Lingayat Kranti ಲಿಂಗಾಯತ ಕ್ರಾಂತಿ

  • Home
  • India
  • Belgaum
  • Lingayat Kranti ಲಿಂಗಾಯತ ಕ್ರಾಂತಿ

Lingayat Kranti ಲಿಂಗಾಯತ ಕ್ರಾಂತಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ.
ಧರ್ಮಗುರು ಬಸವಣ್ಣ

26/01/2025

2025ನೇ ಸಾಲಿನ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿರುವ ಕರುನಾಡಿನ 9 ಸಾಧಕರಿಗೆ ಹೃದಯಪೂರ್ವಕ ಅಭಿನಂದನೆಗಳು.ಕಲೆ...
25/01/2025

2025ನೇ ಸಾಲಿನ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿರುವ ಕರುನಾಡಿನ 9 ಸಾಧಕರಿಗೆ ಹೃದಯಪೂರ್ವಕ ಅಭಿನಂದನೆಗಳು.

ಕಲೆ, ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ, ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ಕಾಳಜಿ ಎಲ್ಲರಿಗೂ ಪ್ರೇರಣೆಯಾದವು.

ನಾಡಿನ ಲಿಂಗಾಯತರ ಕೊಡುಗೆ ಅಪಾರ
21/01/2025

ನಾಡಿನ ಲಿಂಗಾಯತರ ಕೊಡುಗೆ ಅಪಾರ

ನಮ್ಮ ನಾಯಕರು ನಮ್ಮ ಹೆಮ್ಮೆ.. M. B. Patil
15/01/2025

ನಮ್ಮ ನಾಯಕರು ನಮ್ಮ ಹೆಮ್ಮೆ.. M. B. Patil

ಕೆಲವೇ ಪ್ರತಿಗಳು ಲಭ್ಯ. ಮೊ: 8884000008, 9741544397
15/01/2025

ಕೆಲವೇ ಪ್ರತಿಗಳು ಲಭ್ಯ.
ಮೊ: 8884000008, 9741544397

ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು
14/01/2025

ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು

13/01/2025

ಕುರುಬ ಗೊಲ್ಲಾಳ ಜ್ಞಾನಕ್ಕೆ ಬಸವಣ್ಣ ಫಿದಾ..!!

ಬೆಂಗಳೂರು ಪ್ರೆಸ್ ಕ್ಲಬ್  ಸುಮಾರು 3,000 ಪತ್ರಕರ್ತ ಸದಸ್ಯರನ್ನು ಹೊಂದಿರುವ ಗೌರವಾನ್ವಿತ ಸಂಸ್ಥೆಯಾಗಿದೆ. ಇಲ್ಲಿನ ಪತ್ರಕರ್ತರು ರಾಜ್ಯ ಹಾಗೂ ರ...
13/01/2025

ಬೆಂಗಳೂರು ಪ್ರೆಸ್ ಕ್ಲಬ್ ಸುಮಾರು 3,000 ಪತ್ರಕರ್ತ ಸದಸ್ಯರನ್ನು ಹೊಂದಿರುವ ಗೌರವಾನ್ವಿತ ಸಂಸ್ಥೆಯಾಗಿದೆ. ಇಲ್ಲಿನ ಪತ್ರಕರ್ತರು ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು 2024ನೇ ಸಾಲಿನ ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಶರಣಶ್ರೀ M. B. Patil ಸರ್, ಕರ್ನಾಟಕ ಸರಕಾರದ ಬೃಹತ ಕೈಗಾರಿಕಾ ಸಚಿವರು, ಹೆಮ್ಮೆಯ ಲಿಂಗಾಯತ ನಾಯಕರನ್ನು ಆಯ್ಕೆಮಾಡಿರುವುದು ತುಂಬಾ ಸಂತೋಷವಾಗಿದೆ. ಹೆಮ್ಮೆ ಮತ್ತು ವಿನಮ್ರತೆ ಮೂಡಿಸಿದೆ. ನಾಡಿನ
ಈ ಸಂದರ್ಭದಲ್ಲಿ ಶ್ರೀ Siddaramaiah ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದರು.

ನಾಡಿನ ಸಮಸ್ತ ಜನತೆಯ ಸೇವೆಗಾಗಿ ಶಕ್ತಿ ಮೀರಿದ ಪ್ರಯತ್ನ ನಿರಂತರ. ಸಾರ್ವಜನಿಕ ಜೀವನದಲ್ಲಿ ಕೈಗೊಂಡಿರುವ ಕಾರ್ಯಗಳಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿರುವ ಹಾಗೂ ಪ್ರೆಸ್ ಕ್ಲಬ್ ಸದಸ್ಯರಿಗೆ ಹಾಗೂ ಆಯ್ಕೆ ಸಮಿತಿಗೆ ಹೃತ್ಪೂರ್ವಕ ಧನ್ಯವಾದಗಳು.
Lingayat Kranti ಲಿಂಗಾಯತ ಕ್ರಾಂತಿ Chief Minister of Karnataka ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ

38 ನೇ ಶರಣ ಮೇಳದ ಗೋಷ್ಠಿಯಲ್ಲಿ ನೆರೆದ ಜನಸ್ತೋಮ
13/01/2025

38 ನೇ ಶರಣ ಮೇಳದ ಗೋಷ್ಠಿಯಲ್ಲಿ ನೆರೆದ ಜನಸ್ತೋಮ

38ನೇ ಶರಣ ಮೇಳದ ಮೊದಲ ದಿನದ ಕಾರ್ಯಕ್ರಮದ ಪತ್ರಿಕಾ ಹೇಳಿಕೆ
13/01/2025

38ನೇ ಶರಣ ಮೇಳದ ಮೊದಲ ದಿನದ ಕಾರ್ಯಕ್ರಮದ ಪತ್ರಿಕಾ ಹೇಳಿಕೆ

ಕರ್ನಾಟಕವನ್ನು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬೆಳಗಿದ ಪುಣ್ಯಪುರುಷರಲ್ಲಿ ಒಬ್ಬರಾದ ತ್ಯಾಗವೀರ, ಜ್ಞಾನದಾಸೋಹಿ, ಶ್ರೀ ಸಿರಸಂಗಿ ಲಿಂಗರಾಜ ದೇಸ...
10/01/2025

ಕರ್ನಾಟಕವನ್ನು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬೆಳಗಿದ ಪುಣ್ಯಪುರುಷರಲ್ಲಿ ಒಬ್ಬರಾದ ತ್ಯಾಗವೀರ, ಜ್ಞಾನದಾಸೋಹಿ, ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಅವರ 163ನೇ ಜಯಂತ್ಯೋತ್ಸವದ ಶುಭಾಶಯಗಳು.

ಶ್ರೀ ಸಿರಸಂಗಿ ಲಿಂಗರಾಜರು ತಮ್ಮ ಸಂಸ್ಥಾನದ ಸಮಸ್ತ ಆಸ್ತಿಯನ್ನು ಜನಕಲ್ಯಾಣಕ್ಕಾಗಿ ದಾನಮಾಡಿದರು. ಲಿಂಗಾಯತ ಸಮಾಜದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು.

ಮಹಾಸಭೆಯ ಮೊದಲನೇ ಹಾಗೂ ಎರಡನೇ ಅಧಿವೇಶನದ ಅಧ್ಯಕ್ಷರೂ ಆಗಿ, ರಾಜ್ಯಾದ್ಯಂತ ಶಿಕ್ಷಣ ಕ್ರಾಂತಿಗೆ ಕರೆ ನೀಡಿ ಅಪಾರ ಮೊತ್ತದ ದೇಣಿಗೆ ನೀಡಿದರು. ಪರಿಣಾಮವಾಗಿ ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳು, ಅನ್ನದಾಸೋಹ ಕೇಂದ್ರಗಳು ಸ್ಥಾಪನೆಯಾದವು.

ಬಾಲ್ಯವಿವಾಹ, ವರದಕ್ಷಿಣೆಯಂತಹ ಸಾಮಾಜಿಕ ಅನಿಷ್ಠಗಳನ್ನು ನಿವಾರಿಸಲು ಸಿರಸಂಗಿ ಲಿಂಗರಾಜ ದೇಸಾಯಿ ಅವರು ಶ್ರಮಿಸಿದರು.

ಪೂಜ್ಯ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಅವರ ಜಯಂತಿಯಂದು ಭಕ್ತಿ ಪೂರ್ವಕ ನಮನಗಳು.

Shiva Metyal Lingayat Kranti ಲಿಂಗಾಯತ ಕ್ರಾಂತಿ

07/01/2025

ಐತಿಹಾಸಿಕ 38ನೇ ಶರಣಮೇಳ ಕೂಡಲಸಂಗಮದಲ್ಲಿ ನಡೆಯಲಿದೆ ನಾವು ಬರುತ್ತೇವೆ, ನೀವು ಬನ್ನಿ ನಿಮ್ಮವರನ್ನೂ ಕರೆತನ್ನಿ.
ಶರಣು ಶರಣಾರ್ಥಿ ಗಳು..
ಶರಣರು ಬರುವೆಮಗೆ ಪ್ರಾಣಜೀವಾಳವಯ್ಯ

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡದ ಪರಮಪೂಜ್ಯ ಶ್ರೀ ಸದ್ಗುರು ಚನ್ನಬಸವ ಶಿವಯೋಗಿಗಳವರ 73ನೇ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಮತ...
06/01/2025

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡದ ಪರಮಪೂಜ್ಯ ಶ್ರೀ ಸದ್ಗುರು ಚನ್ನಬಸವ ಶಿವಯೋಗಿಗಳವರ 73ನೇ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಮತ್ತು ಶಿವಾನುಭವ ಚಿಂತನದಲ್ಲಿ ಪರಮಪೂಜ್ಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಆಶಿರ್ವಚನ ನೀಡಿದರು.

ಈ ಸಂದರ್ಭದಲ್ಲಿ ಪೂಜ್ಯರಿಗೆ "ಬಸವ ಭಾನು" ಪ್ರಶಸ್ತಿ ನೀಡಿ ಸತ್ಕರಿಸಿದರು.

ನನ್ನ ಕೈಯಲ್ಲಿ ಇಷ್ಟಲಿಂಗವಿರುವಾಗ ನಾನೇಕೆ ಹಸ್ತ ರೇಖೆಯನ್ನು  ನಂಬಲಯ್ಯ ನನ್ನ ಹಣೆಯಲ್ಲಿ ವಿಭೂತಿ ಇರುವಾಗ ನಾನೇಕೆ ಹಣೆಬರಹವನ್ನು ಮೆಚ್ಚಿಕೊಳ್ಳಲಯ...
06/01/2025

ನನ್ನ ಕೈಯಲ್ಲಿ ಇಷ್ಟಲಿಂಗವಿರುವಾಗ
ನಾನೇಕೆ ಹಸ್ತ ರೇಖೆಯನ್ನು ನಂಬಲಯ್ಯ

ನನ್ನ ಹಣೆಯಲ್ಲಿ ವಿಭೂತಿ ಇರುವಾಗ ನಾನೇಕೆ ಹಣೆಬರಹವನ್ನು ಮೆಚ್ಚಿಕೊಳ್ಳಲಯ್ಯ .

ಕೂಡಲಸಂಗಮದೇವನು ನನ್ನಲಿರುವಾಗ
ನಾನೇಕೆ ಊರ ದೇವರ ಹುಡುಕಲಯ್ಯ.

ಫೋಸ್ಟ್ ಕೃಪೆ: Mahantesh Kambar

2025 ಲಿಂಗಾಯತ ದಿನದರ್ಶಿಕೆಕೆಲವೇ ಪ್ರತಿಗಳು ಲಭ್ಯ..ವಚನ ಸಾಹಿತ್ಯ, ಶರಣರ ಜೀವನ ದರ್ಶನ,  ಬಸವತತ್ವ, ವೈಚಾರಿಕ & ವೈಜ್ಞಾನಿಕತೆಯ ಆಧಾರದ ಲಿಂಗಾಯತ...
01/01/2025

2025 ಲಿಂಗಾಯತ ದಿನದರ್ಶಿಕೆ
ಕೆಲವೇ ಪ್ರತಿಗಳು ಲಭ್ಯ..

ವಚನ ಸಾಹಿತ್ಯ, ಶರಣರ ಜೀವನ ದರ್ಶನ, ಬಸವತತ್ವ, ವೈಚಾರಿಕ & ವೈಜ್ಞಾನಿಕತೆಯ ಆಧಾರದ ಲಿಂಗಾಯತ ಧರ್ಮದ ತಳಹದಿಯ ಮೇಲೆ ಲಿಂಗಾಯತ ದಿನದರ್ಶಿಕೆ ಮುದ್ರಣವಾಗಿದ್ದು ಪ್ರತಿಯೊಬ್ಬರೂ ತಮ್ಮ ಮನೆಗಳಿಗೆ, ಸ್ನೇಹಿತರಿಗೆ, ಬಂಧು-ಬಳಗದವರಿಗೆ, ಸಂಘ-ಸಂಸ್ಥೆಗಳಿಗೆ ನೀಡಿ

ಪ್ರತಿಗಳಿಗಾಗಿ ಸಂಪರ್ಕಿಸಿ.
ಮೊ: 8884000008 9741544397

ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ನಿಧನ.ನವದೆಹಲಿ: ತೀವ್ರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ...
26/12/2024

ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ನಿಧನ.

ನವದೆಹಲಿ: ತೀವ್ರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮನ್‌ಮೋಹನ್‌ ಸಿಂಗ್‌ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನ್‌ಮೋಹನ್‌ ಸಿಂಗ್‌ ಕಳೆದ ಕೆಲವು ತಿಂಗಳುಗಳಿಗೆ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಆಗುತ್ತಿದ್ದರು.

ಗುರುವಾರ ಸಂಜೆಯ ವೇಳೆಗೆ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿದ್ದರಿಂದ ಅವರನ್ನು ಏಮ್ಸ್‌ಗೆ ದಾಖಲು ಮಾಡಲಾಗಿತ್ತು. ಈ ಬಗ್ಗೆ ರಾಬರ್ಟ್‌ ವಾದ್ರಾ ಟ್ವೀಟ್ ಮಾಡಿದ್ದು, "ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಬಗ್ಗೆ ತಿಳಿದು ನನಗೆ ತುಂಬಾ ದುಃಖವಾಗಿದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪಗಳು. ನಮ್ಮ ದೇಶಕ್ಕೆ ನೀವು ಮಾಡಿದ ಸೇವೆಗೆ ಧನ್ಯವಾದಗಳು. ನಿಮ್ಮ ಆರ್ಥಿಕ ಕ್ರಾಂತಿಗಾಗಿ ನೀವು ಯಾವಾಗಲೂ ನೆನಪಿನಲ್ಲಿರುತ್ತೀರಿ ಮತ್ತು ಪ್ರಗತಿಪರ ಬದಲಾವಣೆಗಳನ್ನು ನೀವು ದೇಶಕ್ಕೆ ತಂದಿದ್ದೀರಿ' ಎಂದು ಬರೆದುಕೊಂಡಿದ್ದಾರೆ.

ಇದೀಗ ಮಾಜಿ ಪ್ರಧಾನಿಗಳು ನಿಧನರಾಗಿದ್ದಾರೆ ಎಂದು ರಾಬರ್ಟ್‌ ವಾದ್ರಾ ಹಾಗೂ NSUI ಟ್ವೀಟ್‌ (ಎಕ್ಸ್‌) ಮಾಡುವ ಮೂಲಕ ಅಧಿಕೃತವಾಗಿ ತಿಳಿಸಲಾಗಿದೆ.

ಯುಪಿಎ ಅವಧಿಯಲ್ಲಿ ಸತತ ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಅವರನ್ನು ಕಳೆದುಕೊಂಡಿರುವ ಕಾಂಗ್ರೆಸ್ಗೆ ಹಿರಿಯ ಕೊಂಡಿಯೊಂದು ಕಳಚಿದ ನೋವು ಆವರಿಸಿದೆ.

23/12/2024

ಶರಣಶ್ರೀ ಶಿವಾನಂದ ಹಡಪದ ಅವರ ನೂತನ ಮನೆಯ ಗುರುಪ್ರವೇಶ ಕಾರ್ಯಕ್ರಮ.

Address

Belgaum
591102

Alerts

Be the first to know and let us send you an email when Lingayat Kranti ಲಿಂಗಾಯತ ಕ್ರಾಂತಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to Lingayat Kranti ಲಿಂಗಾಯತ ಕ್ರಾಂತಿ:

Videos

Share