸ್ ಶಿವರುದ್ರಪ್ಪನವರೊಂದಿಗೆ ಅತ್ಯಂತ ಪ್ರೀತಿಪೂರ್ವಕ ಬಾಂಧವ್ಯವನ್ನು ಹೊಂದಿದ್ದರು. ಜೆಪಿ ಮತ್ತು ಲೋಹಿಯಾ ವಿಚಾರಗಳಿಂದ ಉದಿಸಿದ ಪ್ರಮುಖ ರಾಜಕಾರಣಿಗಳಾದ ಜಾರ್ಜ್ ಫರ್ನಾಂಡಿಸ್ ಮತ್ತು ಶರದ್ ಯಾದವ್ ಅವರ ಸ್ನೇಹವನ್ನು ಹೊಂದಿದ್ದರು. ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಪ್ರೊ. ಬಿ ಕೃಷ್ಣಪ್ಪ, ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಲಂಕೇಶ್, ತೇಜಸ್ವಿ ಮುಂತಾದವರೊಂದಿಗೆ ಆಪ್ತ ಸ್ನೇಹ ಒಡನಾಟ ಸಂಘಟನಾ ಬಾಂಧವ್ಯವನ್ನು ಹೊಂದಿದ್ದರು.

ಬುದ್ಧ, ಗಾಂಧಿ, ಲೋಹಿಯಾ ರವರ ಚಿಂತನೆ ಗಳನ್ನು ರಾಜ್ಯದ ಯುವ ಜನತೆಗೆ, ವಿದ್ಯಾರ್ಥಿಗಳಿಗೆ, ಮೇಷ್ಟ್ರುಗಳಿಗೆ ಹಂಚುತ್ತಿದ್ದ ಹಿರಿಯರು. ತುಸು ಕೋಪಿಷ್ಟ ಎನ್ನುವುದನ್ನು ಹೊರತು ಪಡಿಸಿದರೆ ಪ್ರಾಮಾಣಿಕ ಪಾರದರ್ಶಕ ಜೀವನ ನಡೆಸಿದವರು. ಜಯಪ್ರಕಾಶ್ ನಾರಾಯಣರ ಜೈಲ್ ಡೈರಿ ಕೃತಿಯನ್ನು ಸಶಕ್ತವಾಗಿ ಕನ್ನಡೀಕರಿಸಿದ್ದರು. ಲೋಹಿಯಾ ಕೈಪಿಡಿ, ನಮ್ಮ ಸಮಾಜವಾದಿಗಳು, ಕುವೆಂಪು ಒಂದು ಪುನರ್ ಅನ್ವೇಷಣೆ ಮುಂತಾದವು ಇವರ ಮಹತ್ವದ ಕೃತಿಗಳು. "ಹೊಸ ಮನುಷ್ಯ"ಎಂಬ ಮಾಸಪತ್ರಿಕೆಯನ್ನು ಸಂಪಾದಿಸಿ, ಪ್ರಕಟಿಸಿ, ಪ್ರಕಾಶಿಸುತ್ತಿದ್ದರು.

ಸಿದ್ದರಾಮಯ್ಯನವರ ಸರ್ಕಾರ ಕೊಡಮಾಡಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು, ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಿಲ್ಲವೆಂದು ಸ್ವೀಕರಿಸಲು ನಿರಾಕರಿಸಿರುತ್ತಾರೆ.

ಮಹಾತ್ಮ ಗಾಂಧಿಯವರ ಕುರಿತ "ಗಾಂಧಿ ಕಥನ" ಎಂಬ ಅವರ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಶ್ರೀ ಕುವೆಂಪು ಪ್ರಣಿತ ಮಂತ್ರಮಾಂಗಲ್ಯದ ರೀತಿಯಲ್ಲಿ ಸತಿಪತಿಗಳಾಗಿದ್ದ ಶ್ರೀ ಡಿ ಎಸ್ ಎನ್ ಮತ್ತು ಸವಿತಾ ಮೇಡಂ ರವರು ನೂರಾರು ಮಂತ್ರಮಾಂಗಲ್ಯ ಮದುವೆಗಳನ್ನು ಮಾಡಿಸಿದ್ದಾರೆ. ಪತ್ನಿ ಶ್ರೀಮತಿ.ಸವಿತಾ ನಾಗಭೂಷಣ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಯಿತ್ರಿ.

ಡಿ ಎಸ್ ನಾಗಭೂಷಣ ರವರು ಆಯೋಜಿಸುತ್ತಿದ್ದ ಸಮಾಜವಾದಿ ಅಧ್ಯಯನ ಶಿಬಿರಗಳಲ್ಲಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡುವ ಅಭ್ಯಾಸವನ್ನು ಸವಿತಾ ಮೇಡಂ ಹೊಂದಿದ್ದಾರೆ.

ಬೆಂಗಳೂರಿನ ನಮ್ಮ ಸರ್ವೋದಯ ಪ್ರತಿಷ್ಠಾನ ಮತ್ತು ಸಮಾಜವಾದಿ ಅಧ್ಯಯನ ಕೇಂದ್ರಕ್ಕೆ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದ ಹಿರಿಯರು.

ಸಮಾಜವಾದಿ ಸಂಗಾತಿಗಳು, ಸ್ನೇಹಿತರು ನಾಗಭೂಷಣ ರವರ ಪಥದಲ್ಲಿ ಸಾಗುವ ಮೂಲಕ ಸಭ್ಯ ಸೌಹಾರ್ದ ಸಮಾಜ ನಿರ್ಮಾಣ ಕಾರ್ಯದಲ್ಲಿ ಮುಂದುವರೆಯೋಣ.

ಗೌರವಪೂರ್ಣ ವಿದಾಯ ಶ್ರೀ ಡಿ ಎಸ್ ಎನ್ ಗುರುಗಳಿಗೆ.

- ಜಿ ಟಿ ನರೇಂದ್ರ ಕುಮಾರ್
ವಕೀಲರು ಹಾಗೂ ಸಂಚಾಲಕರು
ಸರ್ವೋದಯ ಪ್ರತಿಷ್ಠಾನ ಮತ್ತು ಸಮಾಜವಾದಿ ಅಧ್ಯಯನ ಕೇಂದ್ರ ಬೆಂಗಳೂರು.

ಜಂಗಮವಾಣಿ : 94487 30727

20/04/2022

ಸಿಡಿಲಿನ ಆಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ..


ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಸಿಡಿಲನ್ನು ತಪ್ಪಿಸಲಾಗದು. ಆದರೆ. ಅದರಿಂದಾಗುವ ಸಾವು ನೋವು ಗಳನ್ನು ತಪ್ಪಿಸಬಹುದು.

#ರಕ್ಷಣೆ_ಹೇಗೆ......?

📌 ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ.ನಿಲ್ಲ ಬೇಡಿ

📌 ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ,ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.

📌 ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು.(ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.)

📌 ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿರಿ.

📌 ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ, (ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷನನ್ನೇ ಆರಿಸಿಕೊಳ್ಳುತ್ತದೆ.)

📌 ಕೆರೆಯಲ್ಲಿ ಈಜುವುದು,ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ .

📌 ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ.

📌 ತಂತಿ ಬೇಲಿ, ಬಟ್ಟೆ ಒಣ ಹಾಕುವ ತಂತಿ, ಇವುಗಳಿಂದ ದೊರವಿರಿ.

📌 ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸನ್ನು ಸ್ವಚ್ಛ ಮಾಡುವ ಸಾಹಸ ಬೇಡ.

📌 ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.

📌 ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಬಳಕೆ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಕೆಲಸವೂ ಬೇಡ.

📌 ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.

📌 ಮಳೆಯ ಸಂಧರ್ಭದಲ್ಲಿ ಕಂಪ್ಯೂಟರ್ ಗಳಿಂದ ದೂರ ಇರಿ

📌 ಮನೆಯ ಕಾಂಕ್ರೀಟ್ ಗೋಡೆಗಳನ್ನು ಸ್ಪೆರ್ಶಿಸದೆ. ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ.

ಪ್ರಕಟಣೆ:
ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ
ಕಂದಾಯ ಇಲಾಖೆ
ಕರ್ನಾಟಕ ಸರ್ಕಾರ

#ಸಿಡಿಲು #ಗುಡುಗು #ಮುಂಗಾರುಮಳೆ

09/04/2022

IPC ಸೆಕ್ಷನ್ನಲ್ಲಿ ಬರುವ ಕೇಲವೂ ಚಿಕ್ಕ ಮಾಹೀತಿಗಳು ತಿಳಿಯಿರಿ

ವಿಭಾಗ 307 = ಕೊಲೆಯ ಪ್ರಯತ್ನ
ಸೆಕ್ಷನ್ 302 = ಕೊಲೆಗೆ ಪೆನಾಲ್ಟಿ
ವಿಭಾಗ 376 = ಅತ್ಯಾಚಾರ
ವಿಭಾಗ 395 = ದರೋಡೆ
ವಿಭಾಗ 377 = ಅಸ್ವಾಭಾವಿಕ ಕ್ರಿಯೆ
ದರೋಡೆ ಸಂದರ್ಭದಲ್ಲಿ ವಿಭಾಗ 396 = ಹತ್ಯೆ
ವಿಭಾಗ 120 = ಪಿತೂರಿ ಸಂಯೋಜನೆ
ವಿಭಾಗ 365 = ಅಪಹರಣ
ವಿಭಾಗ 201 = ಪುರಾವೆಗಳ ನಿರ್ಮೂಲನೆ
ವಿಭಾಗ 34 = ವಸ್ತು ಉದ್ದೇಶಗಳು
ವಿಭಾಗ 412 = ದಾಲ್ಚಿನ್ನಿ
ವಿಭಾಗ 378 = ಕಳ್ಳತನ
ವಿಭಾಗ 141 = ಕಾನೂನು ವಿರುದ್ಧ ಹೊಂದಿಸುವುದು
ವಿಭಾಗ 191 = ದಾರಿತಪ್ಪಿಸುವ
ವಿಭಾಗ 300 = ಕೊಲ್ಲುವುದು
ವಿಭಾಗ 309 = ಆತ್ಮಹತ್ಯಾ ಪ್ರಯತ್ನ
ವಿಭಾಗ 310 = ಮೋಸಗೊಳಿಸಲು
ವಿಭಾಗ 312 = ಗರ್ಭಪಾತ
ವಿಭಾಗ 351 = ಆಕ್ರಮಣ
ವಿಭಾಗ 354 = ಸ್ತ್ರೀ ಕಿರಿಕಿರಿ
ವಿಭಾಗ 362 = ಅಪಹರಣ
ವಿಭಾಗ 415 = ಚೀಟಿಂಗ್
ವಿಭಾಗ 445 = ಘರಾಧನ್
ವಿಭಾಗ 494 = ಸಂಗಾತಿಯ ಜೀವನದಲ್ಲಿ ಮರುಮದುವೆ 0
ವಿಭಾಗ 499 = ಮಾನನಷ್ಟ
ಸೆಕ್ಷನ್ 511 = ಜೀವಾವಧಿ ಶಿಕ್ಷೆಗೆ ಗುರಿಯಾಗುವ ಅಪರಾಧಗಳನ್ನು ಮಾಡಲು ಪ್ರಯತ್ನಿಸುವ ದಂಡ.
ನಮ್ಮ ದೇಶದಲ್ಲಿ ನಮಗೆ ಯಾವುದೇ ಮಾಹಿತಿ ಇಲ್ಲದಿರುವ ಕೆಲವು ಕಾನೂನುಬದ್ಧತೆಗಳಿವೆ, ನಮ್ಮ ಹಕ್ಕುಗಳಿಂದ ಹೊರಗುಳಿದಿದೆ.

ಹಾಗಾಗಿ ನಿಮಗೆ 5 * ಆಸಕ್ತಿದಾಯಕ ಸಂಗತಿಗಳನ್ನು * ನೀಡಬಹುದು * ಇದು ಯಾವುದೇ ಸಮಯದಲ್ಲಿ ಜೀವನದಲ್ಲಿ ಉಪಯುಕ್ತವಾಗಿದೆ.

👁🗨 * 1. ಸಂಜೆ ಮಹಿಳೆಯನ್ನು ಬಂಧಿಸಲು ಸಾಧ್ಯವಿಲ್ಲ * -

ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 46 ಅಡಿಯಲ್ಲಿ 6 ಗಂಟೆ ನಂತರ ಮತ್ತು ಬೆಳಗ್ಗೆ ಭಾರತೀಯ ಪೊಲೀಸರು ಯಾವುದೇ ಮಹಿಳೆ 6 ಮೊದಲು, ಅಪರಾಧ ಆದರೂೂ ಯಾವುದೇ ಬಂಧನಕ್ಕೆ ಸಾಧ್ಯವಿಲ್ಲ ಹೇಗೆ ಗಂಭೀರ, ಏಕೆ. ಪೊಲೀಸರು ಇದನ್ನು ಮಾಡುತ್ತಿದ್ದರೆ, ಬಂಧಿತರಾಗಿರುವ ಪೊಲೀಸ್ ಅಧಿಕಾರಿಯ ವಿರುದ್ಧ ದೂರನ್ನು ದಾಖಲಿಸಬಹುದು. ಆ ಪೊಲೀಸ್ ಅಧಿಕಾರಿಯ ಕೆಲಸವನ್ನು ಇದು ಹಾಳುಮಾಡುತ್ತದೆ.

👁🗨 * 2. ಸಿಲಿಂಡರ್ ಸ್ಫೋಟದಿಂದ, ನೀವು ಜೀವ ಮತ್ತು ಆಸ್ತಿಯ ನಷ್ಟಕ್ಕೆ 40 ಲಕ್ಷ ರೂ.

ಸಾರ್ವಜನಿಕ ಹೊಣೆಗಾರಿಕೆ ಪಾಲಿಸಿಯಡಿ ಮತ್ತು ಕೆಲವು ಕಾರಣಕ್ಕಾಗಿ ನಿಮ್ಮ ಮನೆಯಲ್ಲಿ ಸ್ಫೋಟಕ ಸಿಲಿಂಡರ್ ನೀವು ಅನಿಲ ಕಂಪನಿಯಿಂದ ತಕ್ಷಣ ವ್ಯಾಪ್ತಿಗೆ ಸಮರ್ಥನೆಗಳ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಯಬಹುದು ವೇಳೆ. ಅನಿಲ ಕಂಪೆನಿಯಿಂದ 40 ಲಕ್ಷ ರೂ. ವರೆಗೆ ವಿಮಾ ಕಂಪೆನಿ ಪಡೆಯಲು ಸಾಧ್ಯವಿದೆ ಎಂದು ನಾನು ನಿಮಗೆ ಹೇಳುತ್ತೇನೆ. ಕಂಪನಿಯು ನಿಮ್ಮ ಹಕ್ಕು ನಿರಾಕರಿಸಿದರೆ ಅಥವಾ ಘರ್ಷಣೆ ಮಾಡಿದಲ್ಲಿ ದೂರುಗಳನ್ನು ಮಾಡಬಹುದು. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅನಿಲ ಕಂಪನಿಯ ಪರವಾನಗಿಯನ್ನು ರದ್ದುಗೊಳಿಸಬಹುದು.

👁🗨 * 3. ಯಾವುದೇ ಹೋಟೆಲ್, ಯಾವುದೇ 5 ಸ್ಟಾರ್ಗಳಿಲ್ಲ. ನೀರನ್ನು ಮುಕ್ತವಾಗಿ ಕುಡಿಯಬಹುದು ಮತ್ತು ವಾಷ್ ರೂಮ್ ಅನ್ನು ಬಳಸಿ * -

ಭಾರತೀಯ ಸರಣಿ ಕಾಯಿದೆ, 1887 ಪ್ರಕಾರ, ದೇಶದ ಹೋಟೆಲ್ ಕೇಳುವ ಮೂಲಕ ನೀರು ಕುಡಿದು ಹೋಟೆಲ್ನ ಕೋಣೆಯಲ್ಲಿ ತೊಳೆಯುವುದು ಸಹ ಬಳಸಬಹುದು ಮಾಡಬಹುದು. ಹೋಟೆಲ್ ಸಣ್ಣ ಅಥವಾ 5 ನಕ್ಷತ್ರಗಳು, ಅವರು ನಿಲ್ಲುವಂತಿಲ್ಲ. ಹೋಟೆಲ್ ಮಾಲೀಕರು ಅಥವಾ ನೌಕರರು ನಿಮ್ಮನ್ನು ಕುಡಿಯುವ ನೀರಿನಿಂದ ಅಥವಾ ವಾಶ್ ಕೊಠಡಿಯನ್ನು ತಡೆಗಟ್ಟುತ್ತಿದ್ದರೆ, ನೀವು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ನಿಮ್ಮ ದೂರು ಆ ಹೋಟೆಲ್ನ ಪರವಾನಗಿಯನ್ನು ರದ್ದುಗೊಳಿಸಬಹುದು.

👁🗨 * 4. ಉದ್ಯೋಗದಿಂದ ಗರ್ಭಿಣಿ ಮಹಿಳೆಯರನ್ನು ತೆಗೆದುಹಾಕಲಾಗುವುದಿಲ್ಲ * -

ಮಾತೃತ್ವ ಲಾಭ ಕಾಯಿದೆ 1961 ರ ಪ್ರಕಾರ ಗರ್ಭಿಣಿ ಮಹಿಳೆಯರನ್ನು ತಕ್ಷಣವೇ ಕೆಲಸದಿಂದ ತೆಗೆಯಲಾಗುವುದಿಲ್ಲ. ಮಾಲೀಕರು ಮೊದಲ ಮೂರು ತಿಂಗಳುಗಳ ಸೂಚನೆ ನೀಡಬೇಕು ಮತ್ತು ಗರ್ಭಾವಸ್ಥೆಯಲ್ಲಿ ಖರ್ಚು ಮಾಡುವ ಕೆಲವು ಭಾಗವನ್ನು ನೀಡಬೇಕು. ಅವರು ಹಾಗೆ ಮಾಡದಿದ್ದರೆ, ಅವರು ಸರ್ಕಾರಿ ನೌಕರರ ವಿರುದ್ಧ ದೂರು ನೀಡಬಹುದು. ಕಂಪೆನಿಯು ದೂರನ್ನು ಮುಚ್ಚಬಹುದು ಅಥವಾ ಕಂಪನಿಯು ದಂಡವನ್ನು ಪಾವತಿಸಬೇಕಾಗುತ್ತದೆ.

👁🗨 * 5 ಪೊಲೀಸ್ ದೂರು ನಿಮ್ಮ ದೂರುಗಳನ್ನು ಬರೆಯಲು ನಿರಾಕರಿಸುವುದಿಲ್ಲ * -

ಐಪಿಸಿ ಸೆಕ್ಷನ್ 166 ಎ ಪ್ರಕಾರ, ಯಾವುದೇ ಪೋಲೀಸ್ ಅಧಿಕಾರಿ ನಿಮ್ಮ ಯಾವುದೇ ದೂರುಗಳನ್ನು ದಾಖಲಿಸಲು ನಿರಾಕರಿಸಬಹುದು. ಅವರು ಇದನ್ನು ಮಾಡಿದರೆ ಹಿರಿಯ ಪೊಲೀಸ್ ಕಚೇರಿಯಲ್ಲಿ ಆತನ ವಿರುದ್ಧ ದೂರು ಸಲ್ಲಿಸಬಹುದು. ಆ ಪೊಲೀಸ್ ಅಧಿಕಾರಿ ದೋಷಿ ಅದು ಅವರಿಗೆ ಕಡಿಮೆ 1 ವರ್ಷ 6 ತಿಂಗಳ ಜೈಲು ಕಡಿಮೆ ಅಥವಾ ಅವರು ಅವರ ಕೆಲಸ Gwani ವಿಧಾನವಾಗಿದೆ.

ನಿಮಗಾಗಿ ಈ ಆಸಕ್ತಿದಾಯಕ ಸಂಗತಿಗಳನ್ನು ನಾವು ಕಂಡುಕೊಂಡಿದ್ದೇವೆ.

ಇವುಗಳು ನಮ್ಮ ದೇಶದ ಕಾನೂನಿನಡಿಯಲ್ಲಿ ಬರುವ ಕುತೂಹಲಕಾರಿ ಸಂಗತಿಗಳು, ಆದರೆ ನಾವು ಅವರಿಗೆ ತಿಳಿದಿಲ್ಲ. ನಿಮ್ಮ ಜೀವನದಲ್ಲಿ ಪ್ರಯೋಜನಕಾರಿಯಾಗಬಲ್ಲ ಬಹಳಷ್ಟು ಆಸಕ್ತಿದಾಯಕ ವಿಷಯಗಳನ್ನು ನಿಮ್ಮ ಮುಂದೆ ಇಡಲು ನಾವು ಪ್ರಯತ್ನಿಸುತ್ತೇವೆ.

* ಈ ಹಕ್ಕುಗಳನ್ನು ಯಾವ ಸಮಯದಲ್ಲಾದರೂ ಈ ಸಂದೇಶವನ್ನು ಕಳುಹಿಸಲು ಮತ್ತು ಅದನ್ನು ನಿಮಗೆ ಉಳಿಸಲು ಬಳಸಬಹುದು.

Address

Bangalore

Telephone

+917899369141

Website

Alerts

Be the first to know and let us send you an email when Samatha News posts news and promotions. Your email address will not be used for any other purpose, and you can unsubscribe at any time.

Contact The Business

Send a message to Samatha News:

Share