Lingayat Kranti ಲಿಂಗಾಯತ ಕ್ರಾಂತಿ

  • Home
  • India
  • Belgaum
  • Lingayat Kranti ಲಿಂಗಾಯತ ಕ್ರಾಂತಿ

Lingayat Kranti ಲಿಂಗಾಯತ ಕ್ರಾಂತಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ.
ಧರ್ಮಗುರು ಬಸವಣ್ಣ
(1)

07/11/2025

ನಕಲಿ ಹುಲಿ ಯತ್ನಾಳ್ ಜನ್ಮ ಜಾಲಾಡಿದ ರೈತರು!

ಲಿಂಗಾಯತ ಧರ್ಮದ ವಿರುದ್ಧ, ಲಿಂಗಾಯತ ಮಠಾಧೀಶರ ವಿರುದ್ಧ, ತನ್ನ ಸ್ವ-ಪಕ್ಷ ಬಿಜೆಪಿ ಇತನ ಇತಂಹ ಹರಕು ಮಾತುಗಳಿಂದಲೇ ಹೊರಹಾಕಿದೆ, ಜೊತೆಗೆ ಇಗ ರೈತರ ವಿರುದ್ಧ ಮಾತನಾಡುತ್ತಿರುವುದು ನಿಜವಾದ ಕೃಷಿ ಕೃತ್ಯ ಕಾಯಕ ಮಾಡುವ ಅನ್ನದಾತರಾದ ಸಮಸ್ತ ಮನುಕುಲದ ಸಮುದಾಯವನ್ನೇ ವಿರೋಧಿಸಿದಂತೆ ಇಗಲಾದರೂ ಎಚ್ಚರವಾಗಿ ಬಂಧುಗಳೇ..

ಜಾತಿ ಧರ್ಮಗಳ ನಡುವೆ ಬೆಂಕಿ ಹಚ್ಚಿ ಲಾಭ ಪಡ್ಕೊಳೋ ಅಯೋಗ್ಯರಿಗೆ ರೈತರ ಸಂಕಷ್ಟ ಅರ್ಥವಾಗದು. ಈ ಸ್ವಾರ್ಥಿ ಯತ್ನಾಳ್ ಗೆ ಜನ ಬುದ್ಧಿ ಕಲಿಸುವ ಕಾಲ ದೂರವಿಲ್ಲ...

07/11/2025

ಶಾಸಕ ನಿರಾಣಿ ಕಬ್ಬಿಗೆ ಈ ರೇಟ್ ಕೊಡಲು ಒಪ್ಪುತ್ತಿಲ್ಲ ಎಂಬ ಪ್ರಶ್ನೆಗೆ ಸಿ.ಎಂ ಸಿದ್ದರಾಮಯ್ಯ ಉತ್ತರ ನೋಡಿ ಹೇಗಿತ್ತು..!

07/11/2025

ಕಬ್ಬು ಬೆಳೆಗೆ 3,300 ರೂ. ದರ ಘೋಷಣೆ; ಶಶಿಕಾಂತ ಪಡಸಲಗಿ ಗುರುಜೀ ಮೊದಲ ಪ್ರತಿಕ್ರಿಯೆ..

ಚೋನಪ್ಪ ಪೂಜಾರಿ ಶ್ರೀಕಾಂತ್ ಗುರೂಜಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ನಿಜವಾಗಲೂ ರೈತರ ಗೆಲವು ನಿಮಗೆ ಅನಂತ ಕೋಟಿ ನಮನಗಳನ್ನು ಸಲ್ಲಿಸುತ್ತೇವೆ ಧನ್ಯವಾದಗಳು..

 #ಲಿಂಗಾಯತ_ದಿನದರ್ಶಿಕೆ_2026ಪ್ರತಿಯೊಬ್ಬ ಲಿಂಗಾಯತ ಧರ್ಮೀಯರ ಮನೆಯಲ್ಲಿ ಇರಲೇಬೇಕಾದ ಮಹತ್ವ ದಿನದರ್ಶಿಕೆ.  ಇದರಲ್ಲಿ ನಮ್ಮ ಲಿಂಗಾಯತ ಧರ್ಮದ ಸಂಸ...
07/11/2025

#ಲಿಂಗಾಯತ_ದಿನದರ್ಶಿಕೆ_2026

ಪ್ರತಿಯೊಬ್ಬ ಲಿಂಗಾಯತ ಧರ್ಮೀಯರ ಮನೆಯಲ್ಲಿ ಇರಲೇಬೇಕಾದ ಮಹತ್ವ ದಿನದರ್ಶಿಕೆ. ಇದರಲ್ಲಿ ನಮ್ಮ ಲಿಂಗಾಯತ ಧರ್ಮದ ಸಂಸ್ಕಾರಗಳು, ನಿಜಾಚರಣೆಗಳು, ವೈಚಾರಿಕ & ವೈಜ್ಞಾನಿಕತೆಯ ಬೆಳೆಸುವ ವಚನಗಳು, ಬಸವಾದಿ ಶರಣರ ಜೀವನ ಚರಿತ್ರೆಗಳು, ಲಿಂಗಾಯತ ವಿರಕ್ತಮಠಗಳಲ್ಲಿ, ಬಸವತತ್ವದ ಮಠ, ಪೀಠಗಳಲ್ಲಿ, ಲಿಂಗಾಯತ ಸಂಘಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳ ಸಂಪೂರ್ಣ ವಿವರಣೆ ದೊರೆಯಲಿದೆ.
ಪ್ರತಿಗಳಿಗಾಗಿ ಹಾಗೂ
ಅತೀ ಕಡಿಮೆ ದರದಲ್ಲಿ ನಿಮ್ಮ ವ್ಯಾಪಾರ, ವ್ಯವಹಾರ ಹಾಗೂ ಉದ್ಯಮಗಳ ಜಾಹಿರಾತು ಪ್ರಚಾರದೊಂದಿಗೆ ಮುದ್ರಿಸಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊ: 9741544397, 8884000008
#ಲಿಂಗಾಯತ #ಬಸವಣ್ಣ #ವಚನ #ಕನ್ನಡ

ಸಕ್ಕರೆ ಕಾರ್ಖಾನೆ ನಡೆಸುವುದು ನೀವು ಹೇಳುವಷ್ಟೇ ಕಷ್ಟ ಆಗಿದ್ದರೆ ಒಂದು ಕಾರ್ಖಾನೆ ಇದ್ದವರು ಎರಡು, ಮೂರು ಕಾರ್ಖಾನೆ ಮಾಲೀಕರಾಗಿದ್ದು ಹೇಗೆ ಸಿಎಂ...
07/11/2025

ಸಕ್ಕರೆ ಕಾರ್ಖಾನೆ ನಡೆಸುವುದು ನೀವು ಹೇಳುವಷ್ಟೇ ಕಷ್ಟ ಆಗಿದ್ದರೆ ಒಂದು ಕಾರ್ಖಾನೆ ಇದ್ದವರು ಎರಡು, ಮೂರು ಕಾರ್ಖಾನೆ ಮಾಲೀಕರಾಗಿದ್ದು ಹೇಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ .

07/11/2025

ಅಪ್ಪಗ ಹುಟ್ಟಿದ ಮಾತು ಹೇಳಿದ್ರಿ ಸರ್..
ನಿಜವಾದ ಹೋರಾಟಗಾರರು ನೀವು.
#ಯಡಿಯೂರಪ್ಪ #ವಿಜಯೇಂದ್ರ Asianet Suvarna News Lingayat Kranti ಲಿಂಗಾಯತ ಕ್ರಾಂತಿ ಬಸವಣ್ಣ - Basavanna ಲಿಂಗಾಯತ ಪಂಚಮಸಾಲಿ ಬೆಳಗಾವಿ M. B. Patil Chief Minister of Karnataka BJP Karnataka

06/11/2025

ರೈತರ ಹೋರಾದ ಬಗ್ಗೆ ನಾಲಿಗೆ ಹರಿಬಿಟ್ಟ ಯತ್ನಾಳ..
ಇವನನ್ನು ಬಿಜೆಪಿ ಪಕ್ಷ ಉಚ್ಚಾಟನೆ ಮಾಡಿದೆ ಇಗ ಕೇವಲ ತನ್ನ ಅಸ್ತಿತ್ವಕ್ಕಾಗಿ ಸಿಕ್ಕ, ಸಿಕ್ಕ ಹಾಗೆ ಭಾಷಣ ಮಾಡುತ್ತಿದ್ದಾನೆ‌.‌..

ಅಲ್ಲಿ ಕಟ್ಟಿ ಮೇಲೆ ಕುತುಕೊಂಡು ಕಥೆ ಹೇಳಿದರೆ ಆಗೋಲ್ಲ, ನನ್ನ ಕಾರ್ಖಾನೆ ಕೊಡ್ತೀನಿ ನೀವೆ ನಡೆಸಿ ನನಗೆ ಪ್ರತಿ ಟನ್'ಗೆ 4500 ರೂ. ಕೊಡಿ: ಅನ್ನದಾತರಿಗೆ ಸವಾಲ್ ಹಾಕಿದ ಬಸನಗೌಡಾ ಪಾಟೀಲ ಯತ್ನಾಳ

ಕೋರ್ಟುಗಳಿಗೆ ಕಂಡ ಕನ್ನೇರಿ ಸ್ವಾಮಿಯ ಸತ್ಯ ಸಂಘ ಪರಿವಾರಕ್ಕೆ ಕಾಣದೆ?ಇತ್ತೀಚೆಗೆ ವಿಜಯಪುರ ಮತ್ತು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕನ್ನೇರಿ ಮಠ...
06/11/2025

ಕೋರ್ಟುಗಳಿಗೆ ಕಂಡ ಕನ್ನೇರಿ ಸ್ವಾಮಿಯ ಸತ್ಯ ಸಂಘ ಪರಿವಾರಕ್ಕೆ ಕಾಣದೆ?
ಇತ್ತೀಚೆಗೆ ವಿಜಯಪುರ ಮತ್ತು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಯ ಪರವಾಗಿ ಹಿಂದುತ್ವ ಸಂಘಟನೆಗಳಿಂದ ಮೆರವಣಿಗೆ, ಪ್ರತಿಭಟನೆ ನಡೆದವು. ಅಲ್ಲಿ ಮಾತನಾಡಿದ ಹಿಂದುತ್ವ ನಾಯಕರು ‘ಸಂತ’ ‘ಮಹಾತ್ಮ’ ಎಂದೆಲ್ಲಾ ಕನ್ನೇರಿ ಸ್ವಾಮಿಯನ್ನು ವರ್ಣಿಸಿ ಅವರ ಮೇಲೆ ವಿಧಿಸಿರುವ ನಿರ್ಬಂಧವನ್ನು ಉಗ್ರವಾಗಿ ಖಂಡಿಸಿದರು.

“ಒಂದು ಸಣ್ಣ ಗ್ರಾಮ್ಯ ಭಾಷೆಯ ಪದ ಬಳಸಿರುವುದಕ್ಕೆ ಅವರನ್ನು ನಿರ್ಬಂಧಿಸಿರುವುದು ಸರಿಯಲ್ಲ, ಕಾಂಗ್ರೆಸ್ ಪಕ್ಷದಿಂದ ಇದು ಹಿಂದೂ ಧರ್ಮ ಒಡೆಯುವ ಸಂಚು,” ಎಂದು ವಿಜಯಪುರದಲ್ಲಿ ಒಬ್ಬರು ಕೇಸರಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನೇರಿ ಸ್ವಾಮಿ ಸಂತರೇ? ಮಹಾತ್ಮರೇ? ಕರ್ನಾಟಕದ ಒಂದು ದೊಡ್ಡ ಸಮುದಾಯದ ಪೂಜ್ಯರ ಮೇಲೆ ಇವರು ಬಳಸಿರುವುದು ಸಣ್ಣ ಗ್ರಾಮ್ಯ ಭಾಷೆಯ ಪದವೆ?

ಈ ಪ್ರಶ್ನೆಗಳಿಗೆ ಈಗ ಕೋರ್ಟಿನ ಕಟಕಟೆಯಲ್ಲಿ ಉತ್ತರ ದೊರಕಿದೆ. ಕೇವಲ ಎರಡು ವಾರಗಳ ಅವಧಿಯಲ್ಲಿ ನಗರ ಸಿವಿಲ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟುಗಳ ಕದ ತಟ್ಟಿದ ವಿಶಿಷ್ಟ ಪ್ರಕರಣವಿದು. ಅಲ್ಲೆಲ್ಲಾ ವಿಚಾರಣೆ ನಡೆಸಿದ ಯಾವ ನ್ಯಾಯಮೂರ್ತಿಯವರಿಗೂ ಕನ್ನೇರಿ ಸ್ವಾಮಿ ‘ಸಂತ’ ಅಥವಾ ‘ಮಹಾತ್ಮ’ರಂತೆ ಕಾಣಿಸಿಲ್ಲ.

ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಮೊರೆ ಹೋದ ಕನ್ನೇರಿ ಸ್ವಾಮಿಗೆ ಕಾನೂನು ಸಮರದಲ್ಲಿ ಎರಡನೇ ಹಿನ್ನಡೆಯಾಯಿತು.

ಅವರ ಮೇಲ್ಮನವಿ ಅರ್ಜಿಯನ್ನು ಅಕ್ಟೊಬರ್ 29 ವಜಾಗೊಳಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

“ಒಬ್ಬ ಸ್ವಾಮೀಜಿ ಈ ರೀತಿ ಕೀಳುಮಟ್ಟದ ಹೇಳಿಕೆ ನೀಡಿದ್ದು ಸರಿಯಲ್ಲ. ನೀವು ಒಳ್ಳೆಯ ಪ್ರಜೆಯಲ್ಲ. ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ಅವಹೇಳನಕಾರಿ ಭಾಷೆ ಬಳಸಿದ್ದೀರಿ. ನೀವು ಮಾತನಾಡುವುದು ನಿಲ್ಲಿಸಿ ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ,” ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಒಟ್ಟಾರೆ ಕನ್ನೇರಿ ಸ್ವಾಮಿ ಕೋರ್ಟುಗಳಲ್ಲಿ ಛೀಮಾರಿ ಹಾಕಿಸಿಕೊಂಡು ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಅವರು ಹಾಕಿರುವ ಬಟ್ಟೆಗೂ, ಅವರ ವರ್ತನೆಗೂ ಸಂಬಂಧವಿಲ್ಲವೆನ್ನುವುದು ಅವರ ವಿರುದ್ಧ ಸಾಕ್ಷಿಯನ್ನು ಪರಿಶೀಲಿಸಿರುವ ನ್ಯಾಯಾಧೀಶರ ಕಾನೂನುಬದ್ಧ ನಿಲುವು.

ಆದರೆ ಕನ್ನೇರಿ ಸ್ವಾಮಿಗೆ ಏನೋ ದೊಡ್ಡ ಅನ್ಯಾಯವಾಗಿದೆ ಎಂದು ಸಂಘ ಪರಿವಾರದವರು ಹೋರಾಟ ಶುರು ಮಾಡಿದ್ದಾರೆ. ಬೆಳಗಾವಿಯಲ್ಲಿ ಚಕ್ರವರ್ತಿ ಸೂಲಿಬೆಲೆ, ಯತ್ನಾಳ, ಪ್ರತಾಪ ಸಿಂಹ, ಈಶ್ವರಪ್ಪ, ಸಿ.ಟಿ. ರವಿಯಂತವರು ಕರೆ ನೀಡಿದ ಮೇಲೆ ಅಲ್ಲಲ್ಲಿ ಹಿಂದುತ್ವದ ಸಂಘಟನೆಗಳು ಕೂಗಾಡಿಕೊಂಡು ರಸ್ತೆಗಿಳಿದಿವೆ.

ಇವರು ಕನ್ನೇರಿ ಸ್ವಾಮಿಯ ವರ್ತನೆ ಕಾಣದಷ್ಟು ಕುರುಡರೇ ಅಥವಾ ಕೋರ್ಟುಗಳ ಧ್ವನಿ ಕೇಳದಷ್ಟು ಕಿವುಡರೇ. ಇವರನ್ನು ರಸ್ತೆಗಿಳಿಸಿರುವವರ ಉದ್ದೇಶವೇನು? ಲಿಂಗಾಯತರನ್ನು, ಲಿಂಗಾಯತ ಮಠಾಧೀಶರನ್ನು ಟಾರ್ಗೆಟ್ ಮಾಡಿಕೊಂಡು ಏನನ್ನು ಸಾಧಿಸಲು ಹೊರಟ್ಟಿದ್ದಾರೆ? ಇದು ಈಗ ಲಿಂಗಾಯತರು ಉತ್ತರ ಕಂಡುಕೊಳ್ಳಬೇಕಾಗಿರುವ ಪ್ರಶ್ನೆಗಳು.

06/11/2025

ಬೆಳಗಾವಿ ಜಿಲ್ಲೆಯಲ್ಲಿ ರೈತರ ಬೃಹತ್ ಹೋರಾಟ

ಚೆನ್ನಮ್ಮನ ಕಿತ್ತೂರಿನಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿ ಟನ್ ಕಬ್ಬಿಗೆ ರೂ. 3,500/- ಗಳನ್ನು ನೀಡಬೇಕೆಂದು ಮಾಡುತ್ತಿರ...
05/11/2025

ಚೆನ್ನಮ್ಮನ ಕಿತ್ತೂರಿನಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿ ಟನ್ ಕಬ್ಬಿಗೆ ರೂ. 3,500/- ಗಳನ್ನು ನೀಡಬೇಕೆಂದು ಮಾಡುತ್ತಿರುವ ಹೋರಾಟದಲ್ಲಿ ಇಂದು ಪರಮಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಭಾಗಿಯಾಗಿ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಮಾತಮಾಡಿದರು.

ಈ ಸಂದರ್ಭದಲ್ಲಿ ವಕೀಲರು, ರೈತರು ಸೇರಿದಂತೆ ಅನೇಕರು ಇದ್ದರು.

05/11/2025

ಇದು ಒಬ್ಬ ಶ್ರೇಷ್ಠ ನಾಯಕನ ಗುಣ..
ನಿಜವಾದ ರೈತ ನಾಯಕ ನಮ್ಮ ಹೆಮ್ಮೆಯ M. B. Patil ಸರ್

Address

Belgaum
591102

Alerts

Be the first to know and let us send you an email when Lingayat Kranti ಲಿಂಗಾಯತ ಕ್ರಾಂತಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to Lingayat Kranti ಲಿಂಗಾಯತ ಕ್ರಾಂತಿ:

Share