SK SUKIL

SK SUKIL this is official gage SK SUKIL

23/09/2025

ವಿಜಯಪುರ : ನಗರದ ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿರೋಧಿಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿದರು. ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೆಪ್ಟೆಂಬರ್ 18ರಿಂದ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.‌ ಈ ವೇಳೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ, ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನನ್ನ ವಿರೋಧ ಇದೆ. ನಾನು ಈ ವಿಚಾರವಾಗಿ ಸಿಎಂ ಗಮನಕ್ಕೆ ತರುತ್ತೇನೆ | TV NEWS KARNATAKA SEP 22 2025

23/09/2025

ನಾಡದೇವಿಯ ನವರಾತ್ರಿ ಉತ್ಸವಕ್ಕೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಸತತವಾಗಿ 54 ವರ್ಷಗಳಿಂದ ಈ ಉತ್ಸವವನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಮಾಜಿ ಶಾಸಕ ದೇವನಾಂದ ಚವ್ಹಾಣ ಕುಟುಂಬಸ್ಥರು ನೆರವೇರಿಸಿಕೊಂಡು ಬರುತ್ತಿದ್ದಾರೆ. ಅಲ್ಲದೇ, 2001 ಕುಂಬಮೇಳ, ರೇಝೀಮ‌ ಕುಣಿತ,ನಾಸಿಕ ಡೋಲ, ಡಿಜೆ ಸೌಂಡ್, ನವಿಲು ಕುಣಿತ ಹೀಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಅಶೋಕ ಮನಗೂಳಿ ಸೇರಿದಂತೆ ಗಣ್ಯರಿಗೆ ಚವ್ಹಾಣ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ವಿವಿಧ ಕಾರ್ಯಕ್ರಮ ನಡೆದವು | TV NEWS KARNATAKA SEP 22 2025

22/09/2025

ವಿಜಯಪುರ: ಉದ್ಘಾಟನೆಗೆ ಸಜ್ಜಾಗಿರುವ ಇಲ್ಲಿನ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಎರಡು ಅತ್ಯಾಧುನಿಕ ಅಗ್ನಿಶಾಮಕ ವಾಹನಗಳು ದೂರದ ಆಸ್ಟ್ರಿಯಾದಿಂದ ಬಂದು ತಲುಪಿವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, ಈ ಅಗ್ನಿಶಾಮಕ ವಾಹನಗಳು ಕಂಪ್ಯೂಟರೀಕೃತವಾಗಿದ್ದು, ಜಾಗತಿಕ ಟೆಂಡರ್ ಅಡಿಯಲ್ಲಿ ಆಸ್ಟ್ರಿಯಾದಿಂದ ಪೂರೈಕೆಯಾಗಿವೆ. ಇವುಗಳ ಬೆಲೆ ಅಂದಾಜು 24 ಕೋಟಿ ರೂಪಾಯಿ. ಇವು ತುರ್ತು ಸಂದರ್ಭಗಳಲ್ಲಿ 160 ಮೀಟರಿನವರೆಗೂ ನೀರನ್ನು ಹಾಯಿಸಿ, ಬೆಂಕಿಯನ್ನು ನಂದಿಸುವ ಸಾಮರ್ಥ್ಯ ಹೊಂದಿವೆ. ಈ ಮೂಲಕ ನಾಗರಿಕ ವಿಮಾನಯಾನ ಮಹಾ‌ ನಿರ್ದೇಶನಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಹೇಳಿದ್ದ ಮತ್ತೊಂದು ಅಗತ್ಯ ಪೂರೈಸಲಾಗಿದೆ ಎಂದಿದ್ದಾರೆ | TV NEWS KARNATAKA SEP 22 2025

22/09/2025

ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿರೋಧಿಸಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿದರು. ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೆಪ್ಟೆಂಬರ್ 18ರಿಂದ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.‌ ಈ ವೇಳೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ, ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನನ್ನ ವಿರೋಧ ಇದೆ. ನಾನು ಈ ವಿಚಾರವಾಗಿ ಸಿಎಂ ಗಮನಕ್ಕೆ ತರುತ್ತೇನೆ. ಹಿಂದೆ ಕೂಡಾ ಈ‌ ವಿಚಾರವಾಗಿ ಸಿಎಂ ಅವರೊಟ್ಟಿಗೆ ಚರ್ಚೆ ಮಾಡಿರುವೆ.
ಸಿಎಂ ಸಿದ್ದರಾಮಯ್ಯ, ಸಚಿವರಾದ ಶರಣ ಪ್ರಕಾಶ ಪಾಟೀಲ ಹಾಗೂ ದಿನೇಶ ಗುಂಡುರಾವ ಅವರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು
ಜಾತಿ ಸಂಘರ್ಷ ಹಾಗೂ ಸ್ವಾಮಿಗಳ ವಿಷಯಗಳಲ್ಲಿ ದೂರು ಇದ್ದೇನೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ದಯವಿಟ್ಟು ಅದರ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು ಮನವಿ ಮಾಡಿದರು. ಅಲ್ಲದೇ, ಜಾತಿ ಗಣತಿ ಆ್ಯಪ್ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಇಂದಿನಿಂದ ಸಮೀಕ್ಷೆ ಆರಂಭವಾಗಿದೆ. ಒಂದೆರಡು ಸಮಸ್ಯೆಗಳನ್ನು ಇರ್ತಾವೆ. ಎಲ್ಲವೂ ಬಗೆಹರಿಯುತ್ತದೆ ಎಂದರು.‌ ಇನ್ನು ವಿಜಯಪುರ ಜಿಲ್ಲೆಗೆ ಅತೀ ಹೆಚ್ಚು ಅನುದಾನ ತಂದಿದ್ದೇನೆ. ನಾಲ್ಕು ನೂರು ಕೋಟಿ ವಿಜಯಪುರ ಜಿಲ್ಲಾಸ್ಪತ್ರೆಗೆ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ.‌ ಅಂಕಿ ಸಂಖ್ಯೆಗಳೇ ಉತ್ತರ ನೀಡುತ್ತೇವೆ ಎಂದರು | TV NEWS KARNATAKA SEP 22 2025

21/09/2025

ಲಿಂಗಾಯತ ಮಠಾಧೀಶರ ಒಕ್ಕೂಟ
ಜಾಗತಿಕ ಲಿಂಗಾಯತ ಮಹಾಸಭಾ (ರಿ)
ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ (ರಿ)
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ (ರಿ) ಹಾಗೂ
ಎಲ್ಲಾ ಬಸವಪರ ಲಿಂಗಾಯತ ಸಂಸ್ಥೆಗಳ ವತಿಯಿಂದ
ಬಸನಗೌಡ ಬಿ ಹರನಾಳ ಸಂಸ್ಥಾಪಕ ಅಧ್ಯಕ್ಷರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು
ಕರ್ನಾಟಕ ರಾಜ್ಯ ಹಿಂದಿಳಿದ ವರ್ಗಗಳ ಅಯೋಗ ನಡೆಸುವ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಗ್ಗೆ ಲಿಂಗಾಯತರಿಗೆ
ಹಿಂದುಳಿದ ವರ್ಗ ಮತ್ತು ಮೀಸಲಾತಿ ಕುರಿತು ಮಾಹಿತಿ ಹಾಗು
ಮಾರ್ಗದರ್ಶಿ ಸೂಚನೆಗಳು
ಲಿಂಗಾಯತವು ಪ್ರತ್ಯೇಕ ಸ್ವತಂತ್ರ ಧರ್ಮವಾಗಿದ್ದು, ಅದರೊಳಗೆ 97 ಕ್ಕೂ
ಮೇಲ್ಪಟ್ಟು ಬೇರೆ ಬೇರೆ ಹೆಸರಿನ ಕಾಯಕ ಜಾತಿ(ಒಳ ಪಂಗಡ)ಗಳಿದೆ.
ಅವುಗಳಲ್ಲಿ ಬಹುತೇಕ ಹಿಂದುಳಿದ ವರ್ಗಕ್ಕೆ ಸೇರಿದ್ದಾಗಿದೆ. ಈವರೆಗೆ ನಡೆದ
ಜನಗಣತಿಗಳಲ್ಲಿ ಸಾಕಷ್ಟು ಲಿಂಗಾಯತ ಧರ್ಮಿಯರು, ತಮ್ಮ ಧರ್ಮ
"ಹಿಂದೂ" ಎಂದು ಬರೆಸಿದ್ದು ಕಂಡುಬಂದಿದೆ. ಅದು ಅಂದು ತಮ್ಮ ಧರ್ಮದ
ಬಗ್ಗೆ ಲಿಂಗಾಯತರಲ್ಲಿದ್ದ ಅರಿವಿನ ಕೊರತೆಯ ಸಂಕೇತವಾಗಿದೆ | TV NEWS KARNATAKA SEP 21 2025

21/09/2025

ಕಾಯಕಯೋಗಿ ಗ್ರಾಮೀಣ ಶಿಕ್ಷಣ ಸೇವಾ
ದತ್ತಿ ವಿಶ್ವಸ್ಥ ಸಂಸ್ಥೆ, ತಿಡಗುಂದಿ, ವಿಜಯಪುರ
ರಾಮಕೃಷ್ಣ ವಿದ್ಯಾಶಾಲೆ, ಮೈಸೂರು ಹಾಗೂ ಜನಸೇವಾ ವಿದ್ಯಾ
ಕೇಂದ್ರ ಚೆನ್ನೇನಹಳ್ಳಿ ಮಾದರಿಯಂತೆ ಮಾನಸ ಗಂಗೋತ್ರಿ ಮಾದರಿ ಪ್ರತಿಷ್ಠಿತ
ವಸತಿ ಶಾಲೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮಕ್ಕೆ 5ನೇ ತರಗತಿಯಿಂದ
ಪಿ.ಯು.ಸಿವರೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ
ಪ್ರವೇಶ ಪರೀಕ್ಷೆಗಳನ್ನು ನಡೆಸಿ, ಅರ್ಹತೆಯ ಆಧಾರದ ಮೇಲೆ ಪ್ರತಿಭಾವಂತ
ವಿದ್ಯಾರ್ಥಿಗಳನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮಕ್ಕೆ ಆಯ್ಕೆ
ಮಾಡಿಕೊಳ್ಳಲಾಗುತ್ತಿದ್ದು ಅರ್ಜಿಗಳನ್ನು ಶಾಲೆಯಲ್ಲಿ ಪಡೆಯಬಹುದಾಗಿದೆ.
ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಿ.ಯು.ಸಿ. ಮುಗಿಯುವವರೆಗೆ
ಉಚಿತ ಶಿಕ್ಷಣ ನೀಡಲಾಗುವುದು. ಪ್ರತಿ ವರ್ಷ 90% ಕ್ಕಿಂತ ಅಧಿಕ ಅಂಕ
ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಯಾವುದೇ ಜಾತಿಯ ಮಾಜಿ
ಯೋಧರ ಮಕ್ಕಳಿಗೆ, ಅನಾಥ ಹಾಗೂ ಅಂಕವಿಕಲ ಮಕ್ಕಳಿಗೆ ಮತ್ತು
ಕ್ರೀಡೆಯಲ್ಲಿ ಸಾಧನೆ ಮಾಡಿದ ಮಕ್ಕಳಿಗೂ ಪಿ.ಯು.ಸಿ.ವೆರೆಗೆ ಉಚಿತ ಶಿಕ್ಷಣ
ನೀಡಲಾಗುವುದು. ನಮ್ಮ ಸಂಸ್ಥೆಯ ಆವರಣದಲ್ಲಿ, ಪ್ರವೇಶ ಪರೀಕ್ಷೆಯನ್ನು
ನಡೆಸಲಾಗುವುದು. ಪ್ರವೇಶ ಪರೀಕ್ಷೆಯ ಅರ್ಜಿ ಫಾರಂಗಳನ್ನು ನಮ್ಮ
ಸಂಸ್ಥೆಯ ಕಛೇರಿಯಿಂದ ಪಡೆದುಕೊಂಡು ಹೆಚ್ಚಿನ ಅಂಕ ನಡೆದ
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು | TV NEWS KARNATAKA SEP 21 2025

21/09/2025

ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಸರ್ಕಾರಕ್ಕೆ ಸಲ್ಲಿಕೆ ಆಗಿದೆ ಎಂದು ರಾಜಶೇಖರ ಯಡಹಳ್ಳಿ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ವರದಿಯಲ್ಲಿ 59 ಜಾತಿಗಳ 5,22,099 ಜನರನ್ನು ಪ್ರವರ್ಗ ಎ ಎಂದು ಗುರತಿಸಿದ್ದು, ಇವರಲ್ಲಿ 1,38,653 ಬಲಗೈಗೆ ಸೇರಿದ‌ 16 ಜಾತಿಗಳನ್ನು ಸೇರಿಸಿದ್ದಾರೆ ಹಾಗೂ ಪ್ರವರ್ಗ ಬಿ ರಲ್ಲಿ ಮಾದಿಗ ಸಮುದಾಯದ ಗುಂಪಿಗೆ ಬಲಗೈ ಜಾತಿಗೆ ಸೇರಿದ ಹಲಸಾ, ಮೊಗೆರ, ಪರವಾ ಜಾತಿಗಳ 2,58, 915 ಜನರನ್ನು ಸೇರಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಚಿದಾನಂದ ಕಾಂಬಳೆ, ಬಸವರಾಜ್, ಅಭಿಷೇಕ್, ಚಕ್ರವರ್ತಿ, ಸುನೀಲ್ ಹೊಸಹಳ್ಳಿ ಮಾಧ್ಯಮಗೋಷ್ಠಿ ಇದ್ದರು | TV NEWS KARNATAKA SEP 21 2025

21/09/2025

ಸೋನಿಯಾ, ರಾಹುಲ್ ತಾಳಕ್ಕೆ ಕುಣಿದು ಸಿದ್ದರಾಮಯ್ಯ ಹಿಂದೂ ಧರ್ಮ ಒಡೆಯಲು ಷಡ್ಯಂತ್ರ: ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ
ವಿಜಯಪುರ: ಬ್ರಿಟಿಷರು, ಮೊಘಲರು ಆಳ್ವಿಕೆ ನಡೆಸಿದರೂ ಹಿಂದೂ ಧರ್ಮಕ್ಕೆ ಅಪಾಯ ಬರಲಿಲ್ಲ, ಆದರೆ ಕ್ರಿಶ್ಚಿಯನ್ ರಾಷ್ಟ್ರ ಮಾಡುವ ಹುನ್ನಾರ ಹೊಂದಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಾಳಕ್ಕೆಕುಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಹೆಸರಿನಲ್ಲಿ ಹಿಂದೂ ಧರ್ಮ ಒಡೆಯುವ ಷಡ್ಯಂತ್ರ ನಡೆಸಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ ಒಡೆಯುವ ಈ ಪ್ರಯತ್ನಕ್ಕೆ ನಮ್ಮ ವಿರೋಧವಿದೆ, ಅವೈಜ್ಞಾನಿಕವಾಗಿ ಈ ಸಮೀಕ್ಷೆ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಮಾಡುತ್ತಿರುವ ಈ ಸಮೀಕ್ಷೆ ಸಂವಿಧಾನ ಪರಿಚ್ಚೇಧ 341 ಕ್ಕೆ ಸಂಪೂರ್ಣ ವಿರೋಧವಾಗಿದೆ ಎಂದರು.
ಜೈನ ಪಂಚಮಸಾಲಿ, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಪಂಚಮಸಾಲಿ ಈ ರೀತಿ ಜಾತಿ, ಸಮುದಾಯಗಳನ್ನೇ ಯಾರು ಕೇಳಿಲ್ಲ, ಈ ರೀತಿ ಜಾತಿಗಳನ್ನು ಸೃಜಿಸಿದ್ದು ಯಾರು? ಎಂದು ಪ್ರಶ್ನಿಸಿದರು. ಒಬ್ಬ ವ್ಯಕ್ತಿ ಧರ್ಮಾಂತರ ಆದರೆ ಹಿಂದಿನ ಧರ್ಮದ ಪೂರ್ವಾಶ್ರಮದ ಎಲ್ಲ ಸಂಬಂಧ ಕಡಿತಗೊಳ್ಳುತ್ತಿದೆ ಎಂಬ ಪರಿಜ್ಞಾನವೂ ಇಲ್ಲವೇ ಎಂದು ಪ್ರಶ್ನಿಸಿದರು.
ಜಾತಿ ಗಣತಿಗೆ ಅವರ ಸಚಿವರೇ ವಿರೋಧಿಸಿದ್ದಾರೆ, ಜಾತಿ ಗಣತಿ ವಿರೋಧಿಸುವವರಿಗೆ ಮಂತ್ರಿಮಂಡಳದಿಂದ ವಜಾ ಹಾಗೂ ಹೈಕಮಾಂಡ್ ಗೆ ದೂರು ನೀಡುವುದಾಗಿ ಮುಖ್ಯಮಂತ್ರಿ ತಮ್ಮ ಸಚಿವರಿಗೆ ಬೆದರಿಕೆ ಹಾಕಿದ್ದಾರೆ, ಈ ರೀತಿಯ ದುರಾಡಳಿತ ಬ್ರಿಟಿಷರ ಅವಧಿಯಲ್ಲೂ ಆಗಿಲ್ಲ ಎಂದು ದೂರಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದೇ ಒಂದು ರೂ. ಅಭಿವೃದ್ಧಿ ಕಾರ್ಯ ಮಾಡಿಲ್ಲ, ಕೇವಲ ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುವ ಮುಖ್ಯಮಂತ್ರಿಗಳು ಅತಿ ಹೆಚ್ಚು ಸಾಲ ಮಾಡಿದ್ದು ಏಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿದ ಅವರು, ರಾಜ್ಯದ ಒಟ್ಟು ಸಾಲ 7 ಲಕ್ಷ ಕೋಟಿ ರೂ.ಗಳಲ್ಲಿ 5 ಲಕ್ಷ ಕೋಟಿ ರೂ. ಸಿದ್ದರಾಮಯ್ಯ ಅವರ ಅವಧಿಯಲ್ಲಿಯೇ ಆಗಿದೆ, ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 38 ಸಾವಿರ ಕೋಟಿ ರ ಎಸ್.ಇ.ಪಿ. ಟಿ.ಎಸ್.ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿ ದಲಿತರಿಗೆ ಮೋಡ ಮಾಡಿದ್ದು ಸಿದ್ದರಾಮಯ್ಯ ಎಂದರು.
ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಈ ಜಾತಿ ಜನಗಣತಿ ಮುನ್ನಲೆಗೆ ತಂದಿದೆ, ಈ ಹಿಂದೆ ನ್ಯಾ.ಕಾಂತ ರಾಜ್ ವರದಿಯ ಒಂದು ಪುಟ ಸಹ ತಿರುವಿ ಹಾಕಲಿಲ್ಲ, ಈಗ ಪುನಃ 420 ಕೋಟಿ ರೂ. ಹಣವನ್ನು ಸಮೀಕ್ಷೆ ಕಾರ್ಯಕ್ಕೆ ಬಳಸಿ ಸಾರ್ವಜನಿಕರ ಹಣ ದುರಪಯೋಗಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದರು.
ಎಲ್ಲದಕ್ಕೂ ಎಸ್.ಐ.ಟಿ. ರಚನೆಗೆ ಮುಂದಾಗುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೇಲೆ ಬಂದಿರುವ ಆರೋಪದಮೇಲೆ ಎಸ್.ಐ.ಟಿ ತನಿಖೆ ಮಾಡಲಿ, ಮತ ಖರೀದಿ ಮೇಲೆ ಅವರು ಗೆಲುವು ಸಾಧಿಸಿದ್ದಾರೆ ಎಂಬುದು ಜವಾಬ್ದಾರಿ ಸ್ಥಾನದಲ್ಲಿರುವ ಸಿ.ಎಂ.ಇಬ್ರಾಹಿಂ ಆರೋಪ ಮಾಡಿದ್ದಾರೆ, ಹೀಗಾಗಿ ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಎಸ್.ಐ.ಟಿ ತನಿಖೆ ನಡೆಸಿಕೊಳ್ಳಲಿ ಎಂದು ಸವಾಲು ಹಾಕಿದರು | TV NEWS KARNATAKA SEP 21 2025

20/09/2025

ನಾಳೆ ಭಾರತ ಆ್ಯಂಡ್ ಪಾಕಿಸ್ತಾನ ಮ್ಯಾಚ್, ಪ್ರಧಾನಿ ಮೋದಿ ವಿರುದ್ಧ ಎಂಬಿ ಪಾಟೀಲ ಕಿಡಿ
ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ ಹೇಳಿಕೆ
ಅಮಾನುಷವಾಗಿ ನಮ್ಮ ಜನರನ್ನು ಪಾಕಿಸ್ತಾನದವರು ಹತ್ಯೆ ಮಾಡಿದ್ದಾರೆ
ಪಾಕಿಸ್ತಾನದ ಜೊತೆಗೆ ನಮ್ಮ ಸಂಬಂಧ ಕಟ್ ಆಗಬೇಕು
ಭಾರತ, ಪಾಕಿಸ್ತಾನಕ್ಕೆ ನಮ್ಮ ವಿರೋಧ ಇದೆ
ಗೆಲುವು, ಸೋಲುವುದು ಎರಡನೇ ಮಾತು
ಆದ್ರೇ, ಇವರ ಜೊತೆಗೆ ಮ್ಯಾಚ್ ಆಡೋದು ಏಕೆ..?
ಕಾಶ್ಮೀರದಲ್ಲಿ ನಮ್ಮ ಜನರನ್ನು ಹತ್ಯೆ ಮಾಡಿದ್ದಾರೆ
ಅವರ ಕುಟುಂಬದವರಿಗೆ ನೋವು ಆಗೋದಿಲ್ವಾ
ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಆಡುವುದೇ ತಪ್ಪು | TV NEWS KARNATAKA SEP 20 2025

20/09/2025

ರಾಜ್ಯ ಸರ್ಕಾರದ ಜಾತಿ ಗಣತಿ ವಿಚಾರ
ಜಾತಿ ಗಣತಿ ಸೋನಿಯಾ ಗಾಂಧಿ ಅಣಿತಿಯಂತೆ ನಡೆಯುತ್ತಿದೆ ಎಂದು ಯತ್ನಾಳ ಆರೋಪ
ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ
ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ ಮಾಡಿದ್ದಾರೆ
ಇವೆಲ್ಲ ಸೋನಿಯಾ ಗಾಂಧಿ ಕೊಟ್ಟಿರೋ ಹೊಸ ಹೊಸ ನಾಮಂ ಎಂದ ಯತ್ನಾಳ
ಕೆಲವರು ಕ್ರಿಶ್ಚಿಯನ್ ರಾಷ್ಟ್ರ ಕೆಲವರು ಮುಸ್ಲಿಂ ರಾಷ್ಟ್ರ ಮಾಡಬೇಕೆನ್ನುತ್ತಾರೆ
ಈ ಹಿನ್ನಲೆ ಜಾತಿ ವರ್ಗೀಕರಣ ಮಾಡಿದ್ದಾರೆ
ಇವೆಲ್ಲಾ ಜಾತಿಗಳು ನಮ್ಮ ದೇಶದಲ್ಲಿ ವಿಶ್ವದಲ್ಲೇ ಇಲ್ಲ
ಸೋನಿಯಾ ಗಾಂಧಿ ನಿರ್ದೇಶನದ ಮೇಲೆ ಸಿಎಂ ಸಿದ್ದರಾಮಯ್ಯ ಕೀಳು ಮಟ್ಟದ ವ್ಯವಸ್ಥೆ ಮಾಡಿದ್ದಾರೆ
ಈ ಕುರಿತು ಅವರದ್ದೆ ಸಚಿವ ಸಂಪುಟದಲ್ಲಿ ಗೊಂದಲವಾಗಿದೆ
ಸಿದ್ದರಾಮಯ್ಯ ಇದೆಲ್ಲಾ ಕೈಬಿಡಬೇಕು
ಜಾತಿ ಗಣತಿ ಮಾಡುವುದಕ್ಕೆ ರಾಜ್ಯಕ್ಕೆ ಅಧಿಕಾರ ಇಲ್ಲಾ ಕೇಂದ್ರಕ್ಕೆ ಇದೆ
ಲಿಂಗಾಯತ ಕಡಿಮೆ ಒಕ್ಕಲಿಗ ಕಡಿಮೆ ಇದ್ದಾರೆ
ಮುಸ್ಲಿಂಮರು ಹೆಚ್ಚಿದ್ದಾರೆ ಎಂದು ತೋರಿಸೋ ನಾಟಕವಿದು
ಬೂಕರ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ದರಸಾ ಉದ್ಘಾಟನೆ ಸುಪ್ರೀಂ ಕೋರ್ಟ್ ತೀರ್ಪು ವಿಚಾರ
ಇದು ಧಾರ್ಮಿಕ ಮನೋಭಾವನೆಗೆ ಸಂಬಂಧಿಸಿದ್ದು
ಕೋರ್ಟಿಗೆ ಹೋಗಿದ್ದು ತಪ್ಪು
ಕೋರ್ಟಿನಲ್ಲಿ ಪ್ರಶ್ನೆ ಮಾಡಬಾರದಾಗಿತ್ತು ಎಂದ ಯತ್ನಾಳ | TV NEWS KARNATAKA SEP 20 2025

20/09/2025

ನಾಡದೇವಿಯ ನವರಾತ್ರಿ ಉತ್ಸವ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರ ವರೆಗೂ ನಡೆಯಲಿದೆ ಎಂದು ಮಾಜಿ ಶಾಸಕ ದೇವಾನಂದ್ ಚವ್ಹಾಣ ಹೇಳಿದರು. ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತವಾಗಿ 54 ವರ್ಷಗಳಿಂದ ಈ ಉತ್ಸವವನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಮಾಡಿಕೊಂಡು ಬರಲಾಗುತ್ತಿದೆ. ಅಲ್ಲದೇ, ಅಂದಿನಿಂದ 2001 ಕುಂಬಮೇಳ, ರೇಝೀಮ‌ ಕುಣಿತ,ನಾಸಿಕ ಡೋಲ, ಡಿಜೆ ಸೌಂಡ್, ನವಿಲು ಕುಣಿತ ಹೀಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು | TV NEWS KARNATAKA SEP 20 2025

20/09/2025

ವಿಜಯಪುರ: ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ ಜಿಲ್ಲೆಯ ಹುಲಜಂತಿ ಗ್ರಾಮದಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆ ಮಾಡಿದ್ದ ಬ್ಯಾಗ್ ಪತ್ತೆಯಾಗಿದೆ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಡಚಣದಲ್ಲಿ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಒಂದು ಬ್ಯಾಗ್ ಪತ್ತೆಯಾಗಿದೆ. ಇದಕ್ಕೂ ಮೊದಲ ಸೆಪ್ಟೆಂಬರ್ 16ರಂದು ದರೋಡೆ ಮಾಡಿಕೊಂಡು ಹೋಗುವಾಗ ಹುಲಜಂತಿನಲ್ಲಿ ಕಾರು, ಬೈಕ್ ಮಧ್ಯೆ ಅಪಘಾತ ಆಗಿತ್ತು. ಆ ಸಂದರ್ಭದಲ್ಲಿ ಕಾರ್‌‌ನಲ್ಲಿ 1 ಲಕ್ಷ 3 ಸಾವಿರ ನಗದು, 21 ಗೋಲ್ಡ್ ಪ್ಯಾಕೇಟ್ಸ್ ಸಿಕ್ಕಿತ್ತು. ಸಧ್ಯ ಸಿಕ್ಕಿರು ಬ್ಯಾಗಿನಲ್ಲಿ 41 ಲಕ್ಷ 4 ಸಾವಿರ ನಗದು ಪತ್ತೆಯಾಗಿದೆ. ಅಲ್ಲದೇ, 36 ಪ್ಯಾಕೇಟ್ಸ್‌‌ನ 6.54 ಕೆ‌ಜಿ ಚಿನ್ನ ಸಿಕ್ಕಿದೆ. ಇನ್ನು ಹುಲಜಂತಿಯಲ್ಲಿ ಸಿಕ್ಕ ವ್ಯಾನ್‌ನ್ನು ಚಡಚಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೇ ಮಹಾರಾಷ್ಟ್ರದ ಮಂಗಳವಾಡಿ ಪೊಲೀಸರು, ಚಡಚಣ ಪೊಲೀಸರಿಂದ ತನಿಖೆ ಮುಂದುವರಿಸಿದ್ದಾರೆ. ಆದಷ್ಟು ಬೇಗನೆ ಉಳಿದ ನಗದು, ಚಿನ್ನ ಹಾಗೂ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದರು | TV NEWS KARNATAKA SEP 19 2025

Address

WARD NO 15 HOUSE NO 1169 HASIMPEER DARDA Road AMBEDAKAR NAHAR VIJAYAPUR
Bijapur
586104

Alerts

Be the first to know and let us send you an email when SK SUKIL posts news and promotions. Your email address will not be used for any other purpose, and you can unsubscribe at any time.

Contact The Business

Send a message to SK SUKIL:

Share