SK SUKIL

SK SUKIL this is official gage SK SUKIL

07/07/2025

ವಿಜಯಪುರ ಜಿಲ್ಲೆಯ 270 ಜನ ನರೇಗಾ ಸಿಬ್ಬಂದಿ ಜೊತೆಯಲ್ಲಿ ನಾನಿದ್ದೇನೆ, ಯಾವುದೇ ಕಾರಣಕ್ಕೂ ಆತಂಕಪಡಬೇಡಿ ಆದಷ್ಟು ಬೇಗ ಸರ್ಕಾರದಿಂದ ಸಂಬಳ ಕೊಡಿಸುವ ಜವಾಬ್ದಾರಿ ನನ್ನದು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಈ ಕುರಿತು ನಗರದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ರಾಜ್ಯದಲ್ಲಿ ಕಳೆದ 2 ವರ್ಷದಿಂದ ಒಂದು ರಸ್ತೆ ನಿರ್ಮಾಣ ಮಾಡಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ, ಒಂದೇ ಒಂದು ಅಭಿವೃದ್ಧಿ ಕಾರ್ಯಗಳಿಲ್ಲ. ನನ್ನ 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಬೇಕಾದಷ್ಟು ಸರ್ಕಾರ ನೋಡಿದ್ದೇನೆ. ಇಷ್ಟೊಂದು ರಾದ್ಧಾಂತ ಯಾವ ಸರ್ಕಾರದಲ್ಲೂ ನೋಡಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ. ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ನಿಮ್ಮ ಸರ್ಕಾರದಲ್ಲಿ ದಿನಗೂಲಿ ನೌಕರರಿಗೂ ಸಂಬಳ ಕೊಡಲು ಸಾಧ್ಯವಾಗದಂತಹ ದುಸ್ಥಿತಿ ಇದೆ ಎಂದು ಮನವರಿಕೆ ಮಾಡುತ್ತೇನೆ ಎಂದರು. ಇದೇ ವೇಳೆ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ರಾಮಣ್ಣ ರಾಜ್ಯದ ಜನ ನಿಮ್ಮ ಬಳಿ ಗ್ಯಾರಂಟಿ ಕೊಡಿ ಎಂದು ಕೇಳಲು ಬಂದಿರಲಿಲ್ಲ. ಕೇವಲ ಸರ್ಕಾರ ರಚಿಸಲೇಬೇಕು ಎನ್ನುವ ಹಟದಿಂದ, ಅಧಿಕಾರ ದಾಹದಿಂದ ರಾಜ್ಯದ ಜನರಿಗೆ ಮೋಸ ಮಾಡಿ ಸರ್ಕಾರ ತಂದಿದ್ದಿರಿ. ಈ ಸರ್ಕಾರದಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ನಿಮಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದಾದರೆ, ಸಕಾರವನ್ನು ವಿಸರ್ಜಿಸಿ ಹೊರ ಬನ್ನಿ, ಇಲ್ಲಾ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದು ಜನರಿಗೆ ಹೇಳಿ ಕ್ಷಮೆಯಾಚಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಖರ್ಗೆ ಅವರು ತಮ್ಮ ಮನೆ ಪಾತ್ರೆಯಲ್ಲಿಯೇ ಕತ್ತೆ ಬಿದ್ದಿದೆ. ಅದನ್ನು ಬಿಟ್ಟು ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ, ನಿನ್ನದೇ ಇಲಾಖೆಯಲ್ಲಿನ ಸಿಬ್ಬಂದಿ ಸಂಬಳ ನೀಡಲು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುತ್ತಿಯಾ.. ಎಂದು ಗ್ರಾಮಿಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದವೂ ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಬಸವರಾಜ್ ರಾಯರೆಡ್ಡಿ ಅವರ ಬಾಯಿಂದಲೇ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಕೊಡಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಂಸದ ಜಿಗಜಿಣಗಿ ಹೇಳಿದರು | TV NEWS KARNATAKA JULY 07 2025

07/07/2025

ದಲಿತ ಸಂಘರ್ಷ ಸಮಿತಿ ಆರಂಭ ವಾಗುವ ಮುಂಚೆಯೇ ದಲಿತರ ಪರವಾಗಿ ಅನಿಲ ಹೊಸಮನಿ ಅವರು ಕೆಲಸ ಮಾಡುತ್ತಿದ್ದರು. ಬಳಿಕ ದಲಿತ ಸಂಘರ್ಷ ಸಮಿತಿಯೊಂದಿಗೆ ಸಮಾಜದ ಪರವಾದ ಕೆಲಸ ಮಾಡಿದ ಹಿನ್ನಲೆ ಅವರಿಗೆ ಅಭಿನಂದನಾ ಸಮಾರಂಭ ಆಯೋಜನೆ ಮಾಡಲಾಗಿದೆ ಎಂದು ಹೊರಾಟಗಾರರಾದ ಬಸವರಾಜ್ ಸೂಳಿಭಾವಿ ಹೇಳಿದರು. ಈ ಕುರಿತು ನಗರದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ಜಿಲ್ಲೆಯಲ್ಲಿ ಯಾವ ಸಮುದಾಯಕ್ಕೆ ಧ್ವನಿ ಇಲ್ಲವೋ ಅಂತವರ ಪರವಾಗಿ ಕೆಲಸ ಮಾಡಿದರು ಅನಿಲ ಹೊಸಮನಿ. ಬಸವಣ್ಣನವರ ಆದರ್ಶ, ಅಂಬೇಡ್ಕರ್ ಆದರ್ಶ ಪಾಲಿಸಿಕೊಂಡು ಬಂದಿದ್ದು ಅನಿಲ ಹೊಸಮನಿ ಅವರು, ಹೀಗಾಗಿ ಮೇ ಸಾಹಿತ್ಯ ಮೇಳ ಬಳಗ ವಿಜಯಪುರದ ವತಿಯಿಂದ ಅನಿಲ ಹೊಸಮನಿ ಎಂಬ ಸಂಘರ್ಷದ ಒಡನಾಡಿಯೊಂದಿಗೆ ಬಿಜಾಪುರದಲ್ಲಿ ಒಂದ ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜುಲೈ 13 ರಂದು ನಗರದ ಅಂಬೇಡ್ಕರ್ ಭವನದಲ್ಲಿ ಅವರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅಂದು ಒಟ್ಟು ಮೂರು ಗೋಷ್ಟಿ ಗಳನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ‌ ಜನರು ಭಾಗವಹಿಸಬೇಕು. ಇನ್ನೂ ಹಲವು ವರ್ಷಗಳ ಕಾಲ ಸಮಾಜಕ್ಕೆ ಹೋರಾಡಿದ ಅನಿಲ ಹೊಸಮನಿ‌ ಅವರಿಗೆ ಸ್ವಂತದಾದ‌ ಮನೆಯಿಲ್ಲ ಹೀಗಾಗಿ ಸಮಾಜದ ಮುಖಂಡರೆಲ್ಲರೂ ಸೇರಿ ಅವರಿಗೊಂದು ಮನೆ ಕಟ್ಟಿ ಕೊಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು. ಇನ್ನೂ ಸಂವಿಧಾನದಲ್ಲಿ ಸಮಾಜವಾದ ಪದ ತಗಿಯಬೇಕು ಎಂದು ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ. ಈ ದೇಶ ಅಸಮಾನ‌, ಭಾರತ ಸಂವಿಧಾನದಲ್ಲಿ ಇದೆಲ್ಲವೂ ಇದೆ. ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂಬುವಂತದಿದೆ. ಮನುಸ್ಮೃತಿ ಎತ್ತಿ ಹಿಡಿಯುವವರು ಈ ತರಹದ ಹೇಳಿಕೆ ಕೊಡುತ್ತಾರೆ. ಸಂವಿಧಾನದಲ್ಲಿ 29 ಸಾವಿರಕ್ಕೂ ಅಧಿಕ ಪದಗಳು ಸೇರ್ಪಡೆ ಆಗಿವೆ. ಆದರೆ ಸಮಾಜವಾದ ಹಾಗೂ ಜ್ಯಾತ್ಯಾತೀತ ಪದಕ್ಕೆ ತಗೆಯಬೇಕು ಎಂಬುದು ಯಾಕೆ. ಇದನ್ನು‌ ತಗೆಯಬೇಕು ಎನ್ನುವವರು ಸಂವಿಧಾನ ವಿರೋಧಿಗಳು ಎಂದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶ್ರೀನಾಥ್ ಪೂಜಾರಿ, ನಾಗರಾಜ್ ಲಂಬು, ಅಡಿವೆಪ್ಪ ಸಾಲಗಲ್ ಸೇರಿದಂತೆ ಹಲವರಿದ್ದರು | TV NEWS KARNATAKA JULY 07 2025

07/07/2025

ವಿಜಯಪುರ ಹಿಂದು-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು | TV NEWS KARNATAKA JULY 06 2025

07/07/2025

ವಿಜಯಪುರ ಜಿಲ್ಲೆಯ ಹಿಂದು-ಮುಸ್ಲಿಂ ಭಾವೈಕ್ಯತೆಯ ಮೊಹರಂ ಆಚರಣೆ
ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಿಂದು-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರಿಗೆ ಭಾನುವಾರ ಸಂಜೆ ಜರುಗಿದ ವಿಸರ್ಜನಾಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಕುಣಿಯುವ ಮೂಲಕ ಮೆರವಣಿಗೆಯಮೆರುಗನ್ನು ಹೆಚ್ಚಿಸಿದರು. ಡೋಲಿ, ಅಲಾಯಿ ದೇವರು ಸಾಗು ವ ರಸ್ತೆಯಲ್ಲಿ ಜಮಾಯಿಸಿದ್ದ ಜನರು ಅಲಯಿ ದೇವರ ದರ್ಶನ ಪಡೆದರು.
ಆಗಸಿ ಒಳಗಡೆ, ಮಹಾರಾಜರ ಮಠದ ಹತ್ತಿರ, ಇಂಗಳೇಶ್ವರ ರಸ್ತೆ ನಾಗೂರ ರಸ್ತೆ
ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಡೋಲಿ ಹಾಗೂ ಅಲಾಯಿ ದೇವರಗಳು ಮೆರವಣಿಗೆ ಮೂಲಕ ಬಸವೇಶ್ವರ ವೃತ್ತದಲ್ಲಿ ಸಮಾಗಮಗೊಂಡವು. ನಂತರ ಬಸವ ತೀರ್ಥ ಬಾವಿಯಲ್ಲಿ ವಿಸರ್ಜನಾ ಕಾರ್ಯ ನಡೆಯಿತು.
ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಹಿಂದು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಮುಂಜಾಗ್ರತಾ ಕ್ರಮವಾಗಿ ಪಿಐ ಗುರು ಶಾಂತಗೌಡ ದಾಶ್ಯಾಳ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಈ ಸಂದ ರ್ಭದಲ್ಲಿ ಕಾಜಂಬರ್ ನದಾಫ್ ಊರಿನ ಹಿರಿಯರು ಬುಡೇಸಾಬ ಚೆಲ್ಲಿಗಿಡದ ಮಹೇತಾಬ ಬೂಮ್ಮನಹಳ್ಳಿ ಮಕಾನದಾರ ಹಾಗೂ ಇತರರು ಉಪಸ್ಥಿತರಿದ್ದರು | TV NEWS KARNATAKA JULY 06 2025

06/07/2025

ವಿಜಯಪುರ : ಕರವೇ ಎಚ್ ಶಿವರಾಮೇಗೌಡ ( ಬಣ ) ಪ್ರತಿಭಟನೆ | TV NEWS KARNATAKA JULY 05 25

06/07/2025

ಅಥಣಿ ಕಾರು ಸರ್ಕಾರಿ ಬಸ್ ನಡುವೆ ಭಾರಿ ಅಪಘಾತ ಸಂಭವಿಸಿದೆ ಅಥಣಿ ನಗರದ ಬನಜವಾಡ ಕಾಲೇಜ್ ಅಥಣಿ ಮಿರೇಜ್ ರಸ್ತೆ ನಡುವೆ ಭಯಂಕರ ಅಪಘಾತ ನಡೆದು ಹೋಗಿದೆ ಮಿರಾಜ್ ದಿಂದ ಬರುತ್ತಿರುವ ಕಾರು ತಾಂಬಾ ವಿಜಯಪುರ ಮಿರಾಜ್ ಬಸ್ ಕಾರು ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಐದು ಜನ ಸ್ಥಳದಲ್ಲಿ ದುರಮರಣದಲ್ಲಿ ಸಾವನ್ನಪ್ಪಿದ್ದಾರೆ ಮೃತರು ಕಲ್ಬುರ್ಗಿ ಜಿಲ್ಲೆ ಅವರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ | TV NEWS KARNATAKA JULY 06 2025

05/07/2025

ವಿಜಯಪುರ : ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾದ ಬೈಕ್
ಓರ್ವ ಬೈಕ್ ಸವಾರ ಸಾವು
ಇನ್ನೊಬ್ಬ ಸವಾರನಿಗೆ ಚಿಕ್ಕಪುಟ್ಟ ಗಾಯ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಘಟನೆ
ಬಸವನ ಬಾಗೇವಾಡಿ ಪಟ್ಟಣದ ವೀರೇಶ್ ಹಿರೇಮಠ್ (19) ಮೃತ ಯುವಕ
ಗಾಯಾಳು ಸವಾರ ಆಸ್ಪತ್ರೆಗೆ ರವಾನೆ
ಸ್ಥಳಕ್ಕೆ ಬಸವನ ಬಾಗೇವಾಡಿ ಪೊಲೀಸರ ಭೇಟಿ, ಪರಿಶೀಲನೆ
ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ | TV NEWS KARNATAKA JULY 05 2025

05/07/2025

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕು
ಅಂಬೇಡ್ಕರ್ ಸೇನೆಯ ತಾಲೂಕು ಸಮಿತಿ ತಾಳಿಕೋಟಿ ವತಿಯಿಂದ ತಹಶೀಲ್ದಾರರು ತಾಳಿಕೋಟಿ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸಮಾಜ ಕಲ್ಯಾಣ ಸಚಿವರಾದ ಡಾಕ್ಟರ್ ಶ್ರೀ ಎಚ್ ಸಿ ಮಾದೇವಪ್ಪ ಸಾಹೇಬರಿಗೆ
ನಮ್ಮ ತಾಲೂಕಿಗೆ ಎಸ್ ಎಸ್ ಎಲ್ ಸಿ ನಂತರದ ವಿದ್ಯಾರ್ಥಿನಿಯರಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.
ಇಲ್ಲಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಇಲ್ಲದಿರುವುದರಿಂದ ಎಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಆಗುತ್ತಿಲ್ಲ ಅನೇಕ ಸಮಸ್ಯೆ ಇದ್ದು ಆದಷ್ಟು ಬೇಗನೆ ವಿದ್ಯಾರ್ಥಿನಿಯರಿಗೆ ವಸತಿ ನಿಲಯವನ್ನು ಸರಕಾರ ಮಂಜೂರು ಮಾಡಿ ಮಹಿಳೆಯರಿಗೆ ಅನುಕೂಲವಾಗುವ ಹಾಗೆ ಮಾಡಬೇಕೆಂಬುದು ನಮ್ಮ ಸಂಘಟನೆಯ ಆಸೆಯಾಗಿದೆ.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷರಾದ ಬಸ್ಸು ಈ ಮಾದರ ತಾಲೂಕು ಅಧ್ಯಕ್ಷರಾದ
ಗೋಪಾಲ್ ಕಟ್ಟಿಮನಿ ನಾಗರಾಜ ಗಜಕೋಶ
ಯಮನಪ್ಪ ನಾಯ್ಕೋಡಿ ಪರಶುರಾಮ್ ತಳವಾರ್ ಭೀಮಾಶಂಕರ್ ಸೋನೋನೆ ಮೈಬೂಬ್ ಅವಟಿ
ಪರಶುರಾಮ್ ನಾಲತವಾಡ ಬಾಗಪ್ಪ ಕಟ್ಟಿಮನಿ
ಮಡು ಚಲವಾದಿ ಶಶಿಕುಮಾರ್ ಚಲವಾದಿ
ಬಸವರಾಜ್ ತೋಟದ ಸಾಬಣ್ಣ ಕಡದ್ರಾಳ
ಶಿವಪ್ಪ ಮಾದರ್ ಶೇಖಪ್ಪ ಕಟ್ಟಿಮನಿ | TV NEWS KARNATAKA JULY 04 2025

05/07/2025

ವಿಜಯಪುರದಲ್ಲಿ ಟ್ರಾಫಿಕ್ ರೂಲ್ಸ್ ಪಾಲಿಸದ ವಾಹನ ಸವಾರರಿಗೆ ಪಾಠ ಕಲಿಸೋದಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಈ ಹಿನ್ನೆಲೆ ನಗರದ ಟ್ರಾಫಿಕ್ ಪೊಲೀಸ್ ಠಾಣೆಗೆ ನೂತನ ಟೋಯಿಂಗ್ ವಾಹನ ಸೇರ್ಪಡೆಯಾಗಿದೆ. ಟೋಯಿಂಗ್ ವಾಹನದ ಎದುರು ಕುಂಬಳಕಾಯಿ ಒಡೆಯುವ ಮೂಲಕ ಎಮ್ಎಲ್‌ಸಿ ಸುನೀಲ್‌ಗೌಡ ಪಾಟೀಲ್ ಚಾಲನೆ ನೀಡಿದ್ರು. ಈ ವೇಳೆ ಎಸ್ಪಿ ಲಕ್ಷ್ಮಣ ನಿಂಬರಗಿ ಎದುರು ವಾಹನ ಟೋಯಿಂಗ್‌ನ ಡೆಮೋ ಪ್ರದರ್ಶಿಸಲಾಯಿತು. ಟ್ರಾಫಿಕ್ ನಿಯಮ ಉಲ್ಲಂಘಿಸಿ ರಸ್ತೆಯಲ್ಲೆ ವಾಹನ ನಿಲ್ಲಿಸುವರು ಹುಷಾರಾಗಿರಿ ಎಂದು ಪೊಲೀಸ್ ಇಲಾಖೆ ಈ ಮೂಲಕ ಸಂದೇಶ ನೀಡಿದೆ | TV NEWS KARNATAKA JULY 04 2025

05/07/2025

ಬೆಳಗಾವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಪ್ರಮೋದ್ ಮುತಾಲಿಕ್ |TV NEWS KARNATAKA JULY 05 2025

05/07/2025

ವಿಜಯಪುರದಲ್ಲಿ ಮೊಹರಂ ಹಬ್ಬದ ವಿಶೇಷ ಆಚರಣೆ | TV NEWS KARNATAKA JULY 03 2025

04/07/2025

CM ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ | TV NEWS KARNATAKA JUN 02 25

Address

WARD NO 15 HOUSE NO 1169 HASIMPEER DARDA Road AMBEDAKAR NAHAR VIJAYAPUR
Bijapur
586104

Alerts

Be the first to know and let us send you an email when SK SUKIL posts news and promotions. Your email address will not be used for any other purpose, and you can unsubscribe at any time.

Contact The Business

Send a message to SK SUKIL:

Share