19/07/2024
ಪತ್ರಿಕ ಪ್ರಕಟಣೆಗಾಗಿ:
||ಎನ್ಡಿಎ ಆಡಳಿತದಲ್ಲಿ ನಡೆಯುತ್ತಿರುವ ವ್ಯಾಪಕ ಗುಂಪುಹತ್ಯೆ , ಲೂಟಿ ಮತ್ತು ವಿದ್ವಾಂಸಕ ಕೃತ್ಯಗಳನ್ನು ಖಂಡಿಸಿ ಎಸ್ ಡಿ ಪಿ ಐ ಪ್ರತಿಭಟನೆ||
ಹರಿಹರ: ಜುಲೈ,19, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹರಿಹರ ವಿಧಾನಸಭಾ ಕ್ಷೇತ್ರ ವತಿಯಿಂದ ಎನ್ಡಿಎ ಆಡಳಿತದಲ್ಲಿ ನಡೆಯುತ್ತಿರುವ ವ್ಯಾಪಕ ಗುಂಪು ಹತ್ಯೆ ಲೂಟಿ, ಮಸೀದಿ ಚರ್ಚ್ ಸೇರಿದಂತೆ ಆರಾಧನಾಲಯ ಮೇಲೆ ಅಕ್ರಮ ದಾಳಿ ಮತ್ತು ವಿದ್ವಾಂಸಕ ಕೃತ್ಯಗಳನ್ನು ನಡೆಸುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಲು ತಹಶೀಲ್ದಾರ್ ರವರ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಪ್ರತಿಭಟಿಸಿ ಮನವಿ ಪತ್ರವನ್ನು ನೀಡಲಾಯಿತು.
ಪ್ರತಿಭಟನೆ ಉದ್ದೇಶಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಯಹಿಯಾ ರವರು ದೇಶಾದ್ಯಂತ ಎನ್ ಡಿಎ ಆಡಳಿತದಲ್ಲಿ ಧಾರ್ಮಿಕ ಅಸಹಿಷ್ಣುತೆ ಗುಂಪುಹತ್ಯೆ,ಲೂಟಿ, ಆರಾಧನಾಲಯಗಳ ಮೇಲೆ ಅಕ್ರಮ ದಾಳಿ ಮತ್ತು ಇಂತಹ ವಿದ್ವಾಂಸಕ ಕೃತ್ಯ ಗಳು ನಡೆಸಿ ಜನರಲ್ಲಿ ಭಯ ಹುಟ್ಟಿಸುವ ಈ ಘಟನೆಗಳು ಮೊದಲ 10 ವರ್ಷದ ನರೇಂದ್ರ ಮೋದಿ ರವರ ಆಡಳಿತದಲ್ಲಿ ಚಾಲನೆ ಪಡೆದು ಈಗ ಸರ್ವೇ ಸಾಮಾನ್ಯ ಎಂಬಂತಾಗಿದೆ ತಿಳಿಸುತ್ತಾ ಕೆಳಗಿನ ಘಟನೆಗಳನ್ನು ವಿವರಿಸಿದರು.
1.ಛತ್ತೀಸ್ಗಡ ರಾಜ್ಯದ ರಾಯಪುರದಲ್ಲಿ ಅಕ್ರಮ ಗೋವು ಸಾಗಣೆ ಆರೋಪದಲ್ಲಿ
ಸದ್ದಾಮ್ ಖುರೇಶಿ, ಚಾಂದ್ ಮಿಯಾ, ಮತ್ತು ಗುದ್ದು ಖಾನ್ 7 ಜೂನ್ ರಂದು ತಳಿಸಿ ಹತ್ಯೆ ಮಾಡಲಾಗಿದೆ.
2. ಫರೀದ್ ಎಂಬ ಯುವಕನನ್ನು ಕಳ್ಳತನದ ಆರೋಪ ಹೂರಿಸಿ ಅಲಿಗಡ ದಲ್ಲಿ 19 ಜೂನ್ ರಂದು ಹತ್ಯೆ ಮಾಡಲಾಗಿದೆ.
3.ಜೂನ್ 23 ರಂದು ಗುಜರಾತ್ನ ಚಿಖೋದ್ರಾದಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಸಲ್ಮಾನ್ ವೋಹ್ರಾ ಅವರನ್ನು ವಿನಾಕಾರಣ ಹೊಡೆದು ಕೊಂದರು.
4.ಜೂನ್ 24 ರಂದು ಛತ್ತೀಸ್ಗಢದ ದಾಂತೇವಾಡದಲ್ಲಿ ಧಾರ್ಮಿಕ ಮತಾಂತರದ ಆರೋಪದ ಮೇಲೆ ಕ್ರೈಸ್ತ ಮಹಿಳೆ ಬಿಂಧು ಸೋಧಿಯನ್ನು ಹತ್ಯೆ ಮಾಡಲಾಗಿತ್ತು.
5.ಜೂನ್ 19 ರಂದು ಹಿಮಾಚಲ ಪ್ರದೇಶದ ನಹಾನ್ನಲ್ಲಿ ಪ್ರಾಣಿ ಬಲಿಯ ಚಿತ್ರವನ್ನು ವಾಟ್ಸಾಪ್ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಜಾವೇದ್ ಅವರ ಜವಳಿ ಅಂಗಡಿಯನ್ನು ಲೂಟಿ ಮಾಡಿ ಧ್ವಂಸಗೊಳಿಸಲಾಯಿತು.
6.ಜೂನ್ 15 ರಂದು ತೆಲಂಗಾಣದ ಮೇದಕ್ನಲ್ಲಿ ಹಸು ಸಾಗಾಟದ ಹೆಸರಿನಲ್ಲಿ ನಡೆದ ಗಲಾಟೆಯಲ್ಲಿ ಮಿನ್ಹಾಜ್ ಉಲ್ ಉಲೂಮ್ ಮದರಸಾ ಮತ್ತು ಸ್ಥಳೀಯ ಆಸ್ಪತ್ರೆಯ ಮೇಲೆ ದಾಳಿ ನಡೆಸಲಾಯಿತು.
7.ಹಿಂದುತ್ವ ಗುಂಪುಗಳು ಜೂನ್ 17 ರಂದು ಒಡಿಶಾದ ಬಾಲಸೋರ್ ಮತ್ತು ಖೋರ್ಧಾದಲ್ಲಿ ಗೋಹತ್ಯೆಯ ಹೆಸರಿನಲ್ಲಿ ಕೋಮು ಹಿಂಸಾಚಾರವನ್ನು ಪ್ರಚೋದಿಸಿತು.
8.ಮಧ್ಯಪ್ರದೇಶದ ಮಂಡ್ಲಾದಲ್ಲಿ ಹಸುವಿನ ಮಾಂಸವಿದೆ ಎಂದು ಆರೋಪಿಸಿ ಮುಸ್ಲಿಂ ಮನೆಗಳನ್ನು ಧ್ವಂಸಗೊಳಿಸಲಾಗಿದೆ.
9.ಹಿಂದುತ್ವದ ಗುಂಪು ಒಡಿಶಾದ ಖುರ್ದಾದಲ್ಲಿ ಮುಸ್ಲಿಂ ಮನೆಗಳಿಂದ ಫ್ರೀಜರ್ಗಳನ್ನು ದರೋಡೆ ಮಾಡಿತು ಮತ್ತು ಗೋಮಾಂಸವನ್ನು ಸಂಗ್ರಹಿಸಲಾಗಿದೆ ಎಂದು ಆರೋಪಿಸಿ ಪೊಲೀಸರ ಸಮ್ಮುಖದಲ್ಲಿ ಅವರ ಮನೆಗಳನ್ನು ಧ್ವಂಸಗೊಳಿಸಿತು.
10.ರಾಜಸ್ಥಾನದ ಭರತ್ ಪುರದಲ್ಲಿವಿಎಚ್ಪಿ ಗೂಂಡಾಗಳು ಕ್ರೈಸ್ತ ಸಮುದಾಯದವರ ಮನೆಗಳಿಗೆ ನುಗ್ಗಿ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ ಭಕ್ತರ ಮೇಲೆ ಧಾರ್ಮಿಕ ಮತಾಂತರ ಆರೋಪದ ಮೇಲೆ ದಾಳಿ ಮಾಡಿದ್ದಾರೆ.
11.ಟ್ರಕ್ ಚಾಲಕ ಶಾಕಿರ್ ಮತ್ತು ಸಹಾಯಕ ಜುಬೇರ್ ಖಾನ್ ಅವರನ್ನು ಮಧ್ಯಪ್ರದೇಶದ ಪರಶಿಯಾ ಬಳಿ ಜುಲೈ 2 ರಂದು ವಿಎಚ್ಪಿ ಮತ್ತು ಬಿಜೆಪಿ ಗೋರಕ್ಷಕರ ಗುಂಪು ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ನಿರ್ದಯವಾಗಿ ಥಳಿಸಿದೆ.
12.ಪಶ್ಚಿಮ ಬಂಗಾಳದಲ್ಲಿ ಸಮಾಜ ವಿರೋಧಿ ಹಿಂದುತ್ವ ಗುಂಪುಗಳಿಂದ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಹೋಗುತ್ತಿದ್ದಾಗ ತೂಫಾನ್ ಎಸ್.ಕೆ ಮತ್ತು ತಲೆಬ್ ಎಸ್.ಕೆ ರವರನ್ನು ಲೋಯಾಪರ ಎಂಬ ಹಳ್ಳಿಯಲ್ಲಿ ಕ್ರೂರವಾಗಿ ಥಳಿಸಲಾಗಿದೆ.
13.14 ಜುಲೈ ರಂದು ಮಹಾರಾಷ್ಟ್ರ ರಾಜ್ಯದ ಕೋಲಾಪುರ ಜಿಲ್ಲೆಯ ವಿಶಾಲಗಡದಲ್ಲಿ ಸಂಘ ಪರಿವಾರದ ಗೂಂಡಾಗಳು ದರ್ಗಾ ಮತ್ತು ಮಸೀದಿ ಹಾಗೂ ಹಲವಾರು ಮುಸ್ಲಿಮರ ಮನೆ ಮತ್ತು ಅಂಗಡಿಗಳನ್ನು ಧ್ವಂಸ ಗೂಳಿಸಿದ್ದಲ್ಲದೆ ಮಹಿಳೆ ಮತ್ತು ಮಕ್ಕಳು ಜೊತೆಗೆ ಯುವಕರನ್ನು ಕ್ರೂರವಾಗಿ ಥಳಿಸಿ,ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ, ಮುಸ್ಲಿಮರ ಪವಿತ್ರ ಗ್ರಂಥಾ ಕುರಾನ್ ವನ್ನು ಸುಟ್ಟು ಹಾಕಿ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ.
ದೇಶದ ಯಾವುದೇ ಮೂಲೆಯಲ್ಲಿ ಯಾರಾದರೂ ಮೇಲೆ ಅನ್ಯಾಯ ಅಕ್ರಮಗಳು ನಡೆದರೆ ಅದರ ವಿರುದ್ಧ ಧ್ವನಿ ಆಗಬೇಕಾಗಿದ್ದ ಜಾತ್ಯಾತೀತ ಪಕ್ಷಗಳು ಬಿಜೆಪಿ ಮತ್ತು ಸಂಘ ಪರಿವಾರದ ಮುಂದೆ ತಮಗೂ ಮತ್ತು ಇದಕ್ಕೆ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಾ ಕೈ ಕಟ್ಟಿ ಕುಳಿತುಕೊಂಡಿರುವ ಈ ಸಮಯದಲ್ಲಿ ನೈಜ ವಿರೋಧ ಪಕ್ಷವಾಗಿ ಎಸ್ ಡಿ ಪಿ ಐ ಧ್ವನಿ ಯಾಗುತ್ತಿದೆ ಆದ್ದರಿಂದ ಮುಂಬರುವ ದಿನಗಳಲ್ಲಿ ಎಸ್ ಡಿ ಪಿ ಐ ಜೊತೆ ನಿಲ್ಲುವಂತೆ ಕರೆ ನೀಡಿದರು.
ಅದೇ ರೀತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಜ್ ಅಹಮದ್ ಮಾತನಾಡುತ್ತಾ, ದೇಶದಲ್ಲಿ ಇಷ್ಟೊಂದು ಭಯಾನಕವಾಗಿ ಯಾವುದೇ ಭಯವಿಲ್ಲದೆ ಕಾನೂನನ್ನು ಕೈಗೆತ್ತಿಕೊಂಡು ಅಲ್ಪಸಂಖ್ಯಾತರು ದಲಿತರು ಮತ್ತು ಹೆಚ್ಚಾಗಿ ಮುಸ್ಲಿಮರನ್ನು ಗುರಿಯಾಗಿಸಿ.ಟೋಪಿ ಹಿಜಾಬ್ ಮತ್ತು ಗೋವಿನ ಹೆಸರಿನಲ್ಲಿ ನಿತ್ಯ ನಿರಂತರವಾಗಿ ಗುಂಪುಹತ್ಯೆ, ಹಲ್ಲೆ ಅದೇ ರೀತಿ ಮುಸ್ಲಿಮರ ಧಾರ್ಮಿಕ ಕೇಂದ್ರಗಳಾದ ಮಸೀದಿ ಮತ್ತು ದರ್ಗಾಗಳನ್ನು ಅಕ್ರಮವಾಗಿ ಪ್ರವೇಶಿಸಿ ಧ್ವಂಸ ಮಾಡಿ ಮುಸ್ಲಿಮರ ಭಾವನೆಗಳನ್ನು ಧಕ್ಕೆ ಮಾಡಿದ್ದಲ್ಲದೆ ಅವರನ್ನು ಕೆರಳಿಸಲಾಗುತ್ತಿದೆ. ಇಂತಹ ಕೃತ್ಯಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನಿರ್ಧಾಕ್ಷಿಣ್ಯವಾಗಿ ದಂಡಿಸಬೇಕಾಗಿದ್ದ ಇಲ್ಲಿನ ಸರ್ಕಾರಗಳು ಇವೆಲ್ಲವನ್ನು ನಿರ್ಲಕ್ಷಿಸಿದ್ದಲ್ಲದೆ ಅವರನ್ನು ಪೋಷಿಸುತ್ತಾ ಸಮಾಜದಲ್ಲಿ ಹಿಂದೂ ಮತ್ತು ಮುಸ್ಲಿಂ ಎಂದು ಬೇರ್ಪಡಿಸಿ ಅದರಿಂದ ರಾಜಕೀಯ ಲಾಭ ಪಡೆಯುವ ಹುನ್ನಾರಕ್ಕೆ ತಾವು ಈ ಕೂಡಲೇ ಮಧ್ಯ ಪ್ರವೇಶಿಸಿ ಈ ಎಲ್ಲಾ ಘಟನೆಗಳಲ್ಲಿ ಭಾಗಿಯಾಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲು ಮತ್ತು ಈ ಘಟನೆ ಗಳಿಗೆ ಪೋಷಿಸಿದವರ ವಿರುದ್ಧ ಕಠಿಣವಾದ ಕಾನೂನು ಕ್ರಮ ಜರುಗಿಸುವ ಮೂಲಕ ನ್ಯಾಯ ದೊರಕಿಸ ಕೊಡಬೇಕೆಂದು ಆಗ್ರಹಿಸಿದರು.
ಈ ಸಮಯದಲ್ಲಿ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಖಜಾಂಚಿ ಎ ಆರ್ ತಾಹಿರ್ ಜಿಲ್ಲಾ ಸಮಿತಿ ಸದಸ್ಯರಾದ ಸೈಯದ್ ಅಶ್ಫಾಖ್ ದಾದಾವಲಿ, ಹರಿಹರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ಸಮಿವುಲ್ಲಾ ಮುಲ್ಲಾ, ಸಮಿವುಲ್ಲ ಮುಜಾವರ್ ಹಾಗೂ ಪದಾಧಿಕಾರಿಗಳು ಕಾರ್ಯಕರ್ತರು ಬೆಂಬಲಿಗರು ಉಪಸ್ಥಿತರಿದ್ದರು.
SDPI Davanagere district
SDPI Davangere