Anudhinada Ahara - ಅನುದಿನದ ಆಹಾರ

Anudhinada Ahara - ಅನುದಿನದ ಆಹಾರ Through this Daily Bread in Kannada, this magazine is ordained by God our Saviour to Send the Good News of Life to the People Of Karnataka. Monthly Magazine

📖 *ಅನುದಿನದ ಆಹಾರ*⏰ ಅಕ್ಟೋಬರ್ *1*, 2025, 🗓 ಬುಧವಾರ👉🏼 *ಕಳವಳಗೊಳ್ಳದಿರಿ!*🔖 _ಇಂದಿನ ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಯೆಶಾಯ 14,15,16*ಸಂಜ...
30/09/2025

📖 *ಅನುದಿನದ ಆಹಾರ*
⏰ ಅಕ್ಟೋಬರ್ *1*, 2025,
🗓 ಬುಧವಾರ

👉🏼 *ಕಳವಳಗೊಳ್ಳದಿರಿ!*

🔖 _ಇಂದಿನ ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಯೆಶಾಯ 14,15,16*
ಸಂಜೆ: *ಎಫೆಸ 4*

_*‘ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.” (ಯೋಹಾ.14:1).*_

ಕಳವಳ ಎನ್ನುವದು ಪ್ರತಿಯೊಬ್ಬರನ್ನೂ ಹಿಡಿಯುವಂಥದ್ದು. ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ, ಕಳವಳದಿಂದ ತುಂಬಿದವನಾಗಿಯೂ ಇರುವನು. (ಯೋಬ.14:1) ಎಂದು ಯೋಬನು ಹೇಳುತ್ತಾನೆ. ಇದಕ್ಕೆ ಬಡವ, ಹಣವಂತ, ಸನ್ಮಾರ್ಗಿ, ದುರ್ಮಾರ್ಗಿ ಎಂಬ ಬೇಧವಿಲ್ಲ. ಪ್ರತಿದಿನವೂ ಕೊಲೆ, ಕಳ್ಳತನ, ಆಕಸ್ಮಿಕ ವಿಪತ್ತುಗಳು ಎಂಬ ಅನೇಕ ವಿಧವಾದ ಉಪದ್ರವಗಳಿಂದ ಮಾನವನು ಕಳವಳಕ್ಕೆ ಒಳಗಾಗಿ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಂಡು ಜೀವಿಸುವ ಸ್ಥಿತಿಗೆ ಬಂದು ಮುಟ್ಟಿದ್ದಾನೆ. ಆದರೆ ನಮ್ಮ ಕರ್ತನಾದ ಯೇಸುವಾದರೋ ಈ ಕಳವಳಗಳನ್ನು ನೀಗಿಸುವ ಮಾರ್ಗವನ್ನು ತಿಳಿಸುತ್ತಿದ್ದಾನೆ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ ಎಂದು ಹೇಳುತ್ತಾನೆ.

ದೇವಮಕ್ಕಳೇ ಈ ಎಲ್ಲಾ ಕಳವಳಗಳ ಮಧ್ಯದಲ್ಲಿ ನಮ್ಮ ಭಯವನ್ನು ನೀಗಿಸುವ ದೇವರು ನಮಗಿದ್ದಾನೆ. ಬಿರುಗಾಳಿಯನ್ನು ಹೊಡೆದೋಡಿಸುವ ದೇವರು ನಮಗಿದ್ದಾನೆ. ಕಳವಳಗೊಳ್ಳುವ ಸಮಯಗಳಲ್ಲೆಲ್ಲಾ ಕರ್ತನನ್ನೇ ಆತುಕೊಳ್ಳಿರಿ. ಆತನ ಬಲಗೈ ನಿಮ್ಮನ್ನು ಸಂತೈಸುವದು, ಎಡಗೈ ನಿಮ್ಮನ್ನು ಆದರಿಸುವದು. ತಾಯಿಯಂತೆ ಸಂತೈಸುವ ಆತನು ನನ್ನ ಮಗುವೇ ಭಯಪಡಬೇಡ, ಕಳವಳಗೊಳ್ಳಬೇಡ ಎಂದು ಹೇಳುತ್ತಾನೆ. ಯೋಹಾನ 14ನೇ ಅಧ್ಯಾಯವು ಯೇಸು ಕಳವಳಗೊಂಡಿದ್ದ ಶಿಷ್ಯರೊಂದಿಗೆ ಮನಬಿಚ್ಚಿ ಮಾತನಾಡಿದ ಮಾತುಗಳಾಗಿವೆ. ಇಲ್ಲಿ ಆತನ ಪ್ರೀತಿಯ ಆಳವನ್ನು ನೋಡುತ್ತೇವೆ, ತಂದೆಯ ಅಕ್ಕರೆಯನ್ನು ನೋಡುತ್ತೇವೆ, ತಾಯಿ ಹೃದಯವನ್ನು ನೋಡುತ್ತೇವೆ. ಈ ಸತ್ಯವೇದ ಭಾಗವು ಆತನ ಮಕ್ಕಳಿಗೆ ಆದರಣೆಯನ್ನು ಕೊಡುವಂಥದ್ದಾಗಿದೆ. ಒಂಟಿಯಾಗಿರುವವರಿಗೆ, ಕುಟುಂಬಗಳಿಗೆ, ದೇಶಕ್ಕೆ ಆದರಣೆ ನೀಡುವಂಥದ್ದಾಗಿದೆ. ನಾವು ನಂಬಿರುವಂತಹ ಕರ್ತನು ಅದ್ಭುತ ಸ್ವರೂಪನೂ, ಆಲೋಚನಾಕರ್ತನೂ ಆಗಿರುವನು. ಆತನಿಂದ ಆಗದ ಕಾರ್ಯ ಒಂದೂ ಇಲ್ಲ. ಆತನನ್ನು ನಂಬಿದ ಮಕ್ಕಳನ್ನು ಆತನು ಕೈ ಬಿಡುವಾತನಲ್ಲ. ಆದ್ದರಿಂದಲೇ ಆತನು ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ ಎಂದು ಹೇಳುತ್ತಾನೆ. ವಾಗ್ದಾನ ಮಾಡಿದಾತನು ನಂಬಿಗಸ್ಥನಾಗಿರುವನು. ಪ್ರಿಯರೇ, ನಿಮ್ಮ ವೈಯಕ್ತಿಕ ಜೀವಿತವು ಕುಟುಂಬ ಜೀವಿತವು ಎಂತಹ ಕಳವಳಗಳಿಂದ ಕೂಡಿದ್ದಾದರೂ ಭಯಪಡಬೇಡಿರಿ, ಕರ್ತನ ಮೇಲೆ ಭರವಸವಿಡಿರಿ, ಆತನು ನಿಮಗೆ ನಿಶ್ಚಯವಾಗಿ ಬಿಡುಗಡೆ ಕೊಡುವನು.

_*ನೆನಪಿಗೆ*_ : _“ನೀನು ಅನೇಕ ವಿಷಯವಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ. ಕೆಲವು ಮಾತ್ರ ಬೇಕಾದದ್ದು ಅಥವಾ ಒಂದೇ.” (ಲೂಕ.10:41,42)._

━━━━━━━
👁‍🗨 Watch and be Blessed.
https://youtu.be/Bna1vMrmGlo

👍 *Like* | 🔄 *Share*
🔔 *Subscribe*
💬 *Share with your friends!* 😇

ದೇವರ ವಾಕ್ಯವನ್ನು ದೈನಂದಿನ ಜೀವನದ ಅಂಗವಾಗಿಸಲು ಇಂದೇ ನಮ್ಮೊಂದಿಗೆ ಭಾಗಿಯಾಗಿರಿ.
ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರಿ! ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ!

📖 *ಅನುದಿನದ ಆಹಾರ*⏰ ಸೆಪ್ಟೆಂಬರ್ *30*, 2025, 🗓 ಮಂಗಳವಾರ👉🏼 *ಅಸ್ತಿವಾರ!*🔖 _ಇಂದಿನ ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಯೆಶಾಯ 11,12,13*ಸಂಜೆ...
30/09/2025

📖 *ಅನುದಿನದ ಆಹಾರ*
⏰ ಸೆಪ್ಟೆಂಬರ್ *30*, 2025,
🗓 ಮಂಗಳವಾರ

👉🏼 *ಅಸ್ತಿವಾರ!*

🔖 _ಇಂದಿನ ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಯೆಶಾಯ 11,12,13*
ಸಂಜೆ: *ಎಫೆಸ 3*

_*“ಇಗೋ, ಪರೀಕ್ಷಿತವಾಗಿಯೂ ಮಾನ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಅಸ್ತಿವಾರವನ್ನಾಗಿ ಇಡುತ್ತೇನೆ.” (ಯೆಶಾ.28:16).*_

ಒಂದು ಎತ್ತರವಾದ ಕಟ್ಟಡದ ದೃಢತೆ, ಸ್ಥಿರತೆ ಕಟ್ಟಡದ ಕೆಳಗೆ ಇರುವ ಅದರ ಅಸ್ತಿವಾರದಲ್ಲಿರುವದು. ಒಂದು ಫಲದಾಯಕವಾದ ವೃಕ್ಷದ ರಹಸ್ಯ ಭೂಮಿಯಲ್ಲಿ ಮರೆಯಾಗಿರುವ ಅದರ ಬೇರಿನಲ್ಲಿರುವದು. ಪ್ರಕಾಶಮಾನವಾಗಿ ಬೆಳಕು ನೀಡುವ ದೀಪವನ್ನು ನೋಡುವಾಗ ಅದರ ಬೆಳಕಿನ ರಹಸ್ಯ ಕೆಳಗಿರುವ ಎಣ್ಣೆಯಲ್ಲಿರುವದು. ಅದರಂತೆಯೇ ಕ್ರೈಸ್ತಬೆಳವಣಿಗೆಯು ರಕ್ಷಣೆಯ ಸಂತೋಷವು ಕ್ರಿಸ್ತನೆಂಬ ಅಸ್ತಿವಾರದಲ್ಲಿ ಇರುವದು.

ದೇವಮಕ್ಕಳೇ, ನಿಮ್ಮ ಅಸ್ತಿವಾರವಾಗಿ ಕ್ರಿಸ್ತನು ಇರುವದಾದರೆ ನೀವು ಎಂದೂ ಕದಲುವದಿಲ್ಲ. ನಿಮ್ಮ ಮೂಲೆಗಲ್ಲು ಕ್ರಿಸ್ತನಾಗಿದ್ದರೆ, ಎಂದಿಗೂ ದೆಸೆಗೆಡುವದಿಲ್ಲ. ನಿಮ್ಮ ಅಭ್ಯುದಯಕ್ಕಾಗಿಯೇ ಆತನು ಪರೀಕ್ಷಿಸಲ್ಪಟ್ಟು, ಕಷ್ಟಗಳನ್ನು ಅನುಭವಿಸಿ ಚೀಯೋನಿನಲ್ಲಿ ಸ್ಥಿರವಾದ ಅಸ್ತಿವಾರದ ಮೂಲೆಗಲ್ಲಾಗಿದ್ದಾನೆ. ಕಲ್ವಾರಿಯಲ್ಲಿ ತನ್ನ ಅಮೂಲ್ಯವಾದ ರಕ್ತವನ್ನು ಸುರಿಸಿ ರಕ್ಷಣೆಗೆ ಮೂಲೆಗಲ್ಲಾಗಿರುವನು. ಹಾಕಿರುವ ಅಸ್ತಿವಾರವು ಯೇಸುಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ (1ಕೊರಿಂ.3:11) ಎಂದೂ, ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ (2ಕೊರಿಂ.2:19) ಎಂದೂ ಸತ್ಯವೇದ ಹೇಳುತ್ತದೆ. ಅಸ್ತಿವಾರವು ಪರಿಶುದ್ಧವಾಗಿರುವದಾದರೆ ಮಾತ್ರ ಕಟ್ಟಡವೂ, ಪರಿಶುದ್ಧವಾಗಿರಲು ಸಾಧ್ಯ. ಚೀಯೋನಿನಲ್ಲಿ ಅಸ್ತಿವಾರವಾಗಿ ನಿಂತಿರುವ ಕ್ರಿಸ್ತನ ಮತ್ತೊಂದು ಹೆಸರು ಇಸ್ರಾಯೇಲ್ಯರ ಪರಿಶುದ್ದನು ಎಂದು. ಕಟ್ಟಡವು ಪರಿಶುದ್ಧವಾಗಿರುವಂತೆ ನಿಮ್ಮನ್ನು ಪರಿಶುದ್ಧಪಡಿಸುವ ದೇವರಾಗಿರುವನು. ಕರ್ತನು ಪರಿಶುದ್ಧತ್ವದಲ್ಲಿ ಪರಿಪೂರ್ಣನು. ಆತನು ದಹಿಸುವ ಅಗ್ನಿಯಾಗಿದ್ದಾನೆ. (ಯೆಶಾ.10:17). ಆ ಪರಿಶುದ್ಧವಾದ ಅಗ್ನಿಯಿಂದ ಆತನು ಪಾಪಗಳನ್ನೂ, ಶಾಪಗಳನ್ನೂ ದಹಿಸಿ ಬಿಡುವನು, ಶತ್ರುವಿನ ಬಲವನ್ನು ಮುರಿದು ಹಾಕುತ್ತಾನೆ. ನಿಮ್ಮ ಆತ್ಮೀಕ ಜೀವಿತಕ್ಕೆ ಅಸ್ತಿವಾರವಾಗಿಯೂ, ಮೂಲೆಗಲ್ಲಾಗಿಯೂ ಇರುವನು. ಆತನು ನಿಮ್ಮ ಪರಿಶುದ್ಧತೆಯ ಬಗ್ಗೆ ಅಕ್ಕರೆಯುಳ್ಳವನಾಗಿ ನಿಮ್ಮ ಪರಿಶುದ್ಧ ಜೀವಿತಕ್ಕೆ ಸಹಾಯಕನಾಗಿರುವನು. ಕ್ರಿಮಿ ಪ್ರಾಯದ ಯಾಕೋಬೇ, ಇಸ್ರಾಯೇಲ್ ಜನವೇ ಭಯಪಡಬೇಡ, ನಾನೇ ನಿನಗೆ ಸಹಾಯಕನು ಎಂದು ಹೇಳುತ್ತಾನೆ. (ಯೆಶಾ.41:14). ಪ್ರಿಯರೇ, ಆ ಪರಿಶುದ್ಧನಾದ ದೇವರ ಕೈ ಹಿಡಿದುಕೊಂಡು ಪರಿಶುದ್ಧ ಮಾರ್ಗದಲ್ಲಿ ಉತ್ಸಾಹದಿಂದ ಮುಂದೆ ಸಾಗಿರಿ. ಆತನು ಪರಿಶುದ್ಧತ್ವದ ಮೇಲೆ ಪರಿಶುದ್ಧತೆ ಹೊಂದುವಂತೆ ಮಾಡಿ ನಿಮ್ಮನ್ನು ಪರಿಪೂರ್ಣರನ್ನಾಗಿಸುವನು.

_*ನೆನಪಿಗೆ*_ : _“ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು, ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆದಾಗ್ಯೂ ಅದರ ಅಸ್ತಿವಾರವು ಬಂಡೆಯ ಮೇಲೆ ಇದ್ದುದರಿಂದ ಅದು ಬೀಳಲಿಲ್ಲ.” (ಮತ್ತಾ.7:25)._

━━━━━━━
👁‍🗨 Watch and be Blessed.
https://youtu.be/0bd1Sa4GGQQ?si=e0Pf2G12zsRU2lig

👍 *Like* | 🔄 *Share*
🔔 *Subscribe*
💬 *Share with your friends!* 😇

ದೇವರ ವಾಕ್ಯವನ್ನು ದೈನಂದಿನ ಜೀವನದ ಅಂಗವಾಗಿಸಲು ಇಂದೇ ನಮ್ಮೊಂದಿಗೆ ಭಾಗಿಯಾಗಿರಿ.
ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರಿ! ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ!

📖 *ಅನುದಿನದ ಆಹಾರ*⏰ ಸೆಪ್ಟೆಂಬರ್ *29*, 2025, 🗓 ಸೋಮವಾರ👉🏼 *ಬಾಯಲ್ಲಿ ಸುಳ್ಳಿಲ್ಲ!*🔖 _ಇಂದಿನ ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಯೆಶಾಯ 9,10*...
29/09/2025

📖 *ಅನುದಿನದ ಆಹಾರ*
⏰ ಸೆಪ್ಟೆಂಬರ್ *29*, 2025,
🗓 ಸೋಮವಾರ

👉🏼 *ಬಾಯಲ್ಲಿ ಸುಳ್ಳಿಲ್ಲ!*

🔖 _ಇಂದಿನ ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಯೆಶಾಯ 9,10*
ಸಂಜೆ: *ಎಫೆಸ 2*

_*“ಇವರ ಬಾಯಲ್ಲಿ ಸುಳ್ಳು ಸಿಕ್ಕಲಿಲ್ಲ; ಇವರು ನಿರ್ದೋಷಿಗಳಾಗಿದ್ದಾರೆ.” (ಪ್ರಕ.14:5).*_

ಯೆಹೋವನ ಪರ್ವತವನ್ನು ಹತ್ತತಕ್ಕವನು ಯಾರು? ಆತನ ಪವಿತ್ರ ಸ್ಥಾನದಲ್ಲಿ ನಿಲ್ಲುವದಕ್ಕೆ ಎಂಥವನು ಯೋಗ್ಯನು? ಯಾವನು ಅಯೋಗ್ಯ ಕಾರ್ಯಗಳಲ್ಲಿ ಮನಸ್ಸಿಡದೆ, ಮೋಸ ಪ್ರಮಾಣ ಮಾಡದೆ, ಶುದ್ಧಹಸ್ತವೂ ನಿರ್ಮಲ ಮನಸ್ಸೂ ಉಳ್ಳವನಾಗಿದ್ದಾನೋ ಅವನೇ ಯೆಹೋವನಿಂದ ಶುಭವನ್ನು ಹೊಂದುವನು ಎಂದು ಅರಸನಾದ ದಾವೀದನು (ಕೀರ್ತ.24:3-5)ರಲ್ಲಿ ಬರೆಯುತ್ತಾನೆ. ಚೀಯೋನಿನಲ್ಲಿ ಕಾಣಲ್ಪಡುವವರು ಕಪಟವಿಲ್ಲದವರಾಗಿರಬೇಕು. ಯೇಸುಕ್ರಿಸ್ತನಲ್ಲಿ ಯಾವದೇ ರೀತಿಯಾದ ಕಪಟವಿರಲಿಲ್ಲ. ಆತನು ಯಾವ ಪಾಪವನ್ನೂ ಮಾಡಲಿಲ್ಲ. ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ (1ಪೇತ್ರ.2:22) ಎಂದು. ಅಪೊ.ಪೇತ್ರನು ತನ್ನ ಪತ್ರಿಕೆಯಲ್ಲಿ ಬರೆಯುತ್ತಾನೆ, ಯೇಸುಕ್ರಿಸ್ತನಿಗೆ ಅನೇಕ ಅನ್ಯಾಯವಾದ ವಿಚಾರಣೆಗಳು ನಡೆದವು. ಕಾಯಫನೂ, ಅನನ್ನರೂ, ಪಿಲಾತನು, ಹೆರೋದನು ಇವರ್ಯಾರೂ ಆತನಲ್ಲಿ ಯಾವ ತಪ್ಪನ್ನೂ ನಿರೂಪಿಸಲು ಸಾಧ್ಯವಾಗಲಿಲ್ಲ. ಆತನನ್ನು ಕಠೋರವಾಗಿ ಹಿಂಸಿಸಿ, ಶಿಲುಬೆಗೆ ಹಾಕಿದಾಗ್ಯೂ ಆತನ ಬಾಯಲ್ಲಿ ಶಾಪದ ಮಾತುಗಳಾಗಲಿ, ದೂಷಣೆಯ ಮಾತುಗಳಾಗಲಿ ಬರಲಿಲ್ಲ.

ದೇವಮಕ್ಕಳೇ, ನೀವು ಕ್ರಿಸ್ತನ ಸ್ವಭಾವವನ್ನು ಧರಿಸಿದವರಾಗಿದ್ದರೆ ಮಾತ್ರ ಕುರಿಮರಿಯಾದಾತನೊಂದಿಗೆ ಚೇಯೋನ್ ಪರ್ವತದಲ್ಲಿ ನಿಲ್ಲಲು ಸಾಧ್ಯ. ನಿಮ್ಮ ಬಾಯಲ್ಲಿ ಕಪಟವಿರಬಾರದು. ವಂಚನೆಯ ಮಾತುಗಳನ್ನಾಗಲಿ, ದೂಷಣೆಯ ಮಾತುಗಳನ್ನಾಗಲಿ ಆಡಬಾರದು. ಆಗಲೇ ನೀವು ಪರಲೋಕ ರಾಜ್ಯಕ್ಕೆ ಬಾಧ್ಯರಾಗುವದಕ್ಕೆ ಸಾಧ್ಯ. ಕರ್ತನು ಒಂದು ದಿನ ನತಾನಿಯೇಲನನ್ನು ನೋಡಿ, ಇಗೋ ಕಪಟವಿಲ್ಲದ ಉತ್ತಮ ಇಸ್ರಾಯೇಲ್ಯನೆಂದು ಅವನ ಬಗ್ಗೆ ಸಾಕ್ಷಿಕೊಟ್ಟನು. ಈ ಪ್ರಪಂಚದಲ್ಲಿ ಎಷ್ಟೋ ವಿಧವಾದ ಹಕ್ಕಿಗಳು ಇದ್ದರೂ, ವಾರಿವಾಳಕ್ಕೆ ಮಾತ್ರ ಪಿತ್ತಕೋಶವಿಲ್ಲ. ಕಹಿಯಾದ ಪಿತ್ತವೆನ್ನುವದು ವಂಚನೆಯಿಂದ ಕಪಟದಿಂದ ತುಂಬಿದ ಜೀವಿತವನ್ನು ಸೂಚಿಸುವದು. ಪಾರಿವಾಳದ ಪರಿಶುದ್ಧಾತ್ಮನಲ್ಲಿ ವಂಚನೆಯೋ, ಕಪಟವೋ, ಇಲ್ಲ. ಆತನ ಆತ್ಮದಿಂದ ನೀವು ತುಂಬಲ್ಪಡುವಾಗ ವಂಚನೆಯಾಗಲೀ, ಕಪಟವಾಗಲೀ ತಾನೇ ತಾನಾಗಿ ನಿಮ್ಮನ್ನು ಬಿಟ್ಟು ಹೋಗುವದು. ಕಲ್ವಾರಿ ಪ್ರೀತಿ ನಿಮ್ಮ ಹೃದಯವನ್ನು ತುಂಬುವದು. ಪ್ರಿಯರೇ, ಕರ್ತನ ಬರೋಣವು ಸಮೀಪವಾಗುತ್ತಿದೆ. ಪಾಪರಹಿತವಾದ ಜೀವಿತವನ್ನು ಜೀವಿಸುವ ದೇವಜನರನ್ನು ಕರೆದುಕೊಂಡು ಹೋಗಲು ಯೇಸು ಶೀಘ್ರವಾಗಿ ಬರಲಿರುವನು. ಆತನೊಂದಿಗೆ ಕೂಡಿ ಚೀಯೋನಿಗೆ ಹೋಗಲು ಸಿದ್ದವಾಗಿರುವ ಗುಂಪಿನಲ್ಲಿ ನೀವೂ ಕಾಣಲ್ಪಡುವಿರಾ? ಆ ಪ್ರಕಾಶಮಾನವಾದ ದೇಶಕ್ಕೆ ಬಾಧ್ಯಸ್ಥರಾಗುವಿರಾ?

_*ನೆನಪಿಗೆ*_ : _“ಇಸ್ರಾಯೇಲ್ಯರು ತಮ್ಮ ಸೃಷ್ಟಿಕರ್ತನಲ್ಲಿ ಹೆಚ್ಚಳಪಡಲಿ; ಚೀಯೋನಿನವರು ತಮ್ಮ ರಾಜನಲ್ಲಿ ಹರ್ಷಿಸಲಿ.” (ಕೀರ್ತನೆ.149:2)._

━━━━━━━
👁‍🗨 Watch and be Blessed.
https://youtu.be/961NsBvlamY?si=JryxrEAdpm5nKx-P

👍 *Like* | 🔄 *Share*
🔔 *Subscribe*
💬 *Share with your friends!* 😇

ದೇವರ ವಾಕ್ಯವನ್ನು ದೈನಂದಿನ ಜೀವನದ ಅಂಗವಾಗಿಸಲು ಇಂದೇ ನಮ್ಮೊಂದಿಗೆ ಭಾಗಿಯಾಗಿರಿ.
ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರಿ! ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ!

📖 *ಅನುದಿನದ ಆಹಾರ*⏰ ಸೆಪ್ಟೆಂಬರ್ *28*, 2025, 🗓 ಭಾನುವಾರ👉🏼 *ಕೊಂಡುಕೊಳ್ಳಲ್ಪಟ್ಟವರು!*🔖 _ಇಂದಿನ ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಯೆಶಾಯ 7,...
28/09/2025

📖 *ಅನುದಿನದ ಆಹಾರ*
⏰ ಸೆಪ್ಟೆಂಬರ್ *28*, 2025,
🗓 ಭಾನುವಾರ

👉🏼 *ಕೊಂಡುಕೊಳ್ಳಲ್ಪಟ್ಟವರು!*

🔖 _ಇಂದಿನ ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಯೆಶಾಯ 7,8*
ಸಂಜೆ: *ಎಫೆಸ 1*

_*“ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ, ಯಜ್ಞದ ಕುರಿಯಾದಾತನಿಗೂ ಪ್ರಥಮ ಫಲದಂತಾದರು.” (ಪ್ರಕ.14:4).*_

ದೇವರಿಂದ ಆರಿಸಿಕೊಳ್ಳಲ್ಪಟ್ಟವರ, ಕೊಂಡುಕೊಳ್ಳಲ್ಪಟ್ಟವರ ಜೀವಿತ ಎಷ್ಟು ದೊಡ್ಡ ಭಾಗ್ಯಕರವಾದ ಜೀವಿತವಲ್ಲವೇ? ಹಾಗೆ ಕೊಳ್ಳಲ್ಪಟ್ಟವರು ಚೀಯೋನ್ ಪರ್ವತದಲ್ಲಿ ಯಜ್ಞದ ಕುರಿಮರಿಯಾದಾತನೊಂದಿಗೆ ನಿಲ್ಲುವರು. ಆ ಭಾಗ್ಯಕರವಾದ ಜೀವಿತಕ್ಕಾಗಿ ಈ ಲೋಕದ ಜೀವಿತದಲ್ಲಿ ಸಿದ್ದಪಡಿಸಿಕೊಳ್ಳಬೇಕಾಗಿದೆ. ಅಲ್ಲಿ ಯಜ್ಞದ ಕುರಿಯಾದಾತನೊಂದಿಗೆ ನಿಲ್ಲುವದಕ್ಕೆ ಯೋಗ್ಯರಾದವರು ಯಾರು? ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ಯಜ್ಞದ ಕುರಿಯಾದಾತನಿಗೆ ಪ್ರಥಮ ಫಲದಂತಾದ ರು. (ಪ್ರಕ.14:4). ಯೇಸುಕ್ರಿಸ್ತನು ನಿಮ್ಮನ್ನು ಕಲ್ವಾರಿ ಶಿಲುಬೆಯಲ್ಲಿ ತನ್ನ ಪರಿಶುದ್ಧವಾದ ರಕ್ತವನ್ನು ಚೆಲ್ಲಿ ಕ್ರಯಕ್ಕೆ ಕೊಂಡುಕೊಂಡಿದ್ದಾನೆ.

ಕರ್ತನಿಂದ ಕೊಳ್ಳಲ್ಪಟ್ಟವರು, ಪ್ರತ್ಯೇಕಿಸಲ್ಪಟ್ಟ ಜೀವಿತದ ಬಗ್ಗೆ ಅರಿತವರಾಗಿರಬೇಕು. ಸೃಷ್ಟಿಯಲ್ಲಿ ದೇವರು ಕತ್ತಲೆಯನ್ನು ಬೆಳಕನ್ನು ವಿಂಗಡಿಸಿದನು. ಪ್ರತ್ಯೇಕಿಸಲ್ಪಟ್ಟ ಜೀವನವನ್ನು ಕರ್ತನು ಅಬ್ರಹಾಮನ ಜೀವಿತದಲ್ಲೂ ತಂದನು. ಯೆಹೋವನು ಅಬ್ರಹಾಮನಿಗೆ ನೀನು ಸ್ವದೇಶವನ್ನೂ, ಬಂಧು ಬಳಗವನ್ನೂ, ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು (ಆದಿ.12:1) ಎಂದು ಹೇಳಿದನು. ಮೊದಲನೆಯದಾಗಿ ಸ್ವದೇಶದಿಂದಲೂ, ಬಂಧು ಬಳಗದಿಂದಲೂ ಅಬ್ರಹಾಮನನ್ನು ಬೇರ್ಪಡಿಸಿದನು. ಎರಡನೆಯದಾಗಿ ಲೋಟನಿಂದಲೂ, ಲೋಟನ ಕುಟುಂಬದಿಂದಲೂ ಬೇರ್ಪಡಿಸಿದನು. ಮೂರನೆಯದಾಗಿ ಹಾಗರಳಿಂದಲೂ, ಇಷ್ಮಾಯೇಲನಿಂದಲೂ ಬೇರ್ಪಡಿಸಿದನು. ನಾಲ್ಕನೆಯದಾಗಿ ಇಸಾಕನಿಂದ, ಮಗನ ಪ್ರೀತಿಯಿಂದ ಬೇರ್ಪಡಿಸಿದನು. ತನಗೆ ಪ್ರಿಯವಾಗಿದ್ದ ಎಲ್ಲವನ್ನೂ ಯಜ್ಞವೇದಿಯ ಮೇಲೆ ಅಬ್ರಹಾಮನು ಅರ್ಪಿಸಬೇಕಾಗಿ ಬಂದಿತು. ಅದೇ ರೀತಿಯಲ್ಲಿ ಕರ್ತನಿಂದ ಕ್ರಯಕ್ಕೆ ಕೊಳ್ಳಲ್ಪಟ್ಟವರು, ಈ ಲೋಕದಲ್ಲಿ ಜೀವಿಸಿದರೂ ಈ ಲೋಕಕ್ಕೆ ಸೇರಿದವರಲ್ಲ. ನೀವು ನಿಮ್ಮ ಸ್ವಂತ ಸ್ವತ್ತಲ್ಲ. ಈ ಲೋಕಸಂಬಂಧವಾದವುಗಳ ಮೇಲೆ ಅಲ್ಲ, ಮೇಲಿನ ಲೋಕದ ಸಂಬಂಧವಾದವುಗಳ ಮೇಲೆ ಮನಸ್ಸಿಡುವವರಾಗಿರಬೇಕು. ಯೇಸುಕ್ರಿಸ್ತನು, ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು, ನನಗೆ ಯೋಗ್ಯನಲ್ಲ (ಮತ್ತಾ.10:37) ಎಂದು ಹೇಳುವನು. ದೇವಮಕ್ಕಳೇ, ನಾವು ಕರ್ತನಿಂದ ಕ್ರಯಕ್ಕೆ ಕೊಳ್ಳಲ್ಪಟ್ಟವರು. ಆತನು ನಿಮ್ಮಿಂದ ಪರಿಶುದ್ಧವಾದ ಜೀವಿತವನ್ನು ನಿರೀಕ್ಷಿಸುವನು ಎಂಬುದನ್ನು ಮರೆಯದಿರಿ. ನಿಮ್ಮ ಆಶೆ ಆಕಾಂಕ್ಷೆಗಳೆಲ್ಲಾ ಕರ್ತನನ್ನು ಸಂತೋಷಪಡಿಸುವದಾಗಿರಲಿ.

_*ನೆನಪಿಗೆ*_ : _“ಇಗೋ ದೇವರ ನಿವಾಸವು ಮನುಷ್ಯರಲ್ಲಿ ಆದೆ; ಆತನು ಅವರೊಡನೆ ವಾಸ ಮಾಡುವನು. ಅವರು ಆತನಿಗೆ ಪ್ರಜೆಗಳಾಗಿರುವರು. ದೇವರು ತಾನೇ ಅವರ ಸಂಗಡ ಇರುವನು.” (ಪ್ರಕ.21:3)._

━━━━━━━
👁‍🗨 Watch and be Blessed.
https://youtu.be/v2IX45Mux88

👍 *Like* | 🔄 *Share*
🔔 *Subscribe*
💬 *Share with your friends!* 😇

ದೇವರ ವಾಕ್ಯವನ್ನು ದೈನಂದಿನ ಜೀವನದ ಅಂಗವಾಗಿಸಲು ಇಂದೇ ನಮ್ಮೊಂದಿಗೆ ಭಾಗಿಯಾಗಿರಿ.
ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರಿ! ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ!

📖 *ಅನುದಿನದ ಆಹಾರ*⏰ ಸೆಪ್ಟೆಂಬರ್ *27*, 2025, 🗓 ಶನಿವಾರ👉🏼 *ಹಿಂಬಾಲಿಸುವವರು!*🔖 _ಇಂದಿನ ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಯೆಶಾಯ 5,6*ಸಂಜೆ:...
27/09/2025

📖 *ಅನುದಿನದ ಆಹಾರ*
⏰ ಸೆಪ್ಟೆಂಬರ್ *27*, 2025,
🗓 ಶನಿವಾರ

👉🏼 *ಹಿಂಬಾಲಿಸುವವರು!*

🔖 _ಇಂದಿನ ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಯೆಶಾಯ 5,6*
ಸಂಜೆ: *ಗಲಾ 6*

_*“ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು.” (ಪ್ರಕ.14:4).*_

ಹಳೆಯ ಒಡಂಬಡಿಕೆಯಲ್ಲಿ ಹಿಂಬಾಲಿಸುವ ಬಗ್ಗೆ ಅನೇಕ ಕಡೆಗಳಲ್ಲಿ ಓದುತ್ತೇವೆ. ಮೋಶೆಯು ನಾಯಕನಾಗಿ ಇಸ್ರಾಯೇಲ್ಯರನ್ನು ಐಗುಪ್ತದಿಂದ ಕಾನಾನಿಗೆ ನಡೆಸಿದಾಗ ಯೆಹೋಶುವನು ಯಥಾರ್ಥವಾದ ಮೋಶೆಯನ್ನು ಹಿಂಬಾಲಿಸಿ ನಡೆದನು. ಅದ್ದರಿಂದಲೇ ಮೋಶೆಯ ಕಾಲಾನಂತರ ಕರ್ತನು ಯೆಹೋಶುವನನ್ನು ಅಭಿಷೇಕಿಸಿ ಇಸ್ರಾಯೇಲ್ಯರನ್ನು ಕಾನಾನ್ ದೇಶಕ್ಕೆ ನಡೆಸುವ ಜವಾಬ್ದಾರಿಯನ್ನು ಅವನಿಗೆ ವಹಿಸಿದನು. ನಾನು ಮೋಶೆಯೊಂದಿಗೆ ಇದ್ದಂತೆ ನಿನ್ನೊಂದಿಗೂ ಇರುವೆನು ಎಂದು ವಾಗ್ದಾನ ಮಾಡಿದನು. ಎಲೀಷನು ಪ್ರೀತಿಯಿಂದಲೂ, ಭಕ್ತಿಯಿಂದಲೂ, ತಾಳ್ಮೆಯಿಂದಲೂ ಎಲೀಯನನ್ನು ಹಿಂಬಾಲಿಸಿದನು. ಸುಮಾರು ಹದಿನಾಲ್ಕು ವರ್ಷ ಈ ರೀತಿ ಹಿಂಬಾಲಿಸಿ ನಡೆದನು. ಎಲೀಯನ ನಂತರ ಕರ್ತನು ಎಲೀಷನನ್ನು ಎರಡರಷ್ಟು ಅಭಿಷೇಕದಿಂದ ತುಂಬಿಸಿದನು. ಮೋವಾಬ್ಯಳಾದ ರೂತಳು ಇಸ್ರಾಯೇಲ್ಯಳಾದ ತನ್ನ ಅತ್ತೆಯಾದ ನವೋಮಿಯನ್ನು ಹಿಂಬಾಲಿಸಿದಳು. (ರೂತಳು.1:16,17).

ದೇವಮಕ್ಕಳೇ, ಇಂದು ನಾವು ಯಾರನ್ನು ಹಿಂಬಾಲಿಸುತ್ತಿದ್ದೇವೆ? ಇಂದಿನ ಪೀಳಿಗೆ ನವ ನಾಗರೀಕತೆಯ ಹೆಸರಿನಲ್ಲಿ ಅನೇಕ ವಿಧವಾದ ಪ್ರಾಪಂಚಿಕ ವಿಷಯಗಳ ಹಿಂದೆ ಓಡುತ್ತಿದೆ. ಆದು ದೇವರಮಕ್ಕಳಾದರೋ ಯಜ್ಞದ ಕುರಿಮರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು ಎಂದು (ಪ್ರಕ.14:4) ತಿಳಿಸುತ್ತದೆ. ಕ್ರೈಸ್ತರಾದ ನಾವು ಕ್ರಿಸ್ತನನ್ನು ಹಿಂಬಾಲಿಸಬೇಕೇ ಹೊರತು ಈ ಲೋಕದವುಗಳನ್ನಲ್ಲ. ಯೇಸುಕ್ರಿಸ್ತನು ಯಾವನಾದರೂ ನನ್ನ ಸೇವೆ ಮಾಡುವವನಾದರೆ ನನ್ನ ಹಿಂದೆ ಬರಲಿ. ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ತಂದೆಯು ಅವನಿಗೆ ಬಹುಮಾನ ಕೊಡುವನು (ಯೋಹಾ.12:26,27) ಎಂದು ಹೇಳುತ್ತಾನೆ. ಶಿಷ್ಯನು ಗುರುವನ್ನು ಹಿಂಬಾಲಿಸುವಂತೆ ನಾವು ಕ್ರಿಸ್ತನನ್ನು ಹಿಂಬಾಲಿಸುವಾಗ ನಿಶ್ಚಯವಾಗಿ ಆತನು ನಮ್ಮನ್ನು ಚೀಯೋನ್ ಪರ್ವತದಲ್ಲಿ ನಿಲ್ಲಿಸುವನು. ಕ್ರಿಸ್ತನು ನಮಗೆ ಯಾವ ಯಾವ ಕಾರ್ಯಗಳಲ್ಲಿ ಮಾದರಿಯಾಗಿದ್ದಾನೆ? ತಾನು ದೈವ ಸಂಭೂತನಾಗಿದ್ದರೂ, ತಂದೆಯ ಆಜ್ಞೆಗೆ ವಿಧೇಯನಾಗಿ ದೀಕ್ಷಾಸ್ನಾನ ಮಾಡಿಸಿಕೊಂಡನು. ಆತನಲ್ಲಿ ದೈವೀಕ ಪ್ರೀತಿ ಇದ್ದಿತು. ಆದ್ದರಿಂದಲೇ ದೇವರ ಸೇವೆ ಮಾಡಿದನು. ಮಾರ್ಗ ತಪ್ಪಿ ಅಲೆದಾಡುವ ಕುರಿಗಳಂತಿದ್ದ ಮಾನವ ಕುಲದ ವಿಮೋಚನೆಗಾಗಿ ಆತ್ಮಭಾರವುಳ್ಳವನಾಗಿ ಹಗಲಿರುಳು ಪ್ರಾರ್ಥಿಸಿದನು. ತನ್ನನ್ನೇ ಸಜೀವಯಜ್ಞವಾಗಿ ಶಿಲುಬೆಯಲ್ಲಿ ಅರ್ಪಿಸಿಕೊಂಡನು. ಪ್ರೀತಿ, ಕರುಣೆ, ತಾಳ್ಮೆಯಿಂದ ತುಂಬಿದ ಆತನ ಜೀವಿತ ನಮಗೆ ಮಾದರಿಯಾಗಿದೆ. ಪ್ರಿಯರೇ, ಕರ್ತನನ್ನು ಯಥಾರ್ಥವಾದ ಹೃದಯದಿಂದ ಹಿಂಬಾಲಿಸುವಾಗ, ನಿಶ್ಚಯವಾಗಿ ಆಶೀರ್ವದಿಸಲ್ಪಡುವಿರಿ.

_*ನೆನಪಿಗೆ*_ : _“ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” (1ಪೇತ್ರ.2:21)._

━━━━━━━
👁‍🗨 Watch and be Blessed.
https://youtu.be/TbCzMhHaSPs

👍 *Like* | 🔄 *Share*
🔔 *Subscribe*
💬 *Share with your friends!* 😇

ದೇವರ ವಾಕ್ಯವನ್ನು ದೈನಂದಿನ ಜೀವನದ ಅಂಗವಾಗಿಸಲು ಇಂದೇ ನಮ್ಮೊಂದಿಗೆ ಭಾಗಿಯಾಗಿರಿ.
ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರಿ! ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ!

📖 *ಅನುದಿನದ ಆಹಾರ*⏰ ಸೆಪ್ಟೆಂಬರ್ *26*, 2025, 🗓 ಶುಕ್ರವಾರ👉🏼 *ಮಲೀನವಾಗದ ಚೀಯೋನ್!*🔖 _ಇಂದಿನ ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಯೆಶಾಯ 3,4*ಸ...
26/09/2025

📖 *ಅನುದಿನದ ಆಹಾರ*
⏰ ಸೆಪ್ಟೆಂಬರ್ *26*, 2025,
🗓 ಶುಕ್ರವಾರ

👉🏼 *ಮಲೀನವಾಗದ ಚೀಯೋನ್!*

🔖 _ಇಂದಿನ ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಯೆಶಾಯ 3,4*
ಸಂಜೆ: *ಗಲಾ 5*

_*“ಸ್ತ್ರೀ ಸಹವಾಸದಿಂದ ಮಲೀನರಾಗದವರು ಇವರೇ, ಇವರು ಕನ್ಯೆಯರಂತೆ ನಿಷ್ಕಳಂಕರು.” (ಪ್ರಕ.14:4).*_

ಚೀಯೋನ್ ಪರ್ವತದಲ್ಲಿ ಕುರಿಮರಿಯಾದಾತನೊಂದಿಗೆ ನಿಂತ ಜನಸಮೂಹವನ್ನು ಕುರಿತು ಅಪೊ.ಪೌಲನು ಬರೆಯುವಾಗ, ಅವರು ನಿಷ್ಕಳಂಕರು ಸ್ತ್ರೀ ಸಹವಾಸದಿಂದ ಮಲೀನರಾಗದವರು ಎಂದು ಬರೆಯುತ್ತಾನೆ. ಒಬ್ಬನು ತನ್ನ ಹೆಂಡತಿಯಿಂದ ಮಲೀನವಾಗುವದಿಲ್ಲ. ಹೆಂಡತಿ ಇದ್ದೂ ಅನ್ಯಸ್ತ್ರೀಯೊಂದಿಗೆ ಸಹವಾಸವನ್ನು ಇಟ್ಟುಕೊಂಡಿರುವವನು ಮಲೀನವಾದವನು. ಆತ್ಮೀಕ ಜೀವಿತದಲ್ಲಿ ಪರಿಶುದ್ಧತೆಯನ್ನೂ, ಕುಟುಂಬ ಜೀವಿತದಲ್ಲಿ ನಿಷ್ಕಳಂಕವಾಗಿರುವದನ್ನೂ ಕರ್ತನು ನಿರೀಕ್ಷಿಸುತ್ತಾನೆ. ದೇವರು ಸೃಷ್ಟಿಯಲ್ಲಿ ಹೆಣ್ಣು ಗಂಡನ್ನು ಸೃಷ್ಟಿಸಿದನು. ಕುಟುಂಬ ಜೀವಿತವನ್ನು ಏರ್ಪಡಿಸಿದನು. ಕುಟುಂಬ ಜೀವಿತ ಕರ್ತನ ದೃಷ್ಟಿಯಲ್ಲಿ ಮಾನ್ಯವಾದದ್ದು.

ಯೇಸುಕ್ರಿಸ್ತನು ಈ ಭೂಮಿಯಲ್ಲಿ ಜೀವಿಸಿದ್ದಾಗ, ಅನೇಕ ಸ್ತ್ರೀಯರು ಆತನೊಂದಿಗೆ ಸೇವೆ ಮಾಡಿದರು. ಮಾರ್ಥಳು ಮತ್ತು ಮರಿಯಳ ಮನೆಗೆ ಹೋದನು. ಮಗ್ಧಲದ ಮರಿಯಳನ್ನು ಸಂಧಿಸಿದನು. ಸಮಾರ್ಯದ ಸ್ತ್ರೀಯನ್ನು ಸತ್ಯಕ್ಕೆ ನಡೆಸಿದನು. ಆದರೆ ಆತನು ಯಾವ ರೀತಿಯಲ್ಲಿಯೂ ತನ್ನ ಪರಿಶುದ್ಧತೆಯಲ್ಲಿ ಕೊರತೆ ಉಂಟು ಮಾಡಿಕೊಳ್ಳಲಿಲ್ಲ. ಸ್ತ್ರೀಯರಿಂದ ಮಲೀನಗೊಳ್ಳಲಿಲ್ಲ. ನನ್ನಲ್ಲಿ ಪಾಪವನ್ನು ತೋರಿಸಿಕೊಡುವವನು ನಿಮ್ಮೊಳಗೆ ಯಾರಿದ್ದಾರೆ? ಎಂದು ಸವಾಲು ಹಾಕಿದನು. ಯೇಸುಕ್ರಿಸ್ತನು ಪರಿಶುದ್ಧವಾದ ಜೀವಿತವನ್ನು ನಡೆಸಿ, ಶುದ್ಧವಾದ ಹೆಜ್ಜೆಯ ಜಾಡನ್ನು ಬಿಟ್ಟು ಹೋಗಿದ್ದಾನೆ. ವ್ಯಭಿಚಾರ ಮಾಡಬಾರದು ಎಂಬುದು ಹಳೆಯ ಒಡಂಬಡಿಕೆಯ ಕಟ್ಟಳೆಯಾಗಿದೆ. ಆದರೆ ಯೇಸುಕ್ರಿಸ್ತನು ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯೊಂದಿಗೆ ವ್ಯಭಿಚಾರ ಮಾಡಿದವನಾದನು ಎಂದು ಹೇಳುತ್ತಾನೆ. (ಮತ್ತಾ.5:27,28). ಭಕ್ತನಾದ ಯೋಬನು ಸ್ತ್ರೀಯರಿಂದ ತನ್ನನ್ನು ಮಲಿನ ಮಾಡಿಕೊಳ್ಳಬಾರದೆಂದು ಎಷ್ಟೋ ಎಚ್ಚರಿಕೆಯುಳ್ಳವನಾಗಿದ್ದನು. ತನ್ನ ಕಣ್ಣುಗಳನ್ನು ಪರಿಶುದ್ಧತ್ವಕ್ಕೆ ಅರ್ಪಿಸಿಕೊಂಡಿದ್ದನು. ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು? (ಯೋಬ.31:1) ಎಂದು ಹೇಳುತ್ತಾನೆ. ಸ್ತ್ರೀ ಎಂದು ಹೇಳುವಾಗ, ಅದು ವಿಗ್ರಹಾರಾಧನೆಯನ್ನು ಸೂಚಿಸುವದು. ಇಸ್ರಾಯೇಲ್ಯರು ವಿಗ್ರಹಾರಾಧನೆಯನ್ನು ಪ್ರಾರಂಭಿಸಿದಾಗ, ಅಯ್ಯೋ, ವ್ಯಭಿಚಾರಿಗಳಾದೆವಲ್ಲಾ ಎಂದು ಪ್ರಲಾಪಿಸಿದರು. ಮಲಿನಗೊಳಿಸುವ ಸ್ತ್ರೀ ಎನ್ನುವದು ಲೋಕದ ಇಚ್ಛೆಗಳನ್ನು ಸೂಚಿಸುವದು. ಕ್ರಿಸ್ತನ ರಕ್ತದಿಂದ ರಕ್ಷಿಸಲ್ಪಟ್ಟವರು ಸುಕ್ಕು ಕಳಂಕವಿಲ್ಲದ ಮದುವಣಗಿತ್ತಿಯಂತೆ ಕಾಣಲ್ಪಡಬೇಕು. ಲೋಕದ ದುರಿಚ್ಚೆಗಳಿಂದ ಕಾಯ್ದುಕೊಳ್ಳಿರಿ.

_*ನೆನಪಿಗೆ*_ : _“ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ಧ ಕನ್ಯೆಯಂತೆ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯ ಮಾಡಿದೆನಲ್ಲಾ.” (2ಕೊರಿಂ.11:2)._

━━━━━━━
👁‍🗨 Watch and be Blessed.
https://youtu.be/dJ2LIzwPZfk

👍 *Like* | 🔄 *Share*
🔔 *Subscribe*
💬 *Share with your friends!* 😇

ದೇವರ ವಾಕ್ಯವನ್ನು ದೈನಂದಿನ ಜೀವನದ ಅಂಗವಾಗಿಸಲು ಇಂದೇ ನಮ್ಮೊಂದಿಗೆ ಭಾಗಿಯಾಗಿರಿ.
ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರಿ! ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ!

📖 *ಅನುದಿನದ ಆಹಾರ*⏰ ಸೆಪ್ಟೆಂಬರ್ *25*, 2025, 🗓 ಗುರುವಾರ👉🏼 *ಚೀಯೋನಿನ ಅನ್ಯೋನ್ಯತೆ!*🔖 _ಇಂದಿನ ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಯೆಶಾಯ 1,2...
25/09/2025

📖 *ಅನುದಿನದ ಆಹಾರ*
⏰ ಸೆಪ್ಟೆಂಬರ್ *25*, 2025,
🗓 ಗುರುವಾರ

👉🏼 *ಚೀಯೋನಿನ ಅನ್ಯೋನ್ಯತೆ!*

🔖 _ಇಂದಿನ ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಯೆಶಾಯ 1,2*
ಸಂಜೆ: *ಗಲಾ 4*

_*“ನಾನು ನೋಡಲಾಗಿ ಯಜ್ಞದ ಕುರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರುವದನ್ನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ ಮಂದಿ ಇದ್ದರು. ಅವರವರ ಹಣೆಯ ಮೇಲೆ..........ಬರೆಯಲ್ಪಟ್ಟಿದ್ದವು.” (ಪ್ರಕ.14:1).*_

ಚೀಯೋನ್ ಪರ್ವತದ ದರ್ಶನವನ್ನು ಕಂಡ ಅಪೆÇ.ಯೋಹಾನನು, ನಾವು ಕಂಡು ಕೇಳಿದ್ದು ನಿಮಗೂ ಗೊತ್ತಾಗಿ ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಸೇರಬೇಕೆಂದು, ಅದನ್ನು ನಿಮಗೆ ಪ್ರಸಿದ್ಧಿ ಪಡಿಸುತ್ತೇವೆ (1ಯೋಹಾ.1:3) ಎಂದು ಬರೆಯುತ್ತಾನೆ. ಆದಿ ಅಪೆÇಸ್ತಲರ ದಿನಗಳಲ್ಲಿ ಪವಿತ್ರಾತ್ಮನ ಅಭಿಷೇಕ ಹೊಂದುವದಕ್ಕಾಗಿ ನೂರಿಪ್ಪತ್ತುಮಂದಿ ಶಿಷ್ಯರು ಒಟ್ಟಾಗಿ ಮೇಲಂತಸ್ತಿನ ಕೊಠಡಿಯಲ್ಲಿ ಕುಳಿತಿದ್ದರು ಎಂದು ಅ.ಕೃತ್ಯಗಳು ಎಂಬ ಪುಸ್ತಕದಲ್ಲಿ ಓದುತ್ತೇವೆ. ಶಿಷ್ಯರ ನಡುವೆ ಪ್ರೀತಿಯ ಐಕ್ಯತೆಯನ್ನು ಉಂಟುಮಾಡುವದಕ್ಕಾಗಿ ಯೇಸುಕ್ರಿಸ್ತನು ತಂದೆಯ ಬಳಿ ತೀವ್ರವಾಗಿ ಪ್ರಾರ್ಥಿಸಿದ್ದು ಯೋಹಾನ 17ನೇ ಅಧ್ಯಾಯದಲ್ಲಿ ಓದುತ್ತೇವೆ. ಆತನು ಅವರಿಗಾಗಿ ತಂದೆಯ ಬಳಿ ಪ್ರಾರ್ಥಿಸಿದ್ದು ಮಾತ್ರವಲ್ಲ ಅವರ ಕಾಲುಗಳನ್ನು ತೊಳೆದನು. ಅದು ಪ್ರೀತಿಯ ಅನ್ಯೋನ್ಯತೆಗೂ ತಾಳ್ಮೆಗೂ ಗುರುತಾಗಿದ್ದಿತು. ಕರ್ತನೂ, ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವೂ ಸಹ ಒಬ್ಬರ ಕಾಲನ್ನು ಒಬ್ಬರು ತೊಳೆಯುವ ಹಂಗಿನಲ್ಲಿದ್ದೀರಿ (ಯೋಹಾ.13:14) ಎಂದು ಹೇಳಿದನು.

ಇಂದು ಲೋಕದಲ್ಲಿ ನೂರಾರು ಸಭೆಗಳು ಇರಬಹುದು, ವ್ಯತ್ಯಾಸವಾದ ಬೋಧನೆಗಳು ಇರಬಹುದು. ಆದರೆ ನೀವು ನಿಮ್ಮ ಹೃದಯವು ಪರಲೋಕದಲ್ಲಿ ಹೆಸರು ಬರೆಯಲ್ಪಟ್ಟಿರುವ ಸಭೆಯೊಂದಿಗೆ ಅನ್ಯೋನ್ಯತೆಯನ್ನು ಪಡೆದುಕೊಳ್ಳಬೇಕು. ಎಲ್ಲರೊಂದಿಗೆ ಸಮಾಧಾನದಿಂದ ಇರುವದಕ್ಕೂ ಪರಿಶುದ್ಧತೆಯನ್ನು ಹೊಂದುವದಕ್ಕೂ ಪ್ರಯತ್ನಿಸಬೇಕೆಂದು ಅಪೊ.ಪೌಲನು ತನ್ನ ಪತ್ರಿಕೆಯಲ್ಲಿ ಬರೆಯುತ್ತಾನೆ. (ಇಬ್ರಿ.12:14). ದೇವಮಕ್ಕಳೇ, ಯೇಸುಕ್ರಿಸ್ತನು ತೋರಿಸಿದ ಮಾದರಿಯಂತೆ ಒಬ್ಬರನ್ನೊಬ್ಬರು ಗೌರವಿಸಿರಿ. ಈ ಭೂಮಿಯಲ್ಲಿ ಅನ್ಯೋನ್ಯತೆಯಿಲ್ಲದವರು ಪರಲೋಕದಲ್ಲಿ ಹೇಗೆ ಅನ್ಯೋನ್ಯತೆಯಿಂದಿರಲು ಸಾಧ್ಯ? ಐಕ್ಯ ಮತವು ಕ್ರೈಸ್ತರಲ್ಲಿರಬೇಕಾದ ಶ್ರೇಷ್ಠವಾದ ಒಂದು ಗುಣ. ಇದನ್ನು ಕುರಿತು, ಆಹಾ ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು.... ಮಂಜಿನಂತೆಯೂ ಇದೆ (ಕೀರ್ತ.133:1-3) ಎಂದು ಅರಸನಾದ ದಾವೀದನು ಬರೆಯುತ್ತಾನೆ. ಎಲ್ಲಿ ಸಹೋದರ ಪ್ರೀತಿ, ಐಕ್ಯತೆ ಇರುವದೋ ಅಲ್ಲಿ ದೇವಾಶೀರ್ವಾದವೂ ಇರುವದು. ಪ್ರಿಯರೇ, ನಿಮಗೆ ಕೊಟ್ಟಿರುವ ಈ ಕೃಪಾಕಾಲದಲ್ಲಿ ನಿಮ್ಮಲ್ಲಿರುವ ಎಲ್ಲಾ ಕಹಿಯಾದ ಮನೋಭಾವಗಳನ್ನು ತೆಗೆದು ಹಾಕಿ ಎಲ್ಲರೊಂದಿಗೆ ಪ್ರೀತಿಯಿಂದಲೂ ಸಮಾಧಾನದಿಂದಲೂ ಅನ್ಯೋನ್ಯತೆಯಿಂದಲೂ ಇರುವದಕ್ಕೆ ಪ್ರಯತ್ನ ಪಡಿರಿ, ದೇವರ ಆಶೀರ್ವಾದಗಳನ್ನು ಹೊಂದಿಕೊಳ್ಳಿರಿ.

_*ನೆನಪಿಗೆ*_ : _“ಬನ್ನಿರಿ, ಕರ್ತನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ........ ಚೀಯೋನಿನಿಂದ ಧರ್ಮೋಪದೇಶವೂ, ಯೆರೂಸಲೇಮಿನಿಂದ ಕರ್ತನ ವಾಕ್ಯವೂ ಹೊರಡುವವು.” (ಯೆಶಾ.2:3)._

━━━━━━━
👁‍🗨 Watch and be Blessed.
https://youtu.be/81BG2VotTfE

👍 *Like* | 🔄 *Share*
🔔 *Subscribe*
💬 *Share with your friends!* 😇

ದೇವರ ವಾಕ್ಯವನ್ನು ದೈನಂದಿನ ಜೀವನದ ಅಂಗವಾಗಿಸಲು ಇಂದೇ ನಮ್ಮೊಂದಿಗೆ ಭಾಗಿಯಾಗಿರಿ.
ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರಿ! ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ!

📖 *ಅನುದಿನದ ಆಹಾರ*⏰ ಸೆಪ್ಟೆಂಬರ್ *24*, 2025, 🗓 ಬುಧವಾರ👉🏼 *ಚೀಯೋನ್ ಹಾಡು!*🔖 _ಇಂದಿನ ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಪರಮಗೀತ 6,7,8*ಸಂಜೆ...
24/09/2025

📖 *ಅನುದಿನದ ಆಹಾರ*
⏰ ಸೆಪ್ಟೆಂಬರ್ *24*, 2025,
🗓 ಬುಧವಾರ

👉🏼 *ಚೀಯೋನ್ ಹಾಡು!*

🔖 _ಇಂದಿನ ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಪರಮಗೀತ 6,7,8*
ಸಂಜೆ: *ಗಲಾ 3*

_*“ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡನ್ನು ಹಾಡಿದರು.” (ಪ್ರಕ.14:3).*_

ಚೀಯೋನ್ ಪರ್ವತದಲ್ಲಿ ಕುರಿಮರಿಯಾದಾತನೊಂದಿಗೆ ನಿಂತವರು ಸಂತೋಷದಿಂದ ಹೊಸ ಹಾಡನ್ನು ಹಾಡಿದರು. ಆ ಹಾಡು ಬೇರೆ ಯಾರೂ ಹಾಡಲಾಗದ ಹಾಡು. ಈ ಭೂಮಿಯಲ್ಲಿನ ಜೀವಿತವನ್ನು ಕ್ರಿಸ್ತನಿಗಾಗಿ ಮುಡಿಪಾಗಿಟ್ಟು ಜಯದ ಜೀವಿತವನ್ನು ಜೀವಿಸಿ ಮರಣಹೊಂದಿದವರು ಮಾತ್ರ ಈ ಹಾಡನ್ನು ಹಾಡಲು ಸಾಧ್ಯ. ಹಳೆಯ ಒಡಂಬಡಿಕೆಯಲ್ಲಿ ಕೆಂಪು ಸಮುದ್ರವನ್ನು ದಾಟಿ ಬಂದಾಗ, ಮೋಶೆ ಮಿರ್ಯಾಮಳೂ, ಇಸ್ರಾಯೇಲ್ಯರೂ ಕರ್ತನಿಗೆ ಜಯಗೀತವನ್ನು ಹಾಡಿದರು. ಆದರೆ ಕೆಂಪು ಸಮುದ್ರದ ದಂಡೆಯ ಮೇಲೆ ನಿಂತು ಹಾಡುವದಕ್ಕಿಂತ ಚೀಯೋನ್ ಪರ್ವತದಲ್ಲಿ ಕ್ರಿಸ್ತನೊಂದಿಗೆ ಹಾಡುವದು ಎಷ್ಟು ಭಾಗ್ಯಕರವಾದದ್ದಲ್ಲವೇ?

ಹೊಸ ಒಡಂಬಡಿಕೆಯು ನೂತನ ಗೀತೆಯೊಂದಿಗೇ ಆರಂಭವಾಗುವದು. ದೇವದೂತರು, ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ, ದೇವರು ಅವರಿಗೆ ಒಲಿಯುತ್ತಾನೆ (ಲೂಕ.2:14) ಎಂದು ಹಾಡಿದರು. ಕ್ರಿಸ್ತನ ಜನನವಾದಾಗ, ಪರಲೋಕದ ಸಮಸ್ತ ದೇವದೂತರು ಹಾಡಿದರು. ಲೂಕನ ಸುವಾರ್ತೆಯಲ್ಲಿ ಎಲಿಜಬೇತಳ ಹಾಡು ಉಂಟು! ಮರಿಯಳ ಹಾಡು ಉಂಟು! ಸಿಮೆಯೋನನ ಹಾಡು ಉಂಟು! ಪೌಲನನ್ನು ಸೀಲನನ್ನು ಸೆರೆಮನೆಯಲ್ಲಿ ಹಾಕಿದಾಗ ಅವರು ಹಾಡಿದ ಸ್ತುತಿಗೀತೆಗಳಿಂದ ಸೆರೆಮನೆಯ ಯಜಮಾನನು ರಕ್ಷಣೆ ಹೊಂದಿದನು. ಚೀಯೋನ್ ಪರ್ವತದಲ್ಲಿ ಹಾಡಿ ಆನಂದಿಸುವ ಅನುಭವದ ರುಚಿಯನ್ನು ಸೆರೆಮನೆಯಲ್ಲಿಯೇ ಸವಿದರು. ಇದಕ್ಕೆ ಕಾರಣ ಅವರ ಶರೀರಗಳಿಗೆ ಬಂಧನವಿದ್ದಿತೇ ಹೊರತು, ಅವರ ಆತ್ಮಗಳಿಗಲ್ಲ. ಅವರ ಆತ್ಮ ಕ್ರಿಸ್ತನಲ್ಲಿ ಸ್ವತಂತ್ರವಾಗಿದ್ದಿತು. ಈ ಲೋಕದಲ್ಲಿ ಅನೇಕ ವಿಧವಾದ ಕಷ್ಟ ಸಂಕಟ, ಹೋರಾಟ, ಶೋಧನೆಗಳು ಇರುವವು. ದೇವರು ನಮಗೆ ಕಷ್ಟ ರಹಿತ ಜೀವನವನ್ನು ಎಂದೂ ವಾಗ್ದಾನ ಮಾಡಲಿಲ್ಲ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ (ಯೋಹಾ.16:33) ಎಂದು ಕರ್ತನು ಹೇಳುತ್ತಾನೆ. ನಿಮ್ಮ ಆತ್ಮಗಳು ಕ್ರಿಸ್ತನಲ್ಲಿ ಸ್ವತಂತ್ರವಾಗಿರುವಾಗ, ಈ ಲೋಕದ ಯಾವದೇ ಶ್ರಮೆ ಸಂಕಟಗಳ ಮಧ್ಯದಲ್ಲಿಯೂ, ನಿಮ್ಮ ಹೃದಯವು ಸಂತೋಷದಿಂದ ಉಕ್ಕಿ ಹೊಸ ಹೊಸ ಗೀತೆಗಳು ನೀರಿನ ಚಿಲುಮೆಯಂತೆ ಹರಿದು ಬರುವವು. ಕ್ರಿಸ್ತನೊಂದಿಗೆ ಜಯಗೀತ ಹಾಡುವಿರಿ.

_*ನೆನಪಿಗೆ*_ : _“ಚೀಯೋನ್ ಪಟ್ಟಣದವರು ಹರ್ಷಿಸಲಿ: ನೀನು ನ್ಯಾಯವನ್ನು ನಿರ್ಣಯಿಸಿದ್ದರಿಂದ
ಯೆಹೂದ ಸೀಮೆಯ ನಿವಾಸಿಗಳು ಆನಂದಪಡಲಿ.” (ಕೀರ್ತ.48:11)._

━━━━━━━
‍🗨 Watch and be Blessed.
https://youtu.be/Ja9jiGL0ygM

👍 *Like* | 🔄 *Share*
🔔 *Subscribe*
💬 *Share with your friends!* 😇

ದೇವರ ವಾಕ್ಯವನ್ನು ದೈನಂದಿನ ಜೀವನದ ಅಂಗವಾಗಿಸಲು ಇಂದೇ ನಮ್ಮೊಂದಿಗೆ ಭಾಗಿಯಾಗಿರಿ.
ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರಿ! ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ!

📖 *ಅನುದಿನದ ಆಹಾರ*⏰ ಸೆಪ್ಟೆಂಬರ್ *23*, 2025, 🗓 ಮಂಗಳವಾರ👉🏼 *ತಂದೆಯ ಹೆಸರು!*🔖 _ಇಂದಿನ ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಪರಮಗೀತ 4,5*ಸಂಜೆ:...
23/09/2025

📖 *ಅನುದಿನದ ಆಹಾರ*
⏰ ಸೆಪ್ಟೆಂಬರ್ *23*, 2025,
🗓 ಮಂಗಳವಾರ

👉🏼 *ತಂದೆಯ ಹೆಸರು!*

🔖 _ಇಂದಿನ ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಪರಮಗೀತ 4,5*
ಸಂಜೆ: *ಗಲಾ 2*

_*“ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ ಇದ್ದರು; ಅವರವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು.” (ಪ್ರಕ.14:1).*_

ಯಜ್ಞದ ಕುರಿಮರಿಯಾದಾತನೊಂದಿಗೆ ಚೀಯೋನ್ ಪರ್ವತದಲ್ಲಿ ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ ಮಂದಿಯನ್ನು ಅಪೆÇ.ಯೋಹಾನನು ತನ್ನ ದರ್ಶನದಲ್ಲಿ ಕಂಡನು. ಅವರ ಹಣೆಯ ಮೇಲೆ ತಂದೆಯ ಹೆಸರು ಬರೆಯಲ್ಪಟ್ಟಿತ್ತು. ಹಾಗೆ ಬರೆಯಲು ಇವರಿಗೆ ಇದ್ದ ಅರ್ಹತೆಯಾದರೂ ಏನು? ಇವರು ಈ ಭೂಮಿಯಲ್ಲಿ ಜೀವಿಸಿದ್ದಾಗ ತಂದೆಯ ಸ್ವಭಾವವನ್ನೂ, ಗುಣಗಳನ್ನೂ ಹೊಂದಿದವರಾಗಿದ್ದರು. ತಂದೆಯ ಸ್ಥಾನ ಬಹಳ ದೊಡ್ಡದು. ಅಬ್ರಹಾಮ, ಇಸಾಕ ಯಾಕೋಬ ಇವರುಗಳು ಮೂಲಪಿತೃಗಳೆಂದು ಕರೆಯಲ್ಪಟ್ಟರು. ತಂದೆಗೆ ಇದ್ದಂತಹ ಅಭಿಷೇಕ ಇವರ ಮೇಲೆ ಇತ್ತು. ತಮ್ಮ ಮಕ್ಕಳಿಗೆ ಒಳ್ಳೆಯ ಆಶೀರ್ವಾದಗಳನ್ನು ಬಿಟ್ಟುಹೋದರು. ಇವರಿಗೆ ಮೊದಲು ಇದ್ದ ದೇವಜನರಾಗಿದ್ದ ಹನೋಕ, ನೋಹಾರಂಥವರ ಮೇಲೆ ಮೂಲ ಪಿತೃಗಳ ಅಭಿಷೇಕ ಸುರಿಸಲ್ಪಟ್ಟಿರಲಿಲ್ಲ. ಅಬ್ರಹಾಮನ ಕಾಲದಿಂದೀಚೆಗೆ ತಂದೆಯ ಅಭಿಷೇಕ ಸುರಿಸಲ್ಪಟ್ಟಿದ್ದರಿಂದ ಕರ್ತನು ಅವರ ಸಂತತಿಯ ಮೇಲೆ ಕೃಪೆ ತೋರಿಸಿ ಪರಾಂಬರಿಸಿದನು.

ಹೊಸ ಒಡಂಬಡಿಕೆಯಲ್ಲಿ ಅಪೆÇ.ಪೌಲನ ಮೇಲೆ ಆ ತಂದೆಯ ಅಭಿಷೇಕ ಇದ್ದಿತು. ಆತ್ಮೀಕ ಮಕ್ಕಳನ್ನು ಪೌಲನು ಹೊಂದಿದ್ದನು. ತಿಮೊಥೆಯನೂ, ತೀತನೂ, ಅವನ ಆತ್ಮೀಕ ಮಕ್ಕಳಾಗಿದ್ದರು. ಅವರಿಗೆ ಶಿಷ್ಯತ್ವವನ್ನು ಅಭ್ಯಾಸ ಮಾಡಿಸಿ ಕ್ರಿಸ್ತನಲ್ಲಿ ನೆಲೆಸಿರುವಂತೆ ಮಾಡಿದನು. ಒಬ್ಬನು ತಂದೆಯ ಅಭಿಷೇಕವನ್ನು ಹೊಂದುವಾಗ, ಅವನು ವಿಶ್ವಾಸಿಗಳನ್ನು ಪ್ರೀತಿಸಿ, ಅವರಿಗಾಗಿ ಆತ್ಮಭಾರದಿಂದಲೂ, ಕಣ್ಣೀರಿನಿಂದಲೂ ಪ್ರಾರ್ಥಿಸಿ ದೈವೀಕ ಆಲೋಚನೆಗಳನ್ನು ಹೇಳುವನು. ಅದೇ ರೀತಿಯಾಗಿ ಸಹೋದರಿಯರಿಗೆ, ಆತ್ಮೀಕವಾದ ತಾಯಿಯ ಅಭಿಷೇಕ ಇರಬೇಕು. ಹವ್ವಳು ಜೀವಿಸುವವರಿಗೆಲ್ಲಾ ತಾಯಿಯಾಗಿ ಇದ್ದರೂ, ಸಾರಳು ವಿಶ್ವಾಸಿಗಳಿಗೆಲ್ಲಾ ತಾಯಿಯೆಂದು ಕರೆಯಲ್ಪಟ್ಟಳು. ದೆಬೋರಳು ತನ್ನನ್ನು ಕುರಿತು, ನಾನು ಇಸ್ರಾಯೇಲ್ಯರಲ್ಲಿ ತಾಯಿಯಂತೆ ಎದ್ದು ಬರುವವರೆಗೆ ಇಸ್ರಾಯೇಲ್ ಗ್ರಾಮಗಳು ಹಾಳು ಬಿದ್ದಿದ್ದವು ಎಂದು ಹೇಳುತ್ತಾಳೆ. (ನ್ಯಾಯ.5:7). ಈಗಿನ ಕಾಲದಲ್ಲಿ ಪ್ರಸಂಗಿಗಳು ದೇವಸೇವಕರುಗಳಿಗೇನೂ ಕೊರತೆ ಇಲ್ಲ. ಆದರೆ ಆತ್ಮೀಕ ತಂದೆಗಳೆಂದು ಕರೆಯಲ್ಪಡುವವರು ಕೆಲವರು ಮಾತ್ರ. ಅವರ ಮೇಲೆ ತಂದೆಯ ಅಭಿಷೇಕವಿರುವದರಿಂದ ವಿಶ್ವಾಸಿಗಳನ್ನೂ, ಜೊತೆ ಸೇವಕರನ್ನು ತಂದೆಯಂತೆ ಆದರಿಸುತ್ತಾರೆ. ಅಪೆÇ.ಪೌಲನು, ನಿಮಗೆ ಕ್ರಿಸ್ತನಲ್ಲಿ ಉಪಾಧ್ಯಾಯರು ಸಾವಿರಾರು ಮಂದಿ ಇದ್ದರೂ, ತಂದೆಗಳು ಬಹುಮಂದಿ ಇಲ್ಲ, ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತಯೇಸುವಿನಲ್ಲಿ ಪಡೆದೆನು (1ಕೊರಿಂ.4:15) ಎಂದು ಹೇಳುತ್ತಾನೆ.

_*ನೆನಪಿಗೆ*_ : _“ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತಯೇಸುವಿನಲ್ಲಿ ಪಡೆದೆನು, ಆದುದರಿಂದ ನನ್ನನ್ನು ಅನುಸರಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.” (1ಕೊರಿಂ.4:15,16)._

━━━━━━━
👁‍🗨 Watch and be Blessed.
https://youtu.be/A6974TTfPp0

👍 *Like* | 🔄 *Share*
🔔 *Subscribe*
💬 *Share with your friends!* 😇

ದೇವರ ವಾಕ್ಯವನ್ನು ದೈನಂದಿನ ಜೀವನದ ಅಂಗವಾಗಿಸಲು ಇಂದೇ ನಮ್ಮೊಂದಿಗೆ ಭಾಗಿಯಾಗಿರಿ.
ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರಿ! ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ!

📖 *ಅನುದಿನದ ಆಹಾರ*⏰ ಸೆಪ್ಟೆಂಬರ್ *22*, 2025, 🗓 ಸೋಮವಾರ👉🏼 *ಚೀಯೋನ್ ಪರ್ವತ! *🔖 _ಇಂದಿನ ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಪರಮಗೀತ 1,2,3*ಸಂ...
22/09/2025

📖 *ಅನುದಿನದ ಆಹಾರ*
⏰ ಸೆಪ್ಟೆಂಬರ್ *22*, 2025,
🗓 ಸೋಮವಾರ

👉🏼 *ಚೀಯೋನ್ ಪರ್ವತ! *

🔖 _ಇಂದಿನ ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಪರಮಗೀತ 1,2,3*
ಸಂಜೆ: *ಗಲಾ 1*

_*“ನಾನು ನೋಡಲಾಗಿ ಯಜ್ಞದ ಕುರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರುವದನ್ನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ ಮಂದಿ ಇದ್ದರು.” (ಪ್ರಕ.14:1).*_

ಒಂದೊಂದು ದೇಶಕ್ಕೂ ಒಂದೊಂದು ರಾಜಧಾನಿ ಇರುವದು, ಆ ನಗರದಲ್ಲೇ ದೇಶವನ್ನು ಆಳುವವರು, ಮುಖ್ಯಸ್ಥರು ಇರುತ್ತಾರೆ. ರಾಜಧಾನಿ ಎನಿಸುವ ನಗರ ಬಹಳ ಮುಖ್ಯವಾದದ್ದು ಪರಲೋಕದಲ್ಲಿಯೂ ಹೊಸ ಆಕಾಶ, ಹೊಸಭೂಮಿ, ಹೊಸ ಯೆರೂಸಲೇಮು, ಗಾಜಿನ ಸಮುದ್ರ ಎಂದು ಹಲವಾರು ಸ್ಥಳಗಳಿದ್ದರೂ, ಅದರ ರಾಜಧಾನಿ ಚೀಯೋನ್ ಪರ್ವತವಾಗಿದೆ. ಅಲ್ಲಿಯೇ ನಮ್ಮ ತಂದೆಯಾದ ದೇವರು ವಾಸಿಸುವನು. ಆತನ ಬಲಪಾಶ್ರ್ವದಲ್ಲಿ ಯೇಸುಕ್ರಿಸ್ತನು ಕುಳಿತಿರುವನು. ಅಲ್ಲಿಂದ ಸರ್ವಲೋಕಗಳನ್ನು ಆಳುವನು. ಆತನನ್ನು ಪರಲೋಕದಲ್ಲಿರುವ ನಮ್ಮ ತಂದೆಯೇ ಎಂದು ನಾವು ಪ್ರೀತಿಯಿಂದ ಕರೆದು ಪ್ರಾರ್ಥಿಸುತ್ತೇವೆ. ಆ ಪರಲೋಕದ ವಾಸಸ್ಥಳಕ್ಕೆ ಕ್ರಿಸ್ತನೇ ಮೂಲೆಗಲ್ಲಾಗಿರುವನು.

ಪ್ರವಾದಿಯಾದ ಯೆಶಾಯನು ತನ್ನ ಪ್ರವಾದನೆಯಲ್ಲಿ ಹೀಗೆ ಹೇಳುತ್ತಾನೆ, ಇಗೋ, ಪರೀಕ್ಷಿತವಾಗಿಯೂ ಮಾನ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಅಸ್ತಿವಾರವನ್ನಾಗಿ ಇಡುತ್ತೇನೆ ಭರವಸವಿಡುವವನು ಆತುರ ಪಡನು ಎಂದು. (ಯೆಶಾ.28:16). ಯೆಶಾಯನು ಪ್ರವಾದಿಸಿದ್ದು ಮಾತ್ರವಲ್ಲ ಅವನಲ್ಲಿ ಆ ನಂಬಿಕೆಯೂ ಇದ್ದಿತು. ಆಹಾ ನಾನೂ ನನಗೆ ಕರ್ತನು ದಯಪಾಲಿಸಿರುವ ಮಕ್ಕಳೂ ಚೀಯೋನ್ ಪರ್ವತದಲ್ಲಿ ವಾಸವಾಗಿರುವ ಸೇನಾಧೀಶ್ವರನಾದ ಕರ್ತನಿಂದುಂಟಾದ ಗುರುತುಗಳಾಗಿಯೂ, ಅದ್ಭುತಗಳಾಗಿಯೂ ಇಸ್ರಾಯೇಲ್ಯರ ಮಧ್ಯದಲ್ಲಿದ್ದೇವೆ ಎಂದು (ಯೆಶಾ.8:18)ರಲ್ಲಿ ಹೇಳುತ್ತಾನೆ. ಕರ್ತನಾದ ಯೇಸುಕ್ರಿಸ್ತನು ಮಾರ್ಥಮರಿಯಳ ಮನೆಯಲ್ಲಿ ಆತನಿಗೆ ಔತಣವೇರ್ಪಡಿಸಿದ್ದರಿಂದ ಅವರ ಬಳಿ ಬಂದು ಒಂದು ದಿನ ತಂಗಿದ್ದನು, ಜಕ್ಕಾಯನ ಮನೆಯಲ್ಲಿ ಒಂದು ದಿನ ತಂಗಿದ್ದನು. ಆದರೆ ನಮ್ಮೊಂದಿಗಾದರೋ ಎಂದೆಂದಿಗೂ ನೆಲೆಸಿರುವನು. ನಾವು ಆತನೊಂದಿಗೆ ಜೀವಿಸುತ್ತೇವೆ. ಅಪೊ.ಪೌಲನು ಚೀಯೋನ್ ಪರ್ವತವನ್ನು ತೋರಿಸುತ್ತಾ ನಾವಾದರೋ ಪರಲೋಕ ಸಂಸ್ಥಾನದವರು ಎಂದು ಹೇಳುತ್ತಾನೆ (ಫಿಲಿ.3:20). ದೇವಮಕ್ಕಳೇ, ನೀವು ಯಜ್ಞದ ಕುರಿಮರಿಯಾದಾತನೊಂದಿಗೆ ಕೋಟ್ಯಾನುಕೋಟಿ ದೇವದೂತರುಗಳೊಂದಿಗೆ ಆ ಪ್ರಕಾಶಮಾನವಾದ ದೇಶದಲ್ಲಿ ನಿಲ್ಲುವಿರಾ? ಎಂದೆಂದಿಗೂ ಆ ಪರಿಶುದ್ಧ ಪರ್ವತದಲ್ಲಿ ವಾಸಿಸುವಿರಾ?

_*ನೆನಪಿಗೆ*_ : _“ಕರ್ತನೇ ನಿನ್ನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾವನು? ನಿನ್ನ ಪರಿಶುದ್ಧ ಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು?” (ಕೀರ್ತ.15:1)._

━━━━━━━
👁‍🗨 Watch and be Blessed.
https://youtu.be/YT3pGiSTU7E

👍 *Like* | 🔄 *Share*
🔔 *Subscribe*
💬 *Share with your friends!* 😇

ದೇವರ ವಾಕ್ಯವನ್ನು ದೈನಂದಿನ ಜೀವನದ ಅಂಗವಾಗಿಸಲು ಇಂದೇ ನಮ್ಮೊಂದಿಗೆ ಭಾಗಿಯಾಗಿರಿ.
ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರಿ! ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ!

📖 *ಅನುದಿನದ ಆಹಾರ*⏰ ಸೆಪ್ಟೆಂಬರ್ *21*, 2025, 🗓 ಭಾನುವಾರ👉🏼 *ಅಮೂಲ್ಯವಾದದ್ದು!*🔖 _ಇಂದಿನ ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಪ್ರಸಂಗಿ 10, 11...
21/09/2025

📖 *ಅನುದಿನದ ಆಹಾರ*
⏰ ಸೆಪ್ಟೆಂಬರ್ *21*, 2025,
🗓 ಭಾನುವಾರ

👉🏼 *ಅಮೂಲ್ಯವಾದದ್ದು!*

🔖 _ಇಂದಿನ ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಪ್ರಸಂಗಿ 10, 11, 12*
ಸಂಜೆ: *2 ಕೊರಿಂ. 13*

_*“ಇಗೋ, ಚೀಯೋನಿನಲ್ಲಿ ಮೂಲೆಗಲ್ಲನ್ನು ಇಡುತ್ತೇನೆ; ಅದು ಆಯಲ್ಪಟ್ಟದ್ದು ಮಾನ್ಯವಾದದ್ದು;” (1ಪೇತ್ರ.2:6).*_

ಮನುಷ್ಯರ ದೃಷ್ಟಿಯಲ್ಲಿ ಅಮೂಲ್ಯವಾದವುಗಳು, ಅನೇಕವಾದವುಗಳು ಉಂಟು. ಆದರೆ ಕಾಲಕಳೆದಂತೆಲ್ಲಾ ಅವು ತಮ್ಮ ಬೆಲೆಯನ್ನು ಕಳೆದುಕೊಳ್ಳುತ್ತವೆ. ಒಂದು ಕಾಲದಲ್ಲಿ ಮಾನ್ಯರಾದವರೆಂದು ಕಂಡವರು ಇಂದು ಕಸವಾಗಿ ಕಾಣಲ್ಪಡುವರು! ಆದರೆ ಕರ್ತನ ದೃಷ್ಟಿಯಲ್ಲಿ ಮಾನ್ಯವಾದವುಗಳು ಎಂದಿಗೂ ತಮ್ಮ ಬೆಲೆಯನ್ನು ಕಳೆದುಕೊಳ್ಳುವದಿಲ್ಲ. ಅವು ಯಾವದೆಂದು ಧ್ಯಾನಿಸೋಣ.

(1) ಲೋಕದ ದೃಷ್ಟಿಯಲ್ಲಿ ಒಡವೆ ವಸ್ತ್ರಗಳು ಅಮೂಲ್ಯವಾದವುಗಳು. ಆದರೆ ಕರ್ತನ ದೃಷ್ಟಿಯಲ್ಲಿ ಸಾತ್ವಿಕವಾದ ಶಾಂತ ಮನಸ್ಸು ಅಮೂಲ್ಯವಾದದ್ದು. (1ಪೇತ್ರ.3:4,5). ಶಾಂತರು ಧನ್ಯರು, ಅವರು ಭೂಮಿಗೆ ಬಾಧ್ಯರಾಗುವರು. (ಮತ್ತಾ.5:5).

(2) ಲೋಕದ ದೃಷ್ಟಿಯಲ್ಲಿ ಮುತ್ತು ಅಮೂಲ್ಯವಾದದ್ದು. ಆದರೆ ಕರ್ತನ ದೃಷ್ಟಿಯಲ್ಲಿ ದೈವೀಕಜ್ಞಾನ ಅಮೂಲ್ಯವಾದದ್ದು. ಮುತ್ತುಗಳನ್ನು ಸಂಪಾದಿಸುವದಕ್ಕಿಂತಲೂ ಜ್ಞಾನವನ್ನು ಸಂಪಾದಿಸುವದು ಎಷ್ಟೋ ಕಷ್ಟ! (ಯೋಬ.28:18) ಎಂದು ಸತ್ಯವೇದ ಹೇಳುತ್ತದೆ. ಪರಲೋಕ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು ತನ್ನ ಬದುಕನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು ಎಂದು ಸತ್ಯವೇದ ಹೇಳುತ್ತದೆ. (ಮತ್ತಾ.13:45-46). ಅಪೆÇ.ಪೌಲನು ಕ್ರಿಸ್ತನನ್ನು ಅಮೂಲ್ಯವಾದ ಮುತ್ತಾಗಿ ಕಂಡನು. ಆದ್ದರಿಂದಲೇ, ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವದೇ ಶ್ರೇಷ್ಠವೆಂದೆಣಿಸಿ ನಾನು ಎಲ್ಲವನ್ನೂ ನಷ್ಟವೆಂದೆಣಿಸುತ್ತೇನೆ, ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅದನ್ನು ಕಸವೆಂದೆಣಿಸುತ್ತೇನೆ (ಫಿಲಿ.3:8) ಎಂದು ಹೇಳುತ್ತಾನೆ.

(3) ಲೋಕದ ದೃಷ್ಟಿಯಲ್ಲಿ ಆಸ್ತಿ ಅಂತಸ್ತುಗಳು ಬಹಳ ಅಮೂಲ್ಯವಾದವುಗಳು. ಆದರೆ ನಮಗಾದರೋ ನಮಗಾಗಿ ಶಿಲುಬೆಯನ್ನು ಹೊತ್ತು ಶ್ರಮೆಯನ್ನು ಅನುಭವಿಸಿದ ಕ್ರಿಸ್ತನೇ ಆಮೂಲ್ಯನಾದವನು. ನಮಗಾಗಿ ತನ್ನ ಅಮೂಲ್ಯವಾದ ರಕ್ತವನ್ನು ಚೆಲ್ಲಿರುವನು. (1ಯೋಹಾ.1:7). ಆತನೇ ನಮ್ಮ ನಂಬಿಕೆಗೆ ಮೂಲೆಗಲ್ಲಾಗಿರುವನು. (1ಪೇತ್ರ.2:6). ಕ್ರೈಸ್ತಮಾರ್ಗದಲ್ಲಿ ಅಮೂಲ್ಯವಾದವುಗಳೆಂದರೆ, ಪಾಪಕ್ಷಮಾಪಣೆ. ಪರಿಶುದ್ಧಾತ್ಮನ ಅಭಿಷೇಕ, ದೈವೀಕ ಸಂತೋಷ, ಸಮಾಧಾನ, ನಿತ್ಯತ್ವ, ಪರಲೋಕದ ಆಶೀರ್ವಾದಗಳೇ ಆಗಿವೆ.

ದೇವಮಕ್ಕಳೇ, ಈ ಲೋಕದವರ ದೃಷ್ಟಿಯಲ್ಲಿ ಸಾಧಾರಣದವರಾಗಿದ್ದಾಗ್ಯೂ, ಕರ್ತನ ದೃಷ್ಟಿಯಲ್ಲಿ ನೀವು ಅಮೂಲ್ಯರಾದವರಾಗಿದ್ದೀರಿ. ನಿಮ್ಮ ಹಣೆಗಳ ಮೇಲೆ ತನ್ನ ನಾಮವನ್ನು ಮುದ್ರಿಸಿ ಮಾನ್ಯರನ್ನಾಗಿಸಿದ್ದಾನೆ. ಆತನು ನಿಮ್ಮಲ್ಲಿಟ್ಟಿರುವ ನಿರೀಕ್ಷೆಯನ್ನು ಎಂದೂ ವ್ಯರ್ಥಗೊಳಿಸದಿರಿ.

_*ನೆನಪಿಗೆ*_ : _“ನಿಮಗೆ ಬಿಡುಗಡೆಯಾದದ್ದು ಬೆಳ್ಳಿ ಬಂಗಾರ ಮೊದಲಾದ ನಶಿಸಿ ಹೋಗುವ ವಸ್ತುಗಳಿಂದಲ್ಲ... ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ಬಲ್ಲಿರಲ್ಲವೇ.” (1ಪೇತ್ರ.1:18-19)._

━━━━━━━
👁‍🗨 Watch and be Blessed.
https://youtu.be/uRXq7HvMD1I

👍 *Like* | 🔄 *Share*
🔔 *Subscribe*
💬 *Share with your friends!* 😇

ದೇವರ ವಾಕ್ಯವನ್ನು ದೈನಂದಿನ ಜೀವನದ ಅಂಗವಾಗಿಸಲು ಇಂದೇ ನಮ್ಮೊಂದಿಗೆ ಭಾಗಿಯಾಗಿರಿ.
ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರಿ! ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ!

📖 *ಅನುದಿನದ ಆಹಾರ*⏰ ಸೆಪ್ಟೆಂಬರ್ *20*, 2025, 🗓 ಶನಿವಾರ👉🏼 *ಚೀಯೋನ್ ಪರ್ವತಕ್ಕೆ!*🔖 _ಇಂದಿನ ಸತ್ಯವೇದ ಓದುವ ಭಾಗ_ಬೆಳಿಗ್ಗೆ: *ಪ್ರಸಂಗಿ 7, 8...
20/09/2025

📖 *ಅನುದಿನದ ಆಹಾರ*
⏰ ಸೆಪ್ಟೆಂಬರ್ *20*, 2025,
🗓 ಶನಿವಾರ

👉🏼 *ಚೀಯೋನ್ ಪರ್ವತಕ್ಕೆ!*

🔖 _ಇಂದಿನ ಸತ್ಯವೇದ ಓದುವ ಭಾಗ_
ಬೆಳಿಗ್ಗೆ: *ಪ್ರಸಂಗಿ 7, 8, 9*
ಸಂಜೆ: *2 ಕೊರಿಂ. 12*

_*“ನೀವು ಚೀಯೋನ್ ಪರ್ವತಕ್ಕೂ ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಉತ್ಸವ ಸಂಘದಲ್ಲಿ ಕೂಡಿರುವ ಕೋಟ್ಯಾನು ಕೋಟಿ ದೇವದೂತರ ಬಳಿಗೂ.......... ಬಂದಿದ್ದೀರಿ.” (ಇಬ್ರಿ.12:22-24).*_

ಕ್ರೈಸ್ತಕುಟುಂಬ ಒಂದು ಸುಂದರವಾದ, ಉನ್ನತವಾದ ಕುಟುಂಬವಾಗಿದೆ. ಒಬ್ಬನು ಕ್ರಿಸ್ತನ ಬಳಿಗೆ ಬರುವಾಗ ಅವನು ಒಂದು ಭಾಗ್ಯಕರವಾದ ಅನುಭವದೊಳಗೆ ಬರುವನು. ನಿತ್ಯ ಆಶೀರ್ವಾದಗಳನ್ನು ಎದುರು ನೋಡುತ್ತಾ ಬರುವನು. ಮೇಲಿನ ವಾಕ್ಯವನ್ನು ಓದುವಾಗ ದೇವಮಕ್ಕಳು ಸೇರಿದ ಕುಟುಂಬ ಎಷ್ಟು ಮಹಿಮೆಯಾದ ಕುಟುಂಬವಾಗಿದೆ ಎಂಬುದು ಅರಿವಾಗುವದು. ಆ ಕುಟುಂಬದಲ್ಲಿ ಬಲವುಳ್ಳ ದೇವದೂತರುಗಳಿರುವರು. ತಕ್ಕ ಸಮಯದಲ್ಲಿ ಓಡಿ ಬಂದು ನಮ್ಮ ಸಹಾಯಕ್ಕೆ ನಿಲ್ಲುವ ಊಳಿಗದ ಆತ್ಮಗಳಿರುವವು. ನಮ್ಮ ಕಾಲುಗಳು ಕಲ್ಲಿಗೆ ತಗಲದಂತೆ ನಮ್ಮನ್ನು ಎತ್ತಿಕೊಳ್ಳುವ ದೇವದೂತರುಗಳಿರುವರು.

1 ಕೊರಿಂಥ 2:9-10 ಬರೆದಿರುವಂತೆ ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧ ಮಾಡಿರುವಂಥದೆಲ್ಲವನ್ನೂ ಕಣ್ಣು ಕಾಣಲಿಲ,್ಲ ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ. ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅದನ್ನು ಪ್ರಕಟಿಸಿದನು. ಇಂದು ಅನೇಕರು ಸೈತಾನನನ್ನು ಕುರಿತು ಭಯಪಡುವರು. ಆದರೆ ಕರ್ತನ ಕುಟುಂಬದಲ್ಲಿ ತಮ್ಮ ಸಹಾಯಕ್ಕಿರುವ ದೇವದೂತರುಗಳ ಬಗ್ಗೆ ಯೋಚಿಸುವದಿಲ್ಲ. ಯಾವಾಗ ನೋಡಿದರೂ ಸೈತಾನ, ಮಂತ್ರವಾದಿ, ಮಾಟಮಂತ್ರಗಳೆಂದು ಹೇಳುತ್ತಿರುತ್ತಾರೆ ವಿನಹಃ ಅವುಗಳನ್ನೆಲ್ಲಾ ಹೊಡೆದೋಡಿಸಲು, ನಾಶಗೊಳಿಸಲು ಕರ್ತನು ಕೊಟ್ಟಿರುವ ದೇವದೂತರುಗಳ ಬಗ್ಗೆ ಚಿಂತಿಸುವದಿಲ್ಲ. ಸೈತಾನನು ಈ ಭೂಮಿಗೆ ತಳ್ಳಲ್ಪಟ್ಟಾಗ ತನ್ನೊಂದಿಗೆ ಮೂರರಲ್ಲಿ ಒಂದು ಭಾಗ ದೇವದೂತರನ್ನು ತನ್ನೊಂದಿಗೆ ಎಳೆದುಕೊಂಡನು. ಇನ್ನು ಉಳಿದದ್ದು ಎರಡು ಭಾಗ. ಸೈತಾನನು ಒಬ್ಬ ಪಿಶಾಚನನ್ನು ನಿಮಗೆ ವಿರೋಧವಾಗಿ ಕಳುಹಿಸಿದರೆ, ಕರ್ತನಾದರೋ ನಿಮ್ಮನ್ನು ಕಾಪಾಡಲು, ಶತ್ರುವಿನ ಕ್ರಿಯೆಗಳನ್ನು ಅಳಿಸಲು, ಎರಡರಷ್ಟು ದೇವದೂತರುಗಳನ್ನು ಕಳುಹಿಸುವನು ಎಂಬುದನ್ನು ಮರೆಯದಿರಿ. ಆದ್ದರಿಂದಲೇ ದೇವಮಕ್ಕಳಿಗೆ ಎಂದೆಂದಿಗೂ ಜಯವುಂಟು. ಒಮ್ಮೆ ಎಲೀಷನ ವಿರೋಧವಾಗಿ ಒಬ್ಬ ರಾಜನು ಸೈನ್ಯದೊಂದಿಗೆ ಬಂದು ಎಲೀಷನಿದ್ದ ಪಟ್ಟಣವನ್ನು ಸುತ್ತುವರೆದನು. ಅದನ್ನು ನೋಡಿ ಭಯಭ್ರಾಂತನಾದ ತನ್ನ ಸೇವಕನನ್ನು ನೋಡಿ ಎಲೀಷನು, ಹೆದರಬೇಡ, ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ (2ಅರ.6:16) ಅಂದನು. ನೀನು ಹೋಗುವಲ್ಲೆಲ್ಲಾ ನಿನ್ನನ್ನು...... ಕೈಗಳಲ್ಲಿ ಎತ್ತಿಕೊಳ್ಳುವರು (ಕೀರ್ತ.91:11-12) ಎಂದು ಕೀರ್ತನೆಗಾರನು ಹೇಳುತ್ತಾನೆ. ದೇವಮಕ್ಕಳೇ, ನೀವು ಕರ್ತನ ಕುಟುಂಬದವರು ಹೆದರದೆ ಧೈರ್ಯವಾಗಿ ಸೈತಾನನನ್ನು ಎದುರಿಸಿರಿ.

_*ನೆನಪಿಗೆ*_ : _“ಸೇನಾಧೀಶ್ವರನಾದ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬ ವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ.” (ಕೀರ್ತನೆ.46:11)._

━━━━━━━
‍🗨 Watch and be Blessed.
https://youtu.be/WLqGxSE3Gjs

👍 *Like* | 🔄 *Share*
🔔 *Subscribe*
💬 *Share with your friends!* 😇

ದೇವರ ವಾಕ್ಯವನ್ನು ದೈನಂದಿನ ಜೀವನದ ಅಂಗವಾಗಿಸಲು ಇಂದೇ ನಮ್ಮೊಂದಿಗೆ ಭಾಗಿಯಾಗಿರಿ.
ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರಿ! ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ!

Address

1, 24th Cross Dead End, Ejipura
Bangalore
560047

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 3pm - 5pm

Telephone

+91 80 25712448

Alerts

Be the first to know and let us send you an email when Anudhinada Ahara - ಅನುದಿನದ ಆಹಾರ posts news and promotions. Your email address will not be used for any other purpose, and you can unsubscribe at any time.

Contact The Business

Send a message to Anudhinada Ahara - ಅನುದಿನದ ಆಹಾರ:

Share

Category