Suddi Mane

Suddi Mane ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

08/07/2025

"ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಬಂಗಾರದ ರಥ ಸಮರ್ಪಿಸಲು ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರಿಂದ ಸಂಕಲ್ಪ"

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ರಾಯರ ಸನ್ನಿಧಿಗೆ ಭಕ್ತರ ಸಹಕಾರದಿಂದ ಬಂಗಾರದ ರಥವನ್ನು ಸಮರ್ಪಣೆ ಮಾಡಲು ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಸಂಕಲ್ಪವನ್ನು ಮಾಡಿ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರಿಗೆ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ಫಲ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು. ಈ ಸುವರ್ಣ ರಥದ ನಿರ್ಮಾಣದ ಅಂದಾಜು 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸುವರ್ಣರಥದ ಬೃಹತ್ ಕಾರ್ಯವು ನಿರ್ವಿಘ್ನವಾಗಿ ನೆರವೇರಲಿ ಎಂದು ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಸಂಕಲ್ಪಿಸಿದರು. ಈ ಶುಭ ಸಂದರ್ಭದಲ್ಲಿ ಶ್ರೀಪಾದರು ಆಶೀರ್ವಚನವನ್ನು ನೀಡುತ್ತಾ ರಾಯರಿಗೆ ಬಂಗಾರದ ಕವಚ, ಸುವರ್ಣ ರಥ ಮುಂತಾದವುಗಳು ಯಾವುದೂ ಬೇಕಾಗಿಲ್ಲ. ಗುರುಗಳು ತ್ಯಾಗ ವಿರಕ್ತರು ಆದರೂ ಭಕ್ತರು ತಮ್ಮ ಗುರುಗಳನ್ನು ಭಕ್ತಿಯಿಂದ ಅಲಂಕರಿಸಿ ರಥದಲ್ಲಿ ಕೂರಿಸಿ ಅನುಗ್ರಹ ಪಡೆದು ಕಣ್ಣು ತುಂಬಾ ಸಂತೋಷ ಪಡುವ ಇಂತಹ ಮಹತ್ಕಾರ್ಯಕ್ಕೆ ತನು ಮನ ಧನದಿಂದ ಸೇವೆ ಸಲ್ಲಿಸುವ ರಾಯರ ಭಕ್ತರ ಅಪೇಕ್ಷೆಯ ಮೇರೆಗೆ ಬಂಗಾರದ ರಥವನ್ನು ರಾಯರಿಗೆ ಸಮರ್ಪಿಸಲು ಸಂಕಲ್ಪವನ್ನು ಮಾಡಿದ್ದೇವೆ. ಇಂತಹ ಮಹತ್ಕಾರ್ಯಕ್ಕೆ ಸೇವೆ ಸಲ್ಲಿಸುವ ಭಕ್ತರಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹವು ಸದಾ ಕಾಲ ಇರಲಿ ಎಂದು ಆಶೀರ್ವದಿಸಿದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ವಿಶೇಷ ದಾನಿಗಳು ಭಾಗವಹಿಸಿ ಶ್ರೀಗಳಿಂದ ಫಲ ಮಂತ್ರಾಕ್ಷತೆ ಪಡೆದು ಗುರುಗಳ ಅನುಗ್ರಹಕ್ಕೆ ಪಾತರಾದರು.

08/07/2025

ಕನ್ನಡ ಭಾಷೆಗೆ ಎಷ್ಟು ವರ್ಷದ ಇತಿಹಾಸ ಇದೆ. ಭಾಷೆಯಿಂದ ನಾವು. ನಮ್ಮಿಂದ ಭಾಷೆ ಅಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಪ್ರೇಮ

08/07/2025

ಕನ್ನಡದ ವಿರುದ್ಧ ನಾವು ಯಾವತ್ತೂ ಹೋಗಲ್ಲ. ಸೋನು ನಿಗಮ್ ಕ್ಷಮೆ ಕೇಳಿದ್ದಕ್ಕೆ ನಾವು ಹಾಡು ಉಳಿಸಿಕೊಂಡಿದ್ದೀವಿ...ಸರ್ 6 ತಿಂಗಳು ಮುಂಚೆನೇ ಸೋನು ನಿಗಮ್ ನಮ್ಮ ಫಿಲಂಗೆ ಹಾಡಿದ್ರು. ಕ್ಲಾರಿಟಿ ಕೊಟ್ಟ "ನಿದ್ರಾದೇವಿ NEXT DOOR" ಫಿಲಂ ಪ್ರೊಡ್ಯೂಸರ್ ಮತ್ತು ಡೈರೆಕ್ಟರ್

08/07/2025

ನಮ್ಮಂತ ಹೊಸ ಕಲಾವಿದರ ಸಾಂಗ್ ರಿಲೀಸ್ ಮಾಡಿದ್ದಕ್ಕೆ ಥ್ಯಾಂಕ್ಸ್ ಸರ್. ಇದು ನಮ್ಮ ಲೈಫನ ಗೋಲ್ಡನ್ ಮೂಮೆಂಟ್ ಎಂದ "ನಿದ್ರಾದೇವಿ NEXT DOOR" ಹೀರೋ ಹೀರೋಯಿನ್.

08/07/2025

ಏಳುಮಲೆ ಸಿನಿಮಾ ಶಿವಣ್ಣ ಅವರಿಂದಲೇ ಟೈಟಲ್ ಲಾಂಚ್ ಮಾಡಿಸಿದ್ದೇಕೆ..?

08/07/2025

ಫಸ್ಟ್ ಮೆಚ್ಚುಗೆ ಆಮೇಲೆ ಹೆಚ್ಚಿಗೆ. ಶಿವಣ್ಣನ ಮಾತಿಗೆ ಕೈಮುಗಿದ ಪ್ರೇಮ್ ಮತ್ತು ತರುಣ್ ಸುಧೀರ್

08/07/2025

ರಾತ್ರಿ ಆದರು ಯುವ ನೋಡಲು ಮುಗಿಬಿದ್ದ ಹೊಸಪೇಟೆ ಜನತೆ.! ಚಿಕ್ಕಪ್ಪನಿಗೆ ಹಾರ ಹಾಕಿ ಜೈಕಾರ ಹಾಕಿದ ಯುವ

07/07/2025

ಪತ್ನಿ ,ಮಕ್ಕಳು ಮತ್ತು ಅಭಿಮಾನಿಗಳ ಜೊತೆ ಬರ್ತಡೇ ಸೆಲೆಬ್ರೇಟ್ ಮಾಡಿದ ರಿಷಬ್ ಶೆಟ್ಟಿ

07/07/2025

ಅಶ್ವಿನಿ ಮೇಡಮ್ ಗೆ ಸನ್ಮಾನ ಮಾಡಿದ ಸುಧಾರಾಣಿ ಮತ್ತು ತಾರಾ

07/07/2025

ಯುವ ಕ್ರೇಜ್ ಹೇಗಿದೆ ನೋಡಿ ಯುವ & ಕಾರ್ತಿಕ್ ಗೌಡ ಜೊತೆ ಫೋಟೋಗೆ ಮುಗಿಬಿದ್ದ ಅಭಿಮಾನಿಗಳು...

07/07/2025

ಪಾರ್ವತಮ್ಮ ರಾಜಕುಮಾರ್ ಟೀಮ್ ಗೆ ಸುಧಾರಾಣಿ ಬ್ರಾಂಡ್ ಅಂಬಾಸಿಡರ್, ಜಯಂತಿ, ಲೀಲಾವತಿ ಟೀಮ್ ಗೆ ಯಾರೂ ನೋಡಿ

07/07/2025

ಚಿಕ್ಕಮ್ಮನ್ನ ಚೆನ್ನಾಗಿ ನೋಡ್ಕೊಳಿ.! ಎಕ್ಕ ಫಿಲಂ ಹಿಟ್ ಆಗ್ಲಿ ಅಂತ ಆಶೀರ್ವಾದ ಮಾಡಿದ ಮಹಿಳೆಯರು..! ಯುವರಾಜಕುಮಾರ್ ರಿಯಾಕ್ಷನ್ ಹೇಗಿತ್ತು ನೋಡಿ

Address

1612, E End Main Road, Jayanagara 9th Block, Jayanagar
Bangalore
560011

Alerts

Be the first to know and let us send you an email when Suddi Mane posts news and promotions. Your email address will not be used for any other purpose, and you can unsubscribe at any time.

Contact The Business

Send a message to Suddi Mane:

Share