Gadag quick news

Gadag quick news ನಮಸ್ಕಾರ ಸ್ನೇಹಿತರೆ, ಮಾಹಿತಿ ಮತ್ತು ಸುದ್ದಿ,ಮನರಂಜನೆ ಜತೆ ಅಭಿವೃದ್ಧಿ ಪತ್ರಿಕೋದ್ಯಮ

ಮಾನವ ಹಕ್ಕುಗಳ ದಿನಾಚರಣೆಗೆ ಚಾಲನೆ ನೀಡಿದ ನ್ಯಾಯಮೂರ್ತಿ ಕೆ. ಗುರುಪ್ರಸಾದಗದಗ (ಕರ್ನಾಟಕ ವಾರ್ತೆ) ಡಿಸೆಂಬರ ೧೧:  ಸಮಾಜದಲ್ಲಿ ಮಾನವ ಹಕ್ಕು ಉಲ್...
12/12/2023

ಮಾನವ ಹಕ್ಕುಗಳ ದಿನಾಚರಣೆಗೆ ಚಾಲನೆ ನೀಡಿದ ನ್ಯಾಯಮೂರ್ತಿ ಕೆ. ಗುರುಪ್ರಸಾದ
ಗದಗ (ಕರ್ನಾಟಕ ವಾರ್ತೆ) ಡಿಸೆಂಬರ ೧೧: ಸಮಾಜದಲ್ಲಿ ಮಾನವ ಹಕ್ಕು ಉಲ್ಲಂಘನೆಯAತಹ ಘಟನೆಗಳು ನಡೆದ ಒಂದು ವರ್ಷದೊಳಗೆ ಸಂಬAಧಿಸಿದ ದಾಖಲೆಗಳೊಂದಿಗೆ ರಾಜ್ಯ ಅಥವಾ ರಾಷ್ಟಿçÃಯ ಮಾನವ ಹಕ್ಕು ಆಯೋಗಕ್ಕೆ ದೂರು ದಾಖಲಿಸಿ ನ್ಯಾಯ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಅವರು ಹೇಳಿದರು.
ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ರವಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಜರುಗಿದ ಮಾನವ ಹಕ್ಕುಗಳ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಮಾನವ ಹಕ್ಕು ಆಯೋಗವು ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ರಾಷ್ಟಿçÃಯ ಮಾನವ ಹಕ್ಕು ಆಯೋಗದಲ್ಲಿ ಅಪಾರ ಜ್ಞಾನ ಹೊಂದಿದ ಐದು ಸದಸ್ಯರನ್ನು ನೇಮಕಗೊಳಿಸಲಾಗುತ್ತಿದೆ. ಇದರಲ್ಲಿ ಆಯೋಗದ ಅಧ್ಯಕ್ಷರನ್ನು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳನ್ನು ಸರ್ಕಾರ ನೇಮಕ ಮಾಡುತ್ತದೆ. ಅದರಂತೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕಗೊಳಿಸಿ ಮಾನವ ಹಕ್ಕು ಉಲ್ಲಂಘನೆ ಪ್ರಕರಣ ಕುರಿತು ತನಿಖೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಲು ತಿಳಿಸಲಾಗಿದೆ ಎಂದರು.
ಮಾನವ ಹಕ್ಕು ಪ್ರಕರಣಗಳು ಹೆಚ್ಚಾಗಿ ಸರ್ಕಾರಿ ಸಂಸ್ಥೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ಪೊಲೀಸ ಇಲಾಖೆ, ಅರಣ್ಯ ಇಲಾಖೆ, ಕಾರಾಗೃಹಗಳಲ್ಲಿ ಕಂಡುಬರುತ್ತವೆ. ಮಾನವನಿಗೆ ಸಮಾಜದಲ್ಲಿ ಘನತೆಯಿಂದ ಜೀವಿಸಲು ಅಗತ್ಯವಿರುವ ಎಲ್ಲ ಕಾನೂನಾತ್ಮಕ ಹಕ್ಕುಗಳೂ ಸಹ ಮಾನವ ಹಕ್ಕುಗಳಾಗಿವೆ. ಇವುಗಳಿಗೆ ಧಕ್ಕೆ ಬಂದಲ್ಲಿ ಆಯೋಗದಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬೇಕು ಎಂದು ಹೇಳಿದರು.
೧೯೪೮ ಡಿಸೆಂಬರ್ ೧೦ ರಂದು ವಿಶ್ವ ಸಂಸ್ಥೆಯಲ್ಲಿ ಮಾನವ ಹಕ್ಕು ದಿನಾಚರಣೆ ಜಾರಿಗೊಳಿಸಲಾಯಿತು. ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಅಂದು ೪೮ ಸದಸ್ಯ ರಾಷ್ಟçಗಳಿದ್ದವು. ಪ್ರತಿ ವರ್ಷ ಮಾನವ ಹಕ್ಕು ದಿನಾಚರಣೆಯನ್ನು ಡಿಸೆಂಬರ್ ೧೦ ರಂದು ಆಚರಣೆ ಮಾಡುತ್ತಾ ಮಾನವ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ವ್ಯಕ್ತಿ ಹುಟ್ಟಿನಿಂದ ಜೀವಿಸುವ ಸ್ವಾತಂತ್ರö್ಯ ಘನತೆಯ ಹಕ್ಕುಗಳನ್ನು ಮಾನವ ಹಕ್ಕುಗಳೆಂದು ವ್ಯಾಖ್ಯಾನಿಸಬಹುದು. ಅವುಗಳ ಉಲ್ಲಂಘನೆಗೆ ಕಾನೂನಿನಲ್ಲಿ ಶಿಕ್ಷೆ ನಿಗದಿಪಡಿಸಲಾಗಿದೆ ಎಂದರು.
ಮಾನವ ಹಕ್ಕುಗಳ ಆಯೋಗವು ಉಲ್ಲಂಘನೆ ಪ್ರಕರಣಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಮಾನವ ಹಕ್ಕುಗಳ ಉಲ್ಲಂಘನೆ ಖಚಿತವಾದಲ್ಲಿ ಅವುಗಳ ಬಗ್ಗೆ ಸಂಪೂರ್ಣವಾದ ಶಿಫಾರಸ್ಸು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅಲ್ಲಿಂದ ಶಿಫಾರಸ್ಸು ವರದಿಯನ್ನು ಅನುಷ್ಟಾನಗೊಳಿಸಲಾಗುವುದು ಎಂದು ಮಾನವ ಹಕ್ಕುಗಳ ಕುರಿತು ಸುದೀರ್ಫವಾಗಿ ವಿವರಣೆಯನ್ನು ಕೆ. ಗುರುಪ್ರಸಾದ ಅವರು ನೀಡಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಮಾತನಾಡಿ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ೬ ಇವೆ. ಮಾನವ ಹಕ್ಕುಗಳು ತುಂಬಾ ಇವೆ. ಅವೆಲ್ಲವೂ ಸಹ ಮಾನವರು ಘನತೆಯಿಂದ ಜೀವಿಸಲು ಸಹಕಾರಿಯಾಗಿವೆ. ಈ ವರ್ಷದ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಘೋಷವಾಕ್ಯವನ್ನು ನೀಡಲಾಗಿದ್ದು “ ಸಮಾನತೆ,ಸ್ವಾತಂತ್ರö್ಯ, ಎಲ್ಲರಿಗೂ ನ್ಯಾಯ ಒದಗಿಸೋಣ ” ಎಂಬುದಾಗಿದೆ ಎಂದರು.
ಸಮಾಜದ ಪ್ರತಿ ನಾಗರೀಕನು ಮಾನವ ಹಕ್ಕುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ತಿಳಿಯಬೇಕು. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಸಂಭವಿಸದAತೆ ಅಥವಾ ಮರುಕಳಿಸದಂತೆ ಪ್ರಜ್ಞಾವಂತ ನಾಗರಿಕರಾಗಿ ನಾವೆಲ್ಲರೂ ಜಾಗೃತಿ ವಹಿಸಬೇಕಾಗಿದೆ ಎಂದು ಹೇಳಿದರು.
ಜೀವನದ ಸ್ವಾತಂತ್ರö್ಯದ ಸಮಾನತೆಯ ಮತ್ತು ವ್ಯಕ್ತಿಯ ಘನತೆಯ ಹಕ್ಕುಗಳೇ ಮಾನವ ಹಕ್ಕುಗಳು. ಎಲ್ಲ ಮಾನವ ಜೀವಿಗಳು ಹುಟ್ಟಿನಿಂದ ಘನತೆ ಮತ್ತು ಹಕ್ಕುಗಳಲ್ಲಿ ಸಮಾನರು ಮತ್ತು ಪ್ರತಿಯೊಬ್ಬರೂ ಯಾವುದೇ ತರಹದ ತಾರತಮ್ಯವಿಲ್ಲದ ಹಕ್ಕುಗಳನ್ನು ಮತ್ತು ಸ್ವಾತಂತ್ರವನ್ನು ಹೊಂದುವ ಕಾನೂನುಬದ್ಧ ಹಕ್ಕು ಹೊಂದಿರುತ್ತಾರೆ ಎಂದರು.
ನಿವೃತ್ತ ನ್ಯಾಯಮೂರ್ತಿ ಎಸ್.ಜಿ. ಪಲ್ಲೇದ ಅವರು ಮಾತನಾಡಿ ಮಾನವ ಹಕ್ಕುಗಳ ರಕ್ಷಣೆ ಸಮಾಜದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ನಾಗರಿಕರ ಕರ್ತವ್ಯಗಳನ್ನು ಅರಿಯುವ ಜಾಗೃತಿ ಕಾರ್ಯಕ್ರಮ ಇದಾಗಿದೆ. ಮನುಷ್ಯ ಮನುಷ್ಯನನ್ನು ಪ್ರೀತಿ, ಗೌರವ , ಆದರ, ಘನತೆಯಿಂದ ಕಾಣುವುದು ಮಾನವ ಹಕ್ಕುಗಳ ರಕ್ಷಣೆಯಾಗುತ್ತದೆ. ದೌರ್ಜನ್ಯ ಎಸಗುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಮಾನವ ಹಕ್ಕುಗಳ ಉಲ್ಲಂಘನೆ ಮೊದಲು ಆರಂಭವಾಗುವುದೇ ಕುಟುಂಬ ಹಾಗೂ ನೆರೆಹೊರೆಯ ಸಮಾಜದಿಂದ. ನಾವೆಲ್ಲರೂ ಸಮಾಜದ ಸರ್ವರೊಂದಿಗೂ ಪ್ರೀತಿ, ವಿಶ್ವಾಸ, ಗೌರವದಿಂದ ನಡೆದುಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಅನ್ಯೋನ್ಯದಿಂದ ಜೀವಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿಯನ್ನು ನೆರೆದ ಸಾರ್ವಜನಿಕರಿಗೆ, ಮಕ್ಕಳಿಗೆ, ಇಲಾಖೆಯ ಅಧಿಕಾರಿ, ಸಿಬ್ಬಂದಿಗಲಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರು ಬೋಧಿಸಿದರು. ಗದಗ ಬೆಟಗೇರಿ ನಗರಸಭೆಯ ಉಪಾಧ್ಯಕ್ಷೆ ಶ್ರೀಮತಿ ಸುನಂದಾ ಬಾಕಳೆ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ನಿರ್ವಹಣೆಯನ್ನು ಮಂಜರಿ ಹೊಂಬಾಳಿ ನಡೆಸಿಕೊಟ್ಟರು.

ಸಂತೋಷ ಅಂಗಡಿ ಅವರ ‘ಭವದ ಅಗುಳಿ’ ಪುಸ್ತಕ ಜನಾರ್ಪಣೆಕವಿತೆಗಳು ಮಾನವೀಯ ಅಂತ:ಕರಣದ ಒರತೆಗಳಾಗಬೇಕು: ಜಯಂತ ಕಾಯ್ಕಿಣಿಗದಗ: ಜೀವನಾನುಭವಗಳನ್ನು ಎರಕ ...
12/12/2023

ಸಂತೋಷ ಅಂಗಡಿ ಅವರ ‘ಭವದ ಅಗುಳಿ’ ಪುಸ್ತಕ ಜನಾರ್ಪಣೆ
ಕವಿತೆಗಳು ಮಾನವೀಯ ಅಂತ:ಕರಣದ ಒರತೆಗಳಾಗಬೇಕು: ಜಯಂತ ಕಾಯ್ಕಿಣಿ
ಗದಗ: ಜೀವನಾನುಭವಗಳನ್ನು ಎರಕ ಹೊಯ್ದ ಕಾವ್ಯ ಬಹುಕಾಲ ಬಾಳುತ್ತದೆ. ಕವಿಯಾದವನು ಸುತ್ತಲಿನ ಜಗತ್ತನ್ನು ಸೂಕ್ಷö್ಮವಾಗಿ ಅವಲೋಕಿಸಿದಾಗ ಅನೇಕ ಸಂಗತಿಗಳು ಗೋಚರಿಸುತ್ತವೆ. ಅವುಗಳನ್ನೇ ವಸ್ತುವಾಗಿಸಿಕೊಂಡಾಗ ಸಾಮಾಜಿಕ ಸಂಬAಧದೊAದಿಗೆ ಕವಿತೆ ಹೊಸೆಯಲ್ಪಡುತ್ತದೆ. ಇಂತಹ ಕವಿತೆಗಳು ಮಾನವೀಯ ಅಂತ:ಕರಣದ ಒರತೆಗಳಾಗಿ ಗೋಚರಿಸುತ್ತವೆ ಎಂದು ಕವಿ, ಕತೆಗಾರ ಜಯಂತ ಕಾಯ್ಕಿಣಿ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅನ್ವೇಷಣೆ ಪ್ರಕಾಶನ ಗದಗ ಇವರ ಸಹಯೋಗದಲ್ಲಿ ಗದುಗಿನ ಡಿ.ಜಿ.ಎಂ. ಆಯುರ್ವೇದ ಮಹಾವಿದ್ಯಾಲಯದಲ್ಲಿ ಜರುಗಿದ ಸಂತೋಷ ಅಂಗಡಿ ಅವರು ಬರೆದ ಭವದ ಅಗುಳಿ ಕವನ ಸಂಕಲನ ಜನಾರ್ಪಣೆಗೊಳಿಸಿ ಮಾತನಾಡಿದರು. ಅಂತರAಗದ ನುಡಿಗಳಿಗೆ ಅಕ್ಷರ ತೋರಣ ಕಟ್ಟುವ ಕಾರ್ಯ ಯುವ ಬರಹಗಾರರಿಂದ ಜರುಗಬೇಕು. ಭವದ ಅಗುಳಿ ಕವಿತಾ ಸಂಕಲನದ ಮೂಲಕ ಸಂತೋಷ ಅಂಗಡಿಯವರು ಭರವಸೆಯ ಕವಿಯಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು. ಗಂಗಾಧರ ಚಿತ್ತಾಲ, ಸು.ರಂ.ಎಕ್ಕುAಡಿ ಮತ್ತು ವಿ.ಜಿ.ಭಟ್ಟರ ಅವರ ಕವಿತೆಗಳನ್ನು ಜನ್ಮಶತಮಾನೋತ್ಸವದ ಅಂಗವಾಗಿ ಮೆಲಕು ಹಾಕುವ ಕಾರ್ಯ ನಡೆಯಬೇಕೆಂದರು.
ವಿಮರ್ಶಕ ಜಿ.ಪಿ.ಬಸವರಾಜು ಮಾತನಾಡಿ, ಕಾವ್ಯ ಸಂಕ್ಷಿಪ್ತತೆ, ನಿಖರತೆ ಮತ್ತು ರೂಪಕಗಳನ್ನು ಹೊಂದಿ ಭಾಷಾ ಸೊಗಡಿನಿಂದ ಕೂಡಿರಬೇಕು. ಜೀವಪರ ಕಾಳಜಿ ಕವಿಯ ಧ್ಯೇಯವಾಗಿರಬೇಕು. ಭವದ ಅಗುಳಿಯ ಕವಿತೆಗಳು ಕಾವ್ಯದ ಜೊತೆಗೆ ಮುಖಾಮುಖಿಯಾಗುವ ಸಂದರ್ಭವನ್ನು ಸೃಷ್ಠಿಸುವಲ್ಲಿ ಯಶಸ್ವಿಯಾಗಿವೆ ಎಂದು ತಿಳಿಸಿದರು.
ಅನ್ವೇಷಣೆ ಪ್ರಕಾಶನದ ಆರ್.ಜಿ. ಹಳ್ಳಿ ನಾಗರಾಜ ಅವರು ಮಾತನಾಡಿ, ಸಾಹಿತ್ಯ ಪತ್ರಿಕೆಗಳ ಸಂಖ್ಯೆ ಕಡಿಮೆಯಾಗಿವೆ. ಅನ್ವೇಷಣೆ ಸಾಹಿತ್ಯ ಪತ್ರಿಕೆ ಓದುಗರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸಿ ಚಿಂತನೆಗೆ ಹಚ್ಚುವಲ್ಲಿ ಕಾರ್ಯ ಮಾಡುತ್ತಿದೆ. ಯುವಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ, ಕೃತಿ ಪ್ರಕಟಿಸುವ ಕಾರ್ಯ ಮಾಡುತ್ತಿದೆ. ಭರವಸೆಯ ಬರಹಗಾರರು ಕನ್ನಡ ಸಾಹಿತ್ಯವನ್ನು ಹೊಸದಿಕ್ಕಿನತ್ತ ಕೊಂಡೊಯ್ಯುವ ಕಾರ್ಯ ಮಾಡಬೇಕೆಂದು ತಿಳಿಸಿದರು.
ಮುಖ್ಯ ಅತಿಥಿ ಚಂದ್ರಶೇಖರ ವಸ್ತçದ ಅವರು ಮಾತನಾಡಿ, ಗದಗ ಪರಿಸರ ಸಾಹಿತ್ಯ ಸಂಸ್ಕೃತಿಗೆ ಪ್ರಾಚೀನ ಕಾಲದಿಂದಲೂ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ಸಂತೋಷ ಅಂಗಡಿಯವರು ತಮ್ಮ ಕಾವ್ಯದ ಮೂಲಕ ಹೊಸ ಭರವಸೆಯ ಕವಿಯಾಗಿ ಹೊಮ್ಮಿರುವದು ಉತ್ತಮ ಬೆಳವಣಿಗೆಯಾಗಿದೆ. ಮತ್ತಷ್ಟು ಮೌಲಿಕ ಕೃತಿಗಳು ಅವರಿಂದ ಹೊರ ಬರಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಹಾಕಿರುವ ಅಗಳಿಯನ್ನು ತೆಗೆದು ಹೊಸ್ತಿಲ ದಾಟಿ ಹೊರ ನಡೆದಾಗ ಅನೇಕ ಸಂಗತಿಗಳು ಗೋಚರಿಸುತ್ತವೆ. ಆ ಸಂದರ್ಭದಲ್ಲಿ ಕವಿಯಾದವರು ಮುಖಾಮುಖಿಯಾಗಬೇಕಾಗುತ್ತದೆ. ಆಂತರಿಕ ಮತ್ತು ಬಾಹ್ಯ ಜಗತ್ತಿನ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅಗುಳಿಯನ್ನು ತೆಗೆದು ಸಾಗಬೇಕಾದ್ದು ಅವಶ್ಯ. ಆ ಹಿನ್ನೆಲೆಯಲ್ಲಿ ಲೌಕಿಕ ಮತ್ತು ಅಲೌಕಿಕ ವಿಷಯಗಳನ್ನು ಈ ಕವಿತಾ ಸಂಕಲನದಲ್ಲಿ ಹೆಣೆಯುವ ಪ್ರಯತ್ನವನ್ನು ಕವಿ ಮಾಡಿದ್ದಾನೆ ಎಂದು ತಿಳಿಸಿದರು.
ಡಿ.ಜಿ.ಎಂ. ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂತೋಷ ಬೆಳವಡಿ, ಕವಿ ಸಂತೋಷ ಅಂಗಡಿ, ರವಿ ದೇವರಡ್ಡಿ ಮಾತನಾಡಿದರು. ನಿರ್ಮಲಾ ಶೆಟ್ಟರ ನಿರೂಪಿಸಿದರು. ಡಾ. ಚಿದಾನಂದ ಕಮ್ಮಾರ ಪರಿಚಯಿಸಿದರು. ಭಾಗ್ಯ ಪತ್ತಾರ ಹಾಡಿದರು. ಕಿಶೋರಬಾಬು ನಾಗರಕಟ್ಟ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕೆ.ಎಚ್.ಬೇಲೂರ, ಅನ್ನದಾನಿ ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ, ಡಾ. ಜಿ. ಬಿ. ಪಾಟೀಲ, ಡಾ. ಎಚ್.ಬಿ. ಪೂಜಾರ, ರತ್ನಕ್ಕ ಪಾಟೀಲ, ಎಂ.ಜಿ. ಗಚ್ಚಣ್ಣವರ, ಆರ್. ಎಲ್. ಪೋಲಿಸಪಾಟೀಲ, ಬಿ.ಎ.ಕೆಂಚರಡ್ಡಿ, ಪುಂಡಲೀಕ ಕಲ್ಲಿಗನೂರ, ಟಿ.ಎಸ್.ಗೊರವರ, ಡಾ. ನಿಂಗು ಸೊಲಗಿ, ಮಂಜುಳಾ ವೆಂಕಟೇಶಯ್ಯ, ಶಿಲ್ಪಾ ಮ್ಯಾಗೇರಿ, ಪದ್ಮಾ ಕಬಾಡಿ, ಬಸವರಾಜ ಗಣಪ್ಪನವರ, ಅಂದಾನಪ್ಪ ವಿಭೂತಿ, ವಿ.ವಿ. ನಡುವಿನಮನಿ, ಶಂಕರ ಕುಕನೂರ, ಡಾ. ಕೆ.ವಿ.ಸಂಕನಗೌಡರ, ಶಶಿಕಾಂತ ಕೊರ್ಲಹಳ್ಳಿ, ಶಾರದಾ ಬಾಣದ, ಮರುಳಸಿದ್ಧಪ್ಪ ದೊಡ್ಡಮನಿ, ಡಿ.ಎಸ್.ಬಾಪುರಿ, ಚಂದ್ರಪ್ಪ ಬಾರಂಗಿ, ಪಿ.ಟಿ.ಬೈಲಪ್ಪನವರ, ಎಸ್.ಎಂ.ಕಾತರಕಿ, ಜಯಶ್ರೀ ಶ್ರೀಗಿರಿ, ಎಸ್.ಎಂ.ಕಿತ್ತೂರ, ಡಾ. ರಶ್ಮಿ ಅಂಗಡಿ, ಚಂದ್ರಕಲಾ ಇಟಗಿಮಠ, ಬಸವರಾಜ ನೆಲಜೇರಿ, ನೀಲಮ್ಮ ಅಂಗಡಿ, ಪ್ರಕಾಶ ಕಡಮೆ, ಭಾಗ್ಯಜ್ಯೋತಿ ಹಿರೇಮಠ, ವೀಣಾ ನಿರಂಜನ, ಡಾ. ಲಕ್ಷö್ಮಣ ಬಿ.ಎ., ಅಣ್ಣಿಗೇರಿ, ಎಸ್.ಎಂ.ಗೌಡರ, ಮೊದಲಾದವರು ಭಾಗವಹಿಸಿದ್ದರು.

ಧರ್ಮ ಉಳಿಯಬೇಕು, ಆಚಾರ-ವಿಚಾರ ಬೆಳೆಯಬೇಕು : ಅಡ್ನೂರ ಶ್ರೀ ಗದಗ, ಡಿ. ೧೨ : ನಾವಿಂದು ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕಿದೆ. ಧರ್ಮ ಉಳಿಯಬೇಕು, ಆ...
12/12/2023

ಧರ್ಮ ಉಳಿಯಬೇಕು, ಆಚಾರ-ವಿಚಾರ ಬೆಳೆಯಬೇಕು : ಅಡ್ನೂರ ಶ್ರೀ
ಗದಗ, ಡಿ. ೧೨ : ನಾವಿಂದು ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕಿದೆ. ಧರ್ಮ ಉಳಿಯಬೇಕು, ಆಚಾರ-ವಿಚಾರ ಉಳಿದು ಬೆಳೆದು ಬರಲು ನಾವೆಲ್ಲರೂ ತ್ರಿಕರ್ಣಪೂರ್ಣವಾಗಿ ಕಂಕಣಬದ್ಧರಾಗಬೇಕಿದೆ ಎಂದು ಅಡ್ನೂರಿನ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಮಂಗಳವಾರ ಗದಗ ಬಸವೇಶ್ವರ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ದಾನೇಶ್ವರಿ ಮಹಿಳಾ ಮಂಡಳ, ವೀರಭದ್ರ ದೇವಸ್ಥಾನ ಟ್ರಸ್ಟ್ ಕಮೀಟಿ, ಶಂಕರಲಿAಗ ದೇವಸ್ಥಾನ ಟ್ರಸ್ಟ್ ಕಮೀಟಿ ಆಶ್ರಯದಲ್ಲಿ ಶರಣೆ ದಾನಮ್ಮತಾಯಿ ಪುರಾಣ ಪ್ರವಚನದ ಮಹಾಮಂಗಲೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ವೀರಶೈವರು, ಲಿಂಗಾಯತರು ಮೊದಲು ಲಿಂಗ ಧರಿಸಬೇಕು, ಲಿಂಗ ಧರಿಸಿದವರು ಲಿಂಗಾಯತರು. ಇಂದು ವೀರಶೈವರು ಲಿಂಗಾಯತರು ಎಷ್ಟೀದ್ದೀರಿ ? ಎಷ್ಟು ಜನ ಲಿಂಗವನ್ನು ಧರಿಸಿದ್ದೀರಿ ? ಎಂಬುದನ್ನು ಎದೆ ಮುಟ್ಟಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಿ. ಇಷ್ಟಲಿಂಗ ಧರಿಸುವುದರಿಂದ ಇಷ್ಟಾರ್ಥಗಳು ಈಡೇರುವವು, ಅಂಗದಲ್ಲಿ ಧರಿಸಿದ ಲಿಂಗ ಅಂಗೈಗೆ ಬಂದು ನಿಷ್ಠೆಯಿಂದ ಪೂಜೆಗೊಳ್ಳಬೇಕು. ನಾವೆಷ್ಟೇ ಬಂಗಾರ ಬೆಳ್ಳಿ ಧರಿಸಿದರೂ ಕೊನೆಗೆ ನಮ್ಮ ಹಿಂದೆ ಬರುವದು ಧರಿಸಿದ ಲಿಂಗವೊAದೇ ಎಂದರು.
ಲಿAಗಮ್ಮ ದಾನಮ್ಮಳಾಗಿದ್ದು ಹೇಗೆ ? ಧರ್ಮವಂತಳೂ, ಪೂಜಾನಿಷ್ಠಳಾದ ಲಿಂಗಮ್ಮ ಶೃದ್ಧಾ ಭಕ್ತಿಯನ್ನು, ಜನಮುಖಿ ಕಾರ್ಯ, ಸಮಾಜಸೇವೆ, ದಾನಗುಣವನ್ನು ಮೆಚ್ಚಿಕೊಂಡು ಬಸವಣ್ಣ ಲಿಂಗಮ್ಮಳಿಗೆ ದಾನಮ್ಮ ಎಂದು ಹೆಸರಿಸಿದರು. ಶರಣೆ ತನ್ನ ಕಾಯಕದಿಂದ ದೇವಮಾನವಳಾದಳು. ಅಂತಹ ದಾನಮ್ಮಳ ಪುರಾಣ ಪ್ರವಚನವನ್ನು ಬಸವೇಶ್ವರ ನಗರದ ವರದಾನೇಶ್ವರಿ ಮಹಿಳಾ ಮಂಡಳ ಕಳೆದ ೧೭ ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಆದರೆ ಎಲ್ಲರೂ ಪುರಾಣ ಪ್ರವಚನ ಕೇಳಿದರು ಯಾರೂ ಲಿಂಗವನ್ನು ಧರಿಸಿಲ್ಲ ಎಂದರೆ ಏನರ್ಥ ? ಇನ್ನು ಮುಂದಾದರೂ ಲಿಂಗ ಧರಿಸಿ, ಸಮಯಕ್ಕೆ ಮಹತ್ವ ಕೊಡಿ ಎಂದರು.
ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯಂತೆ ಮನುಷ್ಯ, ಮನಸ್ಸು ಬದಲಾಗಬೇಕು. ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮಾನವನಾಗಲು ಸಾಧ್ಯ ಅಂತಹ ಸುಂದರ ಬದುಕು ನಿಮ್ಮದಾಗಲಿ ಎಂದರು.
ಪA.ಎA.ಕಲ್ಲಿನಾಥಶಾಸ್ತಿç ಅಡ್ನೂರ ಅವರಿಂದ ಸಾಗಿಬಂದ ದಾನಮ್ಮ ದೇವಿ ಪುರಾಣ ಪ್ರವಚನ ಮಾಲಿಕೆ ಮಹಾಮಂಗಲಗೊAಡಿತು. ಮೃತ್ಯುಂಜಯ ಹಿರೇಮಠ, ಹೇಮಂತಕುಮಾರ ಹಿರೇಮಠ ಸಂಗೀತ ಸಾಥ್ ನೀಡಿದರು.
ಅತಿಥಿಗಳಾಗಿ ಶಿವಪುತ್ರಪ್ಪ ಶಿವಶಿಂಪಿಗೇರ, ಶಿವಬಸಪ್ಪ ಯಂಡಿಗೇರಿ, ಬಸವರಾಜ ಕಾಡಪ್ಪನವರ, ಶಿವಕುಮಾರ ಬೇವಿನಮರದ, ಈರಣ್ಣ ಕಾತರಕಿ, ಸುರೇಶ ಸಿರಿಗಣ್ಣವರ, ವೀರೇಶ ಮುನವಳ್ಳಿ, ರಾಚಪ್ಪ ಮಿಣಜಗಿ, ಶಂಭು ಕಾರಕಟ್ಟಿ, ಬಸವರಾಜ ರಾಮನಕೊಪ್ಪ, ಜಗದೀಶ ಯಚ್ಚಲಗಾರ, ಪ್ರದೀಪ ಕೊಡೇಕಲ್ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಶ್ರೀಶೈಲಪ್ಪ ಯಂಡಿಗೇರಿ ವಹಿಸಿದ್ದರು.
ಹಿರಿಯರಾದ ರಾಚಪ್ಪ ಮಿಣಜಗಿ ಅವರು ಮಾತನಾಡಿ ದಾನೇಶ್ವರಿ ಮಹಿಳಾ ಮಂಡಳ ಕಳೆದ ೧೭ ವರ್ಷಗಳಿಂದ ದೇವಿ ಪುರಾಣ ಪ್ರವಚನ ಎರ್ಪಡಿಸಿ ಈ ಭಾಗದಲ್ಲಿ ಭಕ್ತಿ-ಜ್ಞಾನವನ್ನು ಪ್ರಸರಿಸಿದೆ. ದೇವಸ್ಥಾನದ ಟ್ರಸ್ಟಿಗಳು ಉತ್ಸಾಹಿ ಯುವಕರ ಪಡೆ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ್ದಾರೆ. ಬರಲಿರುವ ದಿನಗಳಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಇನ್ನಷ್ಟು ಸುಂದರೊಳಿಸಲಾಗುವದು ಭಕ್ತಾಧಿಗಳ ಸಹಕಾರ ಇರಲೆಂದರು.
ವೀರೇಶ ಗಣಾಚಾರಿ, ರತ್ನಮ್ಮ ಹಿರೇಮಠ, ಈರಮ್ಮ ಚಳ್ಳಮರದ, ಕಮಲಮ್ಮ ಜಂಗಮನಿ, ಶಿವಪ್ಪ ಶಿವಸಿಂಪಗೇರ ಸೇರಿದಂತೆ ಮುಂತಾದವರನ್ನು ಗೌರವಿಸಲಾಯಿತು.
ವೇದಿಕೆಯ ಮೇಲೆ ಪುರಾಣ ಸಮಿತಿಯ ಅಧ್ಯಕ್ಷೆ ಸುಧಾ ಕೆರೂರ, ಗೌರವಾಧ್ಯಕ್ಷೆ ಶೈಲಜಾ ಕೊಡೇಕಲ್, ಸುರೇಖಾ ಪಿಳ್ಳಿ, ಕಾರ್ಯದರ್ಶಿ ವಿಜಯಲಕ್ಷಿö್ಮÃ ಕಾತರಕಿ, ಶೋಭಾ ಗುಗ್ಗರಿ ಉಪಸ್ಥಿತರಿದ್ದರು. ಶಾರದಾ ಹಚಡದ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ದಾನಮ್ಮ ತಾಯಿಯ ಪಲ್ಲಕ್ಕಿ ಉತ್ಸವ ಹಾಗೂ ಕುಂಭೋತ್ಸವವು ಬಸವೇಶ್ವರ ನಗರದ ಸಮಾಳ ಮೇಳ, ಯುವಕ ತಂಡದಿAದ ನಂದಕೋಲ, ಕರಡಿ ಮಜಲು ಉತ್ಸವಕ್ಕೆ ಮೆರಗು ನೀಡಿತು.

ಸದಾಶಿವ ಆಯೋಗ ವರದಿ ಜಾರಿ ಬೇಡ: ಷ್ಟ್ರೀಯ ಸೇವಾಲಾಲ್ ಸೇನಾ ಸಂಘಟನೆ ಒತ್ತಾಯಗದಗ: ನ್ಯಾಮೂ ಎ.ಜೆ ಸದಾಶಿವ ಆಯೋಗವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ...
12/12/2023

ಸದಾಶಿವ ಆಯೋಗ ವರದಿ ಜಾರಿ ಬೇಡ: ಷ್ಟ್ರೀಯ ಸೇವಾಲಾಲ್ ಸೇನಾ ಸಂಘಟನೆ ಒತ್ತಾಯ
ಗದಗ: ನ್ಯಾಮೂ ಎ.ಜೆ ಸದಾಶಿವ ಆಯೋಗವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಜಾತಿಗಳಲ್ಲಿ ನಾಲ್ಕು ಭಾಗಗಳನ್ನಾಗಿ ಮಾಡಿ, ಈ ಪೈಕಿ ಕೇವಲ ಮೂರು ಭಾಗಗಳಿಗೆ ಮಾತ್ರ ಮೀಸಲಾತಿಯನ್ನು ನೀಡಿ, ಉಳಿದ ಒಂದು ಭಾಗಕ್ಕೆ ಸೇರಿದ ಜಾತಿಯವರನ್ನು ಪರಿಶಿಷ್ಟ ಜಾತಿಯಿಂದ ಕೈಬಿಡುವಂತೆ ಶಿಫಾರಸು ಮಾಡಿದ್ದು ಲಂಬಾಣಿ ಸೇರಿ ಹಲವು ಸಮುದಾಯಕ್ಕೆ ಅನ್ಯಾಯವಾಗಲಿದೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ವರದಿ ಜಾರಿಗೆ ಮುಂದಾಗಬಾರದು ಎಂದು ರಾಷ್ಟ್ರೀಯ ಸೇವಾಲಾಲ್ ಸೇನಾ ಸಂಘಟನೆ ಒತ್ತಾಯಿಸಿದೆ.
ಎ.ಜೆ ಸದಾಶಿವ ಆಯೋಗವು ಜಾತಿವಾರು ಮೀಸಲಾತಿ ವರ್ಗೀಕರಣದ ವಿರುದ್ಧ ಜಿಲ್ಲಾಡಳಿತ ಭವನ ಎದುರು ರಾಷ್ಟ್ರೀಯ ಸೇವಾಲಾಲ್ ಸೇನಾ ಸಂಘಟನೆ ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ೧೯೧೯ ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವಂತ ಬಂಜಾರ ಸಮುದಾಯದ ಮೀಸಲಾತಿಯನ್ನು ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರು ೧೦೧ ಜಾತಿಗಳನ್ನ ಅಸ್ಪೃಶ್ಯ ಜಾತಿಗಳೆಂದು ೧೯೩೬ರ ಪರಿಶಿಷ್ಟ ಜಾತಿ ಆದೇಶದ ಪಟ್ಟಿ ಮೇರೆಗೆ ಸಂವಿಧಾನದ ವಿಧಿ ೩೪೧(ಂ) ರಾಜ್ಯಗಳಲ್ಲಿ ರಾಜ್ಯಪಾಲರಿಂದ ರಾಷ್ಟ್ರದಲ್ಲಿ ರಾಷ್ಟ್ರಪತಿಗಳಿಂದ ಅಧಿಕೃತ ಆದೇಶದ ಮೇರೆಗೆ ಶಾಸನಬದ್ಧವಾಗಿ ಸಂವಿಧಾನದಲ್ಲಿ ನಮೂದಿಸಲಾಗಿದೆ.
ಆದರೆ ನ್ಯಾಮೂ ಎ.ಜೆ ಸದಾಶಿವ ಆಯೋಗವು ೧೦೧ ಜಾತಿಗಳಲ್ಲಿ ನಾಲ್ಕು ಭಾಗಗಳನ್ನಾಗಿ ಮಾಡಿ ಕೇವಲ ಮೂರರಷ್ಟು ಮೀಸಲಾತಿಯನ್ನು ನೀಡಿ ಪರಿಶಿಷ್ಟ ಜಾತಿಯಿಂದ ಕೈಬಿಡುವ ಶಿಫಾರಸ್ಸಿನ ಮೂಲಕ ಸಂವಿಧಾನ ವಿರೋಧ ನೀತಿಯನ್ನು ಅನುಸರಿಸಿರುತ್ತಾರೆ.
ಇದರ ಮಧ್ಯೆ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ಅವರು ‘ಸದಾಶಿವ ಆಯೋಗ ಜಾರಿಗೆ ಮಾಡುವಂತೆ ನಿಮ್ಮ ಕ್ಷೇತ್ರದ ಶಾಸಕರ ಮೇಲೆ ಮುತ್ತಿಗೆಯನ್ನು ಹಾಕಿ ಎಂಬ ಅವರ ಹೇಳಿಕೆ ಖಂಡನೀಯ. ಅಲ್ಲದೇ, ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ಆಯೋಗ ವರದಿಯನ್ನು ಜಾರಿಗೆ ಮಾಡುವ ಕುರಿತು ನೀಡಿರುವ ಹೇಳಿಕೆ ವಿರುದ್ಧ ನಮ್ಮ ಪ್ರತಿಭಟನೆ. ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವ ಎ. ಜೆ ಸದಾಶಿವ ಆಯೋಗದ ಅವೈಜ್ಞಾನಿಕ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಸೇವಾಲಾಲ್ ಸೇನಾ ಅಧ್ಯಕ್ಷ ಕೃಷ್ಣಪ್ಪ ಲಮಾಣಿ ರವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಸ್ವೀಕಿರಿಸಿದರು. ಪ್ರತಿಭಟನೆಯಲ್ಲಿ ರಾಷ್ಟ್ರೀಯ ಸೇವಾಲಾಲ್ ಸೇನಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ರಾಥೋಡ್, ಖಜಾಂಚಿ ಶ್ರೀನಿವಾಸ್ ಚೌಹಾಣ್ ಸೇರಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಂತ್ಲಿ ಶಿರೂರಿನಲ್ಲಿ ಮಹಿಳೆಯರಿಂದ ಕುಂಭೋತ್ಸವ ಗದಗ :  ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ ಶಿರೂರು ಗ್ರಾಮದ ಚಿಕೇನಕೊಪ್ಪದ  ಚನ್ನಬಸವೇಶ್ವರ ಮಠ...
12/12/2023

ಜಂತ್ಲಿ ಶಿರೂರಿನಲ್ಲಿ ಮಹಿಳೆಯರಿಂದ ಕುಂಭೋತ್ಸವ

ಗದಗ : ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ ಶಿರೂರು ಗ್ರಾಮದ ಚಿಕೇನಕೊಪ್ಪದ ಚನ್ನಬಸವೇಶ್ವರ ಮಠದಲ್ಲಿ ಕಾರ್ತಿಕ ಮಾಸದಂಗವಾಗಿ ಹಾಗೂ ೨೯ನೇ ವರ್ಷದ ಕಲಬುರ್ಗಿ ಶ್ರೀ ಶರಣಬಸೇಶ್ವರ ಪುರಾಣ ಮಂಗಲೋತ್ಸವದ ಅಂಗವಾಗಿ ಮಹಿಳೆಯರಿಂದ ಕುಂಭೋತ್ಸವ ಜರುಗಿತು.

ಇದಕ್ಕೂ ಮುನ್ನ ಮುತ್ತೆöÊದೆಯರಿಗೆ ಉಡಿ ತುಂಬಿ, ಗಂಗಾ ಪೂಜೆ ಸಲ್ಲಿಸಿದ ನಂತರ ಮಹಿಳೆಯರು ಕುಂಬ ಹೊತ್ತುಕೊಂಡು ಚನ್ನವೀರ ಶರಣರ ಬೆಳ್ಳಿ ಮೂರ್ತಿ ಉತ್ಸವದಲ್ಲಿ ಪಾಲ್ಗೊಂಡರು. ಮೆರವಣಿಗೆಯು . ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಶ್ರೀಮಠ ತಲುಪಿತು. ಈ ಸಂದರ್ಭದಲ್ಲಿ ಗ್ರಾಮವು ತಳಿರು ತೋರಣಗಳಿಂದ ರಸ್ತೆಗಳುದ್ದಕ್ಕೂ ಶೃಂಗಾರಗೊAಡಿತ್ತು ಶ್ರೀಮಠದಲ್ಲಿ ಮಹಾ ಮಂಗಳಾರತಿ ಜರುಗಿದ ನಂತರ ಮಹಾಪ್ರಸಾದ ಜರುಗಿತು ಈ ಕಾರ್ಯಕ್ರಮದಲ್ಲಿ ಹಾಲಯ್ಯಸ್ವಾಮಿ ಹಿರೇಮಠ ಹಾಗೂ ಸಂಗಡಿಗರಿAದ ಪೌರೋಹಿತ್ಯ ನಡೆಯಿತು.

ಸರಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ  ನೇರ ಹಣ ವರ್ಗಾವಣೆಯಲ್ಲಿ ಆಗುತ್ತಿರುವ ತೊಂದರೆ ಹಾಗೂ ಹೊಸ ಪಡಿತರ ಚೀಟಿಗಳ...
12/12/2023

ಸರಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆಯಲ್ಲಿ ಆಗುತ್ತಿರುವ ತೊಂದರೆ ಹಾಗೂ ಹೊಸ ಪಡಿತರ ಚೀಟಿಗಳ ವಿತರಣೆಯಲ್ಲಿ ಆಗುತ್ತಿರುವ ವಿಳಂಭ ಮತ್ತು ಗೊಂದಲ ಸರಿ ಪಡಿಸಲು ಆಗ್ರಹಿಸಿ ಜಿಲ್ಲಾ ಸ್ಲಂ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು.



ನೂರಾರು ಸ್ಲಂ ನಿವಾಸಿಗಳು ನಗರದ ಗಾಂಧಿ ಸರ್ಕಲ್‌ನಿಂದ ಪ್ರತಿಭಟನಾ ಮೆರವಣೆಗೆ ನಡೆಸಿ ಆಹಾರ ಇಲಾಖೆಗೆ ಮುತ್ತಿಗೆ ಹಾಕಿ ಆಹಾರ ಇಲಾಖೆ ಅಧಿಕಾರಿಗಳ ಮೂಲಕ ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪಗೆ ಮನವಿ ಸಲ್ಲಿಸಿದರು.



ಜಿಲ್ಲಾ ಸ್ಲಂ ಸಮಿತಿಯ ಅಧ್ಯಕ್ಷ ಇಮ್ತಿಯಾಜ ಮಾನ್ವಿ ಮಾತನಾಡಿ, ರಾಜ್ಯ ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಡಿಯಲ್ಲಿ ರಾಜ್ಯದ ಪ್ರತಿಯೊಂದು ಬಿಪಿಎಲ್ ಕುಟುಂಬಗಳಿಗೆ ತಲಾ ೧೦ ಕೆಜಿ ಅಕ್ಕಿ ಉಚಿತವಾಗಿ ವಿತರಿಸಲಾಗುವುದೆಂದು ಘೋಷಣೆ ಮಾಡಿ ರಾಜ್ಯ ಸರಕಾರ ಈ ಯೋಜನೆ ಜಾರಿಗೆ ತಂದಿದೆ. ನಂತರ ರಾಜ್ಯದಲ್ಲಿ ಅಕ್ಕಿ ಕೊರತೆಯಿಂದ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ತಲಾ ೫ ಕೆಜಿ ಅಕ್ಕಿ ಹಾಗೂ ಪ್ರತಿ ಸದಸ್ಯನಿಗೆ ಅಕ್ಕಿ ಜೊತೆಗೆ ೧೭೦ ರೂ.ಗಳನ್ನು ನೇರವಾಗಿ ಕುಟುಂಬದ ಮುಖಂಡರ ಬ್ಯಾಂಕ ಖಾತೆಗೆ ಜಮಾ ಮಾಡಲಾಗುವುದೆಂದು ಹೇಳಿ ಈಗಾಗಲೇ ಪ್ರತಿ ತಿಂಗಳ ಲಕ್ಷಾಂತರ ಕುಟುಂಬಗಳಿಗೆ ನೇರ ಹಣ ವರ್ಗಾವಣೆ ಮಾಡಲಾಗಿತ್ತಿದೆ. ಆದರೆ ರಾಜ್ಯ ಸರಕಾರದ ಈ ಘೋಷಣೆಯಿಂದ ಸಾವಿರಾರು ಕುಟುಂಬಗಳಿಗೆ ಈ ವರೆಗೊ ಪಡಿತರ ಸಿಗದೇ ಹಾಗೂ ಹಣವನ್ನು ಸಿಗದೇ ಪ್ರತಿನಿತ್ಯ ಆಹಾರ ಇಲಾಖೆಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಪಡಿತರ ಅಂಗಡಿಗಳಲ್ಲಿ ವೃದ್ಧರು ಹಾಗೂ ಕಾರ್ಮಿಕರು ಬಯೋ ಮೇಟ್ರಿಕ್ (ತಂಬ್) ಪಡೆಯಲಾಗದೇ ಪಡಿತರ ಆಹಾರ ಧಾನ್ಯ ಪಡೆದುಕೊಳ್ಳದೇ ಪಡಿತರ ಅಂಗಡಿಗಳಿಗೆ ಹಾಗೂ ಆಹಾರ ಇಲಾಖೆ ಅಲೆದಾಡುತ್ತಿದ್ದಾರೆ. ಪಡಿತರ ಚೀಟಿಯಲ್ಲಿ ಹೆಸರು ಸೇರಪಡೆ ಹಾಗೂ ತಿದ್ದುಪಡೆ ಮಾಡಲು ಆನಲೈನ್ ಸೇಂಟರಗಳಲ್ಲಿ ಅರ್ಜಿ ಸಲ್ಲಿಸಿ ವರ್ಷಗಳಾದರು ಸಹ ಆಹಾರ ಇಲಾಖೆಯಿಂದ ತಿದ್ದುಪಡೆ ಹಾಗೂ ಸೇರಪಡೆಯಾಗಿರುವ ಹೊಸ ಪಡಿತರ ಚೀಟಿಯನ್ನು ನೀಡಲು ಸಾಕಷ್ಟು ವಿಳಂಭ ಮಾಡುತ್ತಿದ್ದಾರೆ



ರಾಜ್ಯದ ಆಹಾರ ಇಲಾಖೆಯಿಂದ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಹಾಕಲು ಸರಿಯಾದ ಸುತ್ತೋಲೆ ಇಲ್ಲದೇ ಸರಿಯಾದ ಮಾಹಿತಿ ಇಲ್ಲದೇ ಕಾರಣ ಸಾವಿರಾರು ಬಡ ಕುಟುಂಬಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ರಾಜ್ಯ ಸರಕಾರದ ಆಹಾರ ಇಲಾಖೆಯ ಅನ್ನ ಭಾಗ್ಯ ಯೋಜನೆ ಹಾಗೂ ಇನ್ನು ಹಲವಾರು ಜನಪರವಾದ ಯೋಜನೆಗಳ ಮಾಹಿತಿ ನೀಡುವಲ್ಲಿ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಕಚೇರಿಯ ಸಿಬ್ಬಂದಿಗಳು ಸಂಪೂರ್ಣ ವಿಫಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.



ಜಿಲ್ಲಾ ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೌಲಾಸಾಬ ಗಚ್ಚಿ, ಜಾಫರ ಢಾಲಾಯತ, ಶಂಕ್ರಪ್ಪ ರೋಣ, ವಿಶಾಲಕ್ಷಿ ಹಿರೇಗೌಡ್ರ, ವಂದನಾ ಶ್ಯಾವಿ, ಮಕ್ತುಮ ಮುಲ್ಲಾನವರ, ಇಬ್ರಾಹಿಂ ಮುಲ್ಲಾ, ಮಲೇಶಪ್ಪ ಕಲಾಲ, ಪ್ರಕಾಶ ಹಡಗಲಿ, ಸಾಕ್ರುಬಾಯಿ ಗೋಸಾವಿ, ದಾದು ಗೋಸಾವಿ, ಖಾಜೇಸಾಬ ಇಸ್ಮಾಯಿಲನವರ, ಸಲೀಮ ಕದಡಿ, ದುರ್ಗಪ್ಪ ಮಣಿವಡ್ಡರ, ಮಂಜುನಾಥ ಶ್ರೀಗಿರಿ, ಶಿವಾನಂದ ಶಿಗ್ಲಿ ಇದ್ದರು.

ಹಾಕಿ ಕ್ಷೇತ್ರಕ್ಕೆ ಗದುಗಿನ ಕೊಡುಗೆ ಅಪಾರ : ವಿ.ಪ ಸದಸ್ಯ ಎಸ್.ವ್ಹಿ ಸಂಕನೂರಗದಗ : ರಾಜ್ಯ ಹಾಗೂ ರಾಷ್ಟçಮಟ್ಟದ ಹಾಕಿ ಕ್ರೀಡಾಪಟುಗಳು ಗದಗ ಜಿಲ್ಲ...
09/12/2023

ಹಾಕಿ ಕ್ಷೇತ್ರಕ್ಕೆ ಗದುಗಿನ ಕೊಡುಗೆ ಅಪಾರ : ವಿ.ಪ ಸದಸ್ಯ ಎಸ್.ವ್ಹಿ ಸಂಕನೂರ

ಗದಗ : ರಾಜ್ಯ ಹಾಗೂ ರಾಷ್ಟçಮಟ್ಟದ ಹಾಕಿ ಕ್ರೀಡಾಪಟುಗಳು ಗದಗ ಜಿಲ್ಲೆಯಿಂದ ಹೊರಹೊಮ್ಮಿದ್ದು, ಹಾಕಿ ಕ್ಷೇತ್ರಕ್ಕೆ ಗದುಗಿನ ಕೊಡುಗೆ ಅಪಾರವಾಗಿದೆ ಎಂದು ವಿಧಾನ ಪರಿಷತ್ ಹಿರಿಯ ಸದಸ್ಯರಾದ ಎಸ್.ವ್ಹಿ ಸಂಕನೂರ ನುಡಿದರು.
ಅವರು ರಾಜ್ಯಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಹಾಕಿ ಪಂದ್ಯಾಟಗಳು ನಡೆಯುತ್ತಿರುವ ನಗರದ ಮಹಾತ್ಮಾ ಗಾಂಧಿ ಹಾಕಿ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಸೆಮಿಫೈನಲ್ ನಲ್ಲಿ ಪಾಲ್ಗೊಂಡ ಗದಗ ಮತ್ತು ಬೆಂಗಳೂರು ದಕ್ಷಿಣ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶೇಷವಾಗಿ ಗಾಂಧಿನಗರ ಭಾಗದ ಹನುಮಾನ್ ಬ್ಲೇಸಿಂಗ್ ಸ್ಪೋರ್ಟ್ ಕ್ಲಬ್‌ನ ಆಟಗಾರರು ರಾಷ್ಟçಮಟ್ಟದಲ್ಲಿ ಮಿಂಚಿದ್ದು, ಪ್ರತಿ ವರ್ಷ ಕರ್ನಾಟಕ ವಿಶ್ವವಿದ್ಯಾಲಯದ ಯೂನಿವರ್ಸಿಟಿ ಬ್ಲೂ ಗಳಾಗಿ ಗದಗಿನ ಹಾಕಿ ಕ್ರೀಡಾಪಟುಗಳ ಹೊರಹೊಮ್ಮತ್ತಿರುವುದು ಸಂತೋಷದ ಸಂಗತಿ. ಇಂತಹ ಹಾಕಿ ಕ್ರೀಡಾಪಟುಗಳಿಗೆ ಮಾರ್ಗದರ್ಶನ-ಪ್ರೋತ್ಸಾಹ ನೀಡಲು ಪದವಿಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರ ಅವಶ್ಯಕತೆ ಇದೆ ಹೀಗಾಗಿ ಸರ್ಕಾರವು ಕೂಡಲೇ ದೈಹಿಕ ಶಿಕ್ಷಣ ಉಪನ್ಯಾಸಕರ ನೇಮಕಾತಿ ಮಾಡಬೇಕೆಂದು ತಾವು ಸದನದಲ್ಲಿ ಆಗ್ರಹಿಸಿದ್ದು, ಇದಕ್ಕೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಗಿರೀಶ ಟೊಣಪಿ, ವೀಕ್ಷಕರಾದ ಗೋಪಾಲ್, ಉಪ ನಿರ್ದೇಶಕರಾದ ಡಾ. ಕೃಷ್ಣಪ್ಪ ಸೇರಿದಂತೆ ಉಪನ್ಯಾಸಕರ ಪ್ರಾಚಾರ್ಯ ಸಂಘದ ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳು ಉಪಸ್ಥಿರಿದ್ದರು.

09/12/2023

ರೈತರ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹ
ಮುಂಡರಗಿ: ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಆಗಬೇಕೆಂದು ಆಂದೋಲನ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಡಿ.23ರಂದು ರೈತರ ಮಹಾ ಅಧಿವೇಶನ ನಡೆಸಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ರೈತರ ಸಾಲಮನ್ನಾ ಮನವಿ ಪತ್ರ
ಸಲ್ಲಿಸಲಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ
ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಉದ್ಯಮಿಗಳಿಗೆ ಸಂಕಷ್ಟದ ನೆರವು ಎಂದು ₹12 ಲಕ್ಷ ಕೋಟಿ ಮನ್ನಾ ಮಾಡಿರುವ ರೀತಿ ರೈತರ ಸಾಲಮನ್ನಾ ಆಗಬೇಕು. ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ರಾಜ್ಯ ಸರ್ಕಾರ ₹2 ಸಾವಿರ ಮಾತ್ರ ಪರಿಹಾರ ನೀಡುವುದು ಸರಿಯಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ರಾಜಕೀಯ ಚೆಲ್ಲಾಟ ಆಡುತ್ತಿವೆ. ಪ್ರತಿ ಎಕರೆಗೆ ಕನಿಷ್ಠ ₹25 ಸಾವಿರ ಬರ ಪರಿಹಾರ
ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕೃಷಿ ಪಂಪ್‍ಸೆಟ್‍ಗಳಿಗೆ ನೀಡುವ ಉಚಿತ ವಿದ್ಯುತ್ ತಪ್ಪಿಸಲು ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಕೃಷಿ ಪಂಪ್‍ಸೆಟ್‍ಗಳಿಗೆ ಹಗಲು ವೇಳೆ ನಿರಂತರ 10 ತಾಸು ವಿದ್ಯುತ್‍ ನೀಡಬೇಕು. ರೈತರ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ
ನೀತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ, ಮಾಬುಸಾಬ ಬಳ್ಳಾರಿ, ಕೋಟೆಪ್ಪ ಚೌಡಗಿ, ಹುಸೇನ್‍ಸಾಬ ಕುರಿ, ರಂಜಿತ್ ಮದ್ಯಪಾಟಿ, ಸಂತೋಷಹಳ್ಳಿ, ಸಿದ್ದಪ್ಪ ಹಲವಾಗಲಿ, ನಿಂಗಪ್ಪ ಬಂಗೇರಿ, ಬಸಣ್ಣ ಬೆಂಡಿಗೇರಿ, ಹನುಮಂತ ಗುಜನೂರು, ರಾಜು ಉಜರತ್ತಿ, ಗಿರೀಶಗೌಡ ಪಾಟೀಲ, ಈಶ್ವರಗೌಡ,
ಗಂಗಾಧರ, ಪುಟ್ಟಪ್ಪ, ವಿಶ್ವನಾಥ ಶಿರಹಟ್ಟಿ ಇದ್ದರು.

ಸೂಕ್ತ ಮೀಸಲಾತಿ ನೀಡಲು ಆಗ್ರಹಮುಂಡರಗಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಲಿಂಗಾಯ...
09/12/2023

ಸೂಕ್ತ ಮೀಸಲಾತಿ ನೀಡಲು ಆಗ್ರಹ

ಮುಂಡರಗಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಷ್ಟ್ ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ್ ಧನಂಜಯ್ ಮಾಲಗತ್ತಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಲಿಂಗಾಯತ ಪಂಚಮಸಾಲಿ ಸಮೂದಾಯಕ್ಕೆ ಸೇರಿರುವವರು ಸಾಮಾನ್ಯವಾಗಿ ಕೃಷಿ ಕಾಯಕವನ್ನು ಅವಲಂಬಿಸಿದ್ದಾರೆ. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದ್ದು, ಸರ್ಕಾರ ಅವರಿಗೆ ವಿಶೇಷ ಮೀಸಲಾತಿ ನೀಡಬೇಕು. ಆ ಮೂಲಕ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮಿಜಿ ಅವರು ಸಮುದಾಯದ ಮೀಸಲಾತಿಗೆ ಆಗ್ರಹಿಸಿ ಈಗಾಗಲೆ ರಾಜ್ಯಾಧ್ಯಂತ ಸಂಚರಿಸಿದ್ದಾರೆ. ಭಕ್ತರೊಂದಿಗೆ ರಸ್ತೆಯ ಮೇಲೆ ಕುಳಿತು ಲಿಂಗಪೂಜೆ ಮಾಡಿಕೊಳ್ಳುವ ಮೂಲಕ ಮೀಸಲಾತಿಗೆ ಆಗ್ರಹಿಸಿದ್ದಾರೆ. ಆದರೆ ಎಲ್ಲ ಸರ್ಕಾರಗಳು ಮೀಸಲಾತಿ ವಿಷಯದಲ್ಲಿ ದಿವ್ಯ ಮೌನ ವಹಿಸಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ ಎಂದು ವಿಷಾದಿಸಿದರು.
ಚುನಾವಣೆಯ ಸಂದರ್ಭದಲ್ಲಿ ಲಿಂಗಾಯತ ಮತಗಳಿಗಾಗಿ ಸುಳ್ಳ ಭರವಸೆ ನೀಡುವ ರಾಜಕೀಯ ನಾಯಕರು ನಂತರ ಸುಮ್ಮನಾಗುತ್ತಾರೆ. ಲಿಂಗಾಯತರು ಕೇವಲ ಮತಬ್ಯಾಂಕುಗಳಾಗುತ್ತಿದ್ದು, ನಮ್ಮ ಬೇಡಿಕೆಯನ್ನು ಯಾರೂ ಈಡೇರಿಸುತ್ತಿಲ್ಲ. ಮೀಸಲಾತಿ ಕೊಡಿಸುವ ನಿಟ್ಟಿಲ್ಲಿ ಲಿಂಗಾಯತ ಸಮುದಾಯದ ನಾಯಕರೆಲ್ಲ ಒಗ್ಗಟ್ಟಾಗುತ್ತಿಲ್ಲ ಎಂದು ಆರೋಪಿಸಿದರು.
ಈಗ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡುವ ಕುರಿತಂತೆ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು. ಮೀಸಲಾತಿ ನೀಡುವ ಕುರಿತಂತೆ ಸ್ಪಷ್ಟ ನಿಲುವು ತೆದುಕೊಂಡು ಕೇಂದ್ರ ಸರ್ಕಾರಕ್ಕೆ ಈ ಕುರಿತು ಸಿಪಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಲಿಂಗಾಯತ ಪಂಚಮಸಾಲಿಗರಿಗೆ ಮೀಸಲಾತಿ ನೀಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟದ ರೂಪರೇಷೆಗಳನ್ನು ಬದಲಿಸಬೇಕಾಗುತ್ತದೆ. ಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿವ ಪ್ರೀಡಂ ಪಾರ್ಕ ಹಾಗೂ ದೆಹಲಿಯ ಜಂತರ-ಮಂತರನಲ್ಲಿ ಅಹೋರಾತ್ರಿ ಧರಣಿ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಷ್ಟ್ ತಾಲ್ಲೂಕು ಘಟಕದ ಅಧ್ಯಕ್ಷ ಕೊಟ್ರಗೌಡ ಪಾಟೀಲ, ಮುಖಂಡರಾದ ನಾಗರಾಜ ಹೊಂಬಳಗಟ್ಟಿ, ವಿ.ಎಸ್.ಗಟ್ಟಿ, ಕವಿತಾ ಉಳ್ಳಾಗಡ್ಡಿ, ಬಸವರಾಜ ದೇಸಾಯಿ, ದ್ರುವಕುಮಾರ ಹೂಗಾರ, ಶಿವಪ್ಪ ಅಂಕದ, ಯಲ್ಲಪ್ಪ ಹೊಂಬಳಗಟ್ಟಿ, ಈರಪ್ಪ ಯಳವತ್ತಿ, ಪ್ರಕಾಶಗೌಡ ಪಾಟೀಲ, ಪಿ.ಕೆ.ಉಳ್ಳಾಗಡ್ಡಿ, ಎಫ್.ಎಸ್.ಗೋಡಿ, ನಾಗರಾಜ ಮಾನಶಟ್ಟಿ, ಮಹಾಂತೇಶ ತಳಕಲ್ಲ, ಯಲ್ಲಪ್ಪ ಹಂದ್ರಾಳ ಇದ್ದರು.

ಅತಿಥಿ ಉಪನ್ಯಾಸಕರ ಕುಟುಂಬದ ಭವಿಷ್ಯ ಅಭದ್ರವಾಗಿದೆ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿ ಖಾಯಂಗೊಳಿಸಲು ಮುಂದಾಗಬೇಕೆಂದು ಮನವಿ.ಗದಗ:ಹಲವು  ವರ್ಷಗಳ...
09/12/2023

ಅತಿಥಿ ಉಪನ್ಯಾಸಕರ ಕುಟುಂಬದ ಭವಿಷ್ಯ ಅಭದ್ರವಾಗಿದೆ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿ ಖಾಯಂಗೊಳಿಸಲು ಮುಂದಾಗಬೇಕೆಂದು ಮನವಿ.
ಗದಗ:ಹಲವು ವರ್ಷಗಳಿಂದ ಸೇವಾ ಭದ್ರತೆ ಇಲ್ಲದೆ ಸೇವೆ ಮಾಡುತ್ತಾ ಬಂದಿರುವ ನಮಗೆ ಕುಟುಂಬದ ಭವಿಷ್ಯ ಅಭದ್ರವಾಗಿದೆ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸುವುದರ ಮೂಲಕ ಖಾಯಂ ಗೊಳಿಸಲು ಮುಂದಾಗಬೇಕೆಂದು ಅತಿಥಿ ಉಪನ್ಯಾಸಕ ಎಸ್.ಕೆ.ಆಲೂರ ಮನವಿ ಮಾಡಿದರು.
ಗದಗ ಜಿಲ್ಲೆಯ ಜಿಲ್ಲಾ ಆಡಳಿತ ಭವನದ ಹೊರಗಡೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ನ23ರಿಂದ ಪ್ರಾರಂಭವಾದ ಸೇವಾ ಖಾಯಂ ಆಗ್ರಹಿಸಿ ರಾಜ್ಯಾದ್ಯಂತ 18ನೇ ದಿನಕ್ಕೆ ಕಾಲಕ್ಕೆ ಅನಿರ್ಧಿಷ್ಟಾವದಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಮತ್ತು ವಿದ್ಯಾರ್ಥಿಗಳ ಬದುಕು ಉತ್ತಮವಾಗಿಸುವುದಕ್ಕಾಗಿ ನಿರಂತರವಾಗಿ ರಾಜ್ಯಾಧ್ಯಂತ ಶ್ರಮಿಸುತ್ತಾ ಬಂದಿರುವ ನಮಗೆ ಭದ್ರತೆ ಇಲ್ಲದೆ ನಾವು ಕಣ್ಣೀರಿನಲ್ಲಿ ಬದುಕು ನಡೆಸುವಂತಾಗಿದೆ ಸಾಕಷ್ಟು ಅತಿಥಿ ಉಪನ್ಯಾಸಕರು ಉಪನ್ಯಾಸ ನೀಡುವಾಗಲೇ ಹೃದಯಘಾತ, ಕೋವಿಡ ಸಮಯದಲ್ಲಿ, ಅನಾರೋಗ್ಯ ಕ್ಕೆ ಒಳಗಾಗಿ ಸಾವಿಗಿಡಾಗಿ ಇವತ್ತು ಕುಟುಂಬಗಳು ಅತ್ಯಂತ ದುಸ್ತರ ಬದುಕನ್ನು ನಡೆಸುವಂತಾಗಿದೆ ಮಾನವಿಯತೆಯಡಿ ಸರ್ಕಾರ ನಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಂಡು ನಮ್ಮನ್ನು ಖಾಯಂ ಗೊಳಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ.

ಇವತ್ತು ಜಿಲ್ಲಾ ಆಡಳಿತ ಭವನ ಎರಡನೆ ಶನಿವಾರ ಇರುವ ಕಾರಣ ಸ್ತಬ್ಧ ಇದ್ದರು ನ್ಯಾಯ ಒದಗಿಸಿಕೊಡಬೇಕೆಂದು ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ತೋಡಗಿರುವುದು ಕಂಡುಬಂತು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಜೆ.ಬಿ.ದೊಡ್ಡುರ, ಎಚ.ಚಂದ್ರಪ್ಪ, ಪದ್ಮಾವತಿ ತಳಕಲ್ಲ, ವನಮಾಲಾ ಕಾನಗೌಡರ, ಮಾಂತೇಶ ಬಿ.ಎಚ್, ಸತೀಷ ಸರವಿ, ಡಾ.ವಿ.ಡಿ. ಮುಳಗುಂದ, ಸಂತೋಷ ಲಮಾಣಿ, ಪಿ.ಡಿ.ಜಟ್ಟೇನ್ನವರ, ಶಿವಾನಂದ ಮೂಲಿಮನಿ, ಎ.ಎ.ಸೋಪ್ಪಿನಮಠ, ಭಗತ್ತಸಿಂಗ ನವಲೂರಕರ, ಶ್ರೀನಿವಾಸ ಬೇವಿನಕಟ್ಟಿ, ಆರ್.ಎಸ್.ಬೆಟ್ಟದೂರ, ಯಲ್ಲಪ್ಪ ಹಂಚನಾಳ, ನವೀನ ತೀರಲಾಪುರ, ಲೀಲಾ ಹರ್ಲಾಪುರ, ವಿ.ಎಮ್.ದೇಶಾಯಿಗೌಡರ, ಅಸ್ಪಾಕ, ಎಮ್.ಎ.ಅಂಗಡಿ ಗದಗ ಜಿಲ್ಲೆಯ ಎಲ್ಲಾ ಕಾಲೇಜಿನ ಅತಿಥಿ ಉಪನ್ಯಾಸಕರು ಇದ್ದರು.

ಮಹಾತ್ಮರಲ್ಲಿ, ಶರಣರಲ್ಲಿ, ಸಂತರಲ್ಲಿರುವ ಜ್ಞಾನ ಬಹಳ ಮುಖ್ಯ : ಡಾ. ತೋಂಟದ ಸಿದ್ಧರಾಮ ಶ್ರೀಗಳುಗದಗ : ಶರಣರು, ಸಂತರು, ದಾಸರು ಅತ್ಯಂತ ಪವಿತ್ರವಾ...
09/12/2023

ಮಹಾತ್ಮರಲ್ಲಿ, ಶರಣರಲ್ಲಿ, ಸಂತರಲ್ಲಿರುವ ಜ್ಞಾನ ಬಹಳ ಮುಖ್ಯ : ಡಾ. ತೋಂಟದ ಸಿದ್ಧರಾಮ ಶ್ರೀಗಳು

ಗದಗ : ಶರಣರು, ಸಂತರು, ದಾಸರು ಅತ್ಯಂತ ಪವಿತ್ರವಾಗಿರುವ ಜೀವನವನ್ನು ನಡೆಸಿ ತಮ್ಮ ಬದುಕಿನಿಂದ ವಿಶಿಷ್ಟವಾದ ಸಂದೇಶವನ್ನು ನೀಡಿದ್ದಾರೆ. ಮಹಾತ್ಮರಲ್ಲಿ, ಶರಣರಲ್ಲಿ, ಸಂತರಲ್ಲಿ ಯಾವುದೇ ಜಾತಿಯನ್ನು ಗುರುತಿಸಬಾರದು. ಅವರಲ್ಲಿರುವ ಜ್ಞಾನ ಬಹಳ ಮುಖ್ಯ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ತಿಳಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೬೭೦ನೆಯ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸಮಾಜದಲ್ಲಿ ಆ ಜಾತಿ ಶ್ರೇಷ್ಠ, ಈ ಜಾತಿ ಶ್ರೇಷ್ಠ ಅಂತಾ ನಿರಂತರ ಹೋರಾಟಗಳು ನಡೆಯುತ್ತಿವೆ. ಶರಣರ, ಮಹಾತ್ಮರ ದೃಷ್ಟಿಯಲ್ಲಿ ಯಾರು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾರೆ ಅವರೇ ಶ್ರೇಷ್ಠ ಜಾತಿಯವರು. ನಾವು ಶ್ರೇಷ್ಠರು ಎನಿಸಿಕೊಳ್ಳಬೇಕಾದರೆ ಎಲ್ಲರಿಗೂ ಒಳ್ಳೆಯದನ್ನು ಮಾಡಬೇಕಾಗುತ್ತದೆ. ಶರಣರು ತಮ್ಮ ವಚನಗಳ ಮೂಲಕ ಮಾನವೀಯ ಮೌಲ್ಯಗಳನ್ನು ಪ್ರಸಾರ ಮಾಡಿದರು. ದಾಸರು ಮತ್ತು ಶರಣರ ಮೂಲ ಉದ್ಧೇಶ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಆತ್ಮಭೋಧೆಯನ್ನು ಮಾಡುವಂತದ್ದು ಎಂದು ಮಾತನಾಡಿದರು.
ಕನಕದಾಸರ ಜೀವನ ಸಂದೇಶ ಕುರಿತು ಡಿ. ಡಿ. ಮಾಳಗಿ ವಿಶ್ರಾಂತ ಡಿ.ವಾಯ್.ಎಸ್.ಪಿ. ಹುಬ್ಬಳ್ಳಿ ಅವರು ಮಾತನಾಡಿ, ತಾತ್ವಿಕವಾಗಿ ಕನಕದಾಸರ ಚಿಂತನೆಗಳ ಬಗ್ಗೆ, ತತ್ತ÷್ವಸಿದ್ಧಾಂತಗಳ ಬಗ್ಗೆ, ಸಾಹಿತ್ಯದ ಬಗ್ಗೆ, ಸಂಗೀತದ ಬಗ್ಗೆ ವಿಚಾರ ಮಾಡುತ್ತಿಲ್ಲ. ಕನ್ನಡ ಸಾಹಿತ್ಯದಲ್ಲಿ ಅಚ್ಚಳಿಯದೆ ತ್ರಿಕಾಲಾದಿತವಾಗಿ ನಿಂತ ಸಾಹಿತ್ಯ ಕನಕದಾಸ ಸಾಹಿತ್ಯ. ೧೨ ನೇ ಶತಮಾನದಲ್ಲಿ ಶರಣರು ಸಮಾನತೆಯ ಬಂಡಾಯವನ್ನು ಸಾರಿದರೆ, ೧೬ ನೇ ಶತಮಾನದಲ್ಲಿ ದಾಸರಲ್ಲಿ ಕನಕದಾಸರೊಬ್ಬರೆ ಬಂಡಾಯ ಸಾರಿದ್ದಾರೆ ಎಂದು ತಿಳಿಸಿದರು.
ಸಮ್ಮುಖವನ್ನು ವಹಸಿ ಪೂಜ್ಯ ಶ್ರೀ ಮ.ನಿ.ಪ್ರ. ಗುರುಬಸವಲಿಂಗ ಮಹಾಸ್ವಾಮಿಗಳು, ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಪುಣ್ಯಾರಣ್ಯ ಅರಭಾವಿಮಠ, ಮೂಡಲಗಿ ಅವರು ಮಾತನಾಡಿದರು. ಮುಖ್ಯಅತಿಥಿಗಳಾಗಿ ಫಕೀರಪ್ಪ ಹೆಬಸೂರ ಅಧ್ಯಕ್ಷರು ಜಿಲ್ಲಾ ಕುರುಬರ ಸಂಘ, ಗದಗ ಅವರು ಮಾತನಾಡಿದರು. ರಾಷ್ಟಿçÃಯ ವೈದ್ಯಕೀಯ ಓಲಂಪಿಕ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಪಡೆದ ನಿಮಿತ್ಯ ಡಾ. ಜಿ. ಬಿ. ಬಿಡಿನಹಾಳ, ಖ್ಯಾತ ವೈದ್ಯರು, ಗದಗ, ಅರುಣಾಚಲ ಪ್ರದೇಶದ ಹಿಮಾಲಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ನಿಮಿತ್ತ ಡಾ. ಸಂಜೀವ ಹರಳಯ್ಯ, ಸಹಾಯಕ ಪ್ರಾಧ್ಯಾಪಕರು, ಜೀಮ್ಸ್ ಗದಗ, ಎನ್.ಪಿ.ಟಿ.ಎಲ್. ಆನಲೈನ್ ಸರ್ಟಿಫಿಕೆಟ್ ಕೋರ್ಸನಲ್ಲಿ ಪದಕ ಪಡೆದ ನಿಮಿತ್ಯ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶೈಲಜಾ ಮುದೇನಗುಡಿ, ಪ್ರೊ. ಮುಕ್ತಾ ಪಾಟೀಲ, ಪ್ರೊ. ನೀತಾ ಮುದರಡ್ಡಿ ಅವರನ್ನು ಪೂಜ್ಯರು ಸಂಮಾನಿಸಿದರು.
ಮೃತ್ಯುAಜಯ ಹಿರೇಮಠ, ಗುರುನಾಥ ಸುತಾರ ಸಂಗಡಿಗರು ವಚನಸಂಗೀತ ಹಾಡಿದರು. ಕು. ಸುಮಾ ಎಸ್. ಸತ್ಯಪ್ಪನವರ ಧರ್ಮಗ್ರಂಥ ಪಠಣಗೈದರು, ಕು. ಆಕಾಶ ಸಿ. ಸತ್ಯಪ್ಪನವರ ಇವರಿಂದ ವಚನ ಚಿಂತನ ನಡೆಯಿತು. ಶಿವಾನುಭವ ಭಕ್ತಿಸೇವೆಯನ್ನು ವಹಿಸಿದ ಹುಚ್ಚಣ್ಣ ರೇವಣೆಪ್ಪ ಶಹಾಪೂರ, ಹಾಲೇಶ್ವರ ಟ್ರೇಡಿಂಗ್ ಕಂ. ದಲಾಲ ವರ್ತಕರು ಹಾಗೂ ಪರಿವಾರ, ಗದಗ ಅವರನ್ನು ಶ್ರೀಗಳು ಸಂಮಾನಿಸಿದರು.
ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್‌ರಾದ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.

ಅನುದಾನರಹಿತ   ಖಾಸಗಿ ಶಾಲೆಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಿ. ೧೧ ರಂದು ಬೆಳಗಾವಿಯಲ್ಲಿ ಮನವಿ: ಶಶಿಧರ ದಿಂಡೂರಗದಗ : ಸರಕಾರ ಖಾಸಗಿ ಅನುದಾ...
09/12/2023

ಅನುದಾನರಹಿತ ಖಾಸಗಿ ಶಾಲೆಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಿ. ೧೧ ರಂದು ಬೆಳಗಾವಿಯಲ್ಲಿ ಮನವಿ: ಶಶಿಧರ ದಿಂಡೂರ

ಗದಗ : ಸರಕಾರ ಖಾಸಗಿ ಅನುದಾನಿತ ಶಾಲೆಗಳ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವದು ಎಂದು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ)ದ ರಾಜ್ಯ ಪ್ರದಾನ ಕಾರ್ಯದರ್ಶಿ ಶಶಿಧರ ದಿಂಡೂರ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಸರಕಾರ ಹೈಕೋರ್ಟ ಆದೇಶದಂತೆ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣವನ್ನು ೧೦ ವರ್ಷಕ್ಕೆ ವಿಸ್ತರಿಸಬೇಕು, ೨೦೧೮ ರ ಮುಂಚೆ ಪ್ರಾರಂಭವಾದ ಶಿಕ್ಷಣ ಸಂಸ್ಥೆಗಳಿಗೆ ಫೈಯರ್ ಸೇಫ್ಟಿ, ಬಿಲ್ಡಿಂಗ್ ಸೇಫ್ಟಿಯಿಂದ ಕೋರ್ಟ್ ಆದೇಶದಂತೆ ವಿನಾಯಿತಿ ನೀಡಬೇಕು, ಆರ್ ಟಿ ಇ ಮರುಪಾವತಿ ಹಣವನ್ನು ಕನಿಷ್ಟ ೩೫ ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ರಾಷ್ಟಿçÃಯ ಶಿಕ್ಷಣ ನೀತಿ-೨೦೨೦ ಕಡ್ಡಾಯವಾಗಿ ಕರ್ನಾಟಕದಲ್ಲಿ ಅನುಷ್ಠಾನವಾಗಬೇಕು, ಸ್ಟೇಟ್ ಎಜುಕೇಶನ್ ಪಾಲಿಸಿಯನ್ನು ಅನುಷ್ಟಾನ ಕೈ ಬಿಡಬೇಕು, ೧೯೯೫ ರಿಂದ ೨೦೧೦ರ ವರೆಗೆ ಪ್ರಾರಂಭವಾದ ಖಾಸಗಿ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಹಾಗೂ ಈ ಮೊದಲು ಜಾರಿಯಲ್ಲಿದ್ದ ಆರ್ ಟಿ ಇ ಕಾರ್ಯಕ್ರಮವನ್ನು ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಮರು ಅನುಷ್ಠಾನಗೊಳಿಸುವಂತೆ ಅಗ್ರಹಿಸಿ ಡಿ. ೧೧ ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ರುಪ್ಸಾದಿಂದ ಮನವಿ ಸಲ್ಲಿಸಲಾಗುವುದು. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಕಾರ್ಯದರ್ಶಿ ಶಶಿಧರ ದಿಂಡೂರ ಅವರು ಹೇಳಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷರಾದ ಜಯದೇವ ಮೆಣಸಗಿ, ಕಾರ್ಯದರ್ಶಿ ಎಂ.ಎA. ಡಾಲಾಯತ ಹಾಗೂ ಪದಾಧಿಕಾರಿಗಳಾದ ಬಿ.ಡಿ. ಹರ್ತಿ, ಎಚ್.ಎನ್.ಗದಗ, ಮಲ್ಲಿಕಾರ್ಜುನಗೌಡ ಗೊಡಚಪ್ಪನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಮೆಣಸಿನಕಾಯಿ, ಈರುಳ್ಳಿ ಕಾಯುತ್ತಿದ್ದ ವ್ಯಕ್ತಿಯ ರುಂಡವಿಲ್ಲದ ಶವ ಪತ್ತೆ..!ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ...
09/12/2023

ಮೆಣಸಿನಕಾಯಿ, ಈರುಳ್ಳಿ ಕಾಯುತ್ತಿದ್ದ ವ್ಯಕ್ತಿಯ ರುಂಡವಿಲ್ಲದ ಶವ ಪತ್ತೆ..!

ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಜಮೀನೊಂದರಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಗಳು ಮೆಣಸಿನಕಾಯಿ ಬೆಳೆ ಕಾಯಲು ಇದ್ದ ವ್ಯಕ್ತಿಯನ್ನ ಮಾರಾಕಾಸ್ತ್ರಗಳಿಂದ ಕತ್ತು ಕತ್ತರಿಸಿ ರುಂಡದೊಂದಿಗೆ ಪರಾರಿಯಾಗಿದ್ದಾರೆ.

ಕೊಲೆಗೀಡಾದ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದ ನಿವಾಸಿ ಸಣ್ಣ ಹನಮಪ್ಪ ವಜ್ರದ (65) ‌ಎಂದು ತಿಳಿದು ಬಂದಿದೆ.

ನೂತನ ರೈಲುಮಾರ್ಗ ಮಂಜೂರಾತಿಗೆ ಆಗ್ರಹಮುಂಡರಗಿ: ನೂತನ ರೈಲುಮಾರ್ಗ ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆ...
05/12/2023

ನೂತನ ರೈಲುಮಾರ್ಗ ಮಂಜೂರಾತಿಗೆ ಆಗ್ರಹ
ಮುಂಡರಗಿ: ನೂತನ ರೈಲುಮಾರ್ಗ ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದಗ, ಮುಂಡರಗಿ, ಹೂವಿನಹಡಗಲಿ, ಹರಪನಹಳ್ಳಿ ಮಾರ್ಗವಾಗಿ ನೂತನ ರೈಲು ಮಾರ್ಗ ಮಂಜೂರಾತಿಗೆ ಆಗ್ರಹಿಸಿ ಈಗಾಗಲೇ ಹಲವು ವರ್ಷಗಳಿಂದ ಹೋರಾಟ ಮಾಡಲಾಗಿದೆ. ಆದರೆ ಈ ಕುರಿತಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ಮಾಡುತ್ತಿವೆ ಎಂದು ಆರೋಪಿಸಿದರು.
ಬಗರ್ ಹುಕುಂ ಸಾಗುವಳಿದಾರರಿಗೆ ಜಮೀನು ಹಕ್ಕುಪತ್ರ ನೀಡದೇ ಸರ್ಕಾರ ವಿನಾಕಾರಣ ವಿಳಂಬ ಮಾಡುತ್ತಲಿದೆ. 1978ರ ಪಿಟಿಸಿಎಲ್ ಕಾಯ್ದೆಯನ್ನು ಪುನಃ ಸ್ಥಾಪಿಸಬೇಕು. ಈ ಮೊದಲಿನಂತೆ ಮುಂಡರಗಿ ತಾಲ್ಲೂಕನ್ನು ವಿಧಾನಸಭಾ ಕ್ಷೇತ್ರವೆಂದು ಘೋಷಣೆ ಮಾಡಬೇಕು. ರೈತರಿಗೆ ತಕ್ಷಣ ಬೆಳೆ ಹಾಗೂ ಬರ ಪರಿಹಾರ ನೀಡಬೇಕು ಎಂದು ಬೆಳಗಾವಿಯಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದ ಅಂಚೆ ಕಚೇರಿಯು ಹಲವು ದಶಕಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಲಿದೆ. ಪಟ್ಟಣದಲ್ಲಿ ಸ್ವತಂತ್ರ ಅಂಚೆ ಕಟ್ಟಡ ನಿರ್ಮಾಣಕ್ಕೆ ವಿಶಾಲವಾದ ನಿವೇಶನವನ್ನು ಖರೀದಿಸಲಾಗಿದ್ದು, ಅಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಪಟ್ಟಣದ ವಿದ್ಯಾರ್ಥಿಗಳಿಗಾಗಿ ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಆಶ್ರಯ ಮನೆ ನಿರ್ಮಾಣಕ್ಕೆ ಪಟ್ಟಣದ ಹೊರವಲಯದಲ್ಲಿ 25 ಎಕರೆ ಜಮೀನು ಖರೀದಿಸಿದ್ದು, ಅಲ್ಲಿ ಈವರೆಗೂ ಮನೆಗಳನ್ನು ನಿರ್ಮಿಸಿರುವುದಿಲ್ಲ. ಪಟ್ಟಣದಲ್ಲಿ ಹಲವು ವರ್ಷಗಳಿಂದ ಬಡಜನರು ಆಶ್ರಯ ಮನೆಗಳಿಲ್ಲದೆ ಪರದಾಡುತ್ತಿದ್ದಾರೆ. ಪುರಸಭೆಯವರು ಬಡವರಿಗೆ ಮನೆಗಳನ್ನು ವಿತರಿಸದೆ ಸತಾಯಿಸುತ್ತಿದ್ದಾರೆ. ಆದ್ದರಿಂದ ಪುರಸಭೆಯವರು ತಕ್ಷಣ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮುಂಡರಗಿ-ಕೊಪ್ಪಳ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಬೇಕು. ಕನಕರಾಯನ ಗುಡ್ಡವನ್ನು ಪ್ರವಾಸಿ ತಾಣವನ್ನಾಗಿಸಬೇಕು. ಮುರುಡಿ ಗ್ರಾಮದ ಕೆರೆ ಅಭಿವೃದ್ಧಿಗೊಳಿಸಬೇಕು. ತಾಂಬ್ರಗುಂಡಿ ಗ್ರಾಮದ ಕೆರೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿರುವ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಸುಭಾಷ ಗುಡಿಮನಿ, ಎಸ್.ವಿ.ಗಟ್ಟಿ, ಮಂಜುನಾಥ ಹುಬ್ಬಳ್ಳಿ, ರಮೇಶ ರಾಮೇನಹಳ್ಳಿ, ಬಸಪ್ಪ ವಡ್ಡರ ಇದ್ದರು.

ನೂತನ ರೈಲುಮಾರ್ಗ ಮಂಜೂರಾತಿಗೆ ಆಗ್ರಹಮುಂಡರಗಿ: ನೂತನ ರೈಲುಮಾರ್ಗ ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆ...
05/12/2023

ನೂತನ ರೈಲುಮಾರ್ಗ ಮಂಜೂರಾತಿಗೆ ಆಗ್ರಹ

ಮುಂಡರಗಿ: ನೂತನ ರೈಲುಮಾರ್ಗ ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಬೆಳಗಾವಿಯ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದಗ, ಮುಂಡರಗಿ, ಹೂವಿನಹಡಗಲಿ, ಹರಪನಹಳ್ಳಿ ಮಾರ್ಗವಾಗಿ ನೂತನ ರೈಲು ಮಾರ್ಗ ಮಂಜೂರಾತಿಗೆ ಆಗ್ರಹಿಸಿ ಈಗಾಗಲೇ ಹಲವು ವರ್ಷಗಳಿಂದ ಹೋರಾಟ ಮಾಡಲಾಗಿದೆ. ಆದರೆ ಈ ಕುರಿತಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ಮಾಡುತ್ತಿವೆ ಎಂದು ಆರೋಪಿಸಿದರು.
ಬಗರ್ ಹುಕುಂ ಸಾಗುವಳಿದಾರರಿಗೆ ಜಮೀನು ಹಕ್ಕುಪತ್ರ ನೀಡದೇ ಸರ್ಕಾರ ವಿನಾಕಾರಣ ವಿಳಂಬ ಮಾಡುತ್ತಲಿದೆ. 1978ರ ಪಿಟಿಸಿಎಲ್ ಕಾಯ್ದೆಯನ್ನು ಪುನಃ ಸ್ಥಾಪಿಸಬೇಕು. ಈ ಮೊದಲಿನಂತೆ ಮುಂಡರಗಿ ತಾಲ್ಲೂಕನ್ನು ವಿಧಾನಸಭಾ ಕ್ಷೇತ್ರವೆಂದು ಘೋಷಣೆ ಮಾಡಬೇಕು. ರೈತರಿಗೆ ತಕ್ಷಣ ಬೆಳೆ ಹಾಗೂ ಬರ ಪರಿಹಾರ ನೀಡಬೇಕು ಎಂದು ಬೆಳಗಾವಿಯಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದ ಅಂಚೆ ಕಚೇರಿಯು ಹಲವು ದಶಕಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಲಿದೆ. ಪಟ್ಟಣದಲ್ಲಿ ಸ್ವತಂತ್ರ ಅಂಚೆ ಕಟ್ಟಡ ನಿರ್ಮಾಣಕ್ಕೆ ವಿಶಾಲವಾದ ನಿವೇಶನವನ್ನು ಖರೀದಿಸಲಾಗಿದ್ದು, ಅಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಪಟ್ಟಣದ ವಿದ್ಯಾರ್ಥಿಗಳಿಗಾಗಿ ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಆಶ್ರಯ ಮನೆ ನಿರ್ಮಾಣಕ್ಕೆ ಪಟ್ಟಣದ ಹೊರವಲಯದಲ್ಲಿ 25 ಎಕರೆ ಜಮೀನು ಖರೀದಿಸಿದ್ದು, ಅಲ್ಲಿ ಈವರೆಗೂ ಮನೆಗಳನ್ನು ನಿರ್ಮಿಸಿರುವುದಿಲ್ಲ. ಪಟ್ಟಣದಲ್ಲಿ ಹಲವು ವರ್ಷಗಳಿಂದ ಬಡಜನರು ಆಶ್ರಯ ಮನೆಗಳಿಲ್ಲದೆ ಪರದಾಡುತ್ತಿದ್ದಾರೆ. ಪುರಸಭೆಯವರು ಬಡವರಿಗೆ ಮನೆಗಳನ್ನು ವಿತರಿಸದೆ ಸತಾಯಿಸುತ್ತಿದ್ದಾರೆ. ಆದ್ದರಿಂದ ಪುರಸಭೆಯವರು ತಕ್ಷಣ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮುಂಡರಗಿ-ಕೊಪ್ಪಳ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಬೇಕು. ಕನಕರಾಯನ ಗುಡ್ಡವನ್ನು ಪ್ರವಾಸಿ ತಾಣವನ್ನಾಗಿಸಬೇಕು. ಮುರುಡಿ ಗ್ರಾಮದ ಕೆರೆ ಅಭಿವೃದ್ಧಿಗೊಳಿಸಬೇಕು. ತಾಂಬ್ರಗುಂಡಿ ಗ್ರಾಮದ ಕೆರೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿರುವ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಸುಭಾಷ ಗುಡಿಮನಿ, ಎಸ್.ವಿ.ಗಟ್ಟಿ, ಮಂಜುನಾಥ ಹುಬ್ಬಳ್ಳಿ, ರಮೇಶ ರಾಮೇನಹಳ್ಳಿ, ಬಸಪ್ಪ ವಡ್ಡರ ಇದ್ದರು.

ಸಂಶೋಧಕ ಜಗನ್ನಾಥ ಗೇನಣ್ಣವರ ಅಭಿಮತಕನಕದಾಸರು ನಾಡಿಗೆ ಸ್ಫೂರ್ತಿ ಸಂಕೇತಗದಗ: ‘ಕನಕದಾಸರು ಕನ್ನಡ ನಾಡು ಕಂಡ ಅಪರೂಪದ ಕೀರ್ತನಕಾರರು. ಕಾವ್ಯ, ಕೀರ್...
05/12/2023

ಸಂಶೋಧಕ ಜಗನ್ನಾಥ ಗೇನಣ್ಣವರ ಅಭಿಮತ
ಕನಕದಾಸರು ನಾಡಿಗೆ ಸ್ಫೂರ್ತಿ ಸಂಕೇತ

ಗದಗ: ‘ಕನಕದಾಸರು ಕನ್ನಡ ನಾಡು ಕಂಡ ಅಪರೂಪದ ಕೀರ್ತನಕಾರರು. ಕಾವ್ಯ, ಕೀರ್ತನೆ, ಶಾಸ್ತ್ರಗಳ ಮೂಲಕ ಕವಿಯಾಗಿ, ದಾರ್ಶನಿಕರಾಗಿ ಜನರಿಗೆ ಸ್ಫೂರ್ತಿಯಾಗಿದ್ದಾರೆ’ ಎಂದು ಸಂಶೋಧಕ ಜಗನ್ನಾಥ ಗೇನಣ್ಣವರ ತಿಳಿಸಿದರು.
ನಗರದ ಕಾಶಿ ವಿಶ್ವನಾಥ ನಗರದಲ್ಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಭಾಭವನದಲ್ಲಿ ನಡೆದ ಕನಕ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ‘ವ್ಯಾಸರಾ
ಯರನ್ನು ಗುರುಗಳನ್ನಾಗಿ ಸ್ವೀಕರಿಸಿದ ಕನಕದಾಸರು, ಅರಸೊತ್ತಿಗೆ ತಿರಸ್ಕರಿಸಿ ಅರಿವಿನ ಮನೆಯತ್ತ ಬದುಕನ್ನು ತಿರುಗಿಸಿಕೊಂಡರು. ಬಳಿಕ ಜಾತಿ, ಮತ, ಪಂಥ, ದೇಶ, ವೇಷ ಕಾಲಮಾನಗಳನ್ನು ಮೀರಿ ಬೆಳೆದರು’ ಎಂದು ತಿಳಿಸಿದರು.
ಸಿದ್ದಣ್ಣ ಜಕಬಾಳ ಅವರು ಕನಕದಾಸರ ಮುಂಡಿಗೆಗಳ ಕುರಿತು ಮಾತನಾಡಿದರು.
ಪ್ರೊ. ಎಚ್.ಬಿ.ಶಿರಗುಂಪಿ ಕಾರ್ಯಕ್ರಮ ಉದ್ಘಾಟಿಸಿದರು. ಬಿ.ಎನ್.ಯರನಾಳ ಕನಕದಾಸರ ಕುರಿತು ಮಾತನಾಡಿದರು.
ನಗರಸಭೆ ಸದಸ್ಯೆ ಶ್ವೇತಾ ಪಿ. ಬೆನಕವಾರಿ, ವಿಜಯಲಕ್ಷ್ಮೀ ಎಸ್. ದಿಂಡೂರು, ಮುತ್ತಣ್ಣ ಮುಶಿಗೇರಿ, ಜಿ.ಜಿ.ಕುಲಕರ್ಣಿ, ಎಚ್.ಆರ್. ಜಾಲಮ್ಮನವರ, ಎಂ.ಬಿ.ಚನ್ನಪ್ಪಗೌಡರ, ರೇಣುಕಾ ಕೇಸರಿ, ಎಚ್.ಆರ್.ಶಹಾಪೂರ, ವಿ.ಆರ್.ಕರಿ ವೇದಿಕೆಯಲ್ಲಿದ್ದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಹಾಲುಮತ ಸಾಂಸ್ಕೃತಿಕ ಮಹಿಳೆಯರು’ ಎಂಬ ವಿಷಯದಲ್ಲಿ ಅಧ್ಯಯನ ನಡೆಸಿ ಪಿಎಚ್‌ಡಿ ಪದವಿ ಪಡೆದ ಸಂಗೀತಾ ಕುರಿ ಅವರನ್ನು ಸನ್ಮಾನಿಸಲಾಯಿತು. ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಪ್ರೊ. ಎಂ.ಎನ್.ಕಾಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಎಸ್.ಪಿ.ಕೊಪ್ಪದ, ಎಚ್.ಎಸ್.ಕುರಿ, ಆರ್.ಆರ್.ಕಾಶಪ್ಪನವರ, ನಾಗರಾಜ ಕಂಬಳಿ, ಅನಿಲ ಶಿಂಗಟಾಲಕೇರಿ, ಕೆ.ಬಿ.ಕಂಬಳಿ, ಆರ್.ಬಿ.ವಡಗೇರಿ ಒಡೆಯರ್, ಆರ್.ಬಿ.ಅಂದಪ್ಪನವರ, ಶರಣಪ್ಪ ಕುರಿ, ಪ್ರೊ. ಎಚ್.ಎಸ್.ಕಿಂದರಿ,
ಬಿ.ಎಂ.ಕನ್ನೂರು, ನವೀನ ಮಾಯಣ್ಣವರ, ಎಚ್.ಎನ್.ಕುರಿ, ಪ್ರಶಾಂತ ಕೆ., ಎಚ್.ಡಿ.ಕುರಿ
ಉಪಸ್ಥಿತರಿದ್ದರು.
ರಂಜನಿ ಕರಿಗಾರ ಹಾಗೂ ಪ್ರದೀಪ ಪ್ರಾರ್ಥನೆ ಹಾಡಿದರು. ಎಸ್.ಎನ್.ವೆಂಕಟಾಪೂರ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ವಿ.ವೈ.ಮುಕ್ಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಂ.ಅಂಬಲಿಯವರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ವೈ.ಕೆ.ಪಿಡಗಣ್ಣವರ ವಂದಿಸಿದರು.

ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ : ವೈಶಾಲಿಗದಗ: ಧಾರ್ಮಿಕ ಆಚರಣೆಯಿಂದ ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಬರು...
05/12/2023

ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ : ವೈಶಾಲಿ
ಗದಗ: ಧಾರ್ಮಿಕ ಆಚರಣೆಯಿಂದ ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಬರುವದು. ಸಂಸ್ಕಾರ, ಸಂಸ್ಕೃತಿಗಳು ಮುಂದಿನ ಪೀಳಿಗೆಗೆ ವರ್ಗಾವಣೆಗೊಳ್ಳಬೇಕು ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹೇಳಿದರು.
ಬಸವೇಶ್ವರ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ದಾನೇಶ್ವರಿ ಮಹಿಳಾ ಮಂಡಳ, ವೀರಭದ್ರ ದೇವಸ್ಥಾನ ಟ್ರಸ್ಟ್ ಕಮೀಟಿ, ಶಂಕರಲಿAಗ ದೇವಸ್ಥಾನ ಟ್ರಸ್ಟ್ ಕಮೀಟಿ ಆಶ್ರಯದಲ್ಲಿ ಡಿ. ೧೨ರವರೆಗೆ ನಡೆಯಲಿರುವ ಶರಣೆ ದಾನಮ್ಮತಾಯಿ ಪುರಾಣ ಪ್ರವಚನ ಮಾಲಿಕೆಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಶರಣೆ ದಾನಮ್ಮತಾಯಿ ಮಹಿಮೆ, ಪವಾಡಗಳು ಅದ್ಭುತ, ಸಮಾಜ ಜಾಗೃತಿ, ಧರ್ಮ ಜಾಗ್ರತಿ ಮಾಡಿದ ಶರಣೆ ಆರಾಧ್ಯ ದೇವಿಯಾಗಿದ್ದಾಳೆ. ಇಂತಹ ಮಹಾನ್ ಶರಣೆಯ ಕುರಿತು ಇಲ್ಲಿನ ದಾನೇಶ್ವರಿ ಮಹಿಳಾ ಮಂಡಳ ಕಳೆದ ೧೭ ವರ್ಷಗಳಿಂದ ದಾನಮ್ಮತಾಯಿಯ ಪುರಾಣ ಪ್ರವಚನ ಎರ್ಪಡಿಸಿಕೊಂಡು ಬಂದಿರುವದು ಆಧುನಿಕ ಇಂದಿನ ದಿನಗಳಲ್ಲಿ ಧರ್ಮ ಜಾಗೃತಿ ಮಾಡುವಂತದ್ದಾಗಿದೆ ಎಂದರು.
ಕೆಲವೆಡೆ, ಕೆಲವು ದೇವಾಲಯಗಳ ಗರ್ಭ ಗುಡಿಯಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ, ಪುರುಷರಿಗೂ ಸಹ ಇಲ್ಲ ಆದರೆ ಶೃದ್ಧಾಭಕ್ತಿಗೆ ಹೆಸರಾಗಿರುವ ಗದುಗಿನ ಬಸವೇಶ್ವರ ನಗರದ ಮಹಿಳೆಯರು, ತಾಯಂದಿರು ಸಂಘಟಿಕರಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದಲ್ಲದೆ ಎಲ್ಲ ಪೂಜಾ ಕೈಂಕರ್ಯಗಳಲ್ಲಿ ಮುಂಚೂಣಿಯಲ್ಲಿರುವದು ಮಹಿಳೆಗೆ ನೀಡಿರುವ ಪ್ರಾತಿನಿಧ್ಯ, ಸಮಾನತೆಯನ್ನು ಅಭಿವ್ಯಕ್ತಗೊಳಿಸುವದು ಎಂದರು.
ನಗರಸಭಾ ಸದಸ್ಯ ಚಂದ್ರಶೇಖರ ತಡಸದ ಅವರು ಮಾತನಾಡಿ ಬಸವೇಶ್ವರ ನಗರ ಸಾಂಸ್ಕೃತಿಕ ನಗರ, ಭಕ್ತಿಗೆ, ಧಾರ್ಮಿಕ ಕಾರ್ಯಗಳಿಗೆ ಹೆಸರಾಗಿದೆ. ನಾಡಿಗೆ ಸಾಮೂಹಿಕ ವಿವಾಹದ ಪರಂಪರೆಯನ್ನು ಹಾಕಿದ ಶ್ರೇಯಸ್ಸು ಶರಣೆ ದಾನಮ್ಮತಾಯಿಗೆ ಸಲ್ಲುವದು, ಇಂತಹ ತಾಯಿ ಬಗ್ಗೆ ಕಳೆದ ೧೭ ವರ್ಷಗಳಿಂದ ದಾನೇಶ್ವರಿ ಮಹಿಳಾ ಮಂಡಳ ಪುರಾಣ ನಡೆಸಿಕೊಂಡು ಬಂದಿದೆ. ಉಳವಿ ಚನ್ನಬಸವೇಶ್ವರ ದೇವಸ್ಥಾನದ ಶಾಖಾ ಮಠದ ಇಲ್ಲಿದೆ, ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಕಳೆದ ೪೫ ವರ್ಷಗಳಿಂದ ಸಾಗಿ ಬಂದಿದೆ, ಇನ್ನೊಂದು ವಿಶೇಷವೆಂದರೆ ಶಹಪೂರಪೇಟೆ (ಬಸವೇಶ್ವರ ನಗರ) ನಾಮಕರಣಗೊಂಡು ಮಾರ್ಚ ೨೦೨೪ಕ್ಕೆ ಸರಿಯಾಗಿ ೨೦೦ ವರ್ಷ ಆಗುವದು ಈ ಕುರಿತು ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಸಮಾರAಭದಲ್ಲಿ ಗದಗ-ಬೆಟಗೇರಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಅನೀಲ ಅಬ್ಬಿಗೇರಿ ದಂಪತಿ ಸೇರಿದಂತೆ ಪ್ರಸಾದ ಸೇವೆ ಕೈಗೊಂಡ ದಾನಿಗಳನ್ನು, ಗಣ್ಯರನ್ನು ಸನ್ಮಾನಿಸಲಾಯಿತು.
ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದ ಅಡ್ನೂರಿನ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಮನಸ್ಸಿನಲ್ಲಿರುವ ಮಲೀನತೆಯನ್ನು ತೊಳೆದುಕೊಳ್ಳಲು ಪುರಾಣ ಪ್ರವಚನ ಅವಶ್ಯ. ಆಧಾತ್ಮದಿಂದ ಈ ಮಲೀನತೆ ಹಸನಾಗಲು ಸಾಧ್ಯ, ಕಲ್ಮಶ ದೂರವಾಗಿ ಭಕ್ತಿ ನೆಲೆಸಲಿ ಎಂದರು.
ತೊಟ್ಟಿಲು ತೋಗುವ ಕೈ ಜಗತ್ತನ್ನೇ ತೋಗಬಲ್ಲದು, ಇಲ್ಲಿನ ತಾಯಂದಿರು ಸಂಘಟನೆ ಮಾಡಿಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿರುವದು ಸಂತೋಷದ ಸಂಗತಿ. ಒಳ್ಳೆ ಸಂಸ್ಕಾರ, ಪ್ರಜ್ಞಾವಂತಿಕೆಯುಳ್ಳ ಇಲ್ಲಿನ ತಾಯಂದಿರುವ ತಾವು ಸಂಕಲ್ಪಿಸಿಕೊAಡಿರುವ ದಾನಮ್ಮದೇವಿಯ ಪಲ್ಲಕ್ಕಿ, ತೇರು ನಿರ್ಮಾಣದ ಕೆಲಸ ಯಶಸ್ವಿಯಾಗಲಿ ಎಂದರು.
ಪೂಜ್ಯ ಪುಟ್ಟರಾಜ ಕವಿ ಗವಾಯಿಗಳು ವಿರಚಿತ ದಾನಮ್ಮತಾಯಿ ಪುರಾಣ ಪಂ.ಎA.ಕಲ್ಲಿನಾಥಶಾಸ್ತಿç ಅಡ್ನೂರ ಅವರು ಪುರಾಣ ಪ್ರವಚನಕ್ಕೆ ಆರಂಭಿಕ ಪೀಠಿಕೆ ಹಾಕಿದರು. ಮೃತ್ಯುಂಜಯ ಹಿರೇಮಠ, ಮಲ್ಲಿಕಾರ್ಜುನ ಕೊಡಗಾನೂರ ಸಂಗೀತ ಸಾಥ್ ನೀಡಿದರು.
ವೇದಿಕೆಯ ಮೇಲೆ ಟ್ರಸ್ಟಿಗಳಾದ ಶಿವಪುತ್ರಪ್ಪ ಬೇವಿನಮರದ, ರಾಚಪ್ಪ ಮಿಣಜಗಿ ಅಲ್ಲದೆ ಪ್ರದೀಪ ಕೊಡೇಕಲ್ಲ, ಸುಧಾ ಕೆರೂರ, ವಿಜಯಲಕ್ಷಿö್ಮÃ ಕಾತರಕಿ ಉಪಸ್ಥಿತರಿದ್ದರು. ಶೋಭಾ ಗುಗ್ಗರಿ ಸ್ವಾಗತಿಸಿದರು ಶೈಲಾ ಕೊಡೇಕಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಜ್ಯೋತಿ ಹೆರಲಗಿ ನಿರೂಪಿಸಿದರು ಕೊನೆಗೆ ದೀಪಾ ಬೇವಿನಮರದ ವಂದಿಸಿದರು.
ಕಾರ್ಯಕ್ರಮದಲ್ಲಿ ಸುರೇಖಾ ಪಿಳ್ಳಿ, ವಿಜಯಲಕ್ಷಿö್ಮÃ ಕಾತರಕಿ, ಶೋಭಾ ಗುಗ್ಗರಿ ಸೇರಿದಂತೆ ದಾನೇಶ್ವರಿ ಮಹಿಳಾ ಮಂಡಳದ ಪದಾಧಿಕಾರಿಗಳು, ಸದಸ್ಯರು ಅಲ್ಲದೆ ಶಿವಪುತ್ರಪ್ಪ ಶಿವಶಿಂಪಿಗೇರ, ಶಿವಬಸಪ್ಪ ಯಂಡಿಗೇರಿ, ಬಸವರಾಜ ಕಾಡಪ್ಪನವರ, ಶಿವಕುಮಾರ ಬೇವಿನಮರದ, ಈರಣ್ಣ ಕಾತರಕಿ, ಸುರೇಶ ಸಿರಿಗಣ್ಣವರ, ವೀರೇಶ ಮುನವಳ್ಳಿ, ಶಂಭು ಕಾರಕಟ್ಟಿ, ಬಸವರಾಜ ರಾಮನಕೊಪ್ಪ, ಜಗದೀಶ ಯಚ್ಚಲಗಾರ, ಪ್ರದೀಪ ಕೊಡೇಕಲ್ ಮುಂತಾದವರಿದ್ದರು.

Address

Rudragoud Patil
Gadag
582202

Website

Alerts

Be the first to know and let us send you an email when Gadag quick news posts news and promotions. Your email address will not be used for any other purpose, and you can unsubscribe at any time.

Contact The Business

Send a message to Gadag quick news:

Share