Prajakiran News

Prajakiran News Contact information, map and directions, contact form, opening hours, services, ratings, photos, videos and announcements from Prajakiran News, News & Media Website, nirmal nagar garden, kud Road barakotri, Dharwad.

www.prajakiran.com ಉತ್ತರ ಕರ್ನಾಟಕದ ಮೊಟ್ಟಮೊದಲ ಹಾಗೂ ನಂಬರ್ ಒನ್ ನ್ಯೂಸ್ ಪೋರ್ಟಲ್. ಪ್ರಜಾಕಿರಣ ಮೀಡಿಯಾ ಹೌಸ್ ಗೆ ಇದೀಗ ಸತತ 9 ನೇ ವರ್ಷದ ಸಂಭ್ರಮ. ಕೋಟ್ಯಾಂತರ ಓದುಗರ ಜನಮನದ ಆಶಾಕಿರಣವಾಗಿದೆ.
ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾವು ಚಿರೃಣಿ
ನಾಗರಾಜ ಕಿರಣಗಿ
ಪ್ರಧಾನ ಸಂಪಾದಕರು,
ಪ್ರಜಾಕಿರಣ.ಕಾಮ್,ಧಾರವಾಡ

07/06/2026

*ಸಣ್ಣ ನೀರಾವರಿ ಇಲಾಖೆ ಅಧಿಕಾರಿ ದೇವರಾಜ ಶಿಗ್ಗಾಂವಿ ಮೇಲೆ ಲೋಕಾಯುಕ್ತ ದಾಳಿ*

ಧಾರವಾಡ Prajakiran News : ಧಾರವಾಡ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ದೇವರಾಜ ಶಿಗ್ಗಾಂವಿ ಅವರ ಕಚೇರಿ ಮೇಲೆ ಶನಿವಾರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, ಅನೇಕ‌ ಮಹತ್ತರ ಕಡತಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಸಣ್ಣ ನೀರಾವರಿ ಇಲಾಖೆಯಲ್ಲಿ 2018 ರಿಂದ 2023 ವರೆಗೆ ಕಾಮಗಾರಿಯಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟ ಹಾಗೂ ಅವ್ಯವಹಾರ ನಡೆಸಿದ್ದಾರೆ ಎಂದು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಧಾರವಾಡ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಿದೆ.
ಇನ್ನೂಳಿದಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ದೇವರಾಜ ಶಿಗ್ಗಾಂವಿ ಅವರ ಅಳಿಯ ಶ್ರೀಕೃಷ್ಣ ಗಾಡಿವಡ್ಡರ ಹಾಗೂ ಕ್ಲಾಸ್ ಒನ್ ಗುತ್ತಿಗೆದಾರ ಸುಮೀತ್ ಹೆಗಡೆ ಅವರ ಕಚೇರಿ ಮೇಲೆ ಕೂಡಾ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

06/06/2026

ಧಾರವಾಡ Prajakiran News : ಆರ್ ಎಸ್ ಎಸ್ ಅನ್ನು ಗೃಹ ಸಚಿವ ಪ್ರಿಯಾಂಕಾ ಖರ್ಗೆ ಹಳದಿ ಕಾಮಾಲೆ ಕಣ್ಣಿನಿಂದ ನೋಡಬಾರದು ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಸಲಹೆ ನೀಡಿದರು. ಸಂಸ್ಥೆ ಎನ್ ಕೆಲಸ ಮಾಡ್ತಾ ಇದೆ ನೋಡಿ, ಜನ ಹೇಗೆ ಸ್ವಯಂ ಪ್ರೇರಣೆಯಿಂದ ಭಾಗವಹಿಸ್ತಾರೆ, ಸಹಾಯ ಮಾಡ್ತಾರೆ ನೋಡಿ. ಬೇಕಿದ್ದರೆ ನೀವು ಸಂಸ್ಥೆ ಕಟ್ಟಿ ಬೆಳೆಸಿ, ಅದನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ವಿರೋಧಿ ಅಂತ ದ್ವೇಷಿಸಬೇಡಿ ಎಂದು ಕಿವಿಮಾತು ಹೇಳಿದರು.

06/06/2026

ಧಾರವಾಡ Prajakiran News ಧಾರವಾಡದ ಮುಮ್ಮಿಗಟ್ಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟಲು ದಿನನಿತ್ಯ ನೂರಾರು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ನಿವಾರಣೆಗೆ ಮುಮ್ಮಿಗಟ್ಟಿ ಗ್ರಾಮದಿಂದ ಸರಕಾರಿ ಶಾಲೆಗೆ ತೆರಳಲು ಅಂಡರ್ ಪಾಸ್ ಅಥವಾ ಫ್ಲೈಓವರ್ ನಿರ್ಮಾಣ ಮಾಡಬೇಕು ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ರಾಜು ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪರವಾಗಿ ಆಗ್ರಹಿಸಿದರು.
ಈಗಾಗಲೇ ಒಂದು ಬಾಲಕ ಸಾವನ್ನಪ್ಪಿದ ಪ್ರಕರಣ ಜನಮಾನಸದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಈ‌ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದ.

06/06/2026

ಧಾರವಾಡ Prajakiran News : ಜನಪ್ರತಿನಿಧಿಗಳ ಧನದಾಹದಿಂದ ಭ್ರಷ್ಟಾಚಾರ ಹೆಚ್ಚಳವಾಗಿದೆ ಹೊರತು ಕಡಿಮೆಯಾಗಿಲ್ಲ. ಜನಪ್ರತಿನಿಧಿಗಳ ನಿಯಂತ್ರಣ ಸಾಧಿಸಿದರೆ ಅಧಿಕಾರಿಗಳು ನಿಯಂತ್ರಣ ಸಾಧಿಸಲು ಸಾಧ್ಯ. ಅಬರು ಒಂದು ಕೇಳಿದರೆ ಇವರು ಎರಡು ಕೇಳ್ತಾರೆ ಎಂದು ಉತ್ತರ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ ಆರೋಪಿಸಿದರು.
ಕಮಿಷನ್ ಹಾವಳಿ ವರ್ಷದಿಂದ ವರ್ಷಕ್ಕೆ
ಹೆಚ್ವಳವಾಗಿದೆಯೇ ಹೊರತು ಕಡಿಮೆ ಆಗಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ

06/06/2026

ಗುತ್ತಿಗೆದಾರರ 23 ಸಾವಿರ ಕೋಟಿ ಬಾಕಿ ಹಣ ಏಕಕಾಲಕ್ಕೆ ಬಿಡುಗಡೆಗೊಳಿಸಿ : ಸುಭಾಷ ಪಾಟೀಲ
ಧಾರವಾಡ Prajakiran News : ಕಳೆದ ಐದಾರು ವರ್ಷಗಳಿಂದ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಗುತ್ತಿಗೆದಾರರ 23 ಸಾವಿರ ಕೋಟಿ ಬಾಕಿ ಹಣ ಉಳಿಸಿಕೊಳ್ಳಲಾಗಿದೆ. ಹಂತ ಹಂತವಾಗಿ ಹಣ ನೀಡುವ ಬದಲಿಗೆ ಏಕಕಾಲಕ್ಕೆ ಬಿಡುಗಡೆಗೊಳಿಸಿ ಎಂದು ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಬಿಡುಗಡೆ ವಿಳಂಬವಾಗುತ್ತಿರುವುದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಣ್ಣ ಮತ್ತು ಮಧ್ಯಮ ಗಾತ್ರದ ಗುತ್ತಿಗೆದಾರರಿಗೆ ಆದ್ಯತೆ ಮೇರೆಗೆ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಹಾಗೂ ಪ್ಯಾಕೇಜ್ ಟೆಂಡರ್ ಪದ್ಧತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಬೆಂಗಳೂರು Prajakiran News ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರ...
05/06/2026

ಬೆಂಗಳೂರು Prajakiran News ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಲೋಕಸಭೆ ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಸಿದ್ದರಾಮಯ್ಯ ಅವರು ಹಾಜರಿದ್ದು ಖರ್ಗೆ ಅವರಿಗೆ ಶುಭ ಕೋರಿದರು.

ಬೆಂಗಳೂರು Prajakiran News ಕೆಪಿಸಿಸಿಯ ನೂತನ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರು ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭ...
04/06/2026

ಬೆಂಗಳೂರು Prajakiran News ಕೆಪಿಸಿಸಿಯ ನೂತನ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರು ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದರು. ಸಿದ್ದರಾಮಯ್ಯ ಅವರು ನೂತನ ಅಧ್ಯಕ್ಷರನ್ನು ಅಭಿನಂದಿಸಿ ಶುಭ ಹಾರೈಸಿದರು.

https://prajakiran.com/post/new-president-to-kpcc-bk-hariprasad*ರಾಜ್ಯಕ್ಕೆ ನೂತನ ಸಿಎಂ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ನೂತನ ಸಾ...
04/06/2026

https://prajakiran.com/post/new-president-to-kpcc-bk-hariprasad
*ರಾಜ್ಯಕ್ಕೆ ನೂತನ ಸಿಎಂ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ನೂತನ ಸಾರಥಿ*

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಆದೇಶ

https://prajakiran.com/post/karnataka-new-cm-dk-shivakumar-and-13-ministers*ಡಾ. ಜಿ. ಪರಮೇಶ್ವರ ಡಿಸಿಎಂ,ಇನ್ನುಳಿದ ಹನ್ನೇರಡು ಶಾ...
04/06/2026

https://prajakiran.com/post/karnataka-new-cm-dk-shivakumar-and-13-ministers
*ಡಾ. ಜಿ. ಪರಮೇಶ್ವರ ಡಿಸಿಎಂ,ಇನ್ನುಳಿದ ಹನ್ನೇರಡು ಶಾಸಕರು ಸಚಿವರಾಗಿ ಪ್ರಮಾಣವಚನ*

ಮೊದಲ ಹಂತದಲ್ಲಿ 13 ಶಾಸಕರಿಗೆ ನೂತನ ಸಚಿವರಾಗುವ ಭಾಗ್ಯ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಸರಕಾರ ಎಂದು ಘೋಷಣೆ

ಧಾರವಾಡ Prajakiran News  ಧಾರವಾಡ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಹಾಗೂ ಎರಡು ದಶಕಗಳ ಆತ್ಮೀಯ ಒಡನಾಡಿಯಾಗಿದ್ದ ಶಿವು ಹಲಗಿ ಇನ್ನಿಲ್ಲ ಎಂಬುದ...
03/06/2026

ಧಾರವಾಡ Prajakiran News ಧಾರವಾಡ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಹಾಗೂ ಎರಡು ದಶಕಗಳ ಆತ್ಮೀಯ ಒಡನಾಡಿಯಾಗಿದ್ದ ಶಿವು ಹಲಗಿ ಇನ್ನಿಲ್ಲ ಎಂಬುದು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸದಾಕಾಲವೂ ಪತ್ರಿಕಾ ವಿತರಕರ ಬದುಕು ಬವಣೆ ಬಗ್ಗೆ ಚಿಂತಿಸುತ್ತಾ, ಸಮಾಜದಲ್ಲಿನ ಅನೇಕ ಸಮಸ್ಯೆಗಳ ಮೇಲೆ ನಮ್ಮ ಮೂಲಕ ಬೆಳಕು ಚೆಲ್ಲುತ್ತಾ ನಮಗೂ ಕ್ರಿಯಾಶೀಲರನ್ನಾಗಿ ಮಾಡುತ್ತಾ, ನಗು ನಗುತ್ತಲೇ ಇದ್ದ ಸಹೃದಯಿ ಇನ್ನು ನೆನಪು ಮಾತ್ರ.

Address

Nirmal Nagar Garden, Kud Road Barakotri
Dharwad
580008

Alerts

Be the first to know and let us send you an email when Prajakiran News posts news and promotions. Your email address will not be used for any other purpose, and you can unsubscribe at any time.

Contact The Business

Send a message to Prajakiran News:

Share