Kannada Dhwani

Kannada Dhwani KANNADA DHWANI ನ್ಯೂಸ್ ನಿಮಗೆ ಸಾಮಾಜಿಕ, ರಾಜಕೀಯ ವಿಷಯಗಳ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ಸುದ್ದಿಯನ್ನು ತರುತ್ತದೆ

13/04/2026

ಕೆಆರ್ ಪುರದಲ್ಲಿ ಯೇಸು ಕ್ರಿಸ್ತರ ಮಹಿಮೆ - DCM ಡಿ.ಕೆ.ಶಿವಕುಮಾರ್ ಭಾಗಿ....

13/04/2026

ಮಾಧ್ಯಮದವರ ಮೇಲೆ ಗೂಂಡಾ ವರ್ತನೆ ತೋರಿದ ರಾಮಮೂರ್ತಿ ನಗರ ಪೊಲೀಸ್ ಠಾಣಾ ASI ಶಿವಕುಮಾರ್...

12/04/2026

ಫೀನಿಕ್ಸ್ ಮಾರ್ಕೆಟ್‌ಸಿಟಿ ಕೆ-ಪಾಪ್ ಡ್ರೀಂಕ್ಯಾಚರ್ ಸಹಯೋಗದಲ್ಲಿ ಹಾಲಿಡೇಲ್ಯಾಂಡ್ ನಿರ್ಮಾಣ..!

11/04/2026

ಕೆಆರ್ ಪುರದಲ್ಲಿ ನಿಲ್ಲದ ಸಂತೆ ವ್ಯಾಪಾರದ ಗಲಾಟೆ...ಬೀದಿ ವ್ಯಾಪಾರಕ್ಕೆ ಎಲೆ .ಶ್ರೀನಿವಾಸ್ ವಿರೋಧ.!

11/04/2026

ಕೆಆರ್ ಪುರ

ಕೆಆರ್ ಪುರದಲ್ಲಿ ನಿಲ್ಲದ ಸಂತೆ ವ್ಯಾಪಾರದ ಗಲಾಟೆ

ಬೀದಿಬದಿಯಲ್ಲಿ ವ್ಯಾಪಾರಕ್ಕೆ ಒಂದು ಬಣ ಒತ್ತಾಯ ಮತ್ತೊಂದು ಬಣದಿಂದ ವಿರೋಧ.!

ಎಲೆ .ಶ್ರೀನಿವಾಸ್ ನೇತೃತ್ವದಲ್ಲಿ ವಿರೋಧ, ಗುತ್ತಿಗೆದಾರ ಅಂಜನ್ ಮೂರ್ತಿ ಬಣದಿಂದ ವ್ಯಾಪಾರಕ್ಕೆ ಮನವಿ

ಈ ಕುರಿತು ಮಾಧ್ಯಮಗಳಿಗೆ ಅಖಿಲ ಕರ್ನಾಟಕ ರೈತರ ಹಾಗೂ ವ್ಯಾಪರಿಗಳ ಒಕ್ಕೂಟ ಅಧ್ಯಕ್ಷ ಎಲೆ .ಶ್ರೀನಿವಾಸ್ ಪ್ರತಿಕ್ರಿಯೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾಪಾರಕ್ಕೆ ಯಾರು ಅನುಮತಿ ನೀಡಿದ್ದಾರೆ.?

ಹೆದ್ದಾರಿ ರಸ್ತೆ ಬದಿ ವ್ಯಾಪಾರದಿಂದ ವಿಪರೀತ ಟ್ರಾಫಿಕ್ ಸಮಸ್ಯೆ.

ಇದಲ್ಲದೆ ವ್ಯಾಪಾರಿಗಳಿಂದ ಸುಂಕದ ಹೆಸರಿನಲ್ಲಿ ಅಕ್ರಮ ಹಣ ಸುಲಿಗೆ ಮಾಡ್ತಿದ್ದಾರೆ

ಈ ಸುಲಿಗೆಯನ್ನು ತಡೆಯಬೇಕೆಂದು ಅನೇಕ ಹೋರಾಟಗಳನ್ನು ಮಾಡಿದ್ದೆವು

ಇದರ ಫಲವಾಗಿ ಜಿಬಿಎ ಮತ್ತು ಟ್ರಾಫಿಕ್ ಪೊಲೀಸರು ಬೀದಿಬದಿ ವ್ಯಾಪಾರವನ್ನು ನಿಲ್ಲಿಸಿದ್ದಾರೆ

ಈಗ ಗುತ್ತಿಗೆದಾರರ ಬಣದಿಂದ ವ್ಯಾಪಾರಕ್ಕೆ ಅನುಮತಿ ನೀಡಿ ಪ್ರತಿಭಟನೆ ಮಾಡುತ್ತಿದ್ದಾರೆ .

ಬಸಿಟ್ ವ್ಯಾಪಾರ ಮಾಡುವವರನ್ನು ಹೊರ ಜಿಲ್ಲೆಗಳವರನ್ನ ಕರೆತಂದು ರೈತರು ಎಂದು ಶಾಲು ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ

09/04/2026

ಸ್ಥಳ: ಶೆಲ್ ಪೆಟ್ರೋಲ್ ಬಂಕ್ ಪಕ್ಕ, ಕಲ್ಕೆರೆ ಕ್ರಾಸ್, ಟಿ.ಸಿ.ಪಾಳ್ಯ ಮುಖ್ಯರಸ್ತೆ, (ಅಕ್ಷಯನಗರ), ರಾಮಮೂರ್ತಿನಗರ, ಬೆಂಗಳೂರು - 560 016...
ಪ್ರಪ್ರಥಮ ಬಾರಿಗೆ ನಮ್ಮ ಕೆ ಆರ್ ಪುರದ ರಾಮಮೂರ್ತಿನಗರದಲ್ಲಿ,ಶ್ರೀ ಅವತಾರ್ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ವಸ್ತುಪ್ರದರ್ಶನ ಪ್ರಾರಂಭವಾಗುತ್ತಿದೆ,ಬೇಸಿಗೆ ರಜೆಯ ಮಜವನ್ನು ಸವಿಯಲು ಹಾತೊರೆಯುತ್ತಿರುವ ಮನಸ್ಸುಗಳಿಗೆ ಒಂದೊಳ್ಳೆ ಮನರಂಜನೆ ನೀಡಲು,ನಿಮಗಾಗಿ ಅವತಾರ್ ಪ್ರಪಂಚವನ್ನು ಸೃಷ್ಟಿ ಮಾಡಲಾಗಿದೆ,ಇದೇ ದಿನಾಂಕ ಏಪ್ರಿಲ್ ಒಂದು,ಎರಡು ಸಾವಿರದ ಇಪ್ಪತ್ತೈದು ಬುಧವಾರದಂದು ಲೋಕಾರ್ಪಣೆಗೊಳ್ಳಲಿದೆ,ಅವತಾರ್ ನ ಒಂದೊಳ್ಳೆ ಅನುಭವಕ್ಕಾಗಿ ಒಮ್ಮೆ ಭೇಟಿ ಕೊಡಿ,
ಸ್ಥಳ ಶೆಲ್ ಪೆಟ್ರೋಲ್ ಬಂಕ್ ಹತ್ತಿರ,ಕಲ್ಕೆರೆ ಕ್ರಾಸ್,ಟಿ ಸಿ ಪಾಳ್ಯ ಮುಖ್ಯರಸ್ತೆ,ಅಕ್ಷಯನಗರ,ರಾಮಮೂರ್ತಿನಗರ, ಬೆಂಗಳೂರು ಹದಿನಾರು,ನೀವು ನಿಮ್ಮ ಕುಟುಂಬದವರು,ಸ್ನೇಹಿತರೊಂದಿಗೆ ಬಂದು ಅವತಾರ್ ಅನುಭವವನ್ನು ಆಸ್ವಾದಿಸಿ,ಪ್ರತಿದಿನ ಸಂಜೆ ಐದರಿಂದ ರಾತ್ರಿ ಹತ್ತು ಘಂಟೆವರೆಗೆ.

06/04/2026

ಕೆ.ಆರ್.ಪುರ: ಹೂಡಿಯಿಂದ ಸಾದರಮಂಗಲಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ವಾಹನ ಸಂಚಾರಕ್ಕೆ ರೈಲ್ವೆ ಇಲಾಖೆ ತಡೆಯೊಡ್ಡಲಾದ ಮಾರ್ಗವನ್ನು ತೆರೆಯುವಂತೆ ಆಗ್ರಹಿಸಿ ಸಾದರಮಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನೂರಾರು ಗ್ರಾಮಸ್ಥರು ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು.

ಹೂಡಿಯಿಂದ ಸಾದರಮಂಗಲ, ಬೆಳತ್ತೂರು, ಕುಂಬೇನಾ ಅಗ್ರಹಾರ, ಕಾಡುಗುಡಿ, ವೈಟ್ ಫಿಲ್ಢ್ ಕಡೆಗೆ ಸಂಚರಿಸುವ ಅರವತ್ತು ಆಡಿ ರಸ್ತೆಯನ್ನು ಯಾವುದೇ ಸೂಚನೆ ನೀಡದೆ ಏಕಾಏಕಿ ಸ್ಥಳೀಯರ ಗಮನಕ್ಕೆ ತರದೆ ರಾತ್ರೋರಾತ್ರಿ ರಸ್ತೆಯನ್ನು ಮುಚ್ಚಿರುವುದರಿಂದ ಸಾದರಮಂಗಲ ಸುತ್ತಮುತ್ತಲಿನ ಸುಮಾರು ಇಪ್ಪತ್ತು ಹೆಚ್ಚು ಗ್ರಾಮದ ಜನರಿಗೆ ತೊಂದರೆ ಆಗುತ್ತಿದೆ ಎಂದು ಜಿಬಿಎ ಹಾಗೂ ರೈಲ್ವೆ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹದಿನೈದು ಹಿಂದೆ ಇಲ್ಲಿ ರಸ್ತೆ ಇತ್ತು. ಸುತ್ತಮುತ್ತಲಿನ ಪ್ರದೇಶಗಳ ಹಳ್ಳಿಗಳ ಜನರು ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಹಾಗೂ ಶಾಲಾ ಕಾಲೇಜಿಗೆ ತೆರಳಲು ಇದೇ ಮಾರ್ಗ ಅವಲಂಬಿಸಲಾಗಿತ್ತು. ಇತ್ತಿಚಿನ ಕೆಲ ವರ್ಷಗಳಿಂದ ಈ ರಸ್ತೆಯಲ್ಲಿ ಓಡಾಡಲು ರೈಲ್ವೆ ಅಧಿಕಾರಿಗಳು ದಾರಿ ಮಾಡಿಕೊಡುತ್ತಿಲ್ಲ. ಯಾವುದೋ ಕಾರಣವೊಡ್ಡಿ ಮಾರ್ಗವನ್ನು ಮುಚ್ಚಿ ತೊಂದರೆ ನೀಡುವುದು ಸಾಮಾನ್ಯವಾಗಿದೆ. ಏನಾದರೂ ಪ್ರಶ್ನೆ ಮಾಡಲು ಹೊದರೆ ನಮ್ಮ ಮೇಲೆ ದೂರು ದಾಖಲಿಸುವುದಾಗಿ ರೈಲ್ವೆ ಅಧಿಕಾರಿಗಳು ಬೇದರಿಕೆಯೊಡ್ಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದರು.

ಈ ಹಿಂದೆ ಪಾಲಿಕೆ ಈ ಮಾರ್ಗವನ್ನು ಅರವತ್ತು ಅಡಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ ಕಾಮಗಾರಿಯೂ ಪ್ರಗತಿಯಲ್ಲಿದ್ದರೂ ರೈಲ್ವೆ ಇಲಾಖೆ ರಸ್ತೆಗೆ ಅಡ್ಡಲಾಗಿ ಜಲ್ಲಿ, ಸಿಮೆಂಟ್ ಕಂಬಗಳನ್ನು ಅಡ್ಡಲಾಗಿ ಹಾಕಿ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಈ ರಸ್ತೆಯನ್ನು ಮುಚ್ಚಿರುವುದರಿಂದ ಕೋಡಿಗೆಹಳ್ಳಿ ರಸ್ತೆಯನ್ನು ಅವಲಂಬಿಸಬೇಕಿದೆ. ಕೋಡಿಗೆಹಳ್ಳಿ ರಸ್ತೆ ಕಿರಿದಾರಿದ್ದು ಸಂಚಾರ ದಟ್ಟಣೆ ಮೀತಿಮಿರಿ ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುವುದು ಸಾಮಾನ್ಯವಾಗಿದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ದೂರಿದರು.

ತುರ್ತಾಗಿ ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಸಮರ್ಪಕವಾದ ದಾರಿಯಿಲ್ಲದ ಕಾರಣ ಅಂಬುಲೆನ್ಸ್ ಗಳು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗಳಿಗೆ ತೆರಳಲು ಆಗದೆ ಮೃತಪಟ್ಟಿರುವ ನಿದರ್ಶನಗಳಿವೆ. ಕಳೆದ ತಿಂಗಳು ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ. ರೈಲ್ವೆ ಅಧಿಕಾರಿಗಳಿಗೆ ಜಿಬಿಎ ಅಧಿಕಾರಿಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ನೂರಾರು ಮನವಿಗಳು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಐದಾರು ಕಿಮೀ ಸುತ್ತಿ ಬೇರೆ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ ಎಂದು ದೂರಿದರು.

01/04/2026

SKF ವತಿಯಿಂದ ಕಲ್ಕೆರೆಯಲ್ಲಿ ಉಚಿತ ಬೃಹತ್ ಆರೋಗ್ಯ ಶಿಬಿರ

ಶಾಂತಾ ಕೃಷ್ಣಮೂರ್ತಿ ಪೌಂಡೇಷನ್(SKF) ಅಧ್ಯಕ್ಷೆ ಶಾಂತಾ ಕೃಷ್ಣಮೂರ್ತಿ ನೇತೃತ್ವದಲ್ಲಿ ಆಯೋಜನೆ

ಶಾಸಕ ಬೈರತಿ ಬಸವರಾಜ್ ರವರಿಂದ ಆರೋಗ್ಯ ಶಿಬಿರಕ್ಕೆ ಚಾಲನೆ

ನೂರಾರು ಜನರು ಶಿಬಿರದಲ್ಲಿ ಭಾಗವಹಿಸಿ, ನುರಿತ ವೈದ್ಯರಿಂದ ತಪಾಸಣೆ

ಕಳೆದ 10 ವರ್ಷಗಳಿಂದ SKF ವತಿಯಿಂದ ಕ್ರೀಡೆ, ಆರೋಗ್ಯ ಶಿಬಿರ, ಪರಿಸರ ಸಂರಕ್ಷಣೆ ವಿವಿಧ ಕಾರ್ಯಕ್ರಮಗಳ ಆಯೋಜನೆ

27/03/2026

ಮಾದಿಗ ಸಂಘಟನೆಗಳ ಒಕ್ಕೂಟ ಬೆಂಗಳೂರು ಪೂರ್ವ ತಾಲೂಕು ವತಿಯಿಂದ ಒಳ ಮೀಸಲಾತಿ ಸಂಪೂರ್ಣ ಜಾರಿಗಾಗಿ ಪ್ರತಿಭಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,

ಗ್ರೇಟರ್ ಬೆಂಗಳೂರು GBA ಕೆ ಆರ್ ಪುರಂ ನ ಕಚೇರಿಯಿಂದ ಕಾಲು ನಡುಗೆ ಜಾಥಾ ಮೂಲಕ ಬಂದು,ರಾಜ್ಯ ಸರ್ಕಾರದ ವಿರುದ್ದ ಮತ್ತು ಒಳಮೀಸಲಾತಿ ವಿರೋಧಿಗಳ ವಿರುದ್ದ ಘೋಷಣೆ ಕೂಗಿದರು,

ನಂತರ ತಹಶೀಲ್ದಾರ್ ರವರ ಮೂಲಕ ಒಳಮೀಸಲಾತಿ ಕೂಡಲೇ ಜಾರಿ ಮಾಡುವಂತೆ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದ ಮಾದಿಗ ಸಮುದಾಯದ ಮುಖಂಡರು,

ಕಾರ್ಯಕ್ರಮದಲ್ಲಿ AJS ಸಂಘಟನೆಯ ರಾಜ್ಯಾಧ್ಯಕ್ಷರಾದ ಸಿ ಮುನಿಕೃಷ್ಣಯ್ಯ,ಕಾರ್ಯಧ್ಯಕ್ಷರಾದ ಸಿ ಆರ್ ನಟರಾಜ್,ಕಾರ್ಯದರ್ಶಿ ನರಸಿಂಹಯ್ಯ,ಉಪಾಧ್ಯಕ್ಷರುಗಳಾದ ಮಂಜುನಾಥ್,ರಾಮಾಂಜಿ ವೈ,ಡಿ ಎಂ ನಾಗರಾಜ್,ಡಿ ಎಂ ವೆಂಕಟೇಶ್ ಮೂರ್ತಿ,ಶ್ರೀನಿವಾಸ್,ಮಾದಿಗ ದಂಡೋರ ರಾಜಶೇಖರ್,AJS ನ ರಾಜ್ಯ ಯುವ ಅಧ್ಯಕ್ಷ ವೇಣುಗೋಪಾಲ್ ಮಾದರ್,ಮಾರತ್ ಹಳ್ಳಿ ಬಸವರಾಜ್,ಮಹಿಳಾ ಮುಖಂಡರಾದ ಚನ್ನಸಂದ್ರ ಶೋಭಾ,ಜಯಂತಿ ನಗರದ ಮುನಿರಾಜ್,ದಿನ್ನೂರಿನ ಮುನೇಂದ್ರ,ಮುನಿರಾಜ್ ನಿಂಬೆಕಾಯಿಪುರ ರಾಜಣ್ಣ,ಗುರುಮೂರ್ತಿ, ಪಟೇದ್ರಪ್ಪ,
ಚಂದನ್,ಮಧು,ಕಿಟ್ಟಣ್ಣ, ಸೇರಿದಂತೆ ಹಲವರು ಭಾಗವಹಿಸಿದ್ದರು.

27/03/2026

ಶ್ರೀ ರಾಮನವಮಿ ಅಂಗವಾಗಿ ವೈಟ್‌ಫೀಲ್ಡ್ ಸಮೀಪದ ಹಗದೂರಿನ ಪುರಾತನ ಪ್ರಸಿದ್ಧರಾಮದೇವರ ಬ್ರಹ್ಮ ರಥೋತ್ಸವ...

26/03/2026

ಅಟಲ್ ಇನ್ನೋವೇಶನ ಮಿಷನ್ ಸಮಾವೇಶ...

Address

Bangalore
Bangalore
560001

Telephone

+919886387518

Website

Alerts

Be the first to know and let us send you an email when Kannada Dhwani posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Dhwani:

Share