02/04/2026
ಬೀದರ್ : ಬೀದರ್ ಜಿಲ್ಲಾ ಪೊಲೀಸ್ ಕವಯತ್ ಮೈದನಾದಲ್ಲಿ ಇಂದುಪೊಲೀಸ್ ಧ್ವಜದ ದಿನಾಚರಣೆಯನು ಆಚರಿಸಲಾಯಿತು. ಕರ್ನಾಟಕ ರಾಜ್ಯದಲ್ಲಿ 1965 ಏಪ್ರೀಲ್-02 ನೇ ತಾರೀಖದಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೆ ಬಂದ ಸವಿ ನೆನಪಿಗಾಗಿ ಪ್ರತಿ ವರ್ಷ ಏಪ್ರೀಲ್-02 ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇಂದು ಬೀದರ ಜಿಲ್ಲಾ ಪೋಲಿಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಅಮರಪ್ಪ ಎಸ್. ಶಿವಬಲ್, ನಿವೃತ ಸಿ.ಪಿ.ಐ ರವರಿಗೆ ಸನ್ಮಾನಿಸಿ, ಅತಿಥಿಗಳಿಗೆ ಶ್ರೀ ಸುನೀಲ ಕೊಡ್ಲಿ,ಡಿ.ಎಸ್.ಪಿ ಡಿ.ಎ.ಆರ್ ರವರ ಮುಂದಾಳತ್ವದಲ್ಲಿ ಪರೆಡ ಕಮಾಂಡರ ಶ್ರೀ ಉದಯಕುಮಾರ ಆರ್.ಎಸ್.ಐ ಎರಡನೆ ಕಮಾಂಡರ ಶ್ರೀ ಸೈಫನ್ ಸಾಬ, ಪ್ರೋ. ಪಿ.ಎಸ್.ಐ ರವರ ನೇತೃತ್ವದಲ್ಲಿ ಒಟ್ಟು ಆರು ಪ್ಲಾಟೂನಗಳು ಭಾಗ ವಹಿಸಿದ್ದು, 1 ನೇ ಪ್ಲಾಟೂನ್ ಶ್ರೀ ದೇವೆಗೌಡಾ, ಪ್ರೋ. ಆರ್.ಎಸ್.ಐ, 2 ನೇ ಪ್ಲಾಟೂನ್ ಪ್ಲಾಟೂನ ಕಮಾಂಡರ ಶ್ರೀ ಬಾಷುಮಿಯಾ, ಜನವಾಡಾ ಪೊಲೀಸ್ ಠಾಣೆ, 3 ನೇ ಪ್ಲಾಟೂನ್ ಕಮಾಂಡರ ಶ್ರೀ ಶಿವಪ್ಪಾ ಮೇಟಿ, ಪಿ.ಎಸ್.ಐ ಹುಲಸೂರ ಪೊಲೀಸ್ ಠಾಣೆ, 4 ನೇ ಪ್ಲಾಟೂನ್ ಕಮಾಂಡರ ಶ್ರೀ ದಿನೇಶ, ಪಿ.ಎಸ್.ಐ ಸಂತಪೂರ ಪೊಲೀಸ್ ಠಾಣೆ, 5 ನೇ ಪ್ಲಾಟೂನ್ ಕಮಾಂಡರ ಶ್ರೀ ಹುಲೇಪ್ಪಾ, ಪಿ.ಎಸ್.ಐ ಹುಮನಾಬಾದ ಸಂಚಾರಿ ಪೊಲೀಸ್ ಠಾಣೆ, 6 ನೇ ಮಹಿಳಾ ಪ್ಲಾಟೂನ್ ಕಮಾಂಡರ ಶ್ರೀಮತಿ ನಂದಿನಿ, ಪಿ.ಎಸ್.ಐ ಮನ್ನಳ್ಳಿ ಪೊಲೀಸ್ ಠಾಣೆ ಮತ್ತು ಶ್ರೀ ಸುನೀಲ್ ನೇತೃತ್ವದ ಬ್ಯಾಂಡ ರವರಿಂದ ಪೊಲೀಸ್ ಗೌರವ ವಂದನೆ ಸಲ್ಲಿಸುವುದರ ಮೂಲಕ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರವರಿಗೆಲ್ಲರಿಗೂ ಪೊಲೀಸ್ ಧ್ವಜವನ್ನು ಹಂಚಲಾಯಿತು. ಇದರಿಂದ ಸಂಗ್ರಹವಾಗುವ ಧನವನ್ನು ನಿವೃತ ಪೊಲೀಸ್ ಅಧಿಕಾರಿ ಹಾಗು ಸಿಬ್ಬಂದಿಯವರ ಕಲ್ಯಾಣ ನಿಧಿಗೆ ಬಳಸಿಕೊಳ್ಳಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಆಹ್ವಾನಿತ ಅತಿಥಿಗಳು, ಬೀದರ ಜಿಲ್ಲಾ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ನಿವೃತ ಅಧಿಕಾರಿ ಸಿಬ್ಬಂದಿ, ಲಿಪಿಕ ಅಧಿಕಾರಿ ಸಿಬ್ಬಂದಿ ಹಾಗು ಮಾಧ್ಯಮ, ಅಕ್ಷರ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.