Kannada Moviez

Kannada Moviez Movies News
(1)

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳಲ್ಲಿ ಪ್ರಯಾಣಿಕರೊಂದಿಗೆ ಸಿಬ್ಬಂದಿ ಉದ್ಧಟತನ ತೋರುತ್ತಿದ್ದಾರೆ ಎಂಬ ಸಾಲು ಸಾಲು ದೂರುಗಳ ಹಿನ...
12/07/2026

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳಲ್ಲಿ ಪ್ರಯಾಣಿಕರೊಂದಿಗೆ ಸಿಬ್ಬಂದಿ ಉದ್ಧಟತನ ತೋರುತ್ತಿದ್ದಾರೆ ಎಂಬ ಸಾಲು ಸಾಲು ದೂರುಗಳ ಹಿನ್ನೆಲೆಯಲ್ಲಿ, ಸಾರಿಗೆ ಸಚಿವ ಬೈರತಿ ಸುರೇಶ್ ಅವರು ನಡೆಸಿದ ದಿಢೀರ್ 'ರಿಯಾಲಿಟಿ ಚೆಕ್' ಕಾರ್ಯಾಚರಣೆ ವೇಳೆ ಸಾರ್ವಜನಿಕರು ನಿತ್ಯ ಅನುಭವಿಸುವ ಕಹಿ ಘಟನೆಗಳು ಬಯಲಿಗೆ ಬಂದಿವೆ. ಸ್ವತಃ ಸಚಿವರೇ ಕಂಡಕ್ಟರ್‌ನಿಂದ ಬಸ್‌ನಿಂದ ಕೆಳಗಿಳಿಸಲ್ಪಟ್ಟ ಹಾಗೂ ಬೇಜವಾಬ್ದಾರಿ ತೋರಿದ ಸಿಬ್ಬಂದಿಯನ್ನು ಅಮಾನತುಗೊಳಿಸಿದ ಪ್ರಸಂಗ ಶನಿವಾರ ಸಂಜೆ ನಡೆದಿದೆ.

ಸಾರ್ವಜನಿಕರ ನಿತ್ಯದ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಲು ಸಚಿವರು ಜಯಮಹಲ್‌ನಿಂದ ಹೆಬ್ಬಾಳ, ಮಾನ್ಯತಾ ಟೆಕ್ ಪಾರ್ಕ್ ಹಾಗೂ ಹೆಣ್ಣೂರು ಮಾರ್ಗವಾಗಿ ಸಾಮಾನ್ಯ ಪ್ರಯಾಣಿಕರಂತೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಬೆಳೆಸಿದರು. ಹೆಬ್ಬಾಳ-ನಾಗಶೆಟ್ಟಿಹಳ್ಳಿ ಮಾರ್ಗದ ಬಸ್ ಹತ್ತಿದ ಸಚಿವರು ಟಿಕೆಟ್‌ಗಾಗಿ 100 ರೂಪಾಯಿ ನೋಟು ನೀಡಿದಾಗ, ಅವರನ್ನು ಗುರುತಿಸದ ಕಂಡಕ್ಟರ್ "ನನ್ನ ಬಳಿ ಚಿಲ್ಲರೆ ಇಲ್ಲ, ಬಸ್‌ನಿಂದ ಕೆಳಗೆ ಇಳಿಯಿರಿ" ಎಂದು ನೇರವಾಗಿಯೇ ಹೇಳಿದ್ದಾರೆ. ಸಚಿವರು ಯಾವುದೇ ಆಕ್ರೋಶ ವ್ಯಕ್ತಪಡಿಸದೇ ಮೌನವಾಗಿ ಬಸ್‌ನಿಂದ ಕೆಳಗಿಳಿದು, ಚಿಲ್ಲರೆ ಹೊಂದಿಸಿಕೊಂಡು ಮತ್ತೊಂದು ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ.

ಇದೇ ವೇಳೆ, ಫನ್ ವರ್ಲ್ಡ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕೈ ತೋರಿಸಿದರೂ ಬಸ್ (KA 57 F 3372) ನಿಲ್ಲಿಸದೇ ಹೋದ ದೃಶ್ಯವನ್ನು ಸಚಿವರು ಅದರ ಹಿಂದಿನ ಬಸ್‌ನಲ್ಲಿದ್ದೇ ಖುದ್ದಾಗಿ ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಾರಿಗೆ ಸಚಿವರು, ಆ ನಿರ್ದಿಷ್ಟ ಬಸ್‌ನ ಚಾಲಕ ಮತ್ತು ನಿರ್ವಾಹಕರನ್ನು (ಕಂಡಕ್ಟರ್) ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲು ಹಿರಿಯ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಾರೆ. ಸಚಿವರ ಈ ದಿಢೀರ್ ಕಾರ್ಯಾಚರಣೆಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

*
*
*
*
*

ಬಾಲಿವುಡ್‌ನ ಪ್ರಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಹಾಗೂ ಅವರ ಪತ್ನಿ ರಾಧಾ ಯಾದವ್ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಬಿಗ...
10/07/2026

ಬಾಲಿವುಡ್‌ನ ಪ್ರಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಹಾಗೂ ಅವರ ಪತ್ನಿ ರಾಧಾ ಯಾದವ್ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. 'ಮೆಸರ್ಸ್ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್' ಕಂಪನಿಯಿಂದ ಚಿತ್ರ ನಿರ್ಮಾಣಕ್ಕಾಗಿ ಪಡೆದಿದ್ದ ಸಾಲದ ಮರುಪಾವತಿ ವಿಚಾರದಲ್ಲಿ ಸಲ್ಲಿಕೆಯಾಗಿದ್ದ ಸರಣಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ಏಕಸದಸ್ಯ ಪೀಠವು ನಟನಿಗೆ ಜೈಲು ಶಿಕ್ಷೆ ಹಾಗೂ ದಂಪತಿಗೆ ಕೋಟ್ಯಂತರ ರೂಪಾಯಿ ಭಾರಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಸಾಲದ ಹಣವನ್ನು ಮರುಪಾವತಿಸುವುದಾಗಿ ಕೋರ್ಟ್‌ಗೆ ಸ್ವತಃ ಮುಚ್ಚಳಿಕೆ (Undertaking) ನೀಡಿದ್ದರೂ, ನಟ ರಾಜ್‌ಪಾಲ್ ಯಾದವ್ ಪದೇ ಪದೇ ತಮ್ಮ ಭರವಸೆಯನ್ನು ಉಲ್ಲಂಘಿಸಿದ್ದರು. ನ್ಯಾಯಾಲಯ ನೀಡಿದ ಉದಾರತೆ ಮತ್ತು ಕಾಲಾವಕಾಶವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ನಟನಿಗೆ 7 ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ತಲಾ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಈ ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಲ್ಲಿರಲಿವೆ.

ಶಿಕ್ಷೆಯ ಜೊತೆಗೆ, ಪ್ರತಿ ಪ್ರಕರಣದಲ್ಲೂ ದೂರುದಾರ ಕಂಪನಿಗೆ ತಲಾ 1.05 ಕೋಟಿ ರೂಪಾಯಿ ಪಾವತಿಸುವಂತೆ ಸೂಚಿಸಲಾಗಿದೆ. ಒಟ್ಟಾರೆಯಾಗಿ ದೂರುದಾರರಿಗೆ ಹೆಚ್ಚುವರಿ 1 ಕೋಟಿ 4 ಲಕ್ಷದ 75 ಸಾವಿರ ರೂ. ಹಾಗೂ ಸರ್ಕಾರಕ್ಕೆ 25,000 ರೂ. ದಂಡ ಕಟ್ಟಲು ಆದೇಶಿಸಲಾಗಿದೆ. ಇನ್ನು ಇವರ ಪತ್ನಿ ರಾಧಾ ಯಾದವ್ ಅವರಿಗೂ ಪ್ರತಿ ಪ್ರಕರಣದಲ್ಲಿ ದೂರುದಾರರಿಗೆ 5 ಕೋಟಿ 51 ಲಕ್ಷದ 380 ರೂ. ಪಾವತಿಸಲು ನಿರ್ದೇಶನ ನೀಡಲಾಗಿದೆ. ನಟ ಈಗಾಗಲೇ ಪಾವತಿಸಿರುವ 2.25 ಕೋಟಿ ರೂಪಾಯಿಗಳನ್ನು ಅಂತಿಮ ಮೊತ್ತದಲ್ಲಿ ಹೊಂದಾಣಿಕೆ ಮಾಡಲಾಗುವುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಹಿಂದೆ ಮಧ್ಯಂತರ ರಿಲೀಫ್ ಪಡೆದಿದ್ದ ನಟ, ಬಾಕಿ ಹಣ ಪಾವತಿಸಲು ಮತ್ತೆ ವಿಫಲರಾದ ಹಿನ್ನೆಲೆಯಲ್ಲಿ ಕೋರ್ಟ್ ಅಂತಿಮವಾಗಿ ಈ ತೀರ್ಪು ಪ್ರಕಟಿಸಿದೆ.

*
*
*
*
*

ಹಣಕ್ಕಾಗಿ ಹೆಣವೂ ಬಾಯ್ಬಿಡುತ್ತೆ" ಎನ್ನುವ ಇಂದಿನ ಸ್ವಾರ್ಥಿ ಜಗತ್ತಿನಲ್ಲಿ, ಸ್ನೇಹಿತ ಕೊಟ್ಟ ಸಾಲವನ್ನು ನೆನಪಿಟ್ಟುಕೊಂಡು, ಬರೋಬ್ಬರಿ 25 ವರ್ಷಗ...
10/07/2026

ಹಣಕ್ಕಾಗಿ ಹೆಣವೂ ಬಾಯ್ಬಿಡುತ್ತೆ" ಎನ್ನುವ ಇಂದಿನ ಸ್ವಾರ್ಥಿ ಜಗತ್ತಿನಲ್ಲಿ, ಸ್ನೇಹಿತ ಕೊಟ್ಟ ಸಾಲವನ್ನು ನೆನಪಿಟ್ಟುಕೊಂಡು, ಬರೋಬ್ಬರಿ 25 ವರ್ಷಗಳ ನಂತರ ನೂರಾರು ಮೈಲಿ ದಾಟಿ ಬಂದು ವಾಪಸ್ ಮಾಡಿದ ಅಪರೂಪದ ಹಾಗೂ ಪ್ರಾಮಾಣಿಕತೆಯ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ಕೇರಳದ ಪಾಲಕ್ಕಾಡ್​​​​ ಮೂಲದ ಮೊಹಮ್ಮದ್​ ಇಸ್ಮಾಯಿಲ್​ ಎಂಬುವವರು, ತಾವು 25 ವರ್ಷಗಳ ಹಿಂದೆ ಪಡೆದಿದ್ದ 25 ಸಾವಿರ ರೂಪಾಯಿ ಸಾಲವನ್ನು ಗೆಳೆಯ ಎಡ್ಲಾ ಲಚ್ಚಣ್ಣ ಅವರಿಗೆ ಮರಳಿಸಲು ತೆಲಂಗಾಣದ ಜಗ್ತಿಯಾಲ್​ ಜಿಲ್ಲೆಯ ಧರ್ಮಪುರಿಗೆ ಬಂದಿದ್ದಾರೆ.

​25 ವರ್ಷಗಳ ಹಿಂದೆ ಮೊಹಮ್ಮದ್ ಇಸ್ಮಾಯಿಲ್ ಮತ್ತು ಎಡ್ಲಾ ಲಚಣ್ಣ ಸೌದಿ ಅರೇಬಿಯಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಇಸ್ಮಾಯಿಲ್ ಅವರು ತುರ್ತು ಅಗತ್ಯಕ್ಕಾಗಿ ಲಚಣ್ಣ ಅವರಿಂದ 25 ಸಾವಿರ ರೂಪಾಯಿ ಪಡೆದಿದ್ದರು. ಭಾರತಕ್ಕೆ
ಮರಳಿದ ತಕ್ಷಣ ಹಣ ವಾಪಸ್ ಮಾಡುವುದಾಗಿ ಮಾತು ಕೊಟ್ಟಿದ್ದರು. ಆದರೆ ಭಾರತಕ್ಕೆ ಮರಳಿದ ನಂತರ ಇಬ್ಬರ ನಡುವೆ ಸಂಪರ್ಕ ಕಡಿತಗೊಂಡು, ಮೊಬೈಲ್ ನಂಬರ್ ಹಾಗೂ ವಿಳಾಸ ಕೂಡ ಕಳೆದುಹೋಗಿತ್ತು.

​ಆದರೂ ಹಣವನ್ನು ಮರಳಿಸಲೇಬೇಕೆಂಬ ಛಲದಲ್ಲಿದ್ದ ಇಸ್ಮಾಯಿಲ್, ಗೆಳೆಯನ ವಿಳಾಸವಿಲ್ಲದಿದ್ದರೂ ಧರ್ಮಪುರಿಗೆ ಬಂದು ಜನರ ಬಳಿ ವಿಚಾರಿಸಿ ಕೊನೆಗೂ ಲಚಣ್ಣ ಅವರ ಮನೆಯನ್ನು ಪತ್ತೆಹಚ್ಚಿದ್ದಾರೆ. ಆದರೆ ಲಚಣ್ಣ ಪ್ರಸ್ತುತ ಗಲ್ಫ್ ರಾಷ್ಟ್ರದಲ್ಲಿದ್ದ ಕಾರಣ, ಅವರ ಮೊಬೈಲ್ ನಂಬರ್ ಪಡೆದು ಮಾತನಾಡಿ, ಕಣ್ಣೀರು ಹಾಕಿದ್ದಾರೆ. ಬಳಿಕ ಆ 25 ಸಾವಿರ ರೂಪಾಯಿಯನ್ನು ಲಚಣ್ಣ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಿ, ಕೊಟ್ಟ ಮಾತಿನಂತೆ ನಡೆದುಕೊಂಡು ಇಸ್ಮಾಯಿಲ್ ಸಂತೃಪ್ತರಾಗಿ ತಮ್ಮ ಊರಿಗೆ ಮರಳಿದ್ದಾರೆ. ಇಸ್ಮಾಯಿಲ್ ಅವರ ಈ ಕೃತಜ್ಞತಾ ಭಾವ ಹಾಗೂ ಪ್ರಾಮಾಣಿಕತೆಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.






ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಣ್ಣ ಕಾರು ಅಪಘಾತವೊಂದು ವಿಕೋಪಕ್ಕೆ ತಿರುಗಿ, ಇಡೀ ಕುಟುಂಬದ ಮೇಲೆಯೇ ದುಷ್ಕರ್ಮಿಗಳು ಅಮಾನವೀಯವಾಗಿ ...
09/07/2026

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಣ್ಣ ಕಾರು ಅಪಘಾತವೊಂದು ವಿಕೋಪಕ್ಕೆ ತಿರುಗಿ, ಇಡೀ ಕುಟುಂಬದ ಮೇಲೆಯೇ ದುಷ್ಕರ್ಮಿಗಳು ಅಮಾನವೀಯವಾಗಿ ಹಲ್ಲೆ ನಡೆಸಿರುವ ಭೀಕರ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಬಳಿ ನಡೆದಿದೆ. "ನನ್ನ ಚಿನ್ನದ ಒಡವೆಗಳನ್ನು ಬೇಕಾದರೆ ತೆಗೆದುಕೊಳ್ಳಿ, ಆದರೆ ನನ್ನ ಪತಿಯನ್ನು ಮಾತ್ರ ಬಿಟ್ಟುಬಿಡಿ" ಎಂದು ಮಹಿಳೆಯೊಬ್ಬರು ಹತ್ತು ತಿಂಗಳ ಹಸುಗೂಸನ್ನು ಮಡಿಲಲ್ಲಿಟ್ಟುಕೊಂಡು ಕಣ್ಣೀರಿಟ್ಟರೂ ಪಾಪಿಗಳು ಮಾತ್ರ ಕರುಣೆ ತೋರದೆ ಅಟ್ಟಹಾಸ ಮೆರೆದಿದ್ದಾರೆ.

ಭಾನುವಾರ ರಾತ್ರಿ ಬೆಂಗಳೂರು ನಿವಾಸಿ ಸಾಗರ್ ಕುಮಾರ್ ಅವರು ತಮ್ಮ ಪತ್ನಿ, ಮಗು ಹಾಗೂ ಹಿರಿಯ ಮಹಿಳೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಭಾರಿ ಟ್ರಾಫಿಕ್ ಕಾರಣ ಇವರ ಕಾರು ಮತ್ತೊಂದು ವಾಹನಕ್ಕೆ ಸ್ವಲ್ಪ ತಗುಲಿತ್ತು. ಇದೇ ವಿಚಾರಕ್ಕೆ ಗಲಾಟೆ ತೆಗೆದ ಸುಮಾರು 9 ಜನರ ಗುಂಪು, ಸಾಗರ್ ಅವರ ಕಾರನ್ನು ಅಡ್ಡಗಟ್ಟಿ, ಅವರನ್ನು ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದೆ. ಈ ಇಡೀ ಕೃತ್ಯವು ಹಿಂದಿನ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ (Dashcam) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಘಟನೆಯಿಂದ ತೀವ್ರವಾಗಿ ಗಾಯಗೊಂಡಿರುವ ಸಾಗರ್, ಹೆದ್ದಾರಿಗಳಲ್ಲಿ ಸಿಸಿಟಿವಿ ಹಾಗೂ ಸುರಕ್ಷತೆ ಇಲ್ಲದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಂಡ್ಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

*
*
*
*
*

ತಮ್ಮ ವಿಭಿನ್ನ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಖ್ಯಾತಿಯ ಡಾಗ್ ಸತೀಶ್, ಇದೀಗ ತಮ್ಮ ಮಗನ ಸಿನಿಮಾ ಎಂಟ್ರಿ...
09/07/2026

ತಮ್ಮ ವಿಭಿನ್ನ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಖ್ಯಾತಿಯ ಡಾಗ್ ಸತೀಶ್, ಇದೀಗ ತಮ್ಮ ಮಗನ ಸಿನಿಮಾ ಎಂಟ್ರಿ ಹಾಗೂ ವೈಯಕ್ತಿಕ ಜೀವನದ ಬಗ್ಗೆ ನೀಡಿರುವ ಹೇಳಿಕೆಯೊಂದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. "ನನ್ನ ಮಗನಿಗೆ 40 ವರ್ಷ ತುಂಬುವವರೆಗೂ ನಾನು ಮದುವೆ ಮಾಡುವುದಿಲ್ಲ, ಇನ್ನೂ 20 ವರ್ಷ ಆತನಿಗೆ ಮದುವೆ ಇಲ್ಲ" ಎಂದು ಹೇಳುವ ಮೂಲಕ ಸತೀಶ್ ಹೊಸ ಬಾಂಬ್ ಸಿಡಿಸಿದ್ದಾರೆ.

ತಮ್ಮ ಮಗ ಹರ್ಷನನ್ನ ಸ್ಯಾಂಡಲ್‌ವುಡ್‌ಗೆ ಹೀರೊ ಆಗಿ ಪರಿಚಯಿಸಲು ಸತೀಶ್ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂದಿನ ಟ್ರೆಂಡ್‌ನಂತೆ ಮಗನಿಗೆ ಜಿಮ್, ಸಿಕ್ಸ್ ಪ್ಯಾಕ್ ಎಂದು ಕಷ್ಟಪಡಿಸಲು ಅವರು ಸಿದ್ಧರಿಲ್ಲ. ಸಿಕ್ಸ್ ಪ್ಯಾಕ್ ಸಂಸ್ಕೃತಿಯನ್ನು ಲೇವಡಿ ಮಾಡಿರುವ ಅವರು, ಮಗನಿಗೆ ಥಾಯ್ ಬಾಕ್ಸಿಂಗ್, ಹಾರ್ಸ್ ರೈಡಿಂಗ್ ಮತ್ತು ಆಕ್ಟಿಂಗ್ ಕ್ಲಾಸ್ ಸೇರಿಸಲಾಗಿದೆಯೇ ಹೊರತು ಜಿಮ್‌ಗೆ ಕಳುಹಿಸಿಲ್ಲ ಎಂದಿದ್ದಾರೆ

ಮಗನ ಮದುವೆ ತಡವಾಗಿ ಮಾಡುವ ನಿರ್ಧಾರಕ್ಕೆ ಕಾರಣ ಬಿಚ್ಚಿಟ್ಟ ಸತೀಶ್, "ನಾನು ಮದುವೆಯಾಗಿ ಬರೀ ಮೂರೇ ತಿಂಗಳಿಗೆ ನರಕಯಾತನೆ ಅನುಭವಿಸಿದ್ದೇನೆ. ಆ ಕಾರಣದಿಂದ ಮಗನ ಜೀವನ ಹಾಳಾಗುವುದು ಬೇಡ. ಹೀರೊ ಆಗಿರುವಾಗ ಮದುವೆಯಾದರೆ ಆತನ ವ್ಯಾಲ್ಯೂ ಡೌನ್ ಆಗುತ್ತದೆ" ಎಂದಿದ್ದಾರೆ. ಅಲ್ಲದೆ ತಮಗೆ ‘ಅಗ್ನಿಸಾಕ್ಷಿ’ ಸೀರಿಯಲ್‌ನ ನಾಯಕಿಯಂತೆ ಎಲ್ಲರನ್ನೂ ತನ್ನವರು ಅಂದುಕೊಳ್ಳುವ ಲಕ್ಷಣವಾದ ಸೊಸೆ ಬೇಕು ಎಂದು ಹೇಳಿದ್ದಾರೆ. ಮಗನ ಮದುವೆಗೆ ಸತೀಶ್ ಹಾಕಿರುವ ಈ ‘40 ವರ್ಷಗಳ ರೂಲ್ಸ್’ ಈಗ ಟ್ರೋಲ್ ಪೇಜ್‌ಗಳಿಗೆ ಭರ್ಜರಿ ಆಹಾರವಾಗಿದೆ.

*
*
*
*
*

ರಾಜ್ಯದಾದ್ಯಂತ ಭಾರಿ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ...
09/07/2026

ರಾಜ್ಯದಾದ್ಯಂತ ಭಾರಿ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಸಾಕ್ಷಿಗೆ ವಾಟ್ಸ್‌ಆಪ್ ಕರೆಗಳ ಮೂಲಕ ಬೆದರಿಕೆ ಹಾಕಿದ ಆರೋಪದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳ ಮೊಬೈಲ್‌ಗಳ ಎಕ್ಸ್‌ಟ್ರಾಕ್ಟ್ ವರದಿ ಇಂದು ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಲಿದೆ. ಇದರಿಂದ ಸಾಕ್ಷಿಗೆ ಬೆದರಿಕೆ ಹಾಕುವಂತೆ ಸೂಚನೆ ನೀಡಿದ ಅಸಲಿ ಸೂತ್ರಧಾರ ಯಾರು ಎಂಬ ಕರಾಳ ರಹಸ್ಯ ಬಹಿರಂಗವಾಗುವ ಸಾಧ್ಯತೆ ಇದೆ.

ಪ್ರಕರಣದ 49ನೇ ಸಾಕ್ಷಿಯಾಗಿರುವ ತುಮಕೂರಿನ ಸಂದೀಪ್ ಅವರಿಗೆ ಬೆದರಿಕೆ ಹಾಕಿದ ಆರೋಪದಡಿ ಪುನೀತ್, ಸುಹಾಸ್ ಮತ್ತು ವೇಣು ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ಮೌನ ವಹಿಸಿದ್ದರಿಂದ, ಡಿಲೀಟ್ ಮಾಡಲಾದ ಚಾಟ್‌ಗಳು ಮತ್ತು ಕರೆ ವಿವರಗಳನ್ನು ಮರುಪಡೆಯಲು ಇವರ ಮೊಬೈಲ್‌ಗಳನ್ನು ಸಿಐಡಿ ಟೆಕ್ನಿಕಲ್ ಸೆಲ್‌ಗೆ ರವಾನಿಸಲಾಗಿತ್ತು. ಸದ್ಯ ಲಭ್ಯವಾಗಲಿರುವ ಈ ಡಿಜಿಟಲ್ ವರದಿಯು ತನಿಖೆಯ ದಿಕ್ಕನ್ನೇ ಬದಲಾಯಿಸುವ ನಿರೀಕ್ಷೆಯಿದೆ.

ಇನ್ನೊಂದೆಡೆ, ದರ್ಶನ್ ಅಭಿಮಾನಿಗಳ ಫೇಸ್‌ಬುಕ್ ಪೇಜ್ 'ಡಿ ಕಂಪನಿ' ಆಡ್ಮಿನ್ ಆಗಿರುವ ಪ್ರಮುಖ ಆರೋಪಿ ಪುನೀತ್‌ನನ್ನು ಪೊಲೀಸರು ಮತ್ತೆ ಐದು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ ಆರೋಪದಡಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವರು ಈಗಾಗಲೇ ಜೈಲು ಪಾಲಾಗಿದ್ದು, ಈ ಹೊಸ ಬೆದರಿಕೆ ಜಾಲದ ತನಿಖೆಯೂ ತೀವ್ರಗೊಂಡಿದೆ.

*
*
*
*
*

ಕಲಿಯುವ ವಯಸ್ಸಿನಲ್ಲೇ ಶಿಕ್ಷಕರ ಕಿರುಕುಳ ಅಥವಾ ಅವಮಾನಕ್ಕೆ ಬಲಿಯಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಆನೇಕಲ್ ತಾಲ...
09/07/2026

ಕಲಿಯುವ ವಯಸ್ಸಿನಲ್ಲೇ ಶಿಕ್ಷಕರ ಕಿರುಕುಳ ಅಥವಾ ಅವಮಾನಕ್ಕೆ ಬಲಿಯಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳದಲ್ಲಿ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲಿ ಶಿಕ್ಷಕಿ ಬೈದಿದ್ದಕ್ಕೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮಧುಶ್ರೀ (14) ಮೃತಪಟ್ಟ ಬಾಲಕಿ. ಗುರುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈಕೆ ನೇಣು ಹಾಕಿಕೊಂಡಿದ್ದಾಳೆ.

ದುಡುಕಿನ ನಿರ್ಧಾರಕ್ಕೂ ಮುನ್ನ ಮಧುಶ್ರೀ ಬರೆದಿರುವ ಡೆತ್‌ನೋಟ್ ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸುವಂತಿದೆ. "ಅಮ್ಮ ನನ್ನ ಕ್ಷಮಿಸಿ ಬಿಡು. ಶಾಲೆಯಲ್ಲಿ ನಡೆದ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ನನ್ನ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸಿದರು. ಆ ಅವಮಾನವನ್ನು ಸಹಿಸಿಕೊಂಡು ಬದುಕಲು ನನ್ನ ಮನಸ್ಸು ಒಪ್ಪುತ್ತಿಲ್ಲ" ಎಂದು ಆಕೆ ಪತ್ರದಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಸುಳ್ಳು ಆರೋಪ ಹೊರಿಸಿ ಅವಮಾನ ಮಾಡುತ್ತಿದ್ದದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿ ಹೀಗೆ ಅಕಾಲಿಕವಾಗಿ ಪ್ರಾಣ ಕಳೆದುಕೊಂಡಿರುವುದು ಇಡೀ ಆನೇಕಲ್ ಭಾಗದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

*
*
*
*
*

ಖ್ಯಾತ ನಟ ಪ್ರಶಾಂತ್ ಹಾಗೂ ಕೃತಿ ಗೌಡ ಅವರ ಅದ್ದೂರಿ ಪ್ರೇಮ ವಿವಾಹ ಮತ್ತು ಆರತಕ್ಷತೆ ಕಾರ್ಯಕ್ರಮ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿ...
09/07/2026

ಖ್ಯಾತ ನಟ ಪ್ರಶಾಂತ್ ಹಾಗೂ ಕೃತಿ ಗೌಡ ಅವರ ಅದ್ದೂರಿ ಪ್ರೇಮ ವಿವಾಹ ಮತ್ತು ಆರತಕ್ಷತೆ ಕಾರ್ಯಕ್ರಮ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿತ್ರರಂಗದ ಸಾಲು ಸಾಲು ಗಣ್ಯರು ಭಾಗವಹಿಸಿದ್ದ ಈ ಅದ್ದೂರಿ ಮದುವೆಗೆ ಬರೋಬ್ಬರಿ ಒಂದು ಕೋಟಿ ರೂಪಾಯಿಗೂ ಅಧಿಕ ಖರ್ಚಾಗಿದೆಯೇ ಎಂಬ ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ನಿರೂಪಕ ನಿರಂಜನ್‌ ದೇಶಪಾಂಡೆ ಅವರು ತಮ್ಮ ವ್ಲಾಗ್‌ನಲ್ಲಿ (Vlog) ಈ ಮದುವೆಯ ವೆಚ್ಚದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹೊಸಕರಹಳ್ಳಿ ಹತ್ತಿರವಿರುವ ಅತ್ಯಂತ ಐಷಾರಾಮಿ ಕಲ್ಯಾಣ ಮಂಟಪ 'ವಿ ಲೆಗೆಸಿ' (V Legacy) ನಲ್ಲಿ ಈ ಅದ್ಧೂರಿ ವಿವಾಹ ಮಹೋತ್ಸವ ನಡೆದಿದೆ. ಈ ಕಲ್ಯಾಣ ಮಂಟಪದ ಒಂದು ದಿನದ ಬಾಡಿಗೆನೇ ಬರೋಬ್ಬರಿ 24 ಲಕ್ಷ ರೂಪಾಯಿ ಎನ್ನಲಾಗುತ್ತಿದ್ದು, ಇದರೊಂದಿಗೆ ಭವ್ಯ ಡೆಕೋರೇಷನ್ ಮತ್ತು ರಾಜಶಾಹಿ ಊಟದ ವ್ಯವಸ್ಥೆ ಎಲ್ಲವೂ ಸೇರಿ ಒಟ್ಟು ವೆಚ್ಚ ಕೋಟಿ ದಾಟಿದೆ ಎನ್ನಲಾಗಿದೆ.
ಈ ಮದುವೆ ಸಂಭ್ರಮದಲ್ಲಿ ಅನುಪಮಾ ಗೌಡ, ನಿವೇದಿತಾ ಗೌಡ, ಭವ್ಯಾ ಗೌಡ, ಅಂಕಿತಾ ಅಮರ್‌ ಹಾಗೂ ತುಕಾಲಿ ಸ್ಟಾರ್‌ ಸಂತು ಸೇರಿದಂತೆ ಕಿರುತೆರೆ ಮತ್ತು ಬೆಳ್ಳಿಪರದೆಯ ನಟ-ನಟಿಯರ ದಂಡೇ ಹರಿದು ಬಂದಿತ್ತು. ಇನ್ನು ಮದುವೆಗೆ ಬಂದಿದ್ದ ಅತಿಥಿಗಳಿಗಾಗಿ ಕುಲಾಫ ಜಾಮೂನ್, ತಿರಾಮಿಸು, ಫಯರ್ ಪಿಜ್ಜಾ ಸೇರಿದಂತೆ ಹತ್ತಾರು ಬಗೆಯ ನಾಲಿಗೆ ಚಪ್ಪರಿಸುವಂತಹ ವೆರೈಟಿ ಖಾದ್ಯಗಳ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿತ್ತು.

*
*
*
*
*

ಚಲಿಸುವ ರೈಲಿನಲ್ಲಿ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯೊಬ್ಬರಿಗೆ ಹಾಸನದ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜಿನ ಮೂವರು ಸ್ನಾ...
09/07/2026

ಚಲಿಸುವ ರೈಲಿನಲ್ಲಿ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯೊಬ್ಬರಿಗೆ ಹಾಸನದ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜಿನ ಮೂವರು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯರು ಯಶಸ್ವಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಗುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡು ಉಸಿರಾಟಕ್ಕೆ ಸಮಸ್ಯೆಯಾಗಿದ್ದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೆಡದ ಯುವ ವೈದ್ಯರು,

ಸಮಯಪ್ರಜ್ಞೆಯಿಂದ ನವಜಾತ ಶಿಶುವಿಗೆ ಮರುಜೀವ ನೀಡಿದ್ದಾರೆ. ರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಹಾಸನದಿಂದ ವಾರಾಣಸಿಗೆ ರೈಲಿನಲ್ಲಿ ತೆರಳುತ್ತಿದ್ದ ಡಾ. ರಶ್ಮಿ ಬೀಳಗಿ, ಡಾ. ಶಾಹೀನ್ ಎಂ. ಮತ್ತು ಡಾ. ಲತಾಶ್ರೀ ಎನ್. ಅವರೇ ಈ ಸಾಹಸ ಮೆರೆದ ವೈದ್ಯರು.

ಜುಲೈ 6ರಂದು ರೈಲು ವಿಜಯವಾಡಾ ಬಳಿ ಚಲಿಸುತ್ತಿದ್ದ ವೇಳೆ, 9 ತಿಂಗಳ ಗರ್ಭಿಣಿಯೊಬ್ಬರಿಗೆ ಇದ್ದಕ್ಕಿದ್ದಂತೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ಮುಂದಿನ ನಿಲ್ದಾಣದವರೆಗೆ ಕಾಯಲು ಸಮಯವಿರದ ಕಾರಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮೂವರು ವೈದ್ಯರು ತಕ್ಷಣವೇ ಕಾರ್ಯಪ್ರವೃತ್ತರಾದರು. ಗಾಬರಿಯಾಗಿದ್ದ ತಾಯಿಗೆ ಧೈರ್ಯ ತುಂಬಿ ಆಕೆಗೆ ಆರಾಮದಾಯಕ ಭಂಗಿಯಲ್ಲಿ ಮಲಗಲು ನೆರವಾದರು ಹಾಗೂ ಎಫೆಕ್ಟಿವ್ ಪುಷಿಂಗ್‌ಗೆ ಮಾರ್ಗದರ್ಶನ ನೀಡಿದರು.

ಹೆರಿಗೆಯ ಸಮಯದಲ್ಲಿ ಮಗುವಿನ ತಲೆ ಹೊರಬರುವಾಗ ಕುತ್ತಿಗೆಗೆ ಹೊಕ್ಕುಳಬಳ್ಳಿ ಬಿಗಿಯಾಗಿ ಸುತ್ತಿಕೊಂಡಿರುವುದು ಕಂಡುಬಂದಿತು. ಇದು ಮಗುವಿನ ಜೀವಕ್ಕೆ ಅತ್ಯಂತ ಅಪಾಯಕಾರಿಯಾಗಿದ್ದರೂ, ಅತ್ಯಂತ ಸಂಯಮ ಪ್ರದರ್ಶಿಸಿದ ಡಾ. ಶಾಹೀನ್ ಮಗುವಿನ ತಲೆಯನ್ನು ಸುರಕ್ಷಿತವಾಗಿ ಹಿಡಿದುಕೊಂಡರೆ, ಡಾ. ರಶ್ಮಿ ಜಾಗರೂಕತೆಯಿಂದ ಹೊಕ್ಕುಳಬಳ್ಳಿಯನ್ನು ಮಗುವಿನ ತಲೆಯ ಮೇಲಿಂದ ಸಡಿಲಗೊಳಿಸಿ ಬಿಡಿಸುವಲ್ಲಿ ಯಶಸ್ವಿಯಾದರು.

ಚಲಿಸುವ ರೈಲಿನಲ್ಲಿ ಸೂಕ್ತ ವೈದ್ಯಕೀಯ ಉಪಕರಣಗಳಿಲ್ಲದಿದ್ದರೂ ಯುವ ವೈದ್ಯರು ತೋರಿದ ಈ ಅದ್ಭುತ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

*
*
*
*
*

ಕೈಸಿ ಯೇ ಯಾರಿಯಾನ್‌' ಸರಣಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ನಟಿ ನೀತಿ ಟೇಲರ್, ತಮ್ಮ ಹಳೆಯ ಸಂಬಂಧದಲ್ಲಾದ ಕಹಿ ಘಟನೆಗಳು ಹಾಗೂ ಮಾಜಿ ಗೆಳೆಯನ...
09/07/2026

ಕೈಸಿ ಯೇ ಯಾರಿಯಾನ್‌' ಸರಣಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ನಟಿ ನೀತಿ ಟೇಲರ್, ತಮ್ಮ ಹಳೆಯ ಸಂಬಂಧದಲ್ಲಾದ ಕಹಿ ಘಟನೆಗಳು ಹಾಗೂ ಮಾಜಿ ಗೆಳೆಯನಿಂದ ಎದುರಿಸಿದ ಭೀಕರ ಹಲ್ಲೆಯ ಬಗ್ಗೆ ಮುಕ್ತವಾಗಿ ಮಾತನಾಡಿ ಸೌಂಡ್ ಮಾಡುತ್ತಿದ್ದಾರೆ. 'ಅಲೈನ್ಸ್' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಅವರು ತಮ್ಮ ಜೀವನದ ಕರಾಳ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನೀತಿ, "ಮಾಜಿ ಗೆಳೆಯ ನನ್ನ ತೊಡೆಯ ಮೇಲೆ ಸಿಗರೇಟ್‌ನಿಂದ ಸುಟ್ಟು ವಿಕೃತಿ ಮೆರೆದಿದ್ದ. ಆತನ ಹುಟ್ಟುಹಬ್ಬದ ದಿನದಂದೇ ನನ್ನ ಕೆನ್ನೆಗೆ ಹೊಡೆದು, ದೈಹಿಕವಾಗಿ ಹಲ್ಲೆ ಮಾಡಿದ್ದ. ಆಗಿನ್ನೂ ನಾನು ಚಿಕ್ಕವಳಾಗಿದ್ದ ಕಾರಣ ಎಲ್ಲವನ್ನೂ ಅರಿಯುವಷ್ಟು ಪ್ರಬುದ್ಧತೆ ನನಗಿರಲಿಲ್ಲ. ಆತ ಇದನ್ನೇ ದಾಳವಾಗಿಸಿಕೊಂಡು ನನಗೆ ತೀವ್ರ ಹಿಂಸೆ ನೀಡುತ್ತಿದ್ದ" ಎಂದು ಕಣ್ಣೀರು ಹಾಕಿದ್ದಾರೆ. ಈ ಘಟನೆಯ ಬಳಿಕವೇ ಆತನಿಂದ ದೂರಾಗಲು ತಾವು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದಾರೆ.

ಹಳೆಯ ಕಹಿ ನೆನಪುಗಳ ನಡುವೆಯೂ ನೀತಿ ಟೇಲರ್ ಅವರ ಪ್ರಸ್ತುತ ವೈವಾಹಿಕ ಜೀವನ ಸುಖಮಯವಾಗಿದೆ. 2020ರಲ್ಲಿ ಭಾರತೀಯ ಸೇನೆಯಲ್ಲಿರುವ ಪರೀಕ್ಷಿತ್ ಬಿಸ್ವಾ ಅವರನ್ನು ವಿವಾಹವಾಗಿರುವ ಅವರು, ತಮ್ಮ ಪತಿ ಹಾಗೂ ಅವರ ಕುಟುಂಬವೇ ತಮಗೆ ದೊಡ್ಡ ಬೆಂಬಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನೀತಿ ಟೇಲರ್ ಅವರ ಈ ಧೈರ್ಯದ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅವರ ಧೈರ್ಯವನ್ನು ಮುಕ್ತವಾಗಿ ಶ್ಲಾಘಿಸುತ್ತಿದ್ದಾರೆ.

*
*
*
*
*

Address

Kalghatagi Road
Dharwad
580114

Alerts

Be the first to know and let us send you an email when Kannada Moviez posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Moviez:

Shortcuts

Share