Sawanna Books

Sawanna Books We at Sawanna Enterprises have always been committed to improve the society from all dimensions through Books

ಹರಿಹರಪುರ ಮಠದಿಂದ ‘ಶಾಸ್ತ್ರ ಕೇಸರೀ’ ಬಿರುದಿಗೆ ಭಾಜನರಾದ ವಿದ್ವಾನ್ ಜಗದೀಶಶರ್ಮಾ ಸಂಪ ಅವರಿಗೆ ಸಾವಣ್ಣ ಬಳಗದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳ...
05/09/2025

ಹರಿಹರಪುರ ಮಠದಿಂದ ‘ಶಾಸ್ತ್ರ ಕೇಸರೀ’ ಬಿರುದಿಗೆ ಭಾಜನರಾದ ವಿದ್ವಾನ್ ಜಗದೀಶಶರ್ಮಾ ಸಂಪ ಅವರಿಗೆ ಸಾವಣ್ಣ ಬಳಗದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು…

Jagadisha Sharma Sampa

Akashara Aradhane 2025 - Book Releaseಅಕ್ಷರ ಆರಾಧನೆ 2025 - ಪುಸ್ತಕ ಲೋಕಾರ್ಪಣೆ Someswara Narappa Virupaksha Devaramane Rangas...
29/08/2025

Akashara Aradhane 2025 - Book Release
ಅಕ್ಷರ ಆರಾಧನೆ 2025 - ಪುಸ್ತಕ ಲೋಕಾರ್ಪಣೆ

Someswara Narappa Virupaksha Devaramane Rangaswamy N R Mookanahalli Bharathi B V Jagadisha Sharma Sampa Deepa Hiregutti Sharath Bhat Seraje Samyuktha Puligal Kanchana Hegde Geervani M. H. Saviraj Anandur Pramod Mohan Hegde Shwetha Bhide Gireesh Mevundi Gururaj Patil Jogi Girish Rao Hatwar

26/08/2025

Akashara Aradhane 2025 - Jhalak
ಅಕ್ಷರ ಆರಾಧನೆ 2025 - ಝಲಕ್

Someswara Narappa Virupaksha Devaramane Rangaswamy N R Mookanahalli Bharathi B V Jagadisha Sharma Sampa Deepa Hiregutti Sharath Bhat Seraje Samyuktha Puligal Kanchana Hegde Geervani M. H. Saviraj Anandur Pramod Mohan Hegde Shwetha Bhide Gireesh Mevundi Gururaj Patil Jogi Girish Rao Hatwar Nandeesh Dev Adiga Vks Ranjani Keerthi Shafika Jameel

ಸಾವಣ್ಣ ಪ್ರಕಾಶನದ ವಿಶೇಷ ಕಾರ್ಯಕ್ರಮಅಕ್ಷರ ಆರಾಧನೆ 2025 – 3ನೇ ಆವೃತ್ತಿನಮ್ಮ ಗೌರವಾನ್ವಿತ ಲೇಖಕ, ಕನ್ನಡಪ್ರಭ ಪುರವಣಿ ಸಂಪಾದಕರಾದ ಜೋಗಿ ಅವರಿ...
14/08/2025

ಸಾವಣ್ಣ ಪ್ರಕಾಶನದ ವಿಶೇಷ ಕಾರ್ಯಕ್ರಮ
ಅಕ್ಷರ ಆರಾಧನೆ 2025 – 3ನೇ ಆವೃತ್ತಿ

ನಮ್ಮ ಗೌರವಾನ್ವಿತ ಲೇಖಕ, ಕನ್ನಡಪ್ರಭ ಪುರವಣಿ ಸಂಪಾದಕರಾದ ಜೋಗಿ ಅವರಿಂದ 16 ಪುಸ್ತಕಗಳ ಮಹಾ ಬಿಡುಗಡೆ ಸಮಾರಂಭಕ್ಕೆ ನಿಮಗೆ ಹೃತ್ಪೂರ್ವಕ ಆಹ್ವಾನ.

ದಿನಾಂಕ: ಆಗಸ್ಟ್ 24, ಭಾನುವಾರ
ಸಮಯ: 10.00 ಬೆಳಗ್ಗೆ
ಉಪಾಹಾರ: 9.30 ಬೆಳಗ್ಗೆ
ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ
ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ವರ್ಲ್ಡ್ ಕಲ್ಚರ್‌
ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ
ಬೆಂಗಳೂರು-04

ನಮ್ಮ ಪುಸ್ತಕಯಾತ್ರೆಯ ಈ ಅಕ್ಷರೋತ್ಸವಕ್ಕೆ ಬಂದು ನಮ್ಮ ಹರ್ಷದಲ್ಲಿ ಭಾಗಿಯಾಗಿ.
ನಿಮ್ಮ ಆಗಮನವೇ ನಮ್ಮ ಕಾರ್ಯಕ್ರಮದ ಯಶಸ್ಸು...

ಲೇಖಕರು ಮತ್ತು ಪುಸ್ತಕಗಳ ವಿವರಗಳು:
1. ಡಾ. ನಾ. ಸೋಮೇಶ್ವರ | ಹೃದಯಾಘಾತ
2. ಡಾ. ವಿರೂಪಾಕ್ಷ ದೇವರಮನೆ | ಓ ಮನಸೇ ತುಸು ನಿಧಾನಿಸು
3. ರಂಗಸ್ವಾಮಿ ಮೂಕನಹಳ್ಳಿ | ಸಣ್ಣ ಉದ್ದಿಮೆಗಳನ್ನು ಕಟ್ಟುವುದು ಹೇಗೆ?
4. ಭಾರತಿ ಬಿ ವಿ | ಸೊಂಟಕ್ ಬೆಲ್ಟು ಕಟ್ಟಿಕೊಂಡು
5. ಜಗದೀಶಶರ್ಮಾ ಸಂಪ | ವ್ಯಾಸ ಸಂದರ್ಶನ
6. ದೀಪಾ ಹಿರೇಗುತ್ತಿ | ನೋ ಎಕ್ಸ್ಯೂಸ್‌ PLEASE
7. ಶರತ್‌ ಭಟ್‌ ಸೇರಾಜೆ | AI ಬರುತಿದೆ ದಾರಿ ಬಿಡಿ
8. ಡಾ॥ ಸರಸ್ವತಿ ಐತಾಳ | ಅರವತ್ತರ ನಂತರ ಮರಳಿ ಅರಳಿ
9. ಸಂಯುಕ್ತಾ ಪುಲಿಗಲ್‌ | ನಾನಿಲ್ಲೇ ಇರುವೆ
10. ಕಾಂಚನಾ ಹೆಗಡೆ | ಮೈ ಮನಿ ಮ್ಯಾಪ್‌
11. ಗೀರ್ವಾಣಿ | ಮನಸೇ, ಮನಸೇ ಥ್ಯಾಂಕ್ಯು
12. ಸವಿರಾಜ ಆನಂದೂರು | ಪುರಾಣ ಗಿರಾಣ ಇತ್ಯಾದಿ
13. ಪದಚಿಹ್ನ | ಮನಸು ಜೋಪಾನ
14. ಶ್ವೇತಾ ಭಿಡೆ | ಭರವಸೆಯೇ ಬದುಕು
15. ಗಿರೀಶ ಶ್ರೀಪಾದ ಮೇವುಂಡಿ | ಓಯಸಿಸ್
16. ಗುರುರಾಜ ಪಾಟೀಲ | ಪಾಲಕತ್ವದ ತತ್ವ

#ಅಕ್ಷರಆರಾಧನೆ #ಸಾವಣ್ಣಪ್ರಕಾಶನ

Jogi Girish Rao Hatwar Someswara Narappa Saviraj Anandur Bharathi B V Virupaksha Devaramane Rangaswamy N R Mookanahalli Jagadisha Sharma Sampa Deepa Hiregutti Sharath Bhat Seraje Samyuktha Puligal Kanchana Hegde Geervani M. H. Pramod Mohan Hegde Shwetha Bhide Girish Mevundi Gururaj Patil Nandeesh Dev Shafika Jameel Ranjani Keerthi aithal

 #ಹೊಸಪುಸ್ತಕ ನಿಮ್ಮ ಕೊನೆ ವೇತನವನ್ನು ನಿಮ್ಮ ಮಗಳು ಅಥವಾ ಮಗ ಮೊದಲ ತಿಂಗಳ ವೇತನವನ್ನಾಗಿ ಪಡೆಯುವ ಸಾಧ್ಯತೆ ಎಷ್ಟು? ಆ ಮಟ್ಟದ ಸಂಬಳ ಪಡೆಯಲು ಅವರ...
05/08/2025

#ಹೊಸಪುಸ್ತಕ

ನಿಮ್ಮ ಕೊನೆ ವೇತನವನ್ನು ನಿಮ್ಮ ಮಗಳು ಅಥವಾ ಮಗ ಮೊದಲ ತಿಂಗಳ ವೇತನವನ್ನಾಗಿ ಪಡೆಯುವ ಸಾಧ್ಯತೆ ಎಷ್ಟು? ಆ ಮಟ್ಟದ ಸಂಬಳ ಪಡೆಯಲು ಅವರೆಷ್ಟು ಸೈಕಲ್‌ ಹೊಡೆಯಬೇಕು ಗೊತ್ತಲ್ವಾ?
ಅದೇ ಉದ್ದಿಮೆ ಕಟ್ಟಿದವನು ನಿವೃತ್ತಿ ಹೊಂದಿದ ತಿಂಗಳು ಪಡೆದುಕೊಂಡ ಲಾಭ ಆತನ ಮಗಳು ಅಥವಾ ಮಗ ಮುಂದಿನ ತಿಂಗಳು ಪಡೆದುಕೊಳ್ಳಬಹುದು, ಅದಕ್ಕಿಂತ ಹೆಚ್ಚು ಆಗಬಹುದು. ಕಡಿಮೆಯಾದರೂ ತುಂಬಾ ಕುಸಿತವಂತೂ ಇರುವುದಿಲ್ಲ.
ಅರ್ಥವಿಷ್ಟೇ, ನೀವೆಷ್ಟೇ ವರ್ಷ ಕೆಲಸ ಮಾಡಿ, ನೀವು ಆ ಲೆಗೆಸಿಯ ಕಂಟಿನ್ಯೂಟಿ ನಿಮ್ಮ ಮಕ್ಕಳಿಗೆ ಬಿಟ್ಟು ಹೋಗಲಾರಿರಿ. ಅಂದರೆ ನೀವೆಷ್ಟೆ ಮೆಟ್ಟಿಲು ಹತ್ತದ್ದಿರೂ ನಿಮ್ಮ ಮಕ್ಕಳು ಮತ್ತೆ ಮೊದಲ ಮೆಟ್ಟಿಲಿಂದ ಶುರು ಮಾಡಬೇಕು! ಉದ್ದಿಮೆಯಲ್ಲಿ ನೀವು ಎಷ್ಟು ಮೆಟ್ಟಿಲು ಏರಿರುತ್ತೀರಿ, ನಿಮ್ಮ ಮಕ್ಕಳು ಅಲ್ಲಿಂದ ಶುರು ಮಾಡುತ್ತಾರೆ. ಅವರಿಗೆ ಒಂದು ತಲೆಮಾರಿನ ಕಷ್ಟದ ಲಾಭ ಸಿಗುತ್ತೆ. ಅಂದರೆ ಕಂಟಿನ್ಯೂಟಿ ಸಿಗುತ್ತದೆ. ಇದರ ಜೊತೆಗೆ AI ಬರುತ್ತಿದೆ. ಅದು ಸಣ್ಣ ಉದ್ದಿಮೆ ಕಟ್ಟುವುದನ್ನು ಆಯ್ಕೆಯಾಗಿ ಉಳಿಸುವುದಿಲ್ಲ. ಅನಿವಾರ್ಯವಾಗಿಸಲಿದೆ.
ಈ ನಿಟ್ಟಿನಲ್ಲಿ:
ಸಣ್ಣ ಉದ್ದಿಮೆ ಕಟ್ಟುವುದು ಹೇಗೆ? ಅದಕ್ಕೆ ಬೇಕಾದ ಮನಸ್ಥಿತಿಯೇನು? ಯಾವ ಫಾರ್ಮ್ಯಾಟ್‌ ಆಯ್ಕೆ ಮಾಡಿಕೊಳ್ಳಬೇಕು? ಉದ್ದಿಮೆ ತೆರೆಯಲು ಬೇಕಾಗುವ ಅನುಮತಿ ಪತ್ರಗಳು ಯಾವುವು? ಅವುಗಳನ್ನು ಪಡೆಯುವುದು ಹೇಗೆ? ಫಂಡ್‌ ರೈಸಿಂಗ್‌ ಹೇಗೆ? ಒಟ್ಟಾರೆ ಸಣ್ಣ ಉದ್ದಿಮೆ ಕಟ್ಟಲು ಬೇಕಾಗುವ ಎಲ್ಲಾ ಅವಶ್ಯ ಮಾಹಿತಿ ಇಲ್ಲಿದೆ.

 #ಹೊಸಪುಸ್ತಕ ಜಪಾನ್ ಪ್ರವಾಸ ಬೇರೆಲ್ಲಾ ವಿದೇಶ ಪ್ರವಾಸಕ್ಕಿಂತ ವಿಶೇಷ ಮತ್ತು ವಿಭಿನ್ನ. ಬಹಳ ಹಿರಿಯದಾದ ಧಾರ್ಮಿಕ , ಸಾಂಸ್ಕೃತಿಕ ಪರಂಪರೆಯನ್ನು ...
05/08/2025

#ಹೊಸಪುಸ್ತಕ

ಜಪಾನ್ ಪ್ರವಾಸ ಬೇರೆಲ್ಲಾ ವಿದೇಶ ಪ್ರವಾಸಕ್ಕಿಂತ ವಿಶೇಷ ಮತ್ತು ವಿಭಿನ್ನ. ಬಹಳ ಹಿರಿಯದಾದ ಧಾರ್ಮಿಕ , ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಜಪಾನ್ ಭವಿಷ್ಯದ ಟೆಕ್ನಾಲಜಿಯನ್ನೂ ಸಮರ್ಥವಾಗಿ ಜಗತ್ತಿಗೆ ಕಟ್ಟಿಕೊಡುತ್ತಿದೆ.
ಲೇಖಕಿ ಅಂಜಲಿ ರಾಮಣ್ಣ ತಮ್ಮ ಜಪಾನ್ ಪ್ರವಾಸದ ಅನುಭವವನ್ನು, ಚರಿತ್ರೆ, ಸಂಸ್ಕೃತಿ ಮತ್ತು ಜನರ ಸ್ವಭಾವಗಳನ್ನು ರಸವತ್ತಾಗಿ ವರ್ಣಿಸಿದ್ದಾರೆ Ja Ne ಜಪಾನ್ ಪ್ರವಾಸ ಕಥನದಲ್ಲಿ.
Anjali Ramanna

#ಕನ್ನಡ

 #ಹೊಸಪುಸ್ತಕ ಸಮಾಜದ ಒತ್ತಡಗಳು, ಕುಟುಂಬದ ಬೇಡಿಕೆಗಳು ಹೊಸದಾಗಿ ಏನನ್ನಾದರೂ ಪ್ರಾರಂಭಿಸಲು ವಯಸ್ಸನ್ನು ದೊಡ್ಡ ತಡೆ ಎಂಬಂತೆ ನೋಡುತ್ತವೆ ಮತ್ತು ಈ...
05/08/2025

#ಹೊಸಪುಸ್ತಕ

ಸಮಾಜದ ಒತ್ತಡಗಳು, ಕುಟುಂಬದ ಬೇಡಿಕೆಗಳು ಹೊಸದಾಗಿ ಏನನ್ನಾದರೂ ಪ್ರಾರಂಭಿಸಲು ವಯಸ್ಸನ್ನು ದೊಡ್ಡ ತಡೆ ಎಂಬಂತೆ ನೋಡುತ್ತವೆ ಮತ್ತು ಈ ನಿರುತ್ಸಾಹಿ ವಾತಾವರಣದಲ್ಲೂ ಹೇಗೆ ಮನಸ್ಸನ್ನು ಸ್ವಸ್ಥವಾಗಿರಿಸಿಕೊಂಡು ಯಾವ ವಯಸ್ಸಿನಲ್ಲಾದರೂ ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತ ಹೋಗಬಹುದು ಎಂಬುದಕ್ಕೊಂದು ಸ್ಫೂರ್ತಿಯುತ ಉದಾಹರಣೆ ಈ ಪುಸ್ತಕ. ಪ್ರತಿ ಪಯಣವೂ ವಿಶಿಷ್ಟವಾದದ್ದು ಎಂಬ ಸರಳವಾದ ಆದರೆ ಬಹಳ ಮಂದಿ ಅರ್ಥ ಮಾಡಿಕೊಳ್ಳಲು ಸೋತಿರುವ ಸತ್ಯವನ್ನು ಅರ್ಥ ಮಾಡಿಸುವ ಪ್ರಯತ್ನವಿದು.
ಆರಂಭಿಕ ಸೋಲುಗಳಿಂದ, ಹಣಕಾಸಿನ ತೊಂದರೆಯಿಂದ, ಸಮಾಜದ ಚುಚ್ಚು ಮಾತುಗಳಿಂದ ತಮ್ಮಿಂದ ಏನೂ ಸಾಧ್ಯವಿಲ್ಲ ಎಂಬ ನೇತ್ಯಾತ್ಮಕ ಅಭಿಪ್ರಾಯವನ್ನು ತಮ್ಮ ಬಗ್ಗೆ ತಾವೇ ತುಂಬಿಕೊಂಡು ಸಣ್ಣ ಪುಟ್ಟ ಕನಸು ಕಾಣಲೂ ಹಿಂಜರಿಯುವವರು ಈ ಕಥೆಗಳನ್ನು ಓದಲೇಬೇಕು, ಕಾಲೇಜು ವಿದ್ಯಾರ್ಥಿಯಾಗಲಿ, ಮಧ್ಯವಯಸ್ಕರೇ ಆಗಲಿ ಇಳಿವಯಸ್ಸಿನವರೇ ಆಗಲಿ ಯಾರು ಬೇಕಾದರೂ ಓದಬಹುದಾದ ಮತ್ತು ಸ್ಫೂರ್ತಿ ಪಡೆಯಬಹುದಾದ ಅಪರೂಪದ ಸಾಧಕರ ಬದುಕಿನ ಕತೆಗಳು ನಿಮ್ಮೆದುರು...

Deepa Hiregutti

 #ಹೊಸಪುಸ್ತಕಜೀವನದ ಕೊನೆಯ ಹಂತಗಳನ್ನು ಅಲ್ಲಗಳೆದು ಸದಾ ಯೌವ್ವನ, ಯಶಸ್ಸನ್ನೇ ಹುಡುಕಿ ಮೆರೆಸುವ ಇತ್ತೀಚಿನ ಸಮಾಜದಲ್ಲಿ, ಹೆಚ್ಚುತ್ತಿರುವ ವೃದ್...
05/08/2025

#ಹೊಸಪುಸ್ತಕ

ಜೀವನದ ಕೊನೆಯ ಹಂತಗಳನ್ನು ಅಲ್ಲಗಳೆದು ಸದಾ ಯೌವ್ವನ, ಯಶಸ್ಸನ್ನೇ ಹುಡುಕಿ ಮೆರೆಸುವ ಇತ್ತೀಚಿನ ಸಮಾಜದಲ್ಲಿ, ಹೆಚ್ಚುತ್ತಿರುವ ವೃದ್ಧರ ಸಂಖ್ಯೆಯು ಒಂದು ನಿಜವಾದ ಸಂಗತಿ. ಈ ವಯೋವರ್ಗದ ಅವಶ್ಯಕತೆಗಳು, ಅವರು ಎದುರಿಸಬಹುದಾದ ಸಮಸ್ಯೆಗಳು ಹಾಗು ಅವುಗಳನ್ನು ನಿಭಾಯಿಸುವ ಹಲವಾರು ಸಾಧ್ಯತೆಗಳನ್ನು ವಿವರಿಸುವ ಪುಸ್ತಕ ಇದು. ತಿಳಿ ಹಾಸ್ಯದೊಂದಿಗೆ ಸಾಮಾನ್ಯವಾಗಿ ಒಪ್ಪಿಕೊಳ್ಳಲು ಹಿಂಜರಿಯುವ ವಿಷಯಗಳನ್ನು ಬಿಡಿಸಿ ಹೇಳಿ, ಮುಗುಳ್ನಗೆಯಿಂದ ಮುಪ್ಪನ್ನು ಕೂಡ ಧೈರ್ಯದಿಂದ ಆಲಿಂಗಿಸಿ ಮುನ್ನಡೆಯುವುದಕ್ಕೆ ಒಂದು ಮಾರ್ಗಸೂಚಿ.
ಡಾ।। ಸರಸ್ವತಿ ಐತಾಳ್‌ ಅವರು ಬೆಂಗಳೂರಿನ ಸಂಜಯನಗರದಲ್ಲಿ ಕಳೆದ 20 ವರ್ಷಗಳಿಂದ ವೈದ್ಯೆ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಗ್ರಾಮಾಂತರ ವೈದ್ಯಕೀಯ ಸೇವೆ, ಜೀವನ ಶೈಲಿಯ ರೋಗಗಳು (ಮಧುಮೇಹ), ಮಹಿಳೆಯರು ಹಾಗು ವೃದ್ಧರ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಕಾಳಜಿ. ಅದರ ಫಲಶ್ರುತಿಯೇ ಅವರ ಈ ಮೊದಲನೆಯ ಪುಸ್ತಕ `ಅರವತ್ತರ ನಂತರ ಮರಳಿ ಅರಳಿ'.

 #ಹೊಸಪುಸ್ತಕ`ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಎನ್ನುವ ದಾಸರ ನುಡಿ ಇವತ್ತಿಗೆ ಒಂದಷ್ಟು ಬದಲಾವಣೆಯಾಗಿದೆ. ಹೊಟ್ಟೆ ಮತ್ತು ಬಟ...
05/08/2025

#ಹೊಸಪುಸ್ತಕ

`ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಎನ್ನುವ ದಾಸರ ನುಡಿ ಇವತ್ತಿಗೆ ಒಂದಷ್ಟು ಬದಲಾವಣೆಯಾಗಿದೆ. ಹೊಟ್ಟೆ ಮತ್ತು ಬಟ್ಟೆಯನ್ನು ಮೀರಿದ ಅವಶ್ಯಕತೆಗಳು ಇಂದು ಉತ್ಪನ್ನವಾಗಿವೆ. ಸಮಾಜ ಬೆಳೆಯುತ್ತ ಹೋದಂತೆ ಇದು ಸಹಜ. ಅಂದಿನ ಕಾಲಘಟ್ಟದಲ್ಲಿ ಹೊಟ್ಟೆಗೆ ಮತ್ತು ಬಟ್ಟೆಗೆ ಆದರೆ ಸಾಕು ಬೇರೇನೂ ಬೇಕಿಲ್ಲ ಎನ್ನುವಂತಹ ಸನ್ನಿವೇಶವಿತ್ತು. ಬದಲಾದ ಸನ್ನಿವೇಶದಲ್ಲಿ ನಾವು ಅವುಗಳನ್ನು ಮೀರಿದ್ದೇವೆ. ಇವತ್ತಿಗೆ ಕಾರು, ಫೋನು ಇತ್ಯಾದಿಗಳು ಅವಶ್ಯಕವಾಗಿವೆ. ಅವು ಐಷಾರಾಮ ಎನ್ನಿಸಿಕೊಳ್ಳುವುದಿಲ್ಲ. ಕಳೆದ ಎರಡು ದಶಕಗಳಿಂದ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಹಿಂದೆ ಜನರ ಕೈಯಲ್ಲಿ ಹಣವಿರುತ್ತಿರಲಿಲ್ಲ. ಇಂದು ಅವಶ್ಯಕತೆಯನ್ನು ಮೀರಿ ಒಂದಷ್ಟು ಹಣ ಕೂಡ ಉಳಿಯುತ್ತಿದೆ. ಆದರೆ ಹಣದುಬ್ಬರ ಎನ್ನುವುದು ಅದರ ಮೌಲ್ಯವನ್ನು ಕಸಿದು ಬಿಡುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಪ್ರತಿಯೊಬ್ಬರೂ ಫೈನಾನ್ಶಿಯಲ್‌ ಪ್ಲಾನಿಂಗ್‌ ಮಾಡಬೇಕಾಗಿದೆ. ಈ ಪುಸ್ತಕ ಆ ದಾರಿಯಲ್ಲಿ ನಡೆಯ ಬಯಸುವವರಿಗೆ ಒಂದು ನಕ್ಷೆಯಂತೆ ದಾರಿ ತೋರುತ್ತದೆ. `ಆರಂಭ', `ಸರಿಯಾದ ದಾರಿ' ನಮ್ಮನ್ನು `ಗಮ್ಯ'ಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವ ಮೂರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಪುಸ್ತಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಶುಭವಾಗಲಿ. - ರಂಗಸ್ವಾಮಿ ಮೂಕನಹಳ್ಳಿ

 #ಹೊಸಪುಸ್ತಕ ಮಾನವನ ವಿಕಾಸದ ಹಾದಿಯಿಂದ ಹಿಡಿದು ಇತ್ತೀಚಿನ ಆಧುನಿಕತೆಯ ಪ್ರಗತಿಯ ಪಥವನ್ನು ಅವಲೋಕಿಸಿದಾಗ ಈ ಅಗಾಧವಾದ ಬೆಳವಣಿಗೆಯಿಂದ ಮೂಲತಃ ನಾ...
05/08/2025

#ಹೊಸಪುಸ್ತಕ
ಮಾನವನ ವಿಕಾಸದ ಹಾದಿಯಿಂದ ಹಿಡಿದು ಇತ್ತೀಚಿನ ಆಧುನಿಕತೆಯ ಪ್ರಗತಿಯ ಪಥವನ್ನು ಅವಲೋಕಿಸಿದಾಗ ಈ ಅಗಾಧವಾದ ಬೆಳವಣಿಗೆಯಿಂದ ಮೂಲತಃ ನಾವೆಲ್ಲರೂ ಬದುಕಲು ಅಗತ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ಹೊಂದಿ ಈ ವಿಕಸಿತ ಬುದ್ಧಿಯ ಪ್ರಭಾವದಿಂದ ಈ ಮೂಲಭೂತ ಅಗತ್ಯತೆಗಳಾಚೆ ಚಿಂತಿಸಿ ಇದರ ಪರಿಣಾಮವು ನಮ್ಮ ಬದುಕನ್ನು ಇನ್ನಷ್ಟು ಸರಳ ಹಾಗೂ ಸಂತೃಪ್ತಗೊಳಿಸಿ ತನ್ಮೂಲಕ ಹೆಚ್ಚಿನ ನೆಮ್ಮದಿಯಿಂದ ಕೂಡಿದ ಬದುಕನ್ನು ಸಂಭ್ರಮಿಸುವಂತಾಗಬೇಕಿತ್ತು! ಆದರೆ ಇಂದು ನಮ್ಮೆಲ್ಲರ ಬದುಕು ಇದಕ್ಕೆ ವ್ಯತಿರಿಕ್ತವಾದ ಮಾರ್ಗದಲ್ಲಿ ಸಾಗುತ್ತಿದೆ. ಒಂದುಕಡೆ ನಾಗರಿಕತೆ, ನೂತನ ತಂತ್ರಜ್ಞಾನ ಹಾಗೂ ಅನ್ವೇಷಣೆಗಳ ವಿಷಯದಲ್ಲಿ ಮಾನವ ಇತರೆ ಜೀವರಾಶಿಗಳ ಹೋಲಿಕೆಗೆ ಸಿಗದಷ್ಟು ಉಚ್ಛ್ರಾಯ ಸ್ಥಿತಿಯಲ್ಲಿದ್ದಾನೆ. ಇದಕ್ಕೆ ವ್ಯತಿರಿಕ್ತವಾಗಿ ಬಹುತೇಕರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹೋರಾಟದಲ್ಲಿ ನಿರಾಶೆ-ಹತಾಶೆಗಳಿಂದ ಬಳಲುತ್ತಾ ಬದುಕೇ ಇಲ್ಲವೇನೋ ಎಂಬಂತೆ ಸಾಯುತ್ತಿದ್ದಾರೆ! ಇದಕ್ಕೆಲ್ಲಾ ಮೂಲ ಕಾರಣ ಈ ಬದುಕನ್ನು ಅರ್ಥಮಾಡಿಕೊಳ್ಳದೆ ಬದುಕಿನ ಉದ್ದೇಶ ಹಾಗೂ ಲಯ ತಿಳಿಯದೆ ಬತ್ತದ ಬಯಕೆಗಳೆಂಬ ಬಿಸಿಲುಕುದುರೆ ಏರಿ ಫಲವೆಂಬ ನೀರು ಹುಡುಕುತ್ತಾ ಹೊರಟು ಮರೀಚಿಕೆಯನ್ನು ಕಂಡಂತಾಗಿದೆ ನಮ್ಮೆಲ್ಲರ ಸ್ಥಿತಿ! ಈ ಹಿನ್ನೆಲೆಯಲ್ಲಿ ಸುಖ-ಶಾಂತಿ ಹಾಗೂ ನೆಮ್ಮದಿ-ಸಂತೃಪ್ತಿಗಳ ಕೊರತೆಯಿಂದ ಮರುಭೂಮಿಯಂತೆ ಬರಡಾದ ಬದುಕನ್ನು ನಿಷ್ಕರ್ಶಿಸಿ, ಬದುಕುವ ಬಗೆಯನ್ನು ಅರಿತು, ಬದುಕಿನ ನಿಯಮಗಳನ್ನು ಪಾಲಿಸುತ್ತಾ ಅದರ ಲಯದಂತೆ ನಮ್ಮ ಅರ್ಹತೆ ಹಾಗೂ ಯೋಗ್ಯತೆಯನ್ನು ವೃದ್ಧಿಸಿಕೊಂಡು ಬಯಸಿದ ಬದುಕನ್ನು ಪಡೆಯುವ ಹುಡುಕಾಟದಲ್ಲಿ ಸಿಗುವ ಸ್ಫೂರ್ತಿಯ ಚಿಲುಮೆಯೇ ಈ `ಓಯಸಿಸ್‌.'
-ಗಿರೀಶ ಶ್ರೀಪಾದ ಮೇವುಂಡಿ

#ಕನ್ನಡ

Address

#12, Byrasandra Main Road, Jayanagar 1st Block East
Bangalore
560011

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Telephone

+919036312786

Alerts

Be the first to know and let us send you an email when Sawanna Books posts news and promotions. Your email address will not be used for any other purpose, and you can unsubscribe at any time.

Contact The Business

Send a message to Sawanna Books:

Share

Category