Samrudha sahitya

Samrudha sahitya Contact information, map and directions, contact form, opening hours, services, ratings, photos, videos and announcements from Samrudha sahitya, Publisher, Bangalore.

ನಮಸ್ಕಾರ ಈ ಬಾರಿಯ ಮೇ 1 ಏನು ವಿಶೇಷ ಗೊತ್ತಾ...ಬೌದ್ಧ ಪೂರ್ಣಿಮಾ ಕಾಲ್ ಮಾರ್ಕ್ಸ್ ಜನ್ಮದಿನ ಕಾರ್ಮಿಕರ ದಿನಾಚರಣೆಶುಕ್ರವಾರ ಇಷ್ಟೆಲ್ಲ ವಿಶೇಷ ನಡ...
18/04/2026

ನಮಸ್ಕಾರ

ಈ ಬಾರಿಯ ಮೇ 1 ಏನು ವಿಶೇಷ ಗೊತ್ತಾ...

ಬೌದ್ಧ ಪೂರ್ಣಿಮಾ
ಕಾಲ್ ಮಾರ್ಕ್ಸ್ ಜನ್ಮದಿನ
ಕಾರ್ಮಿಕರ ದಿನಾಚರಣೆ
ಶುಕ್ರವಾರ
ಇಷ್ಟೆಲ್ಲ ವಿಶೇಷ ನಡುವೆ ಅದೇ ದಿನದಂದು ಸಮೃದ್ಧ ಸಾಹಿತ್ಯದಿಂದ ನಾಲ್ಕು ಮಹತ್ತರವಾದ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ..

ಹಿಂದು ವಿಚಾರಧಾರೆಯ ಅತ್ಯಮೂಲ್ಯ ಕೃತಿಗಳನ್ನು ಹೊರ ತಂದರೆ ಚೆನ್ನಾಗಿರುತ್ತದೆ ಎಂಬ ಭಾವನೆಯಲ್ಲಿ

ಮೇ 1 ಶುಕ್ರವಾರ ಬೆಳಗ್ಗೆ 10.30 ಕ್ಕೆ
ಹಿಂದೂ ಚಿಂತನೆ ಮಾಲೆಯ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು
ನಿಶ್ಚಯಿಸಲಾಗಿದೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ
ನಾಡಿನ ಖ್ಯಾತ ವಾಗ್ಮಿಗಳು. ಹಿಂದೂ ಹೋರಾಟಗಾರರು
ಶ್ರೀ ಪ್ರಮೋದ್ ಮುತಾಲಿಕ್

ಮತ್ತು ಖ್ಯಾತ ವಾಗ್ಮಿಗಳಾದಂತ
ಶ್ರೀ ಶ್ರೀಕಾಂತ್ ಶೆಟ್ಟಿ ಇವರುಗಳು ಇರುತ್ತಾರೆ..

ಅಷ್ಟೇ ಅಲ್ಲದೆ
ಡಾ ಜಿ ಬಿ ಹರೀಶ
ಡಾಕ್ಟರ್ ಎಸ್ ಆರ್ ಲೀಲಾ
ಶ್ರೀ ಬಿಪಿ ಪ್ರೇಮಕುಮಾರ್

ಇವರೆಲ್ಲರೂ ಸಹ ನಮ್ಮೊಂದಿಗೆ ಇರುತ್ತಾರೆ..

ತಪ್ಪದೇ ದಯಮಾಡಿ ಬನ್ನಿ.‌...

ಹಿಂದೂ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ....

ಮೇ 1 ಶುಕ್ರವಾರ ಬೆಳಗ್ಗೆ 10.30 ಕ್ಕೆ ಸ್ಥಳ ವರ್ಲ್ಡ್ ಕಲ್ಚರ್ ಸಭಾಂಗಣ ಬಿಪಿ ವಾಡಿಯ ರೋಡ್ .


ಅಂದು ನಿಮ್ಮ ಉಪಹಾರ ನಮ್ಮೊಂದಿಗೆ..


ನಮಸ್ಕಾರ ಸಮೃದ್ಧ ಸಾಹಿತ್ಯದಿಂದ ಮತ್ತೊಂದು ಐತಿಹಾಸಿಕ ಕೃತಿ ಬರಲಿದೆ. ಗಾಂಧಿಯ ವಿಚಾರ ಕುರಿತು ಅನೇಕ ಕೃತಿಗಳನ್ನು ಈವರೆಗೆ ಸಮೃದ್ಧ ಸಾಹಿತ್ಯ ಪ್ರಕ...
30/01/2026

ನಮಸ್ಕಾರ
ಸಮೃದ್ಧ ಸಾಹಿತ್ಯದಿಂದ ಮತ್ತೊಂದು ಐತಿಹಾಸಿಕ ಕೃತಿ ಬರಲಿದೆ. ಗಾಂಧಿಯ ವಿಚಾರ ಕುರಿತು ಅನೇಕ ಕೃತಿಗಳನ್ನು ಈವರೆಗೆ ಸಮೃದ್ಧ ಸಾಹಿತ್ಯ ಪ್ರಕಟಣೆ ಮಾಡುತ್ತಾ ಬಂದಿದೆ. ಇದೀಗ ಮತ್ತೊಂದು ಕೃತಿ ಡಾಕ್ಟರ್ ಜಿ.ಬಿ ಹರೀಶ ಅವರ ಬರೆದ ಕೃತಿ

Black & white ಗಾಂಧಿ
ಬಿಚ್ಚಿಟ್ಟ ಚರಿತ್ರೆ ಇದು...

ಗಾಂಧಿ ಯಾರು? ವ್ಯಕ್ತಿಯೇ? ಸಾಮೂಹಿಕ ಪ್ರಜ್ಞೆಯ ಶಕ್ತಿಯೇ? ಬ್ರಿಟಿಷರ ಕೈಗೊಂಬೆಯೇ? ತಾನೇ ಪ್ರತಿಪಾದಿಸಿದ ಸಿದ್ಧಾಂತಗಳನ್ನು ಪದೇ ಪದೇ ಚೂರು ಚೂರು ಮಾಡುತ್ತಿದ್ದ ಅರಾಜಕತಾವಾದಿಯೇ? ಎಂಬ ಪ್ರಶ್ನೆಗಳ ಹುಡುಕಾಟ ಇಲ್ಲಿದೆ. ಗಾಂಧಿ ಭಾರತದ ರಾಷ್ಟ್ರಪಿತಾ ಹೌದೇ? ಎಂಬ ಹುಡುಕಾಟವಿದೆ. ದೇಶ ವಿಭಜನೆಯ ವಿಷಯದಲ್ಲಿ ಮತ್ತು ತದನಂತರ ಗಾಂಧಿಯ ಇಬ್ಬಂದಿತನದ ನಡವಳಿಕೆಗಳು, ಗಾಂಧಿ ಮತ್ತು ಇಸ್ಲಾಂ, ಗಾಂಧಿ ಮತ್ತು ಅವರ ರಾಮ ರಾಜ್ಯದ ಕನಸಿನ ನಿಗೂಢತೆ ಇವು ಪುಸ್ತಕದ ಪುಟಗಳಲ್ಲಿ ಅಡಗಿವೆ. ಇತಿಹಾಸದ ಅನೇಕ 'ರೆ'ಗಳ ಹುಡುಕಾಟವೂ ಇದರಲ್ಲಿದೆ. ಸಾಮಾನ್ಯ ಅಧಿಕೃತ ಜೀವನ ಚರಿತ್ರೆಗಳು ಕೊಡುವ ಗಾಂಧಿಯ ಚಿತ್ರಕ್ಕಿಂತ ನಿಜವಾಗಿಯೂ ಇತಿಹಾಸದ ಪುಟಗಳಲ್ಲಿ ಅಡಗಿರುವ ಮುಚ್ಚಿಟ್ಟ ಗಾಂಧಿಯ ಚಿಂತನೆ ಮತ್ತು ನಿರ್ಣಯಗಳನ್ನು ವಸ್ತುನಿಷ್ಠವಾಗಿ ತಿಕ್ಕಿ ನೋಡುವ ಪುಸ್ತಕ ಇದು ಕಾಲಕಾಲಕ್ಕೆ ಗಾಂಧಿ ಅಧ್ಯಯನ ಮಾಡುವ ಎಡ ಮತ್ತು ಬಲದವರಿಗೆ ಯಾವಾಗಲೂ ರೆಫರೆನ್ಸ್ ಆಗುವ ತಾಕತ್ತು ಉಳ್ಳ ಅಗ್ರಮಾನ್ಯ ಪುಸ್ತಕ ಇದು. ತುಂಬಾ ಧೈರ್ಯ ಇರುವವರು ಮಾತ್ರ ಓದಬಹುದಾದ ಪುಸ್ತಕ.

Address

Bangalore

Website

Alerts

Be the first to know and let us send you an email when Samrudha sahitya posts news and promotions. Your email address will not be used for any other purpose, and you can unsubscribe at any time.

Share

Category