Taluknews

Taluknews Print Journalism Multimedia Journalism Broadcast Journalism

* NIC5813 - Publishing of newspapers, j media

27/09/2025

ತಿಲಕ್ ಅಭಿನಯದ ವರ್ಣತರಂಗ ಚಿತ್ರದ 3 ಹಾಡುಗಳು ಬಿಡುಗಡೆ ಆಗಿವೆ. ನವೆಂಬರ್ ತಿಂಗಳಿನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ತಿಳಿದು ಬಂದಿದೆ, ಕನ್ನಡ ಸಿನಿಮಾ ನೋಡಿ ಪ್ರೋತ್ಸಾಹಿಸಿ..




ಸರಗೂರು: ಬೈಕ್‌ ನಲ್ಲಿ ಆರೋಪಿಯೊಬ್ಬ ಸಾಗಣೆ ಮಾಡುತ್ತಿದ್ದ ಹಸಿ ಹಾಗೂ ಒಣಗಾಂಜಾವನ್ನು ನಂಜನಗೂಡು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕ...
26/09/2025

ಸರಗೂರು: ಬೈಕ್‌ ನಲ್ಲಿ ಆರೋಪಿಯೊಬ್ಬ ಸಾಗಣೆ ಮಾಡುತ್ತಿದ್ದ ಹಸಿ ಹಾಗೂ ಒಣಗಾಂಜಾವನ್ನು ನಂಜನಗೂಡು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಸರಗೂರು ತಾಲೂಕಿನ ನಂಜನಾಥಪುರ ಗ್ರಾಮದ ನಿವಾಸಿ ವೆಂಕಟೇಶ್ ಎಂಬಾತ ಕಂದೇಗಾಲ ಗ್ರಾಮದ ಮಹದೇಶ್ವರ ದೇವಸ್ಥಾನದ ಬಳಿ ಬೈಕ್‌ ನಲ್ಲಿ ಪೇಪರ್‌ ನಲ್ಲಿ ಸುತ್ತಿಕೊಂಡು ಗಾಂಜಾ ಸಾಗಿಸುತ್ತಿದ್ದನು. ಮೈಸೂರು ಗ್ರಾಮಾಂತರ ಉಪ ವಿಭಾಗದ ಅಬಕಾರಿ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಆರೋಪಿ ವೆಂಕಟೇಶ್ ಬೈಕ್ ಹಾಗೂ ಮಾಲನ್ನು ಬಿಟ್ಟು ಪರಾರಿಯಾಗಿದ್ದಾನೆ.
ಈ ವೇಳೆ 15 ಸಾವಿರ ರೂ. ಮೌಲ್ಯದ ಹೂ ಬೀಜ ಮತ್ತು ತೆನೆ ಮಿಶ್ರಿತ 500ಗ್ರಾಂ ಒಣಗಾಂಜಾ ಹಾಗೂ 1.45 ಲಕ್ಷ ರೂ. ಮೌಲ್ಯದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಎನ್‌ ಡಿಪಿಎಸ್ ಅನ್ವಯ ಪ್ರಕರಣ ದಾಖಲಿಸಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.
ಕಾರ್ಯಾಚರಣೆಯಲ್ಲಿ ನಂಜನಗೂಡು ಉಪ ವಿಭಾಗದ ಅಬಕಾರಿ ಇನ್‌ ಸ್ಪೆಕ್ಟರ್ ಮುದಾಸರ್ ಬಾಷಾ, ಮುಖ್ಯಪೇದೆ ಕೆ.ವಿ.ಮಹೇಶ್, ಸಾಗರೆ ಗ್ರಾಪಂ ಪಿಡಿಒ ಲೋಕೇಶ್, ವಾಹನ ಚಾಲಕಿ ಎಂ.ಎಚ್.ಭಾರತಿ ಹಾಜರಿದ್ದರು....

ಮಹಿಳೆಯರ ಮೇಲೆ ಕ್ರೌರ್ಯ – ಕಾನೂನು ಕೈಗೆತ್ತಿಕೊಳ್ಳುವ ಸಂಸ್ಕೃತಿಗೆ ತೆರೆ ಬೀಳಲಿಬೆಂಗಳೂರು ನಗರದ ಹೃದಯಭಾಗವಾದ ಅವೆನ್ಯೂ ರಸ್ತೆಯಲ್ಲಿ ನಡೆದ ಇತ್ತ...
26/09/2025

ಮಹಿಳೆಯರ ಮೇಲೆ ಕ್ರೌರ್ಯ – ಕಾನೂನು ಕೈಗೆತ್ತಿಕೊಳ್ಳುವ ಸಂಸ್ಕೃತಿಗೆ ತೆರೆ ಬೀಳಲಿ

ಬೆಂಗಳೂರು ನಗರದ ಹೃದಯಭಾಗವಾದ ಅವೆನ್ಯೂ ರಸ್ತೆಯಲ್ಲಿ ನಡೆದ ಇತ್ತೀಚಿನ ಘಟನೆ ಸಮಸ್ತ ಸಮಾಜವನ್ನು ಬೆಚ್ಚಿಬೀಳಿಸಿದೆ. ಬಟ್ಟೆ ಅಂಗಡಿಯಲ್ಲಿ ಸೀರೆ ಕದ್ದ ಆರೋಪದ ಹೆಸರಿನಲ್ಲಿ ಅಂಗಡಿಯ ಮಾಲೀಕ ಓರ್ವ ಮಹಿಳೆಯ ಮೇಲೆ ಬೂಟು ಕಾಲಿನಿಂದ ಹೊಡೆದು ಕ್ರೌರ್ಯವೆಸಗಿದ್ದಾನೆ. ಇಂತಹ ಘಟನೆಗಳು ಕೇವಲ ಖಂಡನೀಯವಷ್ಟೇ ಅಲ್ಲ, ನಮ್ಮ ಸಮಾಜದ ಹೃದಯದಲ್ಲಿ ಗಾಯ ಮೂಡಿಸುವಂತಿವೆ.

ಮಹಿಳೆಯ ಮೇಲೆ ದೌರ್ಜನ್ಯ ಎಸಗಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಕಾನೂನು ಎಂಬ ವ್ಯವಸ್ಥೆ ನಮ್ಮ ದೇಶದಲ್ಲಿದೆ. ತಪ್ಪಿತಸ್ಥಳಿದ್ದರೆ ಕಾನೂನಿನ ಮೂಲಕ ಶಿಕ್ಷೆ ವಿಧಿಸಬಹುದು. ಆದರೆ ತಮ್ಮ ಕೈಯಲ್ಲಿ ನ್ಯಾಯ ಹಿಡಿದುಕೊಳ್ಳುವುದು, ವಿಶೇಷವಾಗಿ ಮಹಿಳೆಯರ ಮೇಲೆ ಶಾರೀರಿಕ ಹಿಂಸೆ ತೋರಿಸುವುದು ಅಕ್ಷಮ್ಯ ಅಪರಾಧ.

ಈ ಪ್ರಕರಣದಲ್ಲಿ ಪೊಲೀಸರು ತಕ್ಷಣ ಸ್ಪಂದಿಸಿ, ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿಯ ಮಾಲೀಕ ಬಾಬುಲಾಲ್ ಸೇರಿದಂತೆ ಇಬ್ಬರನ್ನು ಬಂಧಿಸಿ FIR ದಾಖಲಿಸಿರುವುದು ಶ್ಲಾಘನೀಯ. ಆದರೆ ಇದರಿಂದ ಮಾತ್ರ ಸಾಕಾಗುವುದಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕಾಗಿದೆ.

ಇದು ಕೇವಲ ಒಂದು ಮಹಿಳೆಯ ವಿಚಾರವಲ್ಲ; ಇದು ಪ್ರತಿಯೊಬ್ಬ ಮಹಿಳೆಯ ಗೌರವದ ಪ್ರಶ್ನೆ. ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ವ್ಯವಸ್ಥೆ ಗಟ್ಟಿಯಾಗಬೇಕು, ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಬೇಕು. ಮಹಿಳೆಯರ ಮೇಲೆ ಕ್ರೌರ್ಯ – ಕಾನೂನು ಕೈಗೆತ್ತಿಕೊಳ್ಳುವ ಸಂಸ್ಕೃತಿಗೆ ತೆರೆ ಬೀಳಲಿ

ಬೆಂಗಳೂರು ನಗರದ ಹೃದಯಭಾಗವಾದ ಅವೆನ್ಯೂ ರಸ್ತೆಯಲ್ಲಿ ನಡೆದ ಇತ್ತೀಚಿನ ಘಟನೆ ಸಮಸ್ತ ಸಮಾಜವನ್ನು ಬೆಚ್ಚಿಬೀಳಿಸಿದೆ. ಬಟ್ಟೆ ಅಂಗಡಿಯಲ್ಲಿ ಸೀರೆ ಕದ್ದ ಆರೋಪದ ಹೆಸರಿನಲ್ಲಿ ಅಂಗಡಿಯ ಮಾಲೀಕ ಓರ್ವ ಮಹಿಳೆಯ ಮೇಲೆ ಬೂಟು ಕಾಲಿನಿಂದ ಹೊಡೆದು ಕ್ರೌರ್ಯವೆಸಗಿದ್ದಾನೆ. ಇಂತಹ ಘಟನೆಗಳು ಕೇವಲ ಖಂಡನೀಯವಷ್ಟೇ ಅಲ್ಲ, ನಮ್ಮ ಸಮಾಜದ ಹೃದಯದಲ್ಲಿ ಗಾಯ ಮೂಡಿಸುವಂತಿವೆ.

ಮಹಿಳೆಯ ಮೇಲೆ ದೌರ್ಜನ್ಯ ಎಸಗಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಕಾನೂನು ಎಂಬ ವ್ಯವಸ್ಥೆ ನಮ್ಮ ದೇಶದಲ್ಲಿದೆ. ತಪ್ಪಿತಸ್ಥಳಿದ್ದರೆ ಕಾನೂನಿನ ಮೂಲಕ ಶಿಕ್ಷೆ ವಿಧಿಸಬಹುದು. ಆದರೆ ತಮ್ಮ ಕೈಯಲ್ಲಿ ನ್ಯಾಯ ಹಿಡಿದುಕೊಳ್ಳುವುದು, ವಿಶೇಷವಾಗಿ ಮಹಿಳೆಯರ ಮೇಲೆ ಶಾರೀರಿಕ ಹಿಂಸೆ ತೋರಿಸುವುದು ಅಕ್ಷಮ್ಯ ಅಪರಾಧ.

ಈ ಪ್ರಕರಣದಲ್ಲಿ ಪೊಲೀಸರು ತಕ್ಷಣ ಸ್ಪಂದಿಸಿ, ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿಯ ಮಾಲೀಕ ಬಾಬುಲಾಲ್ ಸೇರಿದಂತೆ ಇಬ್ಬರನ್ನು ಬಂಧಿಸಿ FIR ದಾಖಲಿಸಿರುವುದು ಶ್ಲಾಘನೀಯ. ಆದರೆ ಇದರಿಂದ ಮಾತ್ರ ಸಾಕಾಗುವುದಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕಾಗಿದೆ.

ಇದು ಕೇವಲ ಒಂದು ಮಹಿಳೆಯ ವಿಚಾರವಲ್ಲ; ಇದು ಪ್ರತಿಯೊಬ್ಬ ಮಹಿಳೆಯ ಗೌರವದ ಪ್ರಶ್ನೆ. ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ವ್ಯವಸ್ಥೆ ಗಟ್ಟಿಯಾಗಬೇಕು, ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಬೇಕು. ಮಹಿಳೆ ಒಂದು ತಾಯಿ, ಸಹೋದರಿ, ಮಗಳು – ಆಕೆಯ ಮೇಲೆ ಕೈ ಎತ್ತುವುದು ಸಮಾಜದ ಮೇಲೆ ಕೈ ಎತ್ತಿದಂತೆಯೇ.
ಒಂದು ತಾಯಿ, ಸಹೋದರಿ, ಮಗಳು – ಆಕೆಯ ಮೇಲೆ ಕೈ ಎತ್ತುವುದು ಸಮಾಜದ ಮೇಲೆ ಕೈ ಎತ್ತಿದಂತೆಯೇ.

📢 ತಾಲೂಕು ನ್ಯೂಸ್ ಮೀಡಿಯಾ ಲಿಮಿಟೆಡ್(A Public Limited Media Organization)💐 ನಿಮ್ಮನ್ನು ನಮ್ಮೊಂದಿಗೆ ಸ್ವಾಗತಿಸುತ್ತೇವೆ!ನಾವು ನಿಮ್ಮನ್ನ...
26/09/2025

📢 ತಾಲೂಕು ನ್ಯೂಸ್ ಮೀಡಿಯಾ ಲಿಮಿಟೆಡ್
(A Public Limited Media Organization)

💐 ನಿಮ್ಮನ್ನು ನಮ್ಮೊಂದಿಗೆ ಸ್ವಾಗತಿಸುತ್ತೇವೆ!

ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಸಂಸ್ಥೆಯ ಅಜೀವ ಸದಸ್ಯತ್ವ ಪಡೆಯಲು ಆಹ್ವಾನಿಸುತ್ತೇವೆ.

By joining as a Lifetime Member, you support the growth and outreach of our organization.

🎯 Equity Maturity Policy Lifetime Membership Invitation – ಅಜೀವ ಸದಸ್ಯತ್ವ ಆಹ್ವಾನ

🔹 One Time Fee Equity Maturity Policy Lifetime Membership : ₹20,000/- only

🔹 In return, as a token of appreciation and gratitude, with in 5 Years we will transfer shares or debentures worth ₹20,000/- of our actively operating media company to your Demat account.

Bank Account Number
TALUKNEWS MEDIA LIMITED
Current A/C No : 21440200001355
IFSC Code : FDRL0002144
The FEDERAL BANK Ltd

📈 As a shareholder, you are also entitled to annual dividends, ensuring a continued connection with our organization's journey and success.

📰 Our Media Operations – ಸಂಸ್ಥೆಯ ಕಾರ್ಯಚಟುವಟಿಕೆಗಳು
We have initiated operations in every Taluk of Karnataka, including:

🗞 Monthly Printed Magazine – ಮಾಸಿಕ ಮುದ್ರಿತ ಪತ್ರಿಕೆ

📺 Local Cable Network & Live Streaming TV Broadcast

🌐 Online Daily News Portal

📲 Digital News Broadcast via Social Media Channels

Through these platforms, we aim to:
✅ Promote local businesses
✅ Strengthen community communication
✅ Contribute to Taluk-level development

🤝 Your Support Matters – ನಿಮ್ಮ ಸಹಕಾರ ಅಮೂಲ್ಯ
Your involvement will aid us in building awareness for social equity, transparency, and local empowerment.

📍 Let’s work together to build a stronger, informed, and united local community through media.

📞 For Details & Support
Visit: https://talukpathrike.com
Email: [email protected]
Phone: 9481838705 / 9481838704 / 9481838703 / 9481838706
https://taluknewsmedia.com

LOCAL - ONLINE PRINT BROADCAST
http://taluknews.tv
http://ivoter.tv
taluknews.com
talukpathrike.com
- taluknewsmedia.com

Equity Maturity Policy : ಇಕ್ವಿಟಿ ಶೇರ್ (Equity Share) ಪ್ರಯೋಜನಗಳು:

1. ಮಾಲೀಕತ್ವ ಹಕ್ಕು – ಇಕ್ವಿಟಿ ಶೇರ್‌ಗಳನ್ನು ಕೊಂಡವರು ಕಂಪನಿಯ ಭಾಗ ಮಾಲೀಕರು ಆಗುತ್ತಾರೆ.

2. ಡಿವಿಡೆಂಡ್ ಪಡೆಯುವ ಅವಕಾಶ – ಕಂಪನಿಗೆ ಲಾಭವಾದರೆ, ಷೇರ್‌ಹೋಲ್ಡರ್‌ಗಳಿಗೆ ಡಿವಿಡೆಂಡ್ ರೂಪದಲ್ಲಿ ಆದಾಯ ಸಿಗಬಹುದು.

3. ಕ್ಯಾಪಿಟಲ್ ಅಪ್ರಿಸಿಯೇಶನ್ (Capital Appreciation) – ಕಂಪನಿ ಬೆಳೆಯುತ್ತಿದ್ದಂತೆ, ಷೇರ್ ಬೆಲೆ ಏರುತ್ತದೆ. ಹೂಡಿಕೆ ಮಾಡಿದ ಮೊತ್ತಕ್ಕಿಂತ ಹೆಚ್ಚು ಲಾಭ ಪಡೆಯಬಹುದು.

4. ಮತದಾನ ಹಕ್ಕು – ಕಂಪನಿಯ ನಿರ್ಣಯಗಳಲ್ಲಿ (AGM/EGM) ಮತದಾನ ಮಾಡಲು ಹಕ್ಕು ಇರುತ್ತದೆ.

5. ಲಿಕ್ವಿಡಿಟಿ (Liquidity) – ಷೇರ್ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕಾರಣ, ಯಾವಾಗ ಬೇಕಾದರೂ ಮಾರಾಟ ಮಾಡಬಹುದು.

6. ಬೋನಸ್ ಮತ್ತು ರೈಟ್ಸ್ ಇಷ್ಯೂ – ಕೆಲವೊಮ್ಮೆ ಕಂಪನಿ ಬೋನಸ್ ಶೇರ್‌ಗಳು ಅಥವಾ ರೈಟ್ಸ್ ಶೇರ್‌ಗಳನ್ನು ನೀಡಬಹುದು.

7. ಕುಟುಂಬದ ಹಕ್ಕು – ಇಕ್ವಿಟಿ ಶೇರ್‌ಗಳನ್ನು ಹಕ್ಕು ಪತ್ರದಂತೆ ವಾರಸುದಾರರಿಗೆ ವರ್ಗಾಯಿಸಬಹುದು.

8. ಮೂಲಧನ ವೆಚ್ಚ ಕಡಿಮೆ – ಕಂಪನಿಗೆ ಇಕ್ವಿಟಿ ಶೇರ್ ಮೂಲಕ ಹಣ ಸಂಗ್ರಹಿಸಿದಾಗ ಕಂಪನಿ ವಿಸ್ತರಣೆ ಗೊಂಡಾಗ ಷೇರು ಮೌಲ್ಯ ಹೆಚ್ಚಾಗುತ್ತದೆ.

9. ಡಿಮ್ಯಾಟ್ ಖಾತೆ ಮೂಲಕ ಪ್ರಕ್ರಿಯೆ ಮಾಡಲಾಗುತ್ತಿದೆ. ಎನ್ ಎಸ್ ಡಿ ಎಲ್ ಹಾಗೂ ಸಿ ಡಿ ಎಸ್ ಎಲ್ ಪ್ರಾಥಮಿಕ ಹಂತದ ಮಾರುಕಟ್ಟೆ ನಿಬಂಧನೆಗಳು ಅನ್ವಯಿಸುತ್ತದೆ.

26/09/2025

I got over 4,500 reactions on my posts last week! Thanks everyone for your support! 🎉

📢 ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಸಾರ್ವಜನಿಕ ಪ್ರಕಟಣೆನಾಗರಿಕರು ತಮ್ಮ ನಗರ ಪಾಲಿಕೆಗೆ ಸಂಬಂಧಿಸಿದ ಕುಂದುಕೊರತೆಗಳು / ದೂರುಗಳು ನೀಡಲು, ಕೆ...
25/09/2025

📢 ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಸಾರ್ವಜನಿಕ ಪ್ರಕಟಣೆ
ನಾಗರಿಕರು ತಮ್ಮ ನಗರ ಪಾಲಿಕೆಗೆ ಸಂಬಂಧಿಸಿದ ಕುಂದುಕೊರತೆಗಳು / ದೂರುಗಳು ನೀಡಲು, ಕೆಳಗಿನ ನಿಯಂತ್ರಣ ಕೊಠಡಿ ಸಂಖ್ಯೆಗೆ ಕರೆ ಮಾಡಲು ವಿನಂತಿಸಿದೆ.
ನಿಮ್ಮ ಸಹಕಾರವೇ ಸ್ವಚ್ಛ, ಸುಂದರ ಹಾಗೂ ಸುರಕ್ಷಿತ ಬೆಂಗಳೂರಿಗೆ ದಾರಿ! 🌿🏙️

ರಾಜಕಾರಣಿಗಳ ಬ್ಯಾನರ್,, ಹೈ ಕೋರ್ಟ್ ನಿಷೇದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಶಾಸಕರು.....
25/09/2025

ರಾಜಕಾರಣಿಗಳ ಬ್ಯಾನರ್,, ಹೈ ಕೋರ್ಟ್ ನಿಷೇದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಶಾಸಕರು.....

ಬಸವನಗುಡಿ ವಿಧಾನಸಭಾ ಕ್ಷೇತ್ರದ ಕಾಮಗಾರಿಗಳು – ಜನರ ಹಣದ ಹಾಳು, ಗುಣಮಟ್ಟದ ಕೊರತೆಬೆಂಗಳೂರು ನಗರದ ಹೃದಯಭಾಗವಾದ ಬಸವನಗುಡಿ, ಸಂಸ್ಕೃತಿ, ಇತಿಹಾಸ ...
24/09/2025

ಬಸವನಗುಡಿ ವಿಧಾನಸಭಾ ಕ್ಷೇತ್ರದ ಕಾಮಗಾರಿಗಳು – ಜನರ ಹಣದ ಹಾಳು, ಗುಣಮಟ್ಟದ ಕೊರತೆ

ಬೆಂಗಳೂರು ನಗರದ ಹೃದಯಭಾಗವಾದ ಬಸವನಗುಡಿ, ಸಂಸ್ಕೃತಿ, ಇತಿಹಾಸ ಮತ್ತು ವಿದ್ಯಾಭ್ಯಾಸದ ಆಳವಾದ ನೆಲೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾಮಗಾರಿಗಳು ಜನರಲ್ಲಿ ನಿರಾಶೆ ಮತ್ತು ಆಕ್ರೋಶವನ್ನು ಹುಟ್ಟುಹಾಕಿವೆ. ಕಾರಣ ಸರಳ – ಗುಣಮಟ್ಟವಿಲ್ಲದ ಕಾಮಗಾರಿಗಳು, ಮೋಸದಾಯಕ ಕಾಂಟ್ರಾಕ್ಟ್ ವ್ಯವಸ್ಥೆ ಮತ್ತು ಜನರ ಹಣದ ದುರುಪಯೋಗ.

ರಸ್ತೆಗಳು – ಮರುಮರು ದುರಸ್ತಿ, ಶಾಶ್ವತ ಪರಿಹಾರವಿಲ್ಲ..
ಪ್ರತಿ ವರ್ಷ ರಸ್ತೆಗಳ ದುರಸ್ತಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಆದರೆ ಮಳೆ ಬಿದ್ದ ತಕ್ಷಣವೇ ಹೊಸದಾಗಿ ಹಾಕಿದ ಡಾಂಬರು ಉದುರಿಬಿಡುತ್ತದೆ. ಇದು ಏನು? ತಾಂತ್ರಿಕ ದೋಷವೋ ಅಥವಾ ರಾಜಕೀಯ-ಕಾಂಟ್ರಾಕ್ಟರ್ ಲಾಬಿಯ ಮೋಸದ ಆಟವೋ? ಜನರಿಗೆ ಶಾಶ್ವತ ಗುಣಮಟ್ಟದ ರಸ್ತೆ ಬೇಕು, ತಾತ್ಕಾಲಿಕ ಜಾಗಟ್ಟು ಪರಿಹಾರವಲ್ಲ.

ಚರಂಡಿ ಮತ್ತು ಒಳಚರಂಡಿ ಸಮಸ್ಯೆ..
ಪ್ರತಿಯೊಂದು ಮಳೆಗೆ ಬಸವನಗುಡಿ ಪ್ರದೇಶದ ಬೀದಿಗಳು ಕೊಳಚೆ ನೀರಿನಿಂದ ತುಂಬಿ ನರಕದ ಚಿತ್ರಣ ತರುತ್ತವೆ. ಒಳಚರಂಡಿ ಕಾಮಗಾರಿಗಳು ವರ್ಷಗಟ್ಟಲೆ ನಡೆದರೂ ಸಮಸ್ಯೆಗೆ ಅಂತ್ಯವಿಲ್ಲ. ಯೋಜನೆ ಇಲ್ಲದೆ, ವೈಜ್ಞಾನಿಕ ಅಧ್ಯಯನವಿಲ್ಲದೆ ಕಾಮಗಾರಿಗಳು ನಡೆದ ಪರಿಣಾಮ ಜನಜೀವನವೇ ತೊಂದರೆಗೆ ಸಿಲುಕಿದೆ.

ಪಾರದರ್ಶಕತೆ ಎಲ್ಲಿದೆ?
ಜನರ ತೆರಿಗೆ ಹಣದಿಂದ ನಡೆಯುವ ಕಾಮಗಾರಿಗಳಿಗೆ ಪಾರದರ್ಶಕತೆ ಅಗತ್ಯ. ಆದರೆ ಈಗಿನ ಸ್ಥಿತಿಯಲ್ಲಿ ಕಾಮಗಾರಿಗಳ ವಿವರ, ಖರ್ಚು, ಸಮಯದ ಮಾಹಿತಿ ಜನಸಾಮಾನ್ಯರಿಗೆ ಮುಚ್ಚಿಟ್ಟಂತಿದೆ. “ಕಾಂಟ್ರಾಕ್ಟರ್‌ಗಳ ಲಾಭ – ಜನರ ನಷ್ಟ” ಎಂಬ ಸಮೀಕರಣವೇ ಮುಂದುವರಿದಿದೆ.

ಜನಜಾಗೃತಿ – ಬದಲಾವಣೆಯ ದಾರಿ

ಈ ಪರಿಸ್ಥಿತಿಯನ್ನು ಬದಲಿಸಲು ಜನರ ಪಾತ್ರ ಬಹಳ ಮುಖ್ಯ. ಜನರು ತಮ್ಮ ಹಕ್ಕಿಗಾಗಿ ಧ್ವನಿ ಎತ್ತಬೇಕು.
ವಾರ್ಡು, ಕ್ಷೇತ್ರ ಮಟ್ಟದ ಸಭೆಗಳಲ್ಲಿ ಪಾಲ್ಗೊಂಡು ಪ್ರಶ್ನಿಸಬೇಕು.

“ನಮಗೆ ಗುಣಮಟ್ಟ ಬೇಕು, ಮೋಸ ಬೇಡ” ಎಂಬ ಒತ್ತಡವನ್ನು ಜನಪ್ರತಿನಿಧಿಗಳ ಮೇಲೆ ತರಬೇಕು.

ಕೊನೆಗೊಂದು ಮಾತು..
ಬಸವನಗುಡಿ ಜನರ ಹೆಮ್ಮೆ, ಬೆಂಗಳೂರು ನಗರದ ಸಂಸ್ಕೃತಿಯ ತವರೂರು. ಈ ಪ್ರದೇಶದ ಜನರಿಗೆ ದುರಸ್ತಿಗಿಂತ ಹೆಚ್ಚು ಉತ್ತಮ ಯೋಜನೆ, ಶಾಶ್ವತ ಪರಿಹಾರ, ನಿಜವಾದ ಅಭಿವೃದ್ಧಿ ಬೇಕಾಗಿದೆ. ಜನರ ಕಣ್ಣೀರಿಗೆ ರಾಜಕೀಯದ ಲಾಭವೇ ಮುಖ್ಯವಾದರೆ, ಇತಿಹಾಸವೇ ಇವರನ್ನು ಕ್ಷಮಿಸುವುದಿಲ್ಲ.

ಜಿಪಿಎಸ್ ಬಳಸಿ ಪೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ ಭ್ರಷ್ಟ ವ್ಯವಸ್ಥೆ ತೊಲಗಲಿ ಕಾನೂನು ಕ್ರಮ ಕೈಗೊಳ್ಳಲಿ.....
24/09/2025

ಜಿಪಿಎಸ್ ಬಳಸಿ ಪೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ ಭ್ರಷ್ಟ ವ್ಯವಸ್ಥೆ ತೊಲಗಲಿ ಕಾನೂನು ಕ್ರಮ ಕೈಗೊಳ್ಳಲಿ.....

🌸 ಶ್ರೀ ಎಸ್.ಎಲ್. ಭೈರಪ್ಪರಿಗೆ ಭಾವಪೂರ್ಣ ಶ್ರದ್ದಾಂಜಲಿ 🌸ಆಧುನಿಕ ಕನ್ನಡ ಸಾಹಿತ್ಯ ಲೋಕದ ಹೆಮ್ಮೆಯ ಕಾದಂಬರಿಕಾರರಾದ, ಸರಸ್ವತಿ ಸಮ್ಮಾನ್ ಪುರಸ್ಕ...
24/09/2025

🌸 ಶ್ರೀ ಎಸ್.ಎಲ್. ಭೈರಪ್ಪರಿಗೆ ಭಾವಪೂರ್ಣ ಶ್ರದ್ದಾಂಜಲಿ 🌸

ಆಧುನಿಕ ಕನ್ನಡ ಸಾಹಿತ್ಯ ಲೋಕದ ಹೆಮ್ಮೆಯ ಕಾದಂಬರಿಕಾರರಾದ, ಸರಸ್ವತಿ ಸಮ್ಮಾನ್ ಪುರಸ್ಕೃತರು ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತರಾದ ಶ್ರೀ ಸಾಂತೇಶಿವರ ಲಿಂಗಣ್ಣ ಭೈರಪ್ಪ ಅವರ ಅಗಲಿಕೆಯಿಂದ ಸಾಹಿತ್ಯ ಲೋಕವೇ ಶೋಕಸಮುದ್ರದಲ್ಲಿ ಮುಳುಗಿದೆ.

📖 ಸಾಹಿತ್ಯ ಸೇವೆ

ಭೈರಪ್ಪರು ತತ್ತ್ವಶಾಸ್ತ್ರ, ಇತಿಹಾಸ, ಸಂಸ್ಕೃತಿ, ಧರ್ಮ ಮತ್ತು ಮಾನವ ಸಂಬಂಧಗಳ ಆಳವಾದ ಅರ್ಥೈಸಿಕೆಗೆ ಹೆಸರುವಾಸಿಯಾಗಿದ್ದರು.
ಅವರ ಕೃತಿಗಳು ಕೇವಲ ಕಾದಂಬರಿಗಳಷ್ಟೇ ಅಲ್ಲ, ಸಮಾಜದ ಆಲೋಚನೆಗೆ ಕನ್ನಡಿದಂತಾಗಿದ್ದವು.

✍️ ಪ್ರಮುಖ ಕಾದಂಬರಿಗಳು

ವಂಶವೃಕ್ಷ

ಧರ್ಮಶ್ರೀ

ಸಾಕ್ಷಿ

ಪರ್ವ

ಆವರಣ

ಮಂಡ್ರ

ತಿಮ್ಮನ ಕತೆ
ಇವುಗಳಲ್ಲಿ ಪರ್ವ ಮತ್ತು ಆವರಣ ಸಾಹಿತ್ಯ ಲೋಕದಲ್ಲಿ ಚರ್ಚೆಗೆ ಕಾರಣವಾದ ಕೃತಿಗಳಾಗಿವೆ.

🏆 ಗೌರವಗಳು

ಸರಸ್ವತಿ ಸಮ್ಮಾನ್ (ಮಂಡ್ರಗಾಗಿ – 1994)

ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಪದ್ಮಭೂಷಣ (2016)
ಇದರ ಜೊತೆಗೆ ಅನೇಕ ರಾಜ್ಯ-ರಾಷ್ಟ್ರ ಮಟ್ಟದ ಪುರಸ್ಕಾರಗಳು ಅವರ ಹೆಸರಿನಲ್ಲಿ ಸೇರಿವೆ.

🙏 ಶ್ರದ್ದಾಂಜಲಿ

ಅವರ ಬರಹಗಳು ತಲೆಮಾರುಗಳಿಗೆ ಮಾರ್ಗದೀಪವಾಗಿದ್ದು, ಕನ್ನಡ ಸಾಹಿತ್ಯದ ಅಕ್ಷಯ ಸಂಪತ್ತಾಗಿ ಉಳಿಯಲಿದೆ.
ಅವರು ಬರೆದ ಪ್ರತಿಯೊಂದು ಕೃತಿಯೂ ಸಮಾಜದ ಒಳನೋಟ ನೀಡುವ ದೀಪಸ್ತಂಭವಾಗಿದೆ.

ಆರ್ ಆರ್ ನಗರದಲ್ಲಿನ ರಸ್ತೆಗಳ ಕೆಟ್ಟಿರುವುದಕ್ಕೆ ನೇರಾ ಹೊಣೆಗಾರರು ಜನಪ್ರತಿನಿಧಿಗಳು ಜನರಿಂದ ಆಯ್ಕೆಯಾಗಿ ಜನರ ಮೂಲ ಸೌಲಭ್ಯಗಳನ್ನು ಗಮನಿಸದ ಹಾಗ...
24/09/2025

ಆರ್ ಆರ್ ನಗರದಲ್ಲಿನ ರಸ್ತೆಗಳ ಕೆಟ್ಟಿರುವುದಕ್ಕೆ ನೇರಾ ಹೊಣೆಗಾರರು ಜನಪ್ರತಿನಿಧಿಗಳು ಜನರಿಂದ ಆಯ್ಕೆಯಾಗಿ ಜನರ ಮೂಲ ಸೌಲಭ್ಯಗಳನ್ನು ಗಮನಿಸದ ಹಾಗೂ ಬೃಹತ್ ಭ್ರಷ್ಟಾಚಾರ ಪಾಲುದಾರರಂತೆ ಕಣ್ಣುಮುಚ್ಚಿ ಸಾಗುತ್ತಿರುವವರ ವಿರುದ್ಧ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ರಸ್ತೆಗಳ ಜೊತೆಯಲ್ಲಿ ಫೋಟೋ ಬಿಂಬಿಸಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಚಿತ್ರಗಳು..... , ,

24/09/2025

ಕರ್ನಾಟಕದ ಕಿರೀಟ, ಐಟಿ ಸಿಟಿ, ಸಿಲಿಕಾನ್ ವ್ಯಾಲಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ಈಗ ಗುಂಡಿಗಳ ನಗರ, ಕೊಳಕು ನಗರ ಎಂಬ ಕುಖ್ಯಾತಿಗೆ ಗುರಿಯಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ ನಗರದ ಜನತೆಯ ಜೀವನವನ್ನು ನರಕಯಾತನೆ ಮಾಡಿದೆ. ಇಂತಹ ಸಂದರ್ಭದಲ್ಲಿ ಇರುವ ಮೂಲಭೂತ ಸೌಕರ್ಯಗಳನ್ನು ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡುವ ವ್ಯವಸ್ಥೆ ಮಾತ್ರ ನಮ್ಮಲ್ಲಿ ಇಲ್ಲ ಈ ಸಮಸ್ಯೆ ಬೆಂಗಳೂರಿನ ಜನತೆಗೆ ಅಜೀವ ಪರ್ಯಂತ ಇರುವ ಶಾಪವಾಗಿದೆ. ಯಾಕೆಂದರೆ ಇಲ್ಲಿ ಆಡಳಿತ ಮಾಡಿರುವ JCB (JDS, Cong, BJP) ಪಕ್ಷಗಳು ಆಡಳಿತ ವ್ಯವಸ್ಥೆಯಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಅಧ್ಯಕ್ಷತೆಯ ಫಲಾನುಭವಿಗಳಾಗಿದ್ದು. ಯಾರೇ ಅಧಿಕಾರಕ್ಕೆ ಬಂದರೂ ಬದಲಾವಣೆಗೆ ಆಸ್ಪದವೇ ಇಲ್ಲದಂತಾಗಿದೆ. ಸೂತ್ರ ಆಟಗಾರರು ಮಾತ್ರ ಬದಲಾಗುತ್ತಿದ್ದಾರೆ, ವ್ಯವಸ್ಥೆ ಆಟ ಬದಲಾಗುತ್ತಲೇ ಇಲ್ಲ.

Address

219, Girinagar Road Avalahalli New BDA Layout, Ganapathi Nagar, Avalahalli, Bengaluru 560026
Bangalore
560097

Alerts

Be the first to know and let us send you an email when Taluknews posts news and promotions. Your email address will not be used for any other purpose, and you can unsubscribe at any time.

Contact The Business

Send a message to Taluknews:

Share

talukpathrike

ತಾಲ್ಲೂಕು ಪತ್ರಿಕೆ