Anudhinada Ahara - ಅನುದಿನದ ಆಹಾರ

Anudhinada Ahara - ಅನುದಿನದ ಆಹಾರ Through this Daily Bread in Kannada, this magazine is ordained by God our Saviour to Send the Good News of Life to the People Of Karnataka. Monthly Magazine

ಅನುದಿನದ ಆಹಾರ 📖🌿ಆಗಸ್ಟ್ 9, 2025, ಶನಿವಾರಕೊಡುವೆನು!ಇಂದಿನ ಸತ್ಯವೇದ ಓದುವ ಭಾಗ• ಬೆಳಿಗ್ಗೆ:  ಕೀರ್ತನೆ 77,78• ಸಂಜೆ:  ರೋಮಾ. 10       “ಇ...
09/08/2025

ಅನುದಿನದ ಆಹಾರ 📖🌿
ಆಗಸ್ಟ್ 9, 2025, ಶನಿವಾರ

ಕೊಡುವೆನು!

ಇಂದಿನ ಸತ್ಯವೇದ ಓದುವ ಭಾಗ
• ಬೆಳಿಗ್ಗೆ: ಕೀರ್ತನೆ 77,78
• ಸಂಜೆ: ರೋಮಾ. 10
“ಇದನ್ನು ನಿನಗೆ ಕೊಡುವೆನು.” (ಆದಿ.13:17).

ಇದನ್ನು ನಿನಗೆ ಕೊಡುವೆನು ಎಂದು ಕರ್ತನು ವಾಗ್ದಾನ ಮಾಡುತ್ತಿದ್ದಾನೆ. ನೀವು ಒಂದು ಕೆಲಸಕ್ಕಾಗಿಯೋ ಒಂದು ಮನೆಗಾಗಿಯೋ, ನಿಮ್ಮ ಮಕ್ಕಳ ಮದುವೆಗಾಗಿಯೋ, ಒಂದು ಮಗುವಿಗಾಗಿಯೋ, ಅಥವಾ ಆರೋಗ್ಯಕ್ಕಾಗಿಯೋ ಪ್ರಾರ್ಥಿಸುತ್ತಿರಬಹುದು. ಕರ್ತನು ಇದನ್ನು ನನಗೆ ಕೊಡುವನಾ? ನನ್ನ ಪ್ರಾರ್ಥನೆಗೆ ಉತ್ತರ ನೀಡುವನಾ? ಎಂದು ಚಿಂತಿಸುತ್ತಿರಬಹುದು. ಕರ್ತನು ನಿನಗೆ ಇದನ್ನು ಕೊಡುವೆನು ಎಂದು ವಾಗ್ದಾನ ಮಾಡುತ್ತಿದ್ದಾನೆ. ಅಧೈರ್ಯಗೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ, ವಾಗ್ದಾನ ಮಾಡಿದಾತನು ನಂಬಿಗಸ್ತನು, ತಡವಾಗಿ ಕಂಡರೂ ಪ್ರತಿಯೊಂದು ಆಯಾಕಾಲಕ್ಕೆ ತಕ್ಕಂತೆ ಕಾರ್ಯಗಳನ್ನು ನಡೆಸುವನು. ನೀವು ಆಲೋಚಿಸುವದಕ್ಕಿಂತಲೂ ಬೇಡಿಕೊಳ್ಳುವದಕ್ಕಿಂತಲೂ ಅಧಿಕವಾಗಿ ನಿಮ್ಮ ಬೇಡಿಕೆಗಳನ್ನು ಪೂರೈಸುವನು. ಅನೇಕ ವೇಳೆಗಳಲ್ಲಿ ಸೈತಾನನು ನಿಮ್ಮ ಹೃದಯಗಳಲ್ಲಿ ಅಪನಂಬಿಕೆಯನ್ನೂ ಅಧೈರ್ಯವನ್ನೂ ತಂದುಹಾಕಬಹುದು. ಆದರೆ ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು. (ಕೀರ್ತ.55:22). ಅಂತಹ ಸಮಯಗಳಲ್ಲಿ ಕರ್ತನನ್ನು ಸ್ತುತಿಸಲು ಆರಂಭಿಸಿರಿ.

ಇದನ್ನು ನಿನಗೆ ಕೊಡುವೆನು ಎಂದು ಕರ್ತನು ವಾಗ್ದಾನಮಾಡಿದ ಕಾನಾನನ್ನು ಸ್ವತಂತ್ರಿಸಿಕೊಳ್ಳಲು ಅಬ್ರಹಾಮನು ಎರಡು ಕಾರ್ಯಗಳನ್ನು ಮಾಡಬೇಕಾಗಿತ್ತು. ದಕ್ಷಿಣೋತ್ತರ, ಪೂರ್ವಪಶ್ಚಿಮಗಳ ಕಡೆಗೆ ಕಣ್ಣೆತ್ತಿ ನೋಡಬೇಕಾಗಿತ್ತು (ಆದಿ.13:14) ಮತ್ತು ಅವನು ಎದ್ದು ದೇಶದ ಎಲ್ಲಾ ಕಡೆಗಳಲ್ಲಿ ತಿರುಗಾಡಬೇಕಾಗಿತ್ತು (ಆದಿ.13:17). ಕರ್ತನು ಹಾಲುಜೇನು ಹರಿಯುವ ದೇಶವನ್ನು ವಾಗ್ದಾನ ಮಾಡಿದನು. ಆದರೆ ಮಧ್ಯದಲ್ಲಿ ಸೈತಾನನು ಲೋಟನಿಗೆ ಸೊದೋಮ ಗೊಮೋರಗಳನ್ನು ತೋರಿಸಿದನು. ಇದೇ ಸಾಕು ಎಂದು ಲೋಟನು ನಿಂತುಬಿಟ್ಟನು. ದೇವರ ಉನ್ನತವಾದ ಆಶೀರ್ವಾದವನ್ನು ಕಳೆದುಕೊಂಡನು. ದೇವಮಕ್ಕಳೇ, ನಿಮ್ಮ ನಂಬಿಕೆಯ ಕಣ್ಣುಗಳು ಕರ್ತನು ನಿಮಗೆ ಕೊಡಲಿರುವ ಆಶೀರ್ವಾದಗಳನ್ನೇ ನೋಡುತ್ತಿರಲಿ. ಅದನ್ನು ಕರ್ತನು ನಿಮಗೆ ಕೊಡುವವರೆಗೂ ತಾಳ್ಮೆಯಿಂದ ಕಾದಿರಿ. ಯಾವ ಕಾರ್ಯಕ್ಕಾಗಿ ಕರ್ತನಲ್ಲಿ ಬೇಡುವಿರೋ, ನಗುಮುಖದಿಂದ ಸಂತೋಷದಿಂದ ದೇವರೇ, ನೀನು ಇದನ್ನು ನನಗೆ ನಿಶ್ಚಯವಾಗಿ ಕೊಡುವಿ ನಿನಗೆ ಸ್ತೋತ್ರ! ಎಂದು ಹೇಳಿರಿ. ಯೆಹೋವನಲ್ಲಿ ಸಂತೋಷಿಸುವಿ ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು. (ಕೀರ್ತ.37:4).

ನೆನಪಿಗೆ : “ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.” (ಕೀರ್ತ.37:5).

Kannada Song
ಪಾಪ ಕ್ಷಮಾಪಣೆ ನಿಶ್ಚಯವನ್ನು ಹೊಂದಿಕೊಳ್ಳಬೇಕು

Watch and be Blessed.
https://youtu.be/v2IX45Mux88

Like | 🔄 Share
Subscribe
Share with your friends! 😇

ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
ಅನುದಿನದ ಆಹಾರ ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

ನೀವು ಅನುದಿನದ ಆಹಾರ ಮಾಸಿಕ ಪತ್ರಿಕ್ಕೆಗೆ ಚಂದಾ ಹಣ ಅಥವಾ ಕರ್ತನ ಪ್ರೇರೆಪಣೆಯ ಮೆರೆಗೆ ಈ ಸೇವೆಗೆ ಕಾಣಿಕೆಯನ್ನು ಕಳುಹಿಸಲು ಬಯಸಿದರೆ GPay | Pa...
08/08/2025

ನೀವು ಅನುದಿನದ ಆಹಾರ ಮಾಸಿಕ ಪತ್ರಿಕ್ಕೆಗೆ ಚಂದಾ ಹಣ ಅಥವಾ ಕರ್ತನ ಪ್ರೇರೆಪಣೆಯ ಮೆರೆಗೆ ಈ ಸೇವೆಗೆ ಕಾಣಿಕೆಯನ್ನು ಕಳುಹಿಸಲು ಬಯಸಿದರೆ
GPay | Paytm | BHIM | UPI | PhonePe ಮೂಲಕ ಪಾವತಿಸಿ.
UPI ID : 9986571571@okbizaxis
(ದಯವಿಟ್ಟು ಎಲ್ಲಾ ಅಕ್ಷರಗಳನ್ನು ಟೈಪ್ ಮಾಡಿ)

ಅನುದಿನದ ಆಹಾರ 📖🌿ಆಗಸ್ಟ್ 8, 2025, ಶುಕ್ರವಾರಮನಸ್ಸು ಕೊಡು!ಇಂದಿನ ಸತ್ಯವೇದ ಓದುವ ಭಾಗ• ಬೆಳಿಗ್ಗೆ:  ಕೀರ್ತನೆ 74,75,76• ಸಂಜೆ:  ರೋಮಾ. 9:1...
08/08/2025

ಅನುದಿನದ ಆಹಾರ 📖🌿
ಆಗಸ್ಟ್ 8, 2025, ಶುಕ್ರವಾರ

ಮನಸ್ಸು ಕೊಡು!

ಇಂದಿನ ಸತ್ಯವೇದ ಓದುವ ಭಾಗ
• ಬೆಳಿಗ್ಗೆ: ಕೀರ್ತನೆ 74,75,76
• ಸಂಜೆ: ರೋಮಾ. 9:16-33
“ಕಂದಾ, ನನ್ನ ಕಡೆಗೆ ಮನಸ್ಸು ಕೊಡು, ನಿನ್ನ ಕಣ್ಣುಗಳು ನನ್ನ ಮಾರ್ಗಗಳಲ್ಲಿ ಆನಂದಿಸಲಿ.” (ಜ್ಞಾನೋ.23:26).

ದೇವರು ಮಾನವನಿಗಾಗಿ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಸೃಷ್ಟಿಸಿದನು. ಬೆಟ್ಟಗುಡ್ಡ ಗಿಡಮರಗಳು, ಎಲ್ಲಾ ಬಗೆಯ ಆಹಾರಧಾನ್ಯಗಳು, ಹಣ್ಣು ಹಂಪಲುಗಳು ಇವುಗಳೆಲ್ಲಾ ದೇವರು ಮಾನವನಿಗೆ ನೀಡಿರುವ ಬಳುವಳಿಯಾಗಿದೆ. ಈ ಭೂಮಿಯನ್ನು ಆಳಲು ಶರೀರವನ್ನೂ, ಈ ಲೋಕದೊಂದಿಗೆ ಸಂಬಂಧ ಇಟ್ಟುಕೊಳ್ಳಲು ಜ್ಞಾನವನ್ನೂ, ಪರಲೋಕದೊಂದಿಗೆ ಅನ್ಯೋನ್ಯತೆಯನ್ನು ಹೊಂದಿಕೊಳ್ಳಲು ಆತ್ಮವನ್ನು ಕೊಟ್ಟಿರುವನು. ಮನುಷ್ಯನು ಪಾಪಮಾಡಿದಾಗ, ಪಾಪವಿಮೋಚನೆಗಾಗಿ ತನ್ನನ್ನೇ ಯಜ್ಞವಾಗಿ ಅರ್ಪಿಸಿಕೊಂಡನು. ಪ್ರೀತಿಯನ್ನು ಸಂತೋಷವನ್ನು ಸಮಾಧಾನವನ್ನು ಕೊಟ್ಟನು. ಇವೆಲ್ಲವುಗಳನ್ನು ಕೊಟ್ಟಂತಹ ಕರ್ತನು ನಮ್ಮಿಂದ ಬಯಸುವದಾದರೂ ಏನು? ಆತನು ನಮ್ಮ ಹೃದಯವನ್ನು ಬಯಸುತ್ತಾನೆ. ನಮ್ಮ ಹೃದಯದಲ್ಲಿ ಆತನನ್ನು ಸ್ವೀಕರಿಸುವಾಗ ಸಂತೋಷದಿಂದ ಬಂದು ನಮ್ಮ ಹೃದಯವನ್ನು ತನ್ನ ಆಲಯವಾಗಿ ಮಾಡಿಕೊಳ್ಳುವನು. ಆತನು ನಮ್ಮ ದೇವರಾಗಿರುವನು, ನಾವೋ ಆತನ ಪ್ರಜೆಗಳಾಗಿರುವೆವು.

ಆದರೆ ಇಂದು ಅನೇಕರು ತಮ್ಮ ಹೃದಯವನ್ನು ಕರ್ತನ ಕಡೆಗೆ ತಿರುಗಿಸದೆ ತಮ್ಮ ತುಟಿಗಳಿಂದ ಆರಾಧನೆ ಮಾಡುತ್ತಾ ನಾಮಧೇಯ ಕ್ರೈಸ್ತರಾಗಿರುವದು ಎಷ್ಟೊಂದು ಪರಿತಾಪಕರವಾದ ಸಂಗತಿಯಾಗಿದೆ! ಈ ಜನರಾದರೋ ತಮ್ಮ ತುಟಿಗಳಿಂದ ನನ್ನನ್ನು ಘನಪಡಿಸುತ್ತಾ ಇರುವರು. ಅವರ ಹೃದಯವೋ ನನಗೆ ದೂರವಾಗಿರುವದು ಎಂದು ಕ್ರಿಸ್ತನು ಮನನೊಂದು ಹೇಳುವನು. ನೀವು ನಿಮ್ಮ ಹೃದಯವನ್ನು ಆತನಿಗೆ ಕೊಡುವದಾದರೆ ಆತನು ನಿಮ್ಮ ಹೃದಯವನ್ನು ಪರಿಶುದ್ಧಪಡಿಸುವನು. ನಿರ್ಮಲಚಿತ್ತರು ಧನ್ಯರು. ಅವರು ದೇವರನ್ನು ನೋಡುವರು (ಮತ್ತಾ.5:8) ಎಂದು ಸತ್ಯವೇದ ಹೇಳುತ್ತದೆ. ದೇವರು ನಿಮಗೆ ದುಡಿಯಲು, ಸಂಪಾದಿಸಲು ಆರೋಗ್ಯವನ್ನೂ, ಬಲವನ್ನೂ, ಜ್ಞಾನವನ್ನು ಕೊಟ್ಟಿರುವನು. ಹೀಗಿರುವಲ್ಲಿ ನಿಮ್ಮ ಆದಾಯದಲ್ಲಿ ಕರ್ತನಿಗೆ ದಶಮಾಂಶವನ್ನು ಕೊಡುವದು ನಿಮ್ಮ ಕರ್ತವ್ಯವಾಗಿದೆ. ಮಲಾಕಿ3:10ರಲ್ಲಿ ಹೇಳಲ್ಪಟ್ಟಿರುವಂತೆ ಆತನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳ ಹಿಡಿಸಲಾಗದಷ್ಟು ಸುವರವನ್ನು ಸುರಿಸುವನು. ದಶಮಾಂಶ ಕಾಣಿಕೆಯನ್ನು ಮಾತ್ರವಲ್ಲ ನಿಮ್ಮ ಸಮಯದಲ್ಲೂ ದಶಮ ಭಾಗವನ್ನು ಕೊಡಬೇಕು. ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಒಂದು ಗಂಟೆಯಾದರೂ ಕರ್ತನೊಂದಿಗೆ ಎಚ್ಚರವಾಗಿರಲು ಮರೆಯದಿರಿ. ಆತನನ್ನು ಸ್ತುತಿಸಿ ಆರಾಧಿಸಿ ಮಹಿಮ ಪಡಿಸಲು ಸಮಯವನ್ನು ಕಾದಿರಿಸಿರಿ.

ನೆನಪಿಗೆ : “ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ.... ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.” (ಲೂಕ.6:38).

Kannada Song
ಅದ್ಭುತನೇ ಅದ್ಭುತನೇ

Watch and be Blessed.
https://youtu.be/JdFvfesZ5Ks

Like | 🔄 Share
Subscribe
Share with your friends! 😇

ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
ಅನುದಿನದ ಆಹಾರ ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

ಅನುದಿನದ ಆಹಾರ 📖🌿ಆಗಸ್ಟ್ 7, 2025, ಗುರುವಾರಕರ್ತನೇ ನೀನು ಯಾರು?ಇಂದಿನ ಸತ್ಯವೇದ ಓದುವ ಭಾಗ• ಬೆಳಿಗ್ಗೆ:  ಕೀರ್ತನೆ 72,73• ಸಂಜೆ:  ರೋಮಾ. 9:...
07/08/2025

ಅನುದಿನದ ಆಹಾರ 📖🌿
ಆಗಸ್ಟ್ 7, 2025, ಗುರುವಾರ

ಕರ್ತನೇ ನೀನು ಯಾರು?

ಇಂದಿನ ಸತ್ಯವೇದ ಓದುವ ಭಾಗ
• ಬೆಳಿಗ್ಗೆ: ಕೀರ್ತನೆ 72,73
• ಸಂಜೆ: ರೋಮಾ. 9:1-15
“ಕರ್ತನೇ, ನೀನಾರು? ಎಂದು ಕೇಳಿದ್ದಕ್ಕೆ, ಕರ್ತನು- ನೀನು ಹಿಂಸೆಪಡಿಸುವ ಯೇಸುವೇ ನಾನು ಎಂದನು.” (ಅ.ಕೃ.9:5).

ಯೇಸು ಎಂಥವನೆಂದು ಜಕ್ಕಾಯನು ತಿಳಿಯಬಯಸಿದಾಗ, ಕರ್ತನು ತನ್ನನ್ನು ರಕ್ಷಕನಾಗಿ ಪ್ರಕಟಿಸಿಕೊಂಡನು. ಆದರೆ ತನ್ನ ಸುತ್ತಲು ಬೆಳಕಾಗಿ ಪ್ರಕಾಶಿಸಿದವನು ಯಾರು? ಎಂದು ಸೌಲನು ತಿಳಿಯಬಯಸಿದಾಗ, ಕರ್ತನು ತನ್ನ ಬಗ್ಗೆ ಅಧಿಕವಾಗಿ ತಿಳಿಸಲಿಲ್ಲ. ಸೌಲನ ಬಗ್ಗೆಯೇ ಹೆಚ್ಚಾಗಿ ಹೇಳಿದನು. ನೀನು ಹಿಂಸೆ ಪಡಿಸುವ ಯೇಸುವೇ ನಾನು ಎಂದು ಹೇಳಿದಾಗ ಸೌಲನ ಹೃದಯ ಒಡೆಯಿತು. ಮುಂದೆ ಮಹಿಮೆಯುಳ್ಳ ಪೌಲನಾಗಿ ಮಾರ್ಪಟ್ಟನು. ಕೆಲವರಿಗೆ ಕರ್ತನು ತನ್ನ ಗುಣಾತಿಶಯಗಳನ್ನು ತನ್ನ ಹೆಸರಿನ ಮೂಲಕ ಪ್ರಕಟಪಡಿಸುವನು. ಕರ್ತನು ಯಾರು? ಆತನು ಅದ್ಭುತ ಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು. (ಯೆಶಾ.9:6).

ಸಾಧಾರಣವಾಗಿ ವಿಶ್ವಾಸಿಗಳ ಬಳಿಯಲ್ಲಿ ಕರ್ತನು ಯಾರು? ಎಂದು ಕೇಳಿದರೆ ಆತನ ಗುಣಾತಿಶಯಗಳನ್ನು ಹೇಳುವರು ಆತನು

(1) ಒಳ್ಳೆಯವನು

(2) ಮಹಿಮೆಯುಳ್ಳವನು

(3) ಕನಿಕರವುಳ್ಳವನು

(4) ದಯೆಯುಳ್ಳವನು

(5) ಕ್ಷಮಿಸುವವನು

(6) ಮನಮರುಗುವವನು

(7) ಅಭಿಷೇಕನಾಥನು ಎಂದು ಹೇಳುವರು.

ಕರ್ತನ ಸಮೀಪಕ್ಕೆ ಬರುವಾಗ, ಆತನು ಒಳ್ಳೆಯವನೆಂದು ಸಾವಿರ ಸಲ ಹೇಳುವಂತೆ ನಮ್ಮ ಹೃದಯ ಮಿಡಿಯುತ್ತದೆ. ಕರ್ತನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ; (ಕೀರ್ತ.34:8) ಎಂದು ಕೀರ್ತನೆಗಾರನು ಹೇಳುತ್ತಾನೆ. ಭಯಂಕರವಾಗಿ ಶಿಲುಬೆಯಲ್ಲಿ ಜಡಿಯಲ್ಪಡಲು ಆತನು ತಪ್ಪಿತಸ್ಥನೂ ಅಲ್ಲ ದುಷ್ಟನೂ ಅಲ್ಲ. ಪರಿಶುದ್ಧನಾಗಿದ್ದರೂ ಸಹ ನಮ್ಮ ಪಾಪಗಳ ನಿಮಿತ್ತ ನಮಗಾಗಿ ಪಾಪ ನಿವಾರಣಾ ಯಜ್ಞವಾಗುವುದಕ್ಕಾಗಿ ಪಾಪವನ್ನೇ ಅರಿಯದ ಆತನು ಪಾಪಿಯಾದನು. ಶಿಲುಬೆಯಲ್ಲಿ ಜಡಿಯಲ್ಪಟ್ಟನು. ಆತನು ಒಳ್ಳೆಯವನು ಮಾತ್ರವಲ್ಲ ಮಹಿಮಾಸ್ವರೂಪನು. ಸರ್ವಶಕ್ತನಾದ ದೇವರು (ಆದಿ.17:1). ಆತನಿಂದಾಗದ ಕಾರ್ಯ ಒಂದೂ ಇಲ್ಲ. ಆತನ ಸೃಷ್ಟಿಯ ಬಗ್ಗೆ ಪ್ರಕೃತಿಯೇ ಸಾಕ್ಷಿ ಕೊಡುತ್ತದೆ. ಅದ್ಭುತಗಳನ್ನು ಮಾಡಲು, ರೋಗಗಳನ್ನು ಗುಣಪಡಿಸಲು, ದೆವ್ವಗಳನ್ನು ಓಡಿಸಲು, ಸತ್ತವರನ್ನು ಎಬ್ಬಿಸಲು ಶಕ್ತನಾದವನು. ಆತನು ಕೃಪೆಯಲ್ಲಿ ಐಶ್ವರ್ಯವಂತನಾದ ದೇವರು, ಆತನ ಕೃಪೆ ತಲತಲಾಂತರಗಳವರೆಗೆ ಇರುವಂಥದ್ದು. ದೇವಮಕ್ಕಳೇ ಈ ಎಲ್ಲಾ ಸ್ವಭಾವಗಳು ನಿಮ್ಮ ಜೀವಿತದಲ್ಲಿ ಕಾಣಲ್ಪಡಬೇಕು. ಆಗ ನೀವು ಕರ್ತನನ್ನು ಪ್ರತಿಬಿಂಬಿಸುವವರಾಗಿರುವಿರಿ. ನಿಮ್ಮನ್ನು ನೋಡಿದವರು ತಂದೆಯನ್ನು ನೋಡುವರು.

ನೆನಪಿಗೆ : “ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ, ನಂಬಿಕೆಯೂ ಉಳ್ಳವನು.” (ವಿಮೋ.34:6).

Kannada Song
ಪರಲೋಕ ಪ್ರಭುವರನೇ

Watch and be Blessed.
https://youtu.be/QhbsdqnQPB0

Like | 🔄 Share
Subscribe
Share with your friends! 😇

ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
ಅನುದಿನದ ಆಹಾರ ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

🌿📖 *ಅನುದಿನದ ಆಹಾರ* 📖🌿⏰ ಆಗಸ್ಟ್ *6*, 2025, ಬುಧವಾರ👉🏼 *ದ್ರಾಕ್ಷೇಬಳ್ಳಿ!*🔖 _ಇಂದಿನ ಸತ್ಯವೇದ ಓದುವ ಭಾಗ_   • ಬೆಳಿಗ್ಗೆ:  *ಕೀರ್ತನೆ 70,7...
06/08/2025

🌿📖 *ಅನುದಿನದ ಆಹಾರ* 📖🌿
⏰ ಆಗಸ್ಟ್ *6*, 2025, ಬುಧವಾರ

👉🏼 *ದ್ರಾಕ್ಷೇಬಳ್ಳಿ!*

🔖 _ಇಂದಿನ ಸತ್ಯವೇದ ಓದುವ ಭಾಗ_
• ಬೆಳಿಗ್ಗೆ: *ಕೀರ್ತನೆ 70,71*
• ಸಂಜೆ: *ರೋಮಾ.8:22-39*
════════════════════
_*“ನಾನೇ ನಿಜವಾದ ದ್ರಾಕ್ಷೇ ಬಳ್ಳಿ, ನನ್ನ ತಂದೆ ತೋಟಗಾರನು.” (ಯೋಹಾ.15:1). *_

ಕರ್ತನು ಯಾರು? ಆತನು ಸೃಷ್ಟಿಕರ್ತನಾಗಿದ್ದಾನೆ. ಕೆಲವು ವೇಳೆಗಳಲ್ಲಿ ತಂದೆಯಂತೆ ಪ್ರೀತಿ ತೋರಿಸುವನು, ಕೆಲವು ವೇಳೆಗಳಲ್ಲಿ ತಾಯಿಯಂತೆ ನಮ್ಮನ್ನು ಸಂತೈಸುವನು, ಸ್ನೇಹಿತನಂತಿರುವನು, ಹಿರಿಯ ಸಹೋದರನಂತಿರುವನು, ಬೋಧಕನಾಗಿರುವನು, ಆಲೋಚನಾ ಕರ್ತನಾಗಿರುವನು, ಘನವೈದ್ಯನಾಗಿರುವನು. ಯೇಸು ಎಂಥವನಾಗಿದ್ದಾನೆ ಎಂದು ತಿಳಿಯಲು ಜಕ್ಕಾಯನು ಆಲದ ಮರವನ್ನೇರಿದಾಗ, ಅವನಿಗೆ ತನ್ನನ್ನು ರಕ್ಷಕನನ್ನಾಗಿ ಪ್ರಕಟಿಸಿಕೊಂಡನು. (ಲೂಕ.19:4,9). ಈ ಲೋಕದ ಪಾಪವನ್ನು ಹೊತ್ತುತೀರಿಸಿದ ಯಜ್ಞದ ಕುರಿಮರಿಯಾದಾತನು, ಇನ್ನೂ ಹತ್ತಿರದಿಂದ ನೋಡುವಾಗ ಆತನು ಅಭಿಷೇಕನಾಥನಾಗಿ ಪರಿಶುದ್ಧಾತ್ಮನಿಂದಲೂ, ಅಗ್ನಿಯಿಂದಲೂ, ದೀಕ್ಷಾಸ್ನಾನ ಕೊಡುವವನಾಗಿರುವನು. ದಾವೀದನನ್ನು ಕೇಳಿದರೆ ಕರ್ತನು ನನ್ನ ಕುರುಬನಾಗಿರುವನು, ನಾನು ಆತನ ಮಂದೆಯ ಕುರಿಯಾಗಿದ್ದೇನೆ ಎಂದು ಹೇಳುವನು.

ಯೇಸುಕ್ರಿಸ್ತನು ಯೋಹಾನ 15:1ರಲ್ಲಿ ತಾನು ಯಾರು? ತಂದೆ ಯಾರು? ಎಂಬುದನ್ನು ತಿಳಿಸುತ್ತಾನೆ. ತಾನು ದಾಕ್ಷೇಬಳ್ಳಿ ಎಂದೂ, ತನ್ನ ತಂದೆ ತೋಟಗಾರನೆಂದೂ ಹೇಳುತ್ತಾನೆ. ಹಾಗಾದರೆ ವಿಶ್ವಾಸಿಗಳು ಯಾರಾಗಿದ್ದಾರೆ? ವಿಶ್ವಾಸಿಗಳು ಕೊಂಬೆಗಳಾಗಿರುವರು. ನಾನು ದಾಕ್ಷೇಬಳ್ಳಿ ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲ ಕೊಡುವನು (ಯೋಹಾ.15:5) ಎಂದು ಯೇಸು ಹೇಳುತ್ತಾನೆ. ಕರ್ತನು ಈ ಒಂದು ಉನ್ನತವಾದ ಸಂಬಂಧವನ್ನು ನಮಗೆ ಕೊಟ್ಟಿರುವಾಗ, ಆತನು ನಮ್ಮಿಂದ ಯಾವದನ್ನು ನಿರೀಕ್ಷಿಸುವನೆಂದು ಹೇಳುತ್ತಾನೆ. ಫಲ ಕೊಡದ ಕೊಂಬೆಗಳಾಗಿಯೋ ಇಲ್ಲವೇ ಕಹಿಯಾದ ಅಥವಾ ಹುಳುಕು ಹಣ್ಣುಗಳನ್ನು ಕೊಡುವ ಕೊಂಬೆಗಳಾಗಿರಬಾರದು. ಒಳ್ಳೆಯ ಫಲಕೊಡುವ ಕೊಂಬೆಗಳಾಗಿರಬೇಕು. ಒಳ್ಳೆಯ ಫಲ ಎಂದರೆ ಅದು ಆತ್ಮನ ಫಲಗಳಾದ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಶಮೆದಮೆ ಇವುಗಳೇ (ಗಲಾ.5:22). ಬಳ್ಳಿಯೊಂದಿಗೆ, ಕೊಂಬೆಗಳು ಹೆಣೆದುಕೊಂಡಿರುವಾಗ ಕೊಂಬೆಗಳು ಬಳ್ಳಿಯಲ್ಲಿರುವ ಸಾರವನ್ನು ಹೀರಿಕೊಳ್ಳುವವು. ಅದೇ ರೀತಿ ವಿಶ್ವಾಸಿಗಳು, ಕ್ರಿಸ್ತನೊಂದಿಗೆ ಐಕ್ಯತೆ ಹೊಂದಿರುವಾಗ ಆತನಲ್ಲಿರುವ ಗುಣಾತಿಶಯಗಳನ್ನು, ಆತನ ಸಾರೂಪ್ಯವನ್ನು ಹೊಂದಿಕೊಳ್ಳುವರು. ಪ್ರಿಯರೇ, ಕ್ರಿಸ್ತನೊಂದಿಗಿನ ಐಕ್ಯತೆಗೆ ನಿಮ್ಮನ್ನು ಒಪ್ಪಿಸಿಕೊಡಲು ತೀರ್ಮಾನಿಸುವಿರಾ?

_*ನೆನಪಿಗೆ*_ : _“ನೀವು ಬಹಳ ಫಲಕೊಡುವದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವದು ಮತ್ತು ನನ್ನ ಶಿಷ್ಯರಾಗುವಿರಿ.” (ಯೋಹಾ.15:8)._

━━━━━━━━━━━━━━━━━━
_Kannada Song_
_*ಯೇಸೂ ಯೇಸೂ ಒಳ್ಳೆಯವಾ*_

👁‍🗨 Watch and be Blessed.
https://youtu.be/AtaKWPHQiWU

👍 *Like* | 🔄 *Share*
🔔 *Subscribe*
💬 *Share with your friends!* 😇

ಕನ್ನಡ ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
👉🏼 *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

ಅನುದಿನದ ಆಹಾರ 📖🌿ಆಗಸ್ಟ್ 5, 2025, ಮಂಗಳವಾರಕರ್ತನ ಮುಖ!ಇಂದಿನ ಸತ್ಯವೇದ ಓದುವ ಭಾಗ• ಬೆಳಿಗ್ಗೆ:  ಕೀರ್ತನೆ 68,69• ಸಂಜೆ:  ರೋಮಾ. 8:1-21   ...
05/08/2025

ಅನುದಿನದ ಆಹಾರ 📖🌿
ಆಗಸ್ಟ್ 5, 2025, ಮಂಗಳವಾರ

ಕರ್ತನ ಮುಖ!

ಇಂದಿನ ಸತ್ಯವೇದ ಓದುವ ಭಾಗ
• ಬೆಳಿಗ್ಗೆ: ಕೀರ್ತನೆ 68,69
• ಸಂಜೆ: ರೋಮಾ. 8:1-21
“ನಾನು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದ್ದೇನಲ್ಲಾ; ಆದರೂ ನನ್ನ ಪ್ರಾಣ ಉಳಿದಿದೆ ಅಂದುಕೊಂಡು ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು.” (ಆದಿ.32:30).

ಯಾಕೋಬನ ಮನಸ್ಸಿನಲ್ಲಿ ದೇವರ ಮುಖವನ್ನು ನೋಡುವವರಾರೂ ಜೀವದಿಂದ ಬದುಕುವದು ಸಾಧ್ಯವಿಲ್ಲ ಎಂಬ ಭಾವನೆ ಇದ್ದಿತು. ಹಳೆ ಒಡಂಬಡಿಕೆಯ ಅನೇಕ ದೇವಜನರು ಹಾಗೆಯೇ ನೆನಸಿದ್ದರು. ಕರ್ತನು ದಹಿಸುವ ಅಗ್ನಿಯಾಗಿದ್ದಾನೆಂದು ಆತನನ್ನು ದರ್ಶಿಸಿದವರಾರೂ ಬದುಕಲಾರರೆಂದು ತಿಳಿದಿದ್ದರು. ಒಂದು ಪಕ್ಕದಲ್ಲಿ ನೋಡುವಾಗ ದಹಿಸುವ ಅಗ್ನಿಯೇ, ಅದೇ ಸಮಯದಲ್ಲಿ ಆತನು ಪ್ರೀತಿಸ್ವರೂಪನೂ, ಕರುಣಾಮಯನೂ, ಕನಿಕರವುಳ್ಳಾತನೂ ಆಗಿರುವನು. ಮನುಷ್ಯರೊಳಗೆ ಒಬ್ಬನು ತನ್ನ ಸ್ನೇಹಿತನೊಡನೆ ಹೇಗೆ ಮಾತಾಡುವನೋ ಹಾಗೆಯೇ ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದನು (ವಿಮೋ.33:11) ಎಂದು ಸತ್ಯವೇದ ಹೇಳುತ್ತದೆ.

ಕರ್ತನ ಮುಖದಲ್ಲಿ ಏನನ್ನು ಕಾಣಬಹುದು? ಮೊದಲನೆಯದಾಗಿ, ಆತನ ಮುಖದಲ್ಲಿ ದೇವಪ್ರಸನ್ನತೆ ಇರುವದು. ಆ ಪ್ರಸನ್ನತೆಯಿಂದ ಸಮಾಧಾನವು ಇಳಿದು ಬರುವದು. ಪ್ರತಿಬಾರಿಯೂ ಬೋಧಕರು ಸಭೆಯವರನ್ನು ಆಶೀರ್ವದಿಸುವಾಗ “ಯೆಹೋವನು ಪ್ರಸನ್ನ ಮುಖದಿಂದ ನಿಮ್ಮನ್ನು ನೋಡಿ ನಿಮ್ಮ ಮೇಲೆ ದಯವಿಡಲಿ, ಯೆಹೋವನು ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು ಶಾಂತಿಯನ್ನು ಅನುಗ್ರಹಿಸಲಿ (ಅರಣ್ಯ.6:25,26) ಎಂದು ಹೇಳುವರು. ಕರ್ತನ ಮುಖ ಪ್ರಸನ್ನತೆಯಿಂದ ಹೊರಡುವ ಸಮಾಧಾನವು ಉನ್ನತವಾದದ್ದು ಅದು ಈ ಲೋಕವು ನಿಮ್ಮಿಂದ ತೆಗೆಯಲಾಗದ ಸಮಾಧಾನ. ಆತನ ಮುಖ ಪ್ರಸನ್ನತೆಯಿಂದ ನಿಮ್ಮೊಳಗೆ ಸಂತೋಷವನ್ನು ತರುವದು. ಎರಡನೆಯದಾಗಿ ಆತನ ಮುಖದಿಂದ ಅಪರಿಮಿತವಾದ ಕೃಪಾ ಐಶ್ವರ್ಯವನ್ನು ಹೊಂದಿಕೊಳ್ಳುವಿರಿ. ಕರ್ತನ ಮುಖವನ್ನು ಹೇಗೆ ನೋಡುವದು? ಆ ಮಾರ್ಗವನ್ನು ದಾವೀದನು ಬಹಳ ಸುಂದರವಾಗಿ ಹೇಳುತ್ತಾನೆ. ನಾನಾದರೋ ನಿರಪರಾಧಿಯು, ನಿನ್ನ ಸಾನ್ನಿಧ್ಯವನ್ನು ಸೇರುವೆನು, ಎಚ್ಚತ್ತಾಗ ನಿನ್ನ ಸ್ವರೂಪದರ್ಶನದಿಂದ ತೃಪ್ತನಾಗಿರುವೆನು (ಕೀರ್ತ.17:15) ಎಂದು ಹೇಳುತ್ತಾನೆ. ದೇವಮಕ್ಕಳೇ, ಪ್ರೀತಿಯುಳ್ಳ ತಂದೆಯ ಮುಖವನ್ನು ಮಕ್ಕಳು ಬಯಸುವಂತೆ ಕರ್ತನ ಮುಖವನ್ನು ಬಯಸಿರಿ. ನಿನ್ನ ದಾಸನ ಮೇಲೆ ನಿನ್ನ ಮುಖ ಪ್ರಸನ್ನತೆಯಿರಲಿ; ನಿನ್ನ ನಿಬಂಧನೆಗಳನ್ನು ನನಗೆ ಕಲಿಸು (ಕೀರ್ತ.119:135) ಎಂದು ಕೀರ್ತನೆಗಾರನು ಹೇಳುವಂತೆ, ಕರ್ತನ ಮುಖಪ್ರಸನ್ನತೆಯನ್ನು ಸದಾ ಬಯಸಿರಿ, ಆಶೀರ್ವಾದಗಳನ್ನು ಹೊಂದಿಕೊಳ್ಳಿರಿ.

ನೆನಪಿಗೆ : “ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿರಿ. ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ.” (ಕೀರ್ತ.105:4).

Kannada Song
ಅಂಧಕಾರ ಬಲವನೆಲ್ಲಾ

Watch and be Blessed.
https://youtu.be/wz3kyaVy94E

Like | 🔄 Share
Subscribe
Share with your friends! 😇

ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
ಅನುದಿನದ ಆಹಾರ ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

ಅನುದಿನದ ಆಹಾರ 📖🌿ಆಗಸ್ಟ್ 4, 2025, ಸೋಮವಾರಒಂಟಿತನವೂ, ಕಷ್ಟಗಳು!ಇಂದಿನ ಸತ್ಯವೇದ ಓದುವ ಭಾಗ• ಬೆಳಿಗ್ಗೆ:  ಕೀರ್ತನೆ 66,67• ಸಂಜೆ:  ರೋಮಾ. 7 ...
04/08/2025

ಅನುದಿನದ ಆಹಾರ 📖🌿
ಆಗಸ್ಟ್ 4, 2025, ಸೋಮವಾರ

ಒಂಟಿತನವೂ, ಕಷ್ಟಗಳು!

ಇಂದಿನ ಸತ್ಯವೇದ ಓದುವ ಭಾಗ
• ಬೆಳಿಗ್ಗೆ: ಕೀರ್ತನೆ 66,67
• ಸಂಜೆ: ರೋಮಾ. 7
“ಹಾ, ಆ ರಾತ್ರಿಯು ಬಂಜೆಯಾಗಿ, ಅದರಲ್ಲಿ ಉತ್ಸಾಹಧ್ವನಿಯು ಉಂಟಾಗದಿರಲಿ.” (ಯೋಬ.3:7).

ಸೈತಾನನಿಂದ ಉಂಟಾದ ಶೋಧನೆಯಿಂದಾಗಿ ಭಕ್ತನಾದ ಯೋಬನು, ಒಂದೇ ದಿನದಲ್ಲಿ ತನಗಿದ್ದ ಎಲ್ಲಾ ಆಸ್ತಿಯನ್ನೂ, ಮಕ್ಕಳನ್ನೂ ಕಳೆದುಕೊಂಡನು. ಹೆಂಡತಿಯ ಅನ್ಯೋನ್ಯತೆಯಾಗಲಿ, ಪ್ರೀತಿಯಾಗಲಿ, ಆದರಣೆಯ ಮಾತುಗಳಾಗಲಿ ದೊರಕಲಿಲ್ಲ. ಅವನ ಹೆಂಡತಿ ಅವನನ್ನು ನೋಡಿ ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ? ದೇವರನ್ನು ದೂಷಿಸಿ ಸಾಯಿ ಎಂದು ಹೇಳಿದಳು. (ಯೋಬ.2:9). ಈ ಒಂಟಿತನವನ್ನು ಯೋಬನು ತನ್ನ ಮೇಲೆ ತಾನೇ ಬರಮಾಡಿಕೊಂಡದ್ದಲ್ಲ, ಸೈತಾನನು ತಂದುಹಾಕಿದಂತಹ ಒಂಟಿತನ. ಈ ಮಾರ್ಗದಲ್ಲಿ ಯೋಬನು ಸಂಕಟದಿಂದ ನಡೆಯಬೇಕಾಗಿದ್ದಿತು. ಆದರೂ ಕರ್ತನು ಈ ಒಂಟಿತನವನ್ನು ಒಂದು ದಿನ ನೀಗಿಸುವನು ಎಂಬ ನಂಬಿಕೆ ಅವನಲ್ಲಿದ್ದಿತು. ಆತನಾದರೋ ನನ್ನ ದಾರಿಯನ್ನು ಬಲ್ಲನು, ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು ಎಂದು ಹೇಳುತ್ತಾನೆ (ಯೋಬ.23:10).

ಯೋಬನ ಒಂಟಿತನದ ವೇದನೆಯನ್ನು ಮಾರ್ಪಡಿಸಲು ಕರ್ತನು ಮುಖಾಮುಖಿಯಾಗಿ ದರ್ಶನವನ್ನು ನೀಡಿದನು. ನಾನಂತೂ ನನ್ನ ವಿಮೋಚಕನು ಜೀವಸ್ವರೂಪನೆಂದು ಬಲ್ಲೆನು; ಆತನು ಕಡೆಗೆ ಧೂಳಿನ ಮೇಲೆ ಸಾಕ್ಷಿಯಾಗಿ ನಿಂತುಕೊಳ್ಳುವನು; ನನ್ನ ಚರ್ಮವು ಹೀಗೆ ಬಿರಿದು ಹಾಳಾದ ಬಳಿಕ ನಿರ್ದೇಹನಾಗಿ ದೇವರನ್ನು ನೋಡುವೆನು ಎಂದು ಯೋಬನು ಹೇಳುವನು. (ಯೋಬ.19:25-26). ಆ ದರ್ಶನವು ಯೋಬನ ಒಂಟಿತನವನ್ನು ಮಾರ್ಪಡಿಸಿತು. ದೇವಪ್ರಸನ್ನತೆಯನ್ನು ತಂದಿತು. ನಂಬಿಕೆಯನ್ನು, ಆದರಣೆಯನ್ನು ತಂದಿತು. ನಾನು ನನ್ನ ವಿಮೋಚಕನನ್ನು ನಾನೇ ನೋಡುವೆನು, ಆತನೊಂದಿಗೆ ಎಂದೆಂದಿಗೂ ಜೀವಿಸುವೆನು ಎಂದು ಹೇಳಿದನು. ಆ ದರ್ಶನದ ಮೊದಲು ಅವನು ಬಲೆಯಲ್ಲಿ ಸಿಕ್ಕಿಕೊಂಡ ಮೀನಿನಂತೆ ಹಗಲಿರುಳು ಪರಿತಪಿಸಿರಬಹುದು. ಜೀವಸ್ವರೂಪನಾದ ಕರ್ತನು, ಅವನ ಜೀವಿತದಲ್ಲಿ ಪ್ರವೇಶಿಸಿ ಸೈತಾನನ ಶೋಧನೆಗಳಿಂದ ಮುಕ್ತಿ ನೀಡಿದನು. ಒಂಟಿತನದ ವೇದನೆಯಿಂದ ಬಿಡುಗಡೆ ಮಾಡಿದನು. ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಜವಾಗಿ ನಿಮಗೆ ಬಿಡುಗಡೆಯಾಗುವದು. (ಯೋಹಾ.8:36). ಪ್ರಿಯರೇ, ಇಂದು ನೀವು ಶೋಧನೆಗೆ ಒಳಗಾಗಿರುವಿರಾ, ಯೇಸು ಕ್ರಿಸ್ತನ ದರ್ಶನ ನಿಮಗಿರಲಿ, ಆತನು ನಿಶ್ಚಯವಾಗಿ ನಿಮಗೆ ಬಿಡುಗಡೆ ಕೊಡುವನು. ಎಲ್ಲಾ ಪರಿಸ್ಥಿತಿಗಳಲ್ಲೂ ಕ್ರಿಸ್ತನಲ್ಲಿ ನಿಮ್ಮ ಹೃದಯವು ಆನಂದಿಸಲಿ.

ನೆನಪಿಗೆ : “ನನ್ನ ಸಾನ್ನಿಧ್ಯಕ್ಕೆ ಬಾ ಎಂಬ ನಿನ್ನ ಮಾತಿಗೆ ನಾನು- ಯೆಹೋವನೇ, ನಿನ್ನ ಸಾನ್ನಿಧ್ಯಕ್ಕೆ ಬರಲೇ ಬರುವೆನು ಎಂದು ಉತ್ತರ ಕೊಟ್ಟೆನು.” (ಕೀರ್ತ.27:8).

Kannada Song
ನಿನ್ನ ನನ್ನ ಸೃಷ್ಠಿಸಿದವ ಯಾರು?

Watch and be Blessed.
https://youtu.be/rpAT8NzxlfY

Like | 🔄 Share
Subscribe
Share with your friends! 😇

ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
ಅನುದಿನದ ಆಹಾರ ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

ಅನುದಿನದ ಆಹಾರ 📖🌿ಆಗಸ್ಟ್ 3, 2025, ಭಾನುವಾರಜನರಿಂದ ಬರುವ ದಂಡನೆ!ಇಂದಿನ ಸತ್ಯವೇದ ಓದುವ ಭಾಗ• ಬೆಳಿಗ್ಗೆ:  ಕೀರ್ತನೆ 63,64,65• ಸಂಜೆ:  ರೋಮಾ...
03/08/2025

ಅನುದಿನದ ಆಹಾರ 📖🌿
ಆಗಸ್ಟ್ 3, 2025, ಭಾನುವಾರ

ಜನರಿಂದ ಬರುವ ದಂಡನೆ!

ಇಂದಿನ ಸತ್ಯವೇದ ಓದುವ ಭಾಗ
• ಬೆಳಿಗ್ಗೆ: ಕೀರ್ತನೆ 63,64,65
• ಸಂಜೆ: ರೋಮಾ. 6
“ನೀನು ಈ ಹೊತ್ತು ನನ್ನನ್ನು ಸ್ವದೇಶದಿಂದ ಹೊರಡಿಸುತ್ತೀಯಲ್ಲಾ, ನಿನ್ನ ಸಾನ್ನಿಧ್ಯವು ತಪ್ಪಿತು; ನಾನು ಲೋಕದಲ್ಲಿ ಅಲೆಯುವವನೂ ದೇಶಭ್ರಷ್ಟನು ಆಗಬೇಕಾಯಿತು.” (ಆದಿ.4:14)

ಸಹೋದರ ಪ್ರೀತಿ ಇಲ್ಲದೇ, ಹೇಬೇಲನ ಮೇಲೆ ಹೊಟ್ಟೆಕಿಚ್ಚು ಪಟ್ಟು ಕೊಲೆ ಮಾಡಿದ ಕಾಯಿನನು, ಆತ್ಮೀಕ ರೀತಿಯಲ್ಲಿ ತನ್ನನ್ನು ತಾನೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಗೆ ಬಂದನು. ಅವನು ಮಾಡಿದ ಪಾಪ ಅವನನ್ನು ಒಂಟಿಯಾಗಿ ಅಲೆಯುವಂತೆ ಮಾಡಿತು. ಅನೇಕರು ಸಹೋದರ ಪ್ರೀತಿ ಇಲ್ಲದೆ, ಸಂಬಂಧಗಳನ್ನು ಗೌರವಿಸದೆ, ಚಿಕ್ಕ ಚಿಕ್ಕ ವಿಷಯಗಳಿಗೂ ಮನಸ್ಸು ಮುರಿದುಕೊಂಡು ತಮ್ಮ ಸುತ್ತಲೂ ತಾವೇ ಒಂಟಿತನದ ಕೋಟೆಯನ್ನು ಕಟ್ಟಿಕೊಳ್ಳುವರು. ಸಹೋದರ ಐಕ್ಯತೆಯ ಆಶೀರ್ವಾದಗಳನ್ನು ಕಳೆದುಕೊಳ್ಳುವರು. ಕಾಯಿನನು ಸಹೋದರ ಸಂಬಂಧವನ್ನು ಕೆಡಿಸಿಕೊಂಡದ್ದು ಮಾತ್ರವಲ್ಲ, ದೇವರಿಗೂ, ಅವನಿಗೂ ನಡುವೆ ಇದ್ದ ಸಂಬಂಧವನ್ನು ಕೆಡಿಸಿಕೊಂಡನು, ದೇವ ಸಮ್ಮುಖದಿಂದ ದೂರವಾದನು. ನಿನ್ನ ಸಾನ್ನಿಧ್ಯವು ತಪ್ಪಿತು, ನಾನು ಲೋಕದಲ್ಲಿ ಅಲೆಯುವವನೂ, ದೇಶಭ್ರಷ್ಟನೂ ಆಗಬೇಕಾಯಿತು ಎಂದು ಹೇಳಿದನು.

ದೇವಮಕ್ಕಳೇ, ಸಹೋದರ ಪ್ರೀತಿಯನ್ನು ಬೆಳೆಸಿಕೊಳ್ಳಿರಿ. ಸಂಬಂಧಗಳನ್ನು ಗೌರವಿಸಿರಿ. ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು! ಅದು...... ಹೆರ್ಮೋನ್ ಪರ್ವತದಲ್ಲಿ ಹುಟ್ಟಿ ಚೀಯೋನ್ ಪರ್ವತದ ಮೇಲೆ ಬೀಳುವ ಮಂಜಿನಂತೆಯೂ ಇದೆ. ಅಲ್ಲಿ ಆಶೀರ್ವಾದವೂ ಜೀವವೂ ಸದಾ ಕಾಲ ಇರಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ (ಕೀರ್ತ.133:1,3) ಎಂದು ಸತ್ಯವೇದ ಹೇಳುತ್ತದೆ. ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿ ಮನುಷ್ಯನು ನ್ಯಾಯವಿಚಾರಣೆಗೆ ಗುರಿಯಾಗುವನು ಎಂದು (ಮತ್ತಾ.5:22) ಮತ್ತು ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿದ್ದಾನೆ; ಕತ್ತಲೆಯಲ್ಲಿ ನಡೆದುಕೊಳ್ಳುತ್ತಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕಾಣದ ಹಾಗೆ ಮಾಡಿದ್ದರಿಂದ ತಾನು ಎಲ್ಲಿಗೆ ಹೋಗುತ್ತಾನೋ ಅವನಿಗೆ ತಿಳಿಯದು ಎಂದು (1ಯೋಹಾ2:11)ರಲ್ಲಿ ಬರೆಯಲ್ಪಟ್ಟಿದೆ. ಪ್ರಿಯ ಸಹೋದರ-ಸಹೋದರಿಯರೇ, ಸಹೋದರ ಪ್ರೀತಿಗಾಗಿ ಪ್ರಯಾಸಪಡಿರಿ. ಸಹೋದರ ಸ್ನೇಹದಲ್ಲಿ ನೆಲೆಗೊಳ್ಳಿರಿ. ಸಹೋದರ ಪ್ರೀತಿಯನ್ನು ಗೌರವಿಸಿರಿ. ಮನುಷ್ಯರ ನಡುವೆ ಇರುವ ಸಂಬಂಧಗಳನ್ನು ಕ್ರಮ ಪಡಿಸಿಕೊಳ್ಳಿರಿ. ಸಂಧಾನಮಾಡಿಕೊಳ್ಳಿರಿ. ಅಷ್ಟೇ ಅಲ್ಲ ದೇವರಿಗೂ ನಿಮಗೂ ನಡುವೆ ಇರುವ ಸಂಬಂಧಗಳನ್ನು ಕ್ರಮಪಡಿಸಿಕೊಳ್ಳಿರಿ.

ನೆನಪಿಗೆ : “ಕೆಡುಕನಿಂದ ಹುಟ್ಟಿ ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ನಾವು ಇರಬಾರದು.” (1ಯೋಹಾ.3:12).

Kannada Song
ಕದಲುವುದೇ ಇಲ್ಲ

Watch and be Blessed.
https://youtu.be/iCwnw7OTBcI

Like | 🔄 Share
Subscribe
Share with your friends! 😇

ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
ಅನುದಿನದ ಆಹಾರ ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

ಅನುದಿನದ ಆಹಾರ 📖🌿ಆಗಸ್ಟ್ 2, 2025, ಶನಿವಾರಒಂಟಿಯಾಗಿರುವಾಗ!ಇಂದಿನ ಸತ್ಯವೇದ ಓದುವ ಭಾಗ• ಬೆಳಿಗ್ಗೆ:  ಕೀರ್ತನೆ 60,61,62• ಸಂಜೆ:  ರೋಮಾ. 5  ...
02/08/2025

ಅನುದಿನದ ಆಹಾರ 📖🌿
ಆಗಸ್ಟ್ 2, 2025, ಶನಿವಾರ

ಒಂಟಿಯಾಗಿರುವಾಗ!

ಇಂದಿನ ಸತ್ಯವೇದ ಓದುವ ಭಾಗ
• ಬೆಳಿಗ್ಗೆ: ಕೀರ್ತನೆ 60,61,62
• ಸಂಜೆ: ರೋಮಾ. 5
“ಅಬ್ರಹಾಮನು ಒಬ್ಬನೇ ಇದ್ದಾಗ ನಾನು ಅವನನ್ನು ಕರೆದು ಆಶೀರ್ವದಿಸಿ ಸಂತಾನದಿಂದ ಹೆಚ್ಚಿಸಿದೆನಲ್ಲವೆ.” (ಯೆಶಾ.51:2).

ಅಬ್ರಹಾಮ ಒಬ್ಬನೇ ಇದ್ದಾಗ ಕರ್ತನು ಅವನನ್ನು ಕರೆದು ಆಶೀರ್ವದಿಸಿದನು. ಅವನ ದೇಶದಿಂದ, ಅವನ ಮನೆಯಿಂದ, ಅವನ ಬಂಧುಗಳಿಂದ ಬೇರ್ಪಡಿಸಿ ಕರ್ತನು ಕರೆದುಕೊಂಡು ಹೋದನು. ಅಬ್ರಹಾಮನೊಂದಿಗೆ ಒಡಂಬಡಿಕೆ ಮಾಡಿಕೊಂಡನು. ಅವನು ಹಬ್ಬಿ ಹೆಚ್ಚುವಂತೆ ಮಾಡಿದನು. ಎಲೀಯನು ಕರ್ಮೇಲ್ ಬೆಟ್ಟವನ್ನು ಒಂಟಿಯಾಗಿ ಹತ್ತಿದನು. ಅವನ ಎದುರಾಗಿ ನಾನೂರೈವತ್ತು ಮಂದಿ ಬಾಳನ ಪ್ರವಾದಿಗಳು ನಿಂತರು. ಅಹಾಬರಾಜನು ಈಜೆಬೇಲ್ ರಾಣಿಯೂ ನಿಂತರು. ಎಲೀಯನು ಒಂಟಿಯಾಗಿ ನಿಂತು ಪರಲೋಕದ ಕಡೆಗೆ ಕಣ್ಣೆತ್ತಿ ಪ್ರಾರ್ಥಿಸಿದಾಗ ಕರ್ತನು ಆಕಾಶದಿಂದ ಬೆಂಕಿಯ ಮಳೆಯನ್ನು ಸುರಿಸಿ ಯೆಹೋವನೇ ದೇವರೆಂದು ನಿರೂಪಿಸಿದನು. “ಹದಿನಾಲ್ಕು ವರುಷಗಳ ಕಾಲ ಎಲೀಯನ ಸೇವೆ ಮಾಡಿದ ಎಲೀಷನು ಕರ್ತನ ಮುಂದೆ ನಿಲ್ಲುವದನ್ನು ಕಲಿತುಕೊಂಡನು.” (2ಅರ.3:14).

ಅಬ್ರಹಾಮನು ಒಂಟಿಯಾಗಿದ್ದರೂ ಕರ್ತನ ಮುಂದೆ ನಿಲ್ಲುವ ಅಭ್ಯಾಸ ಹೊಂದಿದ್ದನು. (ಆದಿ.18:22). ಇದುವೇ ಆಶೀರ್ವಾದ ಬೀಗದ ಕೈ. ಆಕಾಶವನ್ನೂ, ಭೂಮಿಯನ್ನೂ ಉಂಟು ಮಾಡಿದ ಸರ್ವಶಕ್ತನಾದ ತಂದೆ ದೇವರ ಮುಂದೆ ನೀವು ನಿಲ್ಲುವಾಗ ಆತನು ಎಲ್ಲಾ ಬಾಗಿಲುಗಳನ್ನು ನಿಮಗಾಗಿ ತೆರೆಯುವನು. ಮರುಭೂಮಿಯಲ್ಲಿ ಮಾರ್ಗ ತೋರಿಸುವನು. ನಮಗೆ ಸಹಾಯಕನಾಗಿ ನಿಂತು ಎಲ್ಲವನ್ನೂ ಮಾಡಿ ಮುಗಿಸುವನು. ದೇವಮಕ್ಕಳೇ ನೀವು ಒಂಟಿಯಾಗಿ ಕಾಣಲ್ಪಡುವಿರಾ? ನನ್ನ ತೀರ್ಮಾನದಂತೆ ನಾನೊಬ್ಬನೇ ರಕ್ಷಿಸಲ್ಪಟ್ಟಿದ್ದೇನೆ, ನನ್ನೊಂದಿಗೆ ಕೂಡಿ ಪ್ರಾರ್ಥಿಸುವವರು ಯಾರೂ ಇಲ್ಲವಲ್ಲಾ? ಎಂದು ಯೋಚಿಸುತ್ತಿರುವಾಗ ಇಂತಹ ಪರಿಸ್ಥಿತಿಯಲ್ಲಿ ನಿಶ್ಚಯವಾಗಿ ಕರ್ತನ ಬಲವನ್ನು ಅರಿತುಕೊಳ್ಳಿರಿ. ಅಬ್ರಹಾಮನು ಕರ್ತನ ಮಾತಿನಂತೆ ಹೊರಟು ಬಂದಾಗ ಸಹಾಯವಾಗಿ ಅವನೊಂದಿಗೆ ಯಾರೂ ಇರಲಿಲ್ಲ. ಆದರೆ ಕರ್ತನು ಅವನ ಸಹಾಯಕ್ಕೆ ನಿಂತನು. ನನಗೆ ಯಾರೂ ಸಹಾಯಕರಾಗಿ ಇಲ್ಲವೇ? ನನ್ನ ಚಿಂತೆಗಳನ್ನು ಹಂಚಿಕೊಳ್ಳಲು ನನಗೆ ಯಾರು ಇಲ್ಲವೇ? ಎಂದು ಯೋಚಿಸುತ್ತಿರುವಿರಾ? ನಾವು ಒಂಟಿಗರಾಗಿರುವಾಗಲೇ ಕರ್ತನು ನಿಮ್ಮನ್ನು ಆಶೀರ್ವದಿಸಲು ಸಾಧ್ಯ. ಅನೇಕಾನೇಕ ಸಹಾಯ ಹಸ್ತಗಳನ್ನು ಎಬ್ಬಿಸುವನು. ಪ್ರಿಯರೇ, ನಿಮ್ಮ ಒಂಟಿತನದಲ್ಲಿ ಕರ್ತನು ನಿಮ್ಮ ಸಹಾಯಕನಾಗಿದ್ದಾನೆ. ಆತನ ಸಮ್ಮುಖದಲ್ಲಿ ಒಂಟಿಯಾಗಿ ನಿಲ್ಲುವ ಅಭ್ಯಾಸ ನಿಮ್ಮದಾಗಿರಲಿ. ಆತನ ಆಶೀರ್ವಾದ ನಿಮಗಾಗಿ ಸದಾ ಸಿದ್ಧವಾಗಿದೆ.

ನೆನಪಿಗೆ : “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು; ನಿನ್ನ ಕೂಡ ಮಾತಾಡಿ ಈ ಶುಭ ವರ್ತಮಾನವನ್ನು ನಿನಗೆ ತಿಳಿಸುವದಕ್ಕಾಗಿ ನಾನು ಕಳುಹಿಸಲ್ಪಟ್ಟಿದ್ದೇನೆ.” (ಲೂಕ.1:19).

Kannada Song
ಅಭಿಷೇಕಿಸುವ ನನ್ನ ಯೇಸು

Watch and be Blessed.
https://youtu.be/x25_ccxkseg

Like | 🔄 Share
Subscribe
Share with your friends! 😇

ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
ಅನುದಿನದ ಆಹಾರ ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

🌿📖 *ಅನುದಿನದ ಆಹಾರ* 📖🌿⏰ ಆಗಸ್ಟ್ *01*, 2025, ಶುಕ್ರವಾರ👉🏼 *ಒಂಟಿತನವಾ?*🔖 _ಇಂದಿನ ಸತ್ಯವೇದ ಓದುವ ಭಾಗ_   • ಬೆಳಿಗ್ಗೆ:  *ಕೀರ್ತನೆ 57,58,...
01/08/2025

🌿📖 *ಅನುದಿನದ ಆಹಾರ* 📖🌿
⏰ ಆಗಸ್ಟ್ *01*, 2025, ಶುಕ್ರವಾರ

👉🏼 *ಒಂಟಿತನವಾ?*

🔖 _ಇಂದಿನ ಸತ್ಯವೇದ ಓದುವ ಭಾಗ_
• ಬೆಳಿಗ್ಗೆ: *ಕೀರ್ತನೆ 57,58,59*
• ಸಂಜೆ: *ರೋಮಾ 4*
════════════════════
_*“ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುವದರಿಂದ ಆತನು ನನ್ನನ್ನು ಒಂಟಿಗನಾಗಿ ಬಿಡಲಿಲ್ಲ.” (ಯೋಹಾ.8:29)*_

ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ: ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು ಎಂದು ಹೇಳಿ ಕರ್ತನು, ಆದಾಮನಿಗೆ ಒಬ್ಬ ಸಹಕಾರಿಯನ್ನು ಕೊಟ್ಟನು. (ಆದಿ.2:18). ಅವನ ಸಹಕಾರಿಯಾದ ಹವ್ವಳು ಅಂದು ಆದಾಮನನ್ನು ಬಿಟ್ಟು ಒಂಟಿಯಾಗಿ ಏದೇನ್ ತೋಟದಲ್ಲಿ ಸಂಚರಿಸುವಾಗ ಸೈತಾನನು ಅವಳು ಒಂಟಿಯಾಗಿರುವ ಸಮಯವನ್ನು ಉಪಯೋಗಿಸಿಕೊಂಡು ಅವಳನ್ನು ವಂಚಿಸಿದನು. ಅದೇ ರೀತಿ ಆತ್ಮೀಕ ಜೀವಿತದಲ್ಲಿಯೂ ನೀವು ಒಂಟಿಯಾಗಿ ಇರುವದು ಒಳ್ಳೆಯದಲ್ಲವೆಂದು ವಿಶ್ವಾಸಿಗಳ ಐಕ್ಯತೆಯನ್ನೂ ಸಭೆಯಾಗಿ ಕೂಡುವದನ್ನು ಏರ್ಪಡಿಸಿರುವನು. ಹಾಗೆಯೇ ಪರಿಶುದ್ಧಾತ್ಮನ ಅನ್ಯೋನ್ಯತೆಯನ್ನೂ ಆತ್ಮನ ಅಭಿಷೇಕವನ್ನು ಕೊಟ್ಟಿರುವನು. ಒಂದು ವೇಳೆ ಈ ಒಂದು ಆತ್ಮೀಕ ಅನ್ಯೋನ್ಯತೆಯಿಂದ ನೀವು ದೂರವಾಗಿರುವದಾದರೆ ಸೈತಾನನ ವಂಚನೆಗೆ ಒಳಗಾಗುವದು ನಿಶ್ಚಯ.

ಒಂಟಿತನ ಎನ್ನುವದು ಬಹಳ ವೇದನೆಯಾದದ್ದು. ಅದರಲ್ಲೂ ಆತ್ಮೀಕವಾಗಿ ಒಂಟಿಯಾಗಿರುವದು ಆಪತ್ತನ್ನು ತರುವದು. ದೇವರ ಅನ್ಯೋನ್ಯತೆ ಇಲ್ಲದಿರುವಾಗ ಆತ್ಮವು ಬಲಹೀನಗೊಳ್ಳುವದು, ಅಧೈರ್ಯಗೊಳ್ಳುವದು, ಅವಿಶ್ವಾಸವನ್ನು ಮೂಡಿಸುವದು. ಅದು ಸೈತಾನನ ಕಾರ್ಖಾನೆಯಾಗುವದು. ಸಂತೋಷದಿಂದ ಗಂಡನೊಂದಿಗೆ ಕೂಡಿ ಬಾಳುವಾಗ, ಇದ್ದಕ್ಕಿದ್ದಂತೆ ಒಬ್ಬ ಹೆಣ್ಣಿಗೆ ವೈಧವ್ಯ ಪ್ರಾಪ್ತವಾದರೆ ಅವಳ ಜೀವಿತ ಎಷ್ಟು ದುಸ್ತರವಾಗುತ್ತದೆ. ಹಾಗೆಯೇ ಮಕ್ಕಳು ತಂದೆ ತಾಯಿಗಳಿಂದ ದೂರವಾದರೆ ಆ ತಂದೆತಾಯಿಗಳು ಎಷ್ಟು ವೇದನೆಗೆ ಒಳಗಾಗುವರು. ಅವರ ಜೀವಿತದಲ್ಲಿ ದೇವರ ಅನ್ಯೋನ್ಯತೆ ಇರುವದಾದರೆ ಲೌಕೀಕವಾದ ಈ ಅಗಲುವಿಕೆಗಳು ಅಂತಹ ಆತ್ಮಗಳನ್ನು ಕುಂದಿ ಹೋಗದಂತೆ, ಅಧೈರ್ಯಗೊಳ್ಳದಂತೆ, ಬಲಪಡಿಸುವದು.

ದೇವಮಕ್ಕಳೇ, ನೀವು ಒಂದು ವೇಳೆ ಈ ರೀತಿಯಾದ ಅಥವಾ ಆತ್ಮೀಕ ಒಂಟಿತನವನ್ನು ಅನುಭವಿಸುತ್ತಿರುವಿರಾ? ಇಂದು ಕರ್ತನನ್ನು ನಿಮ್ಮ ಜೊತೆಗಾರನನ್ನಾಗಿ ಕರೆಯಿರಿ, ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುವೆನು ಎಂಬ ವಿಶ್ವಾಸದ ಅರಿಕೆಯನ್ನು ಮಾಡಿರಿ. ಕರ್ತನಿಗೆ ಪ್ರಿಯವಾದದ್ದನ್ನೇ ಯಾವಾಗಲೂ ಮಾಡುವದಾಗಿ ನಿಮ್ಮನ್ನು ಅರ್ಪಣೆಮಾಡಿರಿ. ಆತನು ಎಂದೂ ನಿಮ್ಮನ್ನು ಒಂಟಿಗರನ್ನಾಗಿ ಬಿಡುವದಿಲ್ಲ. ಆತನ ಪ್ರಸನ್ನತೆಯನ್ನು, ಮಹಿಮೆಯನ್ನು ಸದಾ ಅನುಭವಿಸಿರಿ.

_*ನೆನಪಿಗೆ*_ : _“ಹಗಲಲ್ಲಿ ಮೇಘಸ್ತಂಭವು ರಾತ್ರಿಯಲ್ಲಿ ಅಗ್ನಿಸ್ತಂಭವೂ ಜನರ ಮುಂದೆ ತಪ್ಪದೆ ಕಾಣಿಸಿದವು.” (ವಿಮೋ.13:22)._

━━━━━━━━━━━━━━━━━━
_Kannada Song_
_*ಎಲೀಯನ ದೇವರೇ ನಮ್ಮ ದೇವರು*_

👁‍🗨 Watch and be Blessed.
https://youtu.be/Bna1vMrmGlo

👍 *Like* | 🔄 *Share*
🔔 *Subscribe*
💬 *Share with your friends!* 😇

ಕನ್ನಡ ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
👉🏼 *ಅನುದಿನದ ಆಹಾರ* ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

🌿📖 ಅನುದಿನದ ಆಹಾರ 📖🌿⏰ ಜುಲೈ 31, 2025, ಗುರುವಾರ🏼 ವಾಗ್ದಾನಗಳು!ಇಂದಿನ ಸತ್ಯವೇದ ಓದುವ ಭಾಗ   • ಬೆಳಿಗ್ಗೆ:  ಕೀರ್ತನೆ 54,55,56   • ಸಂಜೆ: ...
31/07/2025

🌿📖 ಅನುದಿನದ ಆಹಾರ 📖🌿
⏰ ಜುಲೈ 31, 2025, ಗುರುವಾರ

🏼 ವಾಗ್ದಾನಗಳು!

ಇಂದಿನ ಸತ್ಯವೇದ ಓದುವ ಭಾಗ
• ಬೆಳಿಗ್ಗೆ: ಕೀರ್ತನೆ 54,55,56
• ಸಂಜೆ: ರೋಮಾ 3
════════════════════
“ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ.” (ಅರಣ್ಯ.23:19).

ನಮ್ಮ ದೇವರು ವಾಗ್ದಾನಗಳ ದೇವರು, ಹೇಳಿದ್ದನ್ನು ನೆರವೇರಿಸುವಾತನು. ಭೂಮ್ಯಾಕಾಶಗಳು ಅಳಿದು ಹೋದರೂ ಆತನ ಮಾತು ಎಂದೂ ಅಳಿಯುವದಿಲ್ಲ. ಆತನು ಮಾಡಿದ ವಾಗ್ದಾನಗಳು ಒಂದಾದರೂ ಬಿದ್ದುಹೋಗುವದಿಲ್ಲ. ಕರ್ತನು ನಿಮಗೆ ಒಂದು ವಾಗ್ದಾನ ಮಾಡಿದರೆ ಅದನ್ನು ಬಲವಾಗಿ ಹಿಡಿದುಕೊಳ್ಳಿರಿ. ಒಂದು ವೇಳೆ ವಾಗ್ದಾನ ನೆರವೇರುವದು ತಡವಾದರೂ ನಿಶ್ಚಯವಾಗಿ ಈಡೇರುವುದು. ವಾಗ್ದಾನ ಮಾಡಿದಾತನು ನಂಬಿಗಸ್ಥನಾಗಿದ್ದಾನಲ್ಲವೇ. (ಇಬ್ರಿ.10:23).

ಒಬ್ಬರನ್ನೊಬ್ಬರು ಪ್ರೀತಿಸುವ ಸ್ನೇಹಿತರು, ತಾವು ಮಾಡಿಕೊಂಡಂಥ ಒಪ್ಪಂದವನ್ನು ಕೈಕೊಳ್ಳುವದರಲ್ಲಿ ತೀವ್ರವಾಗಿರುವರು. ಆದ್ದರಿಂದಲೇ ನಮ್ಮ ಒಳ್ಳೇ ಸ್ನೇಹಿತನಾದ ಕ್ರಿಸ್ತೇಸುವು ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ (ಯೋಹಾ.15:13) ಎಂದು ಆ ಪ್ರೀತಿಯ ಮಹತ್ವವನ್ನು ಬಣ್ಣಿಸಿದ್ದಾನೆ. ತಾನು ಹೇಳಿದಂತೆಯೇ ತನ್ನ ಪ್ರಾಣವನ್ನು ನಮಗೆ ಕೊಟ್ಟು, ನಮ್ಮನ್ನು ಸ್ನೇಹಿತರೆಂದು ಕರೆದಿದ್ದಾನೆ. ನಾವು ಸಹ ಆತನ ಪ್ರೀತಿಯನ್ನು ಪ್ರತಿಬಿಂಬಿಸುವವರಾಗಿದ್ದು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯ ಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. (ಇಬ್ರಿ.10:24).

ನಮ್ಮ ಮೂಲಪಿತೃವಾದ ಆಬ್ರಹಾಮನು ಕರ್ತನು ಮಾಡಿದ ವಾಗ್ದಾನವನ್ನು ನೂರಕ್ಕೆ ನೂರರಷ್ಟು ನಂಬಿದನು. ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ. ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು ದೃಢನಂಬಿಕೆಯುಳ್ಳವನಾದನು (ರೋಮಾ.4:21) ಎಂದು ಓದುತ್ತೇವೆ. ಅದೇ ರೀತಿ ತನ್ನ ನೂರನೇ ವರ್ಷದಲ್ಲಿ ವಾಗ್ದಾನದ ಪುತ್ರನನ್ನು ಪಡೆದುಕೊಂಡು, ಕಾನಾನನ್ನು ಸ್ವಾಸ್ಥ್ಯಮಾಡಿಕೊಂಡನು. ದೇವಮಕ್ಕಳೇ, ಸತ್ಯವೇದದಲ್ಲಿ ಸಾವಿರಾರು ವಾಗ್ದಾನಗಳಿವೆ. ನೀವು ಪ್ರಾರ್ಥಿಸುವಾಗ, ಸತ್ಯವೇದವನ್ನು ಓದುವಾಗ, ಪ್ರಸಂಗಗಳನ್ನು ಕೇಳುವಾಗ ನಿಮಗೆ ವಾಗ್ದಾನಗಳು ಕೊಡಲ್ಪಡುವವು. ಆ ವಾಗ್ದಾನಕ್ಕಾಗಿ ಕರ್ತನನ್ನು ಸ್ತುತಿಸಿರಿ, ಅದು ನಿಮ್ಮ ನಂಬಿಕೆಯನ್ನು ಹೆಚ್ಚಿಸುವದು. ತನ್ನನ್ನು ಪ್ರೀತಿಸುವವರಿಗೆ ತಾನು ವಾಗ್ದಾನಮಾಡಿದ ರಾಜ್ಯಕ್ಕೆ ಬಾಧ್ಯರಾಗಿಯೂ ಇರಬೇಕೆಂದು ನೇಮಿಸಲಿಲ್ಲವೋ? (ಯಾಕೋ.2:5). ಹೌದು, ಕರ್ತನು ತಾನು ಪ್ರೀತಿಸುವವರಿಗೆ ವಾಗ್ದಾನಗಳನ್ನು ಕೊಟ್ಟು ಅದನ್ನು ನೆರವೇರಿಸುತ್ತಾನೆ.

ನೆನಪಿಗೆ : “ಸಾರಳು ವಾಗ್ದಾನ ಮಾಡಿದಾತನನ್ನು ನಂಬತಕ್ಕವನೆಂದೆಣಿಸಿ ತಾನು ಪ್ರಾಯ ಮೀರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿಯಾಗುವದಕ್ಕೆ ಶಕ್ತಿಯನ್ನು ಹೊಂದಿದಳು.” (ಇಬ್ರಿ.11:11).

━━━━━━━━━━━━━━━━━━
Kannada Song
ವಂದಿಸಿ ಸ್ತುತಿ ಹಾಡು

‍🗨 Watch and be Blessed.
https://youtu.be/YT3pGiSTU7E

Like | 🔄 Share
🔔 Subscribe
Share with your friends! 😇

ಕನ್ನಡ ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
🏼 ಅನುದಿನದ ಆಹಾರ ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

🌿📖 ಅನುದಿನದ ಆಹಾರ 📖🌿⏰ ಜುಲೈ 30, 2025, ಬುಧವಾರ🏼 ತಟ್ಟನೆ ಇಳಿದು ಬಾ!ಇಂದಿನ ಸತ್ಯವೇದ ಓದುವ ಭಾಗ   • ಬೆಳಿಗ್ಗೆ:  ಕೀರ್ತನೆ 51,52,53   • ಸಂ...
30/07/2025

🌿📖 ಅನುದಿನದ ಆಹಾರ 📖🌿
⏰ ಜುಲೈ 30, 2025, ಬುಧವಾರ

🏼 ತಟ್ಟನೆ ಇಳಿದು ಬಾ!

ಇಂದಿನ ಸತ್ಯವೇದ ಓದುವ ಭಾಗ
• ಬೆಳಿಗ್ಗೆ: ಕೀರ್ತನೆ 51,52,53
• ಸಂಜೆ: ರೋಮಾ 2
════════════════════
“ಜಕ್ಕಾಯನೇ, ತಟ್ಟನೆ ಇಳಿದು ಬಾ, ನಾನು ಈ ಹೊತ್ತು ನಿನ್ನ ಮನೆಯಲ್ಲಿ ಇಳುಕೊಳ್ಳಬೇಕು ಎಂದು ಅವನಿಗೆ ಹೇಳಲು.... ಆತನನ್ನು ಸಂತೋಷದಿಂದ ಸೇರಿಸಿಕೊಂಡನು." (ಲೂಕ.19:5,6).

ಯೇಸುಸ್ವಾಮಿಯು ಸುಂಕದ ಜಕ್ಕಾಯನನ್ನು ಅವಸರ ಪಡಿಸಿದನು. ತಟ್ಟನೆ ಇಳಿದು ಬಾ ಎಂದನು. ರಕ್ಷಣೆ ಹೊಂದುವಲ್ಲಿ ತಡಮಾಡಬಾರದು, ಉದಾಸೀನತೆಯಿಂದಿರಬಾರದು. ಇದೇ ರಕ್ಷಣೆಯ ದಿನ, ಇಂದೇ ಕೃಪೆಯ ಕಾಲ. ಒಬ್ಬ ಸ್ತ್ರೀಗೆ ಪ್ರಸವವೇದನೆ ಬಂದರೆ, ಕೂಡಲೇ ಆಸ್ಪತ್ರೆಗೆ ಅವಸರದಿಂದ ಹೊರಡುವರು. ಅಂಥ ಸಮಯದಲ್ಲಿ ಯಾರೂ ನಿಧಾನಮಾಡುವುದಿಲ್ಲ. ಅದೇ ರೀತಿಯಲ್ಲಿ ನಿಮ್ಮ ಆತ್ಮೀಕ ಜೀವಿತದಲ್ಲಿ ಅವಸರವಿರಬೇಕು.

ಬುದ್ಧಿಯಿಲ್ಲದ ಕನ್ಯೆಯರು ಕೃಪೆಯ ಸಮಯದಲ್ಲಿ ತಮ್ಮ ಆರತಿಗಳಲ್ಲಿ ಸಾಕಷ್ಟು ಎಣ್ಣೆ ಇರುವದೇ, ಇಲ್ಲವೇ? ಎಂದು ತಿಳಿಯದಾದರು. ಆದುದರಿಂದ ಅವರು ಜಾಗ್ರತೆಯಾಗಿರದೆ ಉದಾಸೀನತೆಯಿಂದಿದ್ದರು. ಮದಲಿಂಗನು ಬಂದಾಗ, ಅವರ ಆರತಿಗಳು ಎಣ್ಣೆ ಇಲ್ಲದೆ ಆರಿ ಹೋದವು. ಕರ್ತನ ಬರೋಣವು ಸಮೀಪಿಸುವುದರಿಂದ ಸಿದ್ಧವಾಗಿರ್ರಿ. ಇಗೋ, ಬೇಗನೆ ಬರುತ್ತೇನೆ; ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನೆಯ ಮಾತುಗಳನ್ನು ಕೈಕೊಂಡು ನಡೆಯುವವನು ಧನ್ಯನು. (ಪ್ರಕ.22:7). ಕರ್ತನ ಬರೋಣಕ್ಕಾಗಿ ಸಿದ್ಧತೆ ಮಾಡುತ್ತಿರುವಾಗ ಉದಾಸೀನತೆಯಿಂದಿರಬಾರದು. ಆತನು ಗೊತ್ತಿಲ್ಲದ ಸಮಯದಲ್ಲಿ ಬರುತ್ತಾನೆ. ಆತನು ಬಂದ ನಂತರ ಬಾಗಿಲು ಮುಚ್ಚಲಾಗುವದು. ಆದ್ದರಿಂದ ಸದಾ ಸಿದ್ಧವಾಗಿರಬೇಕು.

ಇಗೋ, ಬೇಗನೆ ಬರುತ್ತೇನೆ; ನಾನು ಪ್ರತಿಯೊಬ್ಬನಿಗೆ ಅವನವನ ನಡತೆಯ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನ ಕೈಯಲ್ಲಿ ಅದೆ. (ಪ್ರಕ.22:12). ಆತನು ನೀತಿಯುಳ್ಳ ನ್ಯಾಯಾಧಿಪತಿ. ಪ್ರಪಂಚದ ನ್ಯಾಯಾಧಿಪತಿಗಳು, ನ್ಯಾಯ ನೀತಿ ನಿರ್ಣಯಿಸುವದರಲ್ಲಿ ಅನ್ಯಾಯ ಮಾಡುತ್ತಾರೆ, ನಿಧಾನ ಮಾಡುತ್ತಾರೆ. ನೀತಿಯಿಂದ ನ್ಯಾಯ ನಿರ್ಣಯಿಸುವದಿಲ್ಲ. ಆದರೆ ಪರಲೋಕದ ನ್ಯಾಯಾಲಯದಲ್ಲಿ ಸರ್ವಲೋಕದ ನ್ಯಾಯಾಧಿಪತಿಯಾದ ಕರ್ತನು ನಿಶ್ಚಯವಾಗಿ ನ್ಯಾಯ ಕೊಡುವನು. ಅವನವನ ನಡತೆಯನ್ನು ಪರಿಶೋಧಿಸಿ ತಿಳಿದಿರುವಾತನು ನಿಮ್ಮ ಸಮಸ್ಯೆಗಳನ್ನು, ನಿಮಗೆ ಸಿಗಬೇಕಾದ ನ್ಯಾಯವನ್ನು ಕುರಿತು ಕರ್ತನಲ್ಲಿ ಮೊರೆ ಇಡಿರಿ. ತಡಮಾಡಿದರೂ ಆತನು ನ್ಯಾಯ ದೊರಕಿಸುವನು. (ಲೂಕ.18:7,8). ತಾಳಿಕೊಂಡಿರುವವರನ್ನು ಸತ್ಯವೇದವು ಧನ್ಯರೆಂದು ಹೇಳುತ್ತದೆಯಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದುಕೊಂಡಿರುವಿರಿ. (ಯಾಕೋ.5:11).

ನೆನಪಿಗೆ : “ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿಸಿಬಿಡುವನು.” (ರೋಮಾ.16:20).

━━━━━━━━━━━━━━━━━━
Kannada Song
ಗಾಡಾಂಧಕಾರದಲ್ಲಿ ನಾ ನಡೆಯುವ ವೇಳೆಯಲಿ

‍🗨 Watch and be Blessed.
https://youtu.be/uRXq7HvMD1I

Like | 🔄 Share
🔔 Subscribe
Share with your friends! 😇

ಕನ್ನಡ ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
🏼 ಅನುದಿನದ ಆಹಾರ ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!

Address

1, 24th Cross Dead End, Ejipura
Bangalore
560047

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 3pm - 5pm

Telephone

+91 80 25712448

Alerts

Be the first to know and let us send you an email when Anudhinada Ahara - ಅನುದಿನದ ಆಹಾರ posts news and promotions. Your email address will not be used for any other purpose, and you can unsubscribe at any time.

Contact The Business

Send a message to Anudhinada Ahara - ಅನುದಿನದ ಆಹಾರ:

Share

Category