Vibrant mysore news

Vibrant mysore news ವಿಶಿಷ್ಟ -ವಿಭಿನ್ನ -ರೋಚಕ ಸುದ್ದಿಗಳು !!

20/07/2022
14/04/2022

Here’s an exclusive update of South India’s biggest action film live from Hassan SBG Theater.

11/03/2022
24/11/2021

ಆಲೂರು-ಪೊಲೀಸರ'ಭಾರಿ-ಭೇಟೆ'ಬರೋಬ್ಬರಿ'೧೯ಲಕ್ಷ' ರೂಪಾಯಿಗಳ'ಚಿನ್ನಾಭರಣ ವಶ'ಮೇ ತಿಂಗಳ 24 ನೇ ತಾರೀಕಿನಂದು ಪಟ್ಟಣದ ಗಂಗಮ್ಮ ಎಂಬುವರ ಮನೆಯ....

23/11/2021

ಬೇಲೂರು-'ಹರ್ಷಿತ್ ಲಿಂಗೇಶ್' ಅಪಘಾತದಲ್ಲಿ ತೀರಿಹೋದ-'ರಣಘಟ್ಟ ಯೋಜನೆ'ಗೆ ಅನುಮತಿ ದೊರೆಯಿತು..!?ಬಾರದ ಲೋಕಕ್ಕೆ ಹೊರಟು ಹೋದ ಮಗನ ಮರೆಯಲು .....

20/11/2021

ಸಕಲೇಶಪುರ-"ಬಿಸ್ಲೆ ವೀಕ್ಷಣಾ ಗೋಪುರ ಸಮೀಪ ಕೊಳೆತ ಶವ ಪತ್ತೆ"ಬಿಸ್ಲೆ ವೀಕ್ಷಣಾ ಗೋಪುರ ಸಮೀಪ ವೃದ್ಧರೋರ್ವರ ಶವ ಕೊಳೆತ ಸ್ಥಿತಿಯಲ್ಲಿ ಶ....

01/11/2021

ರಾಜಸ್ಥಾನದ ಯುವಕನಿಂದ ಸೈಕಲ್ ಯಾತ್ರೆ ಪರಿಸರ ನೀರಿನ ಜಾಗೃತಿ
ಪರಿಸರ ಮತ್ತು ನೀರನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ರಾಜಸ್ಥಾನದ ಯುವಕನೊಬ್ಬ ಸೈಕಲ್ ಯಾತ್ರೆ ಮುಖೇನ ದೇಶದ ಪರ್ಯಟನೆ ಮಾಡುತ್ತಿದ್ದಾರೆ ಸೋಮವಾರ ಕೊಡಗಿನ ಮುಖೇನ ಆಗಮಿಸಿದ ಅವರ ಹೆಸರು
ನರ್ಪಟ್ ಸಿಂಗ್ ಅವರು 2019ರ ಜನವರಿ 27ರಂದು ಜಮ್ಮುವಿನ ವಿಮಾನನಿಲ್ದಾಣದಿಂದ ತನ್ನ ಸೈಕಲ್ ಅಭಿಯಾನ ಆರಂಭಿಸಿದರು ದೇಶದ ಸುಮಾರು 22 ಸಾವಿರ ಕಿಲೋಮೀಟರ್ ಸೈಕಲ್ ಯಾತ್ರೆ ಮಾಡುವ ಗುರಿಯನ್ನು ಇವರು ಹೊಂದಿದ್ದಾರೆ ಹಿಮಾಚಲಪ್ರದೇಶ ಉತ್ತರಕಾಂಡ ಪಂಜಾಬ್ ಹರಿಯಾಣ ಉತ್ತರಪ್ರದೇಶ ರಾಜಸ್ಥಾನ ಮಧ್ಯಪ್ರದೇಶ ಗುಜರಾತ್ ಮಹಾರಾಷ್ಟ್ರ ಗೋವಾ ತಮಿಳುನಾಡು ಗಳಲ್ಲಿ ಸಂಚರಿಸಿದ್ದು ಇದೀಗ ಕರ್ನಾಟಕದ ಅರಕಲಗೂಡಿಗೆ ಆಗಮಿಸಿದ್ದಾರೆ ಗುರುವಾರ ಕೇರಳಕ್ಕೆ ರಾಜ್ಯಕ್ಕೆ ತೆರಳಿದ್ದಾರೆ ಸೈಕಲ್ ಮೂಲಕ ನಡೆಸುವ ಅಭಿಯಾನದ ಮೂಲಕ ಆಯಾ ಪ್ರದೇಶದ ಮಂದಿಗೆ ನೀರು ಪರಿಸರ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಾರೆ ಅಲ್ಲದೆ ಪ್ರತಿದಿನ ಅವರು ಹೋದ ಪ್ರದೇಶದಲ್ಲಿ ಎರಡು ಅಥವಾ ಮೂರು ಗಿಡಗಳು ಬೀಜಗಳನ್ನು ನೀಡುತ್ತಾರೆ ನೀರಿನ ಸಂರಕ್ಷಣೆಯ ಬಗ್ಗೆ ಇವರಿಗೆ ಆಸಕ್ತಿ ಮೂಡಲು ಕಾರಣವಿದೆ ರಾಜಸ್ಥಾನದ ಜೋದ್ಪುರ್ ಜೈಸಲ್ಮೇರ್ ಪ್ರದೇಶದಲ್ಲಿ ಸಾಕಷ್ಟು ನೀರು ನೋಡಿದ್ದಾರಂತೆ ಆದರೆ ಇತ್ತೀಚಿನ ದಿನಗಳಲ್ಲಿ ಆ ಪ್ರದೇಶ ಬರಗಾಲಕ್ಕೆ ತುತ್ತಾಗಿದ್ದು ನೀರಿ ಗೋಸ್ಕರ ಕಿಲೋಮೀಟರ್ ನಷ್ಟು ಕಲಿಯಬೇಕಾಗಿದೆ ಇದನ್ನು ಅರಿತು ಮುಂದಿನ ತಲೆಮಾರಿಗೆ ನೀರಿನ ಸಮಸ್ಯೆ ತಲೆ ತೋರಬಾರದು ಎಂದು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ

01/11/2021

ಅರಸೀಕೆರೆ 66 ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಅರಸೀಕೆರೆಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಸಂತ ಮೇರಿ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರಣದಿಂದಾಗಿ ಸರಳವಾಗಿ ನಡೆದ ಸಮಾರಂಭ ಅಚ್ಚುಕಟ್ಟಾಗಿ ಮೂಡಿ ಬಂತು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕ ಕೆಎಂ ಶಿವಲಿಂಗೇಗೌಡರು ಕರ್ನಾಟಕ ಏಕೀಕರಣಗೊಂಡು 66 ವರ್ಷಗಳು ಕಳೆದಿವೆ ನಮ್ಮ ಕನ್ನಡ ನಾಡು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುತ್ತದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಸಾಧು-ಸಂತರು-ದಾಸರು- ಶಿವಶರಣರು - ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ.

ಇಂತಹ ನಾಡಿನಲ್ಲಿ ಹುಟ್ಟಿರುವುದು ನಮ್ಮೆಲ್ಲರ ಅದೃಷ್ಟ. ನವೆಂಬರ್ ಒಂದರಂದು ನಾವೆಲ್ಲರೂ ಅತ್ಯಂತ ಸಡಗರ-ಸಂಭ್ರಮದಿಂದ ಎಲ್ಲ ಜಾತಿ ಮತ ಧರ್ಮಗಳ ಜನರು ಸೇರಿ ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ ಸರ್ವ ಜನಾಂಗಗಳ ಶಾಂತಿಯ ತೋಟ ಸಂಪದ್ಭರಿತ ನಾಡು ನಮ್ಮ ನಾಡು ಎಂದರು ಸದ್ಯದಲ್ಲೇ ನೀರಾವರಿ ಹೋರಾಟ ಮಾಡುವುದಾಗಿ ಹೇಳಿದರು ಭದ್ರಾ ಮೇಲ್ದಂಡೆ ಯಿಂದ ನೀರು ಪಡೆಯುವುದು ರೈತರ ಜಮೀನಿಗೆ ನೀರು ಒದಗಿಸುವುದು ನನ್ನ ಮುಂದಿನ ಗುರಿ ಎಂದರು ತಹಶೀಲ್ದಾರ್ ಸಂತೋಷ್ ಮಾತನಾಡಿದರು ರಾಜ್ಯೋತ್ಸವ ಸಮಾರಂಭದಲ್ಲಿ ರಂಗಕಲಾವಿದ ಪುಟ್ಟಣ್ಣಯ್ಯ ಪತ್ರಕರ್ತ ಕರವೇ ಅಧ್ಯಕ್ಷ ಹೇಮಂತಕುಮಾರ್ ಶಿಕ್ಷಕಿ ಮಮತಾ ರವರುಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 16ಕ್ಕೂ ಹೆಚ್ಚು ಗಣ್ಯರಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಕೆಎಲ್ ಡಿಪಿ ಉಪಾಧ್ಯಕ್ಷ ಜಿ ವಿ ಟಿ ಬಸವರಾಜ್ ನಗರಸಭೆಯ ಅಧ್ಯಕ್ಷ ಗಿರೀಶ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಇಓ ನಟರಾಜ್ ಡಿವೈಎಸ್ಪಿ ಬಿಇಓ ಮೋಹನ್ ಕುಮಾರ್ ಮುಂತಾದವರಿದ್ದರು ಹಾಜರಿದ್ದರು

01/11/2021

ನಂಜನಗೂಡು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ 66 ನೆಯ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು .
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಹರ್ಷವರ್ಧನ ತಾಲ್ಲೂಕು ದಂಡಾಧಿಕಾರಿಗಳಾದ ಬೈರಯ್ಯ ನಗರಸಭೆ ಅಧ್ಯಕ್ಷರಾದ ಮಹಾದೇವಸ್ವಾಮಿ ನಗರಸಭೆಯ ಸದಸ್ಯರು ಮತ್ತಿತರರು ಭಾಗವಹಿಸಿದ್ದರು

01/11/2021

ಮೈಸೂರು ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಗೋಕುಲಂನಲ್ಲಿನ ವಿದೇಶಿಯರಿಗೆ ಹಾಗೂ ಅನ್ಯಭಾಷಿಕ ಟೆಕ್ಕಿಗಳಿಗೆ ಸಿಹಿ ವಿತರಿಸಿ, ಕನ್ನಡ ಧ್ವಜ ನೀಡಲಾಯಿತು.

ನಂತರ ಕರ್ನಾಟಕ ರಾಜ್ಯ ಸ್ಥಾಪನೆ, ಈ ಹಿಂದೆ ಆಳಿದವರ ಇತಿಹಾಸ ಹಾಗೂ ನಾಡಿನ ಪರಂಪರೆ ಬಗ್ಗೆ ತಿಳಿಸಲಾಯಿತು.

ಈ ವೇಳೆ ಮಾತನಾಡಿದ ಇಂಗ್ಲೆಂಡಿನ ಎಲಿನಾ "ಕರ್ನಾಟಕ ಅತ್ಯಂತ ಸುಂದರ ನಾಡು. ಹಲವಾರು ವರ್ಷಗಳಿಂದ ಮೈಸೂರಿನೊಂದಿಗೆ ಒಡನಾಟ ಹೊಂದಿದ್ದು. ಇಲ್ಲಿನ ಜನ ಬಹಳ ಒಳ್ಳೆಯ ಮನಸ್ಸಿನವರು. ಇಂದು ಕನ್ನಡದ ಹಬ್ಬದಲ್ಲಿ ಭಾಗಿಯಾಗಿರುವುದು ಬಹಳ ಸಂತೋಷವಾಗಿದೆ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯ" ಎಂದು ತಿಳಿಸಿದರು.

ವಿದೇಶಿಯರು ಸಹ ಸಂಭ್ರಮಿಸಿ ಭಾಗವಹಿಸಿ ಶುಭಾಶಯ ಕನ್ನಡಿಗರಿಗೆ ಶುಭಾಶಯ ಕೋರಿದ್ದು ವಿಶೇಷವಾಗಿತ್ತು. ಕೇರಳ, ಆಂಧ್ರ ಹಾಗೂ ತಮಿಳುನಾಡಿನ ಟೆಕ್ಕಿಗಳು ಸಹ ಭಾಗಿಯಾಗಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿತು.

ಮೈಸೂರು ರಕ್ಷಣಾ ವೇದಿಕೆ
ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್ ,ಮುಡಾ ಸದಸ್ಯರಾದ ಲಕ್ಷ್ಮೀದೇವಿ ,ಕೆಂಪೇಗೌಡ ಸಹಕಾರಿ ಸಂಘ ಅಧ್ಯಕ್ಷ ಗಂಗಾಧರ ಗೌಡ ,ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ,ಜೀವಧಾರ ಪದವಿ ಕ್ಷೇತ್ರದ ಕಾರ್ಯದರ್ಶಿ ವರಲಕ್ಷ್ಮಿ ಅಜಯ್ ,ನವೀನ್ ಕೆಂಪಿ,
ಗೋಕುಲಂನ ಪ್ರಸಿದ್ದ ಚಕ್ರ ಹೌಸ್ ನ ರಾಜೇಶ್, ಮಂಜು, ಇಂಗ್ಲೆಂಡಿನ ಎಲೆನಾ, ಉತ್ತರ ಪ್ರದೇಶದ ಆಯುಷಿ, ಶೀತಲ್, ಚಿರಾಗ್, ಋಷಿಕ, ಕೇರಳದ ಗೋಕುಲ್, ಗೋವಾದ ಹೆಲೆನ್, ಚಂದ್ರಕಾಂತ್ ಸೇರಿದಂತೆ ಹಲವರು ಭಾಗವಹಿಸಿದ್ದರು.

01/11/2021

ರಾಜು ಡಾಕ್ಟರ್ ಹಾರ್ಟ್ ಅಟ್ಯಾಕ್ ಗೆ ಕಾರಣಗಳೇನು ಎಂದು ತಿಳಿಸಿಕೊಟ್ಟಿದ್ದಾರೆ.

01/11/2021

ಪುನೀತ್ ರಾಜಕುಮಾರ್ ಮುಂದಿನ ವರ್ಷ ಆರಾಧನೆ ಸಮಾರಂಭಕ್ಕೆ ಮತ್ತೊಮ್ಮೆ ಬರುತ್ತೇನೆ ಎಂದು ಭರವಸೆ ನೀಡಿದ್ದಾಗ ರಾಯರ ವಿಗ್ರಹ ಅಲ್ಲಾಡಿ ವೀಣೆ ಕೆಳಗೆ ಜಾರುತ್ತೆ, ಇದನ್ನು ಕಾಕತಾಳೀಯ / ದೈವ ನಿರ್ಧಾರವೆನ್ನೋಣವೇ ನಿಮಗಬಿಟ್ಟ ವಿಚಾರ. ಆದರೆ ನನಗಂತು ದೇವರು ತಪ್ಪುಮಾಡಿದ ಅನ್ಸುತ್ತೆ.

Address

Maroor (chattige )
Belur
573115

Alerts

Be the first to know and let us send you an email when Vibrant mysore news posts news and promotions. Your email address will not be used for any other purpose, and you can unsubscribe at any time.

Contact The Business

Send a message to Vibrant mysore news:

Share