Sawanna Books

  • Home
  • Sawanna Books

Sawanna Books We at Sawanna Enterprises have always been committed to improve the society from all dimensions through Books

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಡಾ. ಲಕ್ಷ್ಮಣ  ವಿ. ಎ. ಅವರು ಬರೆದಿರುವ "ಟೇಕ್‌ ಇಟ್‌ ಈಜಿ಼", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆ...
15/07/2025

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಡಾ. ಲಕ್ಷ್ಮಣ ವಿ. ಎ. ಅವರು ಬರೆದಿರುವ "ಟೇಕ್‌ ಇಟ್‌ ಈಜಿ಼", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.
“The wound is place where light enters you.” – Rumi
ನಿಮಗೊಂದು ಗಾಯವಿರಲಿ. ಆ ಗಾಯದ ಗುರುತು ಎಲ್ಲರ ಕಣ್ಣಿಗೂ ಕಾಣುವಂತಿರಲಿ ಮತ್ತು ಗಾಯದ ನೋವೇ ನಿಮನ್ನು ಅನುಕ್ಷಣ ಒಲೆಯ ಮೇಲೆ ಕುದಿ ಎಸರು ಕುದಿವಂತೆ ನಿಮನ್ನು ತಳಮಳಿಸುವಂತೆ ಮಾಡಲಿ. ಆ ಗಾಯದ ಮೂಲಕವೇ ನಿಮ ದೇಹದೊಳಗೊಂದು ಸಣ್ಣ ಬೆಳಕಿನ ಕಿರಣ ಪ್ರವೇಶ ಪಡೆದು. ಆ ಬೆಳಕು ಬೆಂಕಿಯಾಗಿ ನಿಮ ದೇಹದ ಅಣು ಅಣುಕೋಶಗಳಲ್ಲಿ ಕೆಚ್ಚು ಆವೇಶ ಗೆಲ್ಲುವ ಹಠ ತುಂಬಲಿ.
ಬದುಕಿನಲ್ಲಿ ಗೆಲುವಿನ ಪ್ರೇರಣೆ ಹತ್ತು ಹಲವು ಕಡೆಯಿಂದ ದಕ್ಕಿರುತ್ತದೆ. ಬದ್ಧನಾಗುವ ಮೊದಲು ಸಿದ್ಧಾರ್ಥನಿಗೆ ಸಿಕ್ಕಿದ್ದು ರಾಜ ಬೀದಿಯಲ್ಲಿ. ಮಹಾತನಾಗುವ ಮೊದಲು ಮೋಹನದಾಸರಿಗೆ ದಕ್ಕಿದ್ದು ದಕ್ಷಿಣ ಆಫ್ರಿಕಾದ ಯಾವುದೋ ರೈಲು ನಿಲ್ದಾಣದ ್ಲಾಟ್‌ ಾರ್ಮಿನಲ್ಲಿ. ಮತ್ತು ನೆಲ್ಸನ್‌ ಮಂಡೇಲಾರಿಗೆ ಜೈಲಿನಲ್ಲಿ.
ಗೆಲುವೆಂಬುದು ಬಲು ಮಾಯಾವಿ. ಸಾವಿರ ಸಾವಿರ ಸಲ ಸೋತರೂ ಅವುಡುಗಚ್ಚಿ ನಿಲ್ಲುವ ಆತವಿಶ್ವಾಸ ನಿರೀಕ್ಷಿಸುತ್ತದೆ. ಅವಮಾನಗಳನ್ನು ಹಿಮೆಟ್ಟಿ ನಿಲ್ಲುವ ಎದೆಗಾರಿಕೆ ಕೇಳುತ್ತದೆ. ಬಿದ್ದಾಗ, ಸೋತಾಗ, ಜಗ ನುಡಿವ ಕೊಂಕು ನುಡಿಗಳನ್ನು ಜೀರ್ಣಿಸಿಕೊಳ್ಳುವ ಧೈರ್ಯ ಬೇಕಾಗುತ್ತದೆ. ಧೈರ್ಯವೆಂದರೆ ನಿರಂತರವಾಗಿ ಸಿಂಹದಂತೆ ಘರ್ಜಿಸುವುದಲ್ಲ. ಬದಲಿಗೆ ವಿನಯವಾಗಿ, ಅಷ್ಟೇ ಶ್ರದ್ಧೆಯಿಂದ, ನಿರಂತರ ಪ್ರಯತ್ನ ಜಾರಿಯಲ್ಲಿಡುವುದು. ಏಕೆಂದರೆ ಗೆಲುವಿಗೆ ಊರೆಲ್ಲಾ ನೆಂಟರಾದರೆ ಸೋಲು ಯಾವೊತ್ತಿಗೂ ಒಬ್ಬಂಟಿ.
ಸುಮನೆ ಯಶಸ್ವಿ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಗಮನವಿಟ್ಟು ಓದಿ:
ನಮಗೆ ನಿಮಗಿರುವ ಕಾಲದ ಮಿತಿಯಲ್ಲೇ ಅವರು ಸಮಯವನ್ನು ಭಿನ್ನವಾಗಿ ವಿಂಗಡಿಸಿ ಹೆಚ್ಚು ಹೆಚ್ಚು ಬೆವರು ಸುರಿಸಿರುತ್ತಾರೆ. ಒಬ್ಬ ಸಚಿನ್‌ ತೆಂಡುಲ್ಕರ್‌ ಆಗಲು ಉಳಿದ ಆಟಗಾರಗಿಂತ ಹೆಚ್ಚು ಹೊತ್ತು ನೆಟ್‌ನಲ್ಲಿ ತಯಾರಿ ನಡೆಸಿರುತ್ತಾರೆ. ವಿಶ್ವ ಚೆಸ್‌‍ನ ಗ್ರ್ಯಾಂಡ್‌ ಮಾಸ್ಟರ್‌ ಆನಂದ ತಾವು ಮಲಗಿದ್ದ ಕೋಣೆಯ ಬಿಳಿ ತಾರಸಿಯನ್ನೇ ದಿಟ್ಟಿಸುತ್ತ ಅದರಲ್ಲೇ ಚೆಸ್‌‍ನ ಮನೆಗಳನ್ನು ಕಲ್ಪಿಸಿಕೊಂಡು ತಮೊಂದಿಗೆ ತಾವೇ ಸ್ಪರ್ಧಿಗೆ ಬಿದ್ದು ಗೆದ್ದಿರುತ್ತಾರೆ. ಒಬ್ಬ ಮುತ್ತುರಾಜ್‌ ಡಾ. ರಾಜಕುಮಾರ ಆಗುವ ಮುಂಚೆ ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಎಷ್ಟೊಂದು ವರ್ಷ ನಟನೆಯ ತಾಲೀಮೆಂಬ ಮಣ್ಣು ಹೊತ್ತಿರುತ್ತಾರೆ. ಒಬ್ಬ ವಿಜಯ್‌ ಸಂಕೇಶ್ವರ ಯಶಸ್ವಿ ಉದ್ಯಮಿಯಾಗುವ ಮುಂಚೆ ಅವರು ಒಂದು ಲಾರಿ ಡ್ರೈವರ್‌ ಆಗಿದ್ದರು. ಒಂದು ಪತ್ರಿಕೆಯ ಮಾಲೀಕರಾಗುವ ಮುಂಚೆ ಕ್ಯಾಲೆಂಡರ್‌ ಛಾಪಿಸುವ ಪ್ರೆಸ್‌‍ನಲ್ಲಿ ಮೊಳೆ ಜೋಡಿಸುತ್ತಿದ್ದರು. ಒಬ್ಬ ಜಗಜೀತ್‌ ಸಿಂಗ್‌ ಖ್ಯಾತ ಗಾಯಕರಾಗಲು ಪ್ರತಿ ದಿನ ಕನಿಷ್ಠ ಎರಡು ಗಂಟೆ ರಿಯಾಜು ನಡೆಸಿರುತ್ತಾರೆ. ರಾಗಗಳೊಂದಿಗೆ ಜಗಳಕ್ಕೆ ಬಿದ್ದು ಒಂದು ದಿನ ಮುನಿದ ಪ್ರೇಯಸಿಯನ್ನು ಒಲಿಸಿಕೊಳ್ಳುವ ಹಾಗೆ ತನ್ನ ಗಂಟಲಿನಲ್ಲಿ ಅಮೃತದಂತಹ ದನಿಯ ಧರಿಸಿ ಜಗಕೆ ಗಜಲ್‌ನ ಜೋಗುಳ ಹಾಡಿ ಮಲಗಿಸಿ ತಾವು ಯಶಸ್ವಿ ಎನಿಸಿಕೊಳ್ಳುತ್ತಾರೆ.

Online Links

Sapnaonline
https://www.sapnaonline.com/.../take-easy-lakshman...

Kannadaloka
https://tinyurl.com/5f42s8sc

Amazon
https://www.amazon.in/dp/B0FHBLVKK8

Flipkart
https://www.flipkart.com/take-it-easy/p/itm804340faad0c9...

Lakshman VA

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ವೈ. ಜಿ. ಮುರಳೀಧರನ್ ಅವರು ಬರೆದಿರುವ "ಬದುಕು ಬದಲಿಸಬೇಕೆ? ರೂಢಿ ಬದಲಿಸಿ", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆ...
15/07/2025

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ವೈ. ಜಿ. ಮುರಳೀಧರನ್ ಅವರು ಬರೆದಿರುವ "ಬದುಕು ಬದಲಿಸಬೇಕೆ? ರೂಢಿ ಬದಲಿಸಿ", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.
ಪ್ರತಿಯೊಬ್ಬರ ಬದುಕಿನಲ್ಲೂ ಬದಲಾಗಬೇಕೆಂಬ ಬಯಕೆ ಆಗಾಗ ಕಾಣಿಸಿಕೊಳ್ಳುತ್ತದೆ. ಯಾವುದಾದರು ವಿಶೇಷ ಘಟನೆ ಸಂಭವಿಸಿದಾಗ ಬದಲಾವಣೆಗೆ ಪ್ರೇರಣೆ ದೊರೆಯುತ್ತದೆ. ಸಂತೋಷವನ್ನು ಉಂಟುಮಾಡುವ ಘಟನೆಗಳಿಗಿಂತ ದುಃಖ ತರುವ ಘಟನೆಗಳಿಂದ ಬದಲಾಗುವ ಪ್ರಸಂಗಗಳೇ ಹೆಚ್ಚು. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಈ ಪ್ರೇರಣೆ ಹೆಚ್ಚು ದಿನ ಉಳಿಯುವುದಿಲ್ಲ. ಘಟನೆ ನಡೆದ ಒಂದೆರಡು ದಿನಗಳಲ್ಲಿ ಅದನ್ನು ಮರೆತು ಬಿಡುತ್ತೇವೆ. ಬದಲಾವಣೆಯ ಪ್ರಯತ್ನ ಮುಂದೂಡಲ್ಪಡುತ್ತದೆ. ಹೀಗಾಗಬಾರದು. ಬದಲಾವಣೆ ಈ ಜಗದ ನಿಯಮ. ಬದುಕಿನದ್ದುಕ್ಕೂ ನಾವು ಬದಲಾಗುವುದಕ್ಕೆ ಸಿದ್ಧರಾಗಿರಬೇಕು. ಆಗ ಮಾತ್ರ ಬದುಕಿಗೊಂದು ಅರ್ಥ ಇರುತ್ತದೆ.
ಬದಲಾಗಬೇಕಾದರೆ ಅನೇಕ ಅಡಚಣೆಗಳು ಎದುರಾಗುತ್ತದೆ. ಉದಾಹರಣೆಗೆ ಈಗಿನ ಸುರಕ್ಷಿತ ಜೀವನ ಪದ್ಧತಿಯನ್ನು ಬಿಡುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಅನೇಕ ವರ್ಷಗಳಿಂದ ಹೇಗೆ ನಡೆದುಕೊಂಡು ಬಂದಿದ್ದೇವೋ ಅದನ್ನೇ ಮುಂದುವರಿಸಲು ಮನಸ್ಸು ಹವಣಿಸುತ್ತದೆ. ಹೊಸ ಅನುಭವ ಪಡೆಯುವುದಕ್ಕೆ ಭಯಪಡುತ್ತೇವೆ. ಇದಕ್ಕೆಲ್ಲ ಮೂಲ ಕಾರಣ ನಮ್ಮಲ್ಲಿ ಆಳವಾಗಿ ಬೇರು ಬಿಟ್ಟಿರುವ ರೂಢಿ. ಈ ರೂಢಿ ಬದಲಿಸಿದರೆ ಬದಲಾವಣೆ ಸುಲಭವಾಗುತ್ತದೆ. ರೂಢಿ ಮತ್ತು ಬದಲಾವಣೆ ಒಂದೇ ನಾಣ್ಯದ ಎರಡು ಮುಖಗಳದ್ದಿಂತೆ. ಬಹಳಷ್ಟು ರೂಢಿಗಳು ನಮಗೆ ಅರಿವಿಲ್ಲದೆ ನಮ್ಮಲ್ಲಿ ಬಂದು ಸೇರಿಕೊಳ್ಳುತ್ತದೆ. ಆದ್ದರಿಂದ ರೂಢಿ ಹೇಗೆ ಸೃಷ್ಟಿಗೊಳ್ಳುತ್ತದೆ, ಅದಕ್ಕೆ ಕಾರಣಗಳು ಯಾವುವು, ಅದರಿಂದ ಬಿಡುಗಡೆ ಪಡೆಯುವುದು ಹೇಗೆ ಇತ್ಯಾದಿ ಅರ್ಥಮಾಡಿಕೊಂಡರೆ ಬದಲಾವಣೆ ಸಾಧ್ಯ.

Online Links

Sapnaonline
https://www.sapnaonline.com/.../baduku-badalisabeke-roodi...

Beetle Book Shop
https://beetlebookshop.com/.../baduku-badalisabeke-roodi...

Kannadaloka
https://tinyurl.com/38ywyab6

Amazon
https://www.amazon.in/dp/8198837744

Flipkart
https://www.flipkart.com/product/p/itme?pid=9788198837745

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಡಾ. ದೀಕ್ಷಿತಾ ವರ್ಕಾಡಿ ಅವರು ಬರೆದಿರುವ "ಗರ್ಭ ಸಂಸ್ಕಾರ", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌...
08/07/2025

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಡಾ. ದೀಕ್ಷಿತಾ ವರ್ಕಾಡಿ ಅವರು ಬರೆದಿರುವ "ಗರ್ಭ ಸಂಸ್ಕಾರ", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.
• ಮಗುವನ್ನು ಗರ್ಭದಲ್ಲಿಯೇ ಧನಾತ್ಮಕವಾಗಿ ಪ್ರಭಾವಿಸುವ ಬಗೆ
• ಗರ್ಭಿಣಿಯ ಮಾನಸಿಕ ಆರೋಗ್ಯ
• ದಿನಚರಿ, ಗರ್ಭ ಸಂವಾದ, ಆಹಾರ, ಸಂಗೀತ
• ಭ್ರೂಣದ ಬುದ್ಧಿಯ ಬೆಳವಣಿಗೆಗೆ ಚಟುವಟಿಕೆಗಳು
• ಗರ್ಭ ಸಂಸ್ಕಾರ ಮಾಡಿದ ತಾಯಿ ಮಕ್ಕಳ ಯಶೋಗಾಥೆಗಳು
• ಗರ್ಭಿಣಿಯ ತಪ್ಪು-ಕೇಸ್‌ ಸ್ಟಡಿಗಳು
• ಗರ್ಭಿಣಿಗೆ ನಿಷಿದ್ಧವಾದದ್ದು
• ಮಗುವಿನೊಂದಿಗೆ ಅತ್ಯುತ್ತಮ ಬಾಂಧವ್ಯಕ್ಕೆ ಮುನ್ನುಡಿ
• ನಾರ್ಮಲ್‌ ಡೆಲಿವರಿ, ಆಸ್ಪತ್ರೆಗೆ ಹೋಗುವ ಮೊದಲಿನ ತಯಾರಿ
• ಪ್ರಸವಾನಂತರದ ಆರೋಗ್ಯ
• ಮಗು ಹೊಂದಲು ಬಯಸುವ ದಂಪತಿಗಳಿಗೆ ಸಲಹೆ
ಮೊದಲಾದ ಬಹುಮುಖ್ಯ ಮಾಹಿತಿಗಳ ಆಗರ ಈ ಪುಸ್ತಕ. ಇದು ಗರ್ಭಸ್ಥ ಸ್ತ್ರೀಗೆ ತಿಳಿದಿರಲೇಬೇಕಾದ ಕನಿಷ್ಠ ಮಾಹಿತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಖಂಡಿತವಾಗಿಯೂ ಈ ಜ್ಞಾನ ತಾಯಿ-ಮಗುವಿನ ಬದುಕನ್ನೇ ಬದಲಾಯಿಸಬಹುದು. ನೀವು ಓದಿ. ಇಷ್ಟವಾದರೆ ನಿಮ್ಮ ಆಪ್ತ ಗರ್ಭಿಣಿ ಹೆಣ್ಣು ಮಕ್ಕಳಿಗೆ ಉಡುಗೊರೆಯಾಗಿ ನೀಡಿ. ಶಕ್ತ, ಶಾಂತ, ಸಂಸ್ಕಾರಿ ಜನಾಂಗದ ನಿರ್ಮಾಣದಲ್ಲಿ ನಮ್ಮೆಲ್ಲರ ಪಾಲಿರಲಿ.
Online Links:

Sapnaonline
https://www.sapnaonline.com/.../garbha-samskara...

kannadaloka
https://tinyurl.com/yrrrmrn3

Beetle Book Shop
https://beetlebookshop.com/products/garbha-samskara
Amazon
https://amzn.in/d/fKLDyLU

Flipkart
https://www.flipkart.com/garbha.../p/itme5513ab4a6ed7...

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಡಾ|| ಶ್ವೇತಾ ಬಿ ಸಿ  ಬರೆದಿರುವ "ಒತ್ತಡ ಮುಕ್ತ ಜೀವನಕ್ಕೆ 101 ಮ್ಯಾಜಿಕ್ ಮಂತ್ರಗಳು", ಈಗ ಎಲ್ಲಾ ಪ್ರಮುಖ ಪುಸ...
02/07/2025

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಡಾ|| ಶ್ವೇತಾ ಬಿ ಸಿ ಬರೆದಿರುವ "ಒತ್ತಡ ಮುಕ್ತ ಜೀವನಕ್ಕೆ 101 ಮ್ಯಾಜಿಕ್ ಮಂತ್ರಗಳು", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.

ಎಲ್ಲರೂ ಇಂದು ಸಾವಧಾನತೆಯ ಹಾಗೂ ನಮ್ಮ ಮೇಲೆ ನಾವು ಹೂಡಿಕೆ ಮಾಡುವುದು ಹೇಗೆ? ಎಂಬುದರ ಬಗ್ಗೆ ಮಾತನಾಡುತ್ತಿದ್ದಾರೆ. `ಒತ್ತಡ ಮುಕ್ತ ಜೀವನಕ್ಕೆ 101 ಮ್ಯಾಜಿಕ್‌ ಮಂತ್ರಗಳು ಇಲ್ಲಿನ ಪ್ರತಿ ಮ್ಯಾಜಿಕ್‌ ಮಂತ್ರಗಳು ಮನಸ್ಸನ್ನು ಹೇಗೆ ಉಪಯೋಗಿಸಿಕೊಂಡು ಬದುಕನ್ನು ರೂಪಿಸಿಕೊಳ್ಳುವುದು ಎಂಬ ತುಡಿತದ ರೂಪಕಗಳೇ ಆಗಿವೆ.
ಪುಸ್ತಕದ ಪ್ರತೀ ಲೇಖನಗಳು ಮಾನಸಿಕ ಸ್ವಯಂ-ಆರೈಕೆ ಜೊತೆಗೆ ದೇಹ ಹಾಗೂ ಮನಸ್ಸನ್ನು ಉತ್ತೇಜಿಸುವ ಸೃಜನಾತ್ಮಕ ಜೀವನ ಶೈಲಿಯ ರಚನೆಯ ಕುರಿತಾಗಿ ಮಾತನಾಡುತ್ತಾ ಹೋಗುತ್ತವೆ.
ಸಂವೇದನೆಗಳನ್ನು, ಆಲೋಚನೆಗಳನ್ನು ಈ ಕ್ಷಣದ ತುರ್ತಿಗೆ ಅಂಗೀಕರಿಸುತ್ತ, ಶಾಂತಗೊಳಿಸುತ್ತಾ, ನಿಭಾಯಿಸುತ್ತಾ ಆ ಮೂಲಕ ಬದುಕಿನ ದೀರ್ಘಕಾಲಿಕ ಮಾನಸಿಕ ಸುಸ್ಥಿರತೆಯಾಗಿ ಬದಲಾಯಿಸುವ ಮಾಂತ್ರಿಕ ಮಿಡಿತಗಳನ್ನು ಇಲ್ಲಿನ ಪ್ರತಿ ಅಕ್ಷರಗಳಲ್ಲೂ ಕಾಣಬಹುದಾಗಿದೆ.
ಇಲ್ಲಿರುವ 101 ಮ್ಯಾಜಿಕ್‌ ಮಂತ್ರಗಳು ಪ್ರತಿಧ್ವನಿಸುವುದು `ನಿಮ್ಮ ಮನಸ್ಸಿನ ನಾಯಕ/ನಾಯಕಿ ನೀವೇ ಎಂಬ ಘೋಷಣೆಯೊಂದನ್ನೇ.'
ದೇಹ-ಮನಸ್ಸು-ಮೆದುಳಿನ ಸೂಕ್ಷ್ಮಗಳನ್ನು ಅರಿಯುವ ಅಗತ್ಯವಾದ ಹೊಳಹುಗಳು ಇಲ್ಲಿನ ಪ್ರತಿ ಲೇಖನಗಳಲ್ಲೂ ಕೂಡಿವೆ. ಪುಸ್ತಕ ನಿಮ್ಮಲ್ಲೂ ಮ್ಯಾಜಿಕ್‌ ಮೂಡಿಸುತ್ತದೆ ಎಂಬ ನಂಬಿಕೆಯೊಂದಿಗೆ...

Online Links

sapnaonline.com
https://www.sapnaonline.com/books/ottada-mukta-jeevanakke-shwetha-8198837736-9788198837738

beetlebookshop
https://beetlebookshop.com/products/ottada-mukta-jeevanakke-101-magic-mantragalu

Amazon
https://www.amazon.in/dp/B0FGD6HTPW

Bc

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಡಾ. ಟಿ. ಎಸ್. ವಿವೇಕಾನಂದ ಬರೆದಿರುವ "ವಿಧಿ ಮತ್ತು ವಿಜ್ಞಾನ", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು  ...
24/06/2025

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಡಾ. ಟಿ. ಎಸ್. ವಿವೇಕಾನಂದ ಬರೆದಿರುವ "ವಿಧಿ ಮತ್ತು ವಿಜ್ಞಾನ", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.

ನಾನು ಇತ್ತೀಚೆಗೆ ಓದಿದ ಅದ್ಭುತ ಪುಸ್ತಕಗಳಲ್ಲಿ ಒಂದು `ವಿಧಿ ಮತ್ತು ವಿಜ್ಞಾನ', ಟಿ ಎಸ್‌ ವಿವೇಕಾನಂದ ಬರೆದಿದ್ದು. ನಾನು ಮೊದಲಿಗೆ ಇದನ್ನು ಸಾಮಾನ್ಯ ಪುಸ್ತಕ ಎಂದು ಪರಿಗಣಿಸಿದ್ದೆ. ಆದರೆ ಇದು ಸಾಮಾನ್ಯ ಪುಸ್ತಕವಲ್ಲ, ಅತ್ಯಂತ ಅದ್ಭುತ ಪುಸ್ತಕವೂ ಕೂಡ ಹೌದು. ನಮಗೆಲ್ಲ ಕೊಲೆ ಮತ್ತು ಅದನ್ನು ಕಂಡು ಹಿಡಿಯುವ ಮತ್ತು ಅದನ್ನು ಕೋರ್ಟಿನಲ್ಲಿ ಸಾಬೀತು ಮಾಡುವ ಬಗ್ಗೆ ತುಂಬಾ ಕುತೂಹಲವಿರುತ್ತದೆ. ನನ್ನ ಧಾರಾವಾಹಿಗಳಲ್ಲಿ ಅನೇಕವು ಯಶಸ್ವಿಯಾಗಲು ಕಾರಣ ಇಂತಹ ಪಾಟೀಸವಾಲು ಮತ್ತು ಈ ಪಾಟೀಸವಾಲಿನ ಮೂಲಕ ಹೇಗೆ ಕೊಲೆಗಾರರನ್ನು ಹಿಡಿಯಲಾಗುತ್ತಿತ್ತು ಮತ್ತು ಮುಗ್ಧರನ್ನು ಬಿಡಿಸಲಾಗುತ್ತಿತ್ತು ಎಂಬುದರ ಬಗ್ಗೆಯೇ ಇರುತ್ತಿತ್ತು.
ಇದೆಲ್ಲದರಲ್ಲಿ ಒಂದು ಅತ್ಯಂತ ಸ್ಪೆಷಲೈಸ್‌್ಡ ಮತ್ತು ವಿಶೇಷ ವಿಭಾಗವೆಂದರೆ ಫೋರೆನ್ಸಿಕ್‌ ವಿಭಾಗ. ವಿವೇಕಾನಂದ ಬರೆದಿರುವುದು ಸಾಮಾನ್ಯ ತನಿಖಾ ವಿಧಾನದಲ್ಲಿ ಸಾಧ್ಯವಾಗದ ಅಪರಾಧಗಳ ಕಗ್ಗಂಟನ್ನು ಈ ವಿಜ್ಞಾನದ ಮೂಲಕ ಹೇಗೆ ಪತ್ತೆ ಮಾಡಲಾಯಿತು ಎಂಬುದನ್ನು ಕುರಿತೇ. ಸಾಕ್ಷ್ಯಾಧಾರಗಳೇ ಇಲ್ಲದ ಕೊಲೆ, ನಾಪತ್ತೆ, ಅತ್ಯಾಚಾರ ಪ್ರಕರಣಗಳನ್ನು ವಿಧಿವಿಜ್ಞಾನದ ನೆರವಿನಿಂದ ಪೊಲೀಸರು ಹೇಗೆ ಪತ್ತೆ ಮಾಡಿದರು ಎಂಬುದನ್ನು ಇಲ್ಲಿನ ಕತೆಗಳು ರೋಚಕವಾಗಿ ವಿವರಿಸುತ್ತವೆ.
ಇಂತಹ ಅನೇಕ ಅದ್ಭುತ ಕತೆಗಳನ್ನು ವಿವೇಕಾನಂದ ಬರೆದಿದ್ದಾರೆ. ಇವನ್ನು ನಾನು ಓದದೇ ಹೋಗದ್ದಿರೆ ಖಂಡಿತ ಏನನ್ನೋ ಕಳೆದುಕೊಳ್ಳುತ್ತಿದ್ದೆ. ಪ್ರತಿಕ್ಷಣವೂ ನಮ್ಮನ್ನು ತುದಿಗಾಲಿನಲ್ಲಿ ನಿಲ್ಲಿಸಿ ಓದಿಸಿಕೊಳ್ಳುವ ಇಲ್ಲಿನ ಕತೆಗಳು ನಿಜಕ್ಕೂ ಶಕ್ತಿಯುತವಾಗಿವೆ. ಇಲ್ಲಿ ವಿಜ್ಞಾನ ಮತ್ತು ಪರಿಭಾಷೆಗಳು ಮಾತ್ರವಲ್ಲ ಅವರ ಭಾಷೆಯಂತೂ ಸರಳ ಮತ್ತು ಅದ್ಭುತ. ಹಾಗೆಯೇ ಅವರು ಬಳಸಿರುವ ತಂತ್ರವಂತೂ ಇನ್ನೂ ರೋಮಾಂಚಕ. ಇಲ್ಲಿ ತಂತ್ರ ಎಂದರೆ ನಾವು ಯಾವುದನ್ನು ಮುಂಚೆ ಹೇಳುತ್ತೇವೆ, ಯಾವುದನ್ನು ಆಮೇಲೆ ಹೇಳುತ್ತೇವೆ, ಹಾಗೆ ಹೇಳುವುದರಿಂದ ಎಂತಹ ಪರಿಣಾಮವಾಗುತ್ತದೆ ಎಂಬುದು ಖಚಿತವಾಗಿ ವಿವೇಕಾನಂದರಿಗೆ ಗೊತ್ತಿದೆ. ಈ ರೂಪದಲ್ಲಿ ವಿವೇಕಾನಂದರ ಬರಹಗಳನ್ನು ಓದಿದಾಗ ನನಗೆ ನಿಜಕ್ಕೂ ಅಚ್ಚರಿ ಮತ್ತು ಮೆಚ್ಚುಗೆಯಾಯಿತು.
ಷೆರ್ಲಾಕ್‌ ಹೋಮ್ಸೌ ಕಾಲದ ಕತೆಗಳ ಒಬ್ಬ ಷೆರ್ಲಾಕ್‌ ಹೋಮ್ಸೌನಂತೆ ಪ್ರತಿ ಹೆಜ್ಜೆಯಲ್ಲೂ ಅದನ್ನು ಕೂಲಂಕಷವಾಗಿ ಪರಿಶೀಲಿಸುತ್ತಾ, ಪ್ರೇಕ್ಷಕರಿಗೆ ಕಚಗುಳಿ ಇಡುತ್ತಾ, ಪ್ರೇಕ್ಷಕರ ಕುತೂಹಲವನ್ನು ಜೀವಂತವಾಗಿಟ್ಟುಕೊಂಡು, ಅಂತಿಮವಾಗಿ ಅದಕ್ಕೊಂದು ಉಹಾತೀತ ಸಮಾಪ್ತಿ ಹಾಡುವುದು ಇಲ್ಲಿನ ಕತೆಗಳ ತಂತ್ರ ಮತ್ತು ದ್ರವ್ಯ.

ಟಿ ಎನ್‌ ಸೀತಾರಾಂ
ಗೌರಿಬಿದನೂರು

Sapna Online
https://www.sapnaonline.com/books/vidhi-mattu-vijnana-vivekananda-8197762767-9788197762765

Kannadaloka
https://tinyurl.com/8seb8rvr

Amazon
https://www.amazon.in/dp/B0FF23X1ZY

Flipkart
https://www.flipkart.com/product/p/itme?pid=9788197762765

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಅಭಿಷೇಕ್ ಬಿ ವಿ ಬರೆದಿರುವ "ಸಿಂದೂರ: ನಾ ಕಂಡ ಕಾಶ್ಮೀರ", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು  ಆನ್‌ಲ...
23/06/2025

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಅಭಿಷೇಕ್ ಬಿ ವಿ ಬರೆದಿರುವ "ಸಿಂದೂರ: ನಾ ಕಂಡ ಕಾಶ್ಮೀರ", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.

ಯುದ್ಧ ಎನ್ನುವ ಪದ ಬಹಳ ಶಕ್ತಿಶಾಲಿ. ಅದೇ ಸಮಯದಲ್ಲಿ ಅದು ಭಯವನ್ನು ಸಹ ಹುಟ್ಟಿಸುತ್ತದೆ. ಪೂರ್ಣ ಪ್ರಮಾಣದ ಯುದ್ಧವನ್ನು ಇಂದು ಜಗತ್ತಿನ ಯಾವ ದೇಶವೂ ಭರಿಸುವ ಶಕ್ತಿಯನ್ನು ಹೊಂದಿಲ್ಲ. ಯುದ್ಧ ಅಭಿವೃದ್ಧಿಯ, ಸಿರಿವಂತಿಕೆಯ ಶತ್ರು. ಆದರೂ ಕೆಲವೊಮ್ಮೆ ಕೆಲವು ಸಂಘರ್ಷಗಳು ಅನಿವಾರ್ಯ. ಕೆಲವು ಬಾರಿ ಶಾಂತಿಯಿಂದ ಮತ್ತು ನೆಮ್ಮದಿಯಿಂದ ಬದುಕಲು ಇಂತಹ ಸಂಘರ್ಷಗಳ ಅವಶ್ಯಕತೆ ಇರುತ್ತದೆ. ಭಾರತ ಎಂದಿಗೂ ಕಾಲು ಕೆರೆದು ಜಗಳಕ್ಕೆ ಹೋದ ಉದಾಹರಣೆ ಇತಿಹಾಸದಲ್ಲಿ ಸಿಗುವುದಿಲ್ಲ. ಈ ಬಾರಿಯ ಇಂಡೋ ಪಾಕ್‌ ಯುದ್ಧಕ್ಕೂ, ಪಾಕಿಸ್ತಾನ ಕಾರಣ ಎನ್ನುವುದು ಸ್ಪಷ್ಟ. ನಾವು ಅವರ ಉದ್ಧಟತನಕ್ಕೆ ತಕ್ಕ ಉತ್ತರವನ್ನು ನೀಡಿದ್ದೇವೆ. ಇಂತಹ ಘಟನೆಯನ್ನು ಹದಿನೈದು ದಿನಗಳ ಕಾಲ ನೇರವಾಗಿ ನೋಡಿ, ಅನುಭವಿಸಿ ಅದನ್ನು ಅಕ್ಷರಕ್ಕೆ ಇಳಿಸಿದ್ದಾರೆ ಅಭಿಷೇಕ್‌. ಹದಿನೈದು ದಿನದ ಘಟನಾವಳಿಗಳ ಅನುಭವ ಕಥನ, ವರದಿಗಾರನ ಮೈನವಿರೇಳಿಸುವ ರೋಚಕ ಡೈರಿಯಿದು. ಇಲ್ಲಿನ ಬರಹ, ಭಾಷೆ ನೇರವಾಗಿ ಹೃದಯಕ್ಕೆ ನಾಟುತ್ತದೆ. ನಾವೇ ವಾರ್‌ ಫೀಲ್ಡ್ ನಲ್ಲಿದ್ದೇವೆ ಎನ್ನಿಸುತ್ತದೆ.
- ರಂಗಸ್ವಾಮಿ ಮೂಕನಹಳ್ಳಿ
ಲೇಖಕರು, ಆರ್ಥಿಕ ತಜ್ಞರು

Sapnaonline
https://www.sapnaonline.com/books/sindoora-naa-kanda-kashmira-abhishek-b-8198837701-9788198837707

Amazon
https://www.amazon.in/dp/B0FDQXXJ5Y

Flipkart
https://www.flipkart.com/product/p/itme?pid=9788198837707

Kannadaloka
https://tinyurl.com/57bf2whf

ಪ್ರೀತಿಯಿಂದ ರಮೇಶ್ - 9ನೇ ಮುದ್ರಣ ... ಓದುಗ ಮಿತ್ರರಿಗೆ ಧನ್ಯವಾದಗಳು
20/06/2025

ಪ್ರೀತಿಯಿಂದ ರಮೇಶ್ - 9ನೇ ಮುದ್ರಣ ... ಓದುಗ ಮಿತ್ರರಿಗೆ ಧನ್ಯವಾದಗಳು

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಚಂದ್ರಶೇಖರ ಮದಭಾವಿ ಬರೆದಿರುವ "ವಾರೆನ್ ಬಫೆಟ್: ಹೂಡಿಕೆ ಮಾಂತ್ರಿಕನ ತಂತ್ರಗಳು", ಈಗ ಎಲ್ಲಾ ಪ್ರಮುಖ ಪುಸ್ತಕ ಮ...
12/06/2025

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಚಂದ್ರಶೇಖರ ಮದಭಾವಿ ಬರೆದಿರುವ "ವಾರೆನ್ ಬಫೆಟ್: ಹೂಡಿಕೆ ಮಾಂತ್ರಿಕನ ತಂತ್ರಗಳು", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.

sapnaonline
https://www.sapnaonline.com/books/warren-buffett-hoodike-maantrikana-tantragalu-chandrashekhar-madabhavi-8197762775-9788197762772

amazon
https://amzn.in/d/cBoz1Bn

Flipkart
https://www.flipkart.com/warren-buffet-hoodike-maantrikana-tantragalu/p/itm7fdb3b913e971?pid=9788197762772

Beetle Book Shop
https://beetlebookshop.com/products/warren-buffett-hoodike-maantrikana-tantragalu

Kannadaloka
https://lnk.ink/xUfyG

ಒಂದು ವಿಶಿಷ್ಟ ಪುಸ್ತಕ ಕಳೆದ ವಾರ ಕೈಸೇರಿತು. ಅದನ್ನು ಪ್ರಕಟಿಸಲೇಬೇಕು ಅನ್ನಿಸಿ, ನಾಲ್ಕೇ ದಿನದಲ್ಲಿ ಮುದ್ರಣ ಮುಗಿಸಿದೆ. ಅದರ ಬಿಡುಗಡೆ ಇಂದು ಇ...
29/05/2025

ಒಂದು ವಿಶಿಷ್ಟ ಪುಸ್ತಕ ಕಳೆದ ವಾರ ಕೈಸೇರಿತು. ಅದನ್ನು ಪ್ರಕಟಿಸಲೇಬೇಕು ಅನ್ನಿಸಿ, ನಾಲ್ಕೇ ದಿನದಲ್ಲಿ ಮುದ್ರಣ ಮುಗಿಸಿದೆ. ಅದರ ಬಿಡುಗಡೆ ಇಂದು ಇಳಿಸಂಜೆ 8 ಗಂಟೆಗೆ ನಡೆಯಲಿದೆ.
ಗೆಳೆಯರಾದ ಕದಂಬ ಪ್ರಕಾಶನದ ನಾಗೇಶ್ ಅವರ ಹೊಸ ಪುಸ್ತಕದ ಅಂಗಡಿ ಇಂದು ಉದ್ಘಾಟನೆಯಾಗುತ್ತಿದೆ. ಇದೇ ಶುಭ ಸಂದರ್ಭದಲ್ಲಿ ನಮ್ಮ ಪುಸ್ತಕ ಅಲ್ಲಿ ಬಿಡುಗಡೆ ಆಗಲಿದೆ.
ನೀವು ಅಲ್ಲಿರಬೇಕು..
https://goo.gl/maps/EG6MGCyZstia1HM28?g_st=aw
ನಾಗೇಶ್ ಕದಂಬ Gopalakrishna Kuntini

செல்வச்செழிப்பிற்கு  முதல் படி மனநிலை. மனநிலையின் மாற்றம் செல்வச்செழிப்பை நோக்கி எடுத்து வைக்கும் முதல் அடி.            ...
20/05/2025

செல்வச்செழிப்பிற்கு முதல் படி மனநிலை. மனநிலையின் மாற்றம் செல்வச்செழிப்பை நோக்கி எடுத்து வைக்கும் முதல் அடி.

📗📘📙 📗📘📙


ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು Someswara Narappa sir
14/05/2025

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು Someswara Narappa sir

Address


Opening Hours

Monday 10:00 - 18:00
Tuesday 10:00 - 18:00
Wednesday 10:00 - 18:00
Thursday 10:00 - 18:00
Friday 10:00 - 18:00
Saturday 10:00 - 18:00

Telephone

+919036312786

Alerts

Be the first to know and let us send you an email when Sawanna Books posts news and promotions. Your email address will not be used for any other purpose, and you can unsubscribe at any time.

Contact The Business

Send a message to Sawanna Books:

Shortcuts

  • Address
  • Telephone
  • Opening Hours
  • Alerts
  • Contact The Business
  • Claim ownership or report listing
  • Want your business to be the top-listed Media Company?

Share