Nera Hodeta

Nera Hodeta Jana-Manada Oladhwani

24/06/2025

ಸುಳೇಭಾವಿ ಮಹಾಲಕ್ಷ್ಮೀದೇವಿ ಜಾತ್ರೆಯ ಝಲಕ್. ಕರ್ನಾಟಕ ರಾಜ್ಯದ ಬೆಳಗಾವಿ ತಾಲೂಕಿನ ಇದು ಜಾಗೃತ ದೇವಸ್ಥಾನ.

ಸುಳೇಭಾವಿ ಮಹಾಲಕ್ಷ್ಮೀದೇವಿ ಜಾತ್ರೆಯ ಝಲಕ್. ಕರ್ನಾಟಕ ರಾಜ್ಯದ ಬೆಳಗಾವಿ ತಾಲೂಕಿನ ಇದು ಜಾಗೃತ ದೇವಸ್ಥಾನ.

* ಸುಳೇಭಾವಿ ಮಹಾಲಕ್ಷ್ಮೀದೇವಿಯ ಜಾತ್ರೆ ಪ್ರತಿ ಐದು ವರ್ಷಗಳಿಗೊಮ್ಮೆ ಒಂಭತ್ತು ದಿನಗಳಕಾಲ ಜರುಗುತ್ತದೆ. 2025ನೇ ಸಾಲಿನ ಜಾತ್ರೆ ಮಾರ್ಚ್ 18 ರಿಂದ 26 ರವರೆಗೆ ನಿಗದಿಗೊಂಡಿತ್ತು. ಕರ್ನಾಟಕ, ಮಹಾರಾಷ್ಟ್ರ ಪ್ರದೇಶದ ಭಕ್ತರು ಪಾಲ್ಗೊಳ್ಳುತ್ತಾರೆ. ಮಾರ್ಚ 26 ರಂದು ರಾತ್ರಿ 10 ಕ್ಕೆ ಧಾರ್ಮಿಕ ವಿಧಿಗಳೊಂದಿಗೆ ಜಾತ್ರೆ ಮುಕ್ತಾಯಗೊಂಡಿತು. ಬೆಳಗಾವಿ ತಾಲೂಕಿನ ಇದು, ಜಾಗೃತ ದೇವಸ್ಥಾನ. ವೀಡಿಯೋದಲ್ಲಿ ಶ್ರೀದೇವಿಯ ವೈಭವ, ದೇವಾಲಯ ಪರಿಸರ ಮತ್ತು ಜಾತ್ರೆ ನೋಟವನ್ನು ಕಾಣಬಹುದು.

02/06/2025

ಜನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿ ಕುರಿತು ಗದಗ-ಡಂಬಳ ತೋಂಟದಾರ್ಯ ಮಠದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮೀಜಿ ಮಾತು

ಜನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿ ಕುರಿತು ಗದಗ-ಡಂಬಳ ತೋಂಟದಾರ್ಯ ಮಠದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮೀಜಿ ಮಾತು

* ಜನಪದ ಸಾಹಿತ್ಯ ಕ್ಷೇತ್ರದಲ್ಲಿ ನಾಡಿನ ಖ್ಯಾತ ವಿದ್ವಾಂಸ ಡಾ. ಬಸವರಾಜ ಜಗಜಂಪಿಯವರ ಅಮೃತ ಮಹೋತ್ಸವ ಸಮಾರಂಭ ಬೆಳಗಾವಿ ನೆಹರು ನಗರದ ಕನ್ನಡ ಭವನದಲ್ಲಿ 2025 ಜೂನ್ 1 ರಂದು ಬೆಳಗ್ಗೆ 11 ಗಂಟೆಗೆ ಜರುಗಿತು.
ಅವರ ಕುಟುಂಬ ವರ್ಗದವರೆ ಇದನ್ನು ಸಂಘಟಿಸಿದ್ದರು. ಜಗಜಂಪಿಯವರ ಶಿಷ್ಯ ವರ್ಗ, ಅಭಿಮಾನಿಗಳು, ಹಿತೈಷಿಗಳು, ಕನ್ನಡ ಭವನದವರು ಇದಕ್ಕೆ ಕೈಜೋಡಿಸಿದರು. 75 ವಸಂತಗಳನ್ನು ಪೂರೈಸಿದ ಗುರುವಿನ ಶೈಕ್ಷಣಿಕ, ಸಾಹಿತ್ಯಕ ಮತ್ತು ಸಾಮಾಜಿಕ ಸೇವೆಯನ್ನು ದೊಡ್ಡ ಸಂಖ್ಯೆಯಲ್ಲಿ ಸೇರಿ ಸ್ಮರಿಸಿ ಸತ್ಕರಿಸಿದರು.
ಡಾ. ಬಸವರಾಜ ಜಗಜಂಪಿ ಅಮೃತಾಭಿನಂದನ "ಪರಿಣತಮತಿ" ಹೆಸರಿ ಅಭಿನಂದನ ಸಂಪುಟವನ್ನು ಲೋಕಾರ್ಪಣೆ ಗೊಳಿಸಲಾಯಿತು.
ಸಾನಿಧ್ಯವನ್ನು ಗದಗ-ಡಂಬಳ ತೋಂಟದಾರ್ಯ ಸಿದ್ಧಸಂಸ್ಥಾನ ಮಠದ ತೋಂಟದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮೀಜಿ, ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ, ಅಧ್ಯಕ್ಷತೆಯನ್ನು ಡಾ. ಎಚ್.ಬಿ. ರಾಜಶೇಖರ ವಹಿಸಿದ್ದರು.
ಕೆಎಲ್ ಇ ಸಂಸ್ಥೆ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ, ವಿಧಾನಸಭೆಯ ಮಾಜಿ ಸದಸ್ಯ ಮತ್ತು ಕೆಎಲ್ ಇ ನಿರ್ದೇಶಕ ಮಹಾಂತೇಶ ಕವಟಗಿಮಠ, ಹಿರಿಯ ಸಾಹಿತಿ ಬಿ.ಎಸ್. ಗವಿಮಠ ಅತಿಥಿಯಾಗಿ ಆಗಮಿಸಿದ್ದರು.
"ಪರಿಣತಮತಿ" ಗ್ರಂಥದ ಪ್ರಧಾನ ಸಂಪಾದಕರಾದ ಸಾಹಿತಿ ಡಾ. ರಾಮಕೃಷ್ಣ ಮರಾಠೆ ಮತ್ತು ಡಾ. ವಿ.ಎಸ್. ಮಾಳಿ ಅವರು ಅಭಿನಂದನಪರ ನುಡಿ ಹೇಳಿದರು. ಡಾ. ಬಸವರಾಜ ಜಗಜಂಪಿ ಅಭಿನಂದನೆಗೆ ತಮ್ಮ ಕೃತಜ್ಞತಾ ಪೂರ್ಣ ನುಡಿ ಹೇಳಿದರು.
ಪುತ್ರ ಲಿಂಗರಾಜ ಜಗಜಂಪಿ ತಂದೆಯ ಕುರಿತು ಮಾತನಾಡಿದರು.
ಮೊಮ್ಮಗ ಧನ್ ವಿನ್ ಗಣೇಶ ಸ್ತೋತ್ರ ಹೇಳಿದ. ಮೊಮ್ಮಗಳು ದೀಕ್ಷಾ ಕಲ್ಲೂರ ಅಜ್ಜನ ಕುರಿತು ಅಕ್ಕರೆಯ ಮಾತು ಹೇಳಿದರು.
ಸೊಸೆ ನೇಹಾ ಜಗಜಂಪಿ, ಮೊಮ್ಮಗಳು ಸಿಂಚನ್, ಜ್ಯೋತಿ ರಗಶೆಟ್ಟಿ, ಪ್ರೀತಿ ಜಗಜಂಪಿ ಸ್ವಾಗತ ಗೀತೆ ಹೇಳಿದರು.
ಅಜಯಕುಮಾರ ವಾಲೆ ಮಾನಪತ್ರ ಓದಿದರು. ಪುತ್ರಿ ಅಮೃತಾ ಕಲ್ಲೂರ ವಂದಿಸಿದರು.
ಡಾ. ಅವಿನಾಶ್ ಕವಿ, ಡಾ. ಮಹೇಶ ಗುರನಗೌಡರ್ ಸ್ವಾಗತಿಸಿ ನಿರೂಪಿಸಿದರು.
"ಪರಿಣತಮತಿ" ಕೃತಿ-
ಪ್ರಧಾನ ಸಂಪಾದಕರು
ಡಾ. ರಾಮಕೃಷ್ಣ ಮರಾಠೆ, ಡಾ. ವಿ.ಎಸ್. ಮಾಳಿ.
ಸಂಪಾದಕರು
ಸಾಹಿತಿ ಪ್ರಕಾಶ ಗಿರಿಮಲ್ಲನವರ್, ಡಾ. ಮಹೇಶ ಗುರನಗೌಡರ್. ಇವರಿಗೆ ಡಾ. ಗೋವಿಂದರಾಜ್ ತಳಕೋಡ, ಪ್ರೊ. ಆನಂದ ಜಕ್ಕನವರ್ ನೆರವಾಗಿದ್ದಾರೆ.

24/05/2025

ಆಗ್ಯಾವ ನಮ ಜ್ವಾಳ ಉಳದಾವ ನಮ್ಮ ಹಾಡ ಈಗ ಸಾಕವ್ವ ನಿನ್ನ ಕಲ್ಲ ಹಾಕಿದ ಬಂಗಾರದುಂಗುರ ಸವೆದಾವ. ಬಸವರಾಜ ಜಗಜಂಪಿ ಸಂದರ್ಶನ

ಆಗ್ಯಾವ ನಮ ಜ್ವಾಳ ಉಳದಾವ ನಮ್ಮ ಹಾಡ ಈಗ ಸಾಕವ್ವ ನಿನ್ನ ಕಲ್ಲ ಹಾಕಿದ ಬಂಗಾರದುಂಗುರ ಸವೆದಾವ. ಬಸವರಾಜ ಜಗಜಂಪಿ ಸಂದರ್ಶನ

* ನಮಸ್ಕಾರ ವೀಕ್ಷಕರೆ
ನಾನು ರಾಜು ಉಸ್ತಾದ್
"ನೇರ ಹೊಡೆತ" ಹೆಸರಿನ ಸಮೂಹ ಜಾಲತಾಣಕ್ಕೆ ನಿಮಗೆ ಸ್ವಾಗತ.

ನಾನೀಗ ಜನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿಯವರೊಂದಿಗೆ ಇದ್ದೇನೆ. ಇವರೊಂದಿಗೆ ಜನಪದ ಸಾಹಿತ್ಯ ಮತ್ತು 21 ನೇ ಶತಮಾನದ ನಿಜ ಸಂತ, ನಡೆದಾಡುವ ದೇವರೆಂದೇ ಹೆಸರಾದ ವಿಜಯಪುರ ಜ್ಞಾನಯೋಗಾಶ್ರಮದ ಲಿಂಗೈಕ್ಯ ಪರಮಪೂಜ್ಯ ಸಿದ್ಧೇಶ್ವರ ಶ್ರೀಗಳಿಗೆ ಜನಪದದ ಮೇಲಿದ್ದ ಪ್ರೀತಿ, ಕಾಳಜಿಯ ಕುರಿತು ಚರ್ಚೆ ಹಾಗೂ ಸಂದರ್ಶನ ಮಾಡಲಿದ್ದೇನೆ.

20/05/2025

ವಿಜಯಪುರ ಸಿದ್ಧೇಶ್ವರ ಶ್ರೀಗಳಿಗೆ ಜನಪದದ ಮೇಲೆ ಪ್ರೀತಿ ಇತ್ತು. ಕೊನೆ ದಿನಗಳಲ್ಲೂ ತಮಗೆ ಪ್ರಿಯವಾದವುಗಳ ಆನಂದ ಪಡೆದರು.

ವಿಜಯಪುರ ಸಿದ್ಧೇಶ್ವರ ಶ್ರೀಗಳಿಗೆ ಜನಪದದ ಮೇಲೆ ಪ್ರೀತಿ ಇತ್ತು. ಕೊನೆ ದಿನಗಳಲ್ಲೂ ತಮಗೆ ಪ್ರಿಯವಾದವುಗಳ ಆನಂದ ಪಡೆದರು.

* ನಮಸ್ಕಾರ ವೀಕ್ಷರೆ
ನಾನು ರಾಜು ಉಸ್ತಾದ್
"ನೇರ ಹೊಡೆತ" ಹೆಸರಿನ ಸಮೂಹ ಜಾಲತಾಣಕ್ಕೆ ನಿಮಗೆ ಸ್ವಾಗತ..

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಯಾರಿಗೆ ಗೊತ್ತಿಲ್ಲ ? ಅವರೊಂದು ಆಧ್ಯಾತ್ಮಿಕ ಕ್ಷೇತ್ರದ ನಕ್ಷತ್ರ ! ದೇಶ-ವಿದೇಶಗಳಲ್ಲೂ ಭಕ್ತರುಂಟು. ಇವರೆಲ್ಲ ಶ್ರೀಗಳನ್ನು ಈ ಶತಮಾನದ ನಡೆದಾಡುವ ದೇವರೆಂದೇ ನಂಬುತ್ತಾರೆ. ಅದೇ ರೀತಿ ಅವರಿಗೆ ಭಕ್ತಿಯ ಸಮರ್ಪಣೆ ಮಾಡುತ್ತಾರೆ.
ಶ್ರೀಗಳು ವೇದ, ಕೋಶಗಳನ್ನೆಲ್ಲ ಓದಿಕೊಂಡಿದ್ದರೂ ನೆಲದ ಸೊಗಡು ಸೂಸುವ ಮತ್ತು ನಮ್ಮ ಅಸ್ಮಿತೆಯನ್ನು ತಿಳಿಸಿ, ಸಮೃದ್ಧ ಗೊಳಿಸುವ ಜನಪದದ ಮೇಲೆ ಅವರಿಗೆ ಅಪಾರ ಪ್ರೀತಿ ಇತ್ತು. ಕೊನೆಯ ದಿನಗಳಲ್ಲೂ ತಮಗೆ ಪ್ರಿಯವಾದವುಗಳ ಆನಂದ ಪಡೆದರು. ಈ ದಿನಗಳಲ್ಲಿ ಅವರೆದುರಿಗೆ ಕುಳಿತು ಜನಪದ ಹಾಡು ಹೇಳುವ ಅವಕಾಶವನ್ನು ಜನಪದ ವಿದ್ವಾಂಸ ಬೆಳಗಾವಿಯ ಡಾ. ಬಸವರಾಜ ಜಗಜಂಪಿಯವರು ಪಡೆದುಕೊಂಡಿದ್ದರು. ಆ ಕ್ಷಣದ ಅನುಭವವನ್ನು ಸ್ವತಃ ಜಗಜಂಪಿಯವರು ಹಂಚಿಕೊಂಡಿದ್ದಾರೆ ಕೇಳಿ...
2023 ಜನವರಿ 1 ರಂದು ಶ್ರೀಗಳು ಶರೀರ ತ್ಯಜಿಸಿದರು. ಡಾ. ಬಸವರಾಜ ಜಗಜಂಪಿಯವರು 2022 ಡಿಸೆಂಬರ್ 21 ರಂದು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಮಧ್ಯಾಹ್ನದ ಇಳಿಹೊತ್ತಿನಲ್ಲಿ ಶ್ರೀಗಳ ಎದುರು ಸರಣಿಯಾಗಿ ಜನಪದ ಗೀತೆಗಳನ್ನು ಹಾಡಿದ್ದರು. ಶ್ರೀಗಳು ಶಾರೀರಿಕವಾಗಿ ಅಶಕ್ತವಾಗಿದ್ದರೂ ಧ್ಯಾನ ಮುದ್ರೆಯಲ್ಲಿ ಹಾಡಿನ ಆನಂದ ಸವಿದರು.
ಬನ್ನಿ ನಾವೀಗ ಜಗಜಂಪಿಯವರ ಮಾತಿಗೆ ಕಿವಿಯಾಗೊಣ...

18/05/2025

ಹೇಸಿ ಮಾತನು ಕೇಳಿ ಬೀಸು ದೊಣ್ಣಿಲೆ ಬಡದ ಬಾಸಳೆದ್ದಾವ ಬೆನ್ತುಂಬ ಸೋ ಕಣ್ತುಂಬ ಕಣ್ಣೀರ ಸೂಸಿ ಹರದಾವ ಸೋ

ಹೇಸಿ ಮಾತನು ಕೇಳಿ ಬೀಸು ದೊಣ್ಣಿಲೆ ಬಡದ ಬಾಸಳೆದ್ದಾವ ಬೆನ್ತುಂಬ ಸೋ ಕಣ್ತುಂಬ ಕಣ್ಣೀರ ಸೂಸಿ ಹರದಾವ ಸೋ

* ಹೇಸಿ ಮಾತನು ಕೇಳಿ ಬೀಸು ದೊಣ್ಣಿಲೆ ಬಡದ
ಬಾಸಳೆದ್ದಾವ ಬೆನ್ತುಂಬ ಸೋ | ಕಣ್ತುಂಬ
ಕಣ್ಣೀರ ಸೂಸಿ ಹರದಾವ ಸೋ || ಕಣ್ತುಂಬ ಕಣ್ಣೀರ ಸೂಸಿ ನೀ ಹರದಾವ
ದಾಸಾಳ ಮಡುವ ತೊಯ್ಸ್ಯಾವ ಸೋ | ಕಣ್ಣೀರ
ದೇಶನೂರ ಮುಂದ ಕೆರಿಯಾಗಿ ಸೋ |
ದೇಶನೂರ ನೀ ಮುಂದ ಕೆರಿಯಾಗಿ ಕಣ್ಣೀರ
ನ್ಯಾಸರಗಿ ಮುಂದ ಹಳ್ಳಾಗಿ ಸೋ |
ನ್ಯಾಸರಗಿ ನೀ ಮುಂದ ಹಳ್ಳಾಗಿ ಕಣ್ಣೀರ
ಗೋಕಾವಿ ಮುಂದ ಹೊಳಿಯಾಗಿ ಸೋ
ಗೋಕಾವಿ ನೀ ಮುಂದ ಹೊಳಿಯಾಗಿ ಕಣ್ಣೀರ
ಈಸಿ ಬಾರೋ ತಮ್ಮ ಕರಿಲಾಕ ||

* ಇದು ಜನಪದ ಸಾಹಿತ್ಯದ ಮಹೋನ್ನತ ಹಾಡು. ಕಾಳಿದಾಸ, ಕುಮಾರವ್ಯಾಸ ಸೃಷ್ಟಿಸಲಾಗದ್ದನ್ನು ಜನಪದ ಗರತಿ ಮಾಡಿದ್ದಾಳೆ.
ಗಂಡನ ಮನೆಯ ಹಿಂಸೆಯ ಸಂದೇಶವನ್ನು ಕಣ್ಣೀರ ಹೊಳೆ ಮೂಲಕ ತವರಿಗೆ ಮುಟ್ಟಿಸಿ ರಕ್ಷಣೆಗೆ ತಮ್ಮನನ್ನು ಕರೆಯಿಸಿಕೊಂಡಿದ್ದಾಳೆ.
ನೀವು ಒಮ್ಮೆ ಕೇಳಲೇ ಬೇಕಾದ ಹಾಡು.... ಹೃದಯ ಆರ್ದ್ರ ಗೊಂಡು ಕಣ್ಣು ತಂತಾನೇ ನೀರಿನಿಂದ ತುಂಬಿ ಕೊಳ್ಳುತ್ತದೆ.

17/05/2025

ಹೇಮರಡ್ಡಿ ಮಲ್ಲಮ್ಮ ನಾಟಕ ಭಾಗ-3 ಭೋಗ ಜೀವನ ತ್ಯಜಿಸಿ ಯೋಗ, ವೈರಾಗ್ಯ ಅಪ್ಪಿದ ವೇಮನ. ಇಲ್ಲಿಂದ ಇಡೀ ಸಮಾಜಕ್ಕೆ ಬೆಳಕಾದ.

ಹೇಮರಡ್ಡಿ ಮಲ್ಲಮ್ಮ ನಾಟಕ ಭಾಗ-3 ಭೋಗ ಜೀವನ ತ್ಯಜಿಸಿ ಯೋಗ, ವೈರಾಗ್ಯ ಅಪ್ಪಿದ ವೇಮನ. ಇಲ್ಲಿಂದ ಇಡೀ ಸಮಾಜಕ್ಕೆ ಬೆಳಕಾದ.

* ಮಹಾಸಾದ್ವಿ "ಹೇಮರಡ್ಡಿ ಮಲ್ಲಮ್ಮ" ನಾಟಕ ಪ್ರದರ್ಶನ ಬೆಳಗಾವಿಯ ನೆಹರು ನಗರದ "ಕನ್ನಡ ಭವನ" ದಲ್ಲಿ 2025 ಮೇ 10 ರಂದು ಸಂಜೆ ನಡೆಯಿತು.
ರಂಗ ಸೃಷ್ಟಿ ಸಾಂಸ್ಕೃತಿಕ ಸಂಘಟನೆ, ರಡ್ಡಿ ಸಂಘ ಮತ್ತು ಕನ್ನಡ ಭವನದವರು ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ಯವಾಗಿ ಸಂಯುಕ್ತವಾಗಿ ಇದರ ಆಯೋಜನೆ ಮಾಡಿದ್ದರು.
ಸಾಹಿತಿಗಳಾದ ರಾಮಕೃಷ್ಣ ಮರಾಠೆ ಕೃತಿ ರಚನೆ ಹಾಗೂ ಶಿರೀಷ ಜೋಶಿ ನಿರ್ದೇಶನ ಮಾಡಿದ್ದರು. ಆರ್.ಟಿ. ಜಂಗಲ್ ನೆರವಾಗಿದ್ದರು. ಸ್ಥಳೀಯ ಹವ್ಯಾಸೀ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನರ ಜೀವನ ಚರಿತ್ರೆ ವೀಕ್ಷಕರನ್ನು ರೋಮಾಂಚನ ಗೊಳಿಸಿ, ಮೈ, ಮನಗಳಲ್ಲಿ ಭಕ್ತಿ ರಸ ತುಂಬಿತು. ಅತಿಥಿಯಾಗಿ ಆಗಮಿಸಿದ್ದ ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿ. ಬರಮನಿಯವರು ಜನರಲ್ಲಿ ಸಾಂಸ್ಕೃತಿಕ ಭಾವನೆ ಮೂಡಿಸಲು ಸಂಘಟನೆಯವರು ಮಾಡಿದ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

14/05/2025

ಹೇಮರಡ್ಡಿ ಮಲ್ಲಮ್ಮ ನಾಟಕ ಭಾಗ-2 ಮಲ್ಲಮ್ಮನ ಅರಣ್ಯ ಜೀವನ. ಅತ್ತೆಯ ಮುಂದೆ ನೆಗೆಣ್ಣಿಯರ ಫಿತೂರಿ.

ಹೇಮರಡ್ಡಿ ಮಲ್ಲಮ್ಮ ನಾಟಕ ಭಾಗ-2 ಮಲ್ಲಮ್ಮನ ಅರಣ್ಯ ಜೀವನ. ಅತ್ತೆಯ ಮುಂದೆ ನೆಗೆಣ್ಣಿಯರ ಫಿತೂರಿ.

* ಮಹಾಸಾದ್ವಿ "ಹೇಮರಡ್ಡಿ ಮಲ್ಲಮ್ಮ" ನಾಟಕ ಪ್ರದರ್ಶನ ಬೆಳಗಾವಿಯ ನೆಹರು ನಗರದ "ಕನ್ನಡ ಭವನ" ದಲ್ಲಿ 2025 ಮೇ 10 ರಂದು ಸಂಜೆ ನಡೆಯಿತು.
ರಂಗ ಸೃಷ್ಟಿ ಸಾಂಸ್ಕೃತಿಕ ಸಂಘಟನೆ, ರಡ್ಡಿ ಸಂಘ ಮತ್ತು ಕನ್ನಡ ಭವನದವರು ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ಯವಾಗಿ ಸಂಯುಕ್ತವಾಗಿ ಇದರ ಆಯೋಜನೆ ಮಾಡಿದ್ದರು.
ಸಾಹಿತಿಗಳಾದ ರಾಮಕೃಷ್ಣ ಮರಾಠೆ ಕೃತಿ ರಚನೆ ಹಾಗೂ ಶಿರೀಷ ಜೋಶಿ ನಿರ್ದೇಶನ ಮಾಡಿದ್ದರು. ಆರ್.ಟಿ. ಜಂಗಲ್ ನೆರವಾಗಿದ್ದರು. ಸ್ಥಳೀಯ ಹವ್ಯಾಸೀ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನರ ಜೀವನ ಚರಿತ್ರೆ ವೀಕ್ಷಕರನ್ನು ರೋಮಾಂಚನ ಗೊಳಿಸಿ, ಮೈ, ಮನಗಳಲ್ಲಿ ಭಕ್ತಿ ರಸ ತುಂಬಿತು. ಅತಿಥಿಯಾಗಿ ಆಗಮಿಸಿದ್ದ ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿ. ಬರಮನಿಯವರು ಜನರಲ್ಲಿ ಸಾಂಸ್ಕೃತಿಕ ಭಾವನೆ ಮೂಡಿಸಲು ಸಂಘಟನೆಯವರು ಮಾಡಿದ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

12/05/2025

ಹೇಮರಡ್ಡಿ ಮಲ್ಲಮ್ಮ ನಾಟಕ ಭಾಗ-1 ಸೋಬಾನ ಪದ: ದಟ್ಟ ಅರಣ್ಯದಾಗ ಗುಗ್ಗಳ ಹೂಡ್ಯಾರ್‍ಯಾಕ ಪರ್ವತ ಲಿಂಗಯ್ಯನ ಶಿವಪೂಜೆ ಸೋಬಾನ

ಹೇಮರಡ್ಡಿ ಮಲ್ಲಮ್ಮ ನಾಟಕ ಭಾಗ-1 ಸೋಬಾನ ಪದ: ದಟ್ಟ ಅರಣ್ಯದಾಗ ಗುಗ್ಗಳ ಹೂಡ್ಯಾರ್‍ಯಾಕ ಪರ್ವತ ಲಿಂಗಯ್ಯನ ಶಿವಪೂಜೆ ಸೋಬಾನ

ಸೋಬಾನ ಪದ:
* ದಟ್ಟ ಅರಣ್ಯದಾಗ ಗುಗ್ಗಳ ಹೂಡ್ಯಾರ್‍ಯಾಕ |
ಪರ್ವತ ಲಿಂಗಯ್ಯನ ಶಿವಪೂಜೆ || ಸೋಬಾನ...
ಸೋಬಾನ ಶುಭಕಾರ್ಯ ಎಲ್ಲಿ ಹುಟ್ಟಿದಳು ಶಿವನೆ
ಸೋಮರಡ್ಡ್ಯಾರ ಮನಿಯಾಗ || ಸೋಬಾನ....

* ಮಹಾಸಾದ್ವಿ "ಹೇಮರಡ್ಡಿ ಮಲ್ಲಮ್ಮ" ನಾಟಕ ಪ್ರದರ್ಶನ ಬೆಳಗಾವಿಯ ನೆಹರು ನಗರದ "ಕನ್ನಡ ಭವನ" ದಲ್ಲಿ 2025 ಮೇ 10 ರಂದು ಸಂಜೆ ನಡೆಯಿತು.
ರಂಗ ಸೃಷ್ಟಿ ಸಾಂಸ್ಕೃತಿಕ ಸಂಘಟನೆ, ರಡ್ಡಿ ಸಂಘ ಮತ್ತು ಕನ್ನಡ ಭವನದವರು ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ಯವಾಗಿ ಸಂಯುಕ್ತವಾಗಿ ಇದರ ಆಯೋಜನೆ ಮಾಡಿದ್ದರು.
ಸಾಹಿತಿಗಳಾದ ರಾಮಕೃಷ್ಣ ಮರಾಠೆ ಕೃತಿ ರಚನೆ ಹಾಗೂ ಶಿರೀಷ ಜೋಶಿ ನಿರ್ದೇಶನ ಮಾಡಿದ್ದರು. ಆರ್.ಟಿ. ಜಂಗಲ್ ನೆರವಾಗಿದ್ದರು. ಸ್ಥಳೀಯ ಹವ್ಯಾಸೀ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನರ ಜೀವನ ಚರಿತ್ರೆ ವೀಕ್ಷಕರನ್ನು ರೋಮಾಂಚನ ಗೊಳಿಸಿ, ಮೈ, ಮನಗಳಲ್ಲಿ ಭಕ್ತಿ ರಸ ತುಂಬಿತು. ಅತಿಥಿಯಾಗಿ ಆಗಮಿಸಿದ್ದ ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿ. ಬರಮನಿಯವರು ಜನರಲ್ಲಿ ಸಾಂಸ್ಕೃತಿಕ ಭಾವನೆ ಮೂಡಿಸಲು ಸಂಘಟನೆಯವರು ಮಾಡಿದ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

06/05/2025

ಮ್ಹಾರಾಯರು ಬೈದರ ಬರಲಿಲ್ಲ ಕಣ್ಣೀರ ಮ್ಹಾರಾಯರ ತಮ್ಮ ಮೈದುನ ಬೈದರ ಮಾಡಿಲ್ಲದ ಮಳೆ ಸುರಧಾಂಗ. ಜನಪದ ಗೀತೆ.

ಮ್ಹಾರಾಯರು ಬೈದರ ಬರಲಿಲ್ಲ ಕಣ್ಣೀರ ಮ್ಹಾರಾಯರ ತಮ್ಮ ಮೈದುನ ಬೈದರ ಮಾಡಿಲ್ಲದ ಮಳೆ ಸುರಧಾಂಗ. ಜನಪದ ಗೀತೆ.

* ಆಗ್ಯಾವ ನಮ ಜ್ವಾಳ ಉಳದಾವ ನಮ ಹಾಡ ಈಗ ಸಾಕವ್ವ ನಿನ್ನ ಕಲ್ಲ | ಹಾಕಿದ ಬಂಗಾರದುಂಗುರ ಸವೆದಾವ ||

* 'ಜನಪದ' ಶಬ್ದವೇ ಒಂದು ವಿಶಿಷ್ಟ. ಅದು ನಮ್ಮತನದ ಮೂಲ. ಅಸ್ಮಿತೆ, ಸಂಸ್ಕೃತಿಯ ಆಕರ.
ಜನಪದ ಶಬ್ದವನ್ನು ಬಹು ಅರ್ಥಗಳಲ್ಲಿ ವಿಶ್ಲೇಷಿಸಬಹುದು. ಅದೊಂದು ಸಾಮಾಜಿಕ ವ್ಯವಸ್ಥೆ. ಬುಡಕಟ್ಟು ರೀತಿ. ನಾವು ಮತ್ತು ನಮ್ಮ ಪೂರ್ವಜರು ಬದುಕಿ ಬಂದ ಮಾರ್ಗ. ಈ ದೀರ್ಘ ಬದುಕಿನ ಅನುಭವದ ಸಾರ ಹಾಡಾಗಿ ಹೊರಬಿದ್ದಿರುವುದೇ ಜನಪದ ಅಥವಾ ಜಾನಪದ ಸಾಹಿತ್ಯ. ಇದು ನಮ್ಮ ವೇದ, ಇದು ನಮ್ಮ ಸಂವಿಧಾನ.
ನಿಸರ್ಗದ ಮಡಿಲಿನಲ್ಲಿ ಸ್ವಚ್ಛಂದವಾಗಿ ಬದುಕಿದ ಗುಂಪು, ಹಟ್ಟಿ, ಹಳ್ಳಿಗರು, ಅನಕ್ಷರಸ್ಥರು ತಮಗಾದ ನೋವು, ನಲಿವು, ಖುಷಿ, ಭಕ್ತಿ ಮತ್ತು ಬದುಕಿನ ತರಹೇವಾರಿ ಭಾವನೆಗಳಿಗೆ ತಮ್ಮದೇ ರೀತಿಯಲ್ಲಿ ಶಬ್ದ ರೂಪ ನೀಡಿ ಹೊರ ಹಾಕಿರುವುದೇ ಈ ಜನಪದ ಹಾಡುಗಳು.
ಇವು ಬಾಯಿ ಇಂದ ಬಾಯಿಗೆ ಹರಿದು ಬಂದು ಉಳಿದಷ್ಟು ನಮ್ಮ ಕೈಗೆ ಸಿಕ್ಕಿವೆ. ಕಳೆದು, ಕೊಳೆತು ಹೊದದ್ದು ಬಹಳಷ್ಟು. ಜನಪದ ಹಾಡುಗಳಿಗೆ ತಜ್ಞರು, ಪಂಡಿತರು, ಸಂಶೋಧಕರು ಅಕ್ಷರ ರೂಪ ನೀಡುವ ಮೊದಲೇ ಜನ ವಲಸೆ, ಆಧುನಿಕತೆ ಕಡೆಗೆ ಒಗ್ಗಿ ಹೋಗಿದ್ದರು. ಇದರಿಂದ ಬಾಯಿ ಇಂದ ಬಾಯಿಗೆ ಹರಿದು ಬರುವ ಜನಪದ ಹಾಡಿನ ಪ್ರಮಾಣ ಕಡಿಮೆಯಾಗಿತ್ತು. ಕಳೆದು ಹೋದ ತಲೆಮಾರುಗಳಲ್ಲಿ ನಮಗೆ ಬೇಕಿರುವುದೂ ಮಣ್ಣಾಯಿತು.
ಅನೇಕ ವಿದ್ವಾಂಸರ ಸತತ್ ಪ್ರಯತ್ನಗಳಿಂದ ಕೆಲ ಮಟ್ಟಿಗಾದರೂ ಜನಪದ ಸಾಹಿತ್ಯ, ಹಾಡುಗಾರಿಕೆ ಉಳಿದುಕೊಂಡಿದೆ.
ಇದನ್ನು ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಸರಕಾರ, ವಿಶ್ವವಿದ್ಯಾಲಯಗಳು ಮುಂಚೂಣಿ ತೆಗೆದುಕೊಂಡರೂ ವಿದ್ವಾಂಸರು ಕಾಳಜಿಯಿಂದ ತೇರನ್ನು ಎಳೆಯಬೇಕು. ಜನ ಇದಕ್ಕೆ ಕೈಜೋಡಿಸಬೇಕು. ಜನಪದ ಅಥವಾ ಹಳ್ಳಿಗರ ಸಂಗೀತ, ಸಾಹಿತ್ಯಕ್ಕೆ ಕಿವಿಗೊಡಬೇಕು. ಆಗಲೇ ನಮ್ಮ ಜನಪದ ಸಂಸ್ಕೃತಿಯ ಸೊಗಡು ಮತ್ತು ಸಮೃದ್ಧತೆ ಮುಂದಿನ ಪೀಳಿಗೆಗೆ ತಲುಪಲು ಸಾಧ್ಯ. ಅವರೂ ಕೂಡ ತಮ್ಮತನದ ಬೇರುಗಳ ಮೂಲಗಳನ್ನು ಹುಡುಕಿಕೊಳ್ಳಬಹುದು.
ಈ ನಿಟ್ಟಿನ ನಮ್ಮ ಪ್ರಯತ್ನದ ಜನಪದ ಸರಣಿಯಲ್ಲಿ ಜನಪದ ವಿದ್ವಾಂಸ ಮತ್ತು ಸಂಶೋಧಕ ಡಾ. ಬಸವರಾಜ್ ಜಗಜಂಪಿಯವರು, ಜನಪದ, ಜನಪದ ಸಾಹಿತ್ಯ ಮತ್ತು ಜನಪದ ಸಂಸ್ಕೃತಿಯ ಮಹತ್ವದ ಬಗ್ಗೆ ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ.

* ಹಿಡಿಸಿದರೆ ನಿಮ್ಮ ಅಭಿಪ್ರಾಯಗಳನ್ನು ಚಾನೆಲ್ ನ ಕಾಮೆಂಟ್ ಬಾಕ್ಸ್ ದಲ್ಲಿ ದಾಖಲಿಸಿರಿ. ಅದು ಕಾಯಮ್ಮಾಗಿ ಉಳಿಯುತ್ತದೆ.

21/04/2025

ವಡ್ಡರ ಯಲ್ಲಣ್ಣ, ಕಿತ್ತೂರು ರಾಣಿ ಚೆನ್ನಮ್ಮನ ಶೂರ ಬಂಟರಲ್ಲೊಬ್ಬ. ಈತನಿಗೆ ಶಬ್ದವೇದಿ ವಿದ್ಯೆ ಕರಗತವಿತ್ತು.

ವಡ್ಡರ ಯಲ್ಲಣ್ಣ, ಕಿತ್ತೂರು ರಾಣಿ ಚೆನ್ನಮ್ಮನ ಶೂರ ಬಂಟರಲ್ಲೊಬ್ಬ. ಈತನಿಗೆ ಶಬ್ದವೇದಿ ವಿದ್ಯೆ ಕರಗತವಿತ್ತು.

* "ವಡ್ಡರ ಯಲ್ಲಣ್ಣ" ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ನಡೆಸಿದ ಕೆಚ್ಚಿನ ಹೋರಾಟದ ಗೌರವ ಹೆಚ್ಚಿಸಿದ ಐತಿಹಾಸಿಕ
ಶೂರರಲ್ಲೊಬ್ಬ.
ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಒಳಗೊಂಡ ಶೂರರ ತಂಡದ ಭಾಗವಾಗಿದ್ದ. ಈತ ಬಹುಕಾಲದವರೆಗೆ ಬ್ರಿಟಿಷರಿಗೆ ತಲೆನೋವಾಗಿ, ಜನರಲ್ಲಿ ಸ್ವಾತಂತ್ರ್ಯ ಪ್ರೇಮ ನಿಗಿನಿಗಿಯಾಗಿ ಬೆಳಗುವಂತೆ ಮಾಡಿದ್ದ.
ರಾಣಿ ಚೆನ್ನಮ್ಮನಿಗಿಂತಲೂ ಮೊದಲೇ ಇದೇ ಪ್ರದೇಶದಲ್ಲಿ ಶೌರ್ಯ ಮೆರೆದು ಹೋಗಿದ್ದ ರಾಣಿ ಮಲ್ಲಮ್ಮನ ಬೆಳವಡಿಯವನಾದ ಈತನ ವಿಶೇಷವೆಂದರೆ ತನ್ನ ಹೆಗಲ ಮೇಲೆ ಹಾಕಿಕೊಳ್ಳುತ್ತಿದ್ದ "ವಲ್ಲಿ"ಯನ್ನು ನೆಲಕ್ಕೆ ಹಾಸಿ ಅದಕ್ಕೆ ಬಲ ಕಿವಿ ಕೊಟ್ಟು ಶಬ್ದ ಕೇಳಿಸಿಕೊಂಡನೆಂದರೆ ದೂರದಲ್ಲಿ ಸೇನಾ ಚಲನವಲನ, ಚಟುವಟಿಕೆಗಳು ನಡೆದಿದ್ದರೆ ಅದನ್ನು ನಿಖರವಾಗಿ ಹೇಳುತ್ತಿದ್ದ. ಆನೆ, ಒಂಟೆ, ಕುದುರೆಗಳು ಮತ್ತು ಸೇನಾ ಪ್ರಮಾಣ ಎಷ್ಟಿದೆ ಎಂದು ತಿಳಿಸುತ್ತಿದ್ದ. ಇದರ ಮೇಲೆ ಈ ಕಡೆಯಿಂದ ಮುಂದಿನ ರಣನೀತಿ ಸಿದ್ದವಾಗುತ್ತಿತ್ತು. ಹೀಗಾಗಿ ಆತನಿಗೆ "ಶಬ್ದವೇದಿ" ಉಪಾದಿ ಇತ್ತು. ಈ ವಿದ್ಯೆ, ಪ್ರತಿಭೆಯನ್ನು ಯಾವ ಗುರುವೂ ಆತನಿಗೆ ಹೇಳಿ ಕೊಟ್ಟಿರಲಿಲ್ಲ. ಅದು ಆತನಿಗೆ ದೈವದತ್ತವಾಗಿ ಬಂದಿತ್ತು.
ಈತ ಕವಣೆ ಬೀಸುವುದರಲ್ಲೂ ನಿಸ್ಸಿಮನಾಗಿದ್ದ. ತನ್ನ ವಲ್ಲಿಯಲ್ಲಿ ಕಲ್ಲಿನ ಚೂರುಗಳನ್ನು ಹಾಕಿ ಅದರ ನಾಲ್ಕೂ ಮೂಲೆಗಳನ್ನು ಹಿಡಿದು ಗರಗರನೆ ಬೀಸಿ ಗುರಿಯತ್ತ ವಲ್ಲಿಯ ಎರಡು ಮೂಲೆಗಳನ್ನು ಬಿಟ್ಟನೆಂದರೆ ತೂರಿ ಹೋಗುತ್ತಿದ್ದ ಕಲ್ಲಿನ ಚೂರುಗಳು ಶತ್ರುಗಳಿಗೆ ಬಂದೂಕಿನ ಗುಂಡಿನಂತೆ ಚುಚ್ಚಿ ಗಂಭೀರ ಸ್ಥಿತಿ ತಂದೊಡ್ಡುತ್ತಿದ್ದವು.
"ಶಬ್ದವೇದಿ" ಶಬ್ದ ಇಲ್ಲಿ ಚರ್ಚಿತ ಸಂಗತಿ. "ಶಬ್ದವೇದಿ" ಎಂದರೆ ಅರಿಯುವ, ತಿಳಿಯುವ, ಬಲ್ಲವ, ವಿದ್ವಾಂಸ ಎಂದರ್ಥವಾಗುತ್ತದೆ.
ಇದೇ ಅಕ್ಷರದ ಇನ್ನೊಂದು ಪದ "ಶಬ್ದವೇಧಿ" ಎಂದರೆ ಗುರಿ ತಪ್ಪದೆ ಹೊಡೆಯುವ, ಗಾಯಗೊಳಿಸುವ, ಚುಚ್ಚುವ ಎಂದರ್ಥವಾಗುತ್ತದೆ.
ಇವೆರಡೂ ಹೆಚ್ಚುಕಡಿಮೆ ಹತ್ತಿರದ ಅರ್ಥ ನೀಡುವುದರಿಂದ ಇಂಥ ವಿಷಯ ಬಂದಾಗ "ಶಬ್ದವೇದಿ" ಪದವೇ ಸಾಮಾನ್ಯವಾಗಿ ಬಳಕೆಯಲ್ಲಿದೆ.
ವಡ್ಡರ ಯಲ್ಲಣ್ಣ ಭೂಮಿಗೆ ಕಿವಿಕೊಟ್ಟು ಶಬ್ದ ಆಲಿಸಿ ಅದರ ವಿಶ್ಲೇಷಣೆ ಮಾಡಿ ಸೇನಾ ಚಟುವಟಿಕೆಯ ಮಾಹಿತಿಯನ್ನು ನೀಡುತ್ತಿದ್ದ. ಆದರೆ ಶಬ್ದ ಬಂದ ದಿಕ್ಕೂ ಆಧರಿಸಿ ಶಸ್ತ್ರಾಸ್ತ್ರ ಪ್ರಯೋಗಿಸಿ ಬೇಟೆ ಅಥವಾ ಶತ್ರುಗಳ ನಾಶ ಮಾಡುತ್ತಿರಲಿಲ್ಲ. ಹೀಗಾಗಿ ಸದ್ಯ ನಮಗೆ ಲಭ್ಯವಿರುವ ಮಾಹಿತಿ, ಆಕರಗಳಿಗನುಗುಣವಾಗಿ
ಈತನಿಗೆ "ಶಬ್ದವೇದಿ" ಉಪಮೇಯವೇ ಸರಿ ಎನಿಸುತ್ತಿದೆ. ಇನ್ನಷ್ಟು ಆಳಕ್ಕೆ ಇಳಿದು ಇತಿಹಾಸದ ಸಾಕ್ಷ್ಯ, ದಾಖಲೆಗಳನ್ನು ಹೊರತೆಗೆದರೆ ಈ ಅಭಿಪ್ರಾಯದಲ್ಲಿ ಬದಲಾವಣೆ ಆದರೂ ಆಗಬಹುದು!
ನನಗೆ ತಿಳಿದಿರುವಂತೆ "ಶಬ್ದವೇಧಿ" ವಿದ್ಯೆ ಪೌರಾಣೇತಿಹಾಸ ಕಾಲದ ದಶರಥ ಮಹಾರಾಜ, ಅರ್ಜುನ ಮತ್ತು ಏಕಲವ್ಯನಿಗೆ ಇದು ಗೊತ್ತಿತ್ತು. ಇವರು ಧ್ವನಿ ಬಂದ ದಿಕ್ಕೂ ಆಧರಿಸಿ ತಮ್ಮ ಬಿಲ್ಲಿನಿಂದ ನಿರ್ದಿಷ್ಟ ಮತ್ತು ನಿಖರ ಗುರಿ ಸಾಧಿಸಿ ಬಾಣ ಪ್ರಯೋಗಿಸುವ ಮೂಲಕ ಬೇಟೆ ಅಥವಾ ಶತ್ರುವನ್ನು ಹೊಡೆ ದುರುಳಿಸುತ್ತಿದ್ದರು. ಇವರಿಗೆ ಬೇಟೆ ಅಥವಾ ಶತ್ರು ಕಣ್ಣೆದುರಿಗೆ ಇರಬೇಕೆಂದಿದ್ದಿಲ್ಲ.
"ಶಬ್ದ" ಇದರ ಅರ್ಥವನ್ನು ಧ್ವನಿ ಇಲ್ಲವೆ ನುಡಿ ಎನ್ನಬಹುದು. "ವೇದಿ" ಇದರ ಅರ್ಥ ವಿಷಯವಾಗಿ ತಿಳಿದಿರುವವನು ಇಲ್ಲವೆ ಯಾವುದೇ ವಿಷಯದ ಪಂಡಿತ ಎನ್ನಬಹುದು.
ಇದರ ಇನ್ನಷ್ಟು ಮಾಹಿತಿ, ವಿಸ್ತಾರತೆ ಬೇಕಿದ್ದರೆ ಭಾಷಾತಜ್ಞ, ವಿಷಯ ಪಂಡಿತ ಇಲ್ಲವೆ ಇತಿಹಾಸಜ್ಞರನ್ನು ಸಂಪರ್ಕ ಮಾಡಿರಿ.
ಇದರೊಂದಿಗೆ ಕೆಲವರು ತಪ್ಪಾಗಿ "ಶಬ್ದಭೇದಿ" ಪದ ಉಚ್ಛರಿಸಿದ್ದನ್ನು ಕೇಳಿರುವ ನೆನಪು. ಆದರೆ ಬರಹ ರೂಪದಲ್ಲಿ ಕಂಡಿಲ್ಲ. ಬಹುತೇಕ ಈ ಶಬ್ದ ಇರಲಿಕ್ಕಿಲ್ಲ!? ಭೇದಿಸುವುದು ಎಂದರೆ ರಹಸ್ಯ ಬಯಲು ಮಾಡುವುದು.
ಇದೇನೇ ಇದ್ದರೂ ಇವೆರಡೂ ವಿದ್ಯೆ ಬಲ್ಲವರಿಗೆ ಅತಿಸೂಕ್ಷ್ಮ ಶ್ರವಣೇಂದ್ರಿಯ ಇರುತ್ತದೆ. ಇವರು ಶಬ್ದ ಸೂಚನೆ ಗ್ರಹಿಸಿ ಅಸಾಧಾರಣ ಸಾಮರ್ಥ್ಯ ತೋರುತ್ತಾರೆ.

ಹೈಲೈಟ್: ವಡ್ಡರ ಯಲ್ಲಣ್ಣ, ಕಿತ್ತೂರು ರಾಣಿ ಚೆನ್ನಮ್ಮನ ಶೂರ ಬಂಟರಲ್ಲೊಬ್ಬ. ಈತನಿಗೆ "ಶಬ್ದವೇದಿ" ವಿದ್ಯೆ ಕರಗತವಿತ್ತು.
ಈ ವಿದ್ಯೆ ಪೌರಾಣೇತಿಹಾಸ ಕಾಲದ ದಶರಥ ಮಹಾರಾಜ, ಅರ್ಜುನ ಮತ್ತು ಏಕಲವ್ಯನಿಗೆ ಗೊತ್ತಿತ್ತು.

05/04/2025

ಅಮಟೂರು ಬಾಳಪ್ಪ ಕಿತ್ತೂರು ವಿಜಯದ ರೂವಾರಿ. ಸಂಗೊಳ್ಳಿ ರಾಯಣ್ಣನಂಥೆ ಶೂರ. ಬ್ರಿಟಿಷ ಕಲೆಕ್ಟರ ಥ್ಯಾಕರೆ ಎದೆ ಸೀಳಿದ ಧೀರ

ಅಮಟೂರು ಬಾಳಪ್ಪ ಕಿತ್ತೂರು ವಿಜಯದ ರೂವಾರಿ. ಸಂಗೊಳ್ಳಿ ರಾಯಣ್ಣನಂಥೆ ಶೂರ. ಬ್ರಿಟಿಷ ಕಲೆಕ್ಟರ ಥ್ಯಾಕರೆ ಎದೆ ಸೀಳಿದ ಧೀರ

* ಅಮಟೂರು ಬಾಳಪ್ಪ, ಕಿತ್ತೂರು ಕಂಡ ಶೂರರಲ್ಲೊಬ್ಬ. ರಾಣಿ ಚೆನ್ನಮ್ಮ ಮತ್ತು ಆಕೆಯ ಸಂಸ್ಥಾನದ ರಕ್ಷಣೆಯಲ್ಲಿ ಈತನು ತೋರಿದ ಶೌರ್ಯ, ಸಾಹಸ ಹಾಗೂ ನೀಡಿದ ಬಲಿದಾನ ಅಸೀಮವಾದದ್ದು. ದೊಡ್ಡದಕ್ಕಿಂತ ದೊಡ್ಡದು.
ಸಂಗೊಳ್ಳಿ ರಾಯಣ್ಣನಂಥೆ ಈತನೂ ದೇಶಭಕ್ತ, ರಾಣಿ ಚೆನ್ನಮ್ಮನ ಬಂಟ. ಈ ಶೂರರ ತಂಡ ಕಿತ್ತೂರು ಸಂಸ್ಥಾನದ ನಿಷ್ಠೆಯಲ್ಲಿ ಒಬ್ಬರಿಗಿಂತ ಒಬ್ಬರು ಹೆಚ್ಚುಗಾರಿಕೆ, ವಿಶ್ವಾಸ, ಒಗ್ಗಟ್ಟು ತೋರಿ ಜನರಲ್ಲಿ ಆತ್ಮವಿಶ್ವಾಸ, ದೇಶಪ್ರೇಮ ಇಮ್ಮಡಿಸುವಂತೆ ಮಾಡಿ ಬ್ರಿಟಿಷರ ಎದೆ ನಡುಗಿಸಿದ್ದರು.
ರಾಣಿ ಚೆನ್ನಮ್ಮನ ಅಂಗರಕ್ಷಕ ಪಡೆಯಲ್ಲಿದ್ದ ಅಮಟೂರು ಬಾಳಪ್ಪ, ಜೋಳ ಇಕ್ಕಿದ ಋಣದ ವಿಷಯದಲ್ಲಿ ಒಂದು ಹಂತದಲ್ಲಿ ಮಹಾಭಾರತದ ಕರ್ಣನ ಬದ್ಧತೆಯ ಹತ್ತಿರಕ್ಕೆ ಹೋಗಿ ನಿಲ್ಲುತ್ತಾನೆ.
"ದತ್ತು ಪುತ್ರ" ವಿಷಯ ನೆಪ ಮಾಡಿಕೊಂಡು ಸಂಸ್ಥಾನ ಕಬಳಿಸಲು ಸೇನಾ ಸಮೇತನಾಗಿ ಬಂದು ಕಿತ್ತೂರು ಕೋಟೆಯನ್ನು ಸುತ್ತುವರಿದ ಧಾರವಾಡದ ಕಲೆಕ್ಟರ್ ಥ್ಯಾಕರೆ, 1824, ಅಕ್ಟೋಬರ್ 23 ರಂದು ಯುದ್ಧ ಘೋಷಣೆ ಮಾಡಿ ಕುದುರೆ ಏರಿ ಕೋಟೆ ಬಾಗಿಲು ಕಡೆಗೆ ಮುನ್ನುಗ್ಗಿ ರಾಣಿ ಚೆನ್ನಮ್ಮನಿಗೆ ನೇರವಾಗಿ ಬಂದುಕಿನ ಗುರಿ ಇಟ್ಟಾಗ ಸಿಡಿದೆದ್ದ ಆಕೆಯ ಅಂಗರಕ್ಷಣೆಯಲ್ಲಿದ್ದ ಅಮಟೂರು ಬಾಳಪ್ಪ ತಡಮಾಡದೆ ತನ್ನ ಕೈಯಲ್ಲಿದ್ದ ಬಂದೂಕಿನಿಂದ ನಿಖರ ಗುರಿ ಹಿಡಿದು ಗುಂಡು ಹಾರಿಸಿ ಥ್ಯಾಕರೆಯನ್ನು ಹೊಡೆದುರುಳಿಸಿದ. ಥ್ಯಾಕರೆಯ ಹೆಣ ಕುದುರೆ ಮೇಲಿಂದ ನೆಲಕ್ಕುರುಳಿತು.
ಇದನ್ನು ಗಮನಿಸಿದ ಬ್ರಿಟಿಷ್ ಸೇನೆ ದಿಕ್ಕಾಪಾಲಾಗಿ ಓಡಿ ಹೋಯಿತು. ಕೋಟೆ ಒಳಗಿನಿಂದ ಹೊರ ನುಗ್ಗಿದ ಕಿತ್ತೂರು ಸೈನಿಕರು ಥ್ಯಾಕರೆ ಶವದ ಮೇಲೆ ಪ್ರಹಾರ ಮಾಡಿ ಸಿಟ್ಟು ತೀರಿಸಿಕೊಂಡರು. ಬ್ರಿಟಿಷರ ಅನೇಕ ಅಧಿಕಾರಿ ಮತ್ತು ಸೈನಿಕರನ್ನು ಬಂಧಿಸಿ ಯುದ್ಧದ ಗೆಲುವಿನ ವಿಜಯೋತ್ಸವ ಆಚರಿಸಿದರು.
ಈ ನಡುವೆ ಸಂಧಾನದ ನಾಟಕವಾಡಿದ ಬ್ರಿಟಿಷರು, ಎರಡನೇ ಯುದ್ಧದ ಪೂರ್ಣ ತಯಾರಿ ನಡೆಸಿದರು. ಸೊಲ್ಲಾಪುರ, ಪುಣೆ, ಮದ್ರಾಸ್ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಸೇನಾ ತುಕಡಿಗಳನ್ನು ಕರೆಯಿಸಿಕೊಂಡು ದೊಡ್ಡ ಸೇನೆ, ಮದ್ದು, ಗುಂಡು, ತೋಪುಗಳ ಸಂಗ್ರಹ ಮಾಡಿದರು. ಕಿತ್ತೂರಿಗೆ ಬ್ರಿಟಿಷ್ ವಿರೋಧಿ ಯಾವುದೇ ರಾಜರುಗಳಿಂದ ನೆರವು ಬಾರದಂತೆ ದೂರ ದೂರದಲ್ಲಿ ಸೇನಾ ಕಾವಲು ಹಾಕಿದರು.
ಕಿತ್ತೂರಿನ ಶೂರರೂ ಸುಮ್ಮನೇ ಕೂಡ್ರಲಿಲ್ಲ. ತಮಗೆ ಸಾಧ್ಯವಿರುವಷ್ಟು ಯುದ್ಧ ಸಿದ್ಧತೆ ಮಾಡಿಕೊಂಡರು. ಸಂಸ್ಥಾನದ ಜನರಿಂದ ನೆರವಿನ ಸಂಗ್ರಹ ಮಾಡಿದರು. ಜತೆಗೆ ರಾಜಕೀಯ ಸಂಧಾನವನ್ನೂ ಜಾರಿಯಲ್ಲಿಟ್ಟರು.
ಸೊಲ್ಲಾಪುರದಿಂದ ಸೇನಾ ಸಮೇತನಾಗಿ ಬಂದ ಕರ್ನಲ್ ಡೀಕನ್ ಎರಡನೇ ಯುದ್ಧದ ಸರ್ವಾಧಿಕಾರ ವಹಿಸಿಕೊಂಡ. ಪುಣೆಯಲ್ಲಿದ್ದುಕೊಂಡು ಬೆಳಗಾವಿ ಮತ್ತು ಧಾರವಾಡ ವಿಭಾಗಗಳ ಆಡಳಿತದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ದಕ್ಷಿಣ ವಿಭಾಗದ ಕಮಿಷನರ್ ಚಾಪ್ಲಿನ್ ಕೂಡ ಕಿತ್ತೂರಿಗೆ ಬಂದು ಬೀಡು ಬಿಟ್ಟ. ಥ್ಯಾಕರೆ ಹತನಾಗಿದ್ದರಿಂದ ಜಾನ್ ಮನ್ರೋ ಎನ್ನುವಾತ ಧಾರವಾಡದ ರಾಜಕೀಯ ಏಜಂಟ್ ಮತ್ತು ಕಲೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದ. ಈತನೂ ಇವರೊಂದಿಗೆ ಹಾಜರಿದ್ದ.
ಇಲ್ಲಿ ನಯವಂಚನೆ ಮಾಡಿದ ಬ್ರಿಟಿಷರು ಮೊದಲ ಯುದ್ಧದಲ್ಲಿ ಬಂದಿಯಾಗಿದ್ದ ತಮ್ಮ ಅಧಿಕಾರಿ ಮತ್ತು ಸೈನಿಕರನ್ನು ಬಿಡುಗಡೆ ಮಾಡಿಸಿಕೊಂಡರು. ನಂಬಿದ ರಾಣಿ ಚೆನ್ನಮ್ಮ 1824 ಡಿಸೆಂಬರ್ 2 ರಂದು ಬಂದಿಗಳನ್ನು ಬಿಡುಗಡೆ ಮಾಡಿದಳು. ಇಲ್ಲಿಂದ ಬ್ರಿಟಿಷರ ಬಣ್ಣ ಬಯಲಾಯಿತು. ತಿರುಗಿ ಬಿದ್ದು ಯುದ್ಧ ಘೋಷಿಸಿದರು.
ಕಮಿಷನರ್ ಚಾಪ್ಲಿನ್ ಬ್ರಿಟಿಷ್ ಸೇನಾ ಮುಖಂಡತ್ವ ವಹಿಸಿಕೊಂಡಿದ್ದ ಡೀಕನ್ನನಿಗೆ ಡಿಸೆಂಬರ್ 3 ರಂದು ಕೋಟೆ ಮೇಲೆ ದಾಳಿ ಮಾಡಲು ಆಜ್ಞೆ ಇತ್ತನು. ಮುಂದಿನ 24 ತಾಸುಗಳಲ್ಲಿ ಕಿತ್ತೂರು ಸಂಸ್ಥಾನದ ವೈಭವ ಇತಿಹಾಸವಾಯಿತು. ಕಿತ್ತೂರಿನ ಜನ ಶೌರ್ಯದಿಂದ ಹೋರಾಡಿದರು. ಆದರೆ ಕಿತ್ತೂರು ಸೇನೆಯೊಳಗಡೆಯೇ ಇದ್ದ ವಂಚಕರ ಕಾರಣಕ್ಕೆ ವಿಜಯ ಅವರಿಗೆ ದಕ್ಕಲಿಲ್ಲ.
ಕಮಿಷನರ್ ಚಾಪ್ಲಿನ್ ಯುದ್ಧದಲ್ಲಿ ನೇರವಾಗಿ ರಾಣಿ ಚೆನ್ನಮ್ಮನಿಗೆ ಬಂದೂಕಿನ ಗುರಿ ಇಟ್ಟಿರುವುದನ್ನು ಗಮನಿಸಿದ ಅಮಟೂರು ಬಾಳಪ್ಪ ಪುನಃ ಆತನಿಗೆ ಬಂದೂಕಿನ ಗುರಿ ಹೊಡೆಯಲು ಸಮಯ ಇಲ್ಲದ್ದರಿಂದ ಕೂಡಲೇ ತನ್ನ ದೇಹವನ್ನು ರಾಣಿಯ ರಕ್ಷಣೆಗೆ ವಾಲಿಸಿ ತಂದ. ಚಾಪ್ಲಿನ್ ಬಂದೂಕಿನಿಂದ ಸಿಡಿದ ವಿಷ ತುಂಬಿದ ಗುಂಡು ನೇರವಾಗಿ ಎದೆ ಹೊಕ್ಕಿದ್ದರಿಂದ ಅಮಟೂರು ಬಾಳಪ್ಪ ಹುತಾತ್ಮನಾಗಿ ಇತಿಹಾಸದಲ್ಲಿ ಅಮರನಾದ.
ಈತನ ವೀರೋಚಿತ ಇತಿಹಾಸದ ಹೆಚ್ಚಿನ ಮಾಹಿತಿಯನ್ನು ನಿಮ್ಮೆದುರಿಗಿರುವ ವೀಡಿಯೋದಲ್ಲಿ ನೋಡಿಕೊಳ್ಳಿರಿ. ಇತಿಹಾಸಜ್ಞ ಯ.ರು. ಪಾಟೀಲರು ರೋಚಕ ವಿವರಣೆ ನೀಡಿದ್ದಾರೆ.

20/03/2025

ಸುಳೇಭಾವಿ ಮಹಾಲಕ್ಷ್ಮೀದೇವಿಯ ಹೊನ್ನಾಟ. ಹೊನಲು ಬೆಳಕಿನಲ್ಲಿ ಅದರ ಭವ್ಯತೆಯನ್ನು ಕಣ್ತುಂಬಿಕೊಂಡ ಭಾವಪರವಶತೆಯ ಭಕ್ತರು.

ಸುಳೇಭಾವಿ ಮಹಾಲಕ್ಷ್ಮೀದೇವಿಯ ಹೊನ್ನಾಟ. ಹೊನಲು ಬೆಳಕಿನಲ್ಲಿ ಅದರ ಭವ್ಯತೆಯನ್ನು ಕಣ್ತುಂಬಿಕೊಂಡ ಭಾವಪರವಶತೆಯ ಭಕ್ತರು.

* ಸುಳೇಭಾವಿ ಮಹಾಲಕ್ಷ್ಮೀದೇವಿಯ ಹೊನ್ನಾಟ ಹಗಲು-ರಾತ್ರಿ ವೈಭವದಿಂದ ನಡೆದು ನೆರೆದ ಭಾವುಕ ಭಕ್ತರಿಗೆ ಅಲೌಕಿಕ ಆನಂದ ನೀಡಿತು.
ಶ್ರೀದೇವಿಯ ಜಾತ್ರೆ ಪ್ರತಿ ಐದು ವರ್ಷಗಳಿಗೊಮ್ಮೆ ಒಂಭತ್ತು ದಿನಗಳಕಾಲ ಜರುಗುತ್ತದೆ. 2025ನೇ ಸಾಲಿನ ಜಾತ್ರೆ ಮಾರ್ಚ್ 18 ರಿಂದ 26 ರವರೆಗೆ ನಿಗದಿಗೊಂಡಿತ್ತು. 18 ರಂದು ಬೆಳಗಿನಜಾವ 2 ಗಂಟೆ ಸುಮಾರಿಗೆ ದೇವಿಗೆ ಉಡಿ ತುಂಬುವುದರೊಂದಿಗೆ ಹೊನ್ನಾಟಕ್ಕೆ ಚಾಲನೆ ನೀಡಲಾಯಿತು. ಇದು ಗ್ರಾಮದ ಲಕ್ಷ್ಮೀ ಗಲ್ಲಿಯಲ್ಲಿರುವ ಬಡಿಗೇರ ಮನೆಯಿಂದ ಹೊರಟಿತು.
ಹೊನ್ನಾಟ ಮಾರ್ಚ 19ರ ರಾತ್ರಿ 8 ಗಂಟೆವರೆಗೆ ನಿರಂತರವಾಗಿ ನಡೆಯಿತು.
ಹೊನಲುಬೆಳಕಿನಲ್ಲಿ ಜರುಗಿದ ಶ್ರೀದೇವಿಯ ಈ ಸಾರ್ವಜನಿಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ, ಮಹಾರಾಷ್ಟ್ರ ಪ್ರದೇಶದ ಸಹಸ್ರಾರು ಭಕ್ತರು, ಭಾವಪರವಶತೆಯಿಂದ ವೀಕ್ಷಣೆ ಮಾಡಿ, ಜೈಕಾರ ಹಾಕುವ ಮೂಲಕ ಭಕ್ತಿಯ ಸಮರ್ಪಣೆ ಮಾಡಿದರು. ಮೆರವಣಿಗೆ ಗ್ರಾಮದ ಪ್ರತಿ ಗಲ್ಲಿಯಲ್ಲೂ ಸಂಚರಿಸಿ ಜನರಲ್ಲಿ ಆಧ್ಯಾತ್ಮದ ಜಾಗೃತಿ ಮಾಡಿತು. ದೇವಿ ಜನರ ಭಕ್ತಿ, ಪೂಜೆ, ನೈವೇದ್ಯಗಳ ಸ್ವೀಕಾರ ಮಾಡಿದಳು. ಈ ಬಾರಿಯದ್ದು ನಡುಮನೆ ಜಾತ್ರೆ ಆಗಿರುವುದರಿಂದ ಹೊನ್ನಾಟದ ನಂತರ ದೇವಾಲಯದ ಆವರಣದಲ್ಲಿ ಶ್ರೀದೇವಿಯ‌ ಮೂರ್ತಿಯ ಪ್ರತಿಷ್ಟಾಪನೆ ಮಾಡಲಾಯಿತು.
ಮಾರ್ಚ 26 ರಂದು ರಾತ್ರಿ 10 ಕ್ಕೆ ಧಾರ್ಮಿಕ ವಿಧಿಗಳೊಂದಿಗೆ ಜಾತ್ರೆ ಮುಕ್ತಾಯಗೊಂಡಿತು

(ನಿಮ್ಮೆದುರಿಗಿರುವ ವೀಡಿಯೋದಲ್ಲಿ ಶ್ರೀದೇವಿಯ ಹೊನ್ನಾಟದ ವೈಭವ ಮತ್ತು ದೇವಾಲಯ ಪರಿಸರದ ಅಲಂಕಾರವನ್ನು ಕಾಣಬಹುದು.)

Address

Belgavi
Belgaum
590010

Telephone

+919343381784

Website

Alerts

Be the first to know and let us send you an email when Nera Hodeta posts news and promotions. Your email address will not be used for any other purpose, and you can unsubscribe at any time.

Contact The Business

Send a message to Nera Hodeta:

Share