RIGHT 2 SPEAK DVG

RIGHT 2 SPEAK DVG Live without fear _ Live with dignity

28/05/2025

ದಕ್ಷಿಣ ಕನ್ನಡದ ಸಂಘ ಪರಿವಾರದ, ರಕ್ತ ದಾಹಕ್ಕೆ, ಬಂಟ್ವಾಳ, ಕೊಳತ್ತಮಜಲ್, ಸ್ಥಳೀಯ ಮಸೀದಿಯ ಕಾರ್ಯದರ್ಶಿ ಇಂತಿಯಾಜ್ ಬಲಿಯಾಗಿದ್ದಾರೆ, ಮತ್ತೋರ್ವ ಯುವಕ ಅಬ್ದುಲ್ ರಹಮಾನ್,ತಲ್ವಾರ್ ದಾಳಿಯಿಂದ ತೀವ್ರ ಗಾಯಗೊಂಡಿದ್ದಾನೆ. ಬಜರಂಗದಳವನ್ನು ನಿಯಂತ್ರಿಸಲಾಗದ, ಸಂಘ ಪರಿವಾರದ ಕೋಮುಪ್ರಚೋದನೆಯ ಕಾರ್ಯಕ್ರಮಗಳನ್ನು ಭಾಷಣಗಳನ್ನು, ತಡೆಯಲಾಗದ ಕಾಂಗ್ರೆಸ್
ಸರ್ಕಾರವೇ ಈ ಕೊಲೆಗೆ ಹೊಣೆ.
ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತಿದೆ, ರಾಜ್ಯದಲ್ಲಿ ಒಬ್ಬ ಅಸಮರ್ಥ ಗೃಹ ಮಂತ್ರಿ ಇದ್ದಾರೆ. ಮಾನ್ಯ ಮುಖ್ಯಮಂತ್ರಿಗಳು, ಈ ಅಸಮರ್ಥ ಗೃಹ ಮಂತ್ರಿಯ ರಾಜೀನಾಮೆಯನ್ನು ಪಡೆದು. ಒಬ್ಬ ಸಮರ್ಥ ವ್ಯಕ್ತಿಗೆ
ಗೃಹ ಇಲಾಖೆ ನೀಡಿ ಪುಣ್ಯ ಕಟ್ಟಿಕೊಳ್ಳಿ.



14/02/2025

*"ಎಸ್‌ ಡಿ ಪಿ ಐ ದಾವಣಗೆರೆ ಸಮಿತಿ ಜಿಲ್ಲಾ ವತಿಯಿಂದ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಪ್ರತಿಭಟನೆ."*

ಜಂಟಿ ಸಂಸದೀಯ ಸಮಿತಿ ರಾಜ್ಯಸಭೆಯಲ್ಲಿ ಅಸಂವಿಧಾನಿಕವಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿರುವುದನ್ನು ಖಂಡಿಸಿ ದಾವಣಗೆರೆ ನಗರದ ಅಹಮದ್ ನಗರ ವೃತ್ತದಲ್ಲಿ ಮಸೂದೆಯ ಪ್ರತಿಯನ್ನು ಹರಿದು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಈ ಕರಾಳ ಕಾನೂನನ್ನು ಹಿಂಪಡೆಯದಿದ್ದರೆ CAA ಮತ್ತು NRC ರೂಪದಲ್ಲಿ ದೇಶಾದ್ಯಂತ ಆಂದೋಲನ ಮಾಡುವುದಾಗಿ ಎಚ್ಚರಿಸಲಾಯಿತು.



ಪತ್ರಿಕ ಪ್ರಕಟಣೆಗಾಗಿ:  ||ಎನ್‌ಡಿಎ ಆಡಳಿತದಲ್ಲಿ ನಡೆಯುತ್ತಿರುವ ವ್ಯಾಪಕ ಗುಂಪುಹತ್ಯೆ , ಲೂಟಿ ಮತ್ತು ವಿದ್ವಾಂಸಕ ಕೃತ್ಯಗಳನ್ನು ಖಂಡಿಸಿ ಎಸ್ ಡ...
19/07/2024

ಪತ್ರಿಕ ಪ್ರಕಟಣೆಗಾಗಿ:

||ಎನ್‌ಡಿಎ ಆಡಳಿತದಲ್ಲಿ ನಡೆಯುತ್ತಿರುವ ವ್ಯಾಪಕ ಗುಂಪುಹತ್ಯೆ , ಲೂಟಿ ಮತ್ತು ವಿದ್ವಾಂಸಕ ಕೃತ್ಯಗಳನ್ನು ಖಂಡಿಸಿ ಎಸ್ ಡಿ ಪಿ ಐ ಪ್ರತಿಭಟನೆ||

ಹರಿಹರ: ಜುಲೈ,19, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹರಿಹರ ವಿಧಾನಸಭಾ ಕ್ಷೇತ್ರ ವತಿಯಿಂದ ಎನ್ಡಿಎ ಆಡಳಿತದಲ್ಲಿ ನಡೆಯುತ್ತಿರುವ ವ್ಯಾಪಕ ಗುಂಪು ಹತ್ಯೆ ಲೂಟಿ, ಮಸೀದಿ ಚರ್ಚ್ ಸೇರಿದಂತೆ ಆರಾಧನಾಲಯ ಮೇಲೆ ಅಕ್ರಮ ದಾಳಿ ಮತ್ತು ವಿದ್ವಾಂಸಕ ಕೃತ್ಯಗಳನ್ನು ನಡೆಸುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಲು ತಹಶೀಲ್ದಾರ್ ರವರ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಪ್ರತಿಭಟಿಸಿ ಮನವಿ ಪತ್ರವನ್ನು ನೀಡಲಾಯಿತು.

ಪ್ರತಿಭಟನೆ ಉದ್ದೇಶಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಯಹಿಯಾ ರವರು ದೇಶಾದ್ಯಂತ ಎನ್ ಡಿಎ ಆಡಳಿತದಲ್ಲಿ ಧಾರ್ಮಿಕ ಅಸಹಿಷ್ಣುತೆ ಗುಂಪುಹತ್ಯೆ,ಲೂಟಿ, ಆರಾಧನಾಲಯಗಳ ಮೇಲೆ ಅಕ್ರಮ ದಾಳಿ ಮತ್ತು ಇಂತಹ ವಿದ್ವಾಂಸಕ ಕೃತ್ಯ ಗಳು ನಡೆಸಿ ಜನರಲ್ಲಿ ಭಯ ಹುಟ್ಟಿಸುವ ಈ ಘಟನೆಗಳು ಮೊದಲ 10 ವರ್ಷದ ನರೇಂದ್ರ ಮೋದಿ ರವರ ಆಡಳಿತದಲ್ಲಿ ಚಾಲನೆ ಪಡೆದು ಈಗ ಸರ್ವೇ ಸಾಮಾನ್ಯ ಎಂಬಂತಾಗಿದೆ ತಿಳಿಸುತ್ತಾ ಕೆಳಗಿನ ಘಟನೆಗಳನ್ನು ವಿವರಿಸಿದರು.

1.ಛತ್ತೀಸ್ಗಡ ರಾಜ್ಯದ ರಾಯಪುರದಲ್ಲಿ ಅಕ್ರಮ ಗೋವು ಸಾಗಣೆ ಆರೋಪದಲ್ಲಿ
ಸದ್ದಾಮ್ ಖುರೇಶಿ, ಚಾಂದ್ ಮಿಯಾ, ಮತ್ತು ಗುದ್ದು ಖಾನ್ 7 ಜೂನ್ ರಂದು ತಳಿಸಿ ಹತ್ಯೆ ಮಾಡಲಾಗಿದೆ.
2. ಫರೀದ್ ಎಂಬ ಯುವಕನನ್ನು ಕಳ್ಳತನದ ಆರೋಪ ಹೂರಿಸಿ ಅಲಿಗಡ ದಲ್ಲಿ 19 ಜೂನ್ ರಂದು ಹತ್ಯೆ ಮಾಡಲಾಗಿದೆ.
3.ಜೂನ್ 23 ರಂದು ಗುಜರಾತ್‌ನ ಚಿಖೋದ್ರಾದಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಸಲ್ಮಾನ್ ವೋಹ್ರಾ ಅವರನ್ನು ವಿನಾಕಾರಣ ಹೊಡೆದು ಕೊಂದರು.
4.ಜೂನ್ 24 ರಂದು ಛತ್ತೀಸ್‌ಗಢದ ದಾಂತೇವಾಡದಲ್ಲಿ ಧಾರ್ಮಿಕ ಮತಾಂತರದ ಆರೋಪದ ಮೇಲೆ ಕ್ರೈಸ್ತ ಮಹಿಳೆ ಬಿಂಧು ಸೋಧಿಯನ್ನು ಹತ್ಯೆ ಮಾಡಲಾಗಿತ್ತು.
5.ಜೂನ್ 19 ರಂದು ಹಿಮಾಚಲ ಪ್ರದೇಶದ ನಹಾನ್‌ನಲ್ಲಿ ಪ್ರಾಣಿ ಬಲಿಯ ಚಿತ್ರವನ್ನು ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಜಾವೇದ್ ಅವರ ಜವಳಿ ಅಂಗಡಿಯನ್ನು ಲೂಟಿ ಮಾಡಿ ಧ್ವಂಸಗೊಳಿಸಲಾಯಿತು.
6.ಜೂನ್ 15 ರಂದು ತೆಲಂಗಾಣದ ಮೇದಕ್‌ನಲ್ಲಿ ಹಸು ಸಾಗಾಟದ ಹೆಸರಿನಲ್ಲಿ ನಡೆದ ಗಲಾಟೆಯಲ್ಲಿ ಮಿನ್ಹಾಜ್ ಉಲ್ ಉಲೂಮ್ ಮದರಸಾ ಮತ್ತು ಸ್ಥಳೀಯ ಆಸ್ಪತ್ರೆಯ ಮೇಲೆ ದಾಳಿ ನಡೆಸಲಾಯಿತು.
7.ಹಿಂದುತ್ವ ಗುಂಪುಗಳು ಜೂನ್ 17 ರಂದು ಒಡಿಶಾದ ಬಾಲಸೋರ್ ಮತ್ತು ಖೋರ್ಧಾದಲ್ಲಿ ಗೋಹತ್ಯೆಯ ಹೆಸರಿನಲ್ಲಿ ಕೋಮು ಹಿಂಸಾಚಾರವನ್ನು ಪ್ರಚೋದಿಸಿತು.
8.ಮಧ್ಯಪ್ರದೇಶದ ಮಂಡ್ಲಾದಲ್ಲಿ ಹಸುವಿನ ಮಾಂಸವಿದೆ ಎಂದು ಆರೋಪಿಸಿ ಮುಸ್ಲಿಂ ಮನೆಗಳನ್ನು ಧ್ವಂಸಗೊಳಿಸಲಾಗಿದೆ.
9.ಹಿಂದುತ್ವದ ಗುಂಪು ಒಡಿಶಾದ ಖುರ್ದಾದಲ್ಲಿ ಮುಸ್ಲಿಂ ಮನೆಗಳಿಂದ ಫ್ರೀಜರ್‌ಗಳನ್ನು ದರೋಡೆ ಮಾಡಿತು ಮತ್ತು ಗೋಮಾಂಸವನ್ನು ಸಂಗ್ರಹಿಸಲಾಗಿದೆ ಎಂದು ಆರೋಪಿಸಿ ಪೊಲೀಸರ ಸಮ್ಮುಖದಲ್ಲಿ ಅವರ ಮನೆಗಳನ್ನು ಧ್ವಂಸಗೊಳಿಸಿತು.
10.ರಾಜಸ್ಥಾನದ ಭರತ್ ಪುರದಲ್ಲಿವಿಎಚ್‌ಪಿ ಗೂಂಡಾಗಳು ಕ್ರೈಸ್ತ ಸಮುದಾಯದವರ ಮನೆಗಳಿಗೆ ನುಗ್ಗಿ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ ಭಕ್ತರ ಮೇಲೆ ಧಾರ್ಮಿಕ ಮತಾಂತರ ಆರೋಪದ ಮೇಲೆ ದಾಳಿ ಮಾಡಿದ್ದಾರೆ.
11.ಟ್ರಕ್ ಚಾಲಕ ಶಾಕಿರ್ ಮತ್ತು ಸಹಾಯಕ ಜುಬೇರ್ ಖಾನ್ ಅವರನ್ನು ಮಧ್ಯಪ್ರದೇಶದ ಪರಶಿಯಾ ಬಳಿ ಜುಲೈ 2 ರಂದು ವಿಎಚ್‌ಪಿ ಮತ್ತು ಬಿಜೆಪಿ ಗೋರಕ್ಷಕರ ಗುಂಪು ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ನಿರ್ದಯವಾಗಿ ಥಳಿಸಿದೆ.
12.ಪಶ್ಚಿಮ ಬಂಗಾಳದಲ್ಲಿ ಸಮಾಜ ವಿರೋಧಿ ಹಿಂದುತ್ವ ಗುಂಪುಗಳಿಂದ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಹೋಗುತ್ತಿದ್ದಾಗ ತೂಫಾನ್ ಎಸ್.ಕೆ ಮತ್ತು ತಲೆಬ್ ಎಸ್.ಕೆ ರವರನ್ನು ಲೋಯಾಪರ ಎಂಬ ಹಳ್ಳಿಯಲ್ಲಿ ಕ್ರೂರವಾಗಿ ಥಳಿಸಲಾಗಿದೆ.
13.14 ಜುಲೈ ರಂದು ಮಹಾರಾಷ್ಟ್ರ ರಾಜ್ಯದ ಕೋಲಾಪುರ ಜಿಲ್ಲೆಯ ವಿಶಾಲಗಡದಲ್ಲಿ ಸಂಘ ಪರಿವಾರದ ಗೂಂಡಾಗಳು ದರ್ಗಾ ಮತ್ತು ಮಸೀದಿ ಹಾಗೂ ಹಲವಾರು ಮುಸ್ಲಿಮರ ಮನೆ ಮತ್ತು ಅಂಗಡಿಗಳನ್ನು ಧ್ವಂಸ ಗೂಳಿಸಿದ್ದಲ್ಲದೆ ಮಹಿಳೆ ಮತ್ತು ಮಕ್ಕಳು ಜೊತೆಗೆ ಯುವಕರನ್ನು ಕ್ರೂರವಾಗಿ ಥಳಿಸಿ,ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ, ಮುಸ್ಲಿಮರ ಪವಿತ್ರ ಗ್ರಂಥಾ ಕುರಾನ್ ವನ್ನು ಸುಟ್ಟು ಹಾಕಿ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ.

ದೇಶದ ಯಾವುದೇ ಮೂಲೆಯಲ್ಲಿ ಯಾರಾದರೂ ಮೇಲೆ ಅನ್ಯಾಯ ಅಕ್ರಮಗಳು ನಡೆದರೆ ಅದರ ವಿರುದ್ಧ ಧ್ವನಿ ಆಗಬೇಕಾಗಿದ್ದ ಜಾತ್ಯಾತೀತ ಪಕ್ಷಗಳು ಬಿಜೆಪಿ ಮತ್ತು ಸಂಘ ಪರಿವಾರದ ಮುಂದೆ ತಮಗೂ ಮತ್ತು ಇದಕ್ಕೆ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಾ ಕೈ ಕಟ್ಟಿ ಕುಳಿತುಕೊಂಡಿರುವ ಈ ಸಮಯದಲ್ಲಿ ನೈಜ ವಿರೋಧ ಪಕ್ಷವಾಗಿ ಎಸ್ ಡಿ ಪಿ ಐ ಧ್ವನಿ ಯಾಗುತ್ತಿದೆ ಆದ್ದರಿಂದ ಮುಂಬರುವ ದಿನಗಳಲ್ಲಿ ಎಸ್ ಡಿ ಪಿ ಐ ಜೊತೆ ನಿಲ್ಲುವಂತೆ ಕರೆ ನೀಡಿದರು.

ಅದೇ ರೀತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಜ್ ಅಹಮದ್ ಮಾತನಾಡುತ್ತಾ, ದೇಶದಲ್ಲಿ ಇಷ್ಟೊಂದು ಭಯಾನಕವಾಗಿ ಯಾವುದೇ ಭಯವಿಲ್ಲದೆ ಕಾನೂನನ್ನು ಕೈಗೆತ್ತಿಕೊಂಡು ಅಲ್ಪಸಂಖ್ಯಾತರು ದಲಿತರು ಮತ್ತು ಹೆಚ್ಚಾಗಿ ಮುಸ್ಲಿಮರನ್ನು ಗುರಿಯಾಗಿಸಿ.ಟೋಪಿ ಹಿಜಾಬ್ ಮತ್ತು ಗೋವಿನ ಹೆಸರಿನಲ್ಲಿ ನಿತ್ಯ ನಿರಂತರವಾಗಿ ಗುಂಪುಹತ್ಯೆ, ಹಲ್ಲೆ ಅದೇ ರೀತಿ ಮುಸ್ಲಿಮರ ಧಾರ್ಮಿಕ ಕೇಂದ್ರಗಳಾದ ಮಸೀದಿ ಮತ್ತು ದರ್ಗಾಗಳನ್ನು ಅಕ್ರಮವಾಗಿ ಪ್ರವೇಶಿಸಿ ಧ್ವಂಸ ಮಾಡಿ ಮುಸ್ಲಿಮರ ಭಾವನೆಗಳನ್ನು ಧಕ್ಕೆ ಮಾಡಿದ್ದಲ್ಲದೆ ಅವರನ್ನು ಕೆರಳಿಸಲಾಗುತ್ತಿದೆ. ಇಂತಹ ಕೃತ್ಯಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನಿರ್ಧಾಕ್ಷಿಣ್ಯವಾಗಿ ದಂಡಿಸಬೇಕಾಗಿದ್ದ ಇಲ್ಲಿನ ಸರ್ಕಾರಗಳು ಇವೆಲ್ಲವನ್ನು ನಿರ್ಲಕ್ಷಿಸಿದ್ದಲ್ಲದೆ ಅವರನ್ನು ಪೋಷಿಸುತ್ತಾ ಸಮಾಜದಲ್ಲಿ ಹಿಂದೂ ಮತ್ತು ಮುಸ್ಲಿಂ ಎಂದು ಬೇರ್ಪಡಿಸಿ ಅದರಿಂದ ರಾಜಕೀಯ ಲಾಭ ಪಡೆಯುವ ಹುನ್ನಾರಕ್ಕೆ ತಾವು ಈ ಕೂಡಲೇ ಮಧ್ಯ ಪ್ರವೇಶಿಸಿ ಈ ಎಲ್ಲಾ ಘಟನೆಗಳಲ್ಲಿ ಭಾಗಿಯಾಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲು ಮತ್ತು ಈ ಘಟನೆ ಗಳಿಗೆ ಪೋಷಿಸಿದವರ ವಿರುದ್ಧ ಕಠಿಣವಾದ ಕಾನೂನು ಕ್ರಮ ಜರುಗಿಸುವ ಮೂಲಕ ನ್ಯಾಯ ದೊರಕಿಸ ಕೊಡಬೇಕೆಂದು ಆಗ್ರಹಿಸಿದರು.

ಈ ಸಮಯದಲ್ಲಿ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಖಜಾಂಚಿ ಎ ಆರ್ ತಾಹಿರ್ ಜಿಲ್ಲಾ ಸಮಿತಿ ಸದಸ್ಯರಾದ ಸೈಯದ್ ಅಶ್ಫಾಖ್ ದಾದಾವಲಿ, ಹರಿಹರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ಸಮಿವುಲ್ಲಾ ಮುಲ್ಲಾ, ಸಮಿವುಲ್ಲ ಮುಜಾವರ್ ಹಾಗೂ ಪದಾಧಿಕಾರಿಗಳು ಕಾರ್ಯಕರ್ತರು ಬೆಂಬಲಿಗರು ಉಪಸ್ಥಿತರಿದ್ದರು.






SDPI Davanagere district
SDPI Davangere

30/05/2024

*ಈಗ ಶಾಂತವಾಗಿರುವ ಚನ್ನಗಿರಿ ನಗರದಲ್ಲಿ ಕಪೋಲಕಲ್ಪಿತ ಶಬ್ದಗಳನ್ನು ಉಪಯೋಗಿಸುತ್ತಾ,ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಲು ಹಾಗೂ ನಗರದ ಶಾಂತಿಯನ್ನು ಕದಡಲು ಪ್ರಯತ್ನ ಪಡುತ್ತಿರುವ.ಇಂತಹ ಕೋಮುವಾದಿಗಳಿಗೆ ಕೋಮು ಸಾಮರಸ್ಯ ಹಾಳು ಮಾಡಲು ಆಸ್ಪದ ನೀಡದೆ,ಕೋಮು ಸೌಹಾರ್ದವನ್ನು ಕಾಪಾಡಲು ಪೋಲಿಸ್ ಇಲಾಖೆ ಕ್ರಮ ವಹಿಸಬೇಕು.*

Davangere District Police ದಾವಣಗೆರೆ ಜಿಲ್ಲಾ ಪೊಲೀಸ್
SDPI Davangere
SDPI Davanagere district
Ismail zabiulla ಇಸ್ಮಾಯಿಲ್ ಜಬಿವುಲ್ಲಾ ಅಭಿಮಾನಿ ಬಳಗ
Prajavani
Prasthutha
NewsFirst Kannada
Kannada One News
Yahiya Yahya
Vijayavani
vijayatimes beats

"ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯು ದೀರ್ಘಾವಧಿ ಹೊರತು ರಾಜಕೀಯ ಪ್ರಜಾಪ್ರಭುತ್ವವಲ್ಲ. ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ. ಸ್ವಾತಂತ್ರ,ಸಮಾನತೆ,...
14/04/2024

"ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯು ದೀರ್ಘಾವಧಿ ಹೊರತು ರಾಜಕೀಯ ಪ್ರಜಾಪ್ರಭುತ್ವವಲ್ಲ. ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ. ಸ್ವಾತಂತ್ರ,ಸಮಾನತೆ, ಮತ್ತು ಭ್ರಾತೃತ್ವವನ್ನು ಜೀವನದ ತತ್ವಗಳಾಗಿ ಗುರುತಿಸುವ ಜೀವನ ವಿಧಾನ."

ಮಹಾನ್ ಮಾನವತವಾದಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|ಬಿ ಆರ್ ಅಂಬೇಡ್ಕರ್ ರವರ 133ನೇ ಜಯಂತಿಯ ಶುಭಾಶಯಗಳು

ಶುಭ ಕೋರುವರು : ಯಹಿಯಾ ಜಿಲ್ಲಾಧ್ಯಕ್ಷರು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ -ದಾವಣಗೆರೆ ಜಿಲ್ಲೆ




||ಅಭಿನಂದನೆಗಳು||ನೂತನವಾಗಿ SDPI Davanagere district ದಾವಣಗೆರೆ ಜಿಲ್ಲಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು.
14/02/2024

||ಅಭಿನಂದನೆಗಳು||

ನೂತನವಾಗಿ SDPI Davanagere district ದಾವಣಗೆರೆ ಜಿಲ್ಲಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು.

FROM THE RIVER TO THE SEA PALESTINE WILL BE FREE
25/12/2023

FROM THE RIVER TO THE SEA PALESTINE WILL BE FREE




11/12/2023
06/12/2023

||ಬಾಬರಿ ಅನ್ಯಾಯಕ್ಕೆ 31 ವರ್ಷಗಳು||. ||31 years of Babari injustice||

06 ಡಿಸೆಂಬರ್
ಫ್ಯಾಸಿಸ್ಟ್ ವಿರೋಧಿ ದಿನ
Anti-Fascist Day






*ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ* ಎಂಬ ಧ್ಯೇಯ ವಾಕ್ಯದೊಂದಿಗೆ  ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾ...
15/08/2023

*ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ* ಎಂಬ ಧ್ಯೇಯ ವಾಕ್ಯದೊಂದಿಗೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲೆ ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ನಗರದ ಮಜೀದ್ ಖಾನ್ ವೃತ್ತ ಬಳಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ಫಾಕ್ ಖಜಾಂಚಿ ಆದ ಎ ಆರ್ ತಾಹಿರ್ ಹಾಗೂ ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.





*ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ*ದಾವಣಗೆರೆ : ಅಗಸ್ಟ್ 15: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗ...
15/08/2023

*ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ*

ದಾವಣಗೆರೆ : ಅಗಸ್ಟ್ 15: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಕಚೇರಿ ಮುಂದೆ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಉಪಾಧ್ಯಕ್ಷರಾದ ರಜ್ವಿ ರಿಯಾಝ್ ಅಹಮ್ಮದ್ ರವರು ಧ್ವಜಾರೋಹಣ ಮಾಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು , 1947 ಆಗಸ್ಟ್ 15 ರಂದು ಭಾರತವು ಬ್ರಿಟಿಷರ 200 ವರ್ಷಗಳ ಗುಲಾಮಗಿರಿಯಿಂದ ಎಲ್ಲಾ ಜಾತಿ ಮತಗಳ ತ್ಯಾಗ ಬಲಿದಾನ ಮತ್ತು ಹೋರಾಟದಿಂದ ದೇಶವು ಸ್ವತಂತ್ರವಾಯಿತು. ಇವತ್ತು ನಾವು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ. ಆದರೆ ಇವತ್ತು ದೇಶವು ಫ್ಯಾಸಿಸ್ಟ್ ಶಕ್ತಿಗಳ ಕೈಗೆ ಸಿಲುಕಿ ಅಂತದ್ದೇ ಪರಿಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗಿದೆ. ದೇಶದಲ್ಲಿ ದೇಶವಾಸಿಗಳಿಗೆ ವಾಕ್ ಸ್ವಾತಂತ್ರ್ಯ , ಆಹಾರದ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಅದೇ ರೀತಿ ಸಾಮಾಜಿಕ ಮತ್ತು ಆರ್ಥಿಕವಾಗಿ ದೇಶವು ದಿವಾಳಿಯಾಗಿದೆ. ಈ ಎಲ್ಲಾ ಪರಿಸ್ಥಿತಿಗಳಿಂದ ದೇಶವಾಸಿಗಳು ಭಯ ಮತ್ತು ಹಸಿವಿನಿಂದ ನಲುಗಿ ಹೋಗಿದ್ದಾರೆ. ದೇಶದಲ್ಲಿ ಇಂಥ ಪರಿಸ್ಥಿತಿ ನಿರ್ಮಾಣ ಮಾಡಿರುವ ಫ್ಯಾಸಿಸ್ಟ್ ಮನಸ್ಥಿತಿಯ ಬಿಜೆಪಿ ಮತ್ತು ಸಂಘ ಪರಿವಾರಗಳ ಸಂಕೋಲೆಯಿಂದ ದೇಶವನ್ನು ಬಿಡಿಸಲು ಎಲ್ಲಾ ಜಾತಿ ಮತ್ತು ಮತಗಳು ಒಗ್ಗೂಡಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಇಸ್ಮಾಯಿಲ್ ಜಬಿವುಲ್ಲಾ ಮತ್ತು ಜಿಲ್ಲಾ ಸಮಿತಿ ಸದಸ್ಯರು, ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.




*ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ* *77 ನೇ ಸ್ವಾತಂತ್ರ್ಯ ದಿನಾಚರಣೆಯ* *ಧ್ವಜಾರೋಹಣ ಕಾರ್ಯಕ್ರಮ**ಆಗಸ್ಟ್ 15/202...
14/08/2023

*ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ*

*77 ನೇ ಸ್ವಾತಂತ್ರ್ಯ ದಿನಾಚರಣೆಯ*
*ಧ್ವಜಾರೋಹಣ ಕಾರ್ಯಕ್ರಮ*

*ಆಗಸ್ಟ್ 15/2023*
*ಸಮಯ ಬೆಳಗ್ಗೆ : 7:30 ಕೆ*
*ಸ್ಥಳ : ಜಿಲ್ಲಾ ಕಚೇರಿ ದಾವಣಗೆರೆ*

*ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ - ದಾವಣಗೆರೆ ಜಿಲ್ಲೆ*

Address

Davangeri

Telephone

+919844344360

Website

Alerts

Be the first to know and let us send you an email when RIGHT 2 SPEAK DVG posts news and promotions. Your email address will not be used for any other purpose, and you can unsubscribe at any time.

Share