Nammadu Chikkaballapura/ನಮ್ಮದು ಚಿಕ್ಕಬಳ್ಳಾಪುರ

Nammadu Chikkaballapura/ನಮ್ಮದು ಚಿಕ್ಕಬಳ್ಳಾಪುರ Catch the latest updates about Chikkaballapur District at your fingertips. Indeed we here for you as an Voice to the Citizens of Chikkaballapur District.

Please send us if any Photos/Events/articles/ to [email protected]. ಚಿಕ್ಕಬಳ್ಳಾಪುರ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಮುಂಚೆ ಕೋಲಾರ ಜಿಲ್ಲೆಯಲ್ಲಿನ ಒಂದು ತಾಲೂಕು ಆಗಿದ್ದ ಇದು ೨೦೦೮ ರಲ್ಲಿ ಜಿಲ್ಲಾ ಅಡಳಿತ ಕೇಂದ್ರವಾಯಿತು. ಈ ಜಿಲ್ಲೆಗೆ ಸರ್. ಎಮ್. ವಿಶ್ವೇಶ್ವರಯ್ಯ ಜಿಲ್ಲೆ ಎಂದು ನಾಮಕರಣ ಮಾಡುವ ಅಪೇಕ್ಷೆ ಜನರಲ್ಲಿದೆ. ಇಲ್ಲಿಗೆ ಹತ್ತಿರ ಇರುವ ನಂದಿ ದೇವಸ್ಥಾನ ಬಹಳ ಪ್ರಾಚೀನ ದೇವಸ್ಥಾನ. ಇಲ್ಲಿ ಶಿವನ ಲಿಂಗಗಳೆರಡು ಇವೆ. ಗಂಗ, ಕದಂಬರಿಗಿಂತ ಹಳೆಯ ಶಿಲಾಶಾಸನಗಳನ್ನು ಇಲ

್ಲಿ ನಾವು ಕಾಣಬಹುದು. ಅಂಗ್ಲರಲ್ಲಿನ ಪ್ರಮುಖರಾದ ಲಾರ್ಡ ಕಾರ್ನ್ವಾಲಿಸ್ ಸಹ ಇಲ್ಲಿ ಕೆಲವು ದಿನ ಇದ್ದ ಎನ್ನುವ ಶಾಸನಗಳನ್ನು ಕಾಣಬಹುದು. ಇಲ್ಲಿಗೆ ಸಮೀಪ (೨೫ ಕಿ.ಮಿ.) ಇರುವ ಮಾಕಿರೆಡ್ಡಿಪಲ್ಲಿಯಲ್ಲಿ ಮುತರಾಯಸ್ವಾಮಿ ದೇವಸ್ಥಾನವು ಸಹ ಬಹಳ ಪ್ರಾಚೀನವಾದ ದೇವಸ್ಥಾನ. ಇಲ್ಲಿ ಶ್ರೀರಾಮ ನವಮಿಯ ದಿನ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ನಂದಿ ಬೆಟ್ಟ ಇಲ್ಲಿಯ ಪ್ರಮುಖ ಗಿರಿಧಾಮ. ಚಿಕ್ಕಬಳ್ಳಾಪುರ ಮೆಣಸಿನಕಾಯಿ ತುಂಬ ಪ್ರಸಿದ್ಧಿ. ಇಲ್ಲಿನ ರೈತ ಸಮುದಾಯ ಬಹಳ ಪ್ರಗತಿ ಪರ ರೈತರನ್ನು ಹೊಂದಿದೆ.
೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೨,೫೫,೧೦೪. ಇದರಲ್ಲಿ ಪುರುಷರು ೬,೩೬,೪೩೭ ಹಾಗೂ ಮಹಿಳೆಯರು ೬,೧೮,೬೬೭. ಲಿಂಗಾನುಪಾತ ೯೭೨ ಸಾಂದ್ರತೆ ೨೯೬.ಸಾಕ್ಷರತೆ ಪ್ರಮಾಣ ೬೯.೭೬.
೧. ಬಾಗೇಪಲ್ಲಿ ೨. ಚಿಕ್ಕಬಳ್ಳಾಪುರ ೩. ಚಿಂತಾಮಣಿ ೪. ಗೌರಿಬಿದನೂರು ೫. ಗುಡಿಬಂಡೆ. ೬.ಶಿಡ್ಲಘಟ್ಟ.
ಚಿಂತಾಮಣಿ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಕೈವಾರ, ಮುರುಗಮಲ್ಲ, ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿವೆ. ಪ್ರತಿ ಭಾನುವಾರ ಚಿಂತಾಮಣಿ ಸಂತೆಯಲ್ಲಿ ಕೋಟ್ಯಂತರ ವಹಿವಾಟು ನಡೆಯುತ್ತದೆ. ಕೃಷಿ ಉತ್ಪನ್ನಗಳಿಂದ ಹಿಡಿದು ಜಾನುವಾರುಗಳವರೆಗೆ ಭಾರೀ ವಹಿವಾಟು ನಡೆಯುತ್ತದೆ. ತಾಲೂಕಿನಲ್ಲಿ ಸಾಹಿತ್ಯಪ್ರೇಮ ಅಷ್ಟಾಗಿ ಕಂಡು ಬರದಿದ್ದರೂ ಖ್ಯಾತ ಕವಿ ಬಿ.ಆರ್. ಲಕ್ಷ್ಮಣರಾವ್ ಚಿಂತಾಮಣಿಯವರಾಗಿರುವುದು ಹೆಮ್ಮೆಯ ಸಂಗತಿ. ಪಟ್ಟಣಕ್ಕೆ ಚಿಂತಾಮಣಿ ಎಂಬ ಆಕರ್ಷಕ ಹೆಸರು ಬಂದಿರುವುದರ ಹಿಂದೆ ಸ್ವಾರಸ್ಯಕರ ಕಥೆಯಿದೆ. ಈ ಪ್ರಾಂತ್ಯ ಹಿಂದೆ ಮರಾಠರ ಆಳ್ವಿಕೆಯಲ್ಲಿತ್ತು. ಆಗಿನ ರಾಜ ಚಿಂತಾಮಣಿರಾವ್ ಪಟ್ಟಣವನ್ನು ನಿರ್ಮಿಸಿದ. ಹಾಗೆಯೇ ಪಟ್ಟಣಕ್ಕೆ ತುಸು ದೂರದಲ್ಲಿರುವ ದೊಡ್ಡ ಬೆಟ್ಟಗಳಿಗೆ ಅಂಬಾಜಿ ದುರ್ಗ ಎಂದು ಹೆಸರಿಡಲಾಗಿದೆ. ಈ ಅಂಬಾಜಿ ರಾವ್ ಸಹ ಮರಾಠ ರಾಜನಾಗಿದ್ದ. ಪಟ್ಟಣದ ಹೃದಯ ಭಾಗದಲ್ಲಿರುವ ವರದಾಂಜನೇಯ ಬೆಟ್ಟ ಊರಿಗೆ ಕಳಶ ಪ್ರಾಯವಾಗಿದೆ. ಚಿಕ್ಕಬಳಾಪುರ ಜಿಲ್ಲೆ ಯ ಬಗ್ಗೆ ಮಾಹಿತಿ ಗಾಗಿ: http://www.chikballapur.nic.in

ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಇಂದು ಮಧ್ಯಾಹ್ನ 2.38ಕ್ಕೆ ಹೃದಯಾಘತದಿಂದ ನಿಧನರಾಗಿದ್ದಾರೆ.
24/09/2025

ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಇಂದು ಮಧ್ಯಾಹ್ನ 2.38ಕ್ಕೆ ಹೃದಯಾಘತದಿಂದ ನಿಧನರಾಗಿದ್ದಾರೆ.

Commuters seek revival of Chikkaballapur–Cantonment MEMU service
21/09/2025

Commuters seek revival of Chikkaballapur–Cantonment MEMU service

The train, which operated via Baiyappanahalli, was considered an important link for passengers connecting to the Namma Metro network. Regular users believe its absence has increased dependency on road transport. Bengaluru. Top News.

ಬಾಗೇಪಲ್ಲಿ ಹಾಗೂ ಗುಡಿಬಂಡೆ ಗ್ರಾಮೀಣ ಪ್ರದೇಶದ ಒಂದು ಕೂಗು, ಕ್ರಾಂತಿಕಾರಿ ಹೋರಾಟಗಾರ ಹಾಗೂ ಪ್ರಗತಿಪರ ಚಿಂತಕ ನರಸಿಂಹಮೂರ್ತಿ ಮಾಡಪ್ಪಲ್ಲಿರವರು ...
21/09/2025

ಬಾಗೇಪಲ್ಲಿ ಹಾಗೂ ಗುಡಿಬಂಡೆ ಗ್ರಾಮೀಣ ಪ್ರದೇಶದ ಒಂದು ಕೂಗು, ಕ್ರಾಂತಿಕಾರಿ ಹೋರಾಟಗಾರ ಹಾಗೂ ಪ್ರಗತಿಪರ ಚಿಂತಕ ನರಸಿಂಹಮೂರ್ತಿ ಮಾಡಪ್ಪಲ್ಲಿರವರು ಇಂದು ಬೆಳಗ್ಗೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ 🙏
ನರಸಿಂಹಮೂರ್ತಿ ಎಂ.ಎಲ್. ಮಾಡಪ್ಪಲ್ಲಿ.

ಬರಿದಾಗುತ್ತಿರುವ ಭೂಮಿ, ಕುಗ್ಗುತ್ತಿರುವ ಬದುಕು! ನಮ್ಮ ಧ್ವನಿ ಯಾರಿಗೂ ಕೇಳಿಸುತ್ತಿಲ್ಲವೇ?​ಪ್ರಶ್ನಿಸಿ! ಪ್ರತಿಕ್ರಿಯಿಸಿ!ನಮ್ಮ ಮಕ್ಕಳಿಗೆ ಉತ್ತ...
21/09/2025

ಬರಿದಾಗುತ್ತಿರುವ ಭೂಮಿ, ಕುಗ್ಗುತ್ತಿರುವ ಬದುಕು! ನಮ್ಮ ಧ್ವನಿ ಯಾರಿಗೂ ಕೇಳಿಸುತ್ತಿಲ್ಲವೇ?

​ಪ್ರಶ್ನಿಸಿ! ಪ್ರತಿಕ್ರಿಯಿಸಿ!
ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಇಲ್ಲ, ನಮ್ಮ ಆರೋಗ್ಯ ಸುರಕ್ಷಿತವಾಗಿಲ್ಲ, ರೈತರು ಬದುಕಲು ಹೋರಾಡುತ್ತಿದ್ದಾರೆ. ಇದೇನಾ ಅಭಿವೃದ್ಧಿ? ನಾವು ಇನ್ನೆಷ್ಟು ದಿನ ಈ ಸಮಸ್ಯೆಗಳನ್ನು ಸಹಿಸಿಕೊಂಡು ಕೂರಬೇಕು?

​ಚಿಕ್ಕಬಳ್ಳಾಪುರ, ಹೆಸರಿಗಷ್ಟೇ ಒಂದು ಜಿಲ್ಲೆ. ಆದರೆ ಇಲ್ಲಿನ ಜನರ ಬದುಕು ದಿನೇ ದಿನೇ ಕಷ್ಟಕರವಾಗುತ್ತಿದೆ. ಇಲ್ಲಿನ ಸಮಸ್ಯೆಗಳು ನಮ್ಮನ್ನು ಬೇರು ಸಹಿತ ಕತ್ತರಿಸುತ್ತಿವೆ. ಇದನ್ನು ಯಾರು ಪ್ರಶ್ನಿಸಬೇಕು? ನಮ್ಮ ರಾಜಕಾರಣಿಗಳು, ಅಧಿಕಾರಿಗಳು ಎಲ್ಲಿ ಹೋಗಿದ್ದಾರೆ?

​ಜಲಕ್ಷಾಮ ಮತ್ತು ವಿಷಪೂರಿತ ನೀರು:
ನಮ್ಮ ಜಿಲ್ಲೆ ಬರಗಾಲ ಪೀಡಿತ ಪ್ರದೇಶ. ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ. ಶೇ. 40ರಷ್ಟು ಬೋರ್‌ವೆಲ್‌ಗಳು ವಿಫಲವಾಗಿವೆ. ವಾರಕ್ಕೊಮ್ಮೆ ಮಾತ್ರ ಬರುವ ನಗರೀಕರಣದ ನೀರಿಗಾಗಿ ದಿನವಿಡೀ ಕಾಯುವ ದುಸ್ಥಿತಿ ನಮ್ಮದಾಗಿದೆ. ಇದಕ್ಕಿಂತ ಭೀಕರವಾಗಿ, ನಮ್ಮ ಕುಡಿಯುವ ನೀರು ಫ್ಲೋರೈಡ್, ನೈಟ್ರೇಟ್, ಯುರೇನಿಯಂ ಮತ್ತು ಆರ್ಸೆನಿಕ್‌ನಂತಹ ವಿಷಕಾರಿ ಅಂಶಗಳಿಂದ ಕಲುಷಿತಗೊಂಡಿದೆ. ಈ ನೀರನ್ನು ಕುಡಿಯುತ್ತಾ, ನಾವು ನಮ್ಮ ಆರೋಗ್ಯಕ್ಕೆ ನಾವೇ ಅಪಾಯ ತಂದುಕೊಳ್ಳುತ್ತಿದ್ದೇವೆ.

​ಕೈ ಕೊಟ್ಟ ಸರ್ಕಾರಿ ಯೋಜನೆಗಳು:
ಎತ್ತಿನಹೊಳೆ ಯೋಜನೆ ಕೇವಲ ಭರವಸೆಗಳನ್ನಷ್ಟೇ ನೀಡಿತು. ಕೋಲಾರಕ್ಕೆ ನೀರು ಎಂದು ಹೇಳಿದ ಕೆಸಿ ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ಯೋಜನೆಗಳು ಸರಿಯಾದ ಸಂಸ್ಕರಣೆ ಇಲ್ಲದೆ ಕೆರೆಗಳಿಗೆ ಕಲುಷಿತ ನೀರನ್ನು ಬಿಡುತ್ತಿವೆ. ಕೆರೆಗಳೇ ತ್ಯಾಜ್ಯದಿಂದ ತುಂಬಿಹೋಗಿವೆ.

​ರೈತರಿಗೆ ಇಲ್ಲ ಭವಿಷ್ಯ:
ನಮ್ಮ ಜಿಲ್ಲೆಯ ಬಹುತೇಕ ಜನರು ಕೃಷಿ ಅವಲಂಬಿತರು. ಆದರೆ ಸರಿಯಾದ ನೀರಾವರಿ ವ್ಯವಸ್ಥೆ ಇಲ್ಲದೆ ಬೆಳೆಗಳು ನಾಶವಾಗುತ್ತಿವೆ. ಮಳೆ ಇಲ್ಲದೆ ಹೊಲಗಳು ಒಣಗಿ ಹೋಗುತ್ತಿವೆ. ಸರ್ಕಾರಿ ಕೃಷಿ ವಿಮೆಗಳು ರೈತರಿಗೆ ತಲುಪುತ್ತಿಲ್ಲ.

​ಆರೋಗ್ಯ ಹದಗೆಡುತ್ತಿದೆ:
ಕಲುಷಿತ ನೀರಿನಿಂದ ನಮ್ಮ ಜನರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಹೆಚ್ಚಾಗಿವೆ. ಪ್ರತಿ ಆರು ಮಹಿಳೆಯರಲ್ಲಿ ಒಬ್ಬರಿಗೆ ಬಾಯಿ ಕ್ಯಾನ್ಸರ್ ಇದೆ ಎಂದು ವರದಿಗಳು ಹೇಳುತ್ತಿವೆ. ಇದು ಎಷ್ಟೊಂದು ಭಯಾನಕ! ಉತ್ತಮ ಚಿಕಿತ್ಸೆ ಮತ್ತು ವೈದ್ಯಕೀಯ ಸೌಲಭ್ಯಗಳಿಲ್ಲದೆ ಬಡವರು ನರಳುತ್ತಿದ್ದಾರೆ.

​ಇದನ್ನು ಶೇರ್ ಮಾಡಿ. ನಮ್ಮ ಕಷ್ಟಗಳನ್ನು ಎಲ್ಲರಿಗೂ ತಿಳಿಸಿ. ನಮ್ಮ ಧ್ವನಿ ಪ್ರಭುತ್ವವನ್ನು ತಲುಪಲಿ.
​ #ಚಿಕ್ಕಬಳ್ಳಾಪುರ #ಜಲಸಮಸ್ಯೆ #ರೈತರು #ಆರೋಗ್ಯ #ನಮ್ಮಗ್ರಾಮನಮ್ಮದೇಶ #ಪ್ರಶ್ನಿಸೋಣ #ಬದಲಾವಣೆಗಾಗಿಧ್ವನಿ

20/09/2025
20/09/2025

ಒಂದು ವೇಳೆ ಚಿಕ್ಕಬಳ್ಳಾಪುರ ಮಂಜಿನ ನಗರಿಯಾದರೇ...?

Courtesy: Md Zuber

Kindly follow our Instagram Page!
20/09/2025

Kindly follow our Instagram Page!

0 Followers, 1 Following, 2 Posts - See Instagram photos and videos from Nammadu Chikkaballapura ()

27/08/2025

ನಿಮ್ಮ ಏರಿಯಾ ಗಣಪಗಳ ಫೋಟೋ ಹಾಕಿ ಗುರೂ...!

10/08/2025

ಅಬ್ಬರಸಿ ಬೊಬ್ಬಿರಿಯಿತ್ತಿರುವ ಮಳೆ...! ಒಂದಿಷ್ಟು ಫೋಟೋ ಶೇರ್ ಮಾಡಿ ಗುರೂ..!

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಂದೀಪ್ ರೆಡ್ಡಿಗೆ ಡಾ.ಕೆ.ಸುಧಾಕರ್ ಟಕ್ಕರ್ ...! ಪವರ್ ಪಾಲಿಟಿಕ್ಸ್ ನ ಮೆರುಗು..!
11/02/2025

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಂದೀಪ್ ರೆಡ್ಡಿಗೆ ಡಾ.ಕೆ.ಸುಧಾಕರ್ ಟಕ್ಕರ್ ...! ಪವರ್ ಪಾಲಿಟಿಕ್ಸ್ ನ ಮೆರುಗು..!

Address

Chik Ballapur
562101

Alerts

Be the first to know and let us send you an email when Nammadu Chikkaballapura/ನಮ್ಮದು ಚಿಕ್ಕಬಳ್ಳಾಪುರ posts news and promotions. Your email address will not be used for any other purpose, and you can unsubscribe at any time.

Contact The Business

Send a message to Nammadu Chikkaballapura/ನಮ್ಮದು ಚಿಕ್ಕಬಳ್ಳಾಪುರ:

Share