Bharatiya Itihas Sankalan Samiti Karnataka

Bharatiya Itihas Sankalan Samiti Karnataka Bharatiya Itihas Sankalan Samiti an organization to rewrite True Indian History.

Bharateeya Itihasa Sankalana Samiti was founded by the revered Moropant Pingle in 1973, with a central objective of creating a historiography for India through native, Indian endeavor so as to counteract the numerous conscious and unconscious prejudices, misinterpretations, deprecations as well as under valuations which Western – especially the British-historians had imbibed into History of India.

ಅಜಯ್ ಕುಮಾರ್ ಶಮಾ೯ ಇವರಿಂದ ವಿಶೇಷ ಉಪನ್ಯಾಸ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಬೈಂದೂರು ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲ...
06/03/2025

ಅಜಯ್ ಕುಮಾರ್ ಶಮಾ೯ ಇವರಿಂದ ವಿಶೇಷ ಉಪನ್ಯಾಸ

ಸಕಾ೯ರಿ ಪ್ರಥಮ ದಜೆ೯ ಕಾಲೇಜು ಬೈಂದೂರು ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲೆ ಹಾಗೂ ಇತಿಹಾಸ ವಿಭಾಗ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಬೈಂದೂರು ಇವರ ವತಿಯಿಂದ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಬೈಂದೂರು ಕಾಲೇಜು ಸಭಾಂಗಣ *ಇತಿಹಾಸ ದಪ೯ಣ* ವಿಶೇಷ ಉಪನ್ಯಾಸನ ಕಾಯ೯ಕ್ರಮ ಆಕಾಶ ಬಾಣ ಭಾರತದ ಲೋಹದ ಕೊಳವೆಯ ರಾಕೇಟ್ ನ ಇತಿಹಾಸ ದ ವಿಚಾರ ರ ಬಗ್ಗೆ ಶ್ರೀಯುತ ಅಜಯ್ ಕುಮಾರ್ ಶಮಾ೯ ಸ್ವತಂತ್ರ ಸಂಶೋಧಕರು ವಿದ್ಯಾರ್ಥಿಗಳಿಗೆ ವಿಚಾರ ಹಂಚಿಕೊಂಡರು.

ಕಾಯ೯ಕ್ರಮದ ಉದ್ಘಾಟನೆಯನ್ನು ಸ್ವಾತಂತ್ರ್ಯ ಹೋರಾಟಗಾರರಾಗಿರುವ ಬಾಡಾ ಮಂಜುನಾಥ್ ಜೋಷಿ ಮೊಮ್ಮಗಳು ಶ್ರೀ ಜಯದೇವಿ ಭಟ್ ಉದ್ಘಾಟಿಸಿ ಶುಭಾಶಯ ಕೋರಿದರು.

ವೇದಿಕೆ ಯಲ್ಲಿ ಶ್ರೀಮತಿ ಚಿತ್ರಾ ಪಡಿಯಾರ್,ಶ್ರೀಮತಿ ಮಮತ,ಪ್ರದೀಪ ಕುಮಾರ್ ಬಸ್ರೂರು,ಕುಮಾರಿ ಕವಿತಾ ಆಚಾಯ೯ ಮುದೂರು ವಿಚಾರ ಹಂಚಿಕೊಂಡರು

ಕಾಯ೯ಕ್ರಮ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರು ಶ್ರೀ ನಾಗರಾಜ್ ಶೆಟ್ಟಿ ವಹಿಸಿದ್ದರು

ಕಾಯ೯ಕ್ರಮ ದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ವಗ೯ ಉಪಸ್ಥಿತರಿದ್ದರು

ಕಾಯ೯ಕ್ರಮ ನಿರೂಪಣೆ ಕಾಲೇಜಿನ ತೃತೀಯ ಬಿ.ಎ ಕುಮಾರಿ ಮೇಘ,ಪ್ರಾಥ೯ನೆ ಕುಮಾರಿ ಹಷಿ೯ತ,ನಡೆಸಿಕೊಟ್ಟರು . ಪ್ರಾಸ್ತಾವಿಕ ನುಡಿಯನ್ನು ಕಾಲೇಜಿನ ಉಪನ್ಯಾಸಕರು ಶ್ರೀ ನವೀನ್ ಹೆಚ್.ಜೆ. ಹಾಗೂ ಧನ್ಯವಾದ ವನ್ನು ಉಪನ್ಯಾಸಕರಾದ ವಿಘ್ನೇಶ್ ವಂದನಾಪ೯ಣೆಯನ್ನು ಅಶ್ವಿನಿ ತೃತೀಯ ಬಿ ಎ. ನಡೆಸಿದರು

ನಮಸ್ಕಾರ,ಕುಂದಾಪುರ, 01 ಮಾರ್ಚ್ 2025, ಶನಿವಾರದಂದು ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ, ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ...
06/03/2025

ನಮಸ್ಕಾರ,
ಕುಂದಾಪುರ, 01 ಮಾರ್ಚ್ 2025, ಶನಿವಾರದಂದು ಭಾರತೀಯ ಇತಿಹಾಸ ಸಂಕಲನ ಸಮಿತಿ, ಕರ್ನಾಟಕ, ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮತ್ತು ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅಧ್ಯಯನ ಕೇಂದ್ರ, ಬಸ್ರೂರು ಇವರ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಮಹಾರಾಷ್ಟ್ರದ ಇತಿಹಾಸ ತಜ್ಞ, ವಾಗ್ಮಿ, ಪ್ರಾಧ್ಯಾಪಕ ಶ್ರೀ ರವಿರಾಜ್ ಪರಾಡ್ಕರ್ ಅವರು *ಛತ್ರಪತಿ ಶಿವಾಜಿ ಮತ್ತು ಕರ್ನಾಟದ ನಂಟು* ಕುರಿತಾದ ವಿಶೇಷ ಉಪನ್ಯಾಸ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು, 25 ಅಧ್ಯಾಪಕರುಗಳು ಮತ್ತು ಕಾಲೇಜು ಸಿಬ್ಬಂದಿವರ್ಗ ಬಾಗವಹಿಸಿದ್ದರು. ಶ್ರೀ ರವಿರಾಜ್ ಪರಾಡ್ಕರ್ ಅವರು ಉಪನ್ಯಾಸಕ್ಕೆ ಸಂಬಂಧಿಸಿದ ತಥ್ಯಗಳನ್ನು ದಾಖಲೆಗಳ ಸಹಿತ ಪ್ರಸ್ತುತಪಡಿಸಿದರು.

ಉಪನ್ಯಾಸದ ಮುಖ್ಯಾಂಶಗಳು:
1. ಶಿವಾಜಿಯ ಪ್ರಾಥಮಿಕ ಶಿಕ್ಷಣ 1637 ರಿಂದ 1642ರವರೆಗೂ ಕರ್ನಾಟಕದ ಬೆಂಗಳೂರಿನಲ್ಲಿ ಆಯಿತು. ತಂದೆ ಶಹಾಜಿಯು ಶಿವಾಜಿಯ ಶಿಕ್ಷಣಕ್ಕೆ ವಿಶೇಷವಾಗಿ ನೇಮಿಸಿದ್ದ ಉತ್ತಮ ಸಂಸ್ಕೃತ, ಕನ್ನಡ, ಗಣಿತ, ವೇದ-ಪುರಾಣ ಇತರೆ ವಿದ್ವಾಂಸರುಗಳು ಪ್ರಾಥಮಿಕ ಶಿಕ್ಷಣವನ್ನು ಶಿವಾಜಿಗೆ ನೀಡಿದ್ದರು. ಇದೇ ಶಿಕ್ಷಣ ಶಿವಾಜಿಯ ಜೀವನದಲ್ಲಿ ಸ್ವರಾಜ್ಯ ಸ್ಥಾಪನೆಯ ಕಾರ್ಯಕ್ಕೆ ಪ್ರಮುಖ ಪಾತ್ರವಹಿಸಿತು. ಶಹಾಜಿ ಕರ್ನಾಟಕದಿಂದಲೇ ಶಿವಾಜಿಗಾಗಿ ಹಲವು ಆಡಳಿತ ತಂತ್ರಜ್ಞರನ್ನು ಪುಣೇರಿಗೆ ಕಳಿಸಿಕೊಟ್ಟಿದ್ದ. ಅವರೆಲ್ಲರೂ ಶಿವಾಜಿಯ ಆಡಳಿತದಲ್ಲಿ ತಮ್ಮ ಸೇವೆ ಸಲ್ಲಿಸಿದ್ದರು. 16ನೇ ವಯಸ್ಸಿನಲ್ಲಿಯೇ ತಾನು ಕಳುಹಿಸಿದ ಮೊದಲ ಪತ್ರದಲ್ಲಿ ಬಾಲ್ಯ ಶಿಕ್ಷಣದ ಪರಿಣಾಮ ಕಾಣಬಹುದು.
2. ಶಿವಾಜಿಯ ಸ್ವರಾಜ್ಯದ ಕಲ್ಪನಗೆ ಕರ್ನಾಟಕದ ವಿಜಯನಗರವೇ ಪ್ರಮುಖ ಪ್ರೇರಣೆ. ಆಕ್ರಮಣಕಾರಿ ಮತಾಂಧರು ಎಂದೂ ಈ ಭೂಮಿಯನ್ನು ಒಪ್ಪುವುದಿಲ್ಲ, ಇಲ್ಲಿನ ಶಾಸನ ಎನಿದ್ದರೂ ಸ್ಥಳೀಯರಿಂದಲೇ ಆಗಬೇಕು ಎಂದು ತಿಳಿಸಿ ಪ್ರಾದೇಶಿಕತೆಯು ರಾಷ್ಟ್ರೀಯತೆಗೆ ಪೂರಕ ಎಂದು ತೋರಿಸಿದ.
3. ಕರ್ನಾಟಕದ ರಾಣಿ ಮಲ್ಲಮ್ಮನ ಜೊತೆ ಶಿವಾಜಿ ಸೈನ್ಯದ ಸೇನಾಪತಿ ಅನುಚಿತವಾಗಿ ವರ್ತಿಸಿದ್ದನ್ನು ಪರಿಶೀಲಿಸಿದ ಶಿವಾಜಿ ಅದಕ್ಕೆ ಶಿಕ್ಷೆಯಾಗಿ ಸೇನಾಪತಿಯ ಕಣ್ಣನ್ನು ಕೀಳಿಸಿದ್ದ. ಇದೇ ಕಾರಣಕ್ಕಾಗಿ ರಾಣಿ ಮಲ್ಲಮ್ಮ ಶಿವಾಜಿಯ ಸಮ್ಮಾನಕ್ಕಾಗಿ ಎರಡು ಪ್ರತಿಮೆಗಳನ್ನು ಸ್ಥಾಪಿಸಿದ್ದಳು. ಮಲ್ಲಮ್ಮ ಮತ್ತು ಶಿವಾಜಿ ಇಬ್ಬರಲ್ಲೂ ಪರಸ್ಪರ ಅಣ್ಣ-ತಂಗಿ ಭಾವನೆ ಇತ್ತು.
4. ಶಿವಾಜಿಯು ಬೆಂಗಳೂರಿನಲ್ಲಿದ್ದ ತನ್ನ ಸೋದರ ವೆಂಕೋಜಿಗೆ ಬರೆದ ಎರಡು ಪತ್ರಗಳಲ್ಲಿ ಹೇಗೆ ತಾನು ಹಿಂದವೀ ಸ್ವರಾಜ್ಯಕಾಗಿ ಸಣ್ಣಸಣ್ಣ ರಾಜ್ಯಗಳನ್ನು ಒಗ್ಗೂಡಿಸುತ್ತಿದ್ದೇನೆಯೋ ಹಾಗೆಯೇ ನೀನೂ ಕೂಡ ಕರ್ನಾಟಕ, ತಮಿಳುನಾಡು ಆಂಧ್ರದಲ್ಲಿ ಎಲ್ಲಾ ಸಂಸ್ಥಾನಗಳನ್ನು ಒಗ್ಗೂಡಿಸಬೇಕು, ಅದಕ್ಕಾಗಿಯೆ ತನ್ನ ದಕ್ಷಿಣ ದಿಗ್ವಿಜಯ ಎಂದು ಸ್ಪಷ್ಟಪಡಿಸಿದ್ದ. ಇದಕ್ಕಾಗಿ ಕರ್ನಾಟಕದವರೇ ಆದ ದಕ್ಷಿಣ ಭಾಷೆಗಳ ಹಿಡಿತವಿದ್ದ ರಘುನಾಥ ನಾರಾಯಣ ಹನುಮಂತೆ ಅವರನ್ನು ಮುಖ್ಯ ಅಮಾತ್ಯರಾಗಿ ನೇಮಿಸಿದ್ದ.
5. ಶಿವಾಜಿಯ ಬಸ್ರೂರು ವಿಮೋಚನೆ ನೌಕಾಯಾತ್ರೆ, ಬಸ್ರೂರಿನ ಸಂಪತ್ತನ್ನು ದೋಚುವುದಕ್ಕಲ್ಲ, ಬದಲಾಗಿ ವಿದೇಶಿ ಪೋರ್ಚುಗೀಸರಿಗೆ ಕಪ್ಪಗಳನ್ನು ನೀಡಿ ಅವರನ್ನು ಆಂತರಿಕ ರಾಜಕೀಯದಲ್ಲಿ ಸೇರಿಸಿದ್ದ ಶಿವಪ್ಪನಾಯಕನ ಮಗ ಸೋಮಶೇಖರ ನಾಯಕನಿಗೆ ಬುದ್ದಿ ಕಲಿಸಿ ಬಸ್ರೂರನ್ನು ಪೋರ್ಚುಗೀಸರಿಂದ ಮುಕ್ತಿಗೊಳಿಸುವುದಕ್ಕಾಗಿ. ಬಸ್ರೂರು ಸಂಪದ್ಭರಿತ ದೊಡ್ಡ ಬಂದರು ಅಥವಾ ವ್ಯಾಪಾರಕೇಂದ್ರ ಆಗಿರಲಿಲ್ಲ, ಅಲ್ಲಿ ದೋಚುವುದಕ್ಕೆ ಅಂತಹ ಸಂಪತ್ತು ಇರಲಿಲ್ಲ. ಇತಿಹಾಸಕಾರರು ಇದನ್ನು ತಪ್ಪಾಗಿ ಅರ್ಥೈಸಿ ಶಿವಾಜಿಯನ್ನು ಲೂಟಿಕೋರ ಎಂದು ಅಪಕೀರ್ತಿಗೊಳಿಸಿದ್ದಾರೆ.
6. ದೇಶದ ಎಲ್ಲಾ ಸಂತರು ಮತ್ತು ತತ್ವಜ್ಞಾನಿಗಳು ಶಿವಾಜಿಯ ಮಹತ್ವವನ್ನು ಉಲ್ಲೇಖಿಸಿರುವುದು ಶಿವಾಜಿ ಒಬ್ಬ ಮರಾಠ ಅಲ್ಲ, ಅವನು ರಾಷ್ಟ್ರಪುರುಷ ಎಂದು ಸ್ಪಷ್ಟಪಡಿಸುತ್ತದೆ.
ಚಿಂತಕ ಹಾಗೂ ಲೇಖಕ ಶ್ರೀ ದೇವು ಹನೆಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ಇತಿಹಾಸ ಸಂಕಲನದ ಸಮಿತಿ ಕಿತ್ತೂರು ಕರ್ನಾಟಕದ ಸಂಚಾಲಕ ಡಾ.ಬಸವರಾಜ ಎನ್. ಅಕ್ಕಿ ಅವರು ವಿದ್ಯಾರ್ಥಿಗಳು ಇತಿಹಾಸ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂದು ಜೀವ ರೂಪಿಸಿಕೊಳ್ಳಿ ಎಂಬ ಕಿವಿಮಾತು ಹೇಳಿದರು. ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ- ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಇತಿಹಾಸ ಸಂಕಲನ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಪ್ರದೀಪ್ ಕುಮಾರ್ ಬಸ್ರೂರು, ಅಭಿಜ್ಞಾ ಉಪಾಧ್ಯಾಯ ಉಪಸ್ಥಿತರಿದ್ದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ. ಸ್ವಾಗತಿಸಿ, ಇಂಗ್ಲಿಷ್ ಪ್ರಾಧ್ಯಾಪಕರಾದ ರವೀನಾ ಸಿ. ಪೂಜಾರಿ, ಸ್ವಾತಿ ರಾವ್ ಅತಿಥಿಗಳನ್ನು ಪರಿಚಯಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದೀಪಾ ವಂದಿಸಿ, ಇಂಗ್ಲಿಷ್ ಪ್ರಾಧ್ಯಾಪಕರಾದ ಸ್ಟಾಲಿನ್ ಡಿಸೋಜ ನಿರೂಪಿಸಿದರು.

ಧನ್ಯವಾದಗಳು

ದಿನಾಂಕ 9 ಫೆಬ್ರುವರಿ 2025 ರಂದು ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಮತ್ತು ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಸಂಶೋಧಕ ಅಜಯ್ ಕುಮಾರ ಶರ್ಮ ರಚಿ...
09/02/2025

ದಿನಾಂಕ 9 ಫೆಬ್ರುವರಿ 2025 ರಂದು ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಮತ್ತು ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಸಂಶೋಧಕ ಅಜಯ್ ಕುಮಾರ ಶರ್ಮ ರಚಿತ ಆಕಾಶಬಾಣ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಸೊಸೈಟಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ವಿಮರ್ಶೆಯನ್ನು ಖ್ಯಾತ ವಿದ್ವಾಂಸರಾದ ಡಾ. ಶತಾವಧಾನಿ ರಾ ಗಣೇಶ್ ಅವರು ಮಾಡಿದರು.

ಇಂತಹ ಸಂಶೋಧನಾತ್ಮಕ ಗ್ರಂಥಗಳು ಹೆಚ್ಚು ಪ್ರಕಟ ಆಗಬೇಕು ಮತ್ತು ಹೆಚ್ಚು ಜನರಿಗೆ ಮುಟ್ಟುವ ಕೆಲಸ ಆಗಬೇಕು ಎಂದು ಹೇಳುತ್ತಾ ತಮ್ಮ ವಿಮರ್ಶೆಯನ್ನು ಆರಂಭಿಸಿದರು. ಭಾರತೀಯ ಸಾಂಪ್ರದಾಯಿಕ ಕಲೆಗಳಲ್ಲಿ ಇರುವ gap between theory and practice should be bridged through these kind of researches. ಇಲ್ಲಿ gap ಇದೆಯೇ ಹೊರತು ಪರಸ್ಪರ ವಿರೋಧವಿಲ್ಲ. ಇಸ್ಲಾಂ ದಾಳಿಯಲ್ಲಿ ನಮ್ಮ ಅಸ್ತಿತ್ವ ಪರಂಪರೆ ಮೌಲ್ಯಗಳನ್ನು, ಸಂಸ್ಕೃತಿಗಳನ್ನು ನಾಶ ಮಾಡುವುದಕ್ಕೆ ಹೆಚ್ಚು ಉತ್ಸಾಹವಿದ್ದರು ಅವರು ಭಾರತೀಯರ ಸಾಧನೆಗಳನ್ನು ತನ್ನ ಹೆಸರಿನಲ್ಲಿ ಪ್ರಕಟ ಮಾಡಿಕೊಳ್ಳುವ ಗೋಜಿಗೆ ಹೆಚ್ಚು ಹೋಗಲಿಲ್ಲ. ಆದರೆ ಕಳೆದ 150-200 ವರ್ಷಗಳಲ್ಲಿ ಕ್ರೈಸ್ತ ಮಿಷನರಿಗಳು, ಬ್ರಿಟಿಷರು, ಫ್ರೆಂಚರು, ಡಚ್ಚರು, ಪೋರ್ಚುಗೀಸರುಗಳು ಇಲ್ಲಿನದನ್ನು ತಮ್ಮದಾಗಿ ಮಾಡಿಕೊಂಡು ಪ್ರಕಟಿಸಿಕೊಳ್ಳುವ ಹೆಚ್ಚು ಕೆಲಸ ಮಾಡಿದ್ದಾರೆ. ವಿಜಯನಗರದ ಪತನ ಆದಮೇಲೆ ಸ್ವತಂತ್ರಗೊಂಡ ಸಂಸ್ಥಾನಗಳು ವಿಜಯನಗರದ ಅರಸೊತ್ತಿಗೆ ಇಲ್ಲದಿದ್ದರೂ ಆ ಜ್ಞಾನ -ವಿಜ್ಞಾನ-ಸಂಸ್ಕೃತಿ ಪರಂಪರೆಯನ್ನು ಎಲ್ಲಾ ಕಡೆ ಮುಂದುವರೆಸಿಕೊಂಡು ಬಂದವು, ಹಾಗೆಯೇ ಈ ಪರಂಪರೆಯನ್ನು ಅಖಂಡ ಭಾರತದಲ್ಲಿ ಮುಂದುವರೆಸಿರುವುದು ಇತಿಹಾಸದಲ್ಲಿ ಕಾಣುತ್ತೇವೆ. ಒಂದು ಸಾಮ್ರಾಜ್ಯದ ಅವಧಿ ಮುಗಿದರೂ, ಈ ರಾಷ್ಟ್ರದ ಚೈತನ್ಯ ಮುಂದಿನ ಸಾಮ್ರಾಜ್ಯದಲ್ಲಿ ಅಕ್ಷತವಾಗಿ ಮುಂದುವರಿಯದಿರುವುದು ನಮ್ಮ ನಿರಂತರತೆಗೆ ಸಾಕ್ಷ್ಯವಾಗಿದೆ ಎಂದು ಹೇಳಿದರು.
ಪುಸ್ತಕದಲ್ಲಿ ಬರುವ ಹಲವು ರೀತಿಯ ಬಾಣಗಳನ್ನು (ರಾಕೆಟ್) ವಿಮರ್ಶಿಸುತ್ತಾ ಹೈದರ್ ಅಲಿಗಿಂತ ಮುಂಚೆ ಇದ್ದ ಕಂಠೀರವ ನರಸರಾಜ ಒಡೆಯರ್ ಇವುಗಳನ್ನು ಬಳಸಿರುವುದನ್ನು, ಹೆಚ್ಚಾಗಿ ಮರಾಠರು ತಮ್ಮ ಸಾಮ್ರಾಜ್ಯದ ಆದಿ ಅಂತ್ಯದವರೆಗೂ ಬಳಸಿದರವರನ್ನು, ಮೊಘಲರು, ರೋಹಿಲ್ಲಾಗಳು, ಅವಧ್ ನವಾಬರು ಕೂಡ ಈ ಬಾಣಗಳನ್ನು ಬಳಸಿರುವುದನ್ನು ಗಮನಕ್ಕೆ ತಂದಿರುವ ಲೇಖಕರು ಪೂರ್ವಗ್ರಹದಿಂದ ಯಾವುದನ್ನು ಗ್ರಹಿಸಿಲ್ಲ ಸತ್ಯಕ್ಕೆ ನಡೆದುಕೊಂಡಿದ್ದಾರೆ ಎಂದು ಪ್ರಶಂಸಿದರು.

ಲೇಖಕರು ತಮ್ಮ ಸಂಶೋಧನೆಗಳಿಂದ ಸಿದ್ಧಪಡಿಸಿರುವ ಮರಾಠರ ರಾಕೆಟ್ ಗಳು ಉತ್ತಮ ಗುಣಮಟ್ಟ ಮತ್ತು ಪರಿಣಾಮಕಾರಿಯಾದವುಗಳು, ಟಿಪ್ಪುಸುಲ್ತಾನ ಕಾಲದ ರಾಕೆಟ್ ಗಳು ಕಾಲ ದೃಷ್ಟಿಯಿಂದಲೂ ಪ್ರಾಚೀನವಲ್ಲ ಮತ್ತು ಗುಣಮಟ್ಟದ ದೃಷ್ಟಿಯಿಂದಲೂ ಉತ್ಕೃಷ್ಟವಲ್ಲ ಎಂದು ಸಿದ್ಧಪಡಿಸಿರುವುದು ಪ್ರಮುಖ ಸಂಶೋಧನೆಯಾಗಿದೆ. ಈ ವಿಧವಾದ ಸಂಶೋಧನೆಗಳು ಶೂನ್ಯದಿಂದ ಆರಂಭವಾದದ್ದಲ್ಲ ವಿಜಯನಗರದ ಸಾಮ್ರಾಜ್ಯ ಚಾಲುಕ್ಯರಿಂದ, ಚಾಲುಕ್ಯರು ಗುಪ್ತರಿಂದ, ಗುಪ್ತರು ಶಾತವಾಹನರಿಂದ, ಶಾತವಾಹನರು ಮೌರ್ಯರಿಂದ, ಮೌರ್ಯರು ನಂದರಿಂದ, ಇದು ಸಿಂಧು ಸರಸ್ವತಿ, ವೇದ ಪರಂಪರೆಯವರೆಗೂ ಕೊಂಡು ಹೋಗುತ್ತದೆ. ಈ ಅಖಂಡ ಪರಂಪರೆಯ ರಚನಾತ್ಮಕವಾದ, ಶ್ಲಾಘ್ಯವಾದ, ಪ್ರಶಂಸನೀಯವಾದ ಮುಂದುವರಿಕೆ, ವಿಸ್ತರಣ(expansion) ಮತ್ತು ಉಪಬ್ರಹ್ಮಣ(enrichment)ದ ಮೂಲಕ ತಿಳಿಯುವುದೇನೆಂದರೆ, ಭಾರತೀಯರು ಯುದ್ಧತಂತ್ರಗಳಲ್ಲಿ ಹಿಂದೆ ಇರಲಿಲ್ಲ ಸಾಕಷ್ಟು ತಯಾರಾಗಿಯೇ ಇರುತ್ತಿದ್ದರು, ಈ ತರಹದ ಯುದ್ಧ ಸಾಮಗ್ರಿಗಳನ್ನ ಅವಣಿಸಿಕೊಳ್ಳುವುದರಲ್ಲಿ ನಾವು ಯುರೋಪಿಯನ್ನರಿಗೆ ಏನು ಕಡಿಮೆ ಇರಲಿಲ್ಲ ಎಂದು ತೋರುತ್ತದೆ ಎಂದು ಹೇಳಿದರು. ಆಕಾಶ ಬಾಣ ಉತ್ತಮವಾದ ಸಂಶೋಧನೆ, ಎಲ್ಲರೂ ಓದಬೇಕಾದ ಪುಸ್ತಕ, ಮುಂದಿನ ಆವೃತ್ತಿಗಳು ಹೊರಬರಲಿ, ಅವುಗಳಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳು ಇರಲಿ ಎಂದು ಆಶಿಸಿದರು.

ಪುಸ್ತಕದ ಕರ್ತೃ, ಸಂಶೋಧಕ ಮತ್ತು ಲೇಖಕ ಶ್ರೀ ಅಜಯ್ ಕುಮಾರ್ ಶರ್ಮ ಅವರು ಮಾತನಾಡಿ ತಮ್ಮ ಸುಧೀರ್ಘವಾದ ಸಂಶೋಧನೆಯ ಬಗ್ಗೆ ತಿಳಿಸಿದರು. ಉದಾಹರಣೆಗೆ ಈಗಿನ ಉಪ್ಪಾರ ಸಮುದಾಯದವರು ಮದ್ದು ತಯಾರಿಕೆಗೆ ಬೇಕಾದ ಸಾಲ್ಟ್ ಪೆಟ್ರಾ ತಯಾರು ಮಾಡುವವರಾಗಿದ್ದು, ನಾವು ಸಾಮಾನ್ಯವಾಗಿ ತಿಳಿದುಕೊಂಡಿರುವ ಅಡಿಗೆ ಉಪ್ಪನ್ನು ತಯಾರು ಮಾಡುವವರಲ್ಲ ಎಂದು ಹೇಳಿದರು. ಬ್ರಿಟಿಷ್ ದಾಖಲೆಗಳೇ ಹೇಳುವ ಪ್ರಕಾರ Congreve rocket ಬ್ರಿಟಿಷ್ ತಂತ್ರಜ್ಞಾನದಿಂದ ಆವಿಷ್ಕಾರಗೊಂಡಿದ್ದಲ್ಲ, ಬದಲಾಗಿ ಭಾರತದಿಂದ ಪಡೆದುಕೊಂಡ ಬಾಣಗಳ ತಂತ್ರಜ್ಞಾನದಿಂದಲೇ ತಯಾರಾದವು ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಮಿಥಿಕ್ ಸೊಸೈಟಿಯ ಖಚಾಂಚಿಗಳಾದ ಶ್ರೀ ಕೆ ಹಿರಣ್ಣಯ್ಯನವರು, ಭಾರತೀಯ ಇತಿಹಾಸ ಸಂಕಲ ಸಮಿತಿ ಕರ್ನಾಟಕದ ಗೌರವ ಅಧ್ಯಕ್ಷರಾದ ಡಾ.ಎನ್ ಸಂಜೀವರೆಡ್ಡಿ ಮತ್ತು ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

31/01/2025
We are proud to announce the release of the book “Akash Bana The History of Metal Case Rockets of India” authored by Shr...
23/11/2024

We are proud to announce the release of the book “Akash Bana The History of Metal Case Rockets of India” authored by Shri Ajay Kumar Sharma, published by Bharatiya Itihasa Sankalan Samiti Karnataka

This remarkable book was unveiled at the prestigious National Conference held at Kushinagar, Uttar Pradesh, organized by the Indian Council of Historical Research (ICHR) in association with Jagadish Educational Trust and Bharatheeya Itihasa Sankalana Yojana.

A great contribution to preserving and celebrating India’s rich historical legacy in science and technology!

18/10/2024

ನಮಸ್ತೇ,

*ಶ್ರೀ ಕೃಷ್ಣದೇವರಾಯರು ಅಸ್ತಂಗತರಾದ ಅಧಿಕೃತ ದಾಖಲೆ* ನೀಡುವ ಶಿಲಾಶಾಸನ ತುಮಕೂರಿನ ಹೊನ್ನೇನಹಳ್ಳಿಯಲ್ಲಿ ದೊರಕಿದೆ. ತುಮಕೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ಅಧ್ಯಯನ ವಿಭಾಗ, ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದಲ್ಲಿ ಕೃಷ್ಣದೇವರಾಯರ 496ನೆಯ ಪುಣ್ಯಸ್ಮರಣೆ, ಮತ್ತು ಅದರ ಶಾಸನ ಪಾಠ-ಸಾರಾಂಶವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮವನ್ನು ಶಾನಸ ದೊರೆತ ಸ್ಥಳವಾದ ತುಮಕೂರಿನ ಹೊನ್ನೇನಹಳ್ಳಿಯ ಶ್ರೀ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದಿನಾಂಕ 17-10-2024 ರಂದು (17-10-1529 ಶ್ರೀ ಕೃಷ್ಣದೇವರಾಯರು ಅಸ್ತಂಗತರಾದ ತಿಥಿ) ಏರ್ಪಡಿಸಲಾಗಿತ್ತು. ಈ ತರಹದ ಅಪರೂಪದ ಶಾಸನ ಇದೇ ಮೊದಲು. ಇಲ್ಲಿಯವರೆಗೂ ಶ್ರೀ ಕೃಷ್ಣದೇವರಾಯರು ಅಸ್ತಂಗತರಾದ ದಾಖಲೆ ಎಲ್ಲೂ ದೊರೆತಿರಲಿಲ್ಲ.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು (ಫೋನ್ ಮೂಲಕ) ಮತ್ತು ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಗಳು ಆಶೀರ್ವಚನ ಮಾಡಿದರು. ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ. ಬಾಲಮುಕುಂದ ಪಾಂಡೇಯ ಅವರು ಶಾಸನ ಪಾಠವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪ್ರೊ. ಎಂ ಕೊಟ್ರೇಶ್, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ ವೆಂಕಟೇಶ್ವರಲು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ ವಿ ಪರಶಿವಮೂರ್ತಿ ಮತ್ತು ಅವರುಗಳು ಕ್ರಮವಾಗಿ ಶಾಸನದ ಪ್ರಾಮುಖ್ಯತೆ, ಭಾರತೀಯ ಜ್ಞಾನಾಧಾರಿತ ಶಿಕ್ಷಣ, ಯುವಜನತೆಯಲ್ಲಿ ಇತಿಹಾಸದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಸ್ಥಳೀಯ ಶಾಸಕ ಶ್ರೀ ಜ್ಯೋತಿಗಣೇಶ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದರು.

ಶಾಸನವನ್ನು ಶೋಧಿಸಿದ ಶ್ರೀ ಕೆ ಧನಪಾಲ್, ಶಾಸನ ಪಾಠದ ಸಾರಾಂಶವನ್ನು ನೀಡಿದ ಶ್ರೀ ಕೆ ಆರ್ ನರಸಿಂಹನ್ ಹಾಗೂ ಶ್ರೀ ಶಶಿಕುಮಾರ ನಾಯಕ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಗೋಷ್ಠಿಗಳಲ್ಲಿ ಖ್ಯಾತ ವಿದ್ವಾಂಸರಾದ ಡಾ. ವಸುಂದರ ಫಿಲಿಯೋಜ ಮತ್ತು ಡಾ. ಕೆ ಜಿ ಗೋಪಾಲಕೃಷ್ಣ ಅವರುಗಳು ಹಂಪಿಯ ಇತಿಹಾಸ ಮತ್ತು ಶ್ರೀಕೃಷ್ಣದೇವರಾಯರ ದಂಡಯಾತ್ರೆಗಳ ಬಗ್ಗೆ ಪ್ರಬಂಧಗಳನ್ನು ಮಂಡಿಸಿದರು.

ಶಾಸನವನ್ನು ಸಂರಕ್ಷಣೆ ಮಾಡಿದ ಸ್ಥಳೀಯ ಮುಖಂಡರಾದ ಎಂ ಪರಮೇಶ್ವರ್ ಅವರನ್ನು ಸನ್ಮಾನಿಸಲಾಯಿತು.

ಒಂದು ದಿನದ ಈ ವಿಚಾರಸಂಕಿರಣದಲ್ಲಿ ಕಾರ್ಯಕ್ರಮದಲ್ಲಿ ಒಟ್ಟು 220 ಪ್ರತಿನಿಧಿಗಳು ಭಾಗವಹಿಸಿದ್ದರು. ಇದರಲ್ಲಿ ಸ್ನಾತಕೋತ್ತರ, ಸ್ನಾತಕ, ಬಿಎಡ್ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಇತಿಹಾಸಕಾರರು ಇದ್ದರು.

ಧನ್ಯವಾದಗಳು

Namaste,An epitaph giving an official record of the demise of Sri Krishnadevaraya is discovered at Honnenahalli in Tumku...
18/10/2024

Namaste,
An epitaph giving an official record of the demise of Sri Krishnadevaraya is discovered at Honnenahalli in Tumkur. Department of PG History and Archeological Studies, Tumkur University with the association of Bharatiya Itihaasa Sankalana Samiti Karnataka and Karnataka Itihasa Academy, a program of 496th Commemoration of Sri Krishnadevaraya and dedication of its Inscription & translation- summary was conducted on 17-10-2024 (17-10-1529 is the actual date of demise of Sri Krishnadevaraya). The program held at the very same location where the stone inscription was recovered i.e., at Sri Gopalakrishna Swamy Temple Premises, Honnenahalli, Tumkur. The inscription is first of its kind and until now there was no record of Sri Krishnadevaraya’s demise was found anywhere.

Sri Siddalinga Swamiji of Siddaganga Mutt (via phone) and Sri Shivasiddeswara Swamiji blessed the program. National Organizing Secretary of Akhila Bharatiya Itihasa Sankalana Yojana, Delhi Dr. Balamukunda Pandey unveiled the inscription to public and spoke on importance of preserving heritage. Prof. M Kotresh, Prof. M Venkateswaralu, Vice Chancellor, Tumkur University and Prof. DV Parashivamurthy, Vice Chancellor of Hampi Kannada University respectively spoke on the importance of inscription, Indian knowledge-based education, importance of imbibing Itihasa in youth. Local MLA Shri Jyoti Ganesh also witnessed the program and wished.

Shri K Dhanapal who discovered the inscription, Shri KR Narasimhan who translated the inscription and Shri Shashikumar Nayak were felicitated.

Renowned historians Dr. Vasundara Filioja and Dr. K G Gopalakrishna presented essays on the history of Hampi and Sri Krishnadevaraya's expeditions.

M Parameshwar, a local leader who preserved the inscription, was also felicitated.

More than 220 people attended including Scholars, Historians, PG students and B Ed students.

Dhanyavada

ನಮಸ್ತೇ,*ಶ್ರೀ ಕೃಷ್ಣದೇವರಾಯರು ಅಸ್ತಂಗತರಾದ ಅಧಿಕೃತ ದಾಖಲೆ* ನೀಡುವ ಶಿಲಾಶಾಸನ ತುಮಕೂರಿನ ಹೊನ್ನೇನಹಳ್ಳಿಯಲ್ಲಿ ದೊರಕಿದೆ.  ತುಮಕೂರು ವಿಶ್ವವಿದ...
18/10/2024

ನಮಸ್ತೇ,

*ಶ್ರೀ ಕೃಷ್ಣದೇವರಾಯರು ಅಸ್ತಂಗತರಾದ ಅಧಿಕೃತ ದಾಖಲೆ* ನೀಡುವ ಶಿಲಾಶಾಸನ ತುಮಕೂರಿನ ಹೊನ್ನೇನಹಳ್ಳಿಯಲ್ಲಿ ದೊರಕಿದೆ. ತುಮಕೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ಅಧ್ಯಯನ ವಿಭಾಗ, ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದಲ್ಲಿ ಕೃಷ್ಣದೇವರಾಯರ 496ನೆಯ ಪುಣ್ಯಸ್ಮರಣೆ, ಮತ್ತು ಅದರ ಶಾಸನ ಪಾಠ-ಸಾರಾಂಶವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮವನ್ನು ಶಾನಸ ದೊರೆತ ಸ್ಥಳವಾದ ತುಮಕೂರಿನ ಹೊನ್ನೇನಹಳ್ಳಿಯ ಶ್ರೀ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದಿನಾಂಕ 17-10-2024 ರಂದು (17-10-1529 ಶ್ರೀ ಕೃಷ್ಣದೇವರಾಯರು ಅಸ್ತಂಗತರಾದ ತಿಥಿ) ಏರ್ಪಡಿಸಲಾಗಿತ್ತು. ಈ ತರಹದ ಅಪರೂಪದ ಶಾಸನ ಇದೇ ಮೊದಲು. ಇಲ್ಲಿಯವರೆಗೂ ಶ್ರೀ ಕೃಷ್ಣದೇವರಾಯರು ಅಸ್ತಂಗತರಾದ ದಾಖಲೆ ಎಲ್ಲೂ ದೊರೆತಿರಲಿಲ್ಲ.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು (ಫೋನ್ ಮೂಲಕ) ಮತ್ತು ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಗಳು ಆಶೀರ್ವಚನ ಮಾಡಿದರು. ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ. ಬಾಲಮುಕುಂದ ಪಾಂಡೇಯ ಅವರು ಶಾಸನ ಪಾಠವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪ್ರೊ. ಎಂ ಕೊಟ್ರೇಶ್, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ ವೆಂಕಟೇಶ್ವರಲು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ ವಿ ಪರಶಿವಮೂರ್ತಿ ಮತ್ತು ಅವರುಗಳು ಕ್ರಮವಾಗಿ ಶಾಸನದ ಪ್ರಾಮುಖ್ಯತೆ, ಭಾರತೀಯ ಜ್ಞಾನಾಧಾರಿತ ಶಿಕ್ಷಣ, ಯುವಜನತೆಯಲ್ಲಿ ಇತಿಹಾಸದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಸ್ಥಳೀಯ ಶಾಸಕ ಶ್ರೀ ಜ್ಯೋತಿಗಣೇಶ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದರು.

ಶಾಸನವನ್ನು ಶೋಧಿಸಿದ ಶ್ರೀ ಕೆ ಧನಪಾಲ್, ಶಾಸನ ಪಾಠದ ಸಾರಾಂಶವನ್ನು ನೀಡಿದ ಶ್ರೀ ಕೆ ಆರ್ ನರಸಿಂಹನ್ ಹಾಗೂ ಶ್ರೀ ಶಶಿಕುಮಾರ ನಾಯಕ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಗೋಷ್ಠಿಗಳಲ್ಲಿ ಖ್ಯಾತ ವಿದ್ವಾಂಸರಾದ ಡಾ. ವಸುಂದರ ಫಿಲಿಯೋಜ ಮತ್ತು ಡಾ. ಕೆ ಜಿ ಗೋಪಾಲಕೃಷ್ಣ ಅವರುಗಳು ಹಂಪಿಯ ಇತಿಹಾಸ ಮತ್ತು ಶ್ರೀಕೃಷ್ಣದೇವರಾಯರ ದಂಡಯಾತ್ರೆಗಳ ಬಗ್ಗೆ ಪ್ರಬಂಧಗಳನ್ನು ಮಂಡಿಸಿದರು.

ಶಾಸನವನ್ನು ಸಂರಕ್ಷಣೆ ಮಾಡಿದ ಸ್ಥಳೀಯ ಮುಖಂಡರಾದ ಎಂ ಪರಮೇಶ್ವರ್ ಅವರನ್ನು ಸನ್ಮಾನಿಸಲಾಯಿತು.

ಒಂದು ದಿನದ ಈ ವಿಚಾರಸಂಕಿರಣದಲ್ಲಿ ಕಾರ್ಯಕ್ರಮದಲ್ಲಿ ಒಟ್ಟು 220 ಪ್ರತಿನಿಧಿಗಳು ಭಾಗವಹಿಸಿದ್ದರು. ಇದರಲ್ಲಿ ಸ್ನಾತBalmukund Pandey Page ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಇತಿಹಾಸಕಾರರು ಇದ್ದರು.

ಧನ್ಯವಾದಗಳು Balmukund Pandey Page

ರಾಜಮಾತಾ ಅಹಲ್ಯಬಾಯಿ ಹೊಳ್ಕರ್ರವರ 300 ನೇ ಜನ್ಮದಿನದ ಅಂಗವಾಗಿ ಭಾರತೀಯ ಇತಿಹಾಸ ಸಂಕಲನ ಸಮಿತಿ, ಬೀದರ್ ಪೂರ್ವಭಾವಿ ಬೈಠಕ್ ಕರೆಯಲಾಗಿತ್ತು. ಬೈಠಕ...
20/09/2024

ರಾಜಮಾತಾ ಅಹಲ್ಯಬಾಯಿ ಹೊಳ್ಕರ್ರವರ 300 ನೇ ಜನ್ಮದಿನದ ಅಂಗವಾಗಿ ಭಾರತೀಯ ಇತಿಹಾಸ ಸಂಕಲನ ಸಮಿತಿ, ಬೀದರ್ ಪೂರ್ವಭಾವಿ ಬೈಠಕ್ ಕರೆಯಲಾಗಿತ್ತು. ಬೈಠಕ್ ನಲ್ಲಿ ಪ್ರಾಂತ ಕಾರ್ಯಕಾರಿಣಿ ಸದಸ್ಯರು ಹಾಗೂ ಸದ್ಭಾವನಾ ಮುಖ್ಯಸ್ಥರು ಆದ ಶ್ರೀ ನಾಗೇಶ್ ರೆಡ್ಡಿ, ಬೀದರ್ ವಿಶ್ವವಿದ್ಯಾಲಯ ದ ಕುಲಸಚಿವರಾದ ಡಾ. ರವೀಂದ್ರನಾಥ್ ಗಬಾಡಿ ಭಾಗವಹಿಸಿದ್ದರು

31/01/2024
31/01/2024

Address

Yadava Smrithi
Bangalore
560020

Alerts

Be the first to know and let us send you an email when Bharatiya Itihas Sankalan Samiti Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Bharatiya Itihas Sankalan Samiti Karnataka:

Share

Category