Innews

Innews IN News is a leading news channel in North Karnataka, India. Covering daily news & events for Belgavi Call for commercial Ads 9902687265

ಹುಕ್ಕೇರಿ :  ಕ್ರೀಡಾಪಟುಗಳು ಸರ್ಕಾರದ ಸೌಲಭ್ಯ ಪಡೆದುಕೋಳ್ಳ ಬೇಕು - ಬಿ ಆರ್ ಮಠಪತಿ.ಕ್ರೀಡಾ ಪಟುಗಳು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗ...
06/09/2026

ಹುಕ್ಕೇರಿ : ಕ್ರೀಡಾಪಟುಗಳು ಸರ್ಕಾರದ ಸೌಲಭ್ಯ ಪಡೆದುಕೋಳ್ಳ ಬೇಕು - ಬಿ ಆರ್ ಮಠಪತಿ.

ಕ್ರೀಡಾ ಪಟುಗಳು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸ ಬೇಕು ಎಂದು ನಿವೃತ್ತ ದೈಹಿಕ ಶಿಕ್ಷಣ ಪರಿವಿಕ್ಷಕರಾದ ಬಿ ಆರ್ ಮಠಪತಿ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ, ಯುವ ಸಬಲೀಕರಣ ಮತ್ತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹುಕ್ಕೇರಿ ಯವರ ಆಶ್ರಯದಲ್ಲಿ ಜರುಗಿದ 2026 - 27 ನೇ ಹುಕ್ಕೇರಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟವನ್ನು ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಶಿವಮಹಿಮಾ ಮಠಪತಿ ಯವರ ಅದ್ಯಕ್ಷತೆಯಲ್ಲಿ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಬಿ ಆರ್ ಮಠಪತಿ ಕ್ರೀಡಾ ದ್ವಜಾರೋಹಣ ನೇರವೇರಿಸಿ ಪ್ರತಿಜ್ಞಾವಿಧಿ ಭೋದಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಮಠಪತಿ ಕ್ರೀಡಾ ಪಟುಗಳು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಪಡೆದುಕೊಳ್ಳ ಬೇಕು ಎಂದು ಕರೆ ನೀಡಿದರು.
ನಂತರ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ ಐ ಕೋಟಿವಾಲೆ ಕ್ರೀಡಾ ಜ್ಯೋತಿ ಬರಮಾಡಿಕೊಂಡು ಕ್ರೀಡೆಗಳಿಗೆ ಚಾಲನೆ ನೀಡಿದರು.
ನಂತರ ಯುವಕ, ಯುವತಿಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಭಾಗಿಯ ಮಟ್ಟಕ್ಕೆ ಆಯ್ಕೆಯಾದರು.
ಜೂಡೋ ಕ್ರಿಡಾಪಟು ಹಾಗೂ ತಾಲೂಕಾ ಅನುಷ್ಠಾನಧಿಕಾರಿ ಕುತುಜಾ ಮುಲ್ತಾನಿ ಮಾತನಾಡಿ ಹುಕ್ಕೇರಿ ನಗರದಲ್ಲಿ ಜರುಗಿದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಭಾಗಮಟ್ಟಕ್ಕೆ ಆಯ್ಕೆಯಾದ ಪಟುಗಳಿಗೆ ಅಭಿನಂದನೆ ಹಾಗೂ ಕ್ರೀಡಾಕೂಟ ಯಶಸ್ವಿಗೆ ಸಹಕರಿಸಿದ ತಾಲೂಕಾ ಮಟ್ಟದ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತರಬೇತಿದಾರರಾದ ರೋಹಿಣಿ ಪಾಟೀಲ, ಬಿ ಎನ್ ಚೌಗಲಾ ಹಾಗೂ ನಿರ್ಣಾಯಕರಾಗಿ ಬಿರೇಶ ಶಿವಣ್ಣಗೋಳ,ಸಂಗಮೇಶ ಶಿವಣ್ಣಗೋಳ,ಬಿರೇಶ ಕಾಂಬಳೆ,ಮುಬಾರಕ ಸನದಿ,ರಾಜೇಂದ್ರ ನರಸಾಯಿ,ಮಹಾಂತೇಶ ಹಲಕರ್ಣಿ,ಎ.ಎನ್ ಕಾಮೋಜಿ,ಮಹಾದೇವಿ ಪಾಟೀಲ,ಸಂಜು ಹೊನಕುಪ್ಪಿ, ಬಪುಲ್ ಖೋತ ಕಾರ್ಯ ನಿರ್ವಹಿಸಿದರು.
ತಾಲೂಕಾ ಕ್ರೀಡಾ ಸಂಯೋಜಕ ಚಂದ್ರಕಾಂತ ವಾರಕರಿ,ಹಾಲಪ್ಪ ಮಗದುಮ್ಮ ಹಾಗೂ ಕ್ರೀಡಾ ಪಟುಗಳು ಉಪಸ್ಥಿತರಿದ್ದರು.

ಬೆಳಗಾವಿ: ಬಾಲ್ಯವಿವಾಹ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರ ಕೈಜೋಡಿಸಿ - ಸ್ಪಂದನ ಸಂಸ್ಥೆ ನಿರ್ದೇಶಕಿ ಸುಶೀಲಾ ಕರೆವಿಶ್ವಸಂಸ್ಥೆಯು ನವೆಂಬರ್ 27 ಅ...
06/09/2026

ಬೆಳಗಾವಿ: ಬಾಲ್ಯವಿವಾಹ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರ ಕೈಜೋಡಿಸಿ - ಸ್ಪಂದನ ಸಂಸ್ಥೆ ನಿರ್ದೇಶಕಿ ಸುಶೀಲಾ ಕರೆ

ವಿಶ್ವಸಂಸ್ಥೆಯು ನವೆಂಬರ್ 27 ಅನ್ನು ಅಂತರರಾಷ್ಟ್ರೀಯ ಬಾಲ್ಯವಿವಾಹ ನಿರ್ಮೂಲನಾ ದಿನವನ್ನಾಗಿ ಘೋಷಿಸಿದ್ದು, ದೇಶಾದ್ಯಂತ ಬಾಲವಿವಾಹ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲು ಎಲ್ಲರೂ ಕೈಜೋಡಿಸಬೇಕು ಎಂದು ಸ್ಪಂದನ ಸಂಸ್ಥೆಯ ನಿರ್ದೇಶಕಿ ಸುಶೀಲಾ ಕರೆ ನೀಡಿದ್ದಾರೆ. ಬೆಳಗಾವಿ ಗ್ರಾಮಾಂತರ ತಾಲೂಕಿನಲ್ಲಿ ಬಾಲ್ಯವಿವಾಹ ತಡೆಗಟ್ಟಲು ಶ್ರಮಿಸಿದ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿದ್ದಾರೆ.

ಸೆಪ್ಟೆಂಬರ್ 4 ರಂದು ವಿಶ್ವಸಂಸ್ಥೆ ಅಸೆಂಬ್ಲಿಯಲ್ಲಿ ಬಾಲ್ಯವಿವಾಹ ಪದ್ಧತಿಯನ್ನು ತಡೆಗಟ್ಟುವ ಸಲುವಾಗಿ ಐತಿಹಾಸಿಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ನವೆಂಬರ್ 27 ಅನ್ನು ಅಂತರರಾಷ್ಟ್ರೀಯ ಬಾಲ್ಯವಿವಾಹ ನಿರ್ಮೂಲನಾ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದೆ. 'ಜಸ್ಟಿಸ್ ರೈಟ್ಸ್ ಫಾರ್ ಚಿಲ್ಡ್ರನ್' ಸಂಸ್ಥೆಯ ಸಹಯೋಗದೊಂದಿಗೆ 2024 ನವೆಂಬರ್‌ನಲ್ಲಿ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು, ಅದರಂತೆ ದೇಶದಲ್ಲಿ 'ಬಾಲವಿವಾಹ ಮುಕ್ತ ಭಾರತ' ಆಂದೋಲನವನ್ನು ಯಶಸ್ವಿಯಾಗಿ ಮುನ್ನಡೆಸಲಾಗುತ್ತಿದೆ. ಸುಸ್ಥಿರ ಅಭಿವೃದ್ಧಿ ಗುರಿಯ 5ನೇ ಅಂಶದಡಿ ಲಿಂಗತ್ವ ಸಮಾನತೆ ಸಾಧಿಸಲು ಬಾಲ್ಯವಿವಾಹ ತಡೆಗಟ್ಟುವಿಕೆ ಅತ್ಯಗತ್ಯವಾಗಿದೆ ಎಂದು ಅವರು ತಿಳಿಸಿದರು.

ಕಳೆದ ಹಲವಾರು ವರ್ಷಗಳಿಂದ ಸ್ಪಂದನ ಸಂಸ್ಥೆಯು ಬಾಲ್ಯವಿವಾಹ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಬೆಳಗಾವಿ ಗ್ರಾಮಾಂತರ ತಾಲೂಕಿನಲ್ಲಿ ಬಾಲವಿವಾಹ ತಡೆಯಲು ಅಹರ್ನಿಶಿ ಶ್ರಮಿಸಿರುವ ಶಿಕ್ಷಕರು ಹಾಗೂ ಅಂಗನವಾಡಿ ಮೇಲ್ವಿಚಾರಕರನ್ನು ಈ ವೇಳೆ ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಪಂದನ ಸಂಸ್ಥೆಯ ಕಾರ್ಯಕರ್ತರು ಪ್ರಮುಖರಾದ ಉಮಾ ಚನ್ನಿ, ಶಿವಲೀಲಾ ಹಿರೇಮಠ, ಸಿದ್ದಪ್ಪ ಹಿತ್ತಲಮನಿ ಹಾಗೂ ಆನಂದ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

ಬೆಳಗಾವಿ ಬ್ರಹ್ಮಕುಮಾರೀಸ್ ಮುಖ್ಯ ಕೇಂದ್ರದಲ್ಲಿ ಶಿಕ್ಷಕರ‌ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮಬೆಳಗಾವಿ:ಶಿಕ್ಷಕರ‌ ದಿನಾಚರಣೆ ಹಾಗ...
06/09/2026

ಬೆಳಗಾವಿ ಬ್ರಹ್ಮಕುಮಾರೀಸ್ ಮುಖ್ಯ ಕೇಂದ್ರದಲ್ಲಿ ಶಿಕ್ಷಕರ‌ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ

ಬೆಳಗಾವಿ:ಶಿಕ್ಷಕರ‌ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಬೆಳಗಾವಿ ಮಹಾಂತೇಷ ನಗರದ ಬ್ರಹ್ಮಕುಮಾರೀಸ್ ಮುಖ್ಯ ಕೇಂದ್ರದಲ್ಲಿ ಭಕ್ತಿ, ಜ್ಞಾನ ಹಾಗೂ ಸಾಂಸ್ಕೃತಿಕ ವೈಭವದ ಸಂಗಮ ನಡೆಯಿತು.

ಬೆಳಿಗ್ಗೆ 7ಕ್ಕೆ ಬಾಬಾ ಮುರುಳಿ ನಡೆದ ಬಳಿಕ, 8ಕ್ಕೆ ಕಾರ್ಯಕ್ರಮ ಆರಂಭವಾಯಿತು. ಬ್ರಹ್ಮಕುಮಾರೀಸ್ ಪ್ರಾದೇಶಿಕ ಮುಖ್ಯಸ್ಥರಾದ ರಾಜಯೋಗಿನಿ ಆದರಣೀಯ ಅಂಬಿಕಾ ಅಕ್ಕನವರು ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು _ಸಮಾಜ ಕಟ್ಟಿ ಬೆಳೆಸುವಲ್ಲಿ ಶಿಕ್ಷಕರ ಮಹತ್ವ_ ಮತ್ತು _ಜಗತ್ತಿನ ಒಡೆಯ ಶ್ರೀಕೃಷ್ಣನ ಆದರ್ಶಗಳ_ ಬಗ್ಗೆ ವಿವರವಾಗಿ ಮಾತನಾಡಿದರು.

*ರಾಜಯೋಗಿನಿ ಆದರಣೀಯ ಅಂಬಿಕಾ ಅಕ್ಕನವರ ವಿಶೇಷ ಸಂದೇಶ:*
ಕಾರ್ಯಕ್ರಮದ ಉದ್ಘಾಟನೆಯ ನಂತರ ಅಂಬಿಕಾ ಅಕ್ಕನವರು ಮಾತನಾಡುತ್ತಾ, ಶಿಕ್ಷಕರು ಬರೀ ಪಾಠ ಹೇಳುವವರಲ್ಲ, ಅವರು ಸಮಾಜದ ಅಡಿಪಾಯವನ್ನು ಕಟ್ಟುವ ನಿಜವಾದ ನಿರ್ಮಾತೃಗಳು. ಶ್ರೀಕೃಷ್ಣ ನ ಜೀವನವು ನಮಗೆ ನಿಷ್ಠೆ, ನ್ಯಾಯ, ನಿಸ್ವಾರ್ಥ ಸೇವೆ ಮತ್ತು ಪ್ರೇಮದ ಆದರ್ಶಗಳನ್ನು ಕಲಿಸುತ್ತದೆ. ಇಂದಿನ ಯುವ ಜನಾಂಗಕ್ಕೆ ಶಿಕ್ಷಕರ ಮಾರ್ಗದರ್ಶನ ಮತ್ತು ಕೃಷ್ಣನ ಬೋಧನೆಗಳು ಎರಡೂ ಅಗತ್ಯ. ಶಿಕ್ಷಕರು ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತಿದಾಗ, ಆ ಮಕ್ಕಳು ಸಮಾಜವನ್ನು ಬೆಳಗಿಸುತ್ತಾರೆ. ಶ್ರೀಕೃಷ್ಣನು ತನ್ನ ಜೀವನದಲ್ಲಿ ಪ್ರತಿ ಕ್ಷಣವನ್ನೂ ಧರ್ಮ, ಕರ್ತವ್ಯ ಮತ್ತು ಪ್ರೇಮದಿಂದ ತುಂಬಿದ್ದನು. ಅದೇ ರೀತಿ ಶಿಕ್ಷಕರು ತಮ್ಮ ಜ್ಞಾನದ ಬೆಳಕಿನಿಂದ ವಿದ್ಯಾರ್ಥಿಗಳ ಬದುಕನ್ನು ಬೆಳಗಿಸಬೇಕು. ಈಶ್ವರೀಯ ಜ್ಞಾನದ ಆಧಾರದ ಮೇಲೆ ಶಿಕ್ಷಣ ನೀಡಿದಾಗ, ಅದು ಕೇವಲ ವಿದ್ಯೆಯಲ್ಲ, ಅದು ಆತ್ಮೋನ್ನತಿಯ ದಾರಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕನೂ ತನ್ನನ್ನು ತಾನು ಮೊದಲು ಪರಿವರ್ತಿಸಿಕೊಂಡು, ನಂತರ ಸಮಾಜಕ್ಕೆ ಮಾದರಿಯಾಗಬೇಕು. ಈ ದಿನ ನಾವು ಶಿಕ್ಷಕರನ್ನು ಸನ್ಮಾನಿಸುತ್ತಿರುವುದು ಕೇವಲ ಗೌರವಕ್ಕಾಗಿ ಅಲ್ಲ, ಅವರ ತ್ಯಾಗ, ಶ್ರಮ ಮತ್ತು ಪ್ರೀತಿಯನ್ನು ನೆನಪಿಸಿಕೊಳ್ಳಲು. ಶ್ರೀಕೃಷ್ಣನ ಆದರ್ಶಗಳನ್ನು ಅನುಸರಿಸಿ, ನಾವು ಪ್ರತಿಯೊಬ್ಬರೂ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸೋಣ” ಎಂದು ಅಕ್ಕನವರು ಭಾವಪೂರ್ಣವಾಗಿ ತಿಳಿಸಿದರು.

*ಶಿಕ್ಷಕರಿಗೆ ಸನ್ಮಾನ:*_ ಈಶ್ವರೀಯ ವಿಶ್ವವಿದ್ಯಾಲಯದ ಗುರುಮಾತೆಯರಿಗೆ ಹಾಗೂ ನಗರದ ಇತರ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. “ಶಿಕ್ಷಕರೇ ನಿಜವಾದ ದೇಶ ನಿರ್ಮಾತೃಗಳು” ಎಂಬ ಧ್ಯೇಯದೊಂದಿಗೆ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು.

*ಜನ್ಮಾಷ್ಠಮಿ ವಿಶೇಷ:* ಕಾರ್ಯಕ್ರಮದಲ್ಲಿ ಮಕ್ಕಳು ಶ್ರೀಕೃಷ್ಣ ಹಾಗೂ ರುಕ್ಮಿಣಿ ವೇಷಧಾರಿಗಳಾಗಿ ನೃತ್ಯ ಹಾಗೂ ಗಾಯನ ನಡೆಸಿಕೊಟ್ಟರು. ಕುಮಾರಿ ಮಾಧುರಿ ಯಲಿಗಾರ, ಶಿವಾಂಚಲಾ ಕಬಾಡಗಿ, ಶ್ರೇಯಾ ತಿಳಿಗಂಜಿ, ಆಧ್ಯಾ ತಿಳಿಗಂಜಿ, ಸಾಕ್ಷಿ ಕೋಲಕಾರ, ಆಧಿತಿ ಮಹಿತಾ ಮುಂತಾದವರು ನೃತ್ಯದ ಮೂಲಕ ಗಮನ ಸೆಳೆದರು. ಭಜನೆ, ಕೃಷ್ಣ ಲೀಲೆ ನೃತ್ಯ, ರಾಸ್-ಲೀಲೆ ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮದ ಆಕರ್ಷಣೆಯಾಗಿದ್ದವು. ಕೊನೆಯಲ್ಲಿ ಹಿರಿಯರಿಂದ ಸಂತಸದ ಕೃಷ್ಣರಾಸ ಮೂಡಿಬಂತು.

*ಉಪಸ್ಥಿತರು:* ಕಾರ್ಯಕ್ರಮದಲ್ಲಿ ಅಕ್ಕಂದಿರಾದ ದೇವಿಕಾ, ಪ್ರತಿಭಾ, ಮಂಜುಳಾ, ಈರಮ್ಮ, ಮೋಹಿನಿ, ಡಾ. ಸಂಗೀತಾ ಬೆಳಗಾವಿಮಠ, ಸಹೋದರರಾದ ರಾಜ ಯೋಗಿ ಗುರುರಾಜ್ ಕಾಮತ್, ಶ್ರೀಕಾಂತ್, ರಾಜಶೇಖರ ತಡಸಲೂರು, ಯೊಗೇಶ ಮೂಲಿಮನಿ ಜಗದೀಶ್ ಹರೀಶ್ ಭೀಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

_ಸಾಂಸ್ಕೃತಿಕ ವೈಭವ:_ ಬ್ರಹ್ಮಕುಮಾರೀಸ್ ಯುವ ವಿಭಾಗದ ವತಿಯಿಂದ “ಗೀತಾ ಸಂದೇಶ” ನಾಟಕ, ಶ್ರೀಕೃಷ್ಣನ ಬೋಧನೆಗಳ ಕುರಿತ ಚಿಂತನ-ಮಂಥನ, ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡರು.

“ಜ್ಞಾನದ ಬೆಳಕು, ಭಕ್ತಿಯ ಶಕ್ತಿ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು

06/09/2026

ಕುಸಿಯುವ ಹಂತದಲ್ಲಿ ಸರ್ಕಾರಿ ಶಾಲಾ ಕಟ್ಟಡ; ಆತಂಕದಲ್ಲಿ ಕಂದಮ್ಮಗಳು! ಬಳ್ಳಾರಿ ತಾಲೂಕಿನ ಪರಮದೇವಿನಹಳ್ಳಿ.

Government school building on the verge of collapse; children in a state of anxiety! Paramadevinahalli, Ballari Taluk.

Government school building, school building collapse, school building unsafe, Paramadevinahalli, Ballari taluk, government school, school safety, children in danger, students anxious, dilapidated school building, building collapse risk, school infrastructure, unsafe classroom, education department, student safety, government school problems, Ballari news, Karnataka news, breaking news, local news, school safety concerns

ಬಾದಾಮಿ ಬನಶಂಕರಿ ದೇಗುಲದ ಪುಷ್ಕರ್ಣಿ ಬಳಿ ಪ್ರತ್ಯಕ್ಷವಾದ 12 ಅಡಿ 25 ಕೆಜಿ ತೂಕದ ಹೆಬ್ಬಾವು!!!ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಬಾದಾಮಿ ಬನಶಂಕರಿ...
06/09/2026

ಬಾದಾಮಿ ಬನಶಂಕರಿ ದೇಗುಲದ ಪುಷ್ಕರ್ಣಿ ಬಳಿ ಪ್ರತ್ಯಕ್ಷವಾದ 12 ಅಡಿ 25 ಕೆಜಿ ತೂಕದ ಹೆಬ್ಬಾವು!!!

ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಬಾದಾಮಿ ಬನಶಂಕರಿ ದೇಗುಲದ ಪುಷ್ಕರ್ಣಿ ಬಳಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ತಡರಾತ್ರಿ ಕಾಣಿಸಿಕೊಂಡ ಈ ಹಾವನ್ನು ಉರಗ ರಕ್ಷಕರು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಬನಶಂಕರಿ ದೇವಸ್ಥಾನದ ಹೊಂಡದ ಬಳಿ ರಾತ್ರಿ ಸುಮಾರು 1 ಗಂಟೆಯ ಸಮಯದಲ್ಲಿ ಸುಮಾರು 12 ಅಡಿ ಉದ್ದ ಹಾಗೂ 25 ಕೆಜಿ ತೂಕದ ಬೃಹತ್ ಹೆಬ್ಬಾವು ಪ್ರತ್ಯಕ್ಷಗೊಂಡು ಭಕ್ತರಲ್ಲಿ ಭೀತಿ ಮೂಡಿಸಿತ್ತು. ತಕ್ಷಣವೇ ಸ್ಥಳೀಯರು ಉರಗ ರಕ್ಷಕ ಸ್ನೇಕ್ ಮಹಾಂತೇಶ ಅವರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕೆ ಧಾವಿಸಿದ ಅವರು ಯಾವುದೇ ಅಪಾಯವಾಗದಂತೆ ಎಚ್ಚರಿಕೆಯಿಂದ ಬೃಹತ್ ಹೆಬ್ಬಾವನ್ನು ಯಶಸ್ವಿಯಾಗಿ ಸೆರೆಹಿಡಿದರು. ಈ ಹಿಂದೆ ಇದೇ ಪ್ರದೇಶದಲ್ಲಿ 15 ಕ್ಕೂ ಹೆಚ್ಚು ಹೆಬ್ಬಾವಿನ ಮರಿಗಳು ಕಾಣಿಸಿಕೊಂಡಿದ್ದನ್ನು ಸ್ಮರಿಸಬಹುದು. ಸಕಾಲಕ್ಕೆ ಕಾರ್ಯಪ್ರವೃತ್ತರಾದ ಸ್ನೇಕ್ ಮಹಾಂತೇಶ ಅವರು ಸೆರೆಹಿಡಿದ ಹೆಬ್ಬಾವನ್ನು ಬಳಿಕ ಸುರಕ್ಷಿತವಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ಒಯ್ದು ಬಿಡುವ ಮೂಲಕ ಜನರಲ್ಲಿ ಮೂಡಿದ್ದ ಆತಂಕವನ್ನು ದೂರ ಮಾಡಿದ್ದಾರೆ.

ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್.ಖಾನಾಪುರ ತಾಲೂಕಿನ ಪ್ರಭುನಗರ ಉನ್ನತೀಕರಿಸಿದ ಸರ್ಕಾರಿ ಶಾಲೆಯ ತರಬೇತಿ ಪದವೀಧರ ಶಿಕ್ಷಕಿ (ಟಿಜ...
06/09/2026

ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್.

ಖಾನಾಪುರ ತಾಲೂಕಿನ ಪ್ರಭುನಗರ ಉನ್ನತೀಕರಿಸಿದ ಸರ್ಕಾರಿ ಶಾಲೆಯ ತರಬೇತಿ ಪದವೀಧರ ಶಿಕ್ಷಕಿ (ಟಿಜಿಟಿ) ಶುಭಾ ಹೆಗಡೆ ಅವರು 2026ನೇ ಸಾಲಿನ ಪ್ರತಿಷ್ಠಿತ ಬೇಲಾ ಟೀಚರ್ಸ್ ಅವಾರ್ಡ್ಗೆ ಆಯ್ಕೆಯಾಗಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೀಡುತ್ತಿರುವ ಕೊಡುಗೆ ಹಾಗೂ ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಣೆಯಲ್ಲಿ ವಹಿಸಿರುವ ಪಾತ್ರವನ್ನು ಪರಿಗಣಿಸಿ ಶುಭಾ ಹೆಗಡೆ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಳಗಾವಿಯ ಪ್ರತಿಷ್ಠಿತ ಬೇಲಾ ಸಂಸ್ಥೆ ವತಿಯಿಂದ ಪ್ರತಿವರ್ಷ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಸೆಪ್ಟೆಂಬರ್ 6ರಂದು ಬೆಳಗಾವಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶುಭಾ ಹೆಗಡೆ ಅವರಿಗೆ 2026ನೇ ಸಾಲಿನ ಬೇಲಾ ಟೀಚರ್ಸ್ ಅವಾರ್ಡ್ ಪ್ರದಾನ ಮಾಡಲಾಗುವುದು.

ಬಳ್ಳಾರಿ ಚೊಲೋ ಪಾದಯಾತ್ರೆಯಲ್ಲಿ ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಭಾಗವಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವ...
06/09/2026

ಬಳ್ಳಾರಿ ಚೊಲೋ ಪಾದಯಾತ್ರೆಯಲ್ಲಿ ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಭಾಗವಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಹೆಜ್ಜೆಗೆ ಹೆಜ್ಜೆ ಹಾಕಿ ಬೆಂಬಲ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಮರ ಸಾರಿರುವ ಬಿಜೆಪಿ ಪಾದಯಾತ್ರೆ ನಡೆಸುತ್ತಿದೆ.

ಬಿಜೆಪಿಯ "ಬಳ್ಳಾರಿ ಚೊಲೋ" ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಖಾನಾಪೂರದ ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಹೆಜ್ಜೆಗೆ ಹೆಜ್ಜೆ ಹಾಕಿ ಜೈ ಘೋಷಣೆಗಳೊಂದಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಳ್ಳಾರಿ ಚೊಲೋ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಮುಂದಿನ ಶಿಕ್ಷಕರ ದಿನಾಚರಣೆಯೊಳಗೆ ಚಿಕ್ಕೋಡಿಯಲ್ಲಿ 'ಗುರು ಭವನ' ನಿರ್ಮಾಣ: ಪ್ರಕಾಶ ಹುಕ್ಕೇರಿಚಿಕ್ಕೋಡಿ:ಕಳೆದ 40 ವರ್ಷಗಳಲ್ಲಿ ಕ್ಷೇತ್ರದಲ್ಲಿ ಅ...
06/09/2026

ಮುಂದಿನ ಶಿಕ್ಷಕರ ದಿನಾಚರಣೆಯೊಳಗೆ ಚಿಕ್ಕೋಡಿಯಲ್ಲಿ 'ಗುರು ಭವನ' ನಿರ್ಮಾಣ: ಪ್ರಕಾಶ ಹುಕ್ಕೇರಿ

ಚಿಕ್ಕೋಡಿ:ಕಳೆದ 40 ವರ್ಷಗಳಲ್ಲಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೇನೆ.ಜಾಗದ ಸಮಸ್ಯೆಯಿಂದ ಗುರು ಭವನ ನಿರ್ಮಾಣ ಮಾತ್ರ ಬಾಕಿ ಉಳಿದಿದೆ.ಉಪವಿಭಾಗಧಿಕಾರಿ,ತಹಶೀಲ್ದಾರರು ಸೂಕ್ತ ಜಾಗ ಒದಗಿಸಿದರೆ, ಮುಂದಿನ ಶಿಕ್ಷಕರ ದಿನಾಚರಣೆಯೊಳಗೆ ಶಾಸಕರ ನಿಧಿಯಿಂದ ಚಿಕ್ಕೋಡಿಯಲ್ಲಿ ಸುಸಜ್ಜಿತ ಗುರು ಭವನ ನಿರ್ಮಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.

ಚಿಕ್ಕೋಡಿ ನಗರದ ಶ್ರೀ ಪರಟಿ ನಾಗಲಿಂಗೇಶ್ವರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.2008ರಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಬಿಮ್ಸ್ ವೈದ್ಯಕೀಯ ಕಾಲೇಜು, ಚಿಕ್ಕೋಡಿಯಲ್ಲಿ ಐಟಿಐ ಹಾಗೂ ಸದಲಗಾದಲ್ಲಿ ಡಿಪ್ಲೊಮಾ ಕಾಲೇಜುಗಳನ್ನು ಮಾಡಿದೇನೆ. ಉತ್ತಮ ಕೆಲಸ ಮಾಡಿದಾಗ ಮಾತ್ರ ಜನರು ನೆನಪಿಟ್ಟುಕೊಳ್ಳುತ್ತಾರೆ ಎಂದು ಹೇಳಿದರು.

ಗುರು ಭವನ ನಿರ್ಮಾಣಕ್ಕಾಗಿ ಶಾಸಕರ ನಿಧಿಯ 50 ಕೋಟಿ ರೂ.ಗಳ ಪೈಕಿ 1 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅದು ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿತು. ಈ ಬಾರಿ ಯಾವುದೇ ಪರಿಸ್ಥಿತಿಯಲ್ಲೂ ಜಾಗ ಪಡೆದು ಗುರು ಭವನ ನಿರ್ಮಿಸುವುದಾಗಿ ಭರವಸೆ ನೀಡಿದರು. ಇತ್ತೀಚೆಗೆ ಬಾಗಲಕೋಟೆಯಲ್ಲಿ ಶಾಲಾ ಮೇಲ್ಛಾವಣಿ ಬಿದ್ದು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆಯನ್ನು ಪ್ರಸ್ತಾಪಿಸಿದ ಅವರು, ಅಪಾಯಕಾರಿ ಶಾಲಾ ಕೊಠಡಿಗಳ ಬಗ್ಗೆ ಶಿಕ್ಷಕರು ತಕ್ಷಣ ಮಾಹಿತಿ ನೀಡಬೇಕು, ಅವುಗಳ ಬದಲಿಗೆ ಹೊಸ ಕೊಠಡಿಗಳನ್ನು ಮಂಜೂರು ಮಾಡಲಾಗುವುದು ಎಂದರು. ಯಡೂರಿನಲ್ಲಿ ಪ್ರತಿವರ್ಷ ಪ್ರವಾಹದ ನೀರು ಶಾಲೆಗೆ ನುಗ್ಗುತ್ತಿದ್ದ ಹಿನ್ನೆಲೆಯಲ್ಲಿ ಬೇರೊಂದು ಸುರಕ್ಷಿತ ಸ್ಥಳದಲ್ಲಿ 6 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ, ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕ್ಷೇತ್ರಕ್ಕೆ 12 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಶಿಕ್ಷಕರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದಲೇ ನಾನು ಇಂದಿನ ಹುದ್ದೆಗೆ ಬಂದಿದ್ದೇನೆ. ಹೀಗಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಎಂದಿಗೂ ತಪ್ಪಿಸುವುದಿಲ್ಲ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಹಾಗೂ ತರಬೇತಿಗೆ ಒತ್ತು ನೀಡಿ, ಪ್ರಗತಿಪರ ಭಾರತ ನಿರ್ಮಿಸೋಣ" ಎಂದರು.

ಗಡಿ ಭಾಗದ ಗ್ರಾಮೀಣ ವಿದ್ಯಾರ್ಥಿಗಳು 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೆ ಇಂದು ಶಿಕ್ಷಣ ವಾಣಿಜ್ಯೀಕರಣಗೊಳ್ಳುತ್ತಿದ್ದು, ಪೋಷಕರಿಗೆ ಆರ್ಥಿಕ ಹೊರೆಯಾಗುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದ ಜತೆಗೆ ಇಂದಿನ ಗೂಗಲ್ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ತರಬೇತಿ ನೀಡಬೇಕು ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕರೆ ನೀಡಿದರು.

ಚಿಕ್ಕೋಡಿಯ ಶ್ರೀ ಸಂಪಾದನಾ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಆರಂಭದಲ್ಲಿ ದೀಪ ಬೆಳಗಿಸಿ, ಭಾವಚಿತ್ರ ಪೂಜೆ ನೆರವೇರಿಸುವುದರ ಜೊತೆಗೆ, ರಾಕೆಟ್ ಮಾದರಿಯನ್ನು ಹಾರಿಸುವ ಮೂಲಕ ವಿನೂತನವಾಗಿ ಚಾಲನೆ ನೀಡಲಾಯಿತು.ಶೈಕ್ಷಣಿಕ ಜಿಲ್ಲೆಯ 24 ಅತ್ಯುತ್ತಮ ಶಿಕ್ಷಕರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ನಿವೃತ್ತ ಶಿಕ್ಷಕರನ್ನೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ, ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ್, ತಹಶೀಲ್ದಾರ್ ರಾಜೇಶ್ ಬುರ್ಲಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ. ಕುಂಬಾರ, ಬಿಇಒ ಪ್ರಭಾವತಿ ಪಾಟೀಲ, ಶಿಕ್ಷಣ ಸಂಘದ ಜಿಲ್ಲಾಧ್ಯಕ್ಷ ಹಿರೇಮಠ, ಮಾಜಿ ನಗರಸಭೆ ಸದಸ್ಯ ಗುಲಾಬ್‌ಹುಸೇನ್ ಬಾಗವಾನ್, ರವಿ ಹಂಪಣ್ಣವರ, ಪಂಚ ಗ್ಯಾರಂಟಿ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ರಮೇಶ್ ಪಾಟೀಲ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಮಜಲಟ್ಟಿ, ಅಕ್ಷರ ದಾಸೋಹ ಉಪನಿರ್ದೇಶಕ ಮಹಾದೇವ ಜನಗೌಡ ಸೇರಿದಂತೆ ಹಲವು ಗಣ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಡಿಡಿಪಿಐ ಅಜಿತ್ ಮನ್ನಿಕೇರಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಿಇಒ ಪ್ರಭಾವತಿ ಪಾಟೀಲ ವಂದಿಸಿದರು

06/09/2026

ಹುಬ್ಬಳ್ಳಿಯಲ್ಲಿ ಡ್ಯಾನ್ಸ್ ಪಬ್ ಮೇಲೆ ದಾಳಿ. ಅವಧಿ ಮೀರಿ ನಡೆಯುತ್ತಿದ್ದ ಪಬ್ ಬಂದ್.

Raid on a dance pub in Hubballi; pub shut down for operating beyond permitted hours.

Hubballi dance pub raid, Hubballi pub raid, dance pub, pub shut down, operating beyond permitted hours, pub violation, late-night pub raid, police raid, police action, pub closure, permitted hours violation, Hubballi police, nightlife crackdown, law and order, Karnataka police, Hubballi news, Karnataka news, breaking news, latest news

05/09/2026

🙏 ಭೋಯಿ ಗಲ್ಲಿಯಲ್ಲಿ ಶ್ರೀ ಗಣೇಶಮೂರ್ತಿಗೆ ಅದ್ಧೂರಿ ಸ್ವಾಗತ! 🎉🚩
ಗಣೇಶನ ಆಗಮನಕ್ಕೆ ಭಕ್ತರಿಂದ ಭರ್ಜರಿ ಸಂಭ್ರಮ 🥁✨

Address

M B Square Building 4th Floor S P Office Road
Belgaum
590001

Alerts

Be the first to know and let us send you an email when Innews posts news and promotions. Your email address will not be used for any other purpose, and you can unsubscribe at any time.

Contact The Business

Send a message to Innews:

Shortcuts

Share