Amma Prakaashana

Amma Prakaashana Pusthaka priyarigaagi

29/06/2020

◆ 'ಶುಭಂ'ಗೆ ಶುಭ ಹಾರೈಸಿದ ಅನಂತನಾಗ್ ಅವರಿಗೆ ಅನಂತಾನಂತ ವಂದನೆಗಳು...◆
^^^^^^^^^^^^^^^^^^^^^^^^^^^^^^^^^^^^^^^^^^^^^^^
ದಶಕಗಳ ಹಿಂದೆ ನಡೆದ ಅನಪೇಕ್ಷಿತ ಘಟನೆಯೊಂದರಿಂದಾಗಿ ಕನ್ನಡ ಚಿತ್ರರಂಗ ದೊಡ್ಡದೊಂದು ನಷ್ಟವನ್ನು ತಪ್ಪಿಸಿಕೊಂಡು ಬಿಟ್ಟಿತು! ಇದಕ್ಕೆ ನೇರವಾಗಿ ಕಾರಣರಾದವರು ಶಿವಸೇನೆಯ ಭಾಳಾಠಾಕ್ರೆ! ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಇದು ನಿಜ. ಈ ನಿಜವನ್ನು ನನ್ನ ಬಳಿ ಹೇಳಿಕೊಂಡದ್ದು ಈ ಘಟನೆಯ ಹೀರೋ ಸ್ವತಃ ಅನಂತನಾಗ್ ಅವರು...!
ನಡೆದದ್ದು ಏನಪ್ಪಾ ಅಂದ್ರೆ : ಆಗ ರಾಷ್ಟ್ರಾದ್ಯಂತ ಜನತಾಪಾರ್ಟಿ ಉಚ್ಚ್ರಾಯ ಸ್ಥಿತಿಯಲ್ಲಿತ್ತು! ಆ ಕಾಲಘಟ್ಟದಲ್ಲಿ ಮುಂಬೈ ಸೇರಿಕೊಂಡಿದ್ದ ಅನಂತನಾಗ್ ಸಕ್ರಿಯ ರಾಜಕಾರಣಕ್ಕೆ ಆಗಲೇ ಇಳಿದು ಬಿಟ್ಟಿದ್ದರು! ಜತೆಗೆ ಶಂಕರನಾಗ್. ಇವರಿಬ್ಬರ ರಾಜಕೀಯ ಚಟುವಟಿಕೆಗಳನ್ನು ಕಂಡ ಜನತಾಪಾರ್ಟಿಯ ಮುಖಂಡರೊಬ್ಬರು ಮುಂಬೈಯ ಏರಿಯಾವೊಂದರಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿದರು. ಆದರೆ 'ಈತ ಕನ್ನಡಿಗ, ಮುಂಬೈಯಲ್ಲಿ ಪುಟ್ಟ ಜಾಗ ಕೊಟ್ಟರೂ ಸಾಕು, ಇಡೀ ರಾಜಧಾನಿಯಲ್ಲೇ ಸಾಮ್ರಾಜ್ಯ ಸ್ಥಾಪಿಸಿ ಬಿಡುತ್ತಾನೆ...' - ಎನ್ನುವ ಭಯದಿಂದ ಚುನಾವಣೆಗೆ ಟಿಕೆಟ್ ಸಿಗದಂತೆ ಷಡ್ಯಂತ್ರ ಹೂಡುತ್ತಾನೆ ಭಾಳಾಠಾಕ್ರೆ!
ಅನಂತ್'ಗೆ ಅವಮಾನವಾಗುತ್ತದೆ. ನೊಂದು ಬೆಂದ ಅನಂತ್ ತಮ್ಮ ಸೋದರ ಶಂಕರ್ ಜತೆ ಬೆಂಗಳೂರಿಗೆ ಶಾಶ್ವತವಾಗಿ ಹೊರಟು ಬಿಡುತ್ತಾರೆ. ಒಂದು ವೇಳೆ ಟಿಕೆಟ್ ಸಿಕ್ಕಿ ಚುನಾವಣೆಯಲ್ಲಿ ಸ್ಪರ್ದಿಸಿರುತ್ತಿದ್ರೆ ಅನಂತ್ ಗೆಲ್ಲುವುದು ಗ್ಯಾರಂಟಿಯಾಗಿತ್ತು! ಗೆದ್ದಿದ್ದರೆ ಅವರು ಬೆಂಗಳೂರು ಕಡೆ ಮುಖ ಮಾಡುವುದು ಕನಸಿನ ಮಾತಾಗಿತ್ತು. ಹೀಗಾಗಿ ಕನ್ನಡ ಚಿತ್ರರಂಗ ದೊಡ್ಡದೊಂದು ನಷ್ಟದಿಂದ ಪಾರಾಯಿತು!
ಇವೆಲ್ಲಾ ಮಾತುಕತೆ ನಡೆದದ್ದು ಬೆಂಗಳೂರಿನ ಡಾಲರ್ಸ್ ಕಾಲೊನಿಯ ಅನಂತನಾಗ್ ಮನೆಯಲ್ಲಿ. ಮೂರು ದಶಕಗಳ ಹಿಂದಕ್ಕೆ ಹೋಗಿ ಆಡಿದ ಮಾತುಕತೆ ನನ್ನ ಪಾಲಿಗೊಂದು ಅಮೂಲ್ಯ ದಾಖಲೆ! ನನ್ನ ಮೇಲಿನ ಅನಂತ್ ಅವರ ಪ್ರೀತಿ-ಗೌರವ ಕಂಡು-ಕೇಳಿ ರೋಮಾಂಚನಗೊಂಡಿದ್ದೇನೆ. 'ಶುಭಂ' ಪುಸ್ತಕದ ಬಗ್ಗೆ ಅವರು ತೋರಿದ ಈ ಮಟ್ಟದ ನಿರ್ವ್ಯಾಜ್ಯ ಪ್ರೀತಿ ಮಾತ್ರ ನನ್ನ ಪಾಲಿಗೆ ಬೋನಸ್!!! ಥ್ಯಾಂಕ್ಯೂ ಅನಂತ್'ಜೀ...
^^^^^^^^^^^^^^^^^^^^^^^^^^^^^^^^^^^^^^^^^^^^^^^
◆ ಇನ್ನು 'ಶುಭಂ' ಪುಸ್ತಕವನ್ನು ಬ್ಯಾನ್ ಮಾಡುವ ವಿಚಾರ. ಊರೆಲ್ಲಾ ಓದುಗರ ಹೃದಯ ಕೊಳ್ಳೆ ಹೊಡೆದ ಮೇಲೆ ಕೋಟೆಯ ದಿಡ್ಡಿ ಬಾಗಿಲು ಹಾಕ್ತಾರಂತೆ, ನಾನ್ಸೆನ್ಸ್! ನಿಮಗೆ ಬೇಕಾ? ವಾಟ್ಸಾಪ್ ಮಾಡಿ : 7899945653

28/06/2020

■ ಕನ್ನಡ ಚಿತ್ರರಂಗದ ಅಜಾತಶತ್ರು ಶಿವಣ್ಣ 'ಶುಭಂ' ಪುಸ್ತಕದ ಬಗ್ಗೆ ಏನು ಹೇಳಿದ್ದಾರೆ ಕೇಳೋಣ...■
^^^^^^^^^^^^^^^^^^^^^^^^^^^^^^^^^^^^^^^^^^^^^^^^
● ಶಿವಣ್ಣ-ರಾಘಣ್ಣ-ಅಪ್ಪಣ್ಣ : ಈ ತ್ರಿಮೂರ್ತಿಗಳು ವಯಸ್ಸಿನಲ್ಲಿ ನನಗಿಂತ ಚಿಕ್ಕವರೇ. ಆದರೆ ನಾನು ಈ ಮೂವರ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ, ಗೌರವ ದೊಡ್ಡದು. ಈ ಮೂವರಿಂದಾನೂ ನನಗೆ ಸಿಗುವ ಪ್ರೀತಿ, ವಿಶ್ವಾಸ, ಗೌರವ ಕೂಡಾ ದೊಡ್ಡದೇ. ಹೀಗಾಗಿ ಇವರನ್ನು ನಾನು ಕೂಗೋದು ಹೀಗೇನೇ...!
● ಅದು 1986ರ ಸಮಯ. 'ಆನಂದ್' ಸಿನಿಮಾ ಸೆಟ್ಟೇರುವ ಹೊತ್ತಿನಲ್ಲಿ ನಾನೂ ಆ ಸ್ಟುಡಿಯೋದಲ್ಲಿದ್ದೆ. ಆ ಸಂಭ್ರಮ, ಸಡಗರ ಈಗಲೂ ನನ್ನ ಕಣ್ಣಲ್ಲಿದೆ. ಶಿವರಾಜಕುಮಾರ್ ಎಂಬ ಹೆಸರಿನ ಕಲಾವಿದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಆಗಲೇ 34 ವರ್ಷವಾ? ನಂಬಲಿಕ್ಕಾಗುವುದಿಲ್ಲ. ನಾನು ಬದಲಾಗಿಲ್ಲ. ಶಿವಣ್ಣನೂ ಬದಲಾಗಿಲ್ಲ. ಅವರ ಪ್ರೀತಿ, ವಿಶ್ವಾಸ ಕೂಡಾ ಬದಲಾಗಿಲ್ಲ. ಬದಲಾದದ್ದು ಕ್ಯಾಲೆಂಡರ್ ಮಾತ್ರ!
● ಈ ಸಂದರ್ಭದಲ್ಲಿ ನನ್ನ 'ಶುಭಂ' ಪುಸ್ತಕದ ಕುರಿತಾಗಿ ನಾಲ್ಕು ಮಾತಾಡಲು ಕೇಳಿಕೊಂಡಾಗ ನನ್ನ ಬಗ್ಗೆಯೇ ಮಾತಾಡಿ ಬಿಟ್ಟರು ಶಿವಣ್ಣ : 'ನನ್ನ ವೃತ್ತಿ ಬದುಕು ಆರಂಭವಾದಾಗಿನಿಂದ ನೋಡುತ್ತಿದ್ದೇನೆ, ಗಣೇಶ್ ಕಾಸರಗೋಡು ಅವರು ಕಿಂಚಿತ್ತೂ ಬದಲಾಗಿಲ್ಲ. 'ಹಾಯ್ ಬೆಂಗಳೂರ್' ಪತ್ರಿಕೆಗೆ ಅಂಕಣ ಬರೆಯುತ್ತಿದ್ದರಿಂದ ಇವರ ಬಗ್ಗೆ ಸ್ವಲ್ಪ ಹೆಚ್ಚೇ ಭಯವಿತ್ತು! ಇದನ್ನು ಹೊರತಾಗಿ ಗಣೇಶ್ ಅವರು ನನಗೆ ಬಂಧುವಂತೆ, ಅಣ್ಣನಂತೆ ಪ್ರೀತಿ ಕೊಟ್ಟವರು. ಒಂದು ರೀತಿಯಲ್ಲಿ ನಮಗೆಲ್ಲಾ ಬುದ್ದಿ ಮಾತು ಹೇಳಿದ ಗುರುವಿನ ಸ್ಥಾನದಲ್ಲಿ ನಿಂತವರು. ನನ್ನನ್ನು ತಮ್ಮ ಸ್ವಂತ ತಮ್ಮನಂತೆ ಕಂಡವರು. ತಪ್ಪು ಮಾಡಿದಾಗ ತಿದ್ದಿದವರು. ಒಳ್ಳೇದು ಮಾಡಿದಾಗ ಬೆನ್ನು ತಟ್ಟಿದವರು. ನನ್ನನ್ನೇ ಅಲ್ಲ, ಈ ಅಣ್ಣ ನಮ್ಮ ಅಪ್ಪಾಜಿ, ವಿಷ್ಣುವರ್ಧನ್, ಅಂಬರೀಶ್, ಕಲ್ಯಾಣಕುಮಾರ್, ನರಸಿಂಹರಾಜು, ಬಾಲಕೃಷ್ಣ...ಮೊದಲಾದ ಅತಿರಥ ಮಹಾರಥರ ಪ್ರೀತಿ, ವಿಶ್ವಾಸ, ಗೌರವ ಪಡೆದುಕೊಂಡವರು. ಇಂಥಾ ಗಣೇಶ್ ಕಾಸರಗೋಡು ಅವರು ನನಗೆ ಕ್ಲೋಸ್ ಫ್ರೆಂಡ್ ಆಗಿ ಸಿಕ್ಕಿರೋದಕ್ಕೆ, ನನಗೆ ಕ್ಲೋಸ್ ಟೀಚರ್ ಆಗಿರೋದಕ್ಕೆ ನಾನು ಹೆಮ್ಮೆ ಪಡ್ತೀನಿ...' - ಅಬ್ಬಾ, ಶಿವಣ್ಣನ ಇಂಥಾ ಮಾತುಗಳ ವಿಡಿಯೋವನ್ನು ಪದೇ ಪದೇ ನೋಡುತ್ತೇನೆ, ಕೇಳುತ್ತೇನೆ...ನಿಮ್ಮ ಈ ಅಮೂಲ್ಯ ಪ್ರೀತಿಗೆ, ವಿಶ್ವಾಸಕ್ಕೆ, ಗೌರವಕ್ಕೆ ನಮೋ ನಮಃ ಶಿವಣ್ಣಾ...
● ಇಂಥಾ ಶಿವಣ್ಣ ಈಗ ಕನ್ನಡ ಚಿತ್ರರಂಗದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದ್ದಾರೆ. ಒಂದು ಉದ್ಯಮದ ಹಿರಿಯಣ್ಣನ ಸ್ಥಾನವನ್ನು ತುಂಬಿದ್ದಾರೆ. 34 ವರ್ಷಗಳ ಕಾಲ ಏಕರೀತಿಯ ಜೀವನ ಮೌಲ್ಯವನ್ನು ಕಾಪಾಡಿಕೊಂಡು ಬರುವುದೆಂದರೆ ಸಾಮಾನ್ಯದ ಮಾತಾ? ಇನ್ನೂ ಹಲವು ದಶಕಗಳ ಕಾಲ ಈ ಅಜಾತಶತ್ರು ನಮ್ಮ ಜತೆ ಆರೋಗ್ಯವಂತರಾಗಿ ಬಾಳಿ ಬದುಕಲಿ ಎಂದು ಆಶಿಸುತ್ತೇನೆ, ಹಾರೈಸುತ್ತೇನೆ...
◆ 'ಶುಭಂ' ಪುಸ್ತಕದ ಮೇಲೆ ಶಿವಣ್ಣನಿಗೆ ವಿಶೇಷವಾದ ಪ್ರೀತಿ. ಈ ಕಾರಣಕ್ಕಾಗಿಯೇ ನನ್ನ ಬಗ್ಗೆ ಮಾತಾಡುವಾಗ 'ಶುಭಂ' ಬಗ್ಗೆ ಕೂಡಾ ಮಾತಾಡಿದ್ದಾರೆ. ಏನು ಮಾತಾಡಿದ್ದಾರೆ ಕೇಳಿ :
^^^^^^^^^^^^^^^^^^^^^^^^^^^^^^^^^^^^^^^^^^^^^^^^
◆ ಇನ್ನು 'ಶುಭಂ' ಪುಸ್ತಕವನ್ನು ಬ್ಯಾನ್ ಮಾಡುವ ವಿಚಾರ. ಊರೆಲ್ಲಾ ಓದುಗರ ಹೃದಯ ಕೊಳ್ಳೆ ಹೊಡೆದ ಮೇಲೆ ಕೋಟೆಯ ದಿಡ್ಡಿ ಬಾಗಿಲು ಹಾಕ್ತಾರಂತೆ, ನಾನ್ಸೆನ್ಸ್! ನಿಮಗೆ ಬೇಕಾ? ವಾಟ್ಸಾಪ್ ಮಾಡಿ : 7899945653
^^^^^^^^^^^^^^^^^^^^^^^^^^^^^^^^^^^^^^^^^^^^^^^^

27/06/2020

◆ 'ಶುಭಂ' ಬಗ್ಗೆ ಡಾ| ರವಿಚಂದ್ರನ್ ಕಿವಿ ಮಾತು ◆
^^^^^^^^^^^^^^^^^^^^^^^^^^^^^^^^^^^^^^^^^^^^^^^^
◆ CMR ಯೂನಿವರ್ಸಿಟಿಯಿಂದ ಡಾಕ್ಟರೇಟ್ ಪಡೆದು 'ಡಾ|ರವಿಚಂದ್ರನ್' ಆಗಿರುವ ಕ್ರೇಜಿಸ್ಟಾರ್ ಅದೇ ಯೂನಿವರ್ಸಿಟಿ ಆಡಿಟೋರಿಯಂನ ವೇದಿಕೆ ಮೇಲೆ ನಿಂತು ಮೈಕ್'ನಲ್ಲಿ ಹೇಳಿದ್ದೇನು ಗೊತ್ತಾ?
'ನಾನು ಓದುವುದರಲ್ಲಿ ಹಿಂದೆ ಬಿದ್ದಾಗ ಅಪ್ಪ ಪ್ರಶ್ನಿಸಲಿಲ್ಲ. ಫೇಲ್ ಆದಾಗಲೂ ಬೈಯ್ಯಲಿಲ್ಲ. ಹೆಚ್ಚು ಓದೋದಿಲ್ಲ ಅಂತ ಹಠ ಹಿಡಿದಾಗಲೂ ಒತ್ತಾಯಿಸಲಿಲ್ಲ. ಆದರೆ ನನ್ಗೆ ಬದುಕಿನ ನಿಜವಾದ ಪಾಠ ಕಲಿಸಿದ್ದು ಅದೇ ಅಪ್ಪನ ಆಫೀಸು! ಅಲ್ಲಿಗೆ ಬರುತ್ತಿದ್ದ ನಿರ್ದೇಶಕರು ಗುರುಗಳಾದರು, ನಿರ್ಮಾಪಕರು ಪ್ರಿನ್ಸಿಪಾಲರಾದರು, ತಂತ್ರಜ್ಞರು ಸಹಪಾಠಿಗಳಾದರು! ಅದೊಂದು ಓಪನ್ ಯೂನಿವರ್ಸಿಟಿಯಾಗಿತ್ತು. ಆ ಯೂನಿವರ್ಸಿಟಿಯಿಂದ ವೃತ್ತಿ ಬದುಕಿನ ಗುರಿಯನ್ನು ಕಂಡೆ. ಇಲ್ಲಿನ ಈ ಯೂನಿವರ್ಸಿಟಿಯಿಂದ ಈಗ ಡಾಕ್ಟರೇಟ್ ಪಡೆದಿದ್ದೇನೆ...' - ಹೀಗೆ ಸಾಗಿತ್ತು ನನ್ನ ಪ್ರೀತಿಯ ಕಲಾವಿದ ರವಿಚಂದ್ರನ್ ಮಾತು.
- ಇಂಥಾ ಡಾ|ರವಿಚಂದ್ರನ್ ವೈಯಕ್ತಿಕವಾಗಿ ನನ್ನ ಬಗ್ಗೆ ಮತ್ತು ನಾನು ಬರೆದಿರುವ 'ಶುಭಂ' ಪುಸ್ತಕದ ಬಗ್ಗೆ ನಾಲ್ಕು ಮಾತಾಡಿದ್ದಾರೆ ಇಲ್ಲಿ :
^^^^^^^^^^^^^^^^^^^^^^^^^^^^^^^^^^^^^^^^^^^^^^^^
◆ ಇನ್ನು 'ಶುಭಂ' ಪುಸ್ತಕ ಬ್ಯಾನ್ ಆಗುವ ವಿಚಾರ. ಊರೆಲ್ಲಾ ಓದುಗರ ಹೃದಯ ಕೊಳ್ಳೆ ಹೊಡೆದ ಮೇಲೆ ಕೋಟೆಯ ದಿಡ್ಡಿ ಬಾಗಿಲು ಹಾಕ್ತಾರಂತೆ, ನಾನ್ಸೆನ್ಸ್! ನಿಮಗೆ ಬೇಕಾ? ವಾಟ್ಸಾಪ್ ಮಾಡಿ : 7899945653
^^^^^^^^^^^^^^^^^^^^^^^^^^^^^^^^^^^^^^^^^^^^^^^^

◆  'ಶುಭಂ' ಪುಸ್ತಕ ಬೆಳ್ಳಿತೆರೆ ಬೆಳಗಲಿದೆಯಾ? ◆^^^^^^^^^^^^^^^^^^^^^^^^^^^^^^^^^^^^^^^^^^^^^^^^● ಪತ್ರಕರ್ತೆಯಾದರೆ ನನ್ನ ಆಯ್ಕೆ ರಮ್...
24/06/2020

◆ 'ಶುಭಂ' ಪುಸ್ತಕ ಬೆಳ್ಳಿತೆರೆ ಬೆಳಗಲಿದೆಯಾ? ◆
^^^^^^^^^^^^^^^^^^^^^^^^^^^^^^^^^^^^^^^^^^^^^^^^
● ಪತ್ರಕರ್ತೆಯಾದರೆ ನನ್ನ ಆಯ್ಕೆ ರಮ್ಯಾ, ಪತ್ರಕರ್ತನಾದರೆ ನನ್ನ ಆಯ್ಕೆ ಸಂಚಾರಿ ವಿಜಯ್ ●
^^^^^^^^^^^^^^^^^^^^^^^^^^^^^^^^^^^^^^^^^^^^^^^^
ನಿರ್ದೇಶಕ ಗೆಳೆಯರೊಬ್ಬರು ಫೋನ್ ಮಾಡಿ ಕೇಳಿಕೊಂಡರು : 'ಗೆಳೆಯರೇ, ಶುಭಂ ಪುಸ್ತಕವನ್ನು ಈಗ ತಾನೇ ಓದಿ ಮುಗಿಸಿದೆ. ಯಾವುದೋ ಲೋಕದಲ್ಲಿದ್ದೀನಿ ಅಂತ ಅನಿಸ್ತಾ ಇದೆ! ತಕ್ಷಣದಲ್ಲೇ ಮರೆಯುವಂಥಾ ನೆನಪುಗಳಲ್ಲ ಇವು. ಒಂದು ರಿಕ್ವೆಸ್ಟ್ : ದಯವಿಟ್ಟು ಈ ಪುಸ್ತಕದ ಸಿನಿಮಾ ಹಕ್ಕನ್ನು ಬೇರೆ ಯಾರಿಗೂ ಕೊಡಬೇಡಿ. ಒಂದೆರಡು ತಿಂಗಳಲ್ಲೇ ನಿಮ್ಮನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಆವರೆಗೆ ಹಕ್ಕು ನಿಮ್ಮಲ್ಲೇ ಇರ್ಲಿ...' - ಈ ಗೆಳೆಯನಿಗೆ ಏನು ಹೇಳಲಿ? ಅದು ಅವನ ಪ್ರೀತಿ ಮತ್ತು ವಿಶ್ವಾಸ.
ಇದನ್ನು ಇಲ್ಲಿ ಯಾಕೆ ಹೇಳಿದೆನೆಂದರೆ : ಇಬ್ಬರು ನಾಯಕ ನಟರು, ಒಬ್ಬ ಸಂಗೀತ ನಿರ್ದೇಶಕರು, ಒಬ್ಬ ನಿರ್ಮಾಪಕರು ಮತ್ತು ಒಬ್ಬ ಅವಾರ್ಡ್ ವಿನ್ನರ್ ನಿರ್ದೇಶಕಿ ಈಗಾಗಲೇ ಫೋನ್ ಮಾಡಿ 'ಶುಭಂ' ಪುಸ್ತಕದ ಸಿನಿಮಾ ಅವತರಣಿಕೆಯ ಬಗ್ಗೆ ಸ್ಕೆಚ್ ಹಾಕಿರುವುದನ್ನು ಹೇಳಿಕೊಂಡಿದ್ದಾರೆ! ಇಷ್ಟಕ್ಕೂ ಈ ಪುಸ್ತಕ ಉದ್ಯಮಕ್ಕೆ ಸರಿಯಾಗಿ ಸಪ್ಲೈ ಆಗಿಲ್ಲ. ಕೊರೊನಾ ಕಾರಣಕ್ಕಾಗಿ 'ಶುಭಂ' ಪುಸ್ತಕವನ್ನು ನನ್ನ ಸಾಕಷ್ಟು ಸಿನಿಮಾ ಬಂಧುಗಳಿಗೆ ತಲುಪಿಸಲಾಗಿಲ್ಲ. ಇನ್'ಫ್ಯಾಕ್ಟ್ ನಾನು ಈ ಪುಸ್ತಕವನ್ನು ಬರೆದದ್ದೇ ಉದ್ಯಮಕ್ಕಾಗಿ! ಇದರ ಮುಖ್ಯ ಪಾತ್ರ ಒಬ್ಬ ಸಿನಿಮಾ ಪತ್ರಕರ್ತ! ಒಂದು ರೀತಿಯಲ್ಲಿ ಇದರ ಲುಕ್ ಬಿಗ್ ಬಜೆಟ್ ಫಿಲ್ಮ್ ಥರಾನೇ ಇದೆ! ಮೇಲೊಂದು ಪ್ಲಾಸ್ಟಿಕ್ ಕವರ್, ಅದರೊಳಗೊಂದು ಸೊಗಸಾದ ರಟ್ಟಿನ ಕವರ್, ಅದರೊಳಗೆ 900 ಪುಟಗಳ ಸಮೃದ್ಧ ಸಿನಿಮಾ ಸಾಹಿತ್ಯದ ಹೂರಣ! ಈ ಕಾರಣಕ್ಕಾಗಿಯೇ ಇದರ ಯೋಗ್ಯತೆಗೆ ಅನುಗುಣವಾಗಿ ಮುಖ ಬೆಲೆ ಇಟ್ಟಿದ್ದೇನೆ. ಕೊರಿಯರ್ ಮೂಲಕ ತರಿಸಿಕೊಳ್ಳುವವರು ಅದರ ಭಾರವನ್ನೂ ಹೊರಬೇಕು! ನಂಬುತ್ತೀರೋ ಬಿಡುತ್ತೀರೋ ಗೊತ್ತಿಲ್ಲ, ಅಷ್ಟೊಂದು ಅಮೂಲ್ಯ ಕೃತಿಯನ್ನು ಅಷ್ಟೇ ಬೆಲೆ ಕೊಟ್ಟು ಕೊರಿಯರ್ ಮೂಲಕ ತರಿಸಿಕೊಳ್ಳುವವರ ಸಂಖ್ಯೆಯ ಗುಟ್ಟನ್ನು ಇಲ್ಲಿ ಬಿಚ್ಚಿಡಲಾರೆ. ಆದರೆ ನನ್ನ ನಿರೀಕ್ಷೆ ಮೀರಿ 'ಶುಭಂ' ಸೇಲಾಗುತ್ತಿದೆ. ಇದಕ್ಕಾಗಿ ನನ್ನ ಪ್ರೀತಿಯ ಓದುಗರಿಗೊಂದು ದೊಡ್ಡ ಸಲಾಂ ಹೊಡೆಯಲೇ ಬೇಕು!
ಇವಿಷ್ಟು ವ್ಯಾಪಾರ, ವ್ಯವಹಾರದ ವಿಷಯವಾಯಿತು. ಇನ್ನು ಓದುಗರ ಅಭಿಪ್ರಾಯದ ಕಡೆ ಬಂದರೆ : ನಿಜಕ್ಕೂ ರೋಮಾಂಚನವಾಗುತ್ತಿದೆ! ಓದುಗರು ನೇರವಾಗಿ ನನಗೆ ಅಭಿಪ್ರಾಯ ತಿಳಿಸುವುದಲ್ಲದೇ, ಫೇಸ್ ಬುಕ್'ಗೆ ಅಪ್ಲೋಡ್ ಮಾಡಿ ಎಂಜೋಯ್ ಮಾಡುತ್ತಿದ್ದಾರೆ ಕಣ್ರೀ...ಒಬ್ಬೇ ಒಬ್ಬ ಓದುಗ 'ಶುಭಂ' ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದರೆ ಕೇಳಿ...ಇನ್ನೂ ಕೆಲವರು 'ಮರು ಮುದ್ರಣ ಯಾವಾಗ?' ಅಂತ ಕೇಳುತ್ತಿದ್ದಾರೆ. ಖಡಾಖಂಡಿತವಾಗಿ ಹೇಳುತ್ತಿದ್ದೇನೆ 'ಮರು ಮುದ್ರಣದ ವ್ಯವಹಾರಾನೇ ಇಲ್ಲ. ಇರುವ ಕೆಲವೇ ಕೆಲವು ಕಾಪಿಗಳನ್ನು ಮಾರಿದರೆ ಅಷ್ಟೇ ಸಾಕು. ಮೊದಲೇ ಹೇಳಿದ್ದೇನೆ ಇದು ಬಿಗ್ ಬಜೆಟ್ ವ್ಯವಹಾರ ಅಂತ! ಒಬ್ಬ ಸಿನಿಮಾ ಪತ್ರಕರ್ತನ ಬದುಕಲ್ಲಿ ಇಂಥಾದ್ದೊಂದು ಪುಸ್ತಕ ರೂಪಿಸುವುದು ಕೇವಲ ಕನಸು! ಇಂಥಾ ಕನಸನ್ನು ನನಸು ಮಾಡಿದ ತೃಪ್ತಿ ನನಗಿದೆ, ಅಷ್ಟು ಸಾಕು. ನಾನೊಬ್ಬ ಬಡ ಸಿನಿಮಾ ಪತ್ರಕರ್ತ. ಒಂದು ಶ್ರೀಮಂತ ಪುಸ್ತಕವನ್ನು ನಿಮ್ಮ ಮುಂದಿಟ್ಟಿರುವುದೇ ನನ್ನ ಕೆಚ್ಚೆದೆಯ ಹೆಚ್ಚುಗಾರಿಕೆ! ಇಂಥಾ ಶ್ರೀಮಂತ ಪುಸ್ತಕದ ಬಿಡುಗಡೆ ಸಮಾರಂಭವನ್ನು ಅಷ್ಟೇ ಶ್ರೀಮಂತವಾಗಿ ನಡೆಸಿಕೊಟ್ಟಿದ್ದಾರೆ ಮಿತ್ರ ಶ್ರವಣ ಲಕ್ಷ್ಮಣ್.
ಈಗ 'ಶುಭಂ' ಪುಸ್ತಕದ ಸಿನಿಪಯಣದ ವಿಚಾರ, ಶುರುವಾಗಲಿ ಬಿಡಿ. ಯೋಗ-ಯೋಗ್ಯತೆ ಕೂಡಿ ಬಂದಾಗ ಇದನ್ನು ತಡೆಯುವವರ್ಯಾರು? ಆದರೆ ಒಂದು ವಿಚಾರವನ್ನು ಮಾತ್ರ ನಿಮ್ಮ ಮುಂದಿಡುತ್ತಿದ್ದೇನೆ : ಒಂದು ವೇಳೆ 'ಶುಭಂ' ಸಿನಿಮಾದಲ್ಲಿ ಪತ್ರಕರ್ತನ ಬದಲು ಪತ್ರಕರ್ತೆಯ ಪಾತ್ರವಾದರೆ ನನ್ನ ಆಯ್ಕೆ ಮೋಹಕ ನಟಿ ರಮ್ಯಾ. ಪತ್ರಕರ್ತನೇ ಆದರೆ ನನ್ನ ಆಯ್ಕೆ ಸಂಚಾರಿ ವಿಜಯ್...
◆ ಓಂ ಶ್ರೀ ಗಣೇಶಾಯ ನಮಃ
^^^^^^^^^^^^^^^^^^^^^^^^^^^^^^^^^^^^^^^^^^^^^^^
◆ ಇನ್ನು 'ಶುಭಂ' ಪುಸ್ತಕವನ್ನು ಬ್ಯಾನ್ ಮಾಡುವ ವಿಚಾರ. ಊರೆಲ್ಲಾ ಓದುಗರ ಹೃದಯ ಕೊಳ್ಳೆ ಹೊಡೆದ ಮೇಲೆ ಕೋಟೆಯ ದಿಡ್ಡಿ ಬಾಗಿಲು ಹಾಕ್ತಾರಂತೆ, ನಾನ್ಸೆನ್ಸ್! ನಿಮಗೆ ಬೇಕಾ? ವಾಟ್ಸಾಪ್ ಮಾಡಿ : 7899945653
^^^^^^^^^^^^^^^^^^^^^^^^^^^^^^^^^^^^^^^^^^^^^^^^
◆ ಕೆಳಗಿನ ಫೋಟೋ : 'ಸ್ನೇಹಾ ಬುಕ್ ಹೌಸ್'ನ ಗೆಳೆಯ ಪರಶಿವಪ್ಪ ಪ್ರಕಟಿಸಿದ ನನ್ನ 'ನೆನಪಿನಂಗಳದಲ್ಲಿ ಶಂಕರನಾಗ್' ಪುಸ್ತಕವನ್ನು ಬಿಡುಗಡೆ ಮಾಡಿದ್ದು ಮೋಹಕ ನಟಿ ರಮ್ಯಾ...

04/11/2019

◆ 'ಶುಭಂ' ಪುಸ್ತಕಕ್ಕೆ ಶುಭ ಕೋರಲು ಬರುತ್ತಿದ್ದಾರೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್...◆. Book releasing soon.

ಚದುರಿದ ಚಿತ್ರಗಳು : • ಮರೆಗೆ ಸರಿದು ಹೋದ ಸಿನಿ ಕಲಾವಿದರ ಬದುಕಿನ ಕಥೆ-ವ್ಯಥೆಯೇ ಈ ಪುಸ್ತಕದ ವಸ್ತು. 2012ರ ಸಾಲಿನ ರಾಜ್ಯ ಪ್ರಶಸ್ತಿ ಪಡೆದ ಈ ಪ...
17/03/2019

ಚದುರಿದ ಚಿತ್ರಗಳು :

• ಮರೆಗೆ ಸರಿದು ಹೋದ ಸಿನಿ ಕಲಾವಿದರ ಬದುಕಿನ ಕಥೆ-ವ್ಯಥೆಯೇ ಈ ಪುಸ್ತಕದ ವಸ್ತು. 2012ರ ಸಾಲಿನ ರಾಜ್ಯ ಪ್ರಶಸ್ತಿ ಪಡೆದ ಈ ಪುಸ್ತಕ ಒಂದು ರೀತಿಯಲ್ಲಿ ಸಿನಿ ಕಲಾವಿದರ ದುರಂತ ಬದುಕಿಗೆ ಹಿಡಿದ ಕನ್ನಡಿ. ಆ ಮೂಲಕ ಇಂಥಾ ಅಸಹಾಯಕ ಕಲಾವಿದರಿಗೆ ಸಹಾಯ ಹಸ್ತ ನೀಡಿದ ಧನ್ಯತೆ ಈ ಪುಸ್ತಕದ್ದು...!

•ರಾಜ್ಯಸರ್ಕಾರದ ಎರಡು ಪ್ರಶಸ್ತಿ : ಶ್ರೇಷ್ಠ ಪುಸ್ತಕ ಮತ್ತು ಶ್ರೇಷ್ಠ ಪ್ರಕಾಶಕರು. ಶ್ರೇಷ್ಠ ಪುಸ್ತಕಕ್ಕೆ ಗಣೇಶ್ ಕಾಸರಗೋಡು ಅವರಿಗೆ ಮತ್ತು ಶ್ರೇಷ್ಠ ಪ್ರಕಾಶಕ ಪ್ರಶಸ್ತಿಗೆ ಗಾಯತ್ರಿ ಗಣೇಶ್ ಅವರಿಗೆ ಪ್ರಶಸ್ತಿ.

ಛಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ನಿಮಗೆ ಗೊತ್ತಿಲ್ಲದ ಹಲವು ರಹಸ್ಯಗಳು . OFFER PRICE Rs.110/- only
05/10/2018

ಛಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ನಿಮಗೆ ಗೊತ್ತಿಲ್ಲದ ಹಲವು ರಹಸ್ಯಗಳು . OFFER PRICE Rs.110/- only

Address

"Ammana Mane" 19/37 B. M. Sri Cross Road, Rajeevgandhi Mainroad, Kanakapura Mainroad, Jaraganahalli
Bangalore
560078

Telephone

+919448243127

Website

Alerts

Be the first to know and let us send you an email when Amma Prakaashana posts news and promotions. Your email address will not be used for any other purpose, and you can unsubscribe at any time.

Contact The Business

Send a message to Amma Prakaashana:

Share

Category