Bharatiya Itihas Sankalan Samiti Karnataka

Bharatiya Itihas Sankalan Samiti Karnataka Bharatiya Itihas Sankalan Samiti an organization to rewrite True Indian History.

Bharateeya Itihasa Sankalana Samiti was founded by the revered Moropant Pingle in 1973, with a central objective of creating a historiography for India through native, Indian endeavor so as to counteract the numerous conscious and unconscious prejudices, misinterpretations, deprecations as well as under valuations which Western – especially the British-historians had imbibed into History of India.

ನಮಸ್ತೇ,ಭಾರತೀಯ ಇತಿಹಾಸ ಸಂಕಲನ ಸಮಿತಿಯ ವತಿಯಿಂದ ಸಂಶೋಧನೆಯಾದ ಮಹಿಷಾಸುರಮರ್ದಿನಿ ಕೃತಿಯನ್ನು ದಿನಾಂಕ: 19 ಸೆಪ್ಟೆಂಬರ್ 2025, ಶುಕ್ರವಾರದಂದು ...
22/09/2025

ನಮಸ್ತೇ,
ಭಾರತೀಯ ಇತಿಹಾಸ ಸಂಕಲನ ಸಮಿತಿಯ ವತಿಯಿಂದ ಸಂಶೋಧನೆಯಾದ ಮಹಿಷಾಸುರಮರ್ದಿನಿ ಕೃತಿಯನ್ನು ದಿನಾಂಕ: 19 ಸೆಪ್ಟೆಂಬರ್ 2025, ಶುಕ್ರವಾರದಂದು ಮೈಸೂರಿನ ಝಾನ್ಸಿರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿರುವ ಮಾಧವ ಕೃಪಾದ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಲಾಯಿತು. ಇತಿಹಾಸ ಸಂಕಲನ ಸಮಿತಿಯ ಕಾರ್ಯಕರ್ತರಾದ ಶ್ರೀ ಕೃಷ್ಣಮೂರ್ತಿ ಈ ಕೃತಿಯ ಸಂಶೋಧಕರು ಮತ್ತು ಲೇಖಕರು. ಖ್ಯಾತ ಇತಿಹಾಸಕಾರ ಡಾ.ದೇವರಕೊಂಡಾರೆಡ್ಡಿಯವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

ಮೈಸೂರಿನ ಸಂಸದರು ಮತ್ತು ರಾಜವಂಶಸ್ಥರೂ ಆದ ಶ್ರೀಮನ್ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೃತಿಯ ಲೋಕಾರ್ಪಣೆಮಾಡಿದರು. ಪ್ರಸಿದ್ಧ ಪ್ರತಿಮಾಶಸ್ತ್ರತಜ್ಞ, ಇತಿಹಾಸಕಾರ ಹಾಗೂ ಶಾಸನ ತಜ್ಞರಾದ ವಿದ್ವಾಂಸ ಡಾ. ಶಲ್ವಪಿಳ್ಳೆ ಅಯ್ಯಂಗಾರ್ ಅವರು ಮುಖ್ಯ ಭಾಷಣ ಮಾಡಿದರು. ಭಾರತೀಯ ಇತಿಹಾಸ ಸಂಕಲನ ಸಮಿತಿಯ ಹಿರಿಯ ಕಾರ್ಯಕರ್ತರಾದ ಶ್ರೀ ಪ್ರಸನ್ನ ಪ್ರಕಾಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪುಸ್ತಕದ ಪ್ರಕಾಶಕರಾದ ಬೆಂಗಳೂರಿನ ಅಯೋಧ್ಯಾ ಪಬ್ಲಿಕೇಶನ್ಸ್ ನ ಶ್ರೀ ಶಂಶಾಂಕ್ ಮತ್ತು ಕೃತಿಯ ಪ್ರಕಾಶನದಲ್ಲಿ ಪೂರ್ಣ ಸಹಕಾರ ನೀಡಿದ ಸಂವಾದದ ಶ್ರೀ ವೃಷಾಂಕ್ ಭಟ್ ಉಪಸ್ಥಿತರಿದ್ದರು. ಕಾರ್ಯಕರ್ಮವನ್ನು ಮಂಥನ -ಮೈಸೂರು ಆಯೋಜಿಸಿತ್ತು.

ಪೂರ್ಣ ಕಾರ್ಯಕ್ರಮದ ವಿಡಿಯೋ ಲಿಂಕ್ ಇಲ್ಲಿದೆ. ಇದೇ ವಿಡಿಯೋದಲ್ಲಿ ಪತ್ರಿಕಾ ವರದಿಳೂ ಇವೆ. ಪುಸ್ತಕವನ್ನು ಅಯೋಧ್ಯಾ ಪಬ್ಲಿಕೇಶನ್ ನ ವೆಬ್ ಸೈಟಿನಲ್ಲಿ ಆನ್ ಲೈನ್ ಮೂಲಕ ಕೊಳ್ಳಬಹುದು.
https://www.youtube.com/watch?v=aEYgwT-j7rs

ಧನ್ಯವಾದಗಳು,
ಕೃಷ್ಣಮೂರ್ತಿ,
ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ

ನವರಾತ್ರಿ ದುಷ್ಟಸಂಹಾರದ, ಶಿಷ್ಟರಕ್ಷಣೆಯ ದ್ಯೋತಕವಾದ ಹಿಂದೂ ಪರ್ವ. ಲೋಕಕ್ಕೆ ಕಂಟಕನಾಗಿದ್ದ ಮಹಿಷನನ್ನು ಮರ್ದಿಸಿ ದೇವಿಯು ಎಲ್ಲೆಡ.....

ನವರಾತ್ರಿ ದುಷ್ಟಸಂಹಾರದ, ಶಿಷ್ಟರಕ್ಷಣೆಯ ದ್ಯೋತಕವಾದ ಹಿಂದೂ ಪರ್ವ. ಲೋಕಕ್ಕೆ ಕಂಟಕನಾಗಿದ್ದ ಮಹಿಷನನ್ನು ಮರ್ದಿಸಿ ದೇವಿಯು ಎಲ್ಲೆಡೆ ಶಾಂತಿ-ಸುಭಿ...
16/09/2025

ನವರಾತ್ರಿ ದುಷ್ಟಸಂಹಾರದ, ಶಿಷ್ಟರಕ್ಷಣೆಯ ದ್ಯೋತಕವಾದ ಹಿಂದೂ ಪರ್ವ. ಲೋಕಕ್ಕೆ ಕಂಟಕನಾಗಿದ್ದ ಮಹಿಷನನ್ನು ಮರ್ದಿಸಿ ದೇವಿಯು ಎಲ್ಲೆಡೆ ಶಾಂತಿ-ಸುಭಿಕ್ಷೆಯನ್ನು ಮರುಸ್ಥಾಪಿಸಿದ ದಿವ್ಯ ಸಂದರ್ಭವಿದು.

ಆದರೆ ಮಹಿಷಾಸುರಮರ್ದಿನಿ ಯಾರು? ಈಕೆಯ ಪೌರಾಣಿಕ ಪ್ರಾಮುಖ್ಯ ಏನು? ಭಾರತದ ಇತಿಹಾಸದಲ್ಲಿ ಎಲ್ಲೆಲ್ಲಿ ಮಹಿಷಮರ್ದಿನಿಯ ಉಲ್ಲೇಖಗಳು ಸಿಗುತ್ತವೆ? ಈಕೆ ಕೇವಲ ದಕ್ಷಿಣಭಾರತದ ದೇವಿಯೆ, ಅಥವಾ ಭಾರತದ ಉದ್ದಗಲಕ್ಕೂ ಈಕೆಯ ಜನಪ್ರಿಯತೆ ವ್ಯಾಪಿಸಿದೆಯೆ? ಮಹಿಷಮಂಡಲ ನಿಜಕ್ಕೂ ಎಲ್ಲಿದೆ? ಮೈಸೂರು ದಸರೆಯ ಹಾಗೆ ಮಹಿಷ ದಸರೆ ಎಂಬುದೊಂದು ಇದೆಯೆ? ಮಹಿಷನ ಪ್ರಜೆಗಳು ಯಾರು? ಮಹಿಷಮರ್ದಿನಿಯ ಆರಾಧನೆ ಭಾರತದ, ಜಗತ್ತಿನ ಯಾವ್ಯಾವ ಭಾಗಗಳಲ್ಲಿ ನಡೆದುಬಂದಿದೆ? ನವರಾತ್ರಿಗೂ ಮಹಿಷನ ಮರ್ದನಕ್ಕೂ ಇರುವ ನಂಟು ಏನು?

ಈ ಎಲ್ಲ ಆಯಾಮಗಳಲ್ಲಿ ದೇವಿಯ ಹಾಗೂ ಮಹಿಷಸಂಹಾರದ ಪೂರ್ವಾಪರಗಳನ್ನು ಚರ್ಚಿಸುವ ಒಂದು ವಿಶಿಷ್ಟ ವಿಶ್ಲೇಷಣಾತ್ಮಕ ಸಂಶೋಧನ ಕೃತಿಯನ್ನು ಅಯೋಧ್ಯಾ ಪಬ್ಲಿಕೇಶನ್ಸ್ ಹೊರತರುತ್ತಿದೆ. ಇದು ಈ ನವರಾತ್ರಿಗೆ ಓದುಗರಿಗೆ ನಮ್ಮ ಕೊಡುಗೆ!

ಈ ಕೃತಿಯನ್ನು ರಚಿಸಿದವರು ಶ್ರೀ ಕೃಷ್ಣಮೂರ್ತಿ ಆರ್.

ಕೃತಿಗೆ ಸಂಶೋಧಕರೂ ಇತಿಹಾಸತಜ್ಞರೂ ಆದ ಡಾ. ದೇವರಕೊಂಡಾರೆಡ್ಡಿಯವರ ಮುನ್ನುಡಿ ಇದೆ.

ಕೃತಿಯನ್ನು ಮೈಸೂರು ಸಂಸದರೂ ಮೈಸೂರು ಮಹಾರಾಜರೂ ಆದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಸಿದ್ಧ ಇತಿಹಾಸತಜ್ಞ, ಹಿರಿಯ ವಿದ್ವಾಂಸ ಡಾ. ಶಲ್ವಪಿಳ್ಳೆ ಅಯ್ಯಂಗಾರ್, ಮುಖ್ಯ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ.

ಸ್ಥಳ: ಮಾಧವ ಕೃಪ ಸಭಾಂಗಣ, ಲಕ್ಷ್ಮೀಪುರಂ, ಮೈಸೂರು
ದಿನಾಂಕ: 19 ಸೆಪ್ಟೆಂಬರ್ 2025, ಶುಕ್ರವಾರ
ಸಮಯ: ಸಂಜೆ 6:30

ಅಯೋಧ್ಯಾ ಪಬ್ಲಿಕೇಶನ್ಸ್ ಬೆಂಗಳೂರು ಹಾಗೂ ಮಂಥನ-ಮೈಸೂರು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ. ಅಂದು ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟವಿರುತ್ತದೆ. ಎಲ್ಲರಿಗೂ ಆತ್ಮೀಯ ಸ್ವಾಗತ!

https://www.amazon.in/dp/819309106Xಭಾರತ ಜೀವನ ತರಂಗಿಣಿ ಚಾರ್ಟ್ ಗಳು ಈಗ ಕನ್ನಡದಲ್ಲಿ ಲಭ್ಯವಿದೆ (ಹೊಸ 6ನೇ ಆವೃತ್ತಿ).
13/09/2025

https://www.amazon.in/dp/819309106X

ಭಾರತ ಜೀವನ ತರಂಗಿಣಿ ಚಾರ್ಟ್ ಗಳು ಈಗ ಕನ್ನಡದಲ್ಲಿ ಲಭ್ಯವಿದೆ (ಹೊಸ 6ನೇ ಆವೃತ್ತಿ).

ಭಾರತೀಯ ಇತಿಹಾಸದ ಕಾಲಗಣನೆಯ ಆಧಾರದ ನಾಲ್ಕು ಚಾರ್ಟ್‌ಗಳು, ಸೃಷ್ಟಿಯಿಂದ ಹಿಡಿದು ಇಲ್ಲಿಯ ತನಕ ಪ್ರಾಚೀನ ಶಿಲಾಯುಗ, ಮಧ್ಯಕಾಲೀನ ಶಿಲಾಯ...

ನಮಸ್ತೇದಿನಾಂಕ 5-8-2025 ಮತ್ತು 6-8-2025 ರಂದು ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನಾ, ನವದೆಹಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಡಾ. ಬಾ...
31/08/2025

ನಮಸ್ತೇ
ದಿನಾಂಕ 5-8-2025 ಮತ್ತು 6-8-2025 ರಂದು ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನಾ, ನವದೆಹಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಡಾ. ಬಾಲಮುಕುಂದ ಪಾಂಡೇಯ ಅವರು ಕರ್ನಾಟಕ ರಾಜ್ಯದ ಪ್ರವಾಸ ಕೈಗೊಂಡಿದ್ದರು.

*5-ಆಗಸ್ಟ್*
1. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆ MES ಪದವಿ ಕಾಲೇಜಿನಲ್ಲಿ ಇತಿಹಾಸ ಪದವಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳೊಂದಿಗೆ ಬಾಲಮುಕುಂದ ಪಾಂಡೆ ಜೀ ಅವರ ಸಂವಾದ ನಡೆಯಿತು. *Importance of re-writing history from nationalistic perspective* ವಿಷಯವಾಗಿ ವಿಸ್ತಾರವಾದ ಚಿಂತನೆಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ NAAC ಅಧ್ಯಕ್ಷರು ಮತ್ತು ಪ್ರಸ್ತುತ MES ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಸಿ.ಶರ್ಮ ಅವರು ಉಪಸ್ಥಿತರಿದ್ದರು.

2. ಬೆಂಗಳೂರಿನ ವಿಶ್ವೇಶ್ವರಪುರದ ಜೈನ್ ಕಾಲೇಜಿನಲ್ಲಿ *Relevance of History to the Management* ವಿಷಯ ಕುರಿತು ಡಾ.ಬಾಲಮುಕುಂದ ಪಾಂಡೇಯ ಅವರು ಮಾತನಾಡಿದರು. ನಂತರ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರುಗಳ ಜೊತೆಗೆ ಸಂವಾದ ನಡೆಯಿತು.

*6-ಆಗಸ್ಟ್ 6*
1. ತುಮಕೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶೇಷಾದ್ರಿಪುರಮ್ ಕಾಲೀಜಿನ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಯೋಜಿಸಲಾಗಿತ್ತು. *Re-writing history* ಕುರಿತು ಡಾ.ಬಾಲಮುಕುಂದ ಪಾಂಡೇಯ ಅವರು ಸವಿಸ್ತಾರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕವರ್ಗ, ಉಪನ್ಯಾಸಕರು ಮತು ಪದವಿ ವಿದ್ಯಾರ್ಥಿಗಳು ಭಾಗವಿಸಿದ್ದರು.

2. ಅಂದೇ ಮೈಸೂರಿಗೆ ತೆರಳಿ ಇತ್ತೀಚೆಗೆ ನಿಧನರಾದ ಹಿರಿಯ ಕಾರ್ಯಕರ್ತರಾದ ಶ್ರೀ ನರಸಿಂಹನ್ ಅವರ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ತಿಳಿಸಿ ಸಂತಾಪ ಸೂಚಕ ಪತ್ರವನ್ನು ನೀಡಿದರು.

ಪ್ರವಾಸದಲ್ಲಿ ಇತಿಹಾಸ ಸಂಕಲನ ಯೋಜನೆಯ ಸಹಕಾರ್ಯದರ್ಶಿಗಳಾದ ಪ್ರೊ. ಎಂ. ಕೊಟ್ರೇಶ್ ಹಾಗೂ ಸಮಿತಿಯ ಗೌರವಾಧ್ಯಕ್ಷರಾದ ಡಾ. ಎನ್ ಸಂಜೀವರೆಡ್ಡಿ ಅವರುಗಳು ಉಪಸ್ಥಿತರಿದ್ದರು.

https://youtu.be/gA5QDvd_BKMನಮಸ್ತೇ,ದಿನಾಂಕ 29-8-2025 ರಂದು ಭಾರತೀಯ ಇತಿಹಾಸ ಸಂಕಲನ ಸಮಿತಿಯಿಂದ ಸೋದೆ ಶ್ರೀವಾದಿರಾಜ ಮಠ, ಸೋಂದಾದಲ್ಲಿ *...
31/08/2025

https://youtu.be/gA5QDvd_BKM

ನಮಸ್ತೇ,
ದಿನಾಂಕ 29-8-2025 ರಂದು ಭಾರತೀಯ ಇತಿಹಾಸ ಸಂಕಲನ ಸಮಿತಿಯಿಂದ ಸೋದೆ ಶ್ರೀವಾದಿರಾಜ ಮಠ, ಸೋಂದಾದಲ್ಲಿ *ತೀರ್ಥಪ್ರಬಂಧ* ಹಸ್ತಪ್ರತಿಯ ಸಮರ್ಪಣೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಸಮರ್ಪಣೆಯನ್ನು ಸ್ವೀಕರಿಸಿ ಆಶೀರ್ವಚನ ಮಾಡಿದರು. ಭಾರತೀಯ ಇತಿಹಾಸ ಸಂಕಲನ ಸಮಿತಿಯು 2015ರಲ್ಲಿ ಈ ಇತಿಹಾಸ ಗ್ರಂಥಗಳ ಹಸ್ತಪ್ರತಿಲೇಖನ ಯೋಜನೆಯನ್ನು ಆರಂಭಿಸಿತ್ತು. ಹಸ್ತಪ್ರತಿ ಲೇಖನದ ಅವಶ್ಯಕತೆ ಮತ್ತು ಯೋಜನೆ ಅನುಷ್ಥಾನಗೊಂಡ ರೀತಿ ಮತ್ತು ಕಾರ್ಯಕ್ರಮದ ತುಣುಕು ಇಲ್ಲಿದೆ. ಆಸಕ್ತರು ಯೂಟ್ಯೂಬ್ ಲಿಂಕಿನಲ್ಲಿ ಇರುವ ವಿಡಿಯೋವನ್ನು ವೀಕ್ಷಿಸಬಹುದು.

ಒಟ್ಟು 15 ಜನರ ಮಾತೆಯರ ತಂಡ ಬೆಂಗಳೂರಿನಲ್ಲಿ ಈ ಕೆಲಸ ಮಾಡುತ್ತಿದೆ. ಈ ತೀರ್ಥಪ್ರಬಂಧ ಗ್ರಂಥವನ್ನು 8 ಜನ ಮಾತೆಯರು ಪ್ರತಿನಿತ್ಯ ಕನಿಷ್ಠ ಒಂದು ಗಂಟೆಯಂತೆ 3 ತಿಂಗಳಲ್ಲಿ ಬರೆದಿದ್ದಾರೆ.

Tirtha Prabandha is one of the important composition of Sri Vadiraja Tirtha of Sode Mutt. Manuscript version of Tirtha Prabandha was written on hand made Ju...

ಅಜಯ್ ಕುಮಾರ್ ಶಮಾ೯ ಇವರಿಂದ ವಿಶೇಷ ಉಪನ್ಯಾಸ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಬೈಂದೂರು ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲ...
06/03/2025

ಅಜಯ್ ಕುಮಾರ್ ಶಮಾ೯ ಇವರಿಂದ ವಿಶೇಷ ಉಪನ್ಯಾಸ

ಸಕಾ೯ರಿ ಪ್ರಥಮ ದಜೆ೯ ಕಾಲೇಜು ಬೈಂದೂರು ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲೆ ಹಾಗೂ ಇತಿಹಾಸ ವಿಭಾಗ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಬೈಂದೂರು ಇವರ ವತಿಯಿಂದ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಬೈಂದೂರು ಕಾಲೇಜು ಸಭಾಂಗಣ *ಇತಿಹಾಸ ದಪ೯ಣ* ವಿಶೇಷ ಉಪನ್ಯಾಸನ ಕಾಯ೯ಕ್ರಮ ಆಕಾಶ ಬಾಣ ಭಾರತದ ಲೋಹದ ಕೊಳವೆಯ ರಾಕೇಟ್ ನ ಇತಿಹಾಸ ದ ವಿಚಾರ ರ ಬಗ್ಗೆ ಶ್ರೀಯುತ ಅಜಯ್ ಕುಮಾರ್ ಶಮಾ೯ ಸ್ವತಂತ್ರ ಸಂಶೋಧಕರು ವಿದ್ಯಾರ್ಥಿಗಳಿಗೆ ವಿಚಾರ ಹಂಚಿಕೊಂಡರು.

ಕಾಯ೯ಕ್ರಮದ ಉದ್ಘಾಟನೆಯನ್ನು ಸ್ವಾತಂತ್ರ್ಯ ಹೋರಾಟಗಾರರಾಗಿರುವ ಬಾಡಾ ಮಂಜುನಾಥ್ ಜೋಷಿ ಮೊಮ್ಮಗಳು ಶ್ರೀ ಜಯದೇವಿ ಭಟ್ ಉದ್ಘಾಟಿಸಿ ಶುಭಾಶಯ ಕೋರಿದರು.

ವೇದಿಕೆ ಯಲ್ಲಿ ಶ್ರೀಮತಿ ಚಿತ್ರಾ ಪಡಿಯಾರ್,ಶ್ರೀಮತಿ ಮಮತ,ಪ್ರದೀಪ ಕುಮಾರ್ ಬಸ್ರೂರು,ಕುಮಾರಿ ಕವಿತಾ ಆಚಾಯ೯ ಮುದೂರು ವಿಚಾರ ಹಂಚಿಕೊಂಡರು

ಕಾಯ೯ಕ್ರಮ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರು ಶ್ರೀ ನಾಗರಾಜ್ ಶೆಟ್ಟಿ ವಹಿಸಿದ್ದರು

ಕಾಯ೯ಕ್ರಮ ದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ವಗ೯ ಉಪಸ್ಥಿತರಿದ್ದರು

ಕಾಯ೯ಕ್ರಮ ನಿರೂಪಣೆ ಕಾಲೇಜಿನ ತೃತೀಯ ಬಿ.ಎ ಕುಮಾರಿ ಮೇಘ,ಪ್ರಾಥ೯ನೆ ಕುಮಾರಿ ಹಷಿ೯ತ,ನಡೆಸಿಕೊಟ್ಟರು . ಪ್ರಾಸ್ತಾವಿಕ ನುಡಿಯನ್ನು ಕಾಲೇಜಿನ ಉಪನ್ಯಾಸಕರು ಶ್ರೀ ನವೀನ್ ಹೆಚ್.ಜೆ. ಹಾಗೂ ಧನ್ಯವಾದ ವನ್ನು ಉಪನ್ಯಾಸಕರಾದ ವಿಘ್ನೇಶ್ ವಂದನಾಪ೯ಣೆಯನ್ನು ಅಶ್ವಿನಿ ತೃತೀಯ ಬಿ ಎ. ನಡೆಸಿದರು

ನಮಸ್ಕಾರ,ಕುಂದಾಪುರ, 01 ಮಾರ್ಚ್ 2025, ಶನಿವಾರದಂದು ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ, ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ...
06/03/2025

ನಮಸ್ಕಾರ,
ಕುಂದಾಪುರ, 01 ಮಾರ್ಚ್ 2025, ಶನಿವಾರದಂದು ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ, ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮತ್ತು ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅಧ್ಯಯನ ಕೇಂದ್ರ, ಬಸ್ರೂರು ಇವರ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಮಹಾರಾಷ್ಟ್ರದ ಇತಿಹಾಸ ತಜ್ಞ, ವಾಗ್ಮಿ, ಪ್ರಾಧ್ಯಾಪಕ ಶ್ರೀ ರವಿರಾಜ್ ಪರಾಡ್ಕರ್ ಅವರು *ಛತ್ರಪತಿ ಶಿವಾಜಿ ಮತ್ತು ಕರ್ನಾಟದ ನಂಟು* ಕುರಿತಾದ ವಿಶೇಷ ಉಪನ್ಯಾಸ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು, 25 ಅಧ್ಯಾಪಕರುಗಳು ಮತ್ತು ಕಾಲೇಜು ಸಿಬ್ಬಂದಿವರ್ಗ ಬಾಗವಹಿಸಿದ್ದರು. ಶ್ರೀ ರವಿರಾಜ್ ಪರಾಡ್ಕರ್ ಅವರು ಉಪನ್ಯಾಸಕ್ಕೆ ಸಂಬಂಧಿಸಿದ ತಥ್ಯಗಳನ್ನು ದಾಖಲೆಗಳ ಸಹಿತ ಪ್ರಸ್ತುತಪಡಿಸಿದರು.

ಉಪನ್ಯಾಸದ ಮುಖ್ಯಾಂಶಗಳು:
1. ಶಿವಾಜಿಯ ಪ್ರಾಥಮಿಕ ಶಿಕ್ಷಣ 1637 ರಿಂದ 1642ರವರೆಗೂ ಕರ್ನಾಟಕದ ಬೆಂಗಳೂರಿನಲ್ಲಿ ಆಯಿತು. ತಂದೆ ಶಹಾಜಿಯು ಶಿವಾಜಿಯ ಶಿಕ್ಷಣಕ್ಕೆ ವಿಶೇಷವಾಗಿ ನೇಮಿಸಿದ್ದ ಉತ್ತಮ ಸಂಸ್ಕೃತ, ಕನ್ನಡ, ಗಣಿತ, ವೇದ-ಪುರಾಣ ಇತರೆ ವಿದ್ವಾಂಸರುಗಳು ಪ್ರಾಥಮಿಕ ಶಿಕ್ಷಣವನ್ನು ಶಿವಾಜಿಗೆ ನೀಡಿದ್ದರು. ಇದೇ ಶಿಕ್ಷಣ ಶಿವಾಜಿಯ ಜೀವನದಲ್ಲಿ ಸ್ವರಾಜ್ಯ ಸ್ಥಾಪನೆಯ ಕಾರ್ಯಕ್ಕೆ ಪ್ರಮುಖ ಪಾತ್ರವಹಿಸಿತು. ಶಹಾಜಿ ಕರ್ನಾಟಕದಿಂದಲೇ ಶಿವಾಜಿಗಾಗಿ ಹಲವು ಆಡಳಿತ ತಂತ್ರಜ್ಞರನ್ನು ಪುಣೇರಿಗೆ ಕಳಿಸಿಕೊಟ್ಟಿದ್ದ. ಅವರೆಲ್ಲರೂ ಶಿವಾಜಿಯ ಆಡಳಿತದಲ್ಲಿ ತಮ್ಮ ಸೇವೆ ಸಲ್ಲಿಸಿದ್ದರು. 16ನೇ ವಯಸ್ಸಿನಲ್ಲಿಯೇ ತಾನು ಕಳುಹಿಸಿದ ಮೊದಲ ಪತ್ರದಲ್ಲಿ ಬಾಲ್ಯ ಶಿಕ್ಷಣದ ಪರಿಣಾಮ ಕಾಣಬಹುದು.
2. ಶಿವಾಜಿಯ ಸ್ವರಾಜ್ಯದ ಕಲ್ಪನಗೆ ಕರ್ನಾಟಕದ ವಿಜಯನಗರವೇ ಪ್ರಮುಖ ಪ್ರೇರಣೆ. ಆಕ್ರಮಣಕಾರಿ ಮತಾಂಧರು ಎಂದೂ ಈ ಭೂಮಿಯನ್ನು ಒಪ್ಪುವುದಿಲ್ಲ, ಇಲ್ಲಿನ ಶಾಸನ ಎನಿದ್ದರೂ ಸ್ಥಳೀಯರಿಂದಲೇ ಆಗಬೇಕು ಎಂದು ತಿಳಿಸಿ ಪ್ರಾದೇಶಿಕತೆಯು ರಾಷ್ಟ್ರೀಯತೆಗೆ ಪೂರಕ ಎಂದು ತೋರಿಸಿದ.
3. ಕರ್ನಾಟಕದ ರಾಣಿ ಮಲ್ಲಮ್ಮನ ಜೊತೆ ಶಿವಾಜಿ ಸೈನ್ಯದ ಸೇನಾಪತಿ ಅನುಚಿತವಾಗಿ ವರ್ತಿಸಿದ್ದನ್ನು ಪರಿಶೀಲಿಸಿದ ಶಿವಾಜಿ ಅದಕ್ಕೆ ಶಿಕ್ಷೆಯಾಗಿ ಸೇನಾಪತಿಯ ಕಣ್ಣನ್ನು ಕೀಳಿಸಿದ್ದ. ಇದೇ ಕಾರಣಕ್ಕಾಗಿ ರಾಣಿ ಮಲ್ಲಮ್ಮ ಶಿವಾಜಿಯ ಸಮ್ಮಾನಕ್ಕಾಗಿ ಎರಡು ಪ್ರತಿಮೆಗಳನ್ನು ಸ್ಥಾಪಿಸಿದ್ದಳು. ಮಲ್ಲಮ್ಮ ಮತ್ತು ಶಿವಾಜಿ ಇಬ್ಬರಲ್ಲೂ ಪರಸ್ಪರ ಅಣ್ಣ-ತಂಗಿ ಭಾವನೆ ಇತ್ತು.
4. ಶಿವಾಜಿಯು ಬೆಂಗಳೂರಿನಲ್ಲಿದ್ದ ತನ್ನ ಸೋದರ ವೆಂಕೋಜಿಗೆ ಬರೆದ ಎರಡು ಪತ್ರಗಳಲ್ಲಿ ಹೇಗೆ ತಾನು ಹಿಂದವೀ ಸ್ವರಾಜ್ಯಕಾಗಿ ಸಣ್ಣಸಣ್ಣ ರಾಜ್ಯಗಳನ್ನು ಒಗ್ಗೂಡಿಸುತ್ತಿದ್ದೇನೆಯೋ ಹಾಗೆಯೇ ನೀನೂ ಕೂಡ ಕರ್ನಾಟಕ, ತಮಿಳುನಾಡು ಆಂಧ್ರದಲ್ಲಿ ಎಲ್ಲಾ ಸಂಸ್ಥಾನಗಳನ್ನು ಒಗ್ಗೂಡಿಸಬೇಕು, ಅದಕ್ಕಾಗಿಯೆ ತನ್ನ ದಕ್ಷಿಣ ದಿಗ್ವಿಜಯ ಎಂದು ಸ್ಪಷ್ಟಪಡಿಸಿದ್ದ. ಇದಕ್ಕಾಗಿ ಕರ್ನಾಟಕದವರೇ ಆದ ದಕ್ಷಿಣ ಭಾಷೆಗಳ ಹಿಡಿತವಿದ್ದ ರಘುನಾಥ ನಾರಾಯಣ ಹನುಮಂತೆ ಅವರನ್ನು ಮುಖ್ಯ ಅಮಾತ್ಯರಾಗಿ ನೇಮಿಸಿದ್ದ.
5. ಶಿವಾಜಿಯ ಬಸ್ರೂರು ವಿಮೋಚನೆ ನೌಕಾಯಾತ್ರೆ, ಬಸ್ರೂರಿನ ಸಂಪತ್ತನ್ನು ದೋಚುವುದಕ್ಕಲ್ಲ, ಬದಲಾಗಿ ವಿದೇಶಿ ಪೋರ್ಚುಗೀಸರಿಗೆ ಕಪ್ಪಗಳನ್ನು ನೀಡಿ ಅವರನ್ನು ಆಂತರಿಕ ರಾಜಕೀಯದಲ್ಲಿ ಸೇರಿಸಿದ್ದ ಶಿವಪ್ಪನಾಯಕನ ಮಗ ಸೋಮಶೇಖರ ನಾಯಕನಿಗೆ ಬುದ್ದಿ ಕಲಿಸಿ ಬಸ್ರೂರನ್ನು ಪೋರ್ಚುಗೀಸರಿಂದ ಮುಕ್ತಿಗೊಳಿಸುವುದಕ್ಕಾಗಿ. ಬಸ್ರೂರು ಸಂಪದ್ಭರಿತ ದೊಡ್ಡ ಬಂದರು ಅಥವಾ ವ್ಯಾಪಾರಕೇಂದ್ರ ಆಗಿರಲಿಲ್ಲ, ಅಲ್ಲಿ ದೋಚುವುದಕ್ಕೆ ಅಂತಹ ಸಂಪತ್ತು ಇರಲಿಲ್ಲ. ಇತಿಹಾಸಕಾರರು ಇದನ್ನು ತಪ್ಪಾಗಿ ಅರ್ಥೈಸಿ ಶಿವಾಜಿಯನ್ನು ಲೂಟಿಕೋರ ಎಂದು ಅಪಕೀರ್ತಿಗೊಳಿಸಿದ್ದಾರೆ.
6. ದೇಶದ ಎಲ್ಲಾ ಸಂತರು ಮತ್ತು ತತ್ವಜ್ಞಾನಿಗಳು ಶಿವಾಜಿಯ ಮಹತ್ವವನ್ನು ಉಲ್ಲೇಖಿಸಿರುವುದು ಶಿವಾಜಿ ಒಬ್ಬ ಮರಾಠ ಅಲ್ಲ, ಅವನು ರಾಷ್ಟ್ರಪುರುಷ ಎಂದು ಸ್ಪಷ್ಟಪಡಿಸುತ್ತದೆ.
ಚಿಂತಕ ಹಾಗೂ ಲೇಖಕ ಶ್ರೀ ದೇವು ಹನೆಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ಇತಿಹಾಸ ಸಂಕಲನದ ಸಮಿತಿ ಕಿತ್ತೂರು ಕರ್ನಾಟಕದ ಸಂಚಾಲಕ ಡಾ.ಬಸವರಾಜ ಎನ್. ಅಕ್ಕಿ ಅವರು ವಿದ್ಯಾರ್ಥಿಗಳು ಇತಿಹಾಸ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂದು ಜೀವ ರೂಪಿಸಿಕೊಳ್ಳಿ ಎಂಬ ಕಿವಿಮಾತು ಹೇಳಿದರು. ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ- ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಇತಿಹಾಸ ಸಂಕಲನ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಪ್ರದೀಪ್ ಕುಮಾರ್ ಬಸ್ರೂರು, ಅಭಿಜ್ಞಾ ಉಪಾಧ್ಯಾಯ ಉಪಸ್ಥಿತರಿದ್ದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ. ಸ್ವಾಗತಿಸಿ, ಇಂಗ್ಲಿಷ್ ಪ್ರಾಧ್ಯಾಪಕರಾದ ರವೀನಾ ಸಿ. ಪೂಜಾರಿ, ಸ್ವಾತಿ ರಾವ್ ಅತಿಥಿಗಳನ್ನು ಪರಿಚಯಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದೀಪಾ ವಂದಿಸಿ, ಇಂಗ್ಲಿಷ್ ಪ್ರಾಧ್ಯಾಪಕರಾದ ಸ್ಟಾಲಿನ್ ಡಿಸೋಜ ನಿರೂಪಿಸಿದರು.

ಧನ್ಯವಾದಗಳು

ದಿನಾಂಕ 9 ಫೆಬ್ರುವರಿ 2025 ರಂದು ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಮತ್ತು ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಸಂಶೋಧಕ ಅಜಯ್ ಕುಮಾರ ಶರ್ಮ ರಚಿ...
09/02/2025

ದಿನಾಂಕ 9 ಫೆಬ್ರುವರಿ 2025 ರಂದು ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಮತ್ತು ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಸಂಶೋಧಕ ಅಜಯ್ ಕುಮಾರ ಶರ್ಮ ರಚಿತ ಆಕಾಶಬಾಣ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಸೊಸೈಟಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ವಿಮರ್ಶೆಯನ್ನು ಖ್ಯಾತ ವಿದ್ವಾಂಸರಾದ ಡಾ. ಶತಾವಧಾನಿ ರಾ ಗಣೇಶ್ ಅವರು ಮಾಡಿದರು.

ಇಂತಹ ಸಂಶೋಧನಾತ್ಮಕ ಗ್ರಂಥಗಳು ಹೆಚ್ಚು ಪ್ರಕಟ ಆಗಬೇಕು ಮತ್ತು ಹೆಚ್ಚು ಜನರಿಗೆ ಮುಟ್ಟುವ ಕೆಲಸ ಆಗಬೇಕು ಎಂದು ಹೇಳುತ್ತಾ ತಮ್ಮ ವಿಮರ್ಶೆಯನ್ನು ಆರಂಭಿಸಿದರು. ಭಾರತೀಯ ಸಾಂಪ್ರದಾಯಿಕ ಕಲೆಗಳಲ್ಲಿ ಇರುವ gap between theory and practice should be bridged through these kind of researches. ಇಲ್ಲಿ gap ಇದೆಯೇ ಹೊರತು ಪರಸ್ಪರ ವಿರೋಧವಿಲ್ಲ. ಇಸ್ಲಾಂ ದಾಳಿಯಲ್ಲಿ ನಮ್ಮ ಅಸ್ತಿತ್ವ ಪರಂಪರೆ ಮೌಲ್ಯಗಳನ್ನು, ಸಂಸ್ಕೃತಿಗಳನ್ನು ನಾಶ ಮಾಡುವುದಕ್ಕೆ ಹೆಚ್ಚು ಉತ್ಸಾಹವಿದ್ದರು ಅವರು ಭಾರತೀಯರ ಸಾಧನೆಗಳನ್ನು ತನ್ನ ಹೆಸರಿನಲ್ಲಿ ಪ್ರಕಟ ಮಾಡಿಕೊಳ್ಳುವ ಗೋಜಿಗೆ ಹೆಚ್ಚು ಹೋಗಲಿಲ್ಲ. ಆದರೆ ಕಳೆದ 150-200 ವರ್ಷಗಳಲ್ಲಿ ಕ್ರೈಸ್ತ ಮಿಷನರಿಗಳು, ಬ್ರಿಟಿಷರು, ಫ್ರೆಂಚರು, ಡಚ್ಚರು, ಪೋರ್ಚುಗೀಸರುಗಳು ಇಲ್ಲಿನದನ್ನು ತಮ್ಮದಾಗಿ ಮಾಡಿಕೊಂಡು ಪ್ರಕಟಿಸಿಕೊಳ್ಳುವ ಹೆಚ್ಚು ಕೆಲಸ ಮಾಡಿದ್ದಾರೆ. ವಿಜಯನಗರದ ಪತನ ಆದಮೇಲೆ ಸ್ವತಂತ್ರಗೊಂಡ ಸಂಸ್ಥಾನಗಳು ವಿಜಯನಗರದ ಅರಸೊತ್ತಿಗೆ ಇಲ್ಲದಿದ್ದರೂ ಆ ಜ್ಞಾನ -ವಿಜ್ಞಾನ-ಸಂಸ್ಕೃತಿ ಪರಂಪರೆಯನ್ನು ಎಲ್ಲಾ ಕಡೆ ಮುಂದುವರೆಸಿಕೊಂಡು ಬಂದವು, ಹಾಗೆಯೇ ಈ ಪರಂಪರೆಯನ್ನು ಅಖಂಡ ಭಾರತದಲ್ಲಿ ಮುಂದುವರೆಸಿರುವುದು ಇತಿಹಾಸದಲ್ಲಿ ಕಾಣುತ್ತೇವೆ. ಒಂದು ಸಾಮ್ರಾಜ್ಯದ ಅವಧಿ ಮುಗಿದರೂ, ಈ ರಾಷ್ಟ್ರದ ಚೈತನ್ಯ ಮುಂದಿನ ಸಾಮ್ರಾಜ್ಯದಲ್ಲಿ ಅಕ್ಷತವಾಗಿ ಮುಂದುವರಿಯದಿರುವುದು ನಮ್ಮ ನಿರಂತರತೆಗೆ ಸಾಕ್ಷ್ಯವಾಗಿದೆ ಎಂದು ಹೇಳಿದರು.
ಪುಸ್ತಕದಲ್ಲಿ ಬರುವ ಹಲವು ರೀತಿಯ ಬಾಣಗಳನ್ನು (ರಾಕೆಟ್) ವಿಮರ್ಶಿಸುತ್ತಾ ಹೈದರ್ ಅಲಿಗಿಂತ ಮುಂಚೆ ಇದ್ದ ಕಂಠೀರವ ನರಸರಾಜ ಒಡೆಯರ್ ಇವುಗಳನ್ನು ಬಳಸಿರುವುದನ್ನು, ಹೆಚ್ಚಾಗಿ ಮರಾಠರು ತಮ್ಮ ಸಾಮ್ರಾಜ್ಯದ ಆದಿ ಅಂತ್ಯದವರೆಗೂ ಬಳಸಿದರವರನ್ನು, ಮೊಘಲರು, ರೋಹಿಲ್ಲಾಗಳು, ಅವಧ್ ನವಾಬರು ಕೂಡ ಈ ಬಾಣಗಳನ್ನು ಬಳಸಿರುವುದನ್ನು ಗಮನಕ್ಕೆ ತಂದಿರುವ ಲೇಖಕರು ಪೂರ್ವಗ್ರಹದಿಂದ ಯಾವುದನ್ನು ಗ್ರಹಿಸಿಲ್ಲ ಸತ್ಯಕ್ಕೆ ನಡೆದುಕೊಂಡಿದ್ದಾರೆ ಎಂದು ಪ್ರಶಂಸಿದರು.

ಲೇಖಕರು ತಮ್ಮ ಸಂಶೋಧನೆಗಳಿಂದ ಸಿದ್ಧಪಡಿಸಿರುವ ಮರಾಠರ ರಾಕೆಟ್ ಗಳು ಉತ್ತಮ ಗುಣಮಟ್ಟ ಮತ್ತು ಪರಿಣಾಮಕಾರಿಯಾದವುಗಳು, ಟಿಪ್ಪುಸುಲ್ತಾನ ಕಾಲದ ರಾಕೆಟ್ ಗಳು ಕಾಲ ದೃಷ್ಟಿಯಿಂದಲೂ ಪ್ರಾಚೀನವಲ್ಲ ಮತ್ತು ಗುಣಮಟ್ಟದ ದೃಷ್ಟಿಯಿಂದಲೂ ಉತ್ಕೃಷ್ಟವಲ್ಲ ಎಂದು ಸಿದ್ಧಪಡಿಸಿರುವುದು ಪ್ರಮುಖ ಸಂಶೋಧನೆಯಾಗಿದೆ. ಈ ವಿಧವಾದ ಸಂಶೋಧನೆಗಳು ಶೂನ್ಯದಿಂದ ಆರಂಭವಾದದ್ದಲ್ಲ ವಿಜಯನಗರದ ಸಾಮ್ರಾಜ್ಯ ಚಾಲುಕ್ಯರಿಂದ, ಚಾಲುಕ್ಯರು ಗುಪ್ತರಿಂದ, ಗುಪ್ತರು ಶಾತವಾಹನರಿಂದ, ಶಾತವಾಹನರು ಮೌರ್ಯರಿಂದ, ಮೌರ್ಯರು ನಂದರಿಂದ, ಇದು ಸಿಂಧು ಸರಸ್ವತಿ, ವೇದ ಪರಂಪರೆಯವರೆಗೂ ಕೊಂಡು ಹೋಗುತ್ತದೆ. ಈ ಅಖಂಡ ಪರಂಪರೆಯ ರಚನಾತ್ಮಕವಾದ, ಶ್ಲಾಘ್ಯವಾದ, ಪ್ರಶಂಸನೀಯವಾದ ಮುಂದುವರಿಕೆ, ವಿಸ್ತರಣ(expansion) ಮತ್ತು ಉಪಬ್ರಹ್ಮಣ(enrichment)ದ ಮೂಲಕ ತಿಳಿಯುವುದೇನೆಂದರೆ, ಭಾರತೀಯರು ಯುದ್ಧತಂತ್ರಗಳಲ್ಲಿ ಹಿಂದೆ ಇರಲಿಲ್ಲ ಸಾಕಷ್ಟು ತಯಾರಾಗಿಯೇ ಇರುತ್ತಿದ್ದರು, ಈ ತರಹದ ಯುದ್ಧ ಸಾಮಗ್ರಿಗಳನ್ನ ಅವಣಿಸಿಕೊಳ್ಳುವುದರಲ್ಲಿ ನಾವು ಯುರೋಪಿಯನ್ನರಿಗೆ ಏನು ಕಡಿಮೆ ಇರಲಿಲ್ಲ ಎಂದು ತೋರುತ್ತದೆ ಎಂದು ಹೇಳಿದರು. ಆಕಾಶ ಬಾಣ ಉತ್ತಮವಾದ ಸಂಶೋಧನೆ, ಎಲ್ಲರೂ ಓದಬೇಕಾದ ಪುಸ್ತಕ, ಮುಂದಿನ ಆವೃತ್ತಿಗಳು ಹೊರಬರಲಿ, ಅವುಗಳಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳು ಇರಲಿ ಎಂದು ಆಶಿಸಿದರು.

ಪುಸ್ತಕದ ಕರ್ತೃ, ಸಂಶೋಧಕ ಮತ್ತು ಲೇಖಕ ಶ್ರೀ ಅಜಯ್ ಕುಮಾರ್ ಶರ್ಮ ಅವರು ಮಾತನಾಡಿ ತಮ್ಮ ಸುಧೀರ್ಘವಾದ ಸಂಶೋಧನೆಯ ಬಗ್ಗೆ ತಿಳಿಸಿದರು. ಉದಾಹರಣೆಗೆ ಈಗಿನ ಉಪ್ಪಾರ ಸಮುದಾಯದವರು ಮದ್ದು ತಯಾರಿಕೆಗೆ ಬೇಕಾದ ಸಾಲ್ಟ್ ಪೆಟ್ರಾ ತಯಾರು ಮಾಡುವವರಾಗಿದ್ದು, ನಾವು ಸಾಮಾನ್ಯವಾಗಿ ತಿಳಿದುಕೊಂಡಿರುವ ಅಡಿಗೆ ಉಪ್ಪನ್ನು ತಯಾರು ಮಾಡುವವರಲ್ಲ ಎಂದು ಹೇಳಿದರು. ಬ್ರಿಟಿಷ್ ದಾಖಲೆಗಳೇ ಹೇಳುವ ಪ್ರಕಾರ Congreve rocket ಬ್ರಿಟಿಷ್ ತಂತ್ರಜ್ಞಾನದಿಂದ ಆವಿಷ್ಕಾರಗೊಂಡಿದ್ದಲ್ಲ, ಬದಲಾಗಿ ಭಾರತದಿಂದ ಪಡೆದುಕೊಂಡ ಬಾಣಗಳ ತಂತ್ರಜ್ಞಾನದಿಂದಲೇ ತಯಾರಾದವು ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಮಿಥಿಕ್ ಸೊಸೈಟಿಯ ಖಚಾಂಚಿಗಳಾದ ಶ್ರೀ ಕೆ ಹಿರಣ್ಣಯ್ಯನವರು, ಭಾರತೀಯ ಇತಿಹಾಸ ಸಂಕಲ ಸಮಿತಿ ಕರ್ನಾಟಕದ ಗೌರವ ಅಧ್ಯಕ್ಷರಾದ ಡಾ.ಎನ್ ಸಂಜೀವರೆಡ್ಡಿ ಮತ್ತು ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

31/01/2025
We are proud to announce the release of the book “Akash Bana The History of Metal Case Rockets of India” authored by Shr...
23/11/2024

We are proud to announce the release of the book “Akash Bana The History of Metal Case Rockets of India” authored by Shri Ajay Kumar Sharma, published by Bharatiya Itihasa Sankalan Samiti Karnataka

This remarkable book was unveiled at the prestigious National Conference held at Kushinagar, Uttar Pradesh, organized by the Indian Council of Historical Research (ICHR) in association with Jagadish Educational Trust and Bharatheeya Itihasa Sankalana Yojana.

A great contribution to preserving and celebrating India’s rich historical legacy in science and technology!

Address

Yadava Smrithi
Bangalore
560020

Alerts

Be the first to know and let us send you an email when Bharatiya Itihas Sankalan Samiti Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Bharatiya Itihas Sankalan Samiti Karnataka:

Share

Category