SK SUKIL

SK SUKIL this is official gage SK SUKIL

21/10/2025

ನಿಮ್ಮೆಲ್ಲಾ ಕನಸುಗಳು ಈಡೇರಲಿ ನಿಮ್ಮ ಬದುಕಿನ ಹಾದಿಯಲ್ಲಿದ್ದ ಅಡೆತಡೆಗಳು ಬೆಳಕಿನ ಹಬ್ಬದಲ್ಲಿ ನಿವಾರಣೆಯಾಗಲಿ ನಿಮ್ಮ ಇಷ್ಟಾರ್ಥಗಳೆಲ್ಲಾ ಈಡೇರಲಿ ಎಲ್ಲರಿಗೂ ಬೆಳಗಿನ ಹಬ್ಬ ದೀಪಾವಳಿಯ ಶುಭಾಶಯಗಳು | TV NEWS KARNATAKA OCT 21 2025

19/10/2025

ಮಾತಿನ ಭರದಲ್ಲಿ ಆಡಿದ ಮಾತುಗಳನ್ನೇ ದೊಡ್ಡದು ಮಾಡಿ ಕನೇರಿ ಶ್ರೀಗಳನ್ನು ಅಪಮಾನ ಮಾಡುವ ಕೆಲಸ ನಡೆಯುತ್ತಿದೆ
ಅಂಬಿಗರ ಚೌಡಯ್ಯನವರು ಸಹ ಕಟುವಾಗಿ ತಮ್ಮ ವಚನಗಳಲ್ಲಿ ಅನ್ಯಾಯವನ್ನು ವಿರೋಧಿಸಿದ್ದಾರೆ
ಇದೇ ಮಾದರಿಯಲ್ಲಿ ಕನೇರಿ ಶ್ರೀಗಳು ಒಡಕು ಮೂಡಿಸುವುದರ ವಿರುದ್ಧ ಕಿಡಿ
ವಿಜಯಪುರದಲ್ಲಿ ಶಿವಸೇನೆ (ಏಕನಾಥ ಶಿಂಧೆ ಬಣ) ರಾಜ್ಯ ಘಟಕದ ಅಧ್ಯಕ್ಷ ಶ್ರೀ ಆಂದೋಲ ಸಿದ್ಧಲಿಂಗ ಸ್ವಾಮೀಜಿ ಹೇಳಿಕೆ
ಮಾತಿನ ಭರದಲ್ಲಿ ಶ್ರೀಗಳು ಮಾತನಾಡಿರಬಹುದು
ಲಿಂಗಾಯತ ಮಹಾಸಭೆಗೆ ಸೂತ್ರಧಾರಿಯಾಗಿರುವ ಜಿಲ್ಲೆಯ ಉಸ್ತುವಾರಿ ಸಚಿವರು ಶ್ರೀಗಳಿಗೆ ಕರೆ ಮಾಡಿ ಈ ವಿಷಯದ ಬಗ್ಗೆ ಮನವರಿಕೆ ಮಾಡಿಕೊಟ್ಟು ಕ್ಷಮೆ ಕೇಳುವಂತೆ ಹೇಳಿದ್ದರೆ ಈ ವಿಷಯ ದೊಡ್ಡದಾಗುತ್ತಿರಲಿಲ್ಲ
ಆದರೆ ಹಿಂಬಾಲಕರಿಂದ ಈ ವಿಷಯವನ್ನು ದೊಡ್ಡದು ಮಾಡಿದ್ದು ಯಾರು?
ಜಿಲ್ಲೆಯಲ್ಲಿ ಎಗ್ಗಿಲ್ಲದೇ ಗಾಂಜಾ ದೊರಕುತ್ತಿದೆ
ಈ ಎಲ್ಲವೂಗಳನ್ನು ಕಡಿವಾಣ ಹಾಕುವ ಬದಲು ಈ ವಿಷಯವನ್ನು ದೊಡ್ಡದು ಮಾಡುವುದು ಇರಲಿಲ್ಲ
ಈ ವಿವಾದವನ್ನು ಕನೇರಿ ಶ್ರೀಗಳು ತಿಳಿಗೊಳಿಸಬೇಕು
ಆ ರೀತಿ ಶಬ್ದ ಬಳಕೆಯನ್ನೂ ನಾನು ಸಹ ಒಪ್ಪುವುದಿಲ್ಲ
ನುಡಿದರೆ ಮುತ್ತಿನ ಹಾರದಂತಿರಬೇಕು ಎನ್ನುವುದು ನನ್ನ ಭಾವನೆ ಕೂಡಾ ಹೌದು
ಸಂಘ ಪರಿವಾರ ಬಲಿಷ್ಠವಾದರೆ ತಮ್ಮ ಸೋಲು ಎಂಬ ಭಯದಿಂದ ಪ್ರಿಯಾಂಕ್ ಖರ್ಗೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ
ಪ್ರಿಯಾಂಕ್ ಖರ್ಗೆ ಆ್ಯಂಡ್ ಟೀಂಗೆ ತಕ್ಕ ಪಾಠ ಕಲಿಸಲಿದ್ದೇವೆ
ಸಂಘ ಪರಿವಾರದ ಪಥಸಂಚಲನದಲ್ಲಿ ಭಾಗಿಯಾದ ಪಿಡಿಓಗೆ ಅಮಾನತ್ತು ಮಾಡಲಾಗಿದೆ
ಆದರೆ ಅನೇಕ ಭ್ರಷ್ಟ ಪಿಡಿಓಗಳು ಅವರ ಸುತ್ತ ಸುತ್ತುತ್ತಾರೆ ಅವರನ್ನು ಅಮಾನತ್ತು ಮಾಡಲಿ
ಗಡಿ ವಿವಾದ ಕೆದಕುವವರು ಉದ್ಛವ ಠಾಕ್ರೆ ಬಣದವರು
ಉದ್ಧವ ಠಾಕ್ರೆ ಅವರಂತಹ ನಾಯಕರು ಕರ್ನಾಟಕ-ಮಹಾರಾಷ್ಟçದಲ್ಲಿ ಗಡಿ ವಿವಾದದ ಸೃಷ್ಟಿ ಮಾಡುತ್ತಾರೆ
ಭಾಷೆ, ಗಡಿ ವಿವಾದವನ್ನು ಉದ್ಛವ ಠಾಕ್ರೆ ಬಣದವರು ಕೆಣಕುತ್ತಾರೆ
ಈ ಹಿಂದೆ ಮರಾಠಿ-ಹಿಂದಿ ಭಾಷಿಕರ ಸಂಘರ್ಷ ನಡೆದಾಗ ಏಕನಾಥ ಶಿಂಧೆ ಹಿಂದಿ ಭಾಷಿಕರ ಪರ ನಿಂತುಕೊಂಡರು
ಯಾವುದು ನ್ಯಾಯದ ಪರ ಅವರು ಅದರ ಪರ
ಈಗ ಶಿವಸೇನೆ ಪಕ್ಷ ಬದಲಾಗಿದೆ, ಅದು ಉದ್ಧವ ಠಾಕ್ರೆ ಅವರ ಕೈಯಲ್ಲಿ ಇಲ್ಲ
ಈಗ ಏಕನಾಥ ಶಿಂಧೆ ಅವರ ಸಾರಥ್ಯದಲ್ಲಿದೆ
ಪಕ್ಷ ಸಂಘಟನೆಯ ಸಭೆ ಅವರೊಂದಿಗೆ ನಡೆದಾಗ ನಾವೇ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಬಗ್ಗೆ ವಿಷಯ ಪ್ರಸ್ತಾಪಿಸಿದಾಗ ಹೃದಯ ವೈಶಾಲ್ಯವುಳ್ಳ ಏಕನಾಥ ಶಿಂಧೆ
ಈ ವಿಷಯ ಸುಪ್ರಿಂಕೋರ್ಟ್ನಲ್ಲಿದೆ
ನ್ಯಾಯಾಲಯದ ತೀರ್ಪು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ
ಸ್ಥಳೀಯ ಸಂಸ್ಥೆಯಿಂದ ಹಿಡಿದು ಲೋಕಸಭೆಗೆ ಶಿವಸೇನೆ ಕರ್ನಾಟಕದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ
ಹಿಂದೂಗಳಿಗೆ ಭಾರತದಲ್ಲಿ ಪ್ರಥಮಾದ್ಯತೆ ದೊರಕಬೇಕು
ಭಾರತ ವಿಶ್ವದಲ್ಲಿಯೇ ಸರ್ವತೋಮುಖ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬ ಎರಡು ಮಹತ್ವದ ಸಂಕಲ್ಪವನ್ನು ಶಿವಸೇನೆ ಹೊಂದಿದೆ
ರಾಜ್ಯದಲ್ಲಿ ಪ್ರಬಲವಾಗಿ ಪಕ್ಷ ಸಂಘಟನೆ ಮಾಡಲಾಗುವುದು
ಕುಂಭಕರ್ಣ ನಿದ್ರೆಯಲ್ಲಿ ರಾಜ್ಯ ಸರ್ಕಾರ ಇದೆ
ಧಾರಕಾರ ಮಳೆಯಿಂದಾಗಿ ರೈತ ಸಂಕಷ್ಟದಲ್ಲಿದ್ದರೂ ಸಹ ರಾಜ್ಯ ಸರ್ಕಾರ ರೈತರಿಗೆ ಒಂದೇ ಒಂದು ರೂ. ಪರಿಹಾರ ನೀಡದೇ ಕುಂಭಕರ್ಣ ನಿದ್ರೆಯಲ್ಲಿದೆ
ಇದೊಂದು ದಪ್ಪ ಚರ್ಮದ ದೇಶದಲ್ಲಿಯೇ ಅತ್ಯಂತ ಕೆಟ್ಟ ಸರ್ಕಾರ ಎಂದು ವಾಗ್ದಾಳಿ
ಧಾರಾಕಾರ ಮಳೆಯಿಂದಾಗಿ ರೈತರು ಬೆಳೆದ ಬೆಳೆ ನೆಲಕಚ್ಚಿದೆ
ಆದರೆ ಸರ್ಕಾರ ಮಾತ್ರ ರೈತರನ್ನು ನಡು ನೀರಿನಲ್ಲಿ ಬಿಟ್ಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದಲ್ಲಿಯೇ ಕೆಟ್ಟ ಸರ್ಕಾರ
ಜಾತಿ ಸಮೀಕ್ಷೆ ಬದಿಗೊತ್ತಿ ಬೆಳೆ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ಕೊಡಿ, ಕೇವಲ ವೈಮಾನಿಕ ಸಮೀಕ್ಷೆ ಹೆಸರಿನಲ್ಲಿ ಏರ್ ಷೋ ಎಂಬ ನಾಟಕ ನಡೆಸಿದೆ
ಹೊರತು ಒಂದೇ ಒಂದು ರೂ. ರೈತರಿಗೆ ಪರಿಹಾರ ಕೈ ಸೇರಿಲ್ಲ
ರೈತರ ನೋವಿಗೆ ಸ್ಪಂದಿಸದ ಈ ಸರ್ಕಾರ ದಪ್ಪ ಚರ್ಮದ ಕುಂಭಕರ್ಣ ನಿದ್ರೆಯಲ್ಲಿರುವ ಸರ್ಕಾರ
ರೈತ ಶಾಪ ಹಾಕಿದರೆ ಈ ಸರ್ಕಾರ ಉಸಿರಾಡಲು ಸಾಧ್ಯವಾಗುವುದಿಲ್ಲ | TV NEWS KARNATAKA OCT 19 2025

19/10/2025

ವಿಜಯಪುರ: ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಹಿಂದೂ ಜಾಗೃತ ವೇದಿಕೆ ನೇತೃತ್ವದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಹಲವು ಮುಖಂಡರು ಪ್ರತಿಭಟನೆ ನಡೆಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಕನ್ಹೇರಿ ಶ್ರೀಗಳ ಜಿಲ್ಲಾ ಪ್ರವೇಶ ನಿರ್ಬಂಧದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರೇ ಕಾರಣ, ಈ ಹಿಂದೆಯೂ ರಂಭಾಪೂರಿ, ಶ್ರೀಶೈಲ ಜಗದ್ಗುರುಗಳ ಬಗ್ಗೆ ಅತ್ಯಂತ ಅಗೌರವಯುತವಾಗಿ ಅವರು ನಡೆದುಕೊಂಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ದಿನಗಳಲ್ಲಿ ಶ್ರೀಗಳ ನಿಷೇಧ ಆದೇಶ ವಾಪಾಸ್ಸು ಪಡೆಯದೇ ಹೋದರೆ ಬಬಲೇಶ್ವರ ಮತಕ್ಷೇತ್ರದಿಂದಲೇ ಹೋರಾಟ ಆರಂಭಿಸುವೆ ಎಂದು ನಡಹಳ್ಳಿ ಗುಡುಗಿದರು.
ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ರಂಭಾಪುರಿ, ಶ್ರೀಶೈಲ ಮತ್ತಿತರ ಜಗದ್ಗುರುಗಳ ಬಗ್ಗೆ ನಡೆದುಕೊಂಡ ರೀತಿ ಇಡೀ ಜನರಿಗೆ ಗೊತ್ತಿದೆ, ಈಗಲೂ ಅವರೇ ಕನ್ಹೇರಿ ಶ್ರೀಗಳ ಪ್ರವೇಶ ನಿರ್ಬಂಧದ ಹಿಂದೆ ಇದ್ದಾರೆ ಎಂದು ದೂರಿದರು.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆಸಿದ ನೀವು ಹಿಂದೂ ಅಲ್ಲ ಎನ್ನುತ್ತೀರಿ, ಆದರೆ ಮನೆಯಲ್ಲಿ ಕೃಷ್ಣನ ಪೂಜೆ ಮಾಡುತ್ತೀರಿ, ಹಾಗಾದರೆ ನೀವು ಹಿಂದೂ ಎಂಬುದನ್ನು ಒಪ್ಪಿಕೊಳ್ಳಿ, ಆಡುವ ಮಾತು ಒಂದು, ನಡೆದುಕೊಳ್ಳುವುದು ಇನ್ನೊಂದು, ಈ ರೀತಿ ಒಡೆದಾಳುವ ಬಗ್ಗೆ ಲಿಂಗಾಯತ ಮಠಾಧೀಶರು ಎಚ್ಚೆತ್ತುಕೊಳ್ಳಬೇಕು. ಧರ್ಮ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಿ, ಲಿಂಗಾಯತ ಎಂದು ಬರೆಯಿಸಿ ಎಂದು ಹೇಳುವುದು ಒಡೆದಾಳುವ ಪ್ರಯತ್ನ, ಈ ಪ್ರಯತ್ನಕ್ಕೆ ಬಲಿಯಾಗಬೇಡಿ ಎಂದರು.
ಸಾವಯವ ಬೀಜ ಪ್ರಮಾಣ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ಕನ್ಹೇರಿ ಶ್ರೀಗಳು ಸಿದ್ಧೇಶ್ವರ ಸ್ವಾಮೀಜಿಗಳ ಅಪ್ಪಟ ಶಿಷ್ಯರು. ಅವರಿಗೆ ಮಾಡಿರುವ ಅಪಮಾನ ನಡೆದಾಡುವ ದೇವರು ಸಿದ್ಧೇಶ್ವರ ಸ್ವಾಮೀಜಿಗಳಿಗೆ ಮಾಡಿದ ಅಪಮಾನವಾಗಿದೆ. ಇದನ್ನು ನಾವು ಸಹಿಸುವುದಿಲ್ಲ, ನಿರ್ಬಂಧ ಆದೇಶ ಹಿಂಪಡೆಯದಿದ್ದರೆ ದೊಡ್ಡ ಹೋರಾಟಕ್ಕೆ ಅಣಿಯಾಗಲಾಗುವುದು ಎಂದರು.
ಸಹಕಾರಿ ಧುರೀಣ ರಮೇಶ ಬಿದನೂರ ಮಾತನಾಡಿ, ಕನ್ಹೇರಿ ಶ್ರೀಗಳ ಪೂರ್ವಾಶ್ರಮ ವಿಜಯಪುರ, ಇಲ್ಲಿಯೇ ಅವರಿಗೆ ಪ್ರವೇಶ ನಿರ್ಬಂಧಿಸಿರುವುದು ಅತ್ಯಂತ ನೋವು ತರುವ ಸಂಗತಿಯಾಗಿದೆ. ಇಡೀ ವಿಜಯಪುರ ಅಷ್ಟೇ ಅಲ್ಲ ಇಡೀ ಕರ್ನಾಟಕ ಅವರ ನಿಷೇಧ ವಾಪಾಸ್ಸು ಪಡೆಯುವಂತೆ ಒತ್ತಾಯಿಸುತ್ತಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ಮುಖಂಡರಾದ ಉಮೇಶ ಕಾರಜೋಳ, ಗುರುಲಿಂಗಪ್ಪ ಅಂಗಡಿ, ಉಮೇಶ ವಂದಾಲ, ರಾಘವ ಅಣ್ಣಿಗೇರಿ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ವಿಜಯಕುಮಾರ ಕುಡಿಗನೂರ, ಈರಣ್ಣ ಪಟ್ಟಣಶೆಟ್ಟಿ, ಶಿವಾನಂದ ಮಖಣಾಪೂರ ಇದ್ದರು | TV NEWS KARNATAKA OCT 19 2025

19/10/2025

ರೌಡಿ ಶೀಟರ್ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ. ಯುನಸ್ ಇಕ್ಲಾಸ್ ಪಟೇಲ್ (35) ಗುಂಡಿಗೆ ಬಲಿಯಾದ ರೌಡಿ ಶೀಟರ್. ನಟೋರಿಯಸ್ ಹಂತಕನಾಗಿದ್ದ ಯುನಸ್ ಪಟೇಲ್
ನಿನ್ನೆ ಓರ್ವನಿಗೆ ಚಾಕೂ ತೋರಿಸಿ 25 ಸಾವಿರ ಹಣ ದರೋಡೆ ಮಾಡಿದ್ದನು. ಯುನಸ್
ನಂತರ ಆತನ ಸ್ಕೂಟಿ ಸಹ ದರೋಡೆ ಮಾಡಿ ಪರಾರಿಯಾಗಿದ್ದ. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಯುನಸ್ ಆತನ ಸ್ವಗ್ರಾಮ ಆಲಮೇಲ ತಾಲೂಕಿನ ದೇವಣಗಾಂವ್ ಗ್ರಾಮದತ್ತ ತೆರಳುತ್ತಿರುವ ಮಾಹಿತಿ ಅರಿತ ಪೊಲೀಸರು ಸಿಂದಗಿ ತಾಲೂಕಿನ ರಾಂಪುರ್ ಬಳಿ ಆರೋಪಿ ಯೂನಿಸ್ ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಚಾಕೂನಿಂದ ಹಲ್ಲೆ ಮಾಡಲು ಯುನಸ್ ಯತ್ನಿಸಿದ್ದಾನೆ. ಇಬ್ಬರು ಪೊಲೀಸ್ ಕಾನ್ಸಸ್ಟೇಬಲ್ ಹಾಗೂ ಇನ್ಸಪೆಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿ ಬಿದ್ದ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ, ಈ ವೇಳೆ ಎಚ್ಚರಿಕೆ ನೀಡಲು ಗಾಳಿಯಲ್ಲಿ ಗುಂಡು‌ ಹಾರಿಸಿದ್ದಾರೆ.
ಆದರೂ ಶರಣಾಗದ ಆರೋಪಿ ಯುನಸ್ ಕಾಲಿಗೆ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಗುಂಡೇಟು ನೀಡಿದ್ದಾರೆ. ಆರೋಪಿಯನ್ನು ಸಿಂದಗಿ ತಾಲೂಕಾ ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು.
ಆರೋಪಿ ಯುನಸ್ ಮೃತಪಟ್ಟಿದ್ದಾಗಿ ಜಿಲ್ಲಾಸ್ಪತ್ರೆಯಿಂದ ಮಾಹಿತಿ ಲಭ್ಯವಾಗಿದೆ‌. ಮೃತ ಆರೋಪಿ ಯುನಸ್ ಮೇಲೆ ಎರಡು ಕೊಲೆ ಪ್ರಕರಣ, ಒಂದು ಕೊಲೆ ಯತ್ನ, ಸೇರಿದಂತೆ 12 ಪ್ರಕರಣಗಳಿವೆ. ಈ‌ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ | TV NEWS KARNATAKA OCT 19 2025

18/10/2025

ನ.೭ ರಂದು ರೋಣ ಚಲನಚಿತ್ರ ಬಿಡುಗಡೆ
ವಿಜಯಪುರ: ರೋಣ ಚಲನಚಿತ್ರ ನ. ೭ ರಂದು ತೆರೆಗೆ ಬರಲಿದ್ದು, ಚಲನಚಿತ್ರದ ದುರ್ಗಾದೇವಿ ಕುರಿತಾದ ಹಾಡನ್ನು ಅ.೧೯ ರಂದು ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ಹಾಡನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಚಲನಚಿತ್ರದ ನಿರ್ಮಾಪಕ ಮಾಲೂರ ವಿಜಯ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗದ ಎಲ್ಲ ಕಲಾವಿದರ ಸಂಗಮದAತಿರುವ ರೋಣ ಚಿತ್ರ ಸಾಹಸ, ಮನೋರಂಜನೆ, ಪ್ರೀತಿ ಪ್ರೇಮ ಹೀಗೆ ಎಲ್ಲ ವಿಷÀಯ ವ್ಯಾಪ್ತಿ ಹೊಂದಿದ್ದು ಗ್ರಾಹಕರಿಗೆ ಪೈಸಾ ವಸೂಲ್ ಆಗುವುದು ಖಾತ್ರಿಯಾಗುವುದು ಎಂದರು.
ನ. ೭ ಕ್ಕೆ ತೆರೆಗೆ ಬರಲಿರುವ ರೋಣ ಚಿತ್ರದಲ್ಲಿರುವ ದುರ್ಗಾದೇವಿ ಹಾಡುಗಳನ್ನು ದರಬಾರ ಹೈಸ್ಕೂಲ ಮೈದಾನದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಡುಗಡೆಗೊಳಿಸಲಿದ್ದಾರೆ. ವಿಜಯಪುರ ಎಂಬುದು ಎಲ್ಲರಿಗೂ ವಿಜಯೋತ್ಸವ ಇದ್ದಂತೆ, ಹಾಗಾಗಿ ಇಲ್ಲಿಂದಲೇ ವಿಜಯಯಾತ್ರೆ ಆರಂಭಿಸುತ್ತಿದ್ದೇವೆ ಎಂದರು.
ರೋಣ ಚಿತ್ರದ ನಿರ್ದೇಶಕ ಸತೀಶಕುಮಾರ ಮಾತನಾಡಿ, ಈ ಚಿತ್ರದಲ್ಲಿ ಪೊಲಿಟಿಕಲ್ ಡ್ರಾಮಾ, ತಂದೆ- ಮಗನ ಬಾಂಧವ್ಯ, ಸ್ನೇಹಿತರ, ಸಂಬAಧಿಕರ ಪಾತ್ರ, ಸಾಹಸಮಯ ದೃಶ್ಯಗಳಿವೆ, ಚಿತ್ರಗಳಗಲ್ಲಿ ಬರುವ ಪಾತ್ರಗಳು ಎಲ್ಲರಿಗೂ ತಮ್ಮ ಸುತ್ತಮುತ್ತಲಿನ ಘಟನೆಗಳನ್ನು ನೆನಪಿಸುತ್ತವೆ ಎಂದರು.
ರೋಣ ಚಿತ್ರದ ನಾಯಕ ರಘುರಾಜನ ಮಾತನಾಡಿ, ನಾಯಕಿಯಾಗಿ ಪ್ರಕೃತಿ ಪ್ರಸಾದ ಅವರು ಅಭಿನಯಿಸಿದ್ದಾರೆ. ಹಿರಿಯ ನಟರಾದ ಅವಿನಾಶ ಸೇರಿದಂತೆ ಹಲವಾರು ನಟರ ತಾರಾಗಣವೇ ಚಿತ್ರದಲ್ಲಿದೆ ಎಂದರು.
ಚಿತ್ರ ತಂಡದ ಗೀತಾ, ಮನೋಜ, ಆದೀಶ್ವರ ಇದ್ದರು | TV NEWS KARNATAKA OCT 18 2025

17/10/2025

ಕನ್ನೇರಿ ಶ್ರೀಗಳ ವಿರುದ್ಧ ಪ್ರತಿಭಟನೆ ಪ್ರತಿಭಟನಾಕಾರರಿಗೆ ಮನವಿ ಮಾಡಿದ ಸಚಿವ ಶಿವಾನಂದ ಪಾಟೀಲ
ಕನ್ನೇರಿ ಶ್ರೀಗಳು ಆಡು ಭಾಷೆಯಲ್ಲಿ ಮಾತನಾಡಿರಬಹದು. ಶ್ರೀಗಳ ಬಗ್ಗೆ ಯಾವುದೇ ಪ್ರತಿಭಟನೆ ಅತಿರೇಕಕ್ಕೆ ಹೋಗದಂತೆ ಸಚಿವ
ಶಿವಾನಂದ ಪಾಟೀಲ ಮನವಿ ಮಾಡಿದರು. ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾಮೀಜಿ
ಮಾತನಾಡಿದ್ದು ಸರಿ ಎಂದು ನಾನು ಹೇಳಿಲ್ಲಾ ಆದರೆ ಅವರು ಮಾಡಿರುವ ಕಾರ್ಯವನ್ನ ನಾವು ಪರಿಗಣಿಸಬೇಕು ಎಂದರು.
ವೀರಶೈವ ಅಥವಾ ಲಿಂಗಾಯತ ಎಂದು ಭಿನ್ನಾಭಿಪ್ರಾಯ ಬೇಡ ಎಂದ ಸಚಿವರು. ಇನ್ನೂ ಲಿಂಗಾಯತ ಅಥವಾ ವೀರಶೈವ
ಎನ್ನುವ ಯಾವುದೇ ಬಣದಲ್ಲಿ ನಾನು ಇಲ್ಲ ಎಂದು ಸ್ಪಷ್ಟನೆ ನೀಡಿದರು. ಸಚಿವ ಸಂಪುಟದಲ್ಲಿ ಬದಲಾವಣೆ ಬಗ್ಗೆ ನನಗೆ ಮಾಹಿತಿ
ಗೊತ್ತಿಲ್ಲಾ, ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತೇ ಎಂದರು. ಇನ್ನೂ ವಿಜಯಪುರ ನಗರದ ಸಿದ್ದೇಶ್ವರ ಬ್ಯಾಂಕ್ ಚುನಾವಣೆ
ಯಲ್ಲಿ ಹಳೆ ಪೆನಲ್ ಗೆ ಗೆಲುವುವಾಗಿದೆ. ಹಳೆ ಪೆನಲ್ ಗೆ ಮತ ನೀಡಿ ಎಂದು ಮನವಿ ಮಾಡಿದ್ದೇ, ನನ್ನ ಮನವಿಗೆ ಮತ ನೀಡಿದ
ಮತದಾರರಿಗೆ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರು. ಹೊಸಬರಿಗೆ ಅವಕಾಶ ನೀಡುವಂತೆ ಹಳೆ ಪೆನಲ್ ಗೆ ಮನವಿ ಮಾಡಿದ್ದೇ,
ಬ್ಯಾಂಕ್ ಉಳಿಸಬೇಕು ಎಂಬುದು ನನ್ನ ಉದ್ದೇಶ, ಹೀಗಾಗಿ ನಾನು ಆ ಪೆನೆಲ್ ಪರವಾಗಿ ಪ್ರಚಾರ ಮಾಡಿದ್ದೇನೆ, ಮತ
ನೀಡಿದವರಿಗೆ ಧನ್ಯವಾದ ಸಲ್ಲಿಸಿದೆ ಎಂದರು. ನಾನು ಯಾರ ಪರವಾಗಿಯೂ ಇಲ್ಲಾ ಸ್ಪಷ್ಟಪಡಿಸಿದರು | TV NEWS KARNATAKA OCT 17 2025

16/10/2025

ವಿಜಯಪುರ ನಗರ ಸಂಪೂರ್ಣ ಸ್ಥಬ್ಧ; ಗುಲಾಬಿ ಹೂವು ನೀಡಿ ಮನವಿ: ಆಟೋಗಳಿಗೆ ಡಿಮ್ಯಾಂಡ್ ಪ್ಪೋ ಡಿಮ್ಯಾಂಡು ಸುಪ್ರೀಂ ಕೊರ್ಟ್ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ವಕೀಲ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಖಂಡಿಸಿ ಇಂದು ವಿಜಯಪುರ ನಗರ ಬಂದ್ ಗೆ ಕರೆ ನೀಡಲಾಗಿದೆ.
ದಲಿತ ಸಂಘಟನೆಗಳ ಒಕ್ಕೂಟ
ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟ
ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾಪರ,
ಬಸವಪರ, ಪ್ರಗತಿಪರ ಸಂಘಟನೆಗಳ ಒಕ್ಕೂಟ
ಇವರ ಸಂಯುಕ್ತ ಆಶ್ರಯದಲ್ಲಿ
ಬಂದ್ ಹಿನ್ನಲೆಯಲ್ಲಿ ನಗರದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ. ಇನ್ನೂ ವಿಜಯಪುರ ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಬಸ್ ಆಗಮಿಸದ ಹಿನ್ನೆಲೆಯಲ್ಲಿ ಕೇಂದ್ರೀಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಕೆಲ ಪ್ರಯಾಣಿಕರು ಬಸ್ ಗಳಿಗಾಗಿ ಕಾದು ಕುಳಿತರು. ಹೋರ ಜಿಲ್ಲೆಯಿಂದ ಆಗಮಿಸುತ್ತಿರುವ ಬಸ್ ಗಳಿಗೆ ನಗರದ ಹೊರ ವಲಯದಿಂದಲೇ ಸಾರಿಗೆ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ವಾಪಸ್ ಕಳಿಸುತ್ತಿರುವದು ಕಂಡು ಬಂತು. ಬಸ್ ಸಂಚಾರ ಇರದೇ ಇದ್ದಿದ್ದರಿಂದ ಆಟೋಗಳಿಗೆ ಬಾರಿ ಬೇಡಿಕೆ ಕಂಡು ಬಂದು ಡಿಮ್ಯಾಂಡ್ ಪ್ಪೋ ಡಿಮ್ಯಾಂಡ್ ಎನ್ನುವಂತಾಗಿತ್ತು. ಇನ್ನೂ ಬಂದ್ ಹಿನ್ನಲೆಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿನೂತನ ಮನವಿ ಮಾಡಲಾಯಿತು. ಅಂಗಡಿ ಮುಂಗಟ್ಟು ಹಾಗೂ ಬಸ್ ಬಂದ್ ಮಾಡುವಂತೆ ಮನವಿ ಮಾಡಿದರು. ವಿನೂತನ ರೀತಿಯಲ್ಲಿ ಗುಲಾಬಿ ಹೂ ಕೊಟ್ಟು ಮನವಿ ಮಾಡಿದರು. ಸಂವಿಧಾನ ಉಳಿವಿಗಾಗಿ ಇಂದು ಬಂದ್ ಮಾಡಲಾಗುತ್ತಿದೆ. ಇಂದಿನ‌ ಬಂದ್ ಗೆ ಸ್ವಯಂ ಪ್ರೇರಿತರಾಗಿ ಸಹಕರಿಸಿ ಎಂದು ಮನವಿ ಮಾಡಿದರು. ವಿಜಯಪುರ ನಗರದ ಬಸ್ ನಿಲ್ದಾಣ ಗಾಂಧಿ ವೃತ್ತದ ಬಳಿ ಮನವಿ ಮಾಡಿದರು | TV NEWS KARNATAKA OCT 16 2025

15/10/2025

ದಲಿತ ಸಂಘಟನೆಗಳ ಒಕ್ಕೂಟ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟ ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾಪರ, ಬಸವಪರ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ
ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶ್ರೀ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆತ ಘಟನೆಯನ್ನು ಖಂಡಿಸಿ ಗುರುವಾರ, ದಿನಾಂಕ 16-10-2025 ರಂದು ವಿಜಯಪುರ ಬಂದ್‌
ಹಾಗೂ ಬೃಹತ್‌ ಪ್ರತಿಭಟನಾ ಮೆರವಣಿಗೆ
ಮುಂಜಾನೆ 10 ಗಂಟೆಗೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಗಣಪತಿ ಚೌಕ, ವಾಜಪೇಯಿ ಸರ್ಕಲ್, ಕಿರಾಣಾ ಬಜಾರ್, ಸಿದ್ಧೇಶ್ವರ ರಸ್ತೆ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ
ಯಮನಪ್ಪ ಗುಣಕಿ ಸಮಾಜಿಕ ಕಾರ್ಯಕರ್ತರ
ವಿಜಯಪುರ
ಕರವೇ ಎಚ್ ಶಿವರಾಮೇಗೌಡ ಬಣ (ಹಿರಿಯ ಹೋರಾಟಗಾರರು) ಜಿಲ್ಲಾಧ್ಯಕ್ಷರ ಶೇಷರಾವ್ ಮನೆ ವಿಜಯಪುರ | TV NEWS KARNATAKA OCT 15 2025

13/10/2025

ಹಾಸ್ಯನಟ, ರಂಗಭೂಮಿ ಕಲಾವಿದ
ರಾಜು ತಾಳಿಕೋಟೆ (59) ನಿಧನ | TV NEWS KARNATAKA OCT 2025

12/10/2025

ಶ್ರೀ ಸದ್ಗುರು ನಿರುಪಾಧೀಶ್ವರ
ಪತ್ತಿನ ಸಹಕಾರಿ ಸಂಘ ನಿಯಮಿತ, ವಿಜಯಪುರ
ಉದ್ಘಾಟನಾ ಸಮಾರಂಭದ
ಪರಮ ಪೂಜ್ಯ ಶ್ರೀ ವೀರಭದ್ರ ಮಹಾಸ್ವಾಮಿಗಳು,
ಶ್ರೀ ಸದ್ಗುರು ಅಡವೇಶ ನಿರುಪಾಧೀಶ್ವರ ಮಹಾಸಂಸ್ಥಾನ, ಸುಕ್ಷೇತ್ರ ಅಂಕಲಿಮಠ
ಪ.ಪೂ. ಶ್ರೀ.ಷ.ಬ್ರ. ಅಮರಗುಂಡ ಶಿವಾಚಾರ್ಯ ಸ್ವಾಮಿಗಳು ಪುರವರ ಹಿರೇಮಠ ತುರುವಿಹಾಲ
ಸನ್ಮಾನ್ಯ ಶ್ರೀ ಶಿವಾನಂದ ಪಾಟೀಲ ಮಾನ್ಯ ಸಚಿವರು,
ಜವಳಿ ಖಾತೆ, ಕರ್ನಾಟಕ ಸರ್ಕಾರ, ಬೆಂಗಳೂರು
ಸನ್ಮಾನ್ಯ ಶ್ರೀ ಪ್ರದೀಪಕುಮಾರ ಗೋ, ಕ್ಯಾತನ್ ಉಪಾಧ್ಯಕ್ಷರು | TV NEWS KARNATAKA OCT 12 2025

11/10/2025

ರಾಷ್ಟ್ರೀಯ ಸ್ವಯಂಸೇವಕ ಸಂಘ 100 ವಾರ್ಷಿಕೋತ್ಸವ ನಿಮಿತ್ಯ , ವಿಜಯಪುರ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವಿಜಯದಶಮಿ ಉತ್ಸವ ಮತ್ತು ಪಥಸಂಚಲನ
ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಅದ್ಧೂರಿಯಾಗಿ ಪಥಸಂಚಲನ ಮಾಡಲಾಯಿತು. ವಿಜಯಪುರ ನಗರದ ಗೋದಾವರಿ ಹೋಟೆಲ್‌ನಿಂದ ಆರ್‌ಎಸ್‌ಎಸ್‌ಗೆ ಚಾಲನೆ ನೀಡಲಾಯಿತು. ವಿಜಯದಶಮಿ ಉತ್ಸವ ಮತ್ತು ಪಂಥಸಂಚಲನ ಹಿನ್ನೆಲೆ ನಗರಾದ್ಯಂತ ವಿವಿಧ ಕಾಲೋನಿಯಲ್ಲಿ ವಿಜೃಂಭಣೆಯಿಂದ ಪಥಸಂಚಲನ ನಡೆಯಿತು. ಈ ವೇಳೆ ವಿವಿಧ ಕಡೆಗೆ ರಂಗೋಲಿ ಹಾಕಿ ಮಹಿಳೆಯರು ಸ್ವಾಗತಿಸಿದರು. ಅಲ್ಲದೇ, ಆರ್‌ಎಸ್‌ಎಸ್ ನಾಯಕರ ಮೇಲೆ ಹೂವಿನ ಸುರಿಮಳೆಗೈದರು. ಇನ್ನು ಈ ಸಂದರ್ಭದಲ್ಲಿ ಅಹಿತಕರ ಘಟನೆಗಳು ಆಗದಂತೆ ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಬೀಗಿ ಪೊಲೀಸ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು | TV NEWS KARNATAKA OCT 11 2025

09/10/2025

ವಿಜಯಪುರ: ಮಳೆ ನೀರು ಬಂದಾಗ ಅನೇಕ ಬಡಾವಣೆಗಳು ಅಕ್ಷರಶ: ನಡುಗಡ್ಡೆಯಾಗುತ್ತವೆ, ಈ ಎಲ್ಲ ಸಮಸ್ಯೆಗಳಿಗೆ ರಾಜಕಾಲುವೆಗಳ ವ್ಯವಸ್ಥೆ ಪುನರುಜ್ಜೀವನಗೊಳಿಸುವುದೇ ಪರಿಹಾರವಾಗಿದೆ ಎಂದು ಹಿರಿಯ ರಾಜಕೀಯ ಮುಖಂಡ ಬಿ.ಎಚ್. ಮಹಾಬರಿ ಹೇಳಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಲ್‌ಷಾಹಿ ಕಾಲದಲ್ಲಿ ಈಗಿರುವ ಜನಸಂಖ್ಯೆಗಿಂತ ೧೦ ಪಟ್ಟು ಹೆಚ್ಚು ಜನಸಂಖ್ಯೆ ಇತ್ತು, ಅರಸು ನೀರಿನ ಸಮರ್ಥ ಸದ್ಭಳಕೆಯ ಜೊತೆಗೆ ಮಳೆ ನೀರು ಹರಿದು ಹೋಗಲು, ಚರಂಡಿ ನೀರು ಹರಿದು ಹೋಗಲು ರಾಜಕಾಲುವೆ ನಿರ್ಮಿಸಿದ್ದರು. ಈ ವ್ಯವಸ್ಥೆ ಈಗಲೂ ಇದೆ, ಆದರೆ ರಾಜಕಾಲುವೆಗಳ ಒತ್ತುವರಿಯಿಂದಾಗಿ ನಗರದ ನೀರು ಹೊರ ಹೋಗದೇ ಅವೈಜ್ಞಾನಿಕವಾಗಿ ಹರಿದು ಬಡಾವಣೆಗಳಿಗೆ ನುಗ್ಗುತ್ತಿದೆ ಎಂದು ಹೇಳಿದರು.
೬೦/೨೦ ಡೀಪ್ ಇರುವ ರಾಜಕಾಲುವೆ ವಿಜಯಪುರದಲ್ಲಿದ್ದವು ಎಂಬುದನ್ನು ವೈಜ್ಞಾನಿಕ ದಾಖಲಾತಿಗಳಿವೆ, ಆದರೆ ಈಗ ರಾಜಕಾಲುವೆ ಪುನರುಜ್ಜೀವನ ಕಾಮಗಾರಿಗಳು ಸಂಪೂರ್ಣ ಅವೈಜ್ಞಾನಿಕವಾಗಿ ನಡೆಯುತ್ತಿವೆ ಎನ್ನಬಹುದಾಗಿದೆ. ಆರ್‌ಟಿಓ ಆಫೀಸ್‌ನಿಂದ - ನವಭಾಗವರೆಗೆ ೮/೬ ಆಳಕ್ಕೆ ಸೀಮಿತವಾಗಿರುವಂತೆ ರಾಜಕಾಲುವೆಗಳ ಪುನರುಜ್ಜೀವನಗೊಳಿಸುವ ಕಾರ್ಯ ನಡೆಯುತ್ತಿದೆ, ಆದರೆ ಇದು ಸಂಪೂರ್ಣ ಅವೈಜ್ಞಾನಿಕವಾಗಿವೆ ಎಂದು ಆರೋಪಿಸಿದರು.
೨೦೧೩-೧೪ ನೇ ಸಾಲಿನಲ್ಲಿ ಅಂದು ಸಹ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಎಂ.ಬಿ. ಪಾಟೀಲ ಸಾಹೇಬರು ಇಡೀ ಅಧಿಕಾರಿಗಳ ತಂಡ ಕಟ್ಟಿಕೊಂಡು ನಗರ ಪ್ರದಕ್ಷಿಣೆ ಮಾಡಿದ್ದರು, ಮಳೆ ನೀರು ನಿಲ್ಲಲು ರಾಜಕಾಲುವೆಗಳ ಒತ್ತುವರಿಯೇ ಕಾರಣ ಎಂಬುದು ಅವರ ಗಮನಕ್ಕೆ ಬಂದಿತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಸಚಿವರು ವಿಶೇಷ ಕಾಳಜಿ ವಹಿಸಿ ರಾಜಕಾಲುವೆ ಒತ್ತುವರಿ ತೆರವಿಗೆ ಖಡಕ್ ಸೂಚನೆ ನೀಡಿದ್ದರು. ಆದರೆ ಅಧಿಕಾರಿಗಳು ಈ ವಿಷಯವಾಗಿ ನಿರ್ಲಕ್ಷ್ಯ ನೀತಿ ತೋರುತ್ತಲೇ ಇದ್ದಾರೆ, ಅಂದು ಸಚಿವರ ಸುದೀರ್ಘ ಸಭೆ ನಡೆಸಿದ್ದು, ಸಭೆಯ ನಡಾವಳಿಗಳ ಪ್ರತಿ ಸಹ ಅಧಿಕಾರಿಗಳು ನೀಡುತ್ತಿಲ್ಲ ಎಂದು ದೂರಿದರು | TV NEWS KARNATAKA OCT 09 2025

Address

WARD NO 15 HOUSE NO 1169 HASIMPEER DARDA Road AMBEDAKAR NAHAR VIJAYAPUR
Bijapur
586104

Alerts

Be the first to know and let us send you an email when SK SUKIL posts news and promotions. Your email address will not be used for any other purpose, and you can unsubscribe at any time.

Contact The Business

Send a message to SK SUKIL:

Share