Davanagere Jille samachara

Davanagere Jille samachara JILLE SAMACHARA Kannada daily news paper
EDITOR : H.VENKATESH
MO : 9740249346,
9740112249 ದಾವಣಗೆರೆ ಹೆಮ್ಮೆಯ ದಿನಪತ್ರಿಕೆ

ಸಾಂಕ್ರಾಮಿಕವಲ್ಲದ ರೋಗಗಳ ಕುರಿತಾದ ಮಾಹಿತಿ ಒದಗಿಸಲು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯದಾವಣಗೆರೆ/ ನವದೆಹಲಿ; ಸಾಂಕ್ರಾಮಿಕವಲ್ಲದ ರೋಗಗಳ...
05/12/2025

ಸಾಂಕ್ರಾಮಿಕವಲ್ಲದ ರೋಗಗಳ ಕುರಿತಾದ ಮಾಹಿತಿ ಒದಗಿಸಲು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

ದಾವಣಗೆರೆ/ ನವದೆಹಲಿ; ಸಾಂಕ್ರಾಮಿಕವಲ್ಲದ ರೋಗಗಳ ಕುರಿತಾದ ಮಾಹಿತಿ ನೀಡಬೇಕೆಂದು ಶುಕ್ರವಾರ ನಡೆದ ಸಂಸತ್ತಿನ‌ ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಜೆ.ಪಿ ನಡ್ಡಾ ಅವರಿಗೆ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ವಿವರ ಕೇಳಿದರು.

ಈ ವೇಳೆ ಸದನದಲ್ಲಿ ಮಾತನಾಡಿದ ಸಂಸದರು
ಭಾರತದಲ್ಲಿ ಎನ್‌ಸಿಡಿ ಹೊರೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರಂಭಿಕ ರೋಗ ಪತ್ತೆ ಅತ್ಯಂತ ಪ್ರಮುಖವಾಗಿದೆ. ಈ ಸಂದರ್ಭದಲ್ಲಿ ಪಿಎಂ- ಎಬಿಹೆಚ್ ಐಎಂ ಯೋಜನೆಯಡಿಯಲ್ಲಿ ಸೇವೆ ಕಡಿಮೆ ಇರುವಂತಹ ಜಿಲ್ಲೆಗಳಿಗೆ ಮಾನ್ಯತೆ ನೀಡಿ ಕಾಲಬದ್ದ ಅನುಮೋದನೆ ನೀಡಬೇಕು ಎಂದು ಗಮನಸೆಳೆದರು.

ಅದರಲ್ಲೂ ವಿಶೇಷವಾಗಿ ಎಂಆರ್ ಐ ಯಂತ್ರಗಳನ್ನು ಒಳಗೊಂಡ ಸಂಪೂರ್ಣ ಕಾರ್ಯನಿರ್ವಹಣೆಯ ರೋಗ ನಿರ್ಣಯ ಸೌಲಭ್ಯಗಳು ಹಾಗೂ ತಾಂತ್ರಿಕ ಸಿಬ್ಬಂದಿಯ ಕಡ್ಡಾಯ ನಿಯೋಜನೆ ಮತ್ತು ನಿರ್ವಹಣಾ ಒಪ್ಪಂದಗಳೊಂದಿಗೆ ಕೇಂದ್ರ ಸರ್ಕಾರ ಒದಗಿಸುತ್ತದೆಯೇ ಎಂಬುದನ್ನು ಖಚಿತಪಡಿಸಬೇಕೆಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ
ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡುವ ಎನ್ ಹೆಚ್ ಎಂ ಗುತ್ತಿಗೆ ಸಿಬ್ಬಂದಿ ಎದುರಿಸುತ್ತಿರುವ ಅನಿಯಮಿತ ವೇತನ, ಸಾಮಾಜಿಕ ಭದ್ರತೆಯ ಕೊರತೆ ಮತ್ತು ಅಸಮಾನತೆಯಂತಹ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಒದಗಿಸಬೇಕೆಂದರು.

150 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ, ಉದ್ದೇಶಿತ ಜನಸಂಖ್ಯೆ ಮತ್ತು ತಪಾಸಣೆಗೊಳ್ಳುವ ಶೇಕಡಾವಾರು ಇವುಗಳನ್ನು ಮಾನದಂಡವಾಗಿ ಬಳಸುವುದು ಸರಿಯಾದ ಕ್ರಮವಾಗಿದೆ ಎಂದು ಸಂಸದರು ಸದನದ ಗಮನಸೆಳೆದರು.

ಬಿಎಸ್‌ಎನ್‌ಎಲ್ ಟವರ್ ಸ್ಥಾಪನೆ ಹಾಗೂ  ನೌಕರರ ವೇತನ ಪರಿಷ್ಕರಣೆಗೆ ಅಧಿವೇಶನದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ  ದಾವಣಗೆರೆ/ನವದೆಹ...
03/12/2025

ಬಿಎಸ್‌ಎನ್‌ಎಲ್ ಟವರ್ ಸ್ಥಾಪನೆ ಹಾಗೂ ನೌಕರರ ವೇತನ ಪರಿಷ್ಕರಣೆಗೆ ಅಧಿವೇಶನದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

ದಾವಣಗೆರೆ/ನವದೆಹಲಿ; ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಾಲೇಶಪುರ ಗ್ರಾಮದಲ್ಲಿ ಬಿಎಸ್ ಎನ್‌ಎಲ್ ಮೊಬೈಲ್ ಟವರ್ ಸ್ಥಾಪನೆಯ ಕುರಿತು ಬುಧವಾರ ನಡೆದ ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ದಾವಣಗೆರೆ ಕ್ಷೇತ್ರದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ಸರ್ಕಾರದ ಗಮನ ಸೆಳೆದರು.

ಅಧಿವೇಶನದಲ್ಲಿ ಮಾತನಾಡಿದ ಅವರು ಡಿಜಿಟಲ್ ಇಂಡಿಯಾ ಮಿಷನ್‌ನ ಮೂಲಭೂತ ಉದ್ದೇಶಗಳಲ್ಲಿ ಪ್ರಮುಖವಾದುದು ಡಿಜಿಟಲ್ ಅಂತರವನ್ನು ನಿವಾರಿಸುವುದು ಮತ್ತು ಅಂತಿಮ ಹಂತದ ಸಂಪರ್ಕವನ್ನು ಖಚಿತಪಡಿಸುವುದಾಗಿದೆ ಆದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಚನ್ನಗಿರಿ ತಾಲ್ಲೂಕಿನ ಹಾಲೇಶಪುರ, ಅರಳಿಕಟ್ಟೆ, ಚಿಕ್ಕಕೋಗಲೂರು ಗ್ರಾಮಗಳು, ಹೊನ್ನಾಳಿ ತಾಲ್ಲೂಕಿನ ಮುಸ್ಸೇನಹಾಳು ಗ್ರಾಮ ಹಾಗೂ ಹರಪನಹಳ್ಳಿ ತಾಲ್ಲೂಕಿನ ಕೋಂಗನಹೊಸೂರು ಮತ್ತು ಒಳತಾಂಡ ಗ್ರಾಮಗಳ ಜನತೆ ಇಂದು ಕೂಡ ಮೂಲಭೂತ ಮೊಬೈಲ್ ನೆಟ್‌ವರ್ಕ್ ಸೌಲಭ್ಯವಿಲ್ಲದೆ ದೈನಂದಿನ ತೊಂದರೆ ಅನುಭವಿಸುತ್ತಿದ್ದಾರೆಂದರು.

ಈ ವಿಷಯವನ್ನು ಹಲವಾರು ಬಾರಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ.ಈ ವಿಷಯದ ಬಗ್ಗೆ ಈಗಾಗಲೇ ಶಿವಮೊಗ್ಗ ವಲಯ ಕಚೇರಿಗೆ ನಾಲ್ಕು ಪತ್ರಗಳು, ಬಳ್ಳಾರಿ ವಲಯ ಕಚೇರಿಗೆ ಎರಡು ಪತ್ರಗಳು, ಹಾಗು ಸಂವಹನ ಸಚಿವಾಲಯಕ್ಕೆ 16/03/2025 ಮತ್ತು 20/09/2025 ರಂದು ಪತ್ರಗಳು ಕಳುಹಿಸಲಾಗಿದೆ. ಸಂವಹನ ಸಚಿವಾಲಯದಿಂದ 17/10/2025 ರಂದು ಉತ್ತರ ಬಂದಿದ್ದರೂ ಬಿಎಸ್ ಎನ್‌ಎಲ್ ಮೊಬೈಲ್ ಟವರ್ ಸ್ಥಾಪನೆ ಕುರಿತು ಯಾವುದೇ ಸ್ಪಷ್ಟ ಪ್ರಗತಿ ಕಂಡುಬಂದಿಲ್ಲ.

ಈ ಪರಿಣಾಮವಾಗಿ ಇಲ್ಲಿ ವಾಸಿಸುವ ವಿದ್ಯಾರ್ಥಿಗಳು, ರೈತರು, ಸಣ್ಣ ವ್ಯಾಪಾರಿಗಳು
ಇವರೆಲ್ಲರಿಗೂ ಡಿಜಿಟಲ್ ಪೇಮೆಂಟ್, ಆನ್‌ಲೈನ್ ಶಿಕ್ಷಣ, ಟೆಲಿಮೆಡಿಸಿನ್, ತುರ್ತು ಸಂಪರ್ಕ ಸೇರಿದಂತೆ ಅನೇಕ ಸೇವೆಗಳಿಗೆ ಸಾಕಷ್ಟು ಅಡಚಣೆಯಾಗುತ್ತಿದೆ.ಈ ರೀತಿಯ ದೀರ್ಘಕಾಲದ ಸಂಪರ್ಕ ಕೊರತೆಯು ಗ್ರಾಮೀಣ-ನಗರ ಡಿಜಿಟಲ್ ಅಂತರವನ್ನು ಹೆಚ್ಚಿಸುತ್ತಿದ್ದು, ಮೂಲಭೂತ ಸೇವೆಗಳು ತೊಂದರೆಯನ್ನು ಎದುರಿಸುತ್ತಿವೆ.
ಆದ್ದರಿಂದ,ಉಲ್ಲೇಖಿತ ಗ್ರಾಮಗಳಲ್ಲಿ ತಕ್ಷಣ ಬಿಎಸ್ ಎನ್‌ಎಲ್ ಮೊಬೈಲ್ ಟವರ್ ಸ್ಥಾಪಿಸುವಂತೆ ಸಂವಹನ ಸಚಿವರವರು ಬಿಎಸ್ ಎನ್‌ಎಲ್ ಸಂಸ್ಥೆಗೆ ತಕ್ಷಣ ನಿರ್ದೇಶನ ನೀಡುವಂತೆ ವಿನಂತಿಸಿದರು. ಇದರಿಂದ ನಮ್ಮ ಕ್ಷೇತ್ರದ ಗ್ರಾಮೀಣ ಪ್ರದೇಶಕ್ಕೆ ಸಮಾನ ಮತ್ತು ನಂಬಿಕೆಗೆ ಅರ್ಹವಾದ ಡಿಜಿಟಲ್ ಸಂಪರ್ಕ ದೊರೆಯುತ್ತದೆ ಎಂದು ಮನವಿ ಮಾಡಿದರು.

ದಾವಣಗೆರೆ ನಗರದಲ್ಲಿ 7 ಕಿಮೀ ಉದ್ದದ ಕನ್ನಡ ಬಾವುಟ ಪ್ರದರ್ಶನ ; ಕನ್ನಡ ಧ್ವಜದ ಭವ್ಯತೆದಾವಣಗೆರೆ : ಶುಕ್ರವಾರ ದಾವಣಗೆರೆ 7 ಕಿಲೊಮೀಟರ್ ಉದ್ದದ ಕ...
29/11/2025

ದಾವಣಗೆರೆ ನಗರದಲ್ಲಿ 7 ಕಿಮೀ ಉದ್ದದ ಕನ್ನಡ ಬಾವುಟ ಪ್ರದರ್ಶನ ; ಕನ್ನಡ ಧ್ವಜದ ಭವ್ಯತೆ

ದಾವಣಗೆರೆ : ಶುಕ್ರವಾರ ದಾವಣಗೆರೆ 7 ಕಿಲೊಮೀಟರ್ ಉದ್ದದ ಕನ್ನಡ ಬಾವುಟದ ವಿಶ್ವದಾಖಲೆಯ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

೭೦ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಜವಳಿ ಮಳಿಗೆ ವತಿಯಿಂದ ಹಮ್ಮಿಕೊಂಡಿದ್ದ ೭ ಕಿ.ಮೀ. ಉದ್ದದ ಕನ್ನಡ ಬಾವುಟದ ಮೆರವಣಿಗೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ವಿವಿಧ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಈ ಕಾರ್ಯಕ್ಕೆ ಒಗ್ಗೂಡಿದ್ದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳು ಕೈಜೋಡಿಸಿದ್ದರು. ಬೆಳಿಗ್ಗೆಯಿಂದ ಆರಂಭವಾದ ಈ ಮೆರವಣಿಗೆ 7 ಕಿ.ಮೀ ಅಧಿಕ ಸಂಚರಿಸಿತು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಜಯದೇವ ವೃತ್ತದಲ್ಲಿ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು. ಇಲ್ಲಿಂದ ಆರಂಭವಾದ ಕನ್ನಡ ಧ್ವಜದ ಮೆರವಣಿಗೆ ಹದಡಿ ರಸ್ತೆ, ವಿದ್ಯಾನಗರದ ಗಾಂಧಿ ವೃತ್ತ, ಡೆಂಟಲ್ ಕಾಲೇಜು ರಸ್ತೆ, ಗುಂಡಿ ಮಹಾದೇವಪ್ಪ ವೃತ್ತದ ಮೂಲಕ ಸಾಗಿ ರಿಂಗ್ ರಸ್ತೆ ತಲುಪಿತು. ಶಾರದಾಂಬ ದೇವಸ್ಥಾನ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಪಿ.ಬಿ. ರಸ್ತೆ, ಎವಿಕೆ ಕಾಲೇಜು ರಸ್ತೆ ಮೂಲಕ ಜಯದೇವ ವೃತ್ತಕ್ಕೆ ಮರಳಿತು.

ಕನ್ನಡ ಬಾವುಟ ಸಾಗುವ ಮಾರ್ಗವನ್ನು ಹಳದಿ ಮತ್ತು ಕೆಂಪು ಬಣ್ಣದಿಂದ ಸಿಂಗರಿಸಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿತ್ತು. ಕನ್ನಡದ ಭಾವನೆಗಳನ್ನು ಪ್ರೇರೇಪಿಸುವಂತಹ ವಾತಾವರಣ ಸೃಷ್ಟಿಯಾಗಿತ್ತು.
ಮಾರ್ಗದ ಉದ್ದಕ್ಕೂ ವಿದ್ಯಾರ್ಥಿಗಳಿದ್ದರು. ನಿಗದಿತ ಸ್ಥಳಕ್ಕೆ ವಿದ್ಯಾರ್ಥಿಗಳನ್ನು ನಿಯೋಜಿಸಿ ಧ್ವಜ ಹಿಡಿಯಲು ಸೂಚಿಸಲಾಗಿತ್ತು. ಟ್ರಾಲಿಯಲ್ಲಿ ತಂದಿದ್ದ ಏಳು ಕಿ.ಮೀ ಉದ್ದದ ಧ್ವಜವನ್ನು ನಿಧಾನವಾಗಿ ವಿದ್ಯಾರ್ಥಿಗಳ ಕೈಗೆ ಹಸ್ತಾಂತರಿಸುತ್ತ ಸಾಗಲಾಯಿತು. ಕನ್ನಡ ಧ್ವಜದ ಈ ಭವ್ಯತೆಯನ್ನು ಕಣ್ತುಂಬಿಕೊಳ್ಳಲು ಪ್ರಮುಖ ರಸ್ತೆಗಳಲ್ಲಿ ಜನರು ನಿಂತಿದ್ದರು. ಮೊಬೈಲ್ ಹಿಡಿದು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆಯ ಮಾಲೀಕ ಬಿ.ಎಸ್. ಮೃನಾಲ್, ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಶಿವರತನ್, ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜಾ, ಕನ್ನಡಪರ ಸಂಘಟನೆಗಳ ಮುಖಂಡರಾದ ಟಿ. ಶಿವಕುಮಾರ್, ಎಂ.ಎಸ್. ರಾಮೇಗೌಡ, ಶುಭಮಂಗಳಾ, ವಾಸುದೇವ ರಾಯ್ಕರ್, ಕೆ.ಟಿ. ಗೋಪಾಲಗೌಡ, ಮಾಗಾನಹಳ್ಳಿ ಮಂಜುನಾಥ್, ಎನ್.ಟಿ. ಮಂಜುನಾಥ್, ವೀರಣ್ಣ ಹಾಜರಿದ್ದರು.

ದಾವಣಗೆರೆಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ಸಾಕಮ್ಮ ಅವರ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸುವ ನಿಟ...
26/11/2025

ದಾವಣಗೆರೆಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ಸಾಕಮ್ಮ ಅವರ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಆರ್ಥಿಕ ನೆರವು ನೀಡಿದರು. ಸಂಸದರನ್ನು ಭೇಟಿಯಾಗಲು ಗೃಹಕಚೇರಿಗೆ ಆಗಮಿಸಿದ್ದ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಸಂಸದರು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಗಳಿಸಬೇಕೆಂದು ಶುಭಹಾರೈಸಿದ್ದಾರೆ.

ದಾವಣಗೆರೆ ಜಿಲ್ಲೆಯ ಪ್ರಯಾಣಿಕರ ಅನುಕೂಲಕ್ಕಾಗಿ ಮಂತ್ರಾಲಯಕ್ಕೆ ಹವಾನಿಯಂತ್ರಿತ ವೋಲ್ವೋ ಬಸ್ ಸೌಲಭ್ಯವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್...
26/11/2025

ದಾವಣಗೆರೆ ಜಿಲ್ಲೆಯ ಪ್ರಯಾಣಿಕರ ಅನುಕೂಲಕ್ಕಾಗಿ ಮಂತ್ರಾಲಯಕ್ಕೆ ಹವಾನಿಯಂತ್ರಿತ ವೋಲ್ವೋ ಬಸ್ ಸೌಲಭ್ಯವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಆರಂಭಿಸಿದ್ದು, ಬಸ್ ಸಂಚಾರಕ್ಕೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.
ಪ್ರತಿದಿನ ರಾತ್ರಿ 9ಕ್ಕೆ ದಾವಣಗೆರೆ ನಿಲ್ದಾಣದಿಂದ ಹೊರಡುವ ಬಸ್‌ ಚಿತ್ರದುರ್ಗ, ಬಳ್ಳಾರಿ ಮೂಲಕ ಬೆಳಗ್ಗೆ 4 ಕ್ಕೆ ಮಂತ್ರಾಲಯ ತಲುಪಲಿದೆ. ನಂತರ ಬೆಳಿಗ್ಗೆ 11 ಗಂಟೆಗೆ ಮಂತ್ರಾಲಯದಿಂದ ಹೊರಟು ಸಂಜೆ 6ಕ್ಕೆ ದಾವಣಗೆರೆಗೆ ಮರಳಲಿದೆ. ಆಸಕ್ತ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕೌಂಟರ್ http://ksrtc.karnataka.gov.in ಸಂಪರ್ಕಿಸಿ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ.

ಕ್ರಿಕೆಟ್ ಪಂದ್ಯಾವಳಿಗೆ ಚಾಲನೆದಾವಣಗೆರೆ - ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸವಿನೆನಪಿಗಾಗಿ ದಾವಣಗೆರೆ ಇಲವೆನ್ಸ್ ಕ್ರಿಕೆಟ್ ಕ್...
26/11/2025

ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ದಾವಣಗೆರೆ - ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸವಿನೆನಪಿಗಾಗಿ ದಾವಣಗೆರೆ ಇಲವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ಬ್ಯಾಟ್ ಬೀಸುವ ಮೂಲಕ ಸಂಸದರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.

ವಿದ್ಯುತ್ ಅವಘಡ;  ಮನೆಹಾನಿ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ದಾವಣಗೆರೆ- ದಾವಣಗೆರೆಯ ಶ್ರೀ ದುರ್ಗಾಂಭ...
24/11/2025

ವಿದ್ಯುತ್ ಅವಘಡ; ಮನೆಹಾನಿ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ- ದಾವಣಗೆರೆಯ ಶ್ರೀ ದುರ್ಗಾಂಭಿಕಾ ದೇವಿ ದೇವಸ್ಥಾನದ ಹಿಂಭಾಗದಲ್ಲಿ ಇತ್ತೀಚೆಗೆ ಸಂಭವಿಸಿದ್ದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡದಲ್ಲಿ ಹಾನಿಗೊಳಗಾದ ಎರಡು ಮನೆಗಳ ಕುಟುಂಬದ ಸದಸ್ಯರಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ತಲಾ ಐವತ್ತು ಸಾವಿರ ರೂ. ಪರಿಹಾರದ ಚೆಕ್‌ಗಳನ್ನು ವಿತರಿಸಿದರು.
ಇಂದು (ಸೋಮವಾರ) ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರ ಯೋಗಕ್ಷೇಮ ಹಾಗೂ ಅಗತ್ಯಗಳ ಬಗ್ಗೆ ವಿಚಾರಿಸಿದರು.ಈ ವೇಳೆ

ಸಂತ್ರಸ್ತರು‌ ಮನೆಯನ್ನು ಸುಸ್ಥಿರಗೊಳಿಸಲು‌ ಮಹಾನಗರ ಪಾಲಿಕೆ ವತಿಯಿಂದ 2.7 ಲಕ್ಷ ರೂ ಅನುದಾನ ಬಿಡುಗಡೆ ಮಾಡುವಂತೆ ಆಯುಕ್ತರಿಗೆ ಈ ವೇಳೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.

ದಸರಾ  ಸಂಭ್ರಮಕ್ಕೆ ದಾವಣಗೆರೆ ಸಜ್ಜು ದಾವಣಗೆರೆ-ನಗರದಾದ್ಯಂತ ದಸರಾ ಹಬ್ಬದ ಸಡಗರ ಮನೆ ಮಾಡಿದೆ. ಹಬ್ಬದ ಪ್ರಯುಕ್ತ ಪೂಜಾ ಸಾಮಗ್ರಿ, ಹೊಸ ಉಡುಪುಗಳ...
01/10/2025

ದಸರಾ ಸಂಭ್ರಮಕ್ಕೆ ದಾವಣಗೆರೆ ಸಜ್ಜು

ದಾವಣಗೆರೆ-ನಗರದಾದ್ಯಂತ ದಸರಾ ಹಬ್ಬದ ಸಡಗರ ಮನೆ ಮಾಡಿದೆ. ಹಬ್ಬದ ಪ್ರಯುಕ್ತ ಪೂಜಾ ಸಾಮಗ್ರಿ, ಹೊಸ ಉಡುಪುಗಳನ್ನು ಖರೀದಿಸುವುದರಲ್ಲಿ ಮಗ್ನರಾಗಿರುವುದು ಎಲ್ಲ್ಲೆಡೆ ಕಂಡು ಬರುತ್ತಿದೆ. ವಿಶೇಷವಾಗಿ ಹೆಂಗಳೆಯರು ಶ್ರೀ ದೇವಿಯ ಪೂಜೆಯಲ್ಲಿ ಪಾಲ್ಗೊಂಡು ಶರನ್ನವರಾತ್ರಿಯ ಸಂಭ್ರಮಕ್ಕೆ ಸಾಕ್ಷಿಯಾದರು

ದಾವಣಗೆರೆ-ಆಯುಧಪೂಜೆಯ ವಿಶೇಷ ದಿನದಂದು ನಗರದೇವತೆ ಶ್ರೀ ದುರ್ಗಾಂಭಿಕದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
01/10/2025

ದಾವಣಗೆರೆ-ಆಯುಧಪೂಜೆಯ ವಿಶೇಷ ದಿನದಂದು ನಗರದೇವತೆ ಶ್ರೀ ದುರ್ಗಾಂಭಿಕದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ದಾವಣಗೆರೆ-ನವರಾತ್ರಿಯ ಏಳನೇ ದಿನದಂದು  ನಗರದೇವತೆ ಶ್ರೀ ದುರ್ಗಾಂಭಿಕದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
28/09/2025

ದಾವಣಗೆರೆ-ನವರಾತ್ರಿಯ ಏಳನೇ ದಿನದಂದು ನಗರದೇವತೆ ಶ್ರೀ ದುರ್ಗಾಂಭಿಕದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ದಾವಣಗೆರೆ-ನವರಾತ್ರಿಯ ಆರನೇ ದಿನದಂದು  ನಗರದ ಶಕ್ತಿದೇವಿಯರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
27/09/2025

ದಾವಣಗೆರೆ-ನವರಾತ್ರಿಯ ಆರನೇ ದಿನದಂದು ನಗರದ ಶಕ್ತಿದೇವಿಯರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ದಾವಣಗೆರೆ-ನವರಾತ್ರಿಯ ಆರನೇ ದಿನದಂದು  ನಗರದೇವತೆ ಶ್ರೀ ದುರ್ಗಾಂಭಿಕದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
27/09/2025

ದಾವಣಗೆರೆ-ನವರಾತ್ರಿಯ ಆರನೇ ದಿನದಂದು ನಗರದೇವತೆ ಶ್ರೀ ದುರ್ಗಾಂಭಿಕದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

Address

Davanagere
Davangere
577002

Telephone

+919740249346

Website

Alerts

Be the first to know and let us send you an email when Davanagere Jille samachara posts news and promotions. Your email address will not be used for any other purpose, and you can unsubscribe at any time.

Contact The Business

Send a message to Davanagere Jille samachara:

Share

ನಮ್ಮ ಬಗ್ಗೆ

ನಾವು, ನಮ್ಮದು, ನಮ್ಮ ಬದ್ಧತೆ……

1974 ರ ಸಂದರ್ಭದಲ್ಲಿ (ಮೈಸೂರು ವಿವಿ) ಪದವಿಯಲ್ಲಿ ಪತ್ರಿಕೋದ್ಯಮ ವಿಷಯವನ್ನು ಅಭ್ಯಸಿಸಿರುವ ಹಿನ್ನೆಲೆಯೊಂದಿಗೆ 1979 ರಿಂದ ‘ಜಿಲ್ಲೆ ಸಮಾಚಾರ’ ಹೆಸರಿನ ಪತ್ರಿಕೆಯನ್ನು ದಾವಣಗೆರೆ ನಗರದಲ್ಲಿ ಆರಂಭಿಸಿದ್ದೆನು. ಮೊದಲಿಗೆ ವಾರಪತ್ರಿಕೆಯಾಗಿದ್ದುದನ್ನು ಅದೇ ಹೆಸರಿನಲ್ಲಿ ೨೦೦೫ ರಿಂದ ದಿನಪತ್ರಿಕೆಯನ್ನಾಗಿ ರೂಪಾಂತರಿಸಿಕೊಳ್ಳಲಾಯಿತು. ಮೊದಲಿಗೆ ಎರಡು ಪುಟ, ಒಂದು ವರ್ಷದ ಅವಧಿಯೊಳಗೇ ೬ ಪುಟಗಳೊಂದಿಗೆ ಪ್ರಕಟವಾಗುತ್ತಿರುವ ದಾವಣಗೆರೆ ಜಿಲ್ಲೆಯ ಮಟ್ಟಿಗೆ ಏಕೈಕ ಹಾಗೂ ಪ್ರಥಮ ದೈಹಿಕ ಎನ್ನುವ ಹೆಗ್ಗಳಿಕೆ ಇದೆ.

ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಪುಟಗಳೊಂದಿಗೆ ವಿಶೇಷಾಂಕವಾಗಿ ಪ್ರಕಟವಾಗುವುದುಂಟು. ವಿಶೇಷವಾಗಿ ಪ್ರತಿ ಶನಿವಾರ ( ವಾರದ ಕೊನೆಯ ದಿನ) ‘ಸಾಪ್ತಾಹಿಕ ಶನಿವಾರದ’ ಪುಟವನ್ನು ರೂಪಿಸುವ ಮೂಲಕ ವಿಶೇಷ ಬರಹಗಳಿಗೆ ಆದ್ಯತೆ/ಅವಕಾಶ ನೀಡಲಾಗುತ್ತಿದೆ, ಪ್ರತಿಕೋದ್ಯಮವು ಭಾನುವಾರವನ್ನು ಸಾಪ್ತಾಹಿಕ ವಿಶೇಷವಾಗಿ ಆಯ್ದುಕೊಂಡಿರುವಾಗ ‘ಜಿಲ್ಲೆ ಸಮಾಚಾರ’ ಮಾತ್ರ “ಶನಿವಾರದ ಸ್ಪೆಷಲ್” ಆಗಿ ಪ್ರಕಟಣೆಗೆ ನಾಂದಿ ಹಾಡಿದೆ.

ಪತ್ರಿಕಾ ಬಳಗವನ್ನು ರೂಪಿಸಿಕೊಳ್ಳುವ ಮೂಲಕ ಪ್ರತಿವರ್ಷ ಜನವರಿಯಲ್ಲಿ ಹಿಂದಿನ ವರ್ಷದ ಆಯ್ಕೆ ಪ್ರಕಟಿಸುವುದರೊಂದಿಗೆ ವಿವಿಧ ಕ್ಷೇತ್ರದ ಸಾಧಕರನ್ನು ಸ್ವತಃ ಗುರುತಿಸಿ (ಅರ್ಜಿ ಸ್ವೀಕಾರದ ಸಂಪ್ರದಾಯವನ್ನು ದೂರವಿಟ್ಟು) ಸನ್ಮಾನಿಸುವ ಪರಿಪಾಠವು ೨೦೦೭ ರಿಂದ ಚಾಲನೆಗೆ ಬಂದಿದೆ. ಇಡೀ ರಾಜ್ಯದಲ್ಲಿ ಜಿಲ್ಲಾ ಮಟ್ಟದ ಪತ್ರಿಕೆಯೊಂದು ಈ ತರಹದ ಕಾರ್ಯಕ್ರಮವನ್ನು ಮುಂದುವರಿಸಿರುವುದು ಕೂಡ ಈ ಪತ್ರಿಕೆಯ ವೈಶಿಷ್ಟಗಳಲ್ಲೊಂದು ಎನ್ನಬಹುದು.