Nera Hodeta

Nera Hodeta Jana-Manada Oladhwani

13/09/2025

ಚಿಂಚಲಿ ಮಾಯಕ್ಕ ಉತ್ತರ ಕರ್ನಾಟಕ ಪಶ್ಚಿಮ ಮಹಾರಾಷ್ಟ್ರದ ಚಾಮುಂಡಿ ಮಹಿಷಾಸುರ ಮರ್ದಿನಿ ಶಿಷ್ಟ ರಕ್ಷಕಿ ದುಷ್ಟ ಸಂಹಾರಿಣಿ

ಚಿಂಚಲಿ ಮಾಯಕ್ಕ ಉತ್ತರ ಕರ್ನಾಟಕ ಪಶ್ಚಿಮ ಮಹಾರಾಷ್ಟ್ರದ ಚಾಮುಂಡಿ ಮಹಿಷಾಸುರ ಮರ್ದಿನಿ ಶಿಷ್ಟ ರಕ್ಷಕಿ ದುಷ್ಟ ಸಂಹಾರಿಣಿ

* ನಮಸ್ಕಾರ ವೀಕ್ಷಕರೆ
ನಾನು ರಾಜು ಉಸ್ತಾದ್
"ನೆರ ಹೊಡೆತ" ಹೆಸರಿನ ಸಮೂಹ ಜಾಲತಾಣಕ್ಕೆ ನಿಮಗೆ ಸ್ವಾಗತ..

ನಾನೀಗ ಶಕ್ತಿ ದೇವತೆಗಳ ಬಗ್ಗೆ ಮಾತನಾಡುತ್ತಿದ್ದೇನೆ...

'ಚಿಂಚಲಿ ಮಾಯಕ್ಕ' ದುರುಳರಿಗೆ ದುಸ್ವಪ್ನ. ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದವರಿಗೆ ಚಾಮುಂಡಿ, ಮಹಿಷಾಸುರ ಮರ್ದಿನಿ.
ಇತರೆ ಶಕ್ತಿ ದೇವತೆಗಳಂತೆ ಈಕೆಯೂ ಶಿಷ್ಟ ರಕ್ಷಕಿ ದುಷ್ಟ ಸಂಹಾರಕಿ. ಸುಜನರಿಗೆ ಅಭಯ ನೀಡುತ್ತಿದ್ದ ಮಾಯಕ್ಕ ಇವರಿಗೆ ಕಂಟಕರಾದ ಕುಜನರನ್ನು ಸದೆಬಡಿಯುತ್ತಿದ್ದಳು.
ಇದೇ ಕಾರ್ಯದಲ್ಲಿ ಶಸ್ತ್ರ ಸಜ್ಜಿತ ಯೋಧೆ ಹಾಗೂ ಶ್ವೇತಾಶ್ವರೂಢಳಾಗಿ ಕಿಲ್ ಮತ್ತು ಕಟ್ಟ ಎನ್ನುವ ಹೆಸರಿನ ಇಬ್ಬರು ರಾಕ್ಷಸರನ್ನು ಬೆನ್ನಟ್ಟಿಕೊಂಡು ಈಗಿನ ಮಹಾರಾಷ್ಟ್ರದ ಕೊಂಕಣದ ಕಡೆಯಿಂದ ಈಗಿನ ಕರ್ನಾಟಕದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪ್ರದೇಶಕ್ಕೆ ಬಂದವಳು. ಇಲ್ಲಿ ಆ ಕಾರ್ಯ ಪೂರ್ಣಗೊಳಿಸಿ ಶಾಂತವಾದವಳು. ಈ ಕೆಲಸಕ್ಕೆ ಇಲ್ಲಿನ ವೀರರು ಶ್ರೀದೇವಿಗೆ ನೆರವಾದರು ಎನ್ನುವ ಪ್ರತೀತಿಯೂ ಇದೆ.
ರಾಕ್ಷಸ ಸಂಹಾರದ ನಂತರ ಮಾಯಕ್ಕ ತನ್ನ ಮೂಲಸ್ಥಾನವಾದ ಕೊಂಕಣದ ಕಡೆಗೆ ಹೋಗಲಿಲ್ಲ. ಇಲ್ಲಿಯೇ ನೆಲೆಸಲು ಮನಸ್ಸು ಮಾಡಿದಳು. ಅದಕ್ಕಾಗಿ ಸೂಕ್ತ ಸ್ಥಳದ ಅನ್ವೇಷಣೆ ಮಾಡಿದಳು. ಚಿಂಚಲಿ ಕೇಂದ್ರಿತ ಸುತ್ತಲಿನ ಹಳ್ಳಿಗಳಲ್ಲಿ ಸಂಚರಿಸಿದಳು. ಕೊನೆಗೆ ಚಿಂಚಲಿಯನ್ನೇ ಆಯ್ದುಕೊಂಡಳು.
ಆದರೆ ಇಲ್ಲಿ ಒಂದು ಸಮಸ್ಯೆ ಇತ್ತು. ಚಿಂಚಲಿಯಲ್ಲಿ ಆಗಲೇ ಹಿರಿದೇವಿಯ ದೇವಸ್ಥಾನ ಇತ್ತು. ಅದು ಮಣ್ಣಿನ ಗುಡ್ಡದ ತ್ಯಾಜ್ಯದಲ್ಲಿ ಕಳೆದು ಹೋದ ಸ್ಥಿತಿಯಲ್ಲಿತ್ತು. ಇದನ್ನೆಲ್ಲ ಗಮನಿಸಿದ ಮಾಯಕ್ಕ ಹಿರಿದೇವಿಯ ಬಳಿಗೆ ಹೋಗಿ ತನಗೆ ಆಶ್ರಯ ಸ್ಥಾನ ನೀಡಬೇಕೆಂದು ಕೇಳಿಕೊಂಡಳು.
ಈ ಕೋರಿಕೆ ಮನ್ನಿಸಿದ ಹಿರಿದೇವಿ ಕೆಲವು ಷರತ್ತುಗಳನ್ನು ಹಾಕಿದಳು. ಮೊದಲ ಗೌರವ, ಮೊದಲ ದರ್ಶನ ಮತ್ತು ಮೊದಲ ನೈವೇದ್ಯ ತನಗೆ ಸಲ್ಲಬೇಕೆಂದು ತಿಳಿಸಿದಳು. ಮಾಯಕ್ಕ ಇದಕ್ಕೊಪ್ಪಿಕೊಂಡು ಅಲ್ಲಿಯೇ ನೆಲೆಸಿದಳು. ಇಬ್ಬರು ದೇವಿಯರು ಒಂದೇ ಸ್ಥಳದಲ್ಲಿ ಒಂದೇ ಗುಡಿ ಪರಿಸರದಲ್ಲಿ ಪ್ರತ್ಯೇಕ ದಿಕ್ಕಿನಲ್ಲಿ ನೆಲೆಸಿರುವುದು ವಿಶೇಷವಾಗಿದೆ.
ಹಿರಿದೇವಿ ವಿಧಿಸಿದ್ದ ಷರತ್ತುಗಳು ಇಂದಿಗೂ ರೂಢಿ, ಆಚರಣೆಯಲ್ಲಿವೆ. ಭಕ್ತರು ಇದನ್ನು ಅನುಸರಿಸುತ್ತಾರೆ. ಹಿರಿದೇವಿ ಈಗಲೂ ಗ್ರಾಮ ದೇವತೆಯಾಗಿದ್ದಾಳೆ. ಆ ಗೌರವ ಆಕೆಗೆ ಸಿಕ್ಕುತ್ತದೆ. ಮಾಯಕ್ಕ ಗ್ರಾಮ ವ್ಯಾಪ್ತಿ ಮೀರಿ ಭಕ್ತರ ಬಳಗ ಹೊಂದಿದ್ದಾಳೆ.
ಇದು ಒಂದು ರೀತಿಯಲ್ಲಿ ಶ್ರೀ ಗುರು ರಾಘವೇಂದ್ರ ರಾಯರ ಮಂತ್ರಾಲಯ ನಿರ್ಮಾಣವಾಗುವ ಪೂರ್ವದ ಸನ್ನಿವೇಶದ ನೆನಪು ಮಾಡುತ್ತದೆ.
ಅದೋನಿಯ ನವಾಬ ಸಿದ್ಧಿ ಮಸೂದ್ ಖಾನ್ ನಿಂದ ದಾನವಾಗಿ ಪಡೆದ ತುಂಗಭದ್ರಾ ನದಿ ತಟದ ಮಂಚಲೆ ಗ್ರಾಮ ಪ್ರದೇಶದಲ್ಲಿ ಶಿಷ್ಯರೊಂದಿಗೆ ನೆಲೆಸಲು ಶ್ರೀ ರಾಘವೇಂದ್ರ ರಾಯರು ಹೊರಟಾಗ, ಅಲ್ಲಿನ ಗ್ರಾಮ ಹಾಗೂ ಅಧಿದೇವತೆ ಮಂಚಾಲಮ್ಮ ತಡೆಯೊಡ್ಡುತ್ತಾಳೆ. ಅದು ತನ್ನ ಕ್ಷೇತ್ರ ವ್ಯಾಪ್ತಿಯಂದು ಹೇಳುತ್ತಾಳೆ. ಆಗ ರಾಘವೇಂದ್ರ ರಾಯರು ಶ್ರೀಹರಿ ದೇವರು ತಮ್ಮನ್ನು ಕಳುಹಿಸಿ ಕೊಟ್ಟಿದ್ದು ಇಲ್ಲಿ ನೆಲೆಸಲು ತಿಳಿಸಿರುವುದಾಗಿ ಆಕೆಗೆ ಹೇಳುತ್ತಾರೆ.
ರಾಯರ ಮಾತನ್ನು ಆಲಿಸಿದ ಮಂಚಾಲಮ್ಮ ಅದನ್ನು ಮನ್ನಿಸಿ ಚಿಂಚಲಿಯ ಗ್ರಾಮ ದೇವಿಯಂತೆ ಆಕೆಯೂ ಭಕ್ತರು ಮೊದಲು ತನ್ನ ದರ್ಶನ ಮಾಡಬೇಕು ಎನ್ನುವುದರ ಜತೆಗೆ ಇತರೆ ಗೌರವಗಳು ಮೊದಲು ತನಗೆ ಸಲ್ಲಬೇಕೆನ್ನುವ ಷರತ್ತು ವಿಧಿಸುತ್ತಾಳೆ. ರಾಯರು ಇದಕ್ಕೆ ಒಪ್ಪಿಕೊಂಡು ಅಲ್ಲಿ ನೆಲೆಸಿದ್ದಾರೆ. ಮಂಚಾಲೆ ಗ್ರಾಮದ ಹೊರ ಜಗತ್ತಿನಲ್ಲೂ ದೊಡ್ಡ ಪ್ರಮಾಣದಲ್ಲಿ ಭಕ್ತ ಸಮೂಹವನ್ನು ಹೊಂದಿದ್ದಾರೆ. ಈಗದು ಶ್ರೀ ಕ್ಷೇತ್ರ ಮಂತ್ರಾಲಯವಾಗಿ ಬೆಳೆದು ನಿಂತಿದೆ. ಹರಿ ಭಕ್ತಿಗೆ ಹೆಸರಾದ ಪ್ರಹ್ಲಾದರಾಜರು ಈ ಸ್ಥಳದಲ್ಲಿ ಬಹುದೊಡ್ಡ ಯಜ್ಞ ಮಾಡಿದ್ದರು. ಪೌರಾಣೇತಿಹಾಸ ಕಾಲದ ಮಹತ್ವದ ಅನೇಕ ಘಟನಾವಳಿಗಳು ಇಲ್ಲಿ ನಡೆದಿದ್ದವು. ಹೀಗಾಗಿ ಆ ಸ್ಥಳ ಪವಿತ್ರ ಮತ್ತು ಮಹತ್ವದ್ದೆಂದು ರಾಯರಿಗೆ ಗೊತ್ತಿತ್ತು. ನೆಲೆ ನಿಲ್ಲಲು ಅದರ ಆಯ್ಕೆ ಮಾಡಿದ್ದರು.
ಇದೇನೇ ಇರಲಿ ಈಗ ಮತ್ತೆ ನಾವು ಚಿಂಚಲಿ ಮಾಯಕ್ಕನ ಬಳಿಗೆ ಬರೋಣ. ಈಕೆ ಪೌರಾಣೇತಿಹಾಸ ಕಾಲದ ಯಾವ ಶಕ್ತಿ ದೇವತೆಯ ಅವತಾರ ಎನ್ನುವ ಬಗ್ಗೆ ಶಾಸ್ತ್ರೀಯವಾಗಿ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಕಥೆ, ದಂತಕಥೆಗಳು ಇವೆ. ಭಕ್ತರು ಈಕೆಯಲ್ಲಿ ಆದಿಶಕ್ತಿ, ಪರಾಶಕ್ತಿ, ಕಾಳಿ, ಮಹಾಕಾಳಿ, ಮಾಯವ್ವನ ಅವತಾರಗಳನ್ನು ಕಾಣುತ್ತಾರೆ. ಕೆಲ ಕಥೆಗಳು ಆಕೆ ರಾಕ್ಷಸರ ಸಂಹಾರಕ್ಕೆ ಅರ್ಧನಾರೀಶ್ವ ರೂಪದಲ್ಲಿ ಧರೆಗಿಳಿದಳು ಎನ್ನುತ್ತವೆ.
ಇಲ್ಲಿರುವ ಇಬ್ಬರು ದೇವತೆಯರಿಗಾಗಿ ಭಕ್ತರು ಕಾಲಾಂತರದಲ್ಲಿ ಆಕರ್ಷಕವಾದ ದೇವಾಲಯದ ನಿರ್ಮಾಣ ಮಾಡಿದ್ದಾರೆ. ಟ್ರಸ್ಟ್ ರಚನೆ ಮಾಡಿ ಅಭಿವೃದ್ಧಿ ನಡೆಸಿದ್ದಾರೆ. ನಂಬಿಕೆಯ ಪ್ರಕಾರ ಈಕೆಯ ಮೂಲ ಕೊಂಕಣವಾಗಿರುವುದರಿಂದ ಅಲ್ಲಿಂದಲೂ ಭಕ್ತರ ದಂಡು ದೊಡ್ಡ ಪ್ರಮಾಣದಲ್ಲಿ ಬಂದು ಹೋಗುತ್ತದೆ.
ದೇವಸ್ಥಾನ ಕರ್ನಾಟಕದಲ್ಲಿ ಇರುವುದರಿಂದ ಉತ್ತರ ಕರ್ನಾಟಕದ ಜನ ಸವದತ್ತಿ ಯಲ್ಲಮ್ಮನ ಗುಡ್ಡದಂತೆ ಇಲ್ಲಿಗೂ ಭಾವುಕ ಭಕ್ತಿಯಲ್ಲಿ ಬಂದು ಹೋಗುತ್ತಾರೆ.
ವಿಠ್ಠಲನ ಮೂಲ ಕರ್ನಾಟಕದ ನೆಲವಾದರೂ ಆತ ಹೋಗಿ ಮಹಾರಾಷ್ಟ್ರದ ಭೀಮಾನದಿ ತಟದ ಪಂಢರಪುರದಲ್ಲಿ ನೆಲೆಸಿದ್ದಾನೆ. ಹಾಗೆಯೇ ಮಾಯಕ್ಕ ಮಹಾರಾಷ್ಟ್ರದ ನೆಲದವಳಾದರೂ ಕರ್ನಾಟಕಕ್ಕೆ ಬಂದು ನೆಲೆಸಿದ್ದಾಳೆ. ಎಲ್ಲ ಧರ್ಮೀಯರಿಗೂ ಸಲ್ಲಿದ್ದಾಳೆ.
ಸೀಮೆ ಎಂಬುದು ನಮ್ಮ ಅರಿವಿನ ಸೀಮಿತತೆ ಅಥವಾ ಪರಿಧಿ ಮಾತ್ರ. ಆದರೆ ದೇವರಿಗೆ ಇದ್ಯಾವುದೂ ಇಲ್ಲ. ಅವರಿಗೆ ಎಲ್ಲವೂ ಒಂದೇ. ಎಲ್ಲವೂ ಅವರದ್ದೆ.
ಮಾಯಕ್ಕನ ದೇವಾಲಯ ಕೃಷ್ಣಾ ನದಿಗೆ ಕೇವಲ 2.5 ಕಿ.ಮಿ. ದೂರದಲ್ಲಿದೆ. ದಂತಕಥೆಗಳಲ್ಲಿ ಈ ದೇವಿಯ ಕೃಪೆ ಪಡೆದಿರುವ ಹಾಲಹಳ್ಳ 1 ಕಿ.ಮಿ. ಅಂತರದಲ್ಲಿದೆ. ಸವದತ್ತಿಯ ಯಲ್ಲಮ್ಮನ ದರ್ಶನಕ್ಕೆ ಎಣ್ಣೆ ಹೊಂಡ ಇಲ್ಲವೆ ಸಮೀಪದ ಮಲಪ್ರಭಾ ನದಿಯಲ್ಲಿ ಮಿಂದು ಹೊದಂತೆ ಮಾಯಕ್ಕನ ದರ್ಶನಕ್ಕೆ ಭಕ್ತರು ಹಾಲಹಳ್ಳದಲ್ಲಿ ಸ್ನಾನಮಾಡಿ ಹೋಗುತ್ತಾರೆ.
ಯಾವುದೇ ಆಕರಗಳನ್ನು ಮುಂದಿಟ್ಟುಕೊಂಡರೂ ಮಾಯಕ್ಕನ ಮೂಲದ ಸ್ಪಷ್ಟತೆ ಪಡೆಯುವುದು ಕಷ್ಟದ ಕೆಲಸ. ಶಕ್ತಿ ದೇವತೆಗಳ ಆರಾಧನೆಯಲ್ಲಿ ಸಾಮಾನ್ಯವಾಗಿ ಅನುಸರಿಸಲಾಗುವ ವಿಧಿವಿಧಾನಗಳನ್ನು ಅವಲೋಕಿಸಿದರೆ, ಮಾಯಕ್ಕನ ವಿಧಿವಿಧಾನಗಳಲ್ಲಿ ಕೆಲವಷ್ಟು ವ್ಯತ್ಯಾಸಗಳು ಕಂಡು ಬರುತ್ತವೆ.
ಇತರೆ ಶಕ್ತಿ ದೇವತೆಗಳ ಹೆಸರಲ್ಲಿ ವ್ರತಾಚರಣೆಗಳು ಹೆಚ್ಚಾಗಿ ಶುಕ್ರವಾರ ಮತ್ತು ಮಂಗಳವಾರಗಳಂದು ಜರುಗುತ್ತವೆ. ಆದರೆ ಮಾಯಕ್ಕನ ಹೆಸರಲ್ಲಿ ವ್ರತ ಮತ್ತು ಉಪವಾಸಗಳು ಭಾನುವಾದಂದು ನಡೆಯುತ್ತವೆ. ಇದು ಆಕೆಗೆ ಪ್ರಿಯವಾದ ದಿನವಾಗಿದೆ.
ಇತರೆ ಶಕ್ತಿ ದೇವತೆಗಳು ಹುಲಿ, ಸಿಂಹಾರೂಢಿಣಿಯರಾಗಿದ್ದರೆ ಮಾಯಕ್ಕ ಶ್ವೇತಾಶ್ವರೂಢಿಣಿಯಾಗಿದ್ದು ಅದು ಆಕೆಯ ಪ್ರೀತಿಯ ವಾಹನವಾಗಿದೆ. ಹೀಗಾಗಿ ಅದು ಭಕ್ತರಿಗೂ ಪೂಜ್ಯವಾಗಿದೆ.
ಭಾರತ ಹುಣ್ಣಿಮೆಯ ದಿನ ಜಾತ್ರೆ ನಡೆಯುತ್ತದೆ. ದಕ್ಷಿಣ ಭಾರತದ ಬಹುತೇಕ ರಾಜ್ಯಗಳಿಂದ ಭಕ್ತರು ಸೇರುತ್ತಾರೆ. ಕಾರಹುಣ್ಣಿಮೆ ಮತ್ತು ನೂಲಹುಣ್ಣಿಮೆಗಳು ಈ ದೇವಿಗೆ ಪ್ರಿಯವಾಗಿವೆ. ನವರಾತ್ರಿ ಉತ್ಸವವೂ ಸಂಭ್ರಮದಲ್ಲಿ ನಡೆಯುತ್ತದೆ. ನವದುರ್ಗೆಯರ ಶೃಂಗಾರ ಮನ ಸೆಳೆಯುತ್ತದೆ.
ಮಾಯಕ್ಕನ ಚಿಂಚಲಿ ಜಿಲ್ಲಾ ಕೇಂದ್ರ ಬೆಳಗಾವಿಗೆ ಕೇವಲ 110 ಕಿ.ಮಿ. ದೂರದಲ್ಲಿದೆ. ಇಲ್ಲಿಂದ ರಾಯಬಾಗ ಪಟ್ಟಣ 100 ಕಿ.ಮಿ. ಅಲ್ಲಿಂದ ಚಿಂಚಲಿ ಬರೀ 10 ಕಿ.ಮಿ. ಮಾತ್ರ. ಜಾಗೃತ ಸ್ಥಳವಾಗಿರುವುದರಿಂದ ಭಕ್ತರ ಸಂಖ್ಯೆ ದೇವಾಲಯದ ಆವರಣದಲ್ಲಿ ನಿತ್ಯ ಇದ್ದೇ ಇರುತ್ತದೆ.
ಪ್ರಯಾಣಕ್ಕೆ ರೈಲು, ಬಸ್ ಸೇರಿದಂತೆ ಇತರೆ ಸಾರಿಗೆ ಅನುಕೂಲ, ಹೋಟೆಲ್ ಮತ್ತು ವಸತಿ ಗೃಹಗಳ ವ್ಯವಸ್ಥೆ ಇದೆ. ಶ್ರೀ ದೇವಿಯ ದರ್ಶನಾಕಾಂಕ್ಷಿಗಳು ಆರಾಮವಾಗಿ ಹೋಗಿ ಬರಬಹುದು.
ನಮಸ್ಕಾರ...
ಈ ವೀಡಿಯೋ 2023ನೇ ಸಾಲಿನ ದಸರಾ ಹಬ್ಬದ ಸಂದರ್ಭದ್ದಾಗಿದೆ.

08/09/2025

ಗಣೇಶೋತ್ಸವ ಬೆಳಗಾವಿ. ಅನಂತ ಚತುರ್ದಶಿಯ ಭವ್ಯ ಮೆರವಣಿಗೆ. ಸಾರ್ವಜನಿಕ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ.

ಗಣೇಶೋತ್ಸವ ಬೆಳಗಾವಿ. ಅನಂತ ಚತುರ್ದಶಿಯ ಭವ್ಯ ಮೆರವಣಿಗೆ. ಸಾರ್ವಜನಿಕ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ.

* 2025ನೇ ಸಾಲಿನ ಶ್ರೀ ಗಣೇಶೋತ್ಸವ ಭರ್ಜರಿಯಾಗಿ ಜರುಗಿತು. ಮಳೆಗಾಲ ಈ ವರ್ಷ ಸಮೃದ್ಧವಾಗಿತ್ತು. ಅದು ಗಣೇಶ ಚೌತಿಗೂ ಮುಂದುವರೆದಿದ್ದರಿಂದ ಹಬ್ಬದ ಸಡಗರ ಮನೆಗೆ ಸೀಮಿತವಾಗಿ ಸಾರ್ವಜನಿಕ ಶ್ರೀ ಗಣೇಶ ಪ್ರತಿಮೆಗಳ ವೀಕ್ಷಣೆಗೆ ಹೆಚ್ಚಿನ ಅನುವು ಆಗಲಿಲ್ಲ. ಆದರೆ ಗಣೇಶ ಮೂರ್ತಿಗಳ ವಿಸರ್ಜನೆಗೂ ಮುನ್ನಾದಿನದಿಂದ ಮಳೆ ಪೂರ್ಣ ಹೊರಪು ನೀಡಿದ್ದರಿಂದ ಸಾರ್ವಜನಿಕ ಶ್ರೀ ಗಣೇಶ ಪ್ರತಿಮೆಗಳ ಎದುರು ಜನರ ನೆರೆ ಬಂದಂತಾಯಿತು. ವೀಕ್ಷಣೆಯ ಕುತೂಹಲ ಇಟ್ಟುಕೊಂಡು ಮನೆಯಲ್ಲಿ ಕುಳಿತಿದ್ದ ಜನ ಮಳೆ ಅವಕಾಶ ಕೊಟ್ಟಿದ್ದರಿಂದ ಒಮ್ಮೆಲೇ ಗಣೇಶ ಪ್ರತಿಮೆಗಳ ಎದುರು ಪ್ರತ್ಯಕ್ಷವಾದರು. ಸಂಜೆ 4 ಗಂಟೆಯಿಂದ ಬೆಳಗಿನ ಜಾವ 2 ಗಂಟೆವರೆಗೂ ವೀಕ್ಷಿಸಿ ಮನ ತಣಿಸಿಕೊಂಡು ಶ್ರೀ ಗಣೇಶನಿಗೆ ಭಕ್ತಿಯ ಸಮರ್ಪಣೆ ಮಾಡಿದರು. ಮೂರ್ತಿಗಳ ವಿಸರ್ಜನೆ ದಿನವಂತೂ ಹಬ್ಬದ ಉತ್ಸಾಹ ಪರಾಕಾಷ್ಠೆ ತಲುಪಿತ್ತು. ಬೆಳಗಾವಿಗರೊಂದಿಗೆ ಹೊರಗಿನವರೂ ವಾಹನಗಳನ್ನು ಮಾಡಿಕೊಂಡು ಕುಟುಂಬ ಸಮೇತವಾಗಿ ಬಂದು ಮೂರ್ತಿಗಳ ವಿಸರ್ಜನಾ ಮೆರವಣಿಗೆಯ ವೀಕ್ಷಣೆಯ ಸಾಲಿನಲ್ಲಿ ನಿಂತದ್ದರಿಂದ ಎಲ್ಲ ಕಡೆಗೂ ಜನವೋ ಜನ ಕಾಣಿಸುತ್ತಿದ್ದರು. ಜಾತ್ರೆಯ ಝಗಮಗ ಎಲ್ಲರನ್ನೂ ಹಿಡಿದಿಟ್ಟಿತ್ತು. ಅಂದು ಅವರು ಬೆಳಗಿನ 5 ಗಂಟೆಯವರೆಗೂ ಮೆರವಣಿಗೆ ಮಾರ್ಗದಿಂದ ಕದಲಲಿಲ್ಲ. ಬೆಳಕು ಹರಿಯಲು ಆರಂಭಿಸಿದಂತೆ ಜನ ದಟ್ಟಣೆ ಕರಗಿತು. ಆದರೆ ಮೆರವಣಿಗೆ ಮಾತ್ರ ಅದೇ ಅಬ್ಬರದಲ್ಲಿ ಮುಂದುವರಿದಿತ್ತು.
ಈ ವರ್ಷ ಚೌತಿ 11 ದಿನಗಳು ಇತ್ತು. ಆಗಸ್ಟ್ 27 ರಂದು ಇದ್ದ ಶ್ರೀ ಗಣೇಶ ಚತುರ್ಥಿಯ ದಿನ ಮೂರ್ತಿಗಳ ಪ್ರತಿಷ್ಟಾಪನೆ ಮಾಡಲಾಯಿತು. ಇದೂ ಕೂಡ ಅದ್ದೂರಿಯಾಗಿಯೇ ಇತ್ತು. ಮಳೆಯ ನಿರಂತರತೆ ಕಾರಣಕ್ಕೆ ಕೆಲ ಮಂಡಳದವರು ಶ್ರೀ ಗಣೇಶನ ಬೃಹತ್ ಮೂರ್ತಿಗಳನ್ನು ಒಂದೆರಡು ದಿನ ಮುಂಚಿತವಾಗಿಯೇ ತಂದು ಮಂಟಪಗಳಲ್ಲಿ ಇಟ್ಟಿದ್ದರು. ಆರಾಧನೆಗಾಗಿ ಇರುವ ಚಿಕ್ಕ ಮೂರ್ತಿಯನ್ನು ಚತುರ್ಥಿಯ ದಿನ ತಂದು ಪ್ರತಿಷ್ಟಾಪನೆಯ ಪ್ರಕ್ರಿಯೆಗಳನ್ನು ಶಾಸ್ತ್ರೋಕ್ತವಾಗಿ ಪೂರ್ಣಗೊಳಿಸಿದರು. ಅನೇಕರು ಮಂಟಪದಲ್ಲಿ ಮನರಂಜನೆ, ಆಕರ್ಷಕ ಪ್ರದರ್ಶನಾ ಪರಿಕರಗಳನ್ನು ಅಳವಡಿಸಿದ್ದರು. ಇಂಥ ಮಂಟಪಗಳು ಹೆಚ್ಚು ಜನರನ್ನು ಸೆಳೆದುಕೊಂಡವು. ಆಕರ್ಷಕ ಮತ್ತು ಚರ್ಚಿತ ಕೇಂದ್ರಗಳಾಗಿದ್ದವು. ಉಳಿದವರೂ ತಮ್ಮದೇ ರೀತಿಯಲ್ಲಿ ಅಲಂಕಾರ ಮಾಡಿದ್ದರು. ಮನೆಗಳಲ್ಲಿ ಪ್ರತಿಷ್ಟಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಗಳ ವೈಭವಕ್ಕೂ ಯಾವುದೇ ಕೊರತೆ ಇರಲಿಲ್ಲ. ಸಾರ್ವಜನಿಕರು ಇವುಗಳನ್ನೂ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸೆಪ್ಟೆಂಬರ್ 6 ರಂದು ಇದ್ದ ಅನಂತ ಚತುರ್ದಶಿಯ ದಿನ ಸಾರ್ವಜನಿಕ ಗಣೇಶೋತ್ಸವ ಮಂಡಳಗಳ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆಗೆ ನಗರ ಮಧ್ಯಭಾಗದ ಹುತಾತ್ಮಚೌಕ್ ದಿಂದ ಚಾಲನೆ ನೀಡಲಾಯಿತು. ಜನಪ್ರತಿನಿಧಿಗಳು, ಗಣ್ಯರು ಮತ್ತು ಮಂಡಳದವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಸಂಜೆ 5 ಗಂಟೆಯಷ್ಟೊತ್ತಿಗೆ ಮೆರವಣಿಗೆ ಹೊರಡಿಸಿದರು. ಇಲ್ಲಿಂದ ಹಬ್ಬದ ಸಡಗರ ಹೊಸ ತಿರುವು ಪಡೆದುಕೊಂಡಿತು. ಈ ವರ್ಷ ನಗರದ 8 ಕೆರೆಗಳಲ್ಲಿ ಮೂರ್ತಿಗಳ ವಿಸರ್ಜನಾ ಪ್ರಕ್ರಿಯೆ ನಿರಂತರ 38 ಗಂಟೆಗಳ ಕಾಲ ನಡೆದಿದ್ದು ಐತಿಹಾಸಿಕ ದಾಖಲೆಯಾಯಿತು. ಸೆ. 6 ರಂದು ಸಂಜೆ 5 ಗಂಟೆಗೆ ಆರಂಭವಾಗಿದ್ದ ಈ ಪ್ರಕ್ರಿಯೆ ಸೆ. 8 ರಂದು ಬೆಳಗಿನ ಜಾವ 5.30ಕ್ಕೆ ಕಪಿಲೇಶ್ವರ ಹೊಂಡದಲ್ಲಿ ಪಾಲಿಕೆಯ ಮೂರ್ತಿ ವಿಸರ್ಜನೆಯೊಂದಿಗೆ ಮುಕ್ತಾಯ ಕಂಡಿತು. ನಗರ ವ್ಯಾಪ್ತಿಯೊಂದರಲ್ಲೇ 370 ಕ್ಕೂ ಅಧಿಕ ಸಾರ್ವಜನಿಕ ಶ್ರೀ ಗಣೇಶ ಮೂರ್ತಿಗಳ ಪ್ರತಿಷ್ಟಾಪನೆ ಮಾಡಲಾಗಿತ್ತು. ಇನ್ನು ಬೆಳಗಾವಿ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಗ್ರಾಮೀಣ ಪ್ರದೇಶದಲ್ಲೂ ದೊಡ್ಡ ಸಂಖ್ಯೆಯಲ್ಲಿ ಮೂರ್ತಿಗಳ ಪ್ರತಿಷ್ಟಾಪನೆ ಮಾಡಲಾಗಿತ್ತು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹಬ್ಬಕ್ಕೆ ಸರ್ಪಗಾವಲು ಹಾಕಿ ಶಿಸ್ತು ಮತ್ತು ಸಹನೆಯಿಂದ ನಿರ್ವಹಣೆ ಮಾಡಿದರು. ಇದರಿಂದಾಗಿ ಸಾರ್ವಜನಿಕರು ಶಾಂತ ರೀತಿಯಿಂದ ಶ್ರೀ ಗಣೇಶನ ಹಬ್ಬದ ಸ್ವಾದ ಸವಿದರು.

17/08/2025

ಮಂಗಗಳ ಚಲ್ಲಾಟಕ್ಕೆ ಶ್ವಾನಗಳ ಕಾಟ. ಇವು ಬೂದು ಬಣ್ಣದ ಲಂಗೂರ್. ಕಾಡು, ಕೃಷಿ ಭೂಮಿ, ಜನವಸತಿ ಪ್ರದೇಶದಲ್ಲಿ ಇರುತ್ತವೆ.

10/08/2025

Daily morning worship to Sri Renuka Yellamma Devi Savadatti. History of Yellamma Devi.

Daily morning worship to Sri Renuka Yellamma Devi Savadatti. History of Yellamma Devi.

* ಎಲ್ಲರ ಅಮ್ಮ ಯಲ್ಲಮ್ಮನ ಮಹಿಮೆ ದೊಡ್ಡದು. ಭಕ್ತರು ಆಕೆಯನ್ನು ಆದಿ ಶಕ್ತಿಯಾಗಿ, ಶಕ್ತಿ ದೇವತೆಯನ್ನಾಗಿ ಪೂಜಿಸುತ್ತಾರೆ. ಆರಾಧಿಸುತ್ತಾರೆ. ಆಕೆಯನ್ನು ತಮ್ಮದೇ ರೀತಿಯಲ್ಲಿ ಯಲ್ಲಮ್ಮ, ಶ್ರೀ ರೇಣುಕಾ ಯಲ್ಲಮ್ಮ ದೇವಿ, ಏಳುಕೊಳ್ಳದ ಯಲ್ಲಮ್ಮ, ಗುಡ್ಡದ ಯಲ್ಲಮ್ಮ, ಗುಡ್ಡದ ಯಲ್ಲವ್ವ ಎಂದೆಲ್ಲ ಕರೆಯುತ್ತಾರೆ.
ಗತಿಸಿದ ಕಾಲಮಾನ ತನ್ನ ಗರ್ಭದೊಳಗೆ ಆ ಗುಡ್ಡದ ಬಗ್ಗೆ, ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಬಗ್ಗೆ ಏನೆಲ್ಲ ಮಾಹಿತಿಯನ್ನು ಅಡಗಿಸಿಟ್ಟುಕೊಂಡಿದೆಯೋ ಗೊತ್ತಿಲ್ಲ. ಆ ಕಾಲದಿಂದ ಈ ಕಾಲದವರೆಗೂ ಸಾಕ್ಷಿಯಾಗಿರುವ, ಪ್ರತ್ಯಕ್ಷವಾಗಿ ನೋಡಿರುವ, ಮುಂದೆಯೂ ಈ ಕಾರ್ಯ ಮಾಡಲಿರುವ ಅಜರಾಮರವಾದ ಸೂರ್ಯ, ಚಂದ್ರ, ಚುಕ್ಕಿಗಳೆ ಭಾವುಕ ಭಕ್ತರಿಗೆ ಸತ್ಯ ಬಿಡಿಸಿ ಹೇಳಬೇಕಿದೆ. ಆದರೆ ಅದು ಸಾಧ್ಯವಿಲ್ಲದ್ದರಿಂದ ನಾವೂ ಕೂಡ ಇತಿಹಾಸದ ಗೊಡವೆಗೆ ಹೋಗುವುದು ಬೇಡ. ಜನಮಾನಸದಲ್ಲಿ ಯಲ್ಲಮ್ಮ ಆದಿ ಶಕ್ತಿಯಾಗಿ ನೆಲೆಸಿರುವುದಷ್ಟನ್ನೇ ಗಮನಿಸೋಣ. ಶಕ್ತಿ ಆರಾಧಕರ ಆಸ್ಥೆ, ಆರಾಧನಾ ಭಾವನೆಗಳನ್ನು ಗೌರವಿಸೋಣ.
ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಶಕ್ತಿ ಮತ್ತು ಪವಾಡಗಳ ಬಗ್ಗೆ ಪೌರಾಣೇತಿಹಾಸ ಹಾಗೂ ಜನಪದ ಸಾಹಿತ್ಯದಲ್ಲಿ ಹೇರಳವಾಗಿ ಮಾಹಿತಿ ಸಿಕ್ಕುತ್ತದೆ. ಆಕೆಯ ಲೌಕಿಕ ಮತ್ತು ಅಲೌಕಿಕ ಸಾಮರ್ಥ್ಯವನ್ನು ಆಯಾ ಸಾಹಿತ್ಯಗಳು ತಮ್ಮದೇ ಆದ ರೀತಿಯಲ್ಲಿ ವರ್ಣಿಸಿವೆ. ಈ ದೇವಿಯ ದೇವಸ್ಥಾನ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಐತಿಹಾಸಿಕ ಪಟ್ಟಣ ಸವದತ್ತಿಗೆ ಕೇವಲ 5 ಕಿ.ಮಿ. ದೂರದಲ್ಲಿದೆ.
ಶ್ರೀದೇವಿಯ ದೇವಸ್ಥಾನ ಬೆಟ್ಟ ಶ್ರೇಣಿಯಲ್ಲಿ ಇರುವುದರಿಂದ ದೇವಿಯನ್ನು ಭಕ್ತರು ಏಳುಕೊಳ್ಳದ ಯಲ್ಲಮ್ಮ, ಗುಡ್ಡದ ಯಲ್ಲಮ್ಮ ಎನ್ನುತ್ತಾರೆ. ದೇವಸ್ಥಾನ ಬಹು ಹಳೆ ಕಾಲದ್ದು. ಇದರ ನಿರ್ಮಾಣದಲ್ಲಿ ಚಾಲುಕ್ಯ, ರಾಷ್ಟ್ರಕೂಟ ಶೈಲಿ ಮತ್ತು ಜೈನ್ ವಾಸ್ತುಶಿಲ್ಪದ ಛಾಪು ಕಾಣಿಸುತ್ತದೆ. ದೇವಾಲಯ ಇರುವ ಬೆಟ್ಟ ಶ್ರೇಣಿಗೆ ಪ್ರಾಚೀನದಲ್ಲಿ ಸಿದ್ಧಾಚಲ ಪರ್ವತ, ರಾಮಗಿರಿ ಬೆಟ್ಟವೆಂದು ಕರೆಯಲಾಗುತ್ತಿತ್ತು. ಇದಕ್ಕೆ ಕಾರಣ ಋಷಿ, ಮುನಿಗಳು ಈ ಪ್ರದೇಶದಲ್ಲಿ ತಪಸ್ಸನ್ನಾಚರಿಸುತ್ತಿದ್ದರು. ಯೋಗಿಗಳು ವಾಸವಾಗಿದ್ದರು. ಬೆಟ್ಟಕ್ಕೆ ತಾಗಿ ಹರಿದು ಹೋಗುವ ಮಲಪ್ರಭಾ ನದಿ, ಅಲ್ಲಿದ್ದ ವನಸ್ಪತಿ, ಗೆಡ್ಡೆ, ಗೆಣಸು, ಹಣ್ಣುಹಂಪಲು, ದಟ್ಟ ಕಾಡು ಅವರಿಗೆ ಆಸರೆ ಆಗಿದ್ದವು. ನವಿಲು, ವನ್ಯ ಮೃಗಗಳೂ ಸ್ವಚ್ಛಂದವಾಗಿದ್ದವು. ಕಾಲನ ಹೊಡೆತದಲ್ಲಿ ಇವೆಲ್ಲ ಇತಿಹಾಸ ಗರ್ಭ ಸೇರಿದವು. ಹೊಸ ಬೆಳವಣಿಗೆಗಳೂ ಆದವು. ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಆ ಕಾಲದಿಂದ ಈ ಕಾಲದವರೆಗೆ ಭಕ್ತರಿಗೆ ಬೆಳಕು ನೀಡುತ್ತ ಬಂದಿದೆ. ಮುಂದೆಯೂ ನೀಡಲಿದೆ. ಪುರಾತತ್ತ್ವ ಶಾಸ್ತ್ರದ ಅನೇಕ ಐತಿಹ್ಯಗಳು ಇಲ್ಲಿವೆ. ಹಳೆ ಕಾಲದ ಪುರಾವೆ, ದೇವಾಲಯಗಳೂ ಇವೆ.
ಕರ್ನಾಟಕ ಸರಕಾರ ದೇವಸ್ಥಾನದ ಆಡಳಿತ ನೋಡಿಕೊಳ್ಳಲು ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಟ್ರಸ್ಟ್ ಹಾಗೂ ಅಭಿವೃದ್ಧಿ ಕಾರ್ಯ ನೋಡಿಕೊಳ್ಳಲು ಪ್ರಾಧಿಕಾರದ ರಚನೆ ಮಾಡಿದೆ. ಈ ಆಸ್ಥಾ ಸ್ಥಳ ಪ್ರವಾಸೋದ್ಯಮ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ನನ್ನ ಒಂದು ಅಂದಾಜಿನ ಪ್ರಕಾರ ಭಾರತ ದೇಶದಲ್ಲಿ ಆಂಧ್ರಪ್ರದೇಶ ರಾಜ್ಯದ ತಿರುಪತಿ ತಿಮ್ಮಪ್ಪನ ದೇವಸ್ಥಾನ ಬಿಟ್ಟರೆ ವಾರ್ಷಿಕವಾಗಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಹಾಗೂ ಆದಾಯ ಸಂಪಾದಿಸುವ ಎರಡನೇ ದೇವಸ್ಥಾನ ಇದಾಗಿದೆ. ಇಲ್ಲಿ ವರ್ಷವಿಡೀ ಭಕ್ತರ ದಟ್ಟಣೆ ಇದ್ದೇ ಇರುತ್ತದೆ. ಬೆಳಗಿನ ಆರಂಭದ ಪೂಜೆಯಿಂದ ಹಿಡಿದು ದಿನದ ಕೊನೆಯವರೆಗೂ ಇರುತ್ತಾರೆ. ಹಬ್ಬ ಹರಿದಿನ, ಶ್ರಾವಣ, ಮಹಾನವಮಿ, ದೀಪಾವಳಿಗಳಂತೂ ಸರಿಯೇ ಸರಿ. ಆದರೆ ಜಾತ್ರೆ ನಡೆಯುವ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆಗಳಂದು ದೇಶ-ವಿದೇಶಗಳಿಂದ ಆಗಮಿಸಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಾರೆ. ಆಸ್ತಿಕರಿಗೆ ಇದು ಜಾಗೃತ ಮತ್ತು ಸುಪ್ರಸಿದ್ಧ ಯಾತ್ರಾ ಸ್ಥಳವಾಗಿದೆ.
ಸಂತ ಶಿಶುವಿನಹಾಳ ಶರೀಫರು ಸ್ವತಃ ಜಾತ್ರೆಗೆ ಆಗಮಿಸಿ ಶ್ರೀದೇವಿಯ ಮಹಿಮೆಯನ್ನು ಹಾಡಿ ಹೊಗಳಿದ್ದಾರೆ. ಕೊಂಡಾಡಿದ್ದಾರೆ.

28/07/2025

ಜನಪದ ತಜ್ಞ ಡಾ. ಬಸವರಾಜ ಜಗಜಂಪಿ ವೃತ್ತಿಜೀವನ ಕಥನ. ಏ ಬಸೂ ಕೆಂಪ ಅದೀ ಹಿಂಗೆಲ್ಲ ಬರಬ್ಯಾಡ ಇಲ್ಲಿ ಹುಡಗ್ಯಾರ ಭಾಳ ಅದಾರ!

ಜನಪದ ತಜ್ಞ ಡಾ. ಬಸವರಾಜ ಜಗಜಂಪಿ ವೃತ್ತಿಜೀವನ ಕಥನ. ಏ ಬಸೂ ಕೆಂಪ ಅದೀ ಹಿಂಗೆಲ್ಲ ಬರಬ್ಯಾಡ ಇಲ್ಲಿ ಹುಡಗ್ಯಾರ ಭಾಳ ಅದಾರ!

* ಜನಪದ ಸಾಹಿತ್ಯ ಕ್ಷೇತ್ರದಲ್ಲಿ ನಾಡಿನ ಖ್ಯಾತ ವಿದ್ವಾಂಸ ಡಾ. ಬಸವರಾಜ ಜಗಜಂಪಿಯವರ ಅಮೃತ ಮಹೋತ್ಸವ ಸಮಾರಂಭ ಬೆಳಗಾವಿ ನೆಹರು ನಗರದ ಕನ್ನಡ ಭವನದಲ್ಲಿ 2025 ಜೂನ್ 1 ರಂದು ಬೆಳಗ್ಗೆ 11 ಗಂಟೆಗೆ ಜರುಗಿತು.
ಅವರ ಕುಟುಂಬ ವರ್ಗದವರೆ ಇದನ್ನು ಸಂಘಟಿಸಿದ್ದರು. ಜಗಜಂಪಿಯವರ ಶಿಷ್ಯ ವರ್ಗ, ಅಭಿಮಾನಿಗಳು, ಹಿತೈಷಿಗಳು, ಕನ್ನಡ ಭವನದವರು ಇದಕ್ಕೆ ಕೈಜೋಡಿಸಿದರು. 75 ವಸಂತಗಳನ್ನು ಪೂರೈಸಿದ ಗುರುವಿನ ಶೈಕ್ಷಣಿಕ, ಸಾಹಿತ್ಯಕ ಮತ್ತು ಸಾಮಾಜಿಕ ಸೇವೆಯನ್ನು ದೊಡ್ಡ ಸಂಖ್ಯೆಯಲ್ಲಿ ಸೇರಿ ಸ್ಮರಿಸಿ ಸತ್ಕರಿಸಿದರು.
ಡಾ. ಬಸವರಾಜ ಜಗಜಂಪಿ ಅಮೃತಾಭಿನಂದನ "ಪರಿಣತಮತಿ" ಹೆಸರಿ ಅಭಿನಂದನ ಸಂಪುಟವನ್ನು ಲೋಕಾರ್ಪಣೆ ಗೊಳಿಸಲಾಯಿತು.
ಸಾನಿಧ್ಯವನ್ನು ಗದಗ-ಡಂಬಳ ತೋಂಟದಾರ್ಯ ಸಿದ್ಧಸಂಸ್ಥಾನ ಮಠದ ತೋಂಟದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮೀಜಿ, ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ, ಅಧ್ಯಕ್ಷತೆಯನ್ನು ಡಾ. ಎಚ್.ಬಿ. ರಾಜಶೇಖರ ವಹಿಸಿದ್ದರು.
ಕೆಎಲ್ ಇ ಸಂಸ್ಥೆ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ, ವಿಧಾನಸಭೆಯ ಮಾಜಿ ಸದಸ್ಯ ಮತ್ತು ಕೆಎಲ್ ಇ ನಿರ್ದೇಶಕ ಮಹಾಂತೇಶ ಕವಟಗಿಮಠ, ಹಿರಿಯ ಸಾಹಿತಿ ಬಿ.ಎಸ್. ಗವಿಮಠ ಅತಿಥಿಯಾಗಿ ಆಗಮಿಸಿದ್ದರು.
"ಪರಿಣತಮತಿ" ಗ್ರಂಥದ ಪ್ರಧಾನ ಸಂಪಾದಕರಾದ ಸಾಹಿತಿ ಡಾ. ರಾಮಕೃಷ್ಣ ಮರಾಠೆ ಮತ್ತು ಡಾ. ವಿ.ಎಸ್. ಮಾಳಿ ಅವರು ಅಭಿನಂದನಪರ ನುಡಿ ಹೇಳಿದರು. ಡಾ. ಬಸವರಾಜ ಜಗಜಂಪಿ ಅಭಿನಂದನೆಗೆ ತಮ್ಮ ಕೃತಜ್ಞತೆ ಸಲ್ಲಿಸಿದರು. ಅಭಿವಾದನದ ಮೂಲಕ ವೃತ್ತಿಜೀವನದ ಅನುಭವ, ಪ್ರಗತಿ, ವಿಕಸನ, ಸವಾಲು, ಸಾಧನೆಗಳನ್ನು ಮೆಲುಕು ಹಾಕಿದರು. ನೆರವಾದವರು ಮತ್ತು ಕೈಹಿಡಿದು ಮುನ್ನಡೆಸಿದವರನ್ನು ಸ್ಮರಿಸಿದರು.

24/06/2025

ಸುಳೇಭಾವಿ ಮಹಾಲಕ್ಷ್ಮೀದೇವಿ ಜಾತ್ರೆಯ ಝಲಕ್. ಕರ್ನಾಟಕ ರಾಜ್ಯದ ಬೆಳಗಾವಿ ತಾಲೂಕಿನ ಇದು ಜಾಗೃತ ದೇವಸ್ಥಾನ.

ಸುಳೇಭಾವಿ ಮಹಾಲಕ್ಷ್ಮೀದೇವಿ ಜಾತ್ರೆಯ ಝಲಕ್. ಕರ್ನಾಟಕ ರಾಜ್ಯದ ಬೆಳಗಾವಿ ತಾಲೂಕಿನ ಇದು ಜಾಗೃತ ದೇವಸ್ಥಾನ.

* ಸುಳೇಭಾವಿ ಮಹಾಲಕ್ಷ್ಮೀದೇವಿಯ ಜಾತ್ರೆ ಪ್ರತಿ ಐದು ವರ್ಷಗಳಿಗೊಮ್ಮೆ ಒಂಭತ್ತು ದಿನಗಳಕಾಲ ಜರುಗುತ್ತದೆ. 2025ನೇ ಸಾಲಿನ ಜಾತ್ರೆ ಮಾರ್ಚ್ 18 ರಿಂದ 26 ರವರೆಗೆ ನಿಗದಿಗೊಂಡಿತ್ತು. ಕರ್ನಾಟಕ, ಮಹಾರಾಷ್ಟ್ರ ಪ್ರದೇಶದ ಭಕ್ತರು ಪಾಲ್ಗೊಳ್ಳುತ್ತಾರೆ. ಮಾರ್ಚ 26 ರಂದು ರಾತ್ರಿ 10 ಕ್ಕೆ ಧಾರ್ಮಿಕ ವಿಧಿಗಳೊಂದಿಗೆ ಜಾತ್ರೆ ಮುಕ್ತಾಯಗೊಂಡಿತು. ಬೆಳಗಾವಿ ತಾಲೂಕಿನ ಇದು, ಜಾಗೃತ ದೇವಸ್ಥಾನ. ವೀಡಿಯೋದಲ್ಲಿ ಶ್ರೀದೇವಿಯ ವೈಭವ, ದೇವಾಲಯ ಪರಿಸರ ಮತ್ತು ಜಾತ್ರೆ ನೋಟವನ್ನು ಕಾಣಬಹುದು.

02/06/2025

ಜನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿ ಕುರಿತು ಗದಗ-ಡಂಬಳ ತೋಂಟದಾರ್ಯ ಮಠದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮೀಜಿ ಮಾತು

ಜನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿ ಕುರಿತು ಗದಗ-ಡಂಬಳ ತೋಂಟದಾರ್ಯ ಮಠದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮೀಜಿ ಮಾತು

* ಜನಪದ ಸಾಹಿತ್ಯ ಕ್ಷೇತ್ರದಲ್ಲಿ ನಾಡಿನ ಖ್ಯಾತ ವಿದ್ವಾಂಸ ಡಾ. ಬಸವರಾಜ ಜಗಜಂಪಿಯವರ ಅಮೃತ ಮಹೋತ್ಸವ ಸಮಾರಂಭ ಬೆಳಗಾವಿ ನೆಹರು ನಗರದ ಕನ್ನಡ ಭವನದಲ್ಲಿ 2025 ಜೂನ್ 1 ರಂದು ಬೆಳಗ್ಗೆ 11 ಗಂಟೆಗೆ ಜರುಗಿತು.
ಅವರ ಕುಟುಂಬ ವರ್ಗದವರೆ ಇದನ್ನು ಸಂಘಟಿಸಿದ್ದರು. ಜಗಜಂಪಿಯವರ ಶಿಷ್ಯ ವರ್ಗ, ಅಭಿಮಾನಿಗಳು, ಹಿತೈಷಿಗಳು, ಕನ್ನಡ ಭವನದವರು ಇದಕ್ಕೆ ಕೈಜೋಡಿಸಿದರು. 75 ವಸಂತಗಳನ್ನು ಪೂರೈಸಿದ ಗುರುವಿನ ಶೈಕ್ಷಣಿಕ, ಸಾಹಿತ್ಯಕ ಮತ್ತು ಸಾಮಾಜಿಕ ಸೇವೆಯನ್ನು ದೊಡ್ಡ ಸಂಖ್ಯೆಯಲ್ಲಿ ಸೇರಿ ಸ್ಮರಿಸಿ ಸತ್ಕರಿಸಿದರು.
ಡಾ. ಬಸವರಾಜ ಜಗಜಂಪಿ ಅಮೃತಾಭಿನಂದನ "ಪರಿಣತಮತಿ" ಹೆಸರಿ ಅಭಿನಂದನ ಸಂಪುಟವನ್ನು ಲೋಕಾರ್ಪಣೆ ಗೊಳಿಸಲಾಯಿತು.
ಸಾನಿಧ್ಯವನ್ನು ಗದಗ-ಡಂಬಳ ತೋಂಟದಾರ್ಯ ಸಿದ್ಧಸಂಸ್ಥಾನ ಮಠದ ತೋಂಟದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮೀಜಿ, ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ, ಅಧ್ಯಕ್ಷತೆಯನ್ನು ಡಾ. ಎಚ್.ಬಿ. ರಾಜಶೇಖರ ವಹಿಸಿದ್ದರು.
ಕೆಎಲ್ ಇ ಸಂಸ್ಥೆ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ, ವಿಧಾನಸಭೆಯ ಮಾಜಿ ಸದಸ್ಯ ಮತ್ತು ಕೆಎಲ್ ಇ ನಿರ್ದೇಶಕ ಮಹಾಂತೇಶ ಕವಟಗಿಮಠ, ಹಿರಿಯ ಸಾಹಿತಿ ಬಿ.ಎಸ್. ಗವಿಮಠ ಅತಿಥಿಯಾಗಿ ಆಗಮಿಸಿದ್ದರು.
"ಪರಿಣತಮತಿ" ಗ್ರಂಥದ ಪ್ರಧಾನ ಸಂಪಾದಕರಾದ ಸಾಹಿತಿ ಡಾ. ರಾಮಕೃಷ್ಣ ಮರಾಠೆ ಮತ್ತು ಡಾ. ವಿ.ಎಸ್. ಮಾಳಿ ಅವರು ಅಭಿನಂದನಪರ ನುಡಿ ಹೇಳಿದರು. ಡಾ. ಬಸವರಾಜ ಜಗಜಂಪಿ ಅಭಿನಂದನೆಗೆ ತಮ್ಮ ಕೃತಜ್ಞತಾ ಪೂರ್ಣ ನುಡಿ ಹೇಳಿದರು.
ಪುತ್ರ ಲಿಂಗರಾಜ ಜಗಜಂಪಿ ತಂದೆಯ ಕುರಿತು ಮಾತನಾಡಿದರು.
ಮೊಮ್ಮಗ ಧನ್ ವಿನ್ ಗಣೇಶ ಸ್ತೋತ್ರ ಹೇಳಿದ. ಮೊಮ್ಮಗಳು ದೀಕ್ಷಾ ಕಲ್ಲೂರ ಅಜ್ಜನ ಕುರಿತು ಅಕ್ಕರೆಯ ಮಾತು ಹೇಳಿದರು.
ಸೊಸೆ ನೇಹಾ ಜಗಜಂಪಿ, ಮೊಮ್ಮಗಳು ಸಿಂಚನ್, ಜ್ಯೋತಿ ರಗಶೆಟ್ಟಿ, ಪ್ರೀತಿ ಜಗಜಂಪಿ ಸ್ವಾಗತ ಗೀತೆ ಹೇಳಿದರು.
ಅಜಯಕುಮಾರ ವಾಲೆ ಮಾನಪತ್ರ ಓದಿದರು. ಪುತ್ರಿ ಅಮೃತಾ ಕಲ್ಲೂರ ವಂದಿಸಿದರು.
ಡಾ. ಅವಿನಾಶ್ ಕವಿ, ಡಾ. ಮಹೇಶ ಗುರನಗೌಡರ್ ಸ್ವಾಗತಿಸಿ ನಿರೂಪಿಸಿದರು.
"ಪರಿಣತಮತಿ" ಕೃತಿ-
ಪ್ರಧಾನ ಸಂಪಾದಕರು
ಡಾ. ರಾಮಕೃಷ್ಣ ಮರಾಠೆ, ಡಾ. ವಿ.ಎಸ್. ಮಾಳಿ.
ಸಂಪಾದಕರು
ಸಾಹಿತಿ ಪ್ರಕಾಶ ಗಿರಿಮಲ್ಲನವರ್, ಡಾ. ಮಹೇಶ ಗುರನಗೌಡರ್. ಇವರಿಗೆ ಡಾ. ಗೋವಿಂದರಾಜ್ ತಳಕೋಡ, ಪ್ರೊ. ಆನಂದ ಜಕ್ಕನವರ್ ನೆರವಾಗಿದ್ದಾರೆ.

24/05/2025

ಆಗ್ಯಾವ ನಮ ಜ್ವಾಳ ಉಳದಾವ ನಮ್ಮ ಹಾಡ ಈಗ ಸಾಕವ್ವ ನಿನ್ನ ಕಲ್ಲ ಹಾಕಿದ ಬಂಗಾರದುಂಗುರ ಸವೆದಾವ. ಬಸವರಾಜ ಜಗಜಂಪಿ ಸಂದರ್ಶನ

ಆಗ್ಯಾವ ನಮ ಜ್ವಾಳ ಉಳದಾವ ನಮ್ಮ ಹಾಡ ಈಗ ಸಾಕವ್ವ ನಿನ್ನ ಕಲ್ಲ ಹಾಕಿದ ಬಂಗಾರದುಂಗುರ ಸವೆದಾವ. ಬಸವರಾಜ ಜಗಜಂಪಿ ಸಂದರ್ಶನ

* ನಮಸ್ಕಾರ ವೀಕ್ಷಕರೆ
ನಾನು ರಾಜು ಉಸ್ತಾದ್
"ನೇರ ಹೊಡೆತ" ಹೆಸರಿನ ಸಮೂಹ ಜಾಲತಾಣಕ್ಕೆ ನಿಮಗೆ ಸ್ವಾಗತ.

ನಾನೀಗ ಜನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿಯವರೊಂದಿಗೆ ಇದ್ದೇನೆ. ಇವರೊಂದಿಗೆ ಜನಪದ ಸಾಹಿತ್ಯ ಮತ್ತು 21 ನೇ ಶತಮಾನದ ನಿಜ ಸಂತ, ನಡೆದಾಡುವ ದೇವರೆಂದೇ ಹೆಸರಾದ ವಿಜಯಪುರ ಜ್ಞಾನಯೋಗಾಶ್ರಮದ ಲಿಂಗೈಕ್ಯ ಪರಮಪೂಜ್ಯ ಸಿದ್ಧೇಶ್ವರ ಶ್ರೀಗಳಿಗೆ ಜನಪದದ ಮೇಲಿದ್ದ ಪ್ರೀತಿ, ಕಾಳಜಿಯ ಕುರಿತು ಚರ್ಚೆ ಹಾಗೂ ಸಂದರ್ಶನ ಮಾಡಲಿದ್ದೇನೆ.

20/05/2025

ವಿಜಯಪುರ ಸಿದ್ಧೇಶ್ವರ ಶ್ರೀಗಳಿಗೆ ಜನಪದದ ಮೇಲೆ ಪ್ರೀತಿ ಇತ್ತು. ಕೊನೆ ದಿನಗಳಲ್ಲೂ ತಮಗೆ ಪ್ರಿಯವಾದವುಗಳ ಆನಂದ ಪಡೆದರು.

ವಿಜಯಪುರ ಸಿದ್ಧೇಶ್ವರ ಶ್ರೀಗಳಿಗೆ ಜನಪದದ ಮೇಲೆ ಪ್ರೀತಿ ಇತ್ತು. ಕೊನೆ ದಿನಗಳಲ್ಲೂ ತಮಗೆ ಪ್ರಿಯವಾದವುಗಳ ಆನಂದ ಪಡೆದರು.

* ನಮಸ್ಕಾರ ವೀಕ್ಷರೆ
ನಾನು ರಾಜು ಉಸ್ತಾದ್
"ನೇರ ಹೊಡೆತ" ಹೆಸರಿನ ಸಮೂಹ ಜಾಲತಾಣಕ್ಕೆ ನಿಮಗೆ ಸ್ವಾಗತ..

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಯಾರಿಗೆ ಗೊತ್ತಿಲ್ಲ ? ಅವರೊಂದು ಆಧ್ಯಾತ್ಮಿಕ ಕ್ಷೇತ್ರದ ನಕ್ಷತ್ರ ! ದೇಶ-ವಿದೇಶಗಳಲ್ಲೂ ಭಕ್ತರುಂಟು. ಇವರೆಲ್ಲ ಶ್ರೀಗಳನ್ನು ಈ ಶತಮಾನದ ನಡೆದಾಡುವ ದೇವರೆಂದೇ ನಂಬುತ್ತಾರೆ. ಅದೇ ರೀತಿ ಅವರಿಗೆ ಭಕ್ತಿಯ ಸಮರ್ಪಣೆ ಮಾಡುತ್ತಾರೆ.
ಶ್ರೀಗಳು ವೇದ, ಕೋಶಗಳನ್ನೆಲ್ಲ ಓದಿಕೊಂಡಿದ್ದರೂ ನೆಲದ ಸೊಗಡು ಸೂಸುವ ಮತ್ತು ನಮ್ಮ ಅಸ್ಮಿತೆಯನ್ನು ತಿಳಿಸಿ, ಸಮೃದ್ಧ ಗೊಳಿಸುವ ಜನಪದದ ಮೇಲೆ ಅವರಿಗೆ ಅಪಾರ ಪ್ರೀತಿ ಇತ್ತು. ಕೊನೆಯ ದಿನಗಳಲ್ಲೂ ತಮಗೆ ಪ್ರಿಯವಾದವುಗಳ ಆನಂದ ಪಡೆದರು. ಈ ದಿನಗಳಲ್ಲಿ ಅವರೆದುರಿಗೆ ಕುಳಿತು ಜನಪದ ಹಾಡು ಹೇಳುವ ಅವಕಾಶವನ್ನು ಜನಪದ ವಿದ್ವಾಂಸ ಬೆಳಗಾವಿಯ ಡಾ. ಬಸವರಾಜ ಜಗಜಂಪಿಯವರು ಪಡೆದುಕೊಂಡಿದ್ದರು. ಆ ಕ್ಷಣದ ಅನುಭವವನ್ನು ಸ್ವತಃ ಜಗಜಂಪಿಯವರು ಹಂಚಿಕೊಂಡಿದ್ದಾರೆ ಕೇಳಿ...
2023 ಜನವರಿ 1 ರಂದು ಶ್ರೀಗಳು ಶರೀರ ತ್ಯಜಿಸಿದರು. ಡಾ. ಬಸವರಾಜ ಜಗಜಂಪಿಯವರು 2022 ಡಿಸೆಂಬರ್ 21 ರಂದು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಮಧ್ಯಾಹ್ನದ ಇಳಿಹೊತ್ತಿನಲ್ಲಿ ಶ್ರೀಗಳ ಎದುರು ಸರಣಿಯಾಗಿ ಜನಪದ ಗೀತೆಗಳನ್ನು ಹಾಡಿದ್ದರು. ಶ್ರೀಗಳು ಶಾರೀರಿಕವಾಗಿ ಅಶಕ್ತವಾಗಿದ್ದರೂ ಧ್ಯಾನ ಮುದ್ರೆಯಲ್ಲಿ ಹಾಡಿನ ಆನಂದ ಸವಿದರು.
ಬನ್ನಿ ನಾವೀಗ ಜಗಜಂಪಿಯವರ ಮಾತಿಗೆ ಕಿವಿಯಾಗೊಣ...

18/05/2025

ಹೇಸಿ ಮಾತನು ಕೇಳಿ ಬೀಸು ದೊಣ್ಣಿಲೆ ಬಡದ ಬಾಸಳೆದ್ದಾವ ಬೆನ್ತುಂಬ ಸೋ ಕಣ್ತುಂಬ ಕಣ್ಣೀರ ಸೂಸಿ ಹರದಾವ ಸೋ

ಹೇಸಿ ಮಾತನು ಕೇಳಿ ಬೀಸು ದೊಣ್ಣಿಲೆ ಬಡದ ಬಾಸಳೆದ್ದಾವ ಬೆನ್ತುಂಬ ಸೋ ಕಣ್ತುಂಬ ಕಣ್ಣೀರ ಸೂಸಿ ಹರದಾವ ಸೋ

* ಹೇಸಿ ಮಾತನು ಕೇಳಿ ಬೀಸು ದೊಣ್ಣಿಲೆ ಬಡದ
ಬಾಸಳೆದ್ದಾವ ಬೆನ್ತುಂಬ ಸೋ | ಕಣ್ತುಂಬ
ಕಣ್ಣೀರ ಸೂಸಿ ಹರದಾವ ಸೋ || ಕಣ್ತುಂಬ ಕಣ್ಣೀರ ಸೂಸಿ ನೀ ಹರದಾವ
ದಾಸಾಳ ಮಡುವ ತೊಯ್ಸ್ಯಾವ ಸೋ | ಕಣ್ಣೀರ
ದೇಶನೂರ ಮುಂದ ಕೆರಿಯಾಗಿ ಸೋ |
ದೇಶನೂರ ನೀ ಮುಂದ ಕೆರಿಯಾಗಿ ಕಣ್ಣೀರ
ನ್ಯಾಸರಗಿ ಮುಂದ ಹಳ್ಳಾಗಿ ಸೋ |
ನ್ಯಾಸರಗಿ ನೀ ಮುಂದ ಹಳ್ಳಾಗಿ ಕಣ್ಣೀರ
ಗೋಕಾವಿ ಮುಂದ ಹೊಳಿಯಾಗಿ ಸೋ
ಗೋಕಾವಿ ನೀ ಮುಂದ ಹೊಳಿಯಾಗಿ ಕಣ್ಣೀರ
ಈಸಿ ಬಾರೋ ತಮ್ಮ ಕರಿಲಾಕ ||

* ಇದು ಜನಪದ ಸಾಹಿತ್ಯದ ಮಹೋನ್ನತ ಹಾಡು. ಕಾಳಿದಾಸ, ಕುಮಾರವ್ಯಾಸ ಸೃಷ್ಟಿಸಲಾಗದ್ದನ್ನು ಜನಪದ ಗರತಿ ಮಾಡಿದ್ದಾಳೆ.
ಗಂಡನ ಮನೆಯ ಹಿಂಸೆಯ ಸಂದೇಶವನ್ನು ಕಣ್ಣೀರ ಹೊಳೆ ಮೂಲಕ ತವರಿಗೆ ಮುಟ್ಟಿಸಿ ರಕ್ಷಣೆಗೆ ತಮ್ಮನನ್ನು ಕರೆಯಿಸಿಕೊಂಡಿದ್ದಾಳೆ.
ನೀವು ಒಮ್ಮೆ ಕೇಳಲೇ ಬೇಕಾದ ಹಾಡು.... ಹೃದಯ ಆರ್ದ್ರ ಗೊಂಡು ಕಣ್ಣು ತಂತಾನೇ ನೀರಿನಿಂದ ತುಂಬಿ ಕೊಳ್ಳುತ್ತದೆ.

17/05/2025

ಹೇಮರಡ್ಡಿ ಮಲ್ಲಮ್ಮ ನಾಟಕ ಭಾಗ-3 ಭೋಗ ಜೀವನ ತ್ಯಜಿಸಿ ಯೋಗ, ವೈರಾಗ್ಯ ಅಪ್ಪಿದ ವೇಮನ. ಇಲ್ಲಿಂದ ಇಡೀ ಸಮಾಜಕ್ಕೆ ಬೆಳಕಾದ.

ಹೇಮರಡ್ಡಿ ಮಲ್ಲಮ್ಮ ನಾಟಕ ಭಾಗ-3 ಭೋಗ ಜೀವನ ತ್ಯಜಿಸಿ ಯೋಗ, ವೈರಾಗ್ಯ ಅಪ್ಪಿದ ವೇಮನ. ಇಲ್ಲಿಂದ ಇಡೀ ಸಮಾಜಕ್ಕೆ ಬೆಳಕಾದ.

* ಮಹಾಸಾದ್ವಿ "ಹೇಮರಡ್ಡಿ ಮಲ್ಲಮ್ಮ" ನಾಟಕ ಪ್ರದರ್ಶನ ಬೆಳಗಾವಿಯ ನೆಹರು ನಗರದ "ಕನ್ನಡ ಭವನ" ದಲ್ಲಿ 2025 ಮೇ 10 ರಂದು ಸಂಜೆ ನಡೆಯಿತು.
ರಂಗ ಸೃಷ್ಟಿ ಸಾಂಸ್ಕೃತಿಕ ಸಂಘಟನೆ, ರಡ್ಡಿ ಸಂಘ ಮತ್ತು ಕನ್ನಡ ಭವನದವರು ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ಯವಾಗಿ ಸಂಯುಕ್ತವಾಗಿ ಇದರ ಆಯೋಜನೆ ಮಾಡಿದ್ದರು.
ಸಾಹಿತಿಗಳಾದ ರಾಮಕೃಷ್ಣ ಮರಾಠೆ ಕೃತಿ ರಚನೆ ಹಾಗೂ ಶಿರೀಷ ಜೋಶಿ ನಿರ್ದೇಶನ ಮಾಡಿದ್ದರು. ಆರ್.ಟಿ. ಜಂಗಲ್ ನೆರವಾಗಿದ್ದರು. ಸ್ಥಳೀಯ ಹವ್ಯಾಸೀ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನರ ಜೀವನ ಚರಿತ್ರೆ ವೀಕ್ಷಕರನ್ನು ರೋಮಾಂಚನ ಗೊಳಿಸಿ, ಮೈ, ಮನಗಳಲ್ಲಿ ಭಕ್ತಿ ರಸ ತುಂಬಿತು. ಅತಿಥಿಯಾಗಿ ಆಗಮಿಸಿದ್ದ ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿ. ಬರಮನಿಯವರು ಜನರಲ್ಲಿ ಸಾಂಸ್ಕೃತಿಕ ಭಾವನೆ ಮೂಡಿಸಲು ಸಂಘಟನೆಯವರು ಮಾಡಿದ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

14/05/2025

ಹೇಮರಡ್ಡಿ ಮಲ್ಲಮ್ಮ ನಾಟಕ ಭಾಗ-2 ಮಲ್ಲಮ್ಮನ ಅರಣ್ಯ ಜೀವನ. ಅತ್ತೆಯ ಮುಂದೆ ನೆಗೆಣ್ಣಿಯರ ಫಿತೂರಿ.

ಹೇಮರಡ್ಡಿ ಮಲ್ಲಮ್ಮ ನಾಟಕ ಭಾಗ-2 ಮಲ್ಲಮ್ಮನ ಅರಣ್ಯ ಜೀವನ. ಅತ್ತೆಯ ಮುಂದೆ ನೆಗೆಣ್ಣಿಯರ ಫಿತೂರಿ.

* ಮಹಾಸಾದ್ವಿ "ಹೇಮರಡ್ಡಿ ಮಲ್ಲಮ್ಮ" ನಾಟಕ ಪ್ರದರ್ಶನ ಬೆಳಗಾವಿಯ ನೆಹರು ನಗರದ "ಕನ್ನಡ ಭವನ" ದಲ್ಲಿ 2025 ಮೇ 10 ರಂದು ಸಂಜೆ ನಡೆಯಿತು.
ರಂಗ ಸೃಷ್ಟಿ ಸಾಂಸ್ಕೃತಿಕ ಸಂಘಟನೆ, ರಡ್ಡಿ ಸಂಘ ಮತ್ತು ಕನ್ನಡ ಭವನದವರು ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ಯವಾಗಿ ಸಂಯುಕ್ತವಾಗಿ ಇದರ ಆಯೋಜನೆ ಮಾಡಿದ್ದರು.
ಸಾಹಿತಿಗಳಾದ ರಾಮಕೃಷ್ಣ ಮರಾಠೆ ಕೃತಿ ರಚನೆ ಹಾಗೂ ಶಿರೀಷ ಜೋಶಿ ನಿರ್ದೇಶನ ಮಾಡಿದ್ದರು. ಆರ್.ಟಿ. ಜಂಗಲ್ ನೆರವಾಗಿದ್ದರು. ಸ್ಥಳೀಯ ಹವ್ಯಾಸೀ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು. ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನರ ಜೀವನ ಚರಿತ್ರೆ ವೀಕ್ಷಕರನ್ನು ರೋಮಾಂಚನ ಗೊಳಿಸಿ, ಮೈ, ಮನಗಳಲ್ಲಿ ಭಕ್ತಿ ರಸ ತುಂಬಿತು. ಅತಿಥಿಯಾಗಿ ಆಗಮಿಸಿದ್ದ ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿ. ಬರಮನಿಯವರು ಜನರಲ್ಲಿ ಸಾಂಸ್ಕೃತಿಕ ಭಾವನೆ ಮೂಡಿಸಲು ಸಂಘಟನೆಯವರು ಮಾಡಿದ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Address

Belgavi
Belgaum
590010

Telephone

+919343381784

Website

Alerts

Be the first to know and let us send you an email when Nera Hodeta posts news and promotions. Your email address will not be used for any other purpose, and you can unsubscribe at any time.

Contact The Business

Send a message to Nera Hodeta:

Share