Thodalnudi

Thodalnudi Thodalnudi, founded by Dr. Sushma Shankar in 2013, is a Kannada children's magazine fostering love for language and literature. of Karnataka.

Featuring student articles free of cost, also various conducts competitions, and is recognized by the Govt.

ಎಲ್ಲಾ ತೊದಲ್ನುಡಿ ಸ್ನೇಹಿತರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳುಹಾಗೂ ಹೊಸ ವರ್ಷದ ಶುಭಾಶಯಗಳು 🎄
26/12/2025

ಎಲ್ಲಾ ತೊದಲ್ನುಡಿ ಸ್ನೇಹಿತರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು
ಹಾಗೂ ಹೊಸ ವರ್ಷದ ಶುಭಾಶಯಗಳು 🎄

ವೈಟ್‌ಫೀಲ್ಡ್‌ನ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್‌ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿ...
11/11/2025

ವೈಟ್‌ಫೀಲ್ಡ್‌ನ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್‌ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೆ.ವಿ. ಕುಮಾರನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅವರು ಎಲ್ಲರಿಗೂ ಕೆರಳ ಪಿರವಿ ದಿನದ ಶುಭಾಶಯಗಳನ್ನು ತಿಳಿಸಿದರು.

ಎಸ್‌.ಎಲ್‌. ಭೈರಪ್ಪ ಅವರ ಯಾನ ಕಾದಂಬರಿಯ ಅನುವಾದಕ್ಕಾಗಿ 2024ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕೆ.ವಿ. ಕುಮಾರನ್ ಅವರನ್ನು ಸನ್ಮಾನಿಸಲಾಯಿತು.

ರಾಜ್ಯೋತ್ಸವದ ಅಂಗವಾಗಿ ತೊದಲ್ನುಡಿ ಮಕ್ಕಳ ಮಾಸಪತ್ರಿಕೆ ರಾಜ್ಯಮಟ್ಟದಲ್ಲಿ ಆಯೋಜಿಸಿದ್ದ ಕನ್ನಡ ಕವಿತಾ ವಾಚನ ಸ್ಪರ್ಧೆಯ ಫೈನಲ್ ರೌಂಡ್‌ನಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ತೊದಲ್ನುಡಿ ಯ ನೇತೃತ್ವದಲ್ಲಿ ನಡೆದ ಇದು ಹದಿಮೂರನೇ ಕರ್ನಾಟಕ ರಾಜ್ಯೋತ್ಸವವಾಗಿದೆ.
ಉದ್ಘಾಟನೆ ನಡೆಸಿದ್ದಕ್ಕಾಗಿ ಹೆಮ್ಮೆಯಿದೆ ಎಂದು ಡಾ. ಸುಷ್ಮಾ ಶಂಕರ ಹೇಳಿದರು.

ಕನ್ನಡ ಅಧ್ಯಯನ ಕೇಂದ್ರಗಳ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಸಹಕಾರದಿಂದ ಕಾರ್ಯಕ್ರಮ ಪ್ರಭಾವಶೀಲವಾಯಿತು.

ಡಾ. ಸುಷ್ಮಾ ಶಂಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ಆಚಾರ್ಯ ಎಸ್. ಶ್ರೀನಿವಾಸ್, ಡಾ. ಮಾಲ್ಯಾದ್ರಿ ಬ್ರಿಗೇಡ್, ಪ್ರೊ. ರಾಕೇಶ್ ವಿ.ಎಸ್. ಮಾತನಾಡಿದರು.

ಸರಸ್ವತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ. ಶಂಕರ ಸ್ವಾಗತಿಸಿದರು.
ರೆಬಿನ್ ರವೀಂದ್ರನ್ ಧನ್ಯವಾದಗಳನ್ನು ಸಲ್ಲಿಸಿದರು.


#ಕರ್ನಾಟಕರಾಜ್ಯೋತ್ಸವ #ಶ್ರೀಸರಸ್ವತೀಶಿಕ್ಷಣಟ್ರಸ್ಟ್ #ಕೆವಿಕೆದುಮಾರನ್ #ಸಾಹಿತ್ಯಪ್ರಶಸ್ತಿ #ಕನ್ನಡಕವಿತೆ #ಕನ್ನಡಸಂಸ್ಕೃತಿ #ರಾಜ್ಯೋತ್ಸವ #ಆರ್ಟ್ಆಫ್‌ಲಿವಿಂಗ್ #ಕನ್ನಡಸಾಹಿತ್ಯ #ಸಾಂಸ್ಕೃತಿಕಕಾರ್ಯಕ್ರಮ #ಕವಿತಾಸ್ಪರ್ಧೆ #ಯುವಜನಸಕ್ರಿಯತೆ

01/11/2025
ವೈಟ್‌ಫೀಲ್ಡ್‌ನ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಅತೀವ ಸ್ಮರಣೀಯವಾಯಿತು. 2004ರಲ್ಲಿ ಉಗ್ರರ ವಿರುದ್ಧ ...
15/08/2025

ವೈಟ್‌ಫೀಲ್ಡ್‌ನ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಅತೀವ ಸ್ಮರಣೀಯವಾಯಿತು. 2004ರಲ್ಲಿ ಉಗ್ರರ ವಿರುದ್ಧ ಹೋರಾಟ ನಡೆಸಿ ವೀರಮರಣ ಹೊಂದಿದ ಧೀರ ಯೋಧ ಕೆ.ಎಲ್. ರಮೇಶ್ (21 BN BSF Reg.No. 900094534) ಅವರ ತಾಯಿ ಶ್ರೀಮತಿ ಚಿಕ್ಕಮಯ್ಯಮ್ಮ ಅವರಿಗೆ *ಸ್ವಾತಂತ್ರ್ಯ ದಿನಾಚರಣೆ ವೀರ ಮಾತೆ ಪ್ರಶಸ್ತಿ – 2025* ಪ್ರದಾನಿಸಲಾಯಿತು. ಈ ಪ್ರಶಸ್ತಿಯಲ್ಲಿ ರೂ.5001 ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿತ್ತು.

ಡಾ. ಸುಷ್ಮಾ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ತೊದಲ್ನುಡಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ*ವನ್ನು ಮಹದೇವಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆದ ಶ್ರೀ ಹನುಮಂತು ಅವರು ಉದ್ಘಾಟಿಸಿದರು. ಕನ್ನಡ ಮಕ್ಕಳ ಮಾಸಪತ್ರಿಕೆ ತೊಡಲ್ನುಡಿಯ 12ನೇ ವಾರ್ಷಿಕ ಪ್ರಶಸ್ತಿ , 96 ವರ್ಷದ ಚಿಕ್ಕಮಯ್ಯಮ್ಮ ಅವರಿಗೆ ಸಲ್ಲಿಸಿತ್ತು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಆರ್ಟಿಸ್ಟ್ ಬೃಜೀ ಕೆ.ಟಿ. ಅವರು ಸ್ಪರ್ಧೆಯ ತೀರ್ಪುಗಾರ ಹಾಗೂ ಮುಖ್ಯ ಅತಿಥಿಯಾಗಿ ಹಾಜರಾಗಿ ಮಾತುಗಳಿಸಿದರು. ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರು ಬಿ. ಶಂಕರ್, ಆರ್ಟ್ ಆಫ್ ಲಿವಿಂಗ್ ಆಚಾರ್ಯ ಶ್ರೀನಿವಾಸ್ ಹಾಗೂ ಶ್ರೀಮತಿ ಚಿಕ್ಕಮಯ್ಯಮ್ಮ ಅವರು ಕೂಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಮೇಶ್ ಅವರ ಪುತ್ರರಾದ ಭೂಷಣ್ ಕುಮಾರ್ ಹಾಗೂ ಮೋಹನ್ ಕುಮಾರ್ ಉಪಸ್ಥಿತರಿದ್ದರು. ಪ್ರೊ. ರಾಕೇಶ್ ವಿ.ಎಸ್. ಅವರು ಸ್ವಾಗತ ಭಾಷಣ ಮಾಡಿದರು ಹಾಗೂ ರೆಬಿನ್ ರವೀಂದ್ರನ್ ಧನ್ಯವಾದಗಳನ್ನು ಸಲ್ಲಿಸಿದರು.

ಮಲಯಾಳಿ ಮೂಲದ ಡಾ. ಸುಷ್ಮಾ ಶಂಕರ್ ಅವರು ಕನ್ನಡ ಮಾಸಪತ್ರಿಕೆಯ ಸಂಪಾದಕರಾಗಿದ್ದು, ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆಯಾಗಿ ಅನೇಕ ನವೀನ ಕಾರ್ಯಗಳನ್ನು ಮಾಡುತ್ತಿದ್ದಾರೆ.

Briji KT Rebin Raveendran Rakesh V Shettigar Sree Saraswathi Education Trust

#ಸ್ವಾತಂತ್ರ್ಯ_ದಿನಾಚರಣೆ

ಪ್ರತಿ ವರ್ಷದಂತೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ"ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ೨೦೨೫"ವಿಷಯ: ಭಾರತ (ಭಾರತಕ್ಕೆ ಸಂಬಂಧಪಟ್ಟ ಯಾವುದೇ ಚಿತ್...
02/08/2025

ಪ್ರತಿ ವರ್ಷದಂತೆ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ

"ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ೨೦೨೫"

ವಿಷಯ: ಭಾರತ (ಭಾರತಕ್ಕೆ ಸಂಬಂಧಪಟ್ಟ ಯಾವುದೇ ಚಿತ್ರ)

ವಿಭಾಗ: ಪೆನ್ಸಿಲ್ ಚಿತ್ರ ಅಥವಾ ಬಣ್ಣದ ಚಿತ್ರ

ಜೂನಿಯರ್ (1 - 7ನೇ ತರಗತಿ)

ಸೀನಿಯರ್ (8 – 12ನೇ ತರಗತಿ)

ಸಂಪರ್ಕಿಸಿ:
ಡಾ. ಸುಷ್ಮಾ ಶಂಕರ್ - 099010 41889

ಪ್ರೋ, ರಾಕೇಶ್ ವಿ. ಎಸ್- 81472 12724

ಕೇರಳ -ಕರ್ನಾಟಕ ಕನ್ನಡ ನುಡಿ ಸಂಭ್ರಮ ತೊದಲ್ನುಡಿ ಮಕ್ಕಳ ಸಾಹಿತ್ಯ ಮಾಸಿಕಮತ್ತು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ....
14/07/2025

ಕೇರಳ -ಕರ್ನಾಟಕ ಕನ್ನಡ ನುಡಿ ಸಂಭ್ರಮ

ತೊದಲ್ನುಡಿ ಮಕ್ಕಳ ಸಾಹಿತ್ಯ ಮಾಸಿಕ

ಮತ್ತು

ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)_

ಹಾಗೂ

ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು , ಕಾಸರಗೋಡು

ಸಂಯುಕ್ತಾಶ್ರಯದಲ್ಲಿ

ಪ್ರಶಸ್ತಿ ಪ್ರದಾನ ಮತ್ತು ಚುಟುಕು ಕವಿ ಕಾವ್ಯ ಸಂಗಮ

ಸಮಯ: 20 ಜುಲೈ 2025, ಭಾನುವಾರ

ಬೆಳಗ್ಗೆ 10 ಗಂಟೆಗೆ

ಸ್ಥಳ: ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ ಆವರಣ (ಎಸ್. ಎಸ್. ಟ್ಯೂಷನ್ಸ್), ವೈಟ್‌ ಫೀಲ್ಡ್, ಬೆಂಗಳೂರು.

_ಎಲ್ಲರಿಗೂ ಆದರದ ಸ್ವಾಗತ_

#ಕನ್ನಡ #ಚುಟುಕುಸಾಹಿತ್ಯ #ಕವಿಸಂಗಮ #ಮಕ್ಕಳಸಾಹಿತ್ಯ #ಕನ್ನಡಪರಿಷತ್ತು #ಕನ್ನಡಪ್ರಶಸ್ತಿ #ಕೇರಳಕರ್ನಾಟಕಸಂಗಮ #ಕನ್ನಡಭವನ #ಕಾವ್ಯಸಂಗಮ

ಕರ್ನಾಟಕ ಪಬ್ಲಿಕ್ ಸ್ಕೂಲ್, ವರ್ತೂರು, ಬೆಂಗಳೂರಿನಲ್ಲಿ ತೊದಲ್ನುಡಿ ಮಾಸ ಪತ್ರಿಕೆಯನ್ನು ಕುರಿತು ಪರಿಚಯಿಸಿದ್ದೇವೆ. ಕನ್ನಡ ಭಾಷೆಯಲ್ಲಿ ಪುಟ್ಟ ಪ...
01/07/2025

ಕರ್ನಾಟಕ ಪಬ್ಲಿಕ್ ಸ್ಕೂಲ್, ವರ್ತೂರು, ಬೆಂಗಳೂರಿನಲ್ಲಿ ತೊದಲ್ನುಡಿ ಮಾಸ ಪತ್ರಿಕೆಯನ್ನು ಕುರಿತು ಪರಿಚಯಿಸಿದ್ದೇವೆ. ಕನ್ನಡ ಭಾಷೆಯಲ್ಲಿ ಪುಟ್ಟ ಪುಟ್ಟ ಬರೆಹಗಳು ಬರೆಯಲು ಮಕ್ಕಳನು ಪ್ರೋತ್ಸಾಹಿಸಿ, ಎಲ್ಲರಿಗೂ ಒಂದೊಂದು ಮಾಸಪತ್ರಿಕೆ ಕೊಟ್ಟು ಬಂದಿದ್ದೇನೆ. ಎಲ್ಲ ಶಿಕ್ಷಕರೂ ಉತ್ತಮ ಸಹಕಾರ ನೀಡಿದ್ದಾರ. ಧನ್ಯವಾದಗಳು🙏🙏🙏

Address

Bangalore
560066

Alerts

Be the first to know and let us send you an email when Thodalnudi posts news and promotions. Your email address will not be used for any other purpose, and you can unsubscribe at any time.

Contact The Business

Send a message to Thodalnudi:

Share