Davanagere Jille samachara

Davanagere Jille samachara JILLE SAMACHARA Kannada daily news paper
EDITOR : H.VENKATESH
MO : 9740249346,
9740112249 ದಾವಣಗೆರೆ ಹೆಮ್ಮೆಯ ದಿನಪತ್ರಿಕೆ

ದಾವಣಗೆರೆಗೆ ಐಟಿ ವಲಯ : ಬೆಂಗಳೂರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಐಟಿ ಅಧಿಕಾರಿಗಳ ಮಹತ್ವದ ಸಮನ್ವಯ ಸಭೆ  ಬೆಂಗಳೂರಿನಲ್ಲಿ ಕರ್ನಾಟಕ ಡಿಜ...
02/07/2025

ದಾವಣಗೆರೆಗೆ ಐಟಿ ವಲಯ :

ಬೆಂಗಳೂರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಐಟಿ ಅಧಿಕಾರಿಗಳ ಮಹತ್ವದ ಸಮನ್ವಯ ಸಭೆ

ಬೆಂಗಳೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ನ ಸಿಇಓ ಸಂಜೀವ್ ಗುಪ್ತ ಮತ್ತು ಅಧ್ಯಕ್ಷರಾದ ಬಿ ವಿ ನಾಯ್ಡು ಹಾಗೂ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್ ಟಿಪಿಐ) ದ ನಿರ್ದೇಶಕರಾದ ಡಾ. ಸಂಜಯ್ ತ್ಯಾಗಿ ಅವರನ್ನು ಪ್ರತ್ಯೇಕವಾಗಿ ಅವರ ಕಚೇರಿಗಳಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಭೇಟಿ ಮಾಡಿ ದಾವಣಗೆರೆಯಲ್ಲಿ ಐಟಿ ವಲಯಕ್ಕೆ ಉತ್ತೇಜನ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮನ್ವಯ ಕುರಿತುಮಹತ್ವದ ಸಮನ್ವಯ ಸಭೆ ನಡೆಸಲಾಯಿತು.

ಕ್ಯೂ-ಸ್ಪೈಡೆರ್ಸ್ ಹಾಗೂ ಟೆಸ್ಟ್ ಯಂತ್ರ ಸಾಫ್ಟ್‌ವೇರ್ ಸಲ್ಯೂಷನ್ಸ್ ನ ಸಿಇಓ ಗೀರೀಶ್ ರಾಮಣ್ಣ ನವರು ಮಧ್ಯ ಕರ್ನಾಟಕ ದಾವಣಗೆರೆ ಯಲ್ಲಿ ತಮ್ಮದೇ ಸಾಫ್ಟ್‌ವೇರ್ ಕಂಪನಿ ಯ ಕಾರ್ಯಾಚಟುವಟಿಕೆ ಗಳನ್ನು ಪ್ರಾರಂಭಿಸಲು ಇಂಗಿತ ವ್ಯಕ್ತಪಡಿಸಿ, ಸರ್ಕಾರದಿಂದ ಐಟಿ ಗೆ ಸೂಕ್ತ ಮೂಲಭೂತ ಸೌಲಭ್ಯ ಹಾಗೂ ಪೂರಕ ವಾತಾವರಣ ಒದಗಿಸಿಕೊಡಲು ಕೊಡಲು ಸಭೆಯಲ್ಲಿ ಕೋರಿದರು. ಈ ಸಂದರ್ಭದಲ್ಲಿ ಐಟಿ ಉದ್ಯೋಗಾವಕಾಶ ಬಯಸಿ ವರ್ಷಕ್ಕೆ ಸುಮಾರು 5000-10000 ವಿದ್ಯಾರ್ಥಿಗಳು ದಾವಣಗೆರೆ ಜಿಲ್ಲೆಯಿಂದ ಬೆಂಗಳೂರಿಗೆ ಬರುತ್ತಿರುವುದರ ಬಗ್ಗೆ ವಿವರಿಸಲಾಯಿತು.

ಈ ಮಹತ್ವದ ಸಭೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗಳಾದ ಜಿ.ಎಂ ಗಂಗಾಧರಸ್ವಾಮಿ ಮತ್ತು ದಾವಣಗೆರೆ ಐಟಿ ವಿಷನ್ ಗ್ರೂಪ್ ಸದಸ್ಯರು ಭಾಗವಹಿಸಿದ್ದರು.
ಎಸ್ ಟಿಪಿಐ - ಐಟಿ ಪಾರ್ಕ್ ಗೆ ಆದ್ಯತೆಮೇರೆಗೆ ಸೂಕ್ತ ಸ್ಥಳವನ್ನು ಶೀಘ್ರ ಒದಗಿಸಿ ಹಾಗೂ ತಾತ್ಕಾಲಿಕ ಸ್ಥಾಪನೆಗೆ ಲಭ್ಯವಿರುವ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಕೂಡ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.

28/06/2025

ಭದ್ರಾ ನಾಲೆಯನ್ನು ಸೀಳಿ ನೆಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ವಿರೋಧಿಸಿ ಇಂದು ದಾವಣಗೆರೆ ಬಂದ್

ದಾವಣಗೆರೆ : ಭದ್ರಾ ನಾಲೆಯನ್ನು ಸೀಳಿ ನೆಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ವಿರೋಧಿಸಿ ಇಂದು ದಾವಣಗೆರೆ ಬಂದ್ ಗೆ ಕರೆ ನೀಡಲಾಗಿತ್ತು.ರೈತರಿಗಾಗಿ ಬಂದ್ ಗೆ ಬೆಂಬಲ ನೀಡುವಂತೆ ವರ್ತಕರು, ಬಸ್, ಲಾರಿ& ಆಟೋ ಮಾಲೀಕರು ಹಾಗೂ ಚಾಲಕರು, ಹೋಟೆಲ್ & ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರಿಗೆ ಮನವಿ ಮಾಡಲಾಯಿತು. ಮುಖಂಡರುಗಳಾದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಚಂದ್ರಶೇಖರ್ ಪೂಜಾರ್, ಮಾಡಾಳು ಮಲ್ಲಿಕಾರ್ಜುನ, ಆರ್.ಎಲ್ .ಶಿವಪ್ರಕಾಶ್ ,ಕೊಳೇನಹಳ್ಳಿ ಬಿ.ಎಂ.ಸತೀಶ್, ಬೆಳವನೂರು ನಾಗೇಶ್ ರಾವ್, ಲೋಕಿಕೆರೆ ನಾಗರಾಜ್, ಬಿ.ಜಿ.ಅಜಯ್ ಕುಮಾರ್,ರಾಜಶೇಖರ ನಾಗಪ್ಪ, ಧನಂಜಯ ಕಡ್ಲೇಬಾಳು ಮತ್ತಿತರರು ಭಾಗವಹಿಸಿದ್ದರು.

ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಇಂದು ದಾವಣಗೆರೆ ನಗರದ ರೇಣುಕಾ ಮಂದಿರದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಸಭೆಯನ್ನ...
27/06/2025

ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಇಂದು ದಾವಣಗೆರೆ ನಗರದ ರೇಣುಕಾ ಮಂದಿರದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಾಗೃತಿ ಜಾಗೃತಿ ಸಭೆಯನ್ನು ಡಾ. ರವಿಕಾಂತೇಗೌಡ ಐಪಿಎಸ್ ಐಜಿಪಿ ಪೂರ್ವ ವಲಯ ರವರು ಉದ್ಘಾಟಿಸಿದರು. ಸಭೆಯಲ್ಲಿ ಸಿಇಓ ರವರಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ ರಾವ್ ರವರು, ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು, ಚಿತ್ರನಟಿ ಶ್ರೀಮತಿ ಅದಿತಿ ಪ್ರಭುದೇವ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಪಸ್ಥಿತರಿದ್ದು, ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು.

22/06/2025

ದಾವಣಗೆರೆ : ದೊಡ್ಡಬಾತಿಯ ತಪೋವನದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ 3000 ಜನರಿಂದ ಬೃಹತ್ ಯೋಗ ಕಾರ್ಯಕ್ರಮ ನಡೆಯಿತು.
ಹರಿಹರದ ಶಾಸಕ ಬಿ ಪಿ ಹರೀಶ್, ಲೋಕಾಯುಕ್ತ ಎಸ್‌ಪಿ ಶ್ರೀ ಮಲ್ಲಪ್ಪ ಕೌಲಾಪುರೆ , ತಪೋವನದ ಚೇರ್ಮನ್ ಡಾ. ಶಶಿಕುಮಾರ್ ಮೆಹರ್ವಾಡೆ, ದೊಡ್ಡಬಾತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ಹನುಮಂತಪ್ಪ ಹಾಗೂ ಜೆಸಿಬಿನುಮಂತಪ್ಪ ಭಾಗವಸಿದ್ದರು

ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ  ಗಿಟ್ಟೆ ಮಾಧವ ವಿಠಲ್ ರಾವ್ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಜಿಯಾವುಲ್ಲ...
19/06/2025

ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಗಿಟ್ಟೆ ಮಾಧವ ವಿಠಲ್ ರಾವ್ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಜಿಯಾವುಲ್ಲಾ ಅವರನ್ನು ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ಅವರು ತಮ್ಮ ಗೃಹಕಚೇರಿಯಲ್ಲಿ ಶುಭಕೋರಿದರು.

ದಾವಣಗೆರೆ  - ಶಾಸಕರಾದ ಶಾಮನೂರು ಶಿವಶಂಕರಪ್ಪನವರು  16-06-2025ರಂದು  ತಮ್ಮ 95 ನೇ ಜನ್ಮದಿನವನ್ನು ಆಚರಿಸಿಕೊಂಡರು.
17/06/2025

ದಾವಣಗೆರೆ - ಶಾಸಕರಾದ ಶಾಮನೂರು ಶಿವಶಂಕರಪ್ಪನವರು 16-06-2025ರಂದು ತಮ್ಮ 95 ನೇ ಜನ್ಮದಿನವನ್ನು ಆಚರಿಸಿಕೊಂಡರು.

16/06/2025

ದಾವಣಗೆರೆ : ಶಾಸಕ ಎಸ್ಸೆಸ್ ಜನ್ಮದಿನದ ಪ್ರಯುಕ್ತ ನಡೆದ
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಿಎಂ,ಡಿಸಿಎಂ ಭಾಗಿ

13/06/2025

ದಾವಣಗೆರೆಯಲ್ಲಿ ಕಾಂಚಿಪುರಂ ವರಮಹಾಲಕ್ಷ್ಮಿ ಸಿಲ್ಕ್ ಹೊಸ ಮಳಿಗೆ ಉದ್ಘಾಟನೆ

ದಕ್ಷಿಣ ಭಾರತದಲ್ಲಿ 69ನೇ,ಕರ್ನಾಟಕದಲ್ಲಿ 5ನೇ ಶಾಖೆ ಆರಂಭ

ದಾವಣಗೆರೆ: ಭಾರತದ ಪ್ರಮುಖ ಜನರ ಆಕರ್ಷಣೆಯಾಗಿರುವ, ಚಿಲ್ಲರೆ ವ್ಯಾಪಾರಗಳಲ್ಲಿ ಒಂದಾದ ಸಾಯಿ ಸಿಲ್ಕ್ ಕಲಾಮಂದಿರ್ ಲಿಮಿಟೆಡ್ (SSKL) ಅಂಗ ಸಂಸ್ಥೆಯಾದ ಕಾಂಚೀಪುರಂ ವರಮಹಾಲಕ್ಷ್ಮಿ ಸಿಲ್ಕ್ ಹೊಸ ಮಳಿಗೆಯನ್ನು ದಾವಣಗೆರೆಯಲ್ಲಿ ಅನಾವರಣಗೋಳಿಸುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬ್ರಾಂಡ್ ನ ಮತ್ತೊಂದು ವಿಸ್ತರಣೆ ಮಾಡಿದೆ.
ದಾವಣಗೆರೆಯ ಬಾಪೂಜಿ ಡೆಂಟಲ್ ಕಾಲೇಜ್ ರಸ್ತೆ,(ಬಾಪೂಜಿ ಆಸ್ಪತ್ರೆ ಹತ್ತಿರ ) ಕಾಂಚಿಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಹೊಸ ಮಳಿಗೆಯನ್ನು ಶ್ರೀ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀ ಶ್ರೀ ಷ.ಬ್ರ.ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಉದ್ಘಾಟನೆ ಮಾಡಿದವರು.

ಈ ವೇಳೆ ಸಾಯಿ ಸಿಲ್ಕ್ಸ್ ಕಲಾಮಂದಿರ್ ಲಿಮಿಟೆಡ್‌ನ ನಿರ್ದೇಶಕ ದುರ್ಗಾರಾವ್ ಚಲವಾದಿ ಮಾತನಾಡಿ, ದಾವಣಗೆರೆಯಲ್ಲಿ 69ನೇ ಕಾಂಚಿಪುರಂ ವರಮಹಾಲಕ್ಷ್ಮಿ ಸಿಲ್ಕ್ಸ್ ಹೊಸ ಮಳಿಗೆ ಉದ್ಘಾಟನೆ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಬ್ರ್ಯಾಂಡ್ ವಿಸ್ತರಣೆ ಮುಂದುವರೆಸಿದೆ, ಹೊಸ ಸ್ವರೂಪದಲ್ಲಿ ಕರ್ನಾಟಕದಲ್ಲಿ 5ನೇ ಶೋ ರೂಂ ಪ್ರಾರಂಭಿಸಲಾಗಿದೆ. ಗ್ರಾಹಕರಿಗೆ ಸಾಟಿಯಿಲ್ಲದ ದೇಸಿ ಉತ್ಪನ್ನದ ಮೌಲ್ಯವನ್ನು ನೀಡುತ್ತದೆ. ಇದರ ವ್ಯಾಪಕ ಸಂಗ್ರಹವು ಕಾಂಚೀಪುರಂ ರೇಷ್ಮೆ ಸೀರೆಗಳು, ಬನಾರಸಿ, ಪಟೋಲಾ, ಕೋಟಾ, ಪೈಥಾನಿ, ಆರ್ಗನ್ಜಾ, ಕುಪ್ಪಡಂ, ಇಕ್ಕತ್, ಬಂಧನಿ ಸೇರಿದಂತೆ ಹತ್ತು ಹಲವು ಬ್ರ್ಯಾಂಡ್ ಗಳು ಒಳಗೊಂಡಿದೆ - ಮದುವೆ, ಹಬ್ಬದ ಸಂದರ್ಭಗಳು, ಶುಭಸಮಾರಂಭಗಳ ಮತ್ತು ದೈನಂದಿನ ಸೊಬಗುಗಳನ್ನು ಪೂರೈಸುತ್ತದೆ. ಮಳಿಗೆಯಲ್ಲಿ 1 ಸಾವಿರದಿಂದ 2.5 ಲಕ್ಷ ಬೆಲೆ ವರೆಗೆ ತರಹೇವಾರಿ ಉಡುಪುಗಳು ಲಭ್ಯವಿದೆ. ಇವೆಲ್ಲವೂ ಸಹಾ SSKLನ ಒಂದೇ ಸೂರಿನಡಿ ಸಿಗುವುದು ಹೆಗ್ಗಳಿಕೆಯಾಗಿದೆ.

ಕರ್ನಾಟಕದಲ್ಲಿ ಬಲವಾದ, ಸಾಂಪ್ರದಾಯಿಕ ಮತ್ತು ಸಮಕಾಲೀನ ನೇಯ್ಗೆಗಳಲ್ಲಿ ಗುಣಮಟ್ಟದ ಕಡಿಮೆ ಬೆಲೆಯಲ್ಲಿ ನೀಡುವ ಸೀರೆ ಶಾಪಿಂಗ್ ಅನುಭವವನ್ನು ಗ್ರಾಹಕರು ಮರು ವ್ಯಾಖ್ಯಾನಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ಕರ್ನಾಟಕದಲ್ಲಿ ತನ್ನ ನೆಲೆಯನ್ನು ಬಲಪಡಿಸಲು, SSKL ವಿನೂತನವಾದ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತದೆ. ಗ್ರಾಹಕರಿಗೆ ಗುಣಮಟ್ಟದ ಸಾಂಪ್ರದಾಯಿಕ ಮಗ್ಗದ ಅನುಭವವನ್ನು ನೀಡಲಾಗುತ್ತದೆ.

ಕಾಂಚಿಪುರಂ ವರಮಹಾಲಕ್ಷ್ಮಿ ಸಿಲ್ಕ್ ನೂತನ ಮಳಿಗೆಯಲ್ಲಿ ನೂರಾರು ಶೈಲಿಯ ಉಡುಪುಗಳು ಒಂದೇ ಕಡೆ ಸಿಗಲಿದೆ. ನಮ್ಮ ಮಳಿಗೆಯಲ್ಲಿ ಎಲ್ಲಾ ತರಹದ ಶುಭಸಮಾರಾಂಭಗಳಿಗೆ ಹೇಳಿ ಮಾಡಿಸಿದಾಗಿದೆ. ಮಾರುಕಟ್ಟೆಗಳಿಗ್ಗಿಂತ ಗುಣಮಟ್ಟದ ಕೈ ಮಗ್ಗದಲ್ಲಿ ತಯಾರಾಗಿರುವ ಆಕರ್ಷಕ ಬಣ್ಣಗಳು,ಕಡಿಮೆ ಬೆಲೆಯಲ್ಲಿ ವಿವಿಧ ನಮೂನೆಯ ಉಡುಪುಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗಲಿವೆ ಎಂದರು. ಹಬ್ಬ ಹರಿದಿನದ ದಿನಗಳಲ್ಲಿ ವಿಶೇಷವಾದಂತಹ ರಿಯಾಯಿತಿಯ ಸೌಲಭ್ಯಗಳು ನಮ್ಮ ಮಳಿಗೆಯಲ್ಲಿ ಮಾಡಿಕೊಡಲಾಗುತ್ತದೆ ಎಂದರು.

ನೂತನ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ದುರ್ಗಾರಾವ್ ಚಲವಾದಿ, ಝಾನ್ಸಿ ಚಲವಾದಿ, ಕಲ್ಯಾಣ ಅಣ್ಣಮ್,ಬಂದುಗಳು, ಸ್ನೇಹಿತರು, ಗಣ್ಯರು, ಸಿಬ್ಬಂದಿ ವರ್ಗದವರು ಇದೆ ವೇಳೆ ಉಪಸ್ಥಿತರಿದ್ದರು

ದಾವಣಗೆರೆ ಜಿಲ್ಲೆಯಲ್ಲಿ  ಜೂ. 16 ರಂದು  ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನದಾವಣಗೆರೆ-ಜಿಲ್ಲಾ ಉಸ್ತುವಾರಿ ಸಚಿವರಾದ ...
12/06/2025

ದಾವಣಗೆರೆ ಜಿಲ್ಲೆಯಲ್ಲಿ ಜೂ. 16 ರಂದು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ

ದಾವಣಗೆರೆ-ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಬೆಂಗಳೂರಿನ ಕೃಷ್ಣ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಇಲಾಖೆಯ ಪ್ರಗತಿ ಹಾಗೂ ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಜೂ. 16 ರಂದು ದಾವಣಗೆರೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಆಹ್ವಾನಿಸಿದರು

ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ರಾಜಶೇಖರ್ ನಾಗಪ್ಪ  ನೇಮಕ
12/06/2025

ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ರಾಜಶೇಖರ್ ನಾಗಪ್ಪ ನೇಮಕ

ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆ-ನಗರದ  ಜಿಲ್ಲಾಡಳಿತ ಭವನದಲ್ಲಿರುವ  ಕಚೇರಿಯಲ್ಲಿ ಸಂಸದರಾದ ಡಾ.ಪ...
11/06/2025

ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ-ನಗರದ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಯಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು
ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.ತಮ್ಮ ಗ್ರಾಮಕ್ಕೆ ಸೌಲಭ್ಯ ಕೇಳಿಬಂದವರ ಮನವಿಗಳನ್ನು ಸ್ವೀಕರಿಸಿ ನಂತರ ಜಿಲ್ಲಾಡಳಿತ ಭವನದಲ್ಲಿದ್ದ ಅಧಿಕಾರಿಗಳನ್ನು ಸಂಪರ್ಕಿಸಿ ನೊಂದವರ ಕಷ್ಟಕ್ಕೆ ಸ್ಪಂದನೆ ನೀಡಿದರು ಹಾಗೂ ಜನರನ್ನು ಅಲೆದಾಡಿಸದೇ ಅವರ ಸಂಕಷ್ಟಗಳಿಗೆ ಸಾಧ್ಯವಾದಷ್ಟು ನೆರವಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಲವರು ತಮ್ಮ ವೈಯಕ್ತಿಕ ಸಮಸ್ಯೆಯನ್ನು ಸಂಸದರ ಬಳಿತೊಡಿಕೊಂಡರು.ತಮ್ಮ ಜಮೀನಿಗೆ ತೆರಳಲು ರಸ್ತೆ ಸಂಪರ್ಕ ಮಾಡಿಕೊಡುವಂತೆ ಕೆಲ ರೈತರು ಸಂಸದರ ಬಳಿ ಮನವಿ ಸಲ್ಲಿಸಿದರು.ಇದಕ್ಕೆ ಸ್ಪಂದಿಸಿದ ಸಂಸದರು ಕ್ರಮ ವಹಿಸುವುದಾಗಿ ತಿಳಿಸಿದರು.ಈ ವೇಳೆ ಕೆಲ ವಿದ್ಯಾರ್ಥಿಗಳ ಮನವಿಗಳನ್ನು ಸಹ ಸ್ವೀಕರಿಸಿದರು.
ಜಿಲ್ಲೆಯ ಚನ್ನಗಿರಿ,ಹೊನ್ನಾಳಿ,ಜಗಳೂರು,ಹರಿಹರದಿಂದ ಆಗಮಿಸಿದ ಜನರು ಸಂಸದರಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

Address

Davangeri

Telephone

+919740249346

Website

Alerts

Be the first to know and let us send you an email when Davanagere Jille samachara posts news and promotions. Your email address will not be used for any other purpose, and you can unsubscribe at any time.

Contact The Business

Send a message to Davanagere Jille samachara:

Share

ನಮ್ಮ ಬಗ್ಗೆ

ನಾವು, ನಮ್ಮದು, ನಮ್ಮ ಬದ್ಧತೆ……

1974 ರ ಸಂದರ್ಭದಲ್ಲಿ (ಮೈಸೂರು ವಿವಿ) ಪದವಿಯಲ್ಲಿ ಪತ್ರಿಕೋದ್ಯಮ ವಿಷಯವನ್ನು ಅಭ್ಯಸಿಸಿರುವ ಹಿನ್ನೆಲೆಯೊಂದಿಗೆ 1979 ರಿಂದ ‘ಜಿಲ್ಲೆ ಸಮಾಚಾರ’ ಹೆಸರಿನ ಪತ್ರಿಕೆಯನ್ನು ದಾವಣಗೆರೆ ನಗರದಲ್ಲಿ ಆರಂಭಿಸಿದ್ದೆನು. ಮೊದಲಿಗೆ ವಾರಪತ್ರಿಕೆಯಾಗಿದ್ದುದನ್ನು ಅದೇ ಹೆಸರಿನಲ್ಲಿ ೨೦೦೫ ರಿಂದ ದಿನಪತ್ರಿಕೆಯನ್ನಾಗಿ ರೂಪಾಂತರಿಸಿಕೊಳ್ಳಲಾಯಿತು. ಮೊದಲಿಗೆ ಎರಡು ಪುಟ, ಒಂದು ವರ್ಷದ ಅವಧಿಯೊಳಗೇ ೬ ಪುಟಗಳೊಂದಿಗೆ ಪ್ರಕಟವಾಗುತ್ತಿರುವ ದಾವಣಗೆರೆ ಜಿಲ್ಲೆಯ ಮಟ್ಟಿಗೆ ಏಕೈಕ ಹಾಗೂ ಪ್ರಥಮ ದೈಹಿಕ ಎನ್ನುವ ಹೆಗ್ಗಳಿಕೆ ಇದೆ.

ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಪುಟಗಳೊಂದಿಗೆ ವಿಶೇಷಾಂಕವಾಗಿ ಪ್ರಕಟವಾಗುವುದುಂಟು. ವಿಶೇಷವಾಗಿ ಪ್ರತಿ ಶನಿವಾರ ( ವಾರದ ಕೊನೆಯ ದಿನ) ‘ಸಾಪ್ತಾಹಿಕ ಶನಿವಾರದ’ ಪುಟವನ್ನು ರೂಪಿಸುವ ಮೂಲಕ ವಿಶೇಷ ಬರಹಗಳಿಗೆ ಆದ್ಯತೆ/ಅವಕಾಶ ನೀಡಲಾಗುತ್ತಿದೆ, ಪ್ರತಿಕೋದ್ಯಮವು ಭಾನುವಾರವನ್ನು ಸಾಪ್ತಾಹಿಕ ವಿಶೇಷವಾಗಿ ಆಯ್ದುಕೊಂಡಿರುವಾಗ ‘ಜಿಲ್ಲೆ ಸಮಾಚಾರ’ ಮಾತ್ರ “ಶನಿವಾರದ ಸ್ಪೆಷಲ್” ಆಗಿ ಪ್ರಕಟಣೆಗೆ ನಾಂದಿ ಹಾಡಿದೆ.

ಪತ್ರಿಕಾ ಬಳಗವನ್ನು ರೂಪಿಸಿಕೊಳ್ಳುವ ಮೂಲಕ ಪ್ರತಿವರ್ಷ ಜನವರಿಯಲ್ಲಿ ಹಿಂದಿನ ವರ್ಷದ ಆಯ್ಕೆ ಪ್ರಕಟಿಸುವುದರೊಂದಿಗೆ ವಿವಿಧ ಕ್ಷೇತ್ರದ ಸಾಧಕರನ್ನು ಸ್ವತಃ ಗುರುತಿಸಿ (ಅರ್ಜಿ ಸ್ವೀಕಾರದ ಸಂಪ್ರದಾಯವನ್ನು ದೂರವಿಟ್ಟು) ಸನ್ಮಾನಿಸುವ ಪರಿಪಾಠವು ೨೦೦೭ ರಿಂದ ಚಾಲನೆಗೆ ಬಂದಿದೆ. ಇಡೀ ರಾಜ್ಯದಲ್ಲಿ ಜಿಲ್ಲಾ ಮಟ್ಟದ ಪತ್ರಿಕೆಯೊಂದು ಈ ತರಹದ ಕಾರ್ಯಕ್ರಮವನ್ನು ಮುಂದುವರಿಸಿರುವುದು ಕೂಡ ಈ ಪತ್ರಿಕೆಯ ವೈಶಿಷ್ಟಗಳಲ್ಲೊಂದು ಎನ್ನಬಹುದು.