Eshwar Khandre followers 2023

Eshwar Khandre followers 2023 ��

🌿 ಆನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ! 🐘ರಾಜ್ಯದಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷ ನಿಯಂತ್ರಿಸಲು, ಐಐಎಸ್ಸಿ (IISc)ಯೊಂದಿ...
16/07/2025

🌿 ಆನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ! 🐘

ರಾಜ್ಯದಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷ ನಿಯಂತ್ರಿಸಲು, ಐಐಎಸ್ಸಿ (IISc)ಯೊಂದಿಗೆ ಅರಣ್ಯ ಇಲಾಖೆ ಐತಿಹಾಸಿಕ ಒಡಂಬಡಿಕೆ ಮಾಡಿಕೊಂಡಿದೆ.

ಈ ಒಡಂಬಡಿಕೆ ಮೂಲಕ ಆಧುನಿಕ ತಂತ್ರಜ್ಞಾನಗಳಾದ ಸ್ಯಾಟಲೈಟ್ ಟೆಲಿಮೆಟ್ರಿ, ಕ್ಯಾಮೆರಾ ಟ್ರಾಪ್, ಜಿ.ಐ.ಎಸ್ ಮಾದರಿಗಳ ಸಹಾಯದಿಂದ ಆನೆಪಥ ಮತ್ತು ಆವಾಸಸ್ಥಾನಗಳನ್ನು ಗುರುತಿಸಿ, ಸಂರಕ್ಷಿಸಲಾಗುತ್ತದೆ.

🌾 ರೈತರ ಬೆಳೆ ರಕ್ಷಣೆ, 🛰️ ಮುನ್ನೆಚ್ಚರಿಕೆ ವ್ಯವಸ್ಥೆ, 🔔 ಘಂಟೆಗಳ ಮೂಲಕ ಎಚ್ಚರಿಕೆ, ಮತ್ತು 📊 ದತ್ತಾಂಶ ಆಧಾರಿತ ನಿರ್ಧಾರಗಳನ್ನು ರೂಪಿಸುವ ಮಹತ್ವದ ಪ್ರಯತ್ನ ಇದಾಗಿದೆ.

2025 ರಿಂದ 2029 ರವರೆಗೆ ₹4.74 ಕೋಟಿಯ ಯೋಜನೆ ಅಡಿಯಲ್ಲಿ ಐದು ವರ್ಷಗಳ ಅವಧಿಗೆ ಈ ಕಾರ್ಯ ಕೈಗೊಳ್ಳಲಾಗುತ್ತಿದೆ. ಮಾನವ–ಆನೆ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಈ ಒಡಂಬಡಿಕೆ ಬಹುಮುಖ ಪಾತ್ರ ವಹಿಸಲಿದೆ ಎಂಬ ನಂಬಿಕೆ ನಮಗಿದೆ.

🙏 ಈ ಯೋಜನೆಯಲ್ಲಿ ಸಹಕರಿಸುತ್ತಿರುವ ಭಾರತೀಯ ವಿಜ್ಞಾನ ಸಂಸ್ಥೆ (IISc), ಇತರ ಪಾರ್ಟ್‌ನರ್ ಸಂಸ್ಥೆಗಳೆಲ್ಲರಿಗೂ ಧನ್ಯವಾದಗಳು.

ಕನ್ನಡ ಚಿತ್ರರಂಗದ ಹಿರಿಯ ನಟಿ, ‘ಅಭಿನಯ ಸರಸ್ವತಿ’ ಎಂದೇ ಹೆಸರುವಾಸಿಯಾಗಿದ್ದ ಶ್ರೀಮತಿ ಬಿ.ಸರೋಜಾದೇವಿ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು...
15/07/2025

ಕನ್ನಡ ಚಿತ್ರರಂಗದ ಹಿರಿಯ ನಟಿ, ‘ಅಭಿನಯ ಸರಸ್ವತಿ’ ಎಂದೇ ಹೆಸರುವಾಸಿಯಾಗಿದ್ದ ಶ್ರೀಮತಿ ಬಿ.ಸರೋಜಾದೇವಿ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು.

ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಸುಮಾರು 160ಕ್ಕೂ ಚಿತ್ರಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದ ಅವರ ಅಗಲಿಕೆಯಿಂದ, ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.

15/07/2025
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ Eshwar Khandre ಅವರ ಸಹಕಾರದೊಂದಿಗೆ, ರೂ. 2.60 ಕೋಟಿ ಅನುದಾನದಡಿ ಭಾಲ್ಕಿ ತಾಲೂಕಿನ ನೀಡೆಬಾನ್ ಗ್ರ...
15/07/2025

ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ Eshwar Khandre ಅವರ ಸಹಕಾರದೊಂದಿಗೆ, ರೂ. 2.60 ಕೋಟಿ ಅನುದಾನದಡಿ ಭಾಲ್ಕಿ ತಾಲೂಕಿನ ನೀಡೆಬಾನ್ ಗ್ರಾಮದಿಂದ ಗೊರಚಿಂಚೊಳಿ ಮುಖ್ಯರಸ್ತೆ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು.

ಈ ರಸ್ತೆ ಅಭಿವೃದ್ಧಿಯಿಂದ ಸ್ಥಳೀಯ ಜನತೆಗೆ ಉತ್ತಮ ಸಂಪರ್ಕ, ಸುರಕ್ಷತೆ ಮತ್ತು ತ್ವರಿತ ಪ್ರಯಾಣಕ್ಕೆ ನೆರವಾಗಲಿದೆ.

ಬೆಂಗಳೂರು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧ್ಧಿಸ್ಟ್ ಅಕಾಡೆಮಿ ಆಫ್ ಪರ್ಫಾಮಿಂಗ್ ಆರ್ಟ್, ನಾಗಪುರ ಸಂಸ್ಥೆಯು ಸಾದರಪಡಿಸಿದ “ಮಹಾನಾಯಕ ಸಾಮ...
13/07/2025

ಬೆಂಗಳೂರು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧ್ಧಿಸ್ಟ್ ಅಕಾಡೆಮಿ ಆಫ್ ಪರ್ಫಾಮಿಂಗ್ ಆರ್ಟ್, ನಾಗಪುರ ಸಂಸ್ಥೆಯು ಸಾದರಪಡಿಸಿದ “ಮಹಾನಾಯಕ ಸಾಮ್ರಾಟ್ ಅಶೋಕ” ಎಂಬ ಮಹಾನಾಟಕವನ್ನು ಉದ್ಘಾಟಿಸಿ ಮಾತನಾಡಿದೆನು.

“ಸಾಮ್ರಾಟ್ ಅಶೋಕನ ಬೌದ್ಧ ಧರ್ಮದ ಆಶಯಗಳು – ಅಹಿಂಸೆ, ಸಮಾನತೆ, ಶಾಂತಿ ಮತ್ತು ದಯೆ ಇಂದು ಕೂಡ ಪ್ರಸ್ತುತವಾಗಿವೆ. ಸಮಾಜದಲ್ಲಿ ನೈತಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಇಂತಹ ನಾಟಕಗಳು ಪ್ರಬಲ ಮಾಧ್ಯಮವಾಗುತ್ತವೆ.

ಸುಮಾರು ₹80 ಲಕ್ಷ ರೂ. ಅನುದಾನದಡಿ, ಭಾಲ್ಕಿ ತಾಲೂಕಿನ ತೆಲಗಾವ-ಸಿದ್ದಾಪುರವಾಡಿ ರಸ್ತೆಯಿಂದ ಜೈಗಾಂವ್ ಗ್ರಾಮದವರೆಗೆ ರಸ್ತೆ ಸುಧಾರಣಾ ಕಾಮಗಾರಿಗೆ...
13/07/2025

ಸುಮಾರು ₹80 ಲಕ್ಷ ರೂ. ಅನುದಾನದಡಿ, ಭಾಲ್ಕಿ ತಾಲೂಕಿನ ತೆಲಗಾವ-ಸಿದ್ದಾಪುರವಾಡಿ ರಸ್ತೆಯಿಂದ ಜೈಗಾಂವ್ ಗ್ರಾಮದವರೆಗೆ ರಸ್ತೆ ಸುಧಾರಣಾ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಿಸಲಾಯಿತು.

ಕಾಮಗಾರಿ ಗುಣಮಟ್ಟದಿಂದ ನಿರ್ವಹಿಸಲು ಹಾಗೂ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿತರಿಗೆ ಸೂಚನೆ ನೀಡಿದೆನು.

ಭಾಲ್ಕಿ ತಾಲೂಕಿನ ಬಾಜೋಳಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಭಾರತ ರತ್ನ, ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ...
13/07/2025

ಭಾಲ್ಕಿ ತಾಲೂಕಿನ ಬಾಜೋಳಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಭಾರತ ರತ್ನ, ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಇಂದು ಅನಾವರಣಗೊಳಿಸಿ, ಗೌರವಪೂರ್ವಕ ನಮನ ಸಲ್ಲಿಸಲಾಯಿತು.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನ ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಆಧಾರಶಿಲೆಯಾಗಿದೆ. ಪ್ರಜಾಪ್ರಭುತ್ವ, ಸಮಾನತೆ, ಬಾಂಧವ್ಯ ಮತ್ತು ನ್ಯಾಯದ ತತ್ವಗಳನ್ನು ಪ್ರತಿಪಾದಿಸುವ ಮೂಲಕ ಅವರು ಭಾರತವನ್ನು ಸರ್ವೋತ್ತಮ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ರೂಪಿಸಿದರು.

ಅವರ ಚಿಂತನೆಗಳು ನಮ್ಮ ಸಮಾಜದ ಬೆಳವಣಿಗೆಗೆ ದಾರಿದೀಪವಾಗಿವೆ. ಅವರ ಆದರ್ಶಗಳನ್ನು ನಾವು ಅನುಸರಿಸಿದಾಗ ಮಾತ್ರ ನಿಜವಾದ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸ್ಥಾಪನೆಯಾಗುವುದು.
Sagar Khandre

ಭಾಲ್ಕಿ ತಾಲೂಕಿನ ಬಾಜೋಳಗಾ ಕ್ರಾಸ್ ಬಳಿಯ "ಬುದ್ಧ ಪ್ರಿಯಾ ಪ್ರೌಢಶಾಲೆಯಲ್ಲಿ" ಹೊಸದಾಗಿ ನಿರ್ಮಿಸಲಾದ ವರ್ಗಕೋಣೆಗಳ ಉದ್ಘಾಟನೆಯನ್ನು ನೆರವೇರಿಸಿ ಮ...
13/07/2025

ಭಾಲ್ಕಿ ತಾಲೂಕಿನ ಬಾಜೋಳಗಾ ಕ್ರಾಸ್ ಬಳಿಯ "ಬುದ್ಧ ಪ್ರಿಯಾ ಪ್ರೌಢಶಾಲೆಯಲ್ಲಿ" ಹೊಸದಾಗಿ ನಿರ್ಮಿಸಲಾದ ವರ್ಗಕೋಣೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದೆನು.

ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಶಾಲೆಗೆ ಅಗತ್ಯವಾದ ಸೌಕರ್ಯಗಳು ಬಹಳ ಮುಖ್ಯ. ಹೊಸ ವರ್ಗಕೋಣೆಗಳಿಂದ ಮಕ್ಕಳಿಗೆ ಚೆನ್ನಾಗಿ ಕಲಿಯಲು ಉತ್ತಮ ವಾತಾವರಣ ಸಿಗಲಿದೆ. ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂಬ ಆಶಯವನ್ನು ವ್ಯಕ್ತಪಡಿಸಿದೆನು.

ತೆಲಂಗಾಣದ ಝಹೀರಾಬಾದ್ ಬಳಿಯ ಬರ್ದಿಪುರದ ಶ್ರೀ ದತ್ತಗಿರಿ ಮಹಾರಾಜ ಆಶ್ರಮದಲ್ಲಿ ಹಮ್ಮಿಕೊಳ್ಳಲಾದ ಗುರುಪಾದ ಪೂಜೆ ಹಾಗೂ ಮಹಾಮೃತ್ಯುಂಜಯ ಜಪಯಜ್ಞದಲ್...
12/07/2025

ತೆಲಂಗಾಣದ ಝಹೀರಾಬಾದ್ ಬಳಿಯ ಬರ್ದಿಪುರದ ಶ್ರೀ ದತ್ತಗಿರಿ ಮಹಾರಾಜ ಆಶ್ರಮದಲ್ಲಿ ಹಮ್ಮಿಕೊಳ್ಳಲಾದ ಗುರುಪಾದ ಪೂಜೆ ಹಾಗೂ ಮಹಾಮೃತ್ಯುಂಜಯ ಜಪಯಜ್ಞದಲ್ಲಿ ಭಾಗವಹಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆನು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ 108 ವೈರಾಗ್ಯ ಶಿಖಾಮಣಿ ಅವಧೂತಗಿರಿ ಮಹಾರಾಜರ ಆಶೀರ್ವಾದ ಪಡೆದೆನು.

ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಡಾ|| ಶಿವರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು... Dr Shiva ...
12/07/2025

ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಡಾ|| ಶಿವರಾಜ್ ಕುಮಾರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...

Dr Shiva Rajkumar

ಸುಮಾರು 3.40 ಕೋಟಿ ರೂ ಅನುದಾನದಡಿ ಭಾಲ್ಕಿ ತಾಲೂಕಿನ ಅಹಮದಾಬಾದ್ ಗ್ರಾಮದಿಂದ ಕೊನಮೇಳಕುಂದಾ ಗ್ರಾಮದವರೆಗೆ ರಸ್ತೆ ಸುಧಾರಣಾ ಅಭಿವೃದ್ಧಿ ಕಾಮಗಾರಿ...
12/07/2025

ಸುಮಾರು 3.40 ಕೋಟಿ ರೂ ಅನುದಾನದಡಿ ಭಾಲ್ಕಿ ತಾಲೂಕಿನ ಅಹಮದಾಬಾದ್ ಗ್ರಾಮದಿಂದ ಕೊನಮೇಳಕುಂದಾ ಗ್ರಾಮದವರೆಗೆ ರಸ್ತೆ ಸುಧಾರಣಾ ಅಭಿವೃದ್ಧಿ ಕಾಮಗಾರಿಗೆ ನಿನ್ನೆ ರಾತ್ರಿ ಭೂಮಿಪೂಜೆ ನೆರವೇರಿಸಿದೆನು.

ಇಂದು ಲಿಂಗೈಕ್ಯರಾದ ಹಿರಿಯ ನ್ಯಾಯವಾದಿ, ಮಾಜಿ ಉಪಸಭಾಪತಿಗಳು ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಎನ್. ...
12/07/2025

ಇಂದು ಲಿಂಗೈಕ್ಯರಾದ ಹಿರಿಯ ನ್ಯಾಯವಾದಿ, ಮಾಜಿ ಉಪಸಭಾಪತಿಗಳು ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಎನ್. ತಿಪ್ಪಣ್ಣ ಬಳ್ಳಾರಿ ಅವರ ನಿವಾಸಕ್ಕೆ ಭೇಟಿ ನೀಡಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆನು.

ಈ ದುಃಖದ ಕ್ಷಣದಲ್ಲಿ ತಿಪ್ಪಣ್ಣನವರ ಕುಟುಂಬದವರನ್ನು ಸಾಂತ್ವನಪಡಿ⁠ಸಿ, ಧೈರ್ಯ ತುಂಬುವ ಪ್ರಯತ್ನ ಮಾಡಿದೆನು. ಅವರ ಅಗಲಿಕೆಯಿಂದ ಸಮುದಾಯ ಹಾಗೂ ಸಮಾಜಕ್ಕೆ ತುಂಬಾ ನಷ್ಟವಾಗಿದೆ.

Address

Bhalki

Alerts

Be the first to know and let us send you an email when Eshwar Khandre followers 2023 posts news and promotions. Your email address will not be used for any other purpose, and you can unsubscribe at any time.

Share

Category