11/03/2026
ರಾಜಕೀಯವು ಸಮಾಜ ಸೇವೆಯಾಗಬೇಕು ಹೊರತು ಹಣ ಗಳಿಸುವ ವ್ಯವಸ್ಥೆ ಆಗಬಾರದು ; ಅರ್ಜುನ ಹಲಗಿಗೌಡರ
ರಬಕವಿ-ಬನಹಟ್ಟಿ ತಾಲೂಕ ತಹಶೀಲ್ದಾರ ರವರ ಕಾರ್ಯಾಲಯದ ಎದುರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ದೀರ್ಘ ಕಾಲದಿಂದ ಖಾಲಿ ಉಳಿದಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಆಗ್ರಹಿಸಿ, ಜನ ಸಾಮಾನೈರ ವೇದಿಕೆಯ ವತಿಯಿಂದ ಯುವ ಅಧಿವೇಶನವನ್ನು ಮಾಡುವುದು ಮುಖಾಂತರ ಮನವಿ ಸಲ್ಲಿಸಿದರು.
ಈ ಅಧಿವೇಶನದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ಉದ್ಯೋಗಾಕಾಂಕ್ಷಿ ಯುವಕರು, ಚಿಂತಕರು ಭಾಗವಹಿಸಿ ನೇಮಕಾತಿ ಪ್ರಕ್ರಿಯೆ ವಿಳಂಬ, ಖಾಲಿ ಹುದ್ದೆಗಳ ಹೆಚ್ಚಳ ಹಾಗೂ ಪರೀಕ್ಷಾ ವ್ಯವಸ್ಥೆಯ ಅಸಮರ್ಪಕತೆಯಂತಹ ಹಲವು ಪ್ರಮುಖ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚೆ ಮಾಡಿ , ನಂತರ ಅಧಿವೇಶನ ಸಭಾಧ್ಯಕ್ಷರಾದ ಮಾಳು ಹಿಪ್ಪರಗಿ ಮಾರ್ಗದರ್ಶನದಲ್ಲಿ ಹಲವು ನಿರ್ಣಯಗಳನ್ನು ಏಕಮತದಿಂದ ಅಂಗೀಕಾರವನ್ನು ಮಾಡಿದರು .
ನಮ್ಮ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ೨.೮೪ ಲಕ್ಷ ಸರ್ಕಾರಿ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ೯.೬೪ ಲಕ್ಷ ಸರ್ಕಾರಿ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳಬೇಕು. ಏPSಅ, ಏಇಂ, ಏSP ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ್ಷ ಖಾಲಿ ಇರುವ ಹುದ್ದೆಗಳ ಸಂಖ್ಯೆ ಹಾಗೂ ವಾರ್ಷಿಕ ಕ್ಯಾಲೆಂಡರನ್ನು ಪ್ರಕಟಿಸಿ ಅದರ ಪ್ರಕಾರ ನಿಗದಿತ ವೇಳಾಪಟ್ಟಿಯಂತೆ ನೇಮಕಾತಿ ಮಾಡಿಕೊಳ್ಳಬೇಕು. UPSಅ, ಅSಇ ಸೇರಿದಂತೆ ಎಲ್ಲಾ ಕೇಂದ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಭಾಷೆಯಲ್ಲಿಯೂ ನಡೆಸಬೇಕು.
ಎಲ್ಲಾ ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಇರಬೇಕು, ಎಲ್ಲಾ ರೀತಿಯ ಪರೀಕ್ಷಾ ಅಪ್ 'ತಡೆಗಟ್ಟಬೇಕು ಮತ್ತು ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು.
ರಾಜ್ಯದ ನೇಮಕಾತಿ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಮಾದರಿಯಲ್ಲಿ ಏPSಅ ಯನ್ನು ಪುನರ್ ರಚನೆ ಮಾಡಬೇಕು.
ಅದರಂತೆ ರಾಜ್ಯದ ಯುವ ಜನರ ಭವಿಷ್ಯವನ್ನು ಮನಗಂಡು ಮೇಲ್ಕಂಡ ನಿರ್ಣಯಗ ರಾಜ್ಯ ಸರ್ಕಾರವು ತುರ್ತು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರ್ಜುನ ಹಲಗಿಗೌಡರ ಹಳ್ಳಿ ಹಳ್ಳಿ ಒಳಗೆ ಬಡವರ ಹಾಗೂ ರೈತನ ಮಕ್ಕಳಿಗೆ ಯಾರು ಹೆಣ್ಣು ಕೊಡಲಾರದÀ ಸ್ಥಿತಿ ನಿರ್ಮಾಣವಾಗಿದೆ ಎಷ್ಟು ಶಾಲೆ ಕಲಿತರು ನೌಕರಿ ಸಿಗುತ್ತಿಲ್ಲ , ನೌಕರಿ ಸಿಗುವಂತಹ ಭರವಸೆ ಕೂಡ ಇಲ್ಲ , ಒಂದು ಕಡೆ ನೌಕರಿ ಇಲ್ಲ ಇನ್ನೂಂದು ಕಡೆ ಹಡದ್ ತಂದೆ - ತಾಯಿಗೆ ರುಣಾನು ತಿರಿಸಲಾಗದೆ, ನಿರುದ್ಯೋಗಿಯಾಗಿ , ನಿರುದ್ಯೋಗಿ ಗಳನ್ನು ತಯಾರು ಮಾಡುವಂತಹ ಫ್ಯಾಕ್ಟರಿ ಗಳಾಗಿ ಸಮಾಜ ನಿರ್ಮಾಣವಾಗುತ್ತಿದೆ. ಸಮಾಜ ಪರಿವರ್ತನೆಯಾಗ ಬೇಕಾದರೆ ಶಿಕ್ಷಣಕ್ಕೆ ಪ್ರಥಮ ಆದ್ಯತೆ ಕೊಡಲೇಬೇಕು. ಶಿಕ್ಷಣ ಅನ್ನುವುದು ಮಾರಾಟ ವಸ್ತು ಅಲ್ಲ , ಈ ರಾಜಕೀಯವು ಸಮಾಜ ಸೇವೆಯಾಗಬೇಕು ಹೊರತು ಹಣ ಗಳಿಸುವ ವ್ಯವಸ್ಥೆ ಆಗಬಾರದು . ಈ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಮುಂದೊAದು ದಿನ ನಮ್ಮ ಸಮಾಜದ ಯುವಕರು ಒಂದು ದೊಡ್ಡ ಕ್ರಾಂತಿಯನ್ನು ತೊಂದೊಡಿಲಿದ್ದಾರೆ. ಯುವಕರಿಗೆ ನೌಕರಿ ಕೊಡದಿದ್ದರೆ ಪ್ರತಿ ಗ್ರಾಮದಲ್ಲಿ ಯುವ ಅಧಿವೇಶನ ಮಾಡುವಂತಹ ಅನಿವಾರ್ಯತೆ ಉಂಟಾಗುತ್ತದೆ. ಬರುವ ದಿನದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಕೂಡ ಬಹಿಷ್ಕಾರ ಮಾಡುವಂತ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು. ಕೆಆರಎಸ ತಾಲೂಕ ಮುಖಂಡ ನಿಜಾಮ ಜಮಾದಾರ ಮಾತನಾಡಿದರು.ಈ ಸಂದರ್ಭದಲ್ಲಿ ಕರ್ನಾಟಕ ನೇಕಾರ ಸೇವಾ ಸಂಘದ ಮುಖಂಡ ಶಿವಲಿಂಗ ಟಿರಕಿ .ರೈತ ಮುಖಂಡ ಗಂಗಾದರ ಮೆಟಿ .ಎಲ್ಲಪ್ಪ ಹೆಗಡೆ .ಬಶಿರ ಜಮಾದಾರ . ಮಲಿಕ ಜಮಾದಾರ. ಫಯಾಝ ಕೊಯಿಮುತ್ತುರ.ಇನ್ನು ಅನೇಕರು ಇದ್ದರು .
ವರದಿ :
ಮೆಹಬೂಬ್ ಎಂ ಬಾರಿಗಡ್ಡಿ