Bharatiya Itihas Sankalan Samiti Karnataka

Bharatiya Itihas Sankalan Samiti Karnataka Bharatiya Itihas Sankalan Samiti an organization to rewrite True Indian History.

Bharateeya Itihasa Sankalana Samiti was founded by the revered Moropant Pingle in 1973, with a central objective of creating a historiography for India through native, Indian endeavor so as to counteract the numerous conscious and unconscious prejudices, misinterpretations, deprecations as well as under valuations which Western – especially the British-historians had imbibed into History of India.

ಪ್ರಾಂತದ ಸಂಶೋಧನಾ ಪ್ರಮುಖರಾದ ಡಾ. ಬಸವರಾಜ್ ಎನ್ ಅಕ್ಕಿ ಅವರ ಮಾರ್ಗದರ್ಶನದಲ್ಲಿ, ಬಾಗಲಕೋಟೆ ಜಿಲ್ಲೆಯಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಜಿಲ...
10/03/2026

ಪ್ರಾಂತದ ಸಂಶೋಧನಾ ಪ್ರಮುಖರಾದ ಡಾ. ಬಸವರಾಜ್ ಎನ್ ಅಕ್ಕಿ ಅವರ ಮಾರ್ಗದರ್ಶನದಲ್ಲಿ, ಬಾಗಲಕೋಟೆ ಜಿಲ್ಲೆಯಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಜಿಲ್ಲಾ ಸಮಿತಿಯು ಕಾರ್ಯಾರಂಭ ಮಾಡಿದೆ.

ನಿನ್ನೆ ನಡೆದ ಮೊದಲ ಆನ್ ಲೈನ್ ಬೈಠಕ್ ನಲ್ಲಿ ಒಟ್ಟು 20 ಹಿರಿಯ ಹಾಗೂ ಯುವ ಇತಿಹಾಸಕಾರರು ಭಾಗವಹಿಸಿದ್ದರು. ಉತ್ತಮವಾದ ಕಾರ್ಯ. ಮುಂದಿನ ವಾರದಲ್ಲಿ ಸಮಿತಿಯ ಘೋಷಣೆಯ ನಂತರ ಡಾ ಅಕ್ಕಿ ಜೀ ಮತ್ತು ಹಿರಿಯರಾದ ಡಾ. ಶ್ರೀನಿವಾಸ ಪಾಡಿಗಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಿತಿಯ ಘೋಷಣೆಯ ನಂತರ ಕಾರ್ಯಕ್ರಮಗಳ ವಿವರ ತಿಳಿಸಲಾಗುವುದು.

ಬಾಗಲಕೋಟೆ ಜಿಲ್ಲಾ ಸಮಿತಿಯ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು. ಶುಭವಾಗಲಿ 💐

ನಮಸ್ತೇ,ಇತಿಹಾಸ ಸಂಕಲನ ಸಮಿತಿಯ ಹಸ್ತಪ್ರತಿ ಲೇಖನ ತಂಡವು 05-03-2026, ಗುರುವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ  ಕರ್ನಾಟಕ ಸಂಸ್ಕೃತ ವಿಶ...
06/03/2026

ನಮಸ್ತೇ,
ಇತಿಹಾಸ ಸಂಕಲನ ಸಮಿತಿಯ ಹಸ್ತಪ್ರತಿ ಲೇಖನ ತಂಡವು 05-03-2026, ಗುರುವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಎಂ ಈ ಎಸ್ ಕಾಲೇಜ್ ಆಯೋಜಿಸಿದ್ದ ರಾಷ್ಟ್ರೀಯ ಹಸ್ತಪ್ರತಿ ಸಂರಕ್ಷಣಾ ವಿಚಾರ ಸಂಕಿರಣದಲ್ಲಿ ಭಾಗವಹಿಸಿ *ಪ್ರಾಚೀನ ಬ್ರಾಹ್ಮೀ ಲಿಪಿ* ಯಲ್ಲಿ ರಚಿಸಿದ *ಶ್ರೀ ಅಚ್ಯುತ ಶತಕ* ಕೃತಿಯನ್ನು ಸಮರ್ಪಣೆ ಮಾಡಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಸ್ತಪ್ರತಿ ಪುನಾರಚನೆ ಮತ್ತು ಸಂರಕ್ಷಣೆಯ ಪ್ರಾತ್ಯಕ್ಷಿಕೆ ನೀಡಲಾಯಿತು.
15 ಜನರ ತಂಡ, ಎಲ್ಲರೂ ಮಾತೆಯರು. ಇದರಲ್ಲಿ 10 ಜನ ಮಾತೆಯರು ಈಗ ಹಸ್ತಪ್ರತಿ ವಿಷಯದಲ್ಲಿ ಈಗ ಎಂ.ಎ ವ್ಯಾಸಂಗ ಮಾಡುತ್ತಿದ್ದಾರೆ.

ಧನ್ಯವಾದಗಳು

Dr. Shatavadhani R Ganesh is confered with Padmabhushan.... ಪದ್ಮಭೂಷಣದ ಘನತೆ ಹೆಚ್ಚಿತು
25/01/2026

Dr. Shatavadhani R Ganesh is confered with Padmabhushan.... ಪದ್ಮಭೂಷಣದ ಘನತೆ ಹೆಚ್ಚಿತು

ನಮಸ್ತೇ,ಭಾರತೀಯ ಇತಿಹಾಸ ಸಂಕಲನ ಸಮಿತಿಯ ವತಿಯಿಂದ ಸಂಶೋಧನೆಯಾದ ಮಹಿಷಾಸುರಮರ್ದಿನಿ ಕೃತಿಯನ್ನು ದಿನಾಂಕ: 19 ಸೆಪ್ಟೆಂಬರ್ 2025, ಶುಕ್ರವಾರದಂದು ...
22/09/2025

ನಮಸ್ತೇ,
ಭಾರತೀಯ ಇತಿಹಾಸ ಸಂಕಲನ ಸಮಿತಿಯ ವತಿಯಿಂದ ಸಂಶೋಧನೆಯಾದ ಮಹಿಷಾಸುರಮರ್ದಿನಿ ಕೃತಿಯನ್ನು ದಿನಾಂಕ: 19 ಸೆಪ್ಟೆಂಬರ್ 2025, ಶುಕ್ರವಾರದಂದು ಮೈಸೂರಿನ ಝಾನ್ಸಿರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿರುವ ಮಾಧವ ಕೃಪಾದ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಲಾಯಿತು. ಇತಿಹಾಸ ಸಂಕಲನ ಸಮಿತಿಯ ಕಾರ್ಯಕರ್ತರಾದ ಶ್ರೀ ಕೃಷ್ಣಮೂರ್ತಿ ಈ ಕೃತಿಯ ಸಂಶೋಧಕರು ಮತ್ತು ಲೇಖಕರು. ಖ್ಯಾತ ಇತಿಹಾಸಕಾರ ಡಾ.ದೇವರಕೊಂಡಾರೆಡ್ಡಿಯವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

ಮೈಸೂರಿನ ಸಂಸದರು ಮತ್ತು ರಾಜವಂಶಸ್ಥರೂ ಆದ ಶ್ರೀಮನ್ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೃತಿಯ ಲೋಕಾರ್ಪಣೆಮಾಡಿದರು. ಪ್ರಸಿದ್ಧ ಪ್ರತಿಮಾಶಸ್ತ್ರತಜ್ಞ, ಇತಿಹಾಸಕಾರ ಹಾಗೂ ಶಾಸನ ತಜ್ಞರಾದ ವಿದ್ವಾಂಸ ಡಾ. ಶಲ್ವಪಿಳ್ಳೆ ಅಯ್ಯಂಗಾರ್ ಅವರು ಮುಖ್ಯ ಭಾಷಣ ಮಾಡಿದರು. ಭಾರತೀಯ ಇತಿಹಾಸ ಸಂಕಲನ ಸಮಿತಿಯ ಹಿರಿಯ ಕಾರ್ಯಕರ್ತರಾದ ಶ್ರೀ ಪ್ರಸನ್ನ ಪ್ರಕಾಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪುಸ್ತಕದ ಪ್ರಕಾಶಕರಾದ ಬೆಂಗಳೂರಿನ ಅಯೋಧ್ಯಾ ಪಬ್ಲಿಕೇಶನ್ಸ್ ನ ಶ್ರೀ ಶಂಶಾಂಕ್ ಮತ್ತು ಕೃತಿಯ ಪ್ರಕಾಶನದಲ್ಲಿ ಪೂರ್ಣ ಸಹಕಾರ ನೀಡಿದ ಸಂವಾದದ ಶ್ರೀ ವೃಷಾಂಕ್ ಭಟ್ ಉಪಸ್ಥಿತರಿದ್ದರು. ಕಾರ್ಯಕರ್ಮವನ್ನು ಮಂಥನ -ಮೈಸೂರು ಆಯೋಜಿಸಿತ್ತು.

ಪೂರ್ಣ ಕಾರ್ಯಕ್ರಮದ ವಿಡಿಯೋ ಲಿಂಕ್ ಇಲ್ಲಿದೆ. ಇದೇ ವಿಡಿಯೋದಲ್ಲಿ ಪತ್ರಿಕಾ ವರದಿಳೂ ಇವೆ. ಪುಸ್ತಕವನ್ನು ಅಯೋಧ್ಯಾ ಪಬ್ಲಿಕೇಶನ್ ನ ವೆಬ್ ಸೈಟಿನಲ್ಲಿ ಆನ್ ಲೈನ್ ಮೂಲಕ ಕೊಳ್ಳಬಹುದು.
https://www.youtube.com/watch?v=aEYgwT-j7rs

ಧನ್ಯವಾದಗಳು,
ಕೃಷ್ಣಮೂರ್ತಿ,
ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ

ನವರಾತ್ರಿ ದುಷ್ಟಸಂಹಾರದ, ಶಿಷ್ಟರಕ್ಷಣೆಯ ದ್ಯೋತಕವಾದ ಹಿಂದೂ ಪರ್ವ. ಲೋಕಕ್ಕೆ ಕಂಟಕನಾಗಿದ್ದ ಮಹಿಷನನ್ನು ಮರ್ದಿಸಿ ದೇವಿಯು ಎಲ್ಲೆಡ.....

ನವರಾತ್ರಿ ದುಷ್ಟಸಂಹಾರದ, ಶಿಷ್ಟರಕ್ಷಣೆಯ ದ್ಯೋತಕವಾದ ಹಿಂದೂ ಪರ್ವ. ಲೋಕಕ್ಕೆ ಕಂಟಕನಾಗಿದ್ದ ಮಹಿಷನನ್ನು ಮರ್ದಿಸಿ ದೇವಿಯು ಎಲ್ಲೆಡೆ ಶಾಂತಿ-ಸುಭಿ...
16/09/2025

ನವರಾತ್ರಿ ದುಷ್ಟಸಂಹಾರದ, ಶಿಷ್ಟರಕ್ಷಣೆಯ ದ್ಯೋತಕವಾದ ಹಿಂದೂ ಪರ್ವ. ಲೋಕಕ್ಕೆ ಕಂಟಕನಾಗಿದ್ದ ಮಹಿಷನನ್ನು ಮರ್ದಿಸಿ ದೇವಿಯು ಎಲ್ಲೆಡೆ ಶಾಂತಿ-ಸುಭಿಕ್ಷೆಯನ್ನು ಮರುಸ್ಥಾಪಿಸಿದ ದಿವ್ಯ ಸಂದರ್ಭವಿದು.

ಆದರೆ ಮಹಿಷಾಸುರಮರ್ದಿನಿ ಯಾರು? ಈಕೆಯ ಪೌರಾಣಿಕ ಪ್ರಾಮುಖ್ಯ ಏನು? ಭಾರತದ ಇತಿಹಾಸದಲ್ಲಿ ಎಲ್ಲೆಲ್ಲಿ ಮಹಿಷಮರ್ದಿನಿಯ ಉಲ್ಲೇಖಗಳು ಸಿಗುತ್ತವೆ? ಈಕೆ ಕೇವಲ ದಕ್ಷಿಣಭಾರತದ ದೇವಿಯೆ, ಅಥವಾ ಭಾರತದ ಉದ್ದಗಲಕ್ಕೂ ಈಕೆಯ ಜನಪ್ರಿಯತೆ ವ್ಯಾಪಿಸಿದೆಯೆ? ಮಹಿಷಮಂಡಲ ನಿಜಕ್ಕೂ ಎಲ್ಲಿದೆ? ಮೈಸೂರು ದಸರೆಯ ಹಾಗೆ ಮಹಿಷ ದಸರೆ ಎಂಬುದೊಂದು ಇದೆಯೆ? ಮಹಿಷನ ಪ್ರಜೆಗಳು ಯಾರು? ಮಹಿಷಮರ್ದಿನಿಯ ಆರಾಧನೆ ಭಾರತದ, ಜಗತ್ತಿನ ಯಾವ್ಯಾವ ಭಾಗಗಳಲ್ಲಿ ನಡೆದುಬಂದಿದೆ? ನವರಾತ್ರಿಗೂ ಮಹಿಷನ ಮರ್ದನಕ್ಕೂ ಇರುವ ನಂಟು ಏನು?

ಈ ಎಲ್ಲ ಆಯಾಮಗಳಲ್ಲಿ ದೇವಿಯ ಹಾಗೂ ಮಹಿಷಸಂಹಾರದ ಪೂರ್ವಾಪರಗಳನ್ನು ಚರ್ಚಿಸುವ ಒಂದು ವಿಶಿಷ್ಟ ವಿಶ್ಲೇಷಣಾತ್ಮಕ ಸಂಶೋಧನ ಕೃತಿಯನ್ನು ಅಯೋಧ್ಯಾ ಪಬ್ಲಿಕೇಶನ್ಸ್ ಹೊರತರುತ್ತಿದೆ. ಇದು ಈ ನವರಾತ್ರಿಗೆ ಓದುಗರಿಗೆ ನಮ್ಮ ಕೊಡುಗೆ!

ಈ ಕೃತಿಯನ್ನು ರಚಿಸಿದವರು ಶ್ರೀ ಕೃಷ್ಣಮೂರ್ತಿ ಆರ್.

ಕೃತಿಗೆ ಸಂಶೋಧಕರೂ ಇತಿಹಾಸತಜ್ಞರೂ ಆದ ಡಾ. ದೇವರಕೊಂಡಾರೆಡ್ಡಿಯವರ ಮುನ್ನುಡಿ ಇದೆ.

ಕೃತಿಯನ್ನು ಮೈಸೂರು ಸಂಸದರೂ ಮೈಸೂರು ಮಹಾರಾಜರೂ ಆದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಸಿದ್ಧ ಇತಿಹಾಸತಜ್ಞ, ಹಿರಿಯ ವಿದ್ವಾಂಸ ಡಾ. ಶಲ್ವಪಿಳ್ಳೆ ಅಯ್ಯಂಗಾರ್, ಮುಖ್ಯ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ.

ಸ್ಥಳ: ಮಾಧವ ಕೃಪ ಸಭಾಂಗಣ, ಲಕ್ಷ್ಮೀಪುರಂ, ಮೈಸೂರು
ದಿನಾಂಕ: 19 ಸೆಪ್ಟೆಂಬರ್ 2025, ಶುಕ್ರವಾರ
ಸಮಯ: ಸಂಜೆ 6:30

ಅಯೋಧ್ಯಾ ಪಬ್ಲಿಕೇಶನ್ಸ್ ಬೆಂಗಳೂರು ಹಾಗೂ ಮಂಥನ-ಮೈಸೂರು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ. ಅಂದು ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟವಿರುತ್ತದೆ. ಎಲ್ಲರಿಗೂ ಆತ್ಮೀಯ ಸ್ವಾಗತ!

https://www.amazon.in/dp/819309106Xಭಾರತ ಜೀವನ ತರಂಗಿಣಿ ಚಾರ್ಟ್ ಗಳು ಈಗ ಕನ್ನಡದಲ್ಲಿ ಲಭ್ಯವಿದೆ (ಹೊಸ 6ನೇ ಆವೃತ್ತಿ).
13/09/2025

https://www.amazon.in/dp/819309106X

ಭಾರತ ಜೀವನ ತರಂಗಿಣಿ ಚಾರ್ಟ್ ಗಳು ಈಗ ಕನ್ನಡದಲ್ಲಿ ಲಭ್ಯವಿದೆ (ಹೊಸ 6ನೇ ಆವೃತ್ತಿ).

ಭಾರತೀಯ ಇತಿಹಾಸದ ಕಾಲಗಣನೆಯ ಆಧಾರದ ನಾಲ್ಕು ಚಾರ್ಟ್‌ಗಳು, ಸೃಷ್ಟಿಯಿಂದ ಹಿಡಿದು ಇಲ್ಲಿಯ ತನಕ ಪ್ರಾಚೀನ ಶಿಲಾಯುಗ, ಮಧ್ಯಕಾಲೀನ ಶಿಲಾಯ...

ನಮಸ್ತೇದಿನಾಂಕ 5-8-2025 ಮತ್ತು 6-8-2025 ರಂದು ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನಾ, ನವದೆಹಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಡಾ. ಬಾ...
31/08/2025

ನಮಸ್ತೇ
ದಿನಾಂಕ 5-8-2025 ಮತ್ತು 6-8-2025 ರಂದು ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನಾ, ನವದೆಹಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಡಾ. ಬಾಲಮುಕುಂದ ಪಾಂಡೇಯ ಅವರು ಕರ್ನಾಟಕ ರಾಜ್ಯದ ಪ್ರವಾಸ ಕೈಗೊಂಡಿದ್ದರು.

*5-ಆಗಸ್ಟ್*
1. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆ MES ಪದವಿ ಕಾಲೇಜಿನಲ್ಲಿ ಇತಿಹಾಸ ಪದವಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳೊಂದಿಗೆ ಬಾಲಮುಕುಂದ ಪಾಂಡೆ ಜೀ ಅವರ ಸಂವಾದ ನಡೆಯಿತು. *Importance of re-writing history from nationalistic perspective* ವಿಷಯವಾಗಿ ವಿಸ್ತಾರವಾದ ಚಿಂತನೆಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ NAAC ಅಧ್ಯಕ್ಷರು ಮತ್ತು ಪ್ರಸ್ತುತ MES ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಸಿ.ಶರ್ಮ ಅವರು ಉಪಸ್ಥಿತರಿದ್ದರು.

2. ಬೆಂಗಳೂರಿನ ವಿಶ್ವೇಶ್ವರಪುರದ ಜೈನ್ ಕಾಲೇಜಿನಲ್ಲಿ *Relevance of History to the Management* ವಿಷಯ ಕುರಿತು ಡಾ.ಬಾಲಮುಕುಂದ ಪಾಂಡೇಯ ಅವರು ಮಾತನಾಡಿದರು. ನಂತರ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರುಗಳ ಜೊತೆಗೆ ಸಂವಾದ ನಡೆಯಿತು.

*6-ಆಗಸ್ಟ್ 6*
1. ತುಮಕೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶೇಷಾದ್ರಿಪುರಮ್ ಕಾಲೀಜಿನ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಯೋಜಿಸಲಾಗಿತ್ತು. *Re-writing history* ಕುರಿತು ಡಾ.ಬಾಲಮುಕುಂದ ಪಾಂಡೇಯ ಅವರು ಸವಿಸ್ತಾರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕವರ್ಗ, ಉಪನ್ಯಾಸಕರು ಮತು ಪದವಿ ವಿದ್ಯಾರ್ಥಿಗಳು ಭಾಗವಿಸಿದ್ದರು.

2. ಅಂದೇ ಮೈಸೂರಿಗೆ ತೆರಳಿ ಇತ್ತೀಚೆಗೆ ನಿಧನರಾದ ಹಿರಿಯ ಕಾರ್ಯಕರ್ತರಾದ ಶ್ರೀ ನರಸಿಂಹನ್ ಅವರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ತಿಳಿಸಿ ಸಂತಾಪ ಸೂಚಕ ಪತ್ರವನ್ನು ನೀಡಿದರು.

ಪ್ರವಾಸದಲ್ಲಿ ಇತಿಹಾಸ ಸಂಕಲನ ಯೋಜನೆಯ ಸಹಕಾರ್ಯದರ್ಶಿಗಳಾದ ಪ್ರೊ. ಎಂ. ಕೊಟ್ರೇಶ್ ಹಾಗೂ ಸಮಿತಿಯ ಗೌರವಾಧ್ಯಕ್ಷರಾದ ಡಾ. ಎನ್ ಸಂಜೀವರೆಡ್ಡಿ ಅವರುಗಳು ಉಪಸ್ಥಿತರಿದ್ದರು.

https://youtu.be/gA5QDvd_BKMನಮಸ್ತೇ,ದಿನಾಂಕ 29-8-2025 ರಂದು ಭಾರತೀಯ ಇತಿಹಾಸ ಸಂಕಲನ ಸಮಿತಿಯಿಂದ ಸೋದೆ ಶ್ರೀವಾದಿರಾಜ ಮಠ, ಸೋಂದಾದಲ್ಲಿ *...
31/08/2025

https://youtu.be/gA5QDvd_BKM

ನಮಸ್ತೇ,
ದಿನಾಂಕ 29-8-2025 ರಂದು ಭಾರತೀಯ ಇತಿಹಾಸ ಸಂಕಲನ ಸಮಿತಿಯಿಂದ ಸೋದೆ ಶ್ರೀವಾದಿರಾಜ ಮಠ, ಸೋಂದಾದಲ್ಲಿ *ತೀರ್ಥಪ್ರಬಂಧ* ಹಸ್ತಪ್ರತಿಯ ಸಮರ್ಪಣೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಸಮರ್ಪಣೆಯನ್ನು ಸ್ವೀಕರಿಸಿ ಆಶೀರ್ವಚನ ಮಾಡಿದರು. ಭಾರತೀಯ ಇತಿಹಾಸ ಸಂಕಲನ ಸಮಿತಿಯು 2015ರಲ್ಲಿ ಈ ಇತಿಹಾಸ ಗ್ರಂಥಗಳ ಹಸ್ತಪ್ರತಿಲೇಖನ ಯೋಜನೆಯನ್ನು ಆರಂಭಿಸಿತ್ತು. ಹಸ್ತಪ್ರತಿ ಲೇಖನದ ಅವಶ್ಯಕತೆ ಮತ್ತು ಯೋಜನೆ ಅನುಷ್ಥಾನಗೊಂಡ ರೀತಿ ಮತ್ತು ಕಾರ್ಯಕ್ರಮದ ತುಣುಕು ಇಲ್ಲಿದೆ. ಆಸಕ್ತರು ಯೂಟ್ಯೂಬ್ ಲಿಂಕಿನಲ್ಲಿ ಇರುವ ವಿಡಿಯೋವನ್ನು ವೀಕ್ಷಿಸಬಹುದು.

ಒಟ್ಟು 15 ಜನರ ಮಾತೆಯರ ತಂಡ ಬೆಂಗಳೂರಿನಲ್ಲಿ ಈ ಕೆಲಸ ಮಾಡುತ್ತಿದೆ. ಈ ತೀರ್ಥಪ್ರಬಂಧ ಗ್ರಂಥವನ್ನು 8 ಜನ ಮಾತೆಯರು ಪ್ರತಿನಿತ್ಯ ಕನಿಷ್ಠ ಒಂದು ಗಂಟೆಯಂತೆ 3 ತಿಂಗಳಲ್ಲಿ ಬರೆದಿದ್ದಾರೆ.

Tirtha Prabandha is one of the important composition of Sri Vadiraja Tirtha of Sode Mutt. Manuscript version of Tirtha Prabandha was written on hand made Ju...

ಅಜಯ್ ಕುಮಾರ್ ಶಮಾ೯ ಇವರಿಂದ ವಿಶೇಷ ಉಪನ್ಯಾಸ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಬೈಂದೂರು ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲ...
06/03/2025

ಅಜಯ್ ಕುಮಾರ್ ಶಮಾ೯ ಇವರಿಂದ ವಿಶೇಷ ಉಪನ್ಯಾಸ

ಸಕಾ೯ರಿ ಪ್ರಥಮ ದಜೆ೯ ಕಾಲೇಜು ಬೈಂದೂರು ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲೆ ಹಾಗೂ ಇತಿಹಾಸ ವಿಭಾಗ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಬೈಂದೂರು ಇವರ ವತಿಯಿಂದ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಬೈಂದೂರು ಕಾಲೇಜು ಸಭಾಂಗಣ *ಇತಿಹಾಸ ದಪ೯ಣ* ವಿಶೇಷ ಉಪನ್ಯಾಸನ ಕಾಯ೯ಕ್ರಮ ಆಕಾಶ ಬಾಣ ಭಾರತದ ಲೋಹದ ಕೊಳವೆಯ ರಾಕೇಟ್ ನ ಇತಿಹಾಸ ದ ವಿಚಾರ ರ ಬಗ್ಗೆ ಶ್ರೀಯುತ ಅಜಯ್ ಕುಮಾರ್ ಶಮಾ೯ ಸ್ವತಂತ್ರ ಸಂಶೋಧಕರು ವಿದ್ಯಾರ್ಥಿಗಳಿಗೆ ವಿಚಾರ ಹಂಚಿಕೊಂಡರು.

ಕಾಯ೯ಕ್ರಮದ ಉದ್ಘಾಟನೆಯನ್ನು ಸ್ವಾತಂತ್ರ್ಯ ಹೋರಾಟಗಾರರಾಗಿರುವ ಬಾಡಾ ಮಂಜುನಾಥ್ ಜೋಷಿ ಮೊಮ್ಮಗಳು ಶ್ರೀ ಜಯದೇವಿ ಭಟ್ ಉದ್ಘಾಟಿಸಿ ಶುಭಾಶಯ ಕೋರಿದರು.

ವೇದಿಕೆ ಯಲ್ಲಿ ಶ್ರೀಮತಿ ಚಿತ್ರಾ ಪಡಿಯಾರ್,ಶ್ರೀಮತಿ ಮಮತ,ಪ್ರದೀಪ ಕುಮಾರ್ ಬಸ್ರೂರು,ಕುಮಾರಿ ಕವಿತಾ ಆಚಾಯ೯ ಮುದೂರು ವಿಚಾರ ಹಂಚಿಕೊಂಡರು

ಕಾಯ೯ಕ್ರಮ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರು ಶ್ರೀ ನಾಗರಾಜ್ ಶೆಟ್ಟಿ ವಹಿಸಿದ್ದರು

ಕಾಯ೯ಕ್ರಮ ದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ವಗ೯ ಉಪಸ್ಥಿತರಿದ್ದರು

ಕಾಯ೯ಕ್ರಮ ನಿರೂಪಣೆ ಕಾಲೇಜಿನ ತೃತೀಯ ಬಿ.ಎ ಕುಮಾರಿ ಮೇಘ,ಪ್ರಾಥ೯ನೆ ಕುಮಾರಿ ಹಷಿ೯ತ,ನಡೆಸಿಕೊಟ್ಟರು . ಪ್ರಾಸ್ತಾವಿಕ ನುಡಿಯನ್ನು ಕಾಲೇಜಿನ ಉಪನ್ಯಾಸಕರು ಶ್ರೀ ನವೀನ್ ಹೆಚ್.ಜೆ. ಹಾಗೂ ಧನ್ಯವಾದ ವನ್ನು ಉಪನ್ಯಾಸಕರಾದ ವಿಘ್ನೇಶ್ ವಂದನಾಪ೯ಣೆಯನ್ನು ಅಶ್ವಿನಿ ತೃತೀಯ ಬಿ ಎ. ನಡೆಸಿದರು

ನಮಸ್ಕಾರ,ಕುಂದಾಪುರ, 01 ಮಾರ್ಚ್ 2025, ಶನಿವಾರದಂದು ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ, ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ...
06/03/2025

ನಮಸ್ಕಾರ,
ಕುಂದಾಪುರ, 01 ಮಾರ್ಚ್ 2025, ಶನಿವಾರದಂದು ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ, ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮತ್ತು ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅಧ್ಯಯನ ಕೇಂದ್ರ, ಬಸ್ರೂರು ಇವರ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಮಹಾರಾಷ್ಟ್ರದ ಇತಿಹಾಸ ತಜ್ಞ, ವಾಗ್ಮಿ, ಪ್ರಾಧ್ಯಾಪಕ ಶ್ರೀ ರವಿರಾಜ್ ಪರಾಡ್ಕರ್ ಅವರು *ಛತ್ರಪತಿ ಶಿವಾಜಿ ಮತ್ತು ಕರ್ನಾಟದ ನಂಟು* ಕುರಿತಾದ ವಿಶೇಷ ಉಪನ್ಯಾಸ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು, 25 ಅಧ್ಯಾಪಕರುಗಳು ಮತ್ತು ಕಾಲೇಜು ಸಿಬ್ಬಂದಿವರ್ಗ ಬಾಗವಹಿಸಿದ್ದರು. ಶ್ರೀ ರವಿರಾಜ್ ಪರಾಡ್ಕರ್ ಅವರು ಉಪನ್ಯಾಸಕ್ಕೆ ಸಂಬಂಧಿಸಿದ ತಥ್ಯಗಳನ್ನು ದಾಖಲೆಗಳ ಸಹಿತ ಪ್ರಸ್ತುತಪಡಿಸಿದರು.

ಉಪನ್ಯಾಸದ ಮುಖ್ಯಾಂಶಗಳು:
1. ಶಿವಾಜಿಯ ಪ್ರಾಥಮಿಕ ಶಿಕ್ಷಣ 1637 ರಿಂದ 1642ರವರೆಗೂ ಕರ್ನಾಟಕದ ಬೆಂಗಳೂರಿನಲ್ಲಿ ಆಯಿತು. ತಂದೆ ಶಹಾಜಿಯು ಶಿವಾಜಿಯ ಶಿಕ್ಷಣಕ್ಕೆ ವಿಶೇಷವಾಗಿ ನೇಮಿಸಿದ್ದ ಉತ್ತಮ ಸಂಸ್ಕೃತ, ಕನ್ನಡ, ಗಣಿತ, ವೇದ-ಪುರಾಣ ಇತರೆ ವಿದ್ವಾಂಸರುಗಳು ಪ್ರಾಥಮಿಕ ಶಿಕ್ಷಣವನ್ನು ಶಿವಾಜಿಗೆ ನೀಡಿದ್ದರು. ಇದೇ ಶಿಕ್ಷಣ ಶಿವಾಜಿಯ ಜೀವನದಲ್ಲಿ ಸ್ವರಾಜ್ಯ ಸ್ಥಾಪನೆಯ ಕಾರ್ಯಕ್ಕೆ ಪ್ರಮುಖ ಪಾತ್ರವಹಿಸಿತು. ಶಹಾಜಿ ಕರ್ನಾಟಕದಿಂದಲೇ ಶಿವಾಜಿಗಾಗಿ ಹಲವು ಆಡಳಿತ ತಂತ್ರಜ್ಞರನ್ನು ಪುಣೇರಿಗೆ ಕಳಿಸಿಕೊಟ್ಟಿದ್ದ. ಅವರೆಲ್ಲರೂ ಶಿವಾಜಿಯ ಆಡಳಿತದಲ್ಲಿ ತಮ್ಮ ಸೇವೆ ಸಲ್ಲಿಸಿದ್ದರು. 16ನೇ ವಯಸ್ಸಿನಲ್ಲಿಯೇ ತಾನು ಕಳುಹಿಸಿದ ಮೊದಲ ಪತ್ರದಲ್ಲಿ ಬಾಲ್ಯ ಶಿಕ್ಷಣದ ಪರಿಣಾಮ ಕಾಣಬಹುದು.
2. ಶಿವಾಜಿಯ ಸ್ವರಾಜ್ಯದ ಕಲ್ಪನಗೆ ಕರ್ನಾಟಕದ ವಿಜಯನಗರವೇ ಪ್ರಮುಖ ಪ್ರೇರಣೆ. ಆಕ್ರಮಣಕಾರಿ ಮತಾಂಧರು ಎಂದೂ ಈ ಭೂಮಿಯನ್ನು ಒಪ್ಪುವುದಿಲ್ಲ, ಇಲ್ಲಿನ ಶಾಸನ ಎನಿದ್ದರೂ ಸ್ಥಳೀಯರಿಂದಲೇ ಆಗಬೇಕು ಎಂದು ತಿಳಿಸಿ ಪ್ರಾದೇಶಿಕತೆಯು ರಾಷ್ಟ್ರೀಯತೆಗೆ ಪೂರಕ ಎಂದು ತೋರಿಸಿದ.
3. ಕರ್ನಾಟಕದ ರಾಣಿ ಮಲ್ಲಮ್ಮನ ಜೊತೆ ಶಿವಾಜಿ ಸೈನ್ಯದ ಸೇನಾಪತಿ ಅನುಚಿತವಾಗಿ ವರ್ತಿಸಿದ್ದನ್ನು ಪರಿಶೀಲಿಸಿದ ಶಿವಾಜಿ ಅದಕ್ಕೆ ಶಿಕ್ಷೆಯಾಗಿ ಸೇನಾಪತಿಯ ಕಣ್ಣನ್ನು ಕೀಳಿಸಿದ್ದ. ಇದೇ ಕಾರಣಕ್ಕಾಗಿ ರಾಣಿ ಮಲ್ಲಮ್ಮ ಶಿವಾಜಿಯ ಸಮ್ಮಾನಕ್ಕಾಗಿ ಎರಡು ಪ್ರತಿಮೆಗಳನ್ನು ಸ್ಥಾಪಿಸಿದ್ದಳು. ಮಲ್ಲಮ್ಮ ಮತ್ತು ಶಿವಾಜಿ ಇಬ್ಬರಲ್ಲೂ ಪರಸ್ಪರ ಅಣ್ಣ-ತಂಗಿ ಭಾವನೆ ಇತ್ತು.
4. ಶಿವಾಜಿಯು ಬೆಂಗಳೂರಿನಲ್ಲಿದ್ದ ತನ್ನ ಸೋದರ ವೆಂಕೋಜಿಗೆ ಬರೆದ ಎರಡು ಪತ್ರಗಳಲ್ಲಿ ಹೇಗೆ ತಾನು ಹಿಂದವೀ ಸ್ವರಾಜ್ಯಕಾಗಿ ಸಣ್ಣಸಣ್ಣ ರಾಜ್ಯಗಳನ್ನು ಒಗ್ಗೂಡಿಸುತ್ತಿದ್ದೇನೆಯೋ ಹಾಗೆಯೇ ನೀನೂ ಕೂಡ ಕರ್ನಾಟಕ, ತಮಿಳುನಾಡು ಆಂಧ್ರದಲ್ಲಿ ಎಲ್ಲಾ ಸಂಸ್ಥಾನಗಳನ್ನು ಒಗ್ಗೂಡಿಸಬೇಕು, ಅದಕ್ಕಾಗಿಯೆ ತನ್ನ ದಕ್ಷಿಣ ದಿಗ್ವಿಜಯ ಎಂದು ಸ್ಪಷ್ಟಪಡಿಸಿದ್ದ. ಇದಕ್ಕಾಗಿ ಕರ್ನಾಟಕದವರೇ ಆದ ದಕ್ಷಿಣ ಭಾಷೆಗಳ ಹಿಡಿತವಿದ್ದ ರಘುನಾಥ ನಾರಾಯಣ ಹನುಮಂತೆ ಅವರನ್ನು ಮುಖ್ಯ ಅಮಾತ್ಯರಾಗಿ ನೇಮಿಸಿದ್ದ.
5. ಶಿವಾಜಿಯ ಬಸ್ರೂರು ವಿಮೋಚನೆ ನೌಕಾಯಾತ್ರೆ, ಬಸ್ರೂರಿನ ಸಂಪತ್ತನ್ನು ದೋಚುವುದಕ್ಕಲ್ಲ, ಬದಲಾಗಿ ವಿದೇಶಿ ಪೋರ್ಚುಗೀಸರಿಗೆ ಕಪ್ಪಗಳನ್ನು ನೀಡಿ ಅವರನ್ನು ಆಂತರಿಕ ರಾಜಕೀಯದಲ್ಲಿ ಸೇರಿಸಿದ್ದ ಶಿವಪ್ಪನಾಯಕನ ಮಗ ಸೋಮಶೇಖರ ನಾಯಕನಿಗೆ ಬುದ್ದಿ ಕಲಿಸಿ ಬಸ್ರೂರನ್ನು ಪೋರ್ಚುಗೀಸರಿಂದ ಮುಕ್ತಿಗೊಳಿಸುವುದಕ್ಕಾಗಿ. ಬಸ್ರೂರು ಸಂಪದ್ಭರಿತ ದೊಡ್ಡ ಬಂದರು ಅಥವಾ ವ್ಯಾಪಾರಕೇಂದ್ರ ಆಗಿರಲಿಲ್ಲ, ಅಲ್ಲಿ ದೋಚುವುದಕ್ಕೆ ಅಂತಹ ಸಂಪತ್ತು ಇರಲಿಲ್ಲ. ಇತಿಹಾಸಕಾರರು ಇದನ್ನು ತಪ್ಪಾಗಿ ಅರ್ಥೈಸಿ ಶಿವಾಜಿಯನ್ನು ಲೂಟಿಕೋರ ಎಂದು ಅಪಕೀರ್ತಿಗೊಳಿಸಿದ್ದಾರೆ.
6. ದೇಶದ ಎಲ್ಲಾ ಸಂತರು ಮತ್ತು ತತ್ವಜ್ಞಾನಿಗಳು ಶಿವಾಜಿಯ ಮಹತ್ವವನ್ನು ಉಲ್ಲೇಖಿಸಿರುವುದು ಶಿವಾಜಿ ಒಬ್ಬ ಮರಾಠ ಅಲ್ಲ, ಅವನು ರಾಷ್ಟ್ರಪುರುಷ ಎಂದು ಸ್ಪಷ್ಟಪಡಿಸುತ್ತದೆ.
ಚಿಂತಕ ಹಾಗೂ ಲೇಖಕ ಶ್ರೀ ದೇವು ಹನೆಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ಇತಿಹಾಸ ಸಂಕಲನದ ಸಮಿತಿ ಕಿತ್ತೂರು ಕರ್ನಾಟಕದ ಸಂಚಾಲಕ ಡಾ.ಬಸವರಾಜ ಎನ್. ಅಕ್ಕಿ ಅವರು ವಿದ್ಯಾರ್ಥಿಗಳು ಇತಿಹಾಸ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂದು ಜೀವ ರೂಪಿಸಿಕೊಳ್ಳಿ ಎಂಬ ಕಿವಿಮಾತು ಹೇಳಿದರು. ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ- ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಇತಿಹಾಸ ಸಂಕಲನ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಪ್ರದೀಪ್ ಕುಮಾರ್ ಬಸ್ರೂರು, ಅಭಿಜ್ಞಾ ಉಪಾಧ್ಯಾಯ ಉಪಸ್ಥಿತರಿದ್ದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ. ಸ್ವಾಗತಿಸಿ, ಇಂಗ್ಲಿಷ್ ಪ್ರಾಧ್ಯಾಪಕರಾದ ರವೀನಾ ಸಿ. ಪೂಜಾರಿ, ಸ್ವಾತಿ ರಾವ್ ಅತಿಥಿಗಳನ್ನು ಪರಿಚಯಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದೀಪಾ ವಂದಿಸಿ, ಇಂಗ್ಲಿಷ್ ಪ್ರಾಧ್ಯಾಪಕರಾದ ಸ್ಟಾಲಿನ್ ಡಿಸೋಜ ನಿರೂಪಿಸಿದರು.

ಧನ್ಯವಾದಗಳು

Address

Yadava Smrithi
Bangalore
560020

Alerts

Be the first to know and let us send you an email when Bharatiya Itihas Sankalan Samiti Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Bharatiya Itihas Sankalan Samiti Karnataka:

Shortcuts

Share

Category