Eshwar Khandre followers 2023

Eshwar Khandre followers 2023 ��

ತಾಲೂಕಾ ಚಿಂಚೋಳಿ ಹಾಗೂ ಕಾಳಗಿ ತಾಲೂಕಿನಲ್ಲಿ ಕೈಗೊಂಡ ಪ್ರವಾಸದ ಬಗ್ಗೆ ಇಂದಿನ ಪತ್ರಿಕಾ ಪ್ರಕಟಣೆಗಳು.
03/09/2025

ತಾಲೂಕಾ ಚಿಂಚೋಳಿ ಹಾಗೂ ಕಾಳಗಿ ತಾಲೂಕಿನಲ್ಲಿ ಕೈಗೊಂಡ ಪ್ರವಾಸದ ಬಗ್ಗೆ ಇಂದಿನ ಪತ್ರಿಕಾ ಪ್ರಕಟಣೆಗಳು.

ಮುಂಗಾರು ಅತಿವೃಷ್ಟಿಯಿಂದಾಗಿ ಕಾಳಗಿ ತಾಲೂಕಿನಲ್ಲಿ ಹತ್ತು ಸಾವಿರ ಹೆಕ್ಟೆರ್ ಬೆಳೆ ಹಾನಿಯಾಗಿದ್ದು, 62 ಮನೆಗಳು ಬಿದ್ದಿವಿ, ರೈತರಿಗೆ ಸೂಕ್ತ ಪರಿ...
03/09/2025

ಮುಂಗಾರು ಅತಿವೃಷ್ಟಿಯಿಂದಾಗಿ ಕಾಳಗಿ ತಾಲೂಕಿನಲ್ಲಿ ಹತ್ತು ಸಾವಿರ ಹೆಕ್ಟೆರ್ ಬೆಳೆ ಹಾನಿಯಾಗಿದ್ದು, 62 ಮನೆಗಳು ಬಿದ್ದಿವಿ, ರೈತರಿಗೆ ಸೂಕ್ತ ಪರಿಹಾರ ದೊರಕಿಸಿ ಕೊಡುವ ಸಲುವಾಗಿ ಕೆಲ ಹೋಲಗಳಿಗೆ ಸ್ವಂತ ಭೇಟಿ ನೀಡಿದ್ದೇನೆ. ಪ್ರಕೃತಿ ವಿಕೋಪದ ಅಡಿಯಲ್ಲಿ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ರೈತರು ಭಯ ಪಡುವ ಅಗತ್ಯವಿಲ್ಲ, ಸರ್ಕಾರ ರೈತರ ಜೊತೆಯಲ್ಲಿದ್ದೆ.

ನಿನ್ನೆ ರಾತ್ರಿ ನಮ್ಮ ಖಂಡ್ರೆ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾದ ಪರಿಸರ ಸ್ನೇಹಿ ಗಣೇಶನಿಗೆ ಕುಟುಂಬ ಸಮೇತ ಭಕ್ತಿಪೂರ್ವಕವಾಗಿ ಪೂಜೆ ನೆರವೇರಿಸಿ, ಭ...
03/09/2025

ನಿನ್ನೆ ರಾತ್ರಿ ನಮ್ಮ ಖಂಡ್ರೆ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾದ ಪರಿಸರ ಸ್ನೇಹಿ ಗಣೇಶನಿಗೆ ಕುಟುಂಬ ಸಮೇತ ಭಕ್ತಿಪೂರ್ವಕವಾಗಿ ಪೂಜೆ ನೆರವೇರಿಸಿ, ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

ಗಣಪತಿ ಬಪ್ಪಾ ಮೊರಿಯಾ🎉 Sagar Khandre

03/09/2025
ಬೀದರ್ ಲೋಕಸಭಾ ವ್ಯಾಪ್ತಿಯ ತಾಲೂಕಾ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಸೋಮ ನಿಂಗದಲ್ಲಿ, ಕೋರವಿ, ಕೊಡ್ದಲ್ಲಿ ಹಾಗೂ ಕೊಡ್ಲಿ ತಾಂಡಾ ಪ್ರದೇಶಗಳಲ್ಲಿ...
02/09/2025

ಬೀದರ್ ಲೋಕಸಭಾ ವ್ಯಾಪ್ತಿಯ ತಾಲೂಕಾ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಸೋಮ ನಿಂಗದಲ್ಲಿ, ಕೋರವಿ, ಕೊಡ್ದಲ್ಲಿ ಹಾಗೂ ಕೊಡ್ಲಿ ತಾಂಡಾ ಪ್ರದೇಶಗಳಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಸುಭಾಷ್ ರಾಥೋಡ್ ಹಾಗೂ ಇನ್ನಿತರ ಮುಖಂಡರೊಂದಿಗೆ ಅತಿವೃಷ್ಟಿಯಿಂದ ಹನಿಗೋಳಗಾದ ಹೋಲಗಳಿಗೆ ಭೇಟಿ ಕೊಟ್ಟು ರೈತರು ಬೆಳೆದ ಫಸಲು ಹಾಳಾಗಿದ್ದು ಗಮನಸಿದ್ದೇನೆ.

ಗ್ರಾಮಸ್ಥರ ಅಳಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಲು ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದೆನು.

ಕಳೆದ ವಾರದಿಂದ ಬೀದರ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಮನೆಗಳು ಕುಸಿದು ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂದು ಭಾಲ್ಕಿ ತಾಲ...
02/09/2025

ಕಳೆದ ವಾರದಿಂದ ಬೀದರ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಮನೆಗಳು ಕುಸಿದು ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂದು ಭಾಲ್ಕಿ ತಾಲೂಕಿನ 20 ರಿಂದ 50% ಕ್ಕಿಂತ ಹೆಚ್ಚು ಹಾನಿಗೊಳಗಾದ ಸುಮಾರು 36 ಸಂತ್ರಸ್ತ ಕುಟುಂಬಗಳಿಗೆ ತಲಾ 30 ಸಾವಿರ ರೂ. ಪರಿಹಾರದಂತೆ ಒಟ್ಟು 11 ಲಕ್ಷ ರೂ. ಪರಿಹಾರದ ಆದೇಶ ಪತ್ರಗಳನ್ನು ವಿತರಿಸಿ ಸಾಂತ್ವನ ಹೇಳಿದೆನು.

ಬರಿ ಭಾಲ್ಕಿಯಲ್ಲದೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕೂಡ ತ್ವರಿತವಾಗಿ ಪರಿಹಾರ ವಿತರಣೆ ನಡೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಸರ್ಕಾರ ಸದಾ ಸಂತ್ರಸ್ತ ಕುಟುಂಬಗಳ ಜೊತೆ ನಿಂತಿದೆ ಎಂದು ಭರವಸೆ ನೀಡಿದೆನು.

ಬೀದರ ಲೋಕಸಭಾ ವ್ಯಾಪ್ತಿಯ ತಾಲೂಕಾ ಚಿಂಚೋಳಿ ಮತಕ್ಷೇತ್ರದ ಅನೇಕ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನತೆ ಭಾ...
02/09/2025

ಬೀದರ ಲೋಕಸಭಾ ವ್ಯಾಪ್ತಿಯ ತಾಲೂಕಾ ಚಿಂಚೋಳಿ ಮತಕ್ಷೇತ್ರದ ಅನೇಕ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನತೆ ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ.

ಇಂದು ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಸುಭಾಷ್ ರಾಥೋಡ್ ಹಾಗೂ ಇನ್ನಿತರ ಮುಖಂಡರೊಂದಿಗೆ ನಾಗ್ ಇದಲಾಯಿ, ಪೋಲಕಪಳ್ಳಿ ತಾಂಡಾ, ಚಂದಾಪುರನ್ ಪಟೇಲ್ ಕಾಲೋನಿ ಹಾಗೂ ಕೊಲ್ಲೂರ್ ಗ್ರಾಮಗಳಿಗೆ ಭೇಟಿ ನೀಡಿ ರೈತರು ಬೆಳೆದ ಖರೀಫ್ ಬೆಳೆಗಳು ಸಂಪೂರ್ಣವಾಗಿ ನಷ್ಟಗೊಂಡಿರುವುದು ಗಮನಿಸಲಾಯಿತು.

ಗ್ರಾಮಸ್ಥರ ಅಳಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಲು ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದೆನು.

ಇಂದು ಭಾಲ್ಕಿ ಮತಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ನಿಗಮದಿಂದ ಜಾರಿಗೊಂಡಿರುವ ಗಂಗಾಕಲ್ಯಾಣ ಸಾಮೂಹಿಕ ಏತ ನೀರಾವರಿ ಯೋಜನೆ ಅಡಿಯಲ್ಲಿ...
02/09/2025

ಇಂದು ಭಾಲ್ಕಿ ಮತಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ನಿಗಮದಿಂದ ಜಾರಿಗೊಂಡಿರುವ ಗಂಗಾಕಲ್ಯಾಣ ಸಾಮೂಹಿಕ ಏತ ನೀರಾವರಿ ಯೋಜನೆ ಅಡಿಯಲ್ಲಿ ಆಯ್ಕೆಯಾದ 23 ಮಂದಿ ಫಲಾನುಭವಿಗಳಿಗೆ ಮೋಟಾರ್, ಪಂಪ್ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಅವರಿಗೆ ಶುಭ ಹಾರೈಸಿದೆನು.

ಅಲ್ಪಸಂಖ್ಯಾತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ರೈತರ ಬದುಕು ಸುಧಾರಣೆಗೆ ಹಾಗೂ ಕೃಷಿ ಉತ್ಪಾದಕತೆ ಹೆಚ್ಚಿಸಲು ಈ ಯೋಜನೆಗಳು ಮಹತ್ತರ ಪಾತ್ರವಹಿಸುತ್ತವೆ. ಫಲಾನುಭವಿಗಳು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಯಾಗಿ ಬೆಳೆಯಲೆಂದು ಹಾರೈಸುತ್ತೇನೆ.

ಇಂದು ಭಾಲ್ಕಿ ಪಟ್ಟಣದ ಎಪಿಎಂಸಿ ಹತ್ತಿರ ಹೊಸದಾಗಿ ನಿರ್ಮಿಸಲಾದ ಹೈಟೆಕ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ...
02/09/2025

ಇಂದು ಭಾಲ್ಕಿ ಪಟ್ಟಣದ ಎಪಿಎಂಸಿ ಹತ್ತಿರ ಹೊಸದಾಗಿ ನಿರ್ಮಿಸಲಾದ ಹೈಟೆಕ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಹಾಗೂ ಆವರಣ ಗೋಡೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದೆನು.

ಸುಮಾರು ₹2 ಕೋಟಿ 70 ಲಕ್ಷ ಅನುದಾನದೊಂದಿಗೆ ನಿರ್ಮಿಸಲಾದ ಈ ವಸತಿ ನಿಲಯವು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ವಾಸ್ತವ್ಯ, ಆಧುನಿಕ ಸೌಲಭ್ಯಗಳು ಹಾಗೂ ಸುರಕ್ಷಿತ ಪರಿಸರವನ್ನು ಒದಗಿಸಲಿದೆ.

ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ, ಉತ್ತಮ ಶಿಕ್ಷಣ ಪಡೆದು ಸಮಾಜದ ಪ್ರಗತಿಗೆ ಹೆಮ್ಮೆ ತರುವ ಸಾಧನೆಗಳನ್ನು ಮಾಡಲಿ ಎಂಬುದು ನನ್ನ ಹಾರೈಕೆ.

Warmest birthday wishes to Andhra Pradesh DCM And Forest, Environment Minister Pawan Kalyan Garu.It was a pleasure meeti...
02/09/2025

Warmest birthday wishes to Andhra Pradesh DCM And Forest, Environment Minister Pawan Kalyan Garu.

It was a pleasure meeting recently in Bangalore for a wide-ranging discussion on man-animal conflict issues affecting both our states. Looking forward to continued collaboration on these important matters. May this year bring you success and happiness.

Address

Bhalki

Alerts

Be the first to know and let us send you an email when Eshwar Khandre followers 2023 posts news and promotions. Your email address will not be used for any other purpose, and you can unsubscribe at any time.

Share

Category