Saptashwa TV Kannada

Saptashwa TV Kannada Contact information, map and directions, contact form, opening hours, services, ratings, photos, videos and announcements from Saptashwa TV Kannada, Media/News Company, KANAKAPURA MAIN Road, THALAGHATTAPURA, Bangalore South, Bangalore, India/, Bangalore.
(1)

SAPTASHWA TV – ಶಕ್ತಿ. ಜನರು. ದೃಷ್ಟಿಕೋನ. ಸಪ್ತಶ್ವ TV ನಲ್ಲಿ, ಸತ್ಯ ಮತ್ತು ಪಾರದರ್ಶಕತೆ ನಮ್ಮ ಪತ್ರಕರ್ತಿತ್ವವನ್ನು ನಿರ್ಧರಿಸುತ್ತದೆ. ನಾವು ಕರ್ನಾಟಕ, ಭಾರತ ಮತ್ತು ವಿಶ್ವದ verified ಕಥೆಗಳನ್ನು ತಲುಪಿಸುತ್ತೇವೆ — ಇಲ್ಲಿ ವಾಸ್ತವಗಳು ಗದ್ದಲಕ್ಕಿಂತ ಮುಖ್ಯ.
ಜಾಹೀರಾತಿಗಾಗಿ ಸಂಪರ್ಕಿಸಿ 9886800933

26/08/2026

Bank Customers Alert ಸೆಪ್ಟೆಂಬರ್ 11ರಿಂದ ಬ್ಯಾಂಕ್ ಸೇವೆ ವ್ಯತ್ಯಯ ಸಾಧ್ಯತೆ.! ಸತತ ರಜೆ ಬಗ್ಗೆ ಇಲ್ಲಿದೆ ಮಾಹಿತಿ.!

ಬ್ಯಾಂಕ್ ಗ್ರಾಹಕರೇ ಗಮನಿಸಿ..! ಬ್ಯಾಂಕ್‌ಗೆ ಸಂಬಂಧಿಸಿದ ತುರ್ತು ಕೆಲಸಗಳಿದ್ದರೆ ಈ ಸುದ್ದಿ ನಿಮಗೆ ಮುಖ್ಯ. **ಸೆಪ್ಟೆಂಬರ್ 11, 2026ರಂದು ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರಕ್ಕೆ UFBU ಕರೆ ನೀಡಿದೆ.** ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿ, ಪಿಂಚಣಿ ಸಂಬಂಧಿತ ಬೇಡಿಕೆಗಳು, PLI ವಿಚಾರ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಮುಷ್ಕರಕ್ಕೆ ಕರೆ ನೀಡಲಾಗಿದೆ.ಹೀಗಾಗಿ ಬ್ಯಾಂಕ್ ಗ್ರಾಹಕರೇ, ಮುಷ್ಕರದ ದಿನಗಳಲ್ಲಿ ಶಾಖೆಗೆ ತೆರಳಿ ಮಾಡಬೇಕಿರುವ ಯಾವುದೇ ತುರ್ತು ಹಣಕಾಸು ಕೆಲಸಗಳಿದ್ದರೆ **ಮುಂಚಿತವಾಗಿಯೇ ಮುಗಿಸಿಕೊಳ್ಳುವುದು ಒಳಿತು.

26/08/2026

ರಾತ್ರೋರಾತ್ರಿ 63 ಅಡಿಕೆ ಸಸಿಗಳನ್ನು ಕಡಿದುಹಾಕಿದ ದುಷ್ಕರ್ಮಿಗಳು!

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಗ್ರಾಮದಲ್ಲಿ ಕಿಡಿಗೇಡಿಗಳು ರಾತ್ರೋರಾತ್ರಿ ಫಸಲಿಗೆ ಬಂದಿದ್ದ ಅಡಿಕೆ ಸಸಿಗಳನ್ನು ನಾಶಮಾಡಿ ವಿಕೃತಿ ಮೆರೆದಿದ್ದಾರೆ. ಕೃಷ್ಣಪ್ಪ ಎಂಬುವರಿಗೆ ಸೇರಿದ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆಸಲಾಗಿದ್ದ ಸುಮಾರು 63 ಅಡಿಕೆ ಸಸಿಗಳನ್ನು ಕತ್ತಲ ರಾತ್ರಿಯಲ್ಲಿ ಕಡಿದುಹಾಕಲಾಗಿದೆ. ಎಂದಿನಂತೆ ಬೆಳಗ್ಗೆ ತೋಟಕ್ಕೆ ತೆರಳಿದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ರೈತ ಕೃಷ್ಣಪ್ಪ ಕಣ್ಣೀರಿಟ್ಟಿದ್ದಾರೆ. ಗ್ರಾಮಸ್ಥರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಕೂಡಲೇ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ರೈತ ವೈಎನ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

26/08/2026

ಅಂಬಾರಿ ಹೊತ್ತ ಜನಪ್ರಿಯ ಅಭಿಮನ್ಯು ಆನೆಗೆ ಭಾವನಾತ್ಮಕ ವಿದಾಯ!

ಮೈಸೂರು ದಸರೆಯಲ್ಲಿ ಸತತವಾಗಿ ಅಂಬಾರಿ ಹೊತ್ತು ನಾಡಹಬ್ಬದ ಕಳಕಳಿಯನ್ನು ಹೆಚ್ಚಿಸಿದ್ದ ಖ್ಯಾತ ಅಭಿಮನ್ಯು ಆನೆಗೆ ಗೌರವಪೂರ್ವಕ ವಿದಾಯ ನೀಡಲಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ನಡೆದ ಗಜಪಯಣದ ಸಂದರ್ಭದಲ್ಲಿ ನಿವೃತ್ತಿ ಹೊಂದಿರುವ ಅಭಿಮನ್ಯುವಿಗೆ ವಿಶೇಷ ಗೌರವ ಸಲ್ಲಿಸಿ ಬೀಳ್ಕೊಡಲಾಯಿತು. ಈ ಹಿಂದೆ ಅರಣ್ಯ ಸಚಿವರಾಗಿದ್ದ ಈಶ್ವರ್ ಖಂಡ್ರೆ ಅವರು ಅಭಿಮನ್ಯುವಿಗೆ ವಿಶೇಷ ಗೌರವ ಸಲ್ಲಿಸುವಂತೆ ಪತ್ರ ಬರೆದು ಒತ್ತಾಯಿಸಿದ್ದರು. ದಸರೆಯಲ್ಲಿ ತನ್ನದೇ ಆದ ವಿಶೇಷ ಮುದ್ರೆ ಒತ್ತಿರುವ ಅಭಿಮನ್ಯು ಆನೆಗೆ ಸಲ್ಲಿಸಿದ ಈ ಗೌರವದ ವಿದಾಯವು ವನ್ಯಜೀವಿ ಪ್ರಿಯರು ಹಾಗೂ ಸಾರ್ವಜನಿಕರಲ್ಲಿ ಭಾವುಕ ಕ್ಷಣಗಳನ್ನು ಮೂಡಿಸಿತು.

26/08/2026

Love Marriage Dhoka : ಮದುವೆಯಾಗುವವರೆಗೂ ಇಲ್ಲಿಂದ ಹೋಗಲ್ಲ..! ಪ್ರಿಯಕರನ ಮನೆ ಮುಂದೆ ಯುವತಿ ಹೈಡ್ರಾಮಾ..!

ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿ, ಸುಮಾರು ಆರು ತಿಂಗಳು ಒಟ್ಟಿಗೆ ಇದ್ದ ಬಳಿಕ ಇದೀಗ ಮದುವೆಯಾಗುವುದಿಲ್ಲ ಎಂದು ಯುವಕ ಕೈಕೊಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರಕ್ಕೆ ಯುವತಿಯೊಬ್ಬರು ಪ್ರಿಯಕರನ ಮನೆ ಮುಂದೆ ಕುಳಿತು ನ್ಯಾಯಕ್ಕಾಗಿ ಪಟ್ಟು ಹಿಡಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಪ್ಪಾರವಾಡಿ ಗ್ರಾಮದಲ್ಲಿ ನಡೆದಿದೆ.

26/08/2026

ಕಳಂಕಿತ ಸಚಿವರನ್ನು ಇಟ್ಟುಕೊಂಡು ಸದನ ನಡೆಸುವುದೇ? ಸುರೇಶ್ ಬಾಬು ಆಕ್ರೋಶ!

ರಾಜ್ಯದಲ್ಲಿ ನಡೆಯುತ್ತಿರುವ ನೈಸ್ ಹಗರಣ, ಬಿಡದಿ ಅವ್ಯವಹಾರ ಮತ್ತು ಕಳಂಕಿತ ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಜೆಡಿಎಲ್‌ಪಿ ನಾಯಕ ಸುರೇಶ್ ಬಾಬು ನೇತೃತ್ವದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ. 40 ವರ್ಷಗಳ ಕಾಲಮಿತಿ ಮುಗಿದಿದ್ದರೂ ನೈಸ್ ಯೋಜನೆಯಲ್ಲಿ ಟೋಲ್ ಸಂಗ್ರಹ ಮುಂದುವರಿದಿದ್ದು, ರೈತರಿಂದ ಅಗತ್ಯಕ್ಕಿಂತ ಹೆಚ್ಚು ಜಮೀನು ಪಡೆದು ದೊಡ್ಡ ಮಟ್ಟದ ವಂಚನೆ ಎಸಗಲಾಗಿದೆ ಎಂದು ದೂರಿದ್ದಾರೆ. ಹೈಕೋರ್ಟ್ ಸ್ಪಷ್ಟ ಆದೇಶವಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಸರ್ಕಾರದ ಪ್ರಮುಖರೇ ಇದರ ಹಿಂದೆ ಇರಬಹುದು ಎಂಬ ಅನುಮಾನವಿದ್ದು, ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈಗ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

26/08/2026

ನೈಸ್ ವಿಚಾರದಲ್ಲಿ ಹೈಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟ!

ನೈಸ್ (NICE) ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನ ಬಳಿಕ ಜೆಡಿಎಸ್ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಗಂಭೀರ ಚರ್ಚೆ ನಡೆಸಿದೆ. ಈ ಕುರಿತು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಕಳೆದ 20-25 ವರ್ಷಗಳಿಂದ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ತೀವ್ರ ಮೋಸ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ ಬರಬೇಕಾದ ಸೂಕ್ತ ಪರಿಹಾರ ಸಿಕ್ಕಿಲ್ಲ ಹಾಗೂ ಭೂ ಸ್ವಾಧೀನದ ಹೆಸರಿನಲ್ಲಿ ದೊಡ್ಡ ಅವ್ಯವಹಾರ ನಡೆದಿದೆ ಎಂದು ದೂರಿದರು. 1997ರ ಜೆ.ಎಚ್. ಪಟೇಲರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಒಪ್ಪಂದದ ಬಗ್ಗೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ದಿನನಿತ್ಯ ಸಾವಿರಾರು ಕೋಟಿ ರೂಪಾಯಿ ಟೋಲ್ ಸಂಗ್ರಹಿಸುತ್ತಿರುವ ನೈಸ್ ಯೋಜನೆಯನ್ನು ಸರ್ಕಾರವೇ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿರುವ ಅವರು, ಸರ್ಕಾರ ರೈತರ ಪರವೋ ಅಥವಾ ನೈಸ್ ಪರವೋ ಎಂದು ಪ್ರಶ್ನಿಸಿದ್ದಾರೆ.

26/08/2026

ವಿಜಯಪುರದಲ್ಲಿ ಎದೆನಡುಗಿಸುವ ದುರಂತ..! ತಾಯಿ ಸೇರಿ 5 ಮಕ್ಕಳು ಶವವಾಗಿ ಪತ್ತೆ..! ಕಣ್ಣೀರಲ್ಲಿ ತೊರವಿ ಗ್ರಾಮ..!

ನಮಸ್ಕಾರ, ವಿಶೇಷ ವರದಿಗೆ ಸ್ವಾಗತ. ವಿಜಯಪುರದಲ್ಲಿ ಎದೆನಡುಗಿಸುವ ಭೀಕರ ದುರಂತವೊಂದು ಸಂಭವಿಸಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಗಸ್ಟ್ 24ರಂದು ಮನೆಯಿಂದ ನಾಪತ್ತೆಯಾಗಿದ್ದ **ತಾಯಿ ಸೇರಿದಂತೆ ಐವರು ಮಕ್ಕಳು ಶ*ವಾಗಿ ಪತ್ತೆಯಾಗಿದ್ದಾರೆ**. ಈ ದುರ್ಘಟನೆಯಿಂದ ಇಡೀ ತೊರವಿ ಗ್ರಾಮವೇ ಕಣ್ಣೀರಿನಲ್ಲಿ ಮುಳುಗಿದೆ.ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಹಲವು ಜೀವಗಳು ಬಲಿಯಾಗಿರುವ ಈ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಪ್ರಕರಣದ ಸಂಪೂರ್ಣ ಸತ್ಯಾಂಶ ತನಿಖೆಯಿಂದ ಹೊರಬರಬೇಕಿದೆ.

Address

KANAKAPURA MAIN Road, THALAGHATTAPURA, Bangalore South, Bangalore, India/
Bangalore
560062

Alerts

Be the first to know and let us send you an email when Saptashwa TV Kannada posts news and promotions. Your email address will not be used for any other purpose, and you can unsubscribe at any time.

Shortcuts

Share