Kalaam Express News

Kalaam Express News Kalaam Express news please our page follow

11/03/2026

ರಾಜಕೀಯವು ಸಮಾಜ ಸೇವೆಯಾಗಬೇಕು ಹೊರತು ಹಣ ಗಳಿಸುವ ವ್ಯವಸ್ಥೆ ಆಗಬಾರದು ; ಅರ್ಜುನ ಹಲಗಿಗೌಡರ

ರಬಕವಿ-ಬನಹಟ್ಟಿ ತಾಲೂಕ ತಹಶೀಲ್ದಾರ ರವರ ಕಾರ್ಯಾಲಯದ ಎದುರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ದೀರ್ಘ ಕಾಲದಿಂದ ಖಾಲಿ ಉಳಿದಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಆಗ್ರಹಿಸಿ, ಜನ ಸಾಮಾನೈರ ವೇದಿಕೆಯ ವತಿಯಿಂದ ಯುವ ಅಧಿವೇಶನವನ್ನು ಮಾಡುವುದು ಮುಖಾಂತರ ಮನವಿ ಸಲ್ಲಿಸಿದರು.
ಈ ಅಧಿವೇಶನದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ಉದ್ಯೋಗಾಕಾಂಕ್ಷಿ ಯುವಕರು, ಚಿಂತಕರು ಭಾಗವಹಿಸಿ ನೇಮಕಾತಿ ಪ್ರಕ್ರಿಯೆ ವಿಳಂಬ, ಖಾಲಿ ಹುದ್ದೆಗಳ ಹೆಚ್ಚಳ ಹಾಗೂ ಪರೀಕ್ಷಾ ವ್ಯವಸ್ಥೆಯ ಅಸಮರ್ಪಕತೆಯಂತಹ ಹಲವು ಪ್ರಮುಖ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚೆ ಮಾಡಿ , ನಂತರ ಅಧಿವೇಶನ ಸಭಾಧ್ಯಕ್ಷರಾದ ಮಾಳು ಹಿಪ್ಪರಗಿ ಮಾರ್ಗದರ್ಶನದಲ್ಲಿ ಹಲವು ನಿರ್ಣಯಗಳನ್ನು ಏಕಮತದಿಂದ ಅಂಗೀಕಾರವನ್ನು ಮಾಡಿದರು .
ನಮ್ಮ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ೨.೮೪ ಲಕ್ಷ ಸರ್ಕಾರಿ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ೯.೬೪ ಲಕ್ಷ ಸರ್ಕಾರಿ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳಬೇಕು. ಏPSಅ, ಏಇಂ, ಏSP ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ್ಷ ಖಾಲಿ ಇರುವ ಹುದ್ದೆಗಳ ಸಂಖ್ಯೆ ಹಾಗೂ ವಾರ್ಷಿಕ ಕ್ಯಾಲೆಂಡರನ್ನು ಪ್ರಕಟಿಸಿ ಅದರ ಪ್ರಕಾರ ನಿಗದಿತ ವೇಳಾಪಟ್ಟಿಯಂತೆ ನೇಮಕಾತಿ ಮಾಡಿಕೊಳ್ಳಬೇಕು. UPSಅ, ಅSಇ ಸೇರಿದಂತೆ ಎಲ್ಲಾ ಕೇಂದ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಭಾಷೆಯಲ್ಲಿಯೂ ನಡೆಸಬೇಕು.
ಎಲ್ಲಾ ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಇರಬೇಕು, ಎಲ್ಲಾ ರೀತಿಯ ಪರೀಕ್ಷಾ ಅಪ್ 'ತಡೆಗಟ್ಟಬೇಕು ಮತ್ತು ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು.
ರಾಜ್ಯದ ನೇಮಕಾತಿ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಮಾದರಿಯಲ್ಲಿ ಏPSಅ ಯನ್ನು ಪುನರ್ ರಚನೆ ಮಾಡಬೇಕು.
ಅದರಂತೆ ರಾಜ್ಯದ ಯುವ ಜನರ ಭವಿಷ್ಯವನ್ನು ಮನಗಂಡು ಮೇಲ್ಕಂಡ ನಿರ್ಣಯಗ ರಾಜ್ಯ ಸರ್ಕಾರವು ತುರ್ತು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರ್ಜುನ ಹಲಗಿಗೌಡರ ಹಳ್ಳಿ ಹಳ್ಳಿ ಒಳಗೆ ಬಡವರ ಹಾಗೂ ರೈತನ ಮಕ್ಕಳಿಗೆ ಯಾರು ಹೆಣ್ಣು ಕೊಡಲಾರದÀ ಸ್ಥಿತಿ ನಿರ್ಮಾಣವಾಗಿದೆ ಎಷ್ಟು ಶಾಲೆ ಕಲಿತರು ನೌಕರಿ ಸಿಗುತ್ತಿಲ್ಲ , ನೌಕರಿ ಸಿಗುವಂತಹ ಭರವಸೆ ಕೂಡ ಇಲ್ಲ , ಒಂದು ಕಡೆ ನೌಕರಿ ಇಲ್ಲ ಇನ್ನೂಂದು ಕಡೆ ಹಡದ್ ತಂದೆ - ತಾಯಿಗೆ ರುಣಾನು ತಿರಿಸಲಾಗದೆ, ನಿರುದ್ಯೋಗಿಯಾಗಿ , ನಿರುದ್ಯೋಗಿ ಗಳನ್ನು ತಯಾರು ಮಾಡುವಂತಹ ಫ್ಯಾಕ್ಟರಿ ಗಳಾಗಿ ಸಮಾಜ ನಿರ್ಮಾಣವಾಗುತ್ತಿದೆ. ಸಮಾಜ ಪರಿವರ್ತನೆಯಾಗ ಬೇಕಾದರೆ ಶಿಕ್ಷಣಕ್ಕೆ ಪ್ರಥಮ ಆದ್ಯತೆ ಕೊಡಲೇಬೇಕು. ಶಿಕ್ಷಣ ಅನ್ನುವುದು ಮಾರಾಟ ವಸ್ತು ಅಲ್ಲ , ಈ ರಾಜಕೀಯವು ಸಮಾಜ ಸೇವೆಯಾಗಬೇಕು ಹೊರತು ಹಣ ಗಳಿಸುವ ವ್ಯವಸ್ಥೆ ಆಗಬಾರದು . ಈ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಮುಂದೊAದು ದಿನ ನಮ್ಮ ಸಮಾಜದ ಯುವಕರು ಒಂದು ದೊಡ್ಡ ಕ್ರಾಂತಿಯನ್ನು ತೊಂದೊಡಿಲಿದ್ದಾರೆ. ಯುವಕರಿಗೆ ನೌಕರಿ ಕೊಡದಿದ್ದರೆ ಪ್ರತಿ ಗ್ರಾಮದಲ್ಲಿ ಯುವ ಅಧಿವೇಶನ ಮಾಡುವಂತಹ ಅನಿವಾರ್ಯತೆ ಉಂಟಾಗುತ್ತದೆ. ಬರುವ ದಿನದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಕೂಡ ಬಹಿಷ್ಕಾರ ಮಾಡುವಂತ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು. ಕೆಆರಎಸ ತಾಲೂಕ ಮುಖಂಡ ನಿಜಾಮ ಜಮಾದಾರ ಮಾತನಾಡಿದರು.ಈ ಸಂದರ್ಭದಲ್ಲಿ ಕರ್ನಾಟಕ ನೇಕಾರ ಸೇವಾ ಸಂಘದ ಮುಖಂಡ ಶಿವಲಿಂಗ ಟಿರಕಿ .ರೈತ ಮುಖಂಡ ಗಂಗಾದರ ಮೆಟಿ .ಎಲ್ಲಪ್ಪ ಹೆಗಡೆ .ಬಶಿರ ಜಮಾದಾರ . ಮಲಿಕ ಜಮಾದಾರ. ಫಯಾಝ ಕೊಯಿಮುತ್ತುರ.ಇನ್ನು ಅನೇಕರು ಇದ್ದರು .

ವರದಿ :
ಮೆಹಬೂಬ್ ಎಂ ಬಾರಿಗಡ್ಡಿ

26/01/2026

ಬಾಗಲಕೋಟೆ ಜಿಲ್ಲಾಮಟ್ಟದ ಇಸ್ತಮಾ ಧಾರ್ಮಿಕ ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ

13/11/2025

ಬಾಗಲಕೋಟ ಜಿಲ್ಲೆಯಲ್ಲಿ ರೈತರ ಭಾರಿ ಆಕ್ರೋಶ ಸಮೀರವಾಡಿ ಸಕ್ಕರೆಯ ಕಾರ್ಖಾನೆಯ ಆವರಣದಲ್ಲಿ ಸಾಲಾಗಿ ನಿಂತಿದ್ದ ಟ್ರ್ಯಾಕ್ಟರ್ ಗಳಿಗೆ ಬೆಂಕಿ

09/09/2025

ರಬಕವಿ ಬನಹಟ್ಟಿ ನಗರದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ

ಸರ್ವೇಪಲ್ಲಿ ಡಾ. ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನೋತ್ಸವ

08/09/2025

ಕಲಾಂ ಸುದ್ದಿ ವಾಹಿನಿಯು ರಬಕವಿ ಜಾಂಬೋಟಿ ಮುಖ್ಯ ರಾಜ್ಯ ಹೆದ್ದಾರಿಯ ರಬಕವಿಯ ಸಾಲಿಮನಿ ಹತ್ತಿರ ಭಾರಿ ಪ್ರಮಾಣದ ಗುಂಡಿಯ ಸುದ್ದಿಯನ್ನು ಪ್ರಸಾರ ಮಾಡಿತ್ತು. ಅಧಿಕಾರಿಗಳು ಕೂಡಲೇ ಸ್ಪಂದಿಸಿ ಈ ರಸ್ತೆಯನ್ನು ಮರು ಡಾಂಬರೀಕರಣ ಗೊಳಿಸಿದ್ದಾರೆ

ಇದು ಕಲಾಂ ಸುದ್ದಿವಾಹಿನಿಯ ಪ್ರತಿಫಲ

01/05/2025

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ "ಕಾಯಕಯೋಗಿ"2025 ಪ್ರಶಸ್ತಿ ಸಮಾರಂಭ :

ಬಾಗಲಕೋಟೆ / ರಬಕವಿ- ಬನಹಟ್ಟಿ
ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಶ್ರೀ ಶಿವದಾಶಿವಯ್ಯ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಬಾಗಲಕೋಟೆ ಜಿಲ್ಲಾ ಘಟಕದ ನೇತೃತ್ವದಲ್ಲಿ ರಾಜ್ಯಮಟ್ಟದ ಕಾಯಕಯೋಗಿ 2025 ಪ್ರಶಸ್ತಿ ಹಾಗೂ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಚಿರಂಜೀವಿ ರೋಡಕರ್ ಅವರ ಬರೆದ
" ಕೊಡಲಿ ಕಾವು "ಕೃತಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು . ಈ ಪುಸ್ತಕವನ್ನು ಹಿರಿಯ ಸಾಹಿತಿಗಳಾದ ಬನಹಟ್ಟಿ ನಗರದ
ಶ್ರೀ ಬಿ ಆರ್ ಪೊಲೀಸ್ ಪಾಟೀಲ್ ಬಿಡುಗಡೆ ಮಾಡಿದರು ನಂತರ ರೋಡಕರ್ ಅವರ *'ಕೊಡಲಿ ಕಾವು'* ಕೃತಿ ವಿಮರ್ಶೆ ಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿದರು . ಪರಿಷತ್ತು ವತಿಯಿಂದ ರಾಜ್ಯಮಟ್ಟದ ಕಾಯಕಯೋಗಿ ಪ್ರಶಸ್ತಿಗೆ ಆಯ್ಕೆಯಾದ ಬಾಗಲಕೋಟೆ ಜಿಲ್ಲೆಯ ರಬಕವಿ ನಗರದ ಸಂತೋಷ್ ಆಲ್ಗೂರ್ ಹಾಗೂ ಮುಧೋಳ್ ತಾಲೂಕಿನ ಕುಳಲಿ ಗ್ರಾಮದ ಎನ್ ಆರ್ ಐಹೊಳೆ ಅವರಿಗೆ ವೇದಿಕೆಯಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿಸ್ವಾರ್ಥ ಸಾಮಾಜಿಕ ಸೇವೆಗಳನ್ನು ಗುರುತಿಸಿ ಅವರಿಗೆ ಕೂಡ ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ಈ ಕಾರ್ಯಕ್ರಮವನ್ನು ನಾಡಗೀತೆ ಹಾಡುವುದರ ಮೂಲಕ ಹಾಗೂ ಸಸಿಗೆ ನೀರು ಹಾಕುವುದರ ಮೂಲಕ ಬಹಳ ಅದ್ದೂರಿಯಾಗಿ ನೆರವೇರಿಸಿದರು.

ಬಾಗಲಕೋಟ ಜಿಲ್ಲಾ ಘಟಕ, ರಬಕವಿ - ಬನಹಟ್ಟಿ, ಜಮಖಂಡಿ ಮುಧೋಳ ತಾಲೂಕು ಸಮಿತಿಗಳ ಪದಗ್ರಹಣ ನಡೆಯಿತು . ಖ್ಯಾತ ವೈಜ್ಞಾನಿಕ ಚಿಂತಕ ಡಾ. ಹುಲಿಕಲ್ ನಟರಾಜ್ ಅವರಿಂದ *ಪವಾಡ ಬಯಲು* ಕಾರ್ಯಕ್ರಮ ಕೂಡ ನಡೆಯಿತು.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದರು. ಜೊತೆಗೆ
ಪರಿಷತ್ತಿನ ರಾಜ್ಯ ಸಮಿತಿ, ಜಿಲ್ಲಾಧ್ಯಕ್ಷರುಗಳು, ಪದಾಧಿಕಾರಿಗಳು ಭಾಗಿ ಯಾಗಿದ್ದರು .

ವರದಿ ಮಹಿಬೂಬ ಬಾರಿಗಡ್ಡಿ

28/04/2025

ಕೇಂದ್ರ ಸರ್ಕಾರ ತಂದ ವಕಪ್ ತಿದ್ದುಪಡಿ ಕಾನೂನನ್ನು ಹಿಂಪಡೆಯಬೇಕೆಂದು ಬನಹಟ್ಟಿ ನಗರದಲ್ಲಿ ಬೃಹತ್ ರ್ಯಾಲಿ

26/04/2025

ಸಂತೋಷ ಆಲಗೂರು ಮತ್ತು ಎನ್ ಆರ್ ಐಹೊಳೆ ಅವರಿಗೆ ರಾಜ್ಯ ಮಟ್ಟದ 'ಕಾಯಕ ಯೋಗಿ' ಪ್ರಶಸ್ತಿ.

ಬಾಗಲಕೋಟೆ /
ರಬಕವಿ - ಬನಹಟ್ಟಿ :
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡ ಬಳ್ಳಾಪುರ - ಬೆಂಗಳೂರು ಗ್ರಾ ಜಿಲ್ಲೆ ಸಂಸ್ಥೆ ನೀಡುವ ಈ ವರ್ಷದ 'ಕಾಯಕ ಯೋಗಿ -2025' ಪ್ರಶಸ್ತಿಗೆ ರಬಕವಿ ನಗರದ ಸಂತೋಷ ಆಲಗೂರು ಆಯ್ಕೆಯಾಗಿದ್ದಾರೆ. ಇವರು ಪೌರ ಕಾರ್ಮಿಕರಾಗಿದ್ದು ಜೊತೆಗೆ ಸಮಾಜ ಸೇವೆ, ಮೂಕ ಪ್ರಾಣಿಗಳ ಮೇಲೆ ವಿಶೇಷ ಕಾಳಜಿ ಹೊಂದಿದವರಾಗಿರುತ್ತಾರೆ. ಅದೇ ರೀತಿ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಹಿರಿಯ ಜೀವಿ ಶ್ರೀ ಎನ್ ಆರ್ ಐಹೊಳೆ ಅವರು ಕೂಡ ಆಯ್ಕೆ ಆಗಿರುತ್ತಾರೆ. ಐಹೊಳೆ ಅವರ ಸಮಾಜ ಸೇವೆ ಗುರುತಿಸಿ ಅವರನ್ನು ಕಾಯಕ ಯೋಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಚಿರಂಜೀವಿ ರೋಡಕರ್ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ ರಾಜಮಾನೆ ಅವರು ಪತ್ರಿಕೆಗೆ ತಿಳಿಸಿರುತ್ತಾರೆ. ಮೇ 01 ರಂದು ರಬಕವಿಯ ಶ್ರೀ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ನಡೆಯುವ ರಾಜ್ಯ ಮಟ್ಟದ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ತಿಳಿಸಿರುತ್ತಾರೆ.

26/04/2025

ಬಸವಶ್ರೀ ಜಿಲ್ಲಾಪ್ರಶಸ್ತಿಗೆ ರಬಕವಿ ನಗರದ ಕೊಟ್ರಶೆಟ್ಟಿ ಆಯ್ಕೆ
ಜಂಗಮ ಬಾಂಧವರಿoದ ಸನ್ಮಾನ

ರಬಕವಿ-ಬನಹಟ್ಟಿ,೨೬; ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಏ,೩೦ ರಂದು ನಡೆಯಲ್ಲಿರುವ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕಸಾಪ ಅವರಿಂದ ಕೊಡಮಾಡುವ ಬಸವಶ್ರೀ ಪ್ರಶಸ್ತಿಗೆ, ರಬಕವಿ ಭಾರತಗ್ಯಾಸ್ ಸಂಸ್ಥೆಯ ವರ್ತಕರಾದ ಸೋಮಶೇಖರ್ ಕೊಟ್ರಶೆಟ್ಟಿ. ಆಯ್ಕೆಯಾಗಿದ್ದಾರೆ.
ಈ ಕಾರಣಕ್ಕೆ ರಬಕವಿ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಸೇರಿ, ಕೊಟ್ರಶೆಟ್ಟಿ ಅವರನ್ನು ಬೇಟಿಮಾಡಿ ಸನ್ಮಾನಿಸಿ ಅಭಿನಂದಿಸುವಲ್ಲಿ ಗೌರವಿಸಿದರು. ಸೋಮಶೇಖರ ಕೊಟ್ರಶಟ್ಟಿ ಅವರು ತಮ್ಮ ಸಂಸ್ಥೆಯಿAದ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬಂದವರು. ಜೋತೆಗೆ ಸರ್ವಹಿತ ಚಿಂತನೆಗಳಲ್ಲಿ ಭಾಗಿಯಾಗಿ, ವಿವಿಧ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಕೈಜೋಡಿಸಿ ಸರ್ವ ಸಮುದಾಗಳಲ್ಲಿ ತೊಡಗಿಸಿಕೊಂಡಿರುವÀ ಇವರ ಸೇವೆ ಅಪಾರವಾಗಿದೆ. ಬಾಗಲಕೋಟೆ ಜಿಲ್ಲಾಡಳಿತವು ಬಸವಶ್ರೀ ಪ್ರಶÀಸ್ತಿಗೆ ಇವರನ್ನು ಆಯ್ಕೆ ಮಾಡಿರುವುದು ಅವಳಿ ನಗರಕ್ಕೆ ಸಂತಸ ತಂದಿದೆ ಎಂದು ವಕೀಲರಾದ ಜಿ.ಎಮ್.ಅಮ್ಮಣಗಿಮಠ. ಹೇಳಿದರು.
ಇದೇ ಸಂದರ್ಭದಲ್ಲಿ ಶಿವಾನಂದ ಮಠದ, ಮ್ರುತ್ಯುಂಜಯ ಹುಲಗೇರಿಮಠ, ದಯಾನಂದ ಬಾಗಲಕೋಟಮಠ, ಸಂಜಯ ಅಮ್ಮಣಗಿಮಠ, ಮಾದೇವಯ್ಯ ಮಠಪತಿ, ಚಿಕ್ಕಯ್ಯ ಮಠದ, ಮಹಾದೇವಯ್ಯ ನಂದೈಗೊಳ, ಗಂಗಯ್ಯ ಹಿರೇಮಠ, ಸೇರಿದಂತೆ ಅನೇಕರು ಇದ್ದರು.

26/04/2025
25/04/2025

ರಬಕವಿ ಬನಹಟ್ಟಿ ನಗರಗಳಲ್ಲಿ ಕಾಶ್ಮೀರ್ ನಲ್ಲಿ ನಡೆದ ಅಮಾಯಕರ ಮೇಲೆ ಉಗ್ರವಾದಿಗಳ ದಾಳಿಯನ್ನು ಖಂಡಿಸಿ, ಅಂಜುಮನ್ ಸಂಸ್ಥೆಗಳ ಒಕ್ಕೂಟ ಹಾಗೂ ಜಮಿಯಾತೆ ಉಲಿಮಾ ಹಿಂದ್ ಜಂಟಿ ಆಶ್ರಯದಲ್ಲಿ ಭಾರಿ ಪ್ರತಿಭಟನೆ

Address

Near Bilal Masjid
Banhatti

Alerts

Be the first to know and let us send you an email when Kalaam Express News posts news and promotions. Your email address will not be used for any other purpose, and you can unsubscribe at any time.

Contact The Business

Send a message to Kalaam Express News:

Share