KA 23

KA 23 ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿನ ಅಪ್ಡೇಟ್. latest happenings around Chikodi MP constituency
(1)

ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತಅಥಣಿ: ಅಥಣಿ ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತವಾಗಿದ್ದು ಯಾವುದೆ ಪ್ರಾಣ ಹಾನಿಯಾಗಿಲ್ಲ.ಅಥಣಿಯಿಂದ ಗೋಕಾಕ್ ಮಾರ...
09/06/2025

ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತ

ಅಥಣಿ: ಅಥಣಿ ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತವಾಗಿದ್ದು ಯಾವುದೆ ಪ್ರಾಣ ಹಾನಿಯಾಗಿಲ್ಲ.

ಅಥಣಿಯಿಂದ ಗೋಕಾಕ್ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ಶಾಸಕ ಲಕ್ಷ್ಮಣ ಸವದಿ ಕಾರು ತಾಲೂಕಿನ ದರೂರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.

ಇಂದು ಸಾಯಂಕಾಲ 4:00 ಸುಮಾರಿಗೆ ಈ ಅಪಘಾತ ಸಂಭವಿಸಿದ್ದು ಶಾಸಕ ಲಕ್ಷ್ಮಣ್ ಸವದಿ ಕುಳಿತಿದ್ದ ಕಾರ್ ಗೆ ಗೂಡ್ಸ ವಾಹನ ಡಿಕ್ಕಿಯಾಗಿದೆ.ಈ ಅಘಾತದಲ್ಲಿ ಗೂಡ್ಸ್ ವಾಹನ ಚಾಲಕನ ನಿರ್ಲಕ್ಷ ವೆಂದು ಮೇಲ್ನೋಟಕ್ಕೆ ಕಂಡುಬದಿದೆ.

ಅಪಘಾತದ ಬಳಿಕ ಶಾಸಕ ಲಕ್ಷ್ಮಣ ಸವದಿ ಕೆಳಗಿಳಿದು ಗೂಡ್ಸ ವಾಹನ ಚಾಲಕನ ಅರೋಗ್ಯ ವಿಚಾರಿಸಿದ್ದಾರೆ. ಅಪಘಾತದಲ್ಲಿ ಎರಡು ವಾಹನ ಸವಾರರಿಗೆ ಯಾವುದೆ ಗಾಯಗಳಾಗಿರುವುದಿಲ್ಲ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಎರಡುವರೆ ವರ್ಷಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿಕೊಂಡ ಕುಡಚಿಯ ಪುಟ್ಟ ಪೋರ ವಿಹಾನ್....ಪ್ರಪಂಚದ ಬಗ್ಗೆ ಏನೊಂದೂ ಅರಿಯ...
09/06/2025

ಎರಡುವರೆ ವರ್ಷಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿಕೊಂಡ ಕುಡಚಿಯ ಪುಟ್ಟ ಪೋರ ವಿಹಾನ್....

ಪ್ರಪಂಚದ ಬಗ್ಗೆ ಏನೊಂದೂ ಅರಿಯದ ಪುಟಾಣಿಯೊಬ್ಬ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಳ್ಳುವುದು ಸಾಮಾನ್ಯ ಸಾಧನೆಯಲ್ಲ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ....

ರಾಯಬಾಗ ತಾಲೂಕಿನ ಕುಡಚಿ ಗ್ರಾಮೀಣ ಭಾಗದ ಟಿಕನಾಳ ತೋಟದ ನಿವಾಸಿ ಡಾ. ಅಜೀತ ಕೋಳಿಗುಡ್ಡ ಹಾಗೂ ಡಾ. ವಂದನಾ ಅಜೀತ್ ಕೋಳಿಗುಡ್ಡ ದಂಪತಿಗಳ ಮುದ್ದಿನ ಸುಪುತ್ರ ಈ ಎರಡು ವರ್ಷ ನಾಲ್ಕು ತಿಂಗಳ ಪ್ರಾಯದ ವಿಹಾನ ಅಜೀತ ಕೋಳಿಗುಡ್ಡ ನ ನೆನಪಿನ ಶಕ್ತಿ ಅಗಾಧವಾದುದು, ವಾರದ ಹೆಸರು, ತಿಂಗಳ ಹೆಸರು, ಚಿತ್ರ ನೋಡಿ ವಿವಿಧ ಪ್ರಾಣಿಗಳ ಹೆಸರು, ವಿವಿಧ ಪಕ್ಷಿಗಳ ಹೆಸರು, ಹಣ್ಣುಗಳ ಹೆಸರು , ತರಕಾರಿಗಳ ಹೆಸರು,ವಾಹನಗಳ ಹೆಸರು, ವಿವಿದ ರೀತಿಯ ವೃತ್ತಿಗಳ ಹೆಸರು, ಬಣ್ಣಗಳು ,ಕನ್ನಡ ವರ್ಣಮಾಲೆಗಳನ್ನು ಹೇಳುವುದು,

ವಿವಿಧ ವಿಜ್ಞಾನಿಗಳ ಹೆಸರು,ವೈದ್ಯಕೀಯ ಉಪಕರಣಗಳನ್ನು ಗುರುತಿಸುವುದು, ಔಷಧಿಗಳನ್ನು ಗುರುತಿಸುವುದು ಮುಂತಾದ ವಿಷಯ ಕರಗತ ಮಾಡಿಕೊಂಡಿದ್ದರಿಂದ ಇದೀಗ ಈ ಬಾಲಕನ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯಾಗಿದೆ.ಸಾಧನೆ ಮೂಲಕ ಕುಡಚಿಗೆ ಹೆಮ್ಮೆ ತಂದಿರುವ ವಿಹಾನ್ ನನ್ನು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ

ಸಮಾಜ ಸೇವೆಯನ್ನು ನಮ್ಮ ಜೀವನದ ಒಂದು ಭಾಗ ಮಾಡಿಕೊಳ್ಳೋಣ :ಕಾಗವಾಡ ಜೈನ ಸಮಾವೇಶದಲ್ಲಿ ರಾಜ್ಯಪಾಲ ಥಾವರಚೆಂದ ಗೆಹ್ಲೊಟ್ ಕರೆ...ವರ್ಷದೊಳಗೆ ಜೈನ ಸಮ...
08/06/2025

ಸಮಾಜ ಸೇವೆಯನ್ನು ನಮ್ಮ ಜೀವನದ ಒಂದು ಭಾಗ ಮಾಡಿಕೊಳ್ಳೋಣ :

ಕಾಗವಾಡ ಜೈನ ಸಮಾವೇಶದಲ್ಲಿ ರಾಜ್ಯಪಾಲ ಥಾವರಚೆಂದ ಗೆಹ್ಲೊಟ್ ಕರೆ...

ವರ್ಷದೊಳಗೆ ಜೈನ ಸಮಾಜದ ಬೇಡಿಕೆಗಳು ಈಡೇರದಿದ್ದರೆ ಸಲ್ಲೇಖನ ವ್ರತ : ಗುಣಧರನಂದಿ ಸ್ವಾಮೀಜಿ

ಪ್ರಸ್ತುತ ಇಡೀ ಜಗತ್ತು ಸ್ವ-ಕಲ್ಯಾಣ, ಆಂತರಿಕ ಶಾಂತಿ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗಾಗಿ ಭಾರತದ ಕಡೆಗೆ ನೋಡುತ್ತಿದೆ. ಮಹಾವೀರ ಸ್ವಾಮಿಗಳ ಜೀವನ-ತತ್ವ ಮತ್ತು ಬೋಧನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಸಮಾಜ ಮತ್ತು ಜಗತ್ತಿನಲ್ಲಿ ಶಾಂತಿ, ಸಾಮರಸ್ಯ ಮತ್ತು ಸಹಾನುಭೂತಿಯ ವಾತಾವರಣವನ್ನು ಸೃಷ್ಟಿಸಬಹುದು." ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.

1008 ಭಟ್ಟಾರಕ ಶ್ರೀ ಆದಿನಾಥ ದಿಗಂಬರ ಜೈನ ಸಮಾಜ ಟ್ರಸ್ಟ್ ಆಯೋಜಿಸಿದ್ದ "ಜೈನ ಸಮ್ಮೇಳನ"ದಲ್ಲಿ ಭಾಗವಹಿಸಿ ಅವರು ಮಾತನಾಡಿದರು."ನಮ್ಮ ಸಾಂಸ್ಕೃತಿಕ ಸಂಪ್ರದಾಯವು ಬಹಳ ಪ್ರಾಚೀನವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ "ವಾಸುದೇವಂ ಕುಟುಂಬಕಂ" ತತ್ವಶಾಸ್ತ್ರ ಮತ್ತು ಧ್ಯಾನದ ಮೇಲೆ ಕೇಂದ್ರೀಕೃತವಾಗಿದೆ ಮತ್ತು "ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ" ಎಂಬ ಮನೋಭಾವದಿಂದ ಪ್ರೇರಿತವಾಗಿದೆ ಮತ್ತು ಯಾವಾಗಲೂ ವಿಶ್ವ ಸಹೋದರತ್ವ, ವಿಶ್ವ ಶಾಂತಿ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ" ಎಂದರು.ಈ ಸಮ್ಮೇಳನದಿಂದ, ಹೊಸ ಆಲೋಚನೆಗಳು, ಹೊಸ ನಿರ್ಣಯಗಳು ಮತ್ತು ಹೊಸ ಪ್ರಯಾಣ ಪ್ರಾರಂಭವಾಗಲಿದೆ.

ನಾವು ಜೀವನದಲ್ಲಿ ಸತ್ಯ, ಅಹಿಂಸೆ ಮತ್ತು ಅನಿಯಂತ್ರಿತತೆಯನ್ನು ಅಳವಡಿಸಿಕೊಳ್ಳುವ. ಮಕ್ಕಳು ಮತ್ತು ಯುವಕರಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವ. ಸಮಾಜ ಸೇವೆಯನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳುವ. ನಾವು ತೀರ್ಥಯಾತ್ರೆಯ ಸ್ಥಳಗಳನ್ನು ರಕ್ಷಿಸುವ ಮತ್ತು ನಿಯಮಿತವಾಗಿ ಸತ್ಸಂಗದಲ್ಲಿ ಭಾಗವಹಿಸುವ ನಿರ್ಣಯವನ್ನು ಒಟ್ಟಾಗಿ ತೆಗೆದುಕೊಳ್ಳೋಣ ಎಂದು ಕರೆ ನೀಡಿದರು.

ಇನ್ನು ರಾಷ್ಟ್ರಸಂಸ್ಥೆ ಗುಣಧರನಂದಿ ಸ್ವಾಮೀಜಿ ಅವರು ರಾಜ್ಯ ಸರ್ಕಾರಕ್ಕೆ ಸುಮಾರು 8 ಬೇಡಿಕೆಗಳ ಮನವಿ ನೀಡಿದ್ದೇವೆ ಅದರಲ್ಲಿ ಕೆಲ ಬೇಡಿಕೆಗಳು ಈಡೇರಿಸಿದ್ದಾರೆ ಇದರಲ್ಲಿ ಜೈನ ಸಮಾಜದ ಸ್ವತಂತ್ರ ನಿಗಮ ಮಂಡಳ ಸ್ಥಾಪನೆ ಮಾಡಬೇಕೆಂದರು. ಜೈನ್ ಸಮಾಜದ ತೀರ್ಥಕ್ಷೇತ್ರ ಶ್ರೀ ಸಂವೇದ ಶಿಖರಜಿ ದೇವರ ದರ್ಶನಕ್ಕಾಗಿ ಮಹಿಳೆಯರಿಗಾಗಿ ವಿಶೇಷ ಸೌಲಭ್ಯ ನೀಡಬೇಕು, ಸಮಾಜದ ವಿದ್ಯಾರ್ಥಿಗಳಿಗೆ ಶಿಶುವೇತನ ನೀಡಬೇಕು ಈ ಬೇಡಿಕೆಗಳು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಹಾಗೂ ಅಲ್ಪಸಂಖ್ಯಾತರ ಇಲಾಖೆ ಸಚಿವರು ಈ ಮೊದಲು ನೀಡುತ್ತೇವೆ ಎಂದು ಘೋಷಣೆ ಮಾಡಿದ್ದು ವಿಳಂಬ ಧೋರಣೆಯನ್ನು ಅನುಸರಿಸದೇ ಕೂಡಲೇ ತಮ್ಮ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೇ ಶಾಂತಿಯುತವಾಗಿ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

08/06/2025

ಐನಾಪುರದ ಜೈನ ಸಮಾವೇಶಕ್ಕೆ ಬಂದ ಜನಸಾಗರ

ಕಾಲ್ತುಳಿತ ದುರಂತ: ಮೃತ ಕುಟುಂಬದ ಸದಸ್ಯರಿಗೆ 25 ಲಕ್ಷ ರೂ ಪರಿಹಾರ ; Chief Minister of Karnataka
08/06/2025

ಕಾಲ್ತುಳಿತ ದುರಂತ: ಮೃತ ಕುಟುಂಬದ ಸದಸ್ಯರಿಗೆ 25 ಲಕ್ಷ ರೂ ಪರಿಹಾರ ; Chief Minister of Karnataka

For Information :
08/06/2025

For Information :

NWKRTC is now RCKRTC…?
08/06/2025

NWKRTC is now RCKRTC…?

ಕಾಗವಾಡ ಮತಕ್ಷೇತ್ರದ ಉಗಾರ ಬದ್ರುಕ ಗ್ರಾಮದಲ್ಲಿ ನಡೆದ ವಿವಿದ್ದೋದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಶತಮಾನೋತ್ಸವದ ಸಮಾರಂಭ.
08/06/2025

ಕಾಗವಾಡ ಮತಕ್ಷೇತ್ರದ ಉಗಾರ ಬದ್ರುಕ ಗ್ರಾಮದಲ್ಲಿ ನಡೆದ ವಿವಿದ್ದೋದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಶತಮಾನೋತ್ಸವದ ಸಮಾರಂಭ.

"ಬ್ರಿಲಿಯಂಟ್ ಸಿಬಿಎಸ್ಇ ಸ್ಕೂಲ್, ಸಂಕೇಶ್ವರ ದಲ್ಲಿ ಜರುಗಿದ ಪರಿಸರ ದಿನಾಚರಣೆಯ ಪತ್ರಿಕಾ ವರದಿಗಳು."ಚಿಕ್ಕೋಡಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ...
08/06/2025

"ಬ್ರಿಲಿಯಂಟ್ ಸಿಬಿಎಸ್ಇ ಸ್ಕೂಲ್, ಸಂಕೇಶ್ವರ ದಲ್ಲಿ ಜರುಗಿದ ಪರಿಸರ ದಿನಾಚರಣೆಯ ಪತ್ರಿಕಾ ವರದಿಗಳು."

ಚಿಕ್ಕೋಡಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಅಸೋಸಿಯೇಷನ್ ಅಧ್ಯಕ್ಷ ಸಿದ್ದೇಶ ಪುಠಾಣೆ ಅತಿಥಿಯಾಗಿ ಭಾಗವಾಹಿಸಿದ್ದರು. ಸಂಸ್ಥೆ ಅಧ್ಯಕ್ಷ ಪವನ ಕಣಗಲಿ ಸೇರಿದಂತೆ ಇತರರು ಇದ್ದರು.

07/06/2025

ಈ ಪರಿಸ್ಥಿತಿ ಯಾವ ತಂದೆಗೂ ಬರಬಾರದು ಎಂದು ಮಗನ ಸಮಾಧಿ ಮುಂದೆ ಗೋಳಿಟ್ಟ ತಂದೆ...

Address

Chikodi
591201

Alerts

Be the first to know and let us send you an email when KA 23 posts news and promotions. Your email address will not be used for any other purpose, and you can unsubscribe at any time.

Contact The Business

Send a message to KA 23:

Share