RIGHT 2 SPEAK DVG

RIGHT 2 SPEAK DVG Live without fear _ Live with dignity

ಇಂದು ರಸ್ತೆ ಅಪಘಾತದಲ್ಲಿ ನಿಧನರಾದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಮಾತುಗಳು:ನನ್ನ ತಂದೆ ನಾನು 5 ವರ್ಷದ ವಯಸ್ಸಿನವನಾಗಿದ್ದಾಗ ಅಕಾಲಿಕ ಮರ...
25/11/2025

ಇಂದು ರಸ್ತೆ ಅಪಘಾತದಲ್ಲಿ ನಿಧನರಾದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಮಾತುಗಳು:

ನನ್ನ ತಂದೆ ನಾನು 5 ವರ್ಷದ ವಯಸ್ಸಿನವನಾಗಿದ್ದಾಗ ಅಕಾಲಿಕ ಮರಣ ಹೊಂದುತ್ತಾರೆ, ಆಗ ನಮಗೆ ಕಿತ್ತು ತಿನ್ನುವ ಬಡತನ, ಆ ಸಮಯದಲ್ಲಿ ನನ್ನ ತಾಯಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದಾಗ ಅನೇಕ ದಿನಗಳವರೆಗೆ ನನ್ನ ತಾಯಿಗೆ ಸಂಬಂಧಪಟ್ಟ ಅಧಿಕಾರಿಗಳು ಅಲೆದಾಡಿಸಿ ಕೊನೆಗೆ ನನ್ನ ತಾಯಿ 25 ರೂಪಾಯಿ ವಿಧವಾ ವೇತನ ಪಡೆಯಲು ನೂರು ರೂಪಾಯಿಗಳನ್ನು ಲಂಚವಾಗಿ ನೀಡಿದ ಮೇಲೆ ನನ್ನ ತಾಯಿಗೆ ವಿಧವಾ ವೇತನದ ಆದೇಶ ಪತ್ರವನ್ನು ನೀಡುತ್ತಾರೆ.

ಇದನ್ನೆಲ್ಲ ಗಮನಿಸಿದ ನನಗೆ ನನ್ನ ತಾಯಿಗೆ ಆದ ಅನ್ಯಾಯ ಸಮಾಜದ ಬೇರೆ ತಾಯಂದರಿಗೆ ಆಗಬಾರದು ಎಂದು ಸಂಕಲ್ಪ ಮಾಡಿ ಕಷ್ಟಪಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಹಂತ ಹಂತವಾಗಿ ಬೆಳೆದು ಇಂದು ನಾನು ಜಿಲ್ಲಾಧಿಕಾರಿಯಾಗಿದ್ದೇನೆ.

ನನ್ನ ಮೊದಲ ಗುರಿ ನನ್ನ ತಾಯಿ ಅನುಭವಿಸಿದ ಕಷ್ಟವನ್ನು ಬೇರೆ ತಾಯಂದಿರು ಅನುಭವಿಸಬಾರದು, ಈ ಹಿನ್ನೆಲೆಯಲ್ಲಿ ನಾನು ಜಿಲ್ಲಾಧಿಕಾರಿಯಾದ ತಕ್ಷಣ "ಪಿಂಚಣಿ ಅದಾಲತ್ ಕಾರ್ಯಕ್ರಮ"ವನ್ನು ಜಾರಿಗೆ ತಂದಿದ್ದು ಇದರ ಉದ್ದೇಶ ತಹಶೀಲ್ದಾರ್ ಕಚೇರಿ ಜನರ ಮನೆಬಾಗಿಲಿಗೆ ಎಂಬುದು, ಇದರ ಅರ್ಥ ನಮ್ಮ ಅಧಿಕಾರಿಗಳು ಜನರ ಮನೆಬಾಗಿಲಿಗೆ ಹೋಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗಬೇಕಾಗಿರುವ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸುವುದು. ಈ ನನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಚಾಚೂತಪ್ಪದೆ ನಿರ್ವಹಿಸಬೇಕಾಗಿ ಸೂಚಿಸಿರುತ್ತೇನೆ.

-ಶ್ರೀ ಮಹಾಂತೇಶ್ ಬೀಳಗಿ
( Mahantesh Bilagi )

(ಶಿವರಾಜ ಬಡಿಗೇರ್ ಅವರ ವಾಲ್ ನಿಂದ)

05/11/2025

ಕರ್ನಾಟಕ ರಾಜ್ಯ ಸರ್ಕಾರದ ಮಂತ್ರಿ Priyank Kharge ರವರನ್ನು ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಘೋಷಣೆಗಳು ಮೊಳಗಿದವು.

ಮೋದಿ ಸಂಘ ಪರಿವಾರದ ನ ಹಿನ್ನೆಲೆಯ ಪ್ರಧಾನಮಂತ್ರಿ, #2002 ರಲ್ಲಿ ಗುಜರಾತಿನಲ್ಲಿ ನರಮೇಧ ನಡೆಸಿದವರು ಇವರಿಂದ ದೇಶಕ್ಕೆ ಸ್ವಾತಂತ್ರ್ಯ ಬೇಕು.
Afsar Kodlipet Sdpi ಮುಖಂಡ.




05/11/2025

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ಕರ್ನಾಟಕ ಸರ್ಕಾರದ ಮಂತ್ರಿಗಳಾದ #ಪ್ರಿಯಾಂಕಖರ್ಗೆ ರವರು ಮುಖ್ಯಮಂತ್ರಿ Siddaramaiah ರವರಿಗೆ ಬರೆದ ಪತ್ರದ ನಂತರ ರಾಜ್ಯದಲ್ಲಿ ಬ್ಯಾನ್ ಮಾಡುವ ವಿಚಾರ ಮುನ್ನಲೆ ಗೆ ಬಂತು, ತದನಂತರ, ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥ ಸಂಚಲನವನ್ನು ವಿರೋಧಿಸಿ BHIM ARMY ಸಮೇತ ಹಲವಾರು ದಲಿತ ಸಂಘಟನೆಗಳು ತಮಗೂ ಅದೇ ದಿನ ಪಥ ಸಂಚಲನ ಮಾಡಲಿಕ್ಕೆ ಅನುಮತಿ ಕೋರಿದ್ದವು, ಇದರ ನಡುವೆ. ಆರ್ ಎಸ್ ಎಸ್ ಪಥಸಂಚಲನ ವಿರೋಧಿಸಿ ಹಾಗೂ ಕರ್ನಾಟಕ ರಾಜ್ಯ “ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್” (Rural Development & Panchayat Raj) ಹಾಗೂ IT & BT (ತಂತ್ರಜ್ಞಾನ ಮತ್ತು ಜೀವ ತಂತ್ರಜ್ಞಾನ) ಇಲಾಖೆ ಸಚಿವ Priyank Kharge ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಘೋಷಣೆ ಮೊಳಗಿದವು.

28/05/2025

ದಕ್ಷಿಣ ಕನ್ನಡದ ಸಂಘ ಪರಿವಾರದ, ರಕ್ತ ದಾಹಕ್ಕೆ, ಬಂಟ್ವಾಳ, ಕೊಳತ್ತಮಜಲ್, ಸ್ಥಳೀಯ ಮಸೀದಿಯ ಕಾರ್ಯದರ್ಶಿ ಇಂತಿಯಾಜ್ ಬಲಿಯಾಗಿದ್ದಾರೆ, ಮತ್ತೋರ್ವ ಯುವಕ ಅಬ್ದುಲ್ ರಹಮಾನ್,ತಲ್ವಾರ್ ದಾಳಿಯಿಂದ ತೀವ್ರ ಗಾಯಗೊಂಡಿದ್ದಾನೆ. ಬಜರಂಗದಳವನ್ನು ನಿಯಂತ್ರಿಸಲಾಗದ, ಸಂಘ ಪರಿವಾರದ ಕೋಮುಪ್ರಚೋದನೆಯ ಕಾರ್ಯಕ್ರಮಗಳನ್ನು ಭಾಷಣಗಳನ್ನು, ತಡೆಯಲಾಗದ ಕಾಂಗ್ರೆಸ್
ಸರ್ಕಾರವೇ ಈ ಕೊಲೆಗೆ ಹೊಣೆ.
ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತಿದೆ, ರಾಜ್ಯದಲ್ಲಿ ಒಬ್ಬ ಅಸಮರ್ಥ ಗೃಹ ಮಂತ್ರಿ ಇದ್ದಾರೆ. ಮಾನ್ಯ ಮುಖ್ಯಮಂತ್ರಿಗಳು, ಈ ಅಸಮರ್ಥ ಗೃಹ ಮಂತ್ರಿಯ ರಾಜೀನಾಮೆಯನ್ನು ಪಡೆದು. ಒಬ್ಬ ಸಮರ್ಥ ವ್ಯಕ್ತಿಗೆ
ಗೃಹ ಇಲಾಖೆ ನೀಡಿ ಪುಣ್ಯ ಕಟ್ಟಿಕೊಳ್ಳಿ.



14/02/2025

*"ಎಸ್‌ ಡಿ ಪಿ ಐ ದಾವಣಗೆರೆ ಸಮಿತಿ ಜಿಲ್ಲಾ ವತಿಯಿಂದ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಪ್ರತಿಭಟನೆ."*

ಜಂಟಿ ಸಂಸದೀಯ ಸಮಿತಿ ರಾಜ್ಯಸಭೆಯಲ್ಲಿ ಅಸಂವಿಧಾನಿಕವಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿರುವುದನ್ನು ಖಂಡಿಸಿ ದಾವಣಗೆರೆ ನಗರದ ಅಹಮದ್ ನಗರ ವೃತ್ತದಲ್ಲಿ ಮಸೂದೆಯ ಪ್ರತಿಯನ್ನು ಹರಿದು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಈ ಕರಾಳ ಕಾನೂನನ್ನು ಹಿಂಪಡೆಯದಿದ್ದರೆ CAA ಮತ್ತು NRC ರೂಪದಲ್ಲಿ ದೇಶಾದ್ಯಂತ ಆಂದೋಲನ ಮಾಡುವುದಾಗಿ ಎಚ್ಚರಿಸಲಾಯಿತು.



Address

Davangeri

Telephone

+919844344360

Website

Alerts

Be the first to know and let us send you an email when RIGHT 2 SPEAK DVG posts news and promotions. Your email address will not be used for any other purpose, and you can unsubscribe at any time.

Share