Innews

Innews IN News is a leading news channel in North Karnataka, India. Covering daily news & events for Belgavi Call for commercial Ads 9902687265
(2)

02/07/2025

Border dispute is not over... The fight will continue as long as Marathi people breathe; Shiv Sena MP Arvind Sawant

Maharastra Ekikaran Samiti leaders Shubham Shelke, Suraj Kanbarkar and activists strongly opposed Kadadi's statement....

02/07/2025

ಗೋಕಾಕ ಗ್ರಾಮ ದೇವತೆಯರ ಜಾತ್ರೆ,..

ಕಾಗವಾಡ ತಾ.ಶೇಡಬಾಳದ  ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನಬಿಎಸ್ಎಫ್ ಯೋಧ ದಗಡು ಪೂಜಾರಿ  ರಜೆಯ ಮೇಲೆ ಗ್ರಾಮಕ್ಕೆ ಮರಳಿದ್ದಾಗ ಆರೋಗ್ಯ ಸಮಸ್ಯೆಯಿ...
02/07/2025

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ

ಬಿಎಸ್ಎಫ್ ಯೋಧ ದಗಡು ಪೂಜಾರಿ ರಜೆಯ ಮೇಲೆ ಗ್ರಾಮಕ್ಕೆ ಮರಳಿದ್ದಾಗ ಆರೋಗ್ಯ ಸಮಸ್ಯೆಯಿಂದ ಬೆಳಗಾವಿ ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಮೃತ ಯೋಧರು ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಯೋಧನು ಅಸ್ಸಾಂ ರಾಜ್ಯದ ಗುವಾಹಟಿಯ170 ಬಟಾಲಿಯನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಯೋಧನ ಸ್ವಗ್ರಾಮದ ತೋಟದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಸರ್ಕಾರಿ ಅಧಿಕಾರಿಗಳು ಗ್ರಾಮದ ಮುಖಂಡರು ಭಾಗಿಯಾಗಿದ್ದರು

ಸಮಸ್ಯೆಗಳ ಕಗ್ಗಂಟಿನಲ್ಲಿ ಸಿಲುಕಿದ ಕಂಗ್ರಾಳಿ ಬಿ.ಕೆ ಪಾರ್ವತಿ ನಗರ…ಬೆಳಗಾವಿಯ ಕಂಗ್ರಾಳಿ ಬಿ.ಕೆ ಗ್ರಾಮ ಸಮಸ್ಯೆಗಳ ಆಗರವಾಗಿ ಪರಿಣಮಿಸಿದೆ. ಅಸ್ವ...
02/07/2025

ಸಮಸ್ಯೆಗಳ ಕಗ್ಗಂಟಿನಲ್ಲಿ ಸಿಲುಕಿದ ಕಂಗ್ರಾಳಿ ಬಿ.ಕೆ ಪಾರ್ವತಿ ನಗರ…

ಬೆಳಗಾವಿಯ ಕಂಗ್ರಾಳಿ ಬಿ.ಕೆ ಗ್ರಾಮ ಸಮಸ್ಯೆಗಳ ಆಗರವಾಗಿ ಪರಿಣಮಿಸಿದೆ. ಅಸ್ವಚ್ಛತೆ, ಕಾಮಗಾರಿ ವಿಳಂಬ, ಉರಿಯದ ಬೀದಿ ದೀಪ, ಅಪಾಯಕಾರಿ ನಾಲೆಯಿಂದಾಗಿ ಇಲ್ಲಿನ ಜನರಿಗೆ ಅನಾಥಪ್ರಜ್ಞೆ ಕಾಡುತ್ತಿದೆ. ಸಮಸ್ಯೆಯ ಕಗ್ಗಂಟಿನಲ್ಲಿ ಸಿಲುಕಿದ ಕಂಗ್ರಾಳಿ ಬಿ.ಕೆ. ಕುರಿತು ಇಲ್ಲಿದೆ ಒಂದು ವರದಿ.

ಅರ್ಧಕ್ಕೆ ನಿಂತ ಕಾಮಗಾರಿಗಳು, ಹದಗೆಟ್ಟು ಹೋದ ರಸ್ತೆಗಳು, ತಡೆಗೋಡೆ ಇಲ್ಲದೇ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ನಾಲೆ, ಉರಿಯದ ಬೀದಿ ದೀಪಗಳು…ವಿಲೇವಾರಿಯಾಗದ ತ್ಯಾಜ್ಯ…

ಹೌದು, ಇಷ್ಟೇಲ್ಲ ಸಮಸ್ಯೆಗಳನ್ನು ಬೆಳಗಾವಿಯ ಕಂಗ್ರಾಳಿ ಬಿ.ಕೆದ ಪಾರ್ವತಿ ನಗರದ ಜನರು ಎದುರಿಸುತ್ತಿದ್ದಾರೆ. ಕೆ.ಎಚ್. ಕಂಗ್ರಾಳಿಯಿಂದ ಶಾಹೂನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿರುವ ನಾಲೆಗೆ ಯಾವುದೇ ತರಹದ ತಡೆಗೋಡೆ ಇಲ್ಲದ ಕಾರಣ ವಾಹನ ಸವಾರರು ಇದರ ಮಾಹಿತಿಯಿಲ್ಲದೇ, ನಾಲೆಯಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಇನ್ನು ವಿದ್ಯುತ್ ಕಂಬಗಳನ್ನು ವಾಲಿರುವ ದೃಶ್ಯ ಜನರಲ್ಲಿ ಭಯವನ್ನುಂಟು ಮಾಡುತ್ತದೆ. ರಾತ್ರಿಯ ವೇಳೆ ಬೀದಿ ದೀಪಗಳು ಕೆಲವೊಂದು ಬಾರಿ ಉರಿಯುತ್ತವೆ.

ಕೇಲವೊಂದು ಬಾರಿ ಉರಿಯುವುದಿಲ್ಲ. ಇದರಿಂದಾಗಿ ಜನರು ಅಪಾಯವನ್ನು ಎದುರಿಸುತ್ತಿದ್ದಾರೆ. ಇಲ್ಲಿ ಎದೆ ಎತ್ತರಕ್ಕೆ ಗಿಡಗಂಟಿಗಳು ಬೆಳೆದು ನಿಂತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿ, ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಸ್ಥಳೀಯರೇ ಗಿಡಗಂಟಿಗಳನ್ನು ತೆರವುಗೊಳಿಸಿದ್ದರಿಂದ ಜನರಿಗೆ ನಾಲೆಯಿರುವುದಾಗಿ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಶಾಂತಾರಾಮ್ ಪಾಟೀಲ್ ಹೇಳಿದರು.

ಇನ್ನು ಪಾರ್ವತಿ ನಗರದಲ್ಲಿ ನಿರ್ವಹಣೆಯಿಲ್ಲದೇ ಹಾಳು ಕೊಂಪೆಯಾಗಿರುವ ನಾಲೆಯ ಮಾಹಿತಿಯಿಲ್ಲದೇ, ಆಟವಾಡಲು ಬಂದ ಚಿಕ್ಕ ಮಕ್ಕಳು ಬಿದ್ದು, ಗಾಯಗೊಂಡ ಉದಾಹರಣೆಗಳಿವೆ. ವಾಹನ ಸವಾರರು ಇದರ ಮಾಹಿತಿ ಸಿಗದೇ, ಪೇಚಿಗೆ ಸಿಲುಕುತ್ತಿದ್ದಾರೆ. ಈ ನಾಲೆಯೂ ತ್ಯಾಜ್ಯ ವಿಲೇವಾರಿ ಘಟಕವಾಗಿ ಪರಿಣಮಿಸಿದೆ. ಇದನ್ನು ಸ್ವಚ್ಛಗೊಳಿಸುವವರು ಯಾರಿಲ್ಲದಂತಾಗಿದೆ. ಗ್ರಾಮ ಪಂಚಾಯಿತಿಯೂ ಇತ್ತ ಗಮನಹರಿಸಿ, ತಡೆಗೋಡೆಯನ್ನು ನಿರ್ಮಿಸಬೇಕು. ಪ್ರಖರವಾದ ಪ್ರಕಾಶ ಬೀರುವ ಬೀದಿ ದೀಪಗಳನ್ನು ಅಳವಡಿಸಬೇಕೆಂದು ಸ್ಥಳೀಯ ರಹಿವಾಸಿ ಜ್ಞಾನೇಶ್ವರ್ ರಜಪೂತ್ ಹೇಳಿದ್ದು ಹೀಗೆ. ಬೈಟ್

ಇನ್ನು ಕಂಗ್ರಾಳಿ ಬಿ.ಕೆ ಪಾರ್ವತಿ ನಗರದಲ್ಲಿ ನೀರಿನ ಪೈಪಲೈನ್ ಅಳವಡಿಕೆಗೆ ಕಾರ್ಯ ಕೂಡ ಆಮೆಗತಿಯಲ್ಲಿ ನಡೆಯುತ್ತಿದೆ. ಕಳೆದ 2 ತಿಂಗಳ ಹಿಂದೆ ಕಾಮಗಾರಿಗಾಗಿ ಗುಂಡಿಗಳನ್ನು ಅಗೆಯಲಾಗಿದೆ. ಅತ್ತ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣವೂ ಗೊಳಿಸುತ್ತಿಲ್ಲ. ಇತ್ತ ಗುಂಡಿಗಳನ್ನು ಮುಚ್ಚುತ್ತಿಲ್ಲ. ಅಗೆದ ಗುಂಡಿಗಳನ್ನು ಹಾಗೆಯೇ ಬಿಡಲಾಗಿದ್ದು, ವಾಹನ ಸವಾರರು ಅಡ್ಡರಸ್ತೆಯನ್ನು ದಾಟಲು ಹೋಗಿ ಬೀಳುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಗುತ್ತಿಗೆದಾರರಂತೂ ಫೋನ್ ಕರೆಯನ್ನು ಸ್ವೀಕರಿಸುವುದಿಲ್ಲ. ಸ್ಥಳೀಯರೇ ಕೆಲ ಗುಂಡಿಗಳನ್ನು ಮುಚ್ಚಿಕೊಂಡಿದ್ದಾರೆ ಎಂದು ದೂರಿದರು.

ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಾಲೆಗೆ ತಡೆಗೋಡೆ ನಿರ್ಮಿಸಿ, ಬೀದಿ ದೀಪಗಳನ್ನು ಅಳವಡಿಸಿ, ತ್ಯಾಜ್ಯ ವಿಲೇವಾರಿಯನ್ನು ಮಾಡಿ ಜನಹಿತವನ್ನು ಕಾಪಾಡಬೇಕೆಂಬುದು ಕಂಗ್ರಾಳಿ ಬಿ.ಕೆ ಪಾರ್ವತಿ ನಗರದ ಜನರ ಆಗ್ರಹವಾಗಿದೆ.

ವಿಜಯಾ ಆಸ್ಪತ್ರೆಯಲ್ಲಿ ವೈಧ್ಯರ ದಿನಾಚರಣೆಬೆಳಗಾವಿ ನಗರದಲ್ಲಿರುವ ಹೆಸರಾಂತ ವಿಜಯಾ ಅರ್ಥೋ ಹಾಗೂ ಟ್ರಾಮಾ ಸೆಂಟರನಲ್ಲಿ ಮಂಗಳವಾರ ವಿಶ್ವ ವೈಧ್ಯರ ದ...
02/07/2025

ವಿಜಯಾ ಆಸ್ಪತ್ರೆಯಲ್ಲಿ ವೈಧ್ಯರ ದಿನಾಚರಣೆ

ಬೆಳಗಾವಿ ನಗರದಲ್ಲಿರುವ ಹೆಸರಾಂತ ವಿಜಯಾ ಅರ್ಥೋ ಹಾಗೂ ಟ್ರಾಮಾ ಸೆಂಟರನಲ್ಲಿ ಮಂಗಳವಾರ ವಿಶ್ವ ವೈಧ್ಯರ ದಿನಾಚರಣೆಯನ್ನು ಆಚರಿಸಲಾಯಿತು.

ವಿಜಯಾ ಅರ್ಥೋ ಹಾಗೂ ಟ್ರಾಮಾ ಸೆಂಟರನ ಮುಖ್ಯಸ್ಥರಾದ ಡಾ. ರವಿ ಪಾಟೀಲ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ವೈಧ್ಯರಿಗೆ ದೇವರ ಸ್ಥಾನಮಾನದಲ್ಲಿ ಕಾನ್ನುವ ದಿನಮಾನಗಳಲ್ಲಿ ನಾವು ದುಡ್ಡಿಗಾಗಿ ಚಿಕಿತ್ಸೆಗಳನ್ನು ನೀಡದೆ ಬರುವ ರೋಗಿಗಳಿಗೆ ಮದ್ದು ನೀಡುವುದರ ಮೂಲಕ ಸಮಾಜ ನಮ್ಮ ಮೇಲೆ ಇಟ್ಟಿರುವ ನಂಬಿಕೆಗಳನ್ನು ಉಳಸಿಕೊಳ್ಳಬೇಕೆಂದರು.

ವಿಶ್ವ ವೈಧ್ಯರ ದಿನಾಚರಣೆಯಲ್ಲಿ ಸೆಂಟರನ ವೈಧ್ಯಕೀಯ, ವೈಧ್ಯಕೀಯೇತರ ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

ಹುಬ್ಬಳ್ಳಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ತಪ್ಪಿದ ದೊಡ್ಡ ದುರಂತಹುಬ್ಬಳ್ಳಿಯಲ್ಲಿ ನಿನ್ನೆ ಮಧ್ಯ ರಾತ್ರಿ ಎರಡು ಗಂಟೆ ಸುಮಾರಿಗೆ ಎಗ್ ರೈಸ್ ಅಂಗಡಿಯಲ...
02/07/2025

ಹುಬ್ಬಳ್ಳಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ತಪ್ಪಿದ ದೊಡ್ಡ ದುರಂತ

ಹುಬ್ಬಳ್ಳಿಯಲ್ಲಿ ನಿನ್ನೆ ಮಧ್ಯ ರಾತ್ರಿ ಎರಡು ಗಂಟೆ ಸುಮಾರಿಗೆ ಎಗ್ ರೈಸ್ ಅಂಗಡಿಯಲ್ಲಿ ಸಿಲೆಂಡರ್ ಬ್ಲಾಸ್ಟ್ ಆಗಿದ್ದು ದೊಡ್ಡ ದುರಂತ ತಪ್ಪಿದೆ.

ಹುಬ್ಬಳ್ಳಿ ಪದ್ಮ ಟಾಕೀಸ್ ಹತ್ತಿರ ಎಗ್ ರೈಸ್ ಅಂಗಡಿಯಲ್ಲಿ ನಿನ್ನೆ ಮಧ್ಯ ರಾತ್ರಿ ಸಿಲಿಂಡರ್ ಬ್ಲಾಸ್ಟ್ ಆಗಿದ್ದು. ಅಂಗಡಿಯಲ್ಲಿ ಯಾರು ಇಲ್ಲದಿದ್ದರಿಂದ.
ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನು ಸಿಲಿಂಡರ್ ಬ್ಲಾಸ್ಟ್ ಆದ ರಭಸಕ್ಕೆ ಅಂಗಡಿಯ ಮೇಲ್ಚಾವಣಿ ಹಂಚುಗಳು ಪುಡಿ ಪುಡಿಯಾಗಿವೆ. ಇದು ಅಂಗಡಿಯಲ್ಲಿದ್ದ ವಸ್ತುಗಳು ನಾಶವಾಗಿದ್ದು. ಸ್ಥಳಕ್ಕೆ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗಲೇ ಚಿಗರಿ ಬಸ್ಸನ ಎಕ್ಸೆಲ್ ಕಟ್, ತಪ್ಪಿದ ಅನಾಹುತ.... ಹೆಚ್‌ಡಿಬಿಆರ್‌ಟಿಎಸ್ ಡಿವೈಡರ್ ಗ್ರೀಲ್‌ಗೆ ಬಸ್ಸ ...
02/07/2025

ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗಲೇ ಚಿಗರಿ ಬಸ್ಸನ ಎಕ್ಸೆಲ್ ಕಟ್, ತಪ್ಪಿದ ಅನಾಹುತ.... ಹೆಚ್‌ಡಿಬಿಆರ್‌ಟಿಎಸ್ ಡಿವೈಡರ್ ಗ್ರೀಲ್‌ಗೆ ಬಸ್ಸ ಡಿಕ್ಕಿ, ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ.

ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗಲೇ ಚಿಗರಿ ಬಸ್ಸನ ಎಕ್ಸೆಲ್ ಕಟ್ಟಾಗಿದ ಪರಿಣಾಮ ಚಿಗರಿ ಬಸ್ಸ ಅಪಘಾತವಾಗಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಧಾರವಾಡದ ಟೋಲನಾಕಾ ಬಳಿ‌ ಇಂದು ನಡೆದಿದೆ.

ಧಾರವಾಡದಿಂದ ಹೆಚ್ ಡಿ ಬಿ ಆರ್ ಟಿಎಸ್ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಧಾರವಾಡದ ಟೋಲ‌ನಾಕಾ ಬಳಿ ಈ ದುರ್ಘಟನೆ ನಡೆದಿದ್ದು, ಬಾರಿ ಅನಾಹುತವೊಂದು ತಪ್ಪಿದಂತಾಗಿದೆ. ಬಸ್ಸನ ಎಕ್ಸೆಲ್ ಕಟ್ಟಾಗಿದ್ದರಿಂದ ಚಿಗರಿ ಬಸ್ಸ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದಾಗಿ ರಸ್ತೆ ಡಿವೈಡರ್‌ಗೆ ಬಸ್ಸ ಡಿಕ್ಕಿಯಾಗಿದೆ.

ಬಸ್ಸ ಹೀಗೆ ಅಘಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ಬಸ್ಸನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನೂ ಘಟನಾ ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ‌ಭೇಟಿ ನೀಡಿ ಪರಿಶೀಲನೆ ಕೈಗೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.

ಪರಿಹಾರ ನೀಡಿ ಅಥವಾ ನನ್ನನ್ನು ಸ್ಮಶಾನಕ್ಕೆ ಕಳುಹಿಸಿ…ದಾನಪ್ಪ ಹಡಪದಕಳೆದಕೊಂಡ ಅಂಗಡಿಗೆ ಪರಿಹಾರವೋ  ಅಥವಾ ಸ್ಮಶಾನವೋ ಎನ್ನುತ್ತಾ ಕಳೆದ 6-7 ತಿಂಗ...
02/07/2025

ಪರಿಹಾರ ನೀಡಿ ಅಥವಾ ನನ್ನನ್ನು ಸ್ಮಶಾನಕ್ಕೆ ಕಳುಹಿಸಿ…ದಾನಪ್ಪ ಹಡಪದ

ಕಳೆದಕೊಂಡ ಅಂಗಡಿಗೆ ಪರಿಹಾರವೋ ಅಥವಾ ಸ್ಮಶಾನವೋ ಎನ್ನುತ್ತಾ ಕಳೆದ 6-7 ತಿಂಗಳುಗಳಿಂದ ಗಟಾರ ನಿರ್ಮಾಣದ ಹೆಸರಿನಲ್ಲಿ ತೆರವುಗೊಂಡ ಅಂಗಡಿಯ ಮುಂದೆ ಕಣ್ಣೀರುಡುತ್ತಾ ಕಾಯುತ್ತಿರುವ ಕ್ಷೌರಿಕನ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಇದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಪಟ್ಟಣದ ದಾನಪ್ಪಾ ಮಹಾಲಿಂಗಪ್ಪ ಹಡಪದ ಅವರ ಕಥೆಯಾಗಿದೆ.

ದಾನಪ್ಪನ ತಂದೆ ಮಹಾಲಿಂಗಪ್ಪ ಖುಲ್ಲಾ ಜಾಗೆಯನ್ನು 1951 ರಲ್ಲಿ ಖರೀದಿಸಿದ್ದಾರೆ. ದಾನಪ್ಪಾ 1990 ರಲ್ಲಿ ಕೆನರಾ ಬ್ಯಾಂಕ್ನಲ್ಲಿ ಸಾಲ ಮಾಡಿ ಅಂಗಡಿ ನಿರ್ಮಿಸಿ ಕ್ಷೌರಿಕ ಕೆಲಸ ನೀರ್ವಹಿಸುತ್ತ 12 ಜನರ ಬಾಳಿಗೆ ಬೆಳಕಾಗಿದ್ದ. ಆದರೆ ವಿಧಿಯಾಟ ಎನ್ನುವಂತೆ ಕಳೆದ ನವೆಂಬರನಲ್ಲಿ ಗಟಾರ ನಿರ್ಮಾಣದ ಹೆಸರಿನಲ್ಲಿ ಮುಂಜಾನೆ 5ರ ಸುಮಾರಿಗೆ ಅಂಗಡಿ ಕಳೆದುಕೊಂಡು ಎಲ್ಲರ ಮುಖ ಸ್ವಚ್ಛ ಮಾಡುತ್ತಿದ್ದ ದಾನಪ್ಪ ತನ್ನ ಮುಖದಲ್ಲಿ ನೀರು ತುಂಬಿಕೊಂಡು ಬೀದಿಗೆ ಬಿದ್ದಿದ್ದಾನೆ.

ಕಳೆದುಕೊಂಡ ಅಂಗಡಿಗೆಗೆ ಪರಿಹಾರಕ್ಕಾಗಿ ದಾನಪ್ಪ ಅಧಿಕಾರಿಗಳಿಂದ ಹಿಡಿದು ಅಧಿಕಾರ ನಡೆಸುತ್ತಿರುವ ಜನಪ್ರತಿನಿಧಿಗಳಿಗೂ ಮನವಿ ಮಾಡಿಕೊಂಡರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ನೋಂದಿರುವ ದಾನಪ್ಪ ಹಡಪದ ಬದುಕು ಕಳೆದುಕೊಂಡಿರುವ ನಮ್ಮಗೆ ಪರಿಹಾರ ನೀಡಿ ಇಲ್ಲವೋ ಸಶ್ಮಾನಕ್ಕೆ ಕಳುಹಿಸಿ ಬೀಡಿ ಎನ್ನುತ್ತಿದ್ದಾನೆ.

ಇನ್ನಾದರೂ ದಾನಪ್ಪನ ಕಣ್ಣೀರು ಓರಿಸುವ ಮೂಲಕ ಅವರ ಕುಟುಂಬಕ್ಕೆ ಸರ್ಕಾರ ಆಸರೆಯಾಗುತ್ತದೇಯಾ ಕಾದು ನೋಡಬೇಕು.

02/07/2025

02/07/2025 Afternoon Kannada live News Bulletin IN NEWS LIVE

02/07/2025

ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವುದೇ ಟೀಂ ಇಲ್ಲ
ರಾಮನಗರ ಶಾಸಕರು ಏನು ಹೇಳಿಕೆ ಕೊಟ್ಟಿದ್ದಾರೋ
ಅದು ಅವರ ವೈಯಕ್ತಿಕ ಅಭಿಪ್ರಾಯ
ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆ

ಬೆಳಗಾವಿ:ಹಿಂಡಲಗಾ ಗ್ರಾಮದ ಪೈಪ್ ಲೈನ್ ರಸ್ತೆಯ ವಿಜಯನಗರ ಎಂ.ಇ.ಎಸ್ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಗಣೇಶ ಮಂದಿರ ಕಟ್ಟಡದ ಮೇಲ್ಚಾವಣ...
02/07/2025

ಬೆಳಗಾವಿ:
ಹಿಂಡಲಗಾ ಗ್ರಾಮದ ಪೈಪ್ ಲೈನ್ ರಸ್ತೆಯ ವಿಜಯನಗರ ಎಂ.ಇ.ಎಸ್ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಗಣೇಶ ಮಂದಿರ ಕಟ್ಟಡದ ಮೇಲ್ಚಾವಣಿಗೆ ಕಾಂಕ್ರೀಟ್ (ಸ್ಲ್ಯಾಬ್) ಹಾಕುವ ಕಾಮಗಾರಿಗೆ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್‌ ಹೆಬ್ಬಾಳಕರ್ ಸೇರಿ ಪೂಜೆಯನ್ನು ನೆರವೇರಿಸಿ, ಚಾಲನೆ ನೀಡಿದರು.

ಸುಮಾರು 1.25 ಕೋಟಿ ರೂ,ಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳಲಿದೆ. ಈಗಾಗಲೇ ಗುಣಮಟ್ಟದ ವಸ್ತುಗಳನ್ನು ಉಪಯೋಗಿಸಿ, ಸುಸಜ್ಜಿತ ರೈತ ಸಮುದಾಯ ಭವನ ನಿರ್ಮಾಣ‌ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಮೃಣಾಲ್‌ ಹೆಬ್ಬಾಳಕರ್ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವಿಠ್ಠಲ ದೇಸಾಯಿ, ರಾಹುಲ್ ಉರನಕರ್, ಪ್ರವೀಣ ಪಾಟೀಲ, ಗಜಾನನ ಬಾಂದೇಕರ್, ಅಶೋಕ್ ಕಾಂಬಳೆ, ಸೀಮಾ ದೇವಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಮಿತಾ ಚಂದರಗಿ, ಇತರ ಪಂಚಾಯತ್ ಸಿಬ್ಬಂದಿ ಸಂತೋಷ್ ನಾಯ್ಕ್, ದೇವಪ್ಪ ಜತ್ತಾಪ್, ಸ್ಥಳೀಯರಾದ ಅಶೋಕ ಗಾಡಗೆ, ಸಂಜಯ ಗವಳಿ ಮುಂತಾದವರು ಉಪಸ್ಥಿತರಿದ್ದರು

ಚಿಕ್ಕಬಳ್ಳಾಪುರ :ಚಿಕ್ಕಬಳ್ಳಾಪುರದ ಶ್ರೀ ನಂದಿ ಗಿರಿಧಾಮದಲ್ಲಿ ನಡಿಯಲಿರುವ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಆಗಮಿಸಿರುವ ಮಹಿಳಾ ಮತ್ತು ಮಕ್ಕಳ...
02/07/2025

ಚಿಕ್ಕಬಳ್ಳಾಪುರ :

ಚಿಕ್ಕಬಳ್ಳಾಪುರದ ಶ್ರೀ ನಂದಿ ಗಿರಿಧಾಮದಲ್ಲಿ ನಡಿಯಲಿರುವ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಆಗಮಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಐತಿಹಾಸಿಕ ಶ್ರೀ ಭೋಗ ನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಆಶೀರ್ವಾದ ಪಡೆದರು.

ಇದೇ ವೇಳೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು.

Address

M B Square Building 4th Floor S P Office Road
Belgaum
590001

Alerts

Be the first to know and let us send you an email when Innews posts news and promotions. Your email address will not be used for any other purpose, and you can unsubscribe at any time.

Contact The Business

Send a message to Innews:

Share