07/03/2026
ಉತ್ಥಾನ ವಾರ್ಷಿಕ ಪ್ರಬಂಧಸ್ಪರ್ಧೆ - 2025ರ ಬಹುಮಾನ ವಿತರಣೆ
ಬೆಂಗಳೂರು, ಮಾ.7: ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಉತ್ಥಾನ ವಾರ್ಷಿಕ ಪ್ರಬಂಧಸ್ಪರ್ಧೆ - 2025ರ ಬಹುಮಾನ ವಿತರಣಾ ಸಮಾರಂಭವನ್ನು ರಾಷ್ಟ್ರೋತ್ಥಾನದ ಕೇಂದ್ರ ಕಚೇರಿ, ಕೇಶವಶಿಲ್ಪದಲ್ಲಿ ಆಯೋಜಿಸಲಾಗಿತ್ತು. ಸಂಯುಕ್ತ ಕರ್ನಾಟಕದ ಸಂಪಾದಕರಾದ ಶ್ರೀ ಮಹಾಬಲ ಸೀತಾಳಬಾವಿ, ಸಾಮಾಜಿಕ ಕಾರ್ಯಕರ್ತರಾದ ಶ್ರೀ ರಾಜೇಶ್ ಪದ್ಮಾರ್ ಹಾಗೂ ರಾಷ್ಟ್ರೋತ್ಥಾನದ ಖಜಾಂಚಿಗಳಾದ ಶ್ರೀ ಕೆ ಎಸ್ ನಾರಾಯಣ ಅವರು ಉಪಸ್ಥಿತರಿದ್ದರು. ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ವಿಚಾರ, ವಿಶೇಷತೆ ಮತ್ತು ಕೊಡುಗೆ ಎಂಬ ವಿಷಯವಾಗಿ ಪ್ರಬಂಧಸ್ಪರ್ಧೆಯನ್ನು ಆಯೋಜಿಸಲಾಗಿತ್ತು.