Praja Prateeka

Praja Prateeka Video Creator

28/06/2025

ಭದ್ರಾ ಬಲದಂಡೆ ನಾಲೆ ಕೊರೆದು ನೀರು ಬಿಡುತ್ತಿರುವ ಕ್ರಮವನ್ನು ಖಂಡಿಸಿ ದಾವಣಗೆರೆ ಬಂದ್ ಗೆ ಕರೆ ನೀಡಲಾಗಿತ್ತು, ಬಂದ್ ವೇಳೆ ಬಸ್ ಓಡಿಸಿದ್ದಕ್ಕೆ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಕಲ್ಲು ಹಿಡಿದು ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ. ಪ್ರತಿಭಟನೆಯ ವೇಳೆ ಟೈರ್ಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ವಾಹನ ಚಾಲಕರಿಗೆ ಬೆದರಿಕೆ, ಬೇಕರಿಗೆ ಬಲವಂತವಾಗಿ ಬಂದ್ ಮಾಡಿಸಿದ ಆರೋಪ ಕೇಳಿಬಂದಿದೆ. ಬಂದ್ ಗೆ ಹಲವು ಸಂಘಟನೆಗಳು ಬೆಂಬಲಿಸಿದ್ದರೆ, ಕಾಂಗ್ರೆಸ್ ಇದನ್ನು ವಿರೋಧಿಸಿದೆ.

















26/06/2025

ಕಲಬುರ್ಗಿ ಜಿಲ್ಲೆಯ ಅಫ್ಜಲ್ ಪುರ ತಾಲ್ಲೂಕಿನ ಹವಳಗಾ ಬಳಿ ವ್ಯಕ್ತಿಯೊಬ್ಬ ಬ್ಲೇಡ್ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ನಡೆದಿದೆ. ಜೇವರ್ಗಿ ಪಟ್ಟಣದ ಜಗನ್ನಾಥ್ (42) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಬೆಳಗ್ಗೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ತಾಳಿ ಕಡಿದು ಹೊರಬಂದಿದ್ದ ಎನ್ನಲಾಗಿದೆ. ಇನ್ನು ಸಾರ್ವಜನಿಕರ ಎದುರೇ ಕತ್ತು ಕೊಯ್ದುಕೊಳ್ಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಧಾವಿಸಿದ ಅಫಜಲ್ ಪುರ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.















26/06/2025

ಹಾವೇರಿ

ಹಾಡಹಗಲೇ ಗುತ್ತಿಗೆದಾರನ ಬರ್ಬರ್ ಹತ್ಯೆ ಪ್ರಕರಣ

ಕೊಲೆ ಆರೋಪಿಗಳ ಮೇಲೆ ಪೊಲೀಸರಿಂದ ಪೈರಿಂಗ್.

ಹಾವೇರಿ‌ ಜಿಲ್ಲೆ ಹಾನಗಲ್ ತಾಲ್ಲೂಕಿನ ಕೊಂಡೋಜಿ ಕ್ರಾಸ್ ಬಳಿ ಪೈರಿಂಗ್.

ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳ ಮೇಲೆ ಪೈರಿಂಗ್

ಆರೋಪಿಗಳನ್ನ ವಶಕ್ಕೆ ಪಡೆಯುವಾಗ ಪೈರಿಂಗ್

ಆರೋಪಿಗಳಾದ ಅಶ್ರಫ್ ಮತ್ತು ನಾಗರಾಜ್‌ಗೆ ಕಾಲಿಗೆ ಪೈರಿಂಗ್

ಶಿಗ್ಗಾಂವಿ ಸಿಪಿಐ ಸತ್ಯಪ್ಪ ಮಾಳಗೊಂಡ ಮತ್ತು ಪಿಎಸ್ಐ ಸಂಪತ್ ಅವರಿಂದ ಪೈರಿಂಗ್

ಗಾಯಾಳು ಆರೋಪಿಗಳನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲು.

ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಆರೋಪಿಗಳಿಗೆ ಚಿಕಿತ್ಸೆ.















25/06/2025

ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಗೆ ಸೇರಿದ ಬಸ್ ಕೆಜಿಎಫ್ ನ ಬೆಮೆಲ್ ನಗರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ 20 ಮಂದಿಯಲ್ಲಿ 8 ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇಂದು ಬೆಳಿಗ್ಗೆ ಮೊದಲ ಪಾಳಿಯ ಕಾರ್ಮಿಕರನ್ನು ಕರೆದುಕೊಂಡು ಹೋಗುವ ವೇಳೆ ಈ ಘಟನೆ ಸಂಭವಿಸಿದ್ದು, ಪ್ರಕರಣ ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


















25/06/2025

ನಾಸಾದ ಆಕ್ಸಿಯಮ್-4 ಮಿಷನ್ ಯಶಸ್ವಿಯಾಗಿದ್ದು, ಸ್ಪೇಸ್ ಎಕ್ಸ್ ನ ಫಾಲ್ಕನ್-9 ರಾಕೆಟ್ ಬಾಹ್ಯಾಕಾಶಕ್ಕೆ ಹಾರಿದೆ. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ಕು ಮಂದಿ ಗಗನಯಾತ್ರಿಗಳು ಐಎಸ್ಎಸ್ ಗೆ ತೆರಳಿ 14 ದಿನಗಳ ಕಾಲ ಸಂಶೋಧನೆ ನಡೆಸಲಿದ್ದಾರೆ. ಈ ಮಿಷನ್ ಈಗಾಗಲೇ ಆರು ಬಾರಿ ಮುಂದೂಡಲ್ಪಟ್ಟಿತ್ತು. ಕಮಾಂಡರ್ ಪೆಗ್ಗಿ ವಿಟ್ಸನ್ ಈ ವಾಣಿಜ್ಯ ಬಾಹ್ಯಾಕಾಶ ಮಿಷನ್ ಗೆ ನೇತೃತ್ವವಹಿಸಿದ್ದಾರೆ.


















25/06/2025

ಶಿಗ್ಗಾಂವಿಯಲ್ಲಿ ಗುತ್ತಿಗೆದಾರ ಶಿವಾನಂದ ಕುನ್ನೂರ (40) ಹತ್ಯೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಆರೋಪಿಗಳ ಪೈಕಿ ಒಬ್ಬನಾದ ನಾಗರಾಜ್ ಸವದತ್ತಿ ಮನೆಗೆ ಮೃತರ ಸಂಬಂಧಿಕರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸದ್ಯ ಪ್ರಕರಣದ ಹಿನ್ನೆಲೆ ಶಿಗ್ಗಾಂವಿಯಲ್ಲಿ ಬಿಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. 5 ಸಿಪಿಐ, 7 ಪಿಎಸ್ಐ ಸೇರಿದಂತೆ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದು, ಮೂರು ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಕಲಬುರಗಿಯ ಪಟ್ನಾ ಗ್ರಾಮ ಬಳಿ ಮಂಗಳವಾರ ರಾತ್ರಿ ಮೂರು ಸಂಬಂಧಿಕರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಸ...
25/06/2025

ಕಲಬುರಗಿಯ ಪಟ್ನಾ ಗ್ರಾಮ ಬಳಿ ಮಂಗಳವಾರ ರಾತ್ರಿ ಮೂರು ಸಂಬಂಧಿಕರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಸಿದ್ಧಾರೂಢ (32), ಜಗದೀಶ (25) ಮತ್ತು ರಾಮಚಂದ್ರ (35) ಎಂಬುವವರು ಹತ್ಯೆಗೀಡಾಗಿದ್ದಾರೆ. ಹಳೆ ವೈಷ್ಯಮದ ಹಿನ್ನಲೆಯಲ್ಲಿ ಮಂಗಳವಾರ ರಾತ್ರಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದಾಗ ಡಾಬಾಗೆ ನುಗ್ಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಸಬ್ ಅರ್ಬನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.















24/06/2025

ಕಲಬುರಗಿ

ಆರ್‌ಡಿಪಿಆರ್ ಇಲಾಖೆಯ ಪಿಆರ್‌ಇ ಇಂಜಿನಿಯರ್ ಮನೆ ಮೇಲೆ ಲೋಕಾ ದಾಳಿ ಪ್ರಕರಣ

ದಾಳಿ ವೇಳೆ ಕೆಜಿಗಟ್ಟಲೇ ಬಂಗಾರ ಪತ್ತೆ

1 ಕೆಜಿಗೂ ಹೆಚ್ಚು ಬಂಗಾರ 3 ಕೆಜಿ ಬೆಳ್ಳಿ

ಹಾಗೂ ಲಕ್ಷಾಂತರ ರೂಪಾಯಿ ಹಣ ಪತ್ತೆ

ಬೆಂಗಳೂರಿನ ನಿವಾಸದಲ್ಲಿ ಪತ್ತೆ

ಕಲಬುಗರಿಯ ಆರ್‌ಡಿಪಿಆರ್ ಇಲಾಖೆಯ ಪಿಆರ್‌ಇ ವಿಭಾಗದ ಇಇ ಆಗಿರೋ ಮಲ್ಲಿಕಾರ್ಜುನ ಅಲಿಪುರ

Address

Bijapur

Telephone

+918618987719

Website

Alerts

Be the first to know and let us send you an email when Praja Prateeka posts news and promotions. Your email address will not be used for any other purpose, and you can unsubscribe at any time.

Share

Category