Gulbarga Fast News 24/7

Gulbarga Fast News 24/7 Contact information, map and directions, contact form, opening hours, services, ratings, photos, videos and announcements from Gulbarga Fast News 24/7, Media/News Company, Gulbarga.

07/01/2026

ಸೇಂದಿ ಡಿಪೋಗೆ ಎಸ್ಪಿ ಅಡ್ಡೂರು ಶ್ರೀಮಿವಾಸಲು ಭೇಟಿ; ಪರಿಶೀಲನೆ

ಚಿತ್ತಾಪುರ; ಪಟ್ಟಣದ ಸೇಂದಿ ಡಿಪೋಗೆ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ಜ.12ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಿತ್ತಾಪುರ ಫಟ್ಟಣಕ್ಕೆ ಆಗಮಿಸುತ್ತಿದ್ದು, ಹೀಗಾಗಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಪ್ರತಿಯೊಬ್ಬರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.

ಇದೇ ವೆಳೆ ಪಾರ್ಕಿಂಗ್ ವ್ಯವಸ್ಥೆ, ಊಟದ ವ್ಯವಸ್ಥೆ ಕುರಿತು ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸಿಇಓ ಭಂವ್ಹಾರಸಿಂಗ್ ಮೀನಾ, ಸೇಡಂ ಎಸಿ ಪ್ರಭು ರೆಡ್ಡಿ, ಡಿವೈಎಸ್ಪಿ ಶಂಕರಗೌಡ ಪಾಟೀಲ್, ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಪಂ ಇಓ ಅಕ್ರಂ ಪಾಶಾ, ಮಹೇಮೂದ್ ಸಾಹೇಬ್, ನಾಗರೆಡ್ಡಿ ಪಾಟೀಲ್, ಮುಕ್ತಾರ ಪಟೇಲ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

18/12/2025

ಚಿತ್ತಾಪುರ ತಾಲೂಕಿನ ಮಾಡಬೂಳದಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದ ಮೇರೆಗೆ ಮಾಡಬೂಳ ಪೊಲೀಸ್ ಠಾಣೆ ವತಿಯಿಂದ ಕಳ್ಳತನ ಪ್ರಕರಣದ ಕುರಿತು ಬಸ್'ಗಳಲ್ಲಿ ಸಂಚರಿಸುವ ಜನರಲ್ಲಿ ಅರಿವು ಮೂಡಿಸಲಾಯಿತು.

ಕಳ್ಳರು ನಿಮ್ಮ ಗಮನ ಬೇರೆಡೆ ಸೆಳೆದು ತಮ್ಮಲ್ಲಿರುವ ಹಣ, ಮೊಬೈಲ್, ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿ ಪರಾರಿಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್'ಗಳಲ್ಲಿ ಹತ್ತುವಾಗ ಜಾಗೃತತೆಯನ್ನು ವಹಿಸಬೇಕು ಎಂದು ಜಾಗೃತಿ ಮೂಡಿಸಿದರು.

18/12/2025

ಚಿತ್ತಾಪುರ; ತಾಲೂಕಿನ ಮಾಡಬೂಳದಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದ ಮೇರೆಗೆ ಮಾಡಬೂಳ ಪೊಲೀಸ್ ಠಾಣೆ ವತಿಯಿಂದ ಕಳ್ಳತನ ಪ್ರಕರಣದ ಕುರಿತು ಬಸ್'ಗಳಲ್ಲಿ ಸಂಚರಿಸುವ ಜನರಲ್ಲಿ ಅರಿವು ಮೂಡಿಸಲಾಯಿತು.

ಕಳ್ಳರು ನಿಮ್ಮ ಗಮನ ಬೇರೆಡೆ ಸೆಳೆದು ತಮ್ಮಲ್ಲಿರುವ ಹಣ, ಮೊಬೈಲ್, ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿ ಪರಾರಿಯಾಗುವ ಸಾಧ್ಯತೆಗಳಿರಯತ್ತವೆ. ಹೀಗಾಗಿ ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್'ಗಳಲ್ಲಿ ಹತ್ತುವಾಗ ಜಾಗೃತತೆಯನ್ನು ವಹಿಸಬೇಕು ಎಂದು ಜಾಗೃತಿ ಮೂಡಿಸಿದರು.

13/12/2025

ಮಾಡಬೂಳ ಪೊಲೀಸ್ ಠಾಣೆ ಸಮೀಪ ಕಾರ್ ಮತ್ತು ಜೀಪ್ ಮಧ್ಯೆ ಡಿಕ್ಕಿ; ಓರ್ವ ಸಾವು

ಚಿತ್ತಾಪುರ; ತಾಲೂಕಿನ ಮಾಡಬೂಳ ಪೊಲೀಸ್ ಠಾಣೆ ಸಮೀಪ ಕಾರ್ ಮತ್ತು ಜೀಪ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಓರ್ವ ವ್ಯಕ್ತಿ ‌ಮೃತ ಪಟ್ಟಿದ್ದು, ಆರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜರುಗಿದೆ.

ಹರಳಯ್ಯ ಎನ್ನುವವರು ಸ್ಥಳದಲ್ಲೇ ಮೃತ ಪಟ್ಟ ವ್ಯಕ್ತಿ.

ಕಾರ್'ನಲ್ಲಿದ್ದವರು ಸೇಡಂನಿಂದ ಕಲಬುರಗಿಗೆ ತೆರಳುತ್ತಿದ್ದರು. ಜೀಪ್'ನಲ್ಲಿದ್ದವರು ಕಲಬುರಗಿಯಿಂದ ಮಳಖೇಡ್'ಗೆ ತೆರಳುತ್ತಿದ್ದಾಗ ಈ ಘಟನೆ ಜರಗಿದೆ. ಕೂಡಲೇ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಮಾಡಬೂಳ ಪಿಎಸ್'ಐ ಗೌತಮ್, ಕ್ರೈಂ ಪಿಎಸ್'ಐ ಸಿದ್ಧಲಿಂಗ, ಪಿ.ಎಸ್ ವನಂಜಕರ್, ಸಿಬ್ಬಂದಿಗಳಾದ ವೀರಶೆಟ್ಟಿ, ಪ್ರೇಮ್, ಕೊಟ್ರೇಶ, ಚಂದ್ರಶೇಖರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

06/12/2025

ಅಣ್ಣಿಗೇರಿ ಬಳಿ ಭೀಕರ ಅಪಘಾತ; ಸಿಪಿಐ ಪಂಚಾಕ್ಷರಿ ಸಾಲಿಮಠ ಸ್ಥಳದಲ್ಲೇ ಸಾವು

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಬಳಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಇನ್ಸ್'ಫೇಕ್ಟರ್ ಒಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ನಡೆದಿದೆ.

ಇನ್ಸಫೇಕ್ಟ‌ರ್ ಪಂಚಾಕ್ಷರಿ ಸಾಲಿಮಠ ಅವರು ಅಪಘಾತದಲ್ಲಿ ಮೃತಪಟ್ಟಿದ್ದು ಬೈಲಹೊಂಗಲ, ಗದಗ ಹಾಗೂ ಹುಬ್ಬಳ್ಳಿ, ಕಲಬುರಗಿಯ ಚಿತ್ತಾಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಪಂಚಾಕ್ಷರಿಯವರು ಕಾರ್ಯವನ್ನು ನಿರ್ವಹಿಸಿದ್ದರು.

ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಘಟನಾ ಸ್ಥಳಕ್ಕೆ ಅಣ್ಣಿಗೇರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

02/12/2025

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮಾವೇಶ ಕಾರ್ಯಕ್ರಮದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು.

02/12/2025
02/12/2025

ಚಿತ್ತಾಪುರದಲ್ಲಿ ಭೀಮ ನಡೆ ಪಥಸಂಚಲನ

16/11/2025

ಚಿತ್ತಾಪುರ ಪಟ್ಟಣದಲ್ಲಿ ಯಶಸ್ಸಿಯಾಗಿ ಜರುಗಿದ ಆರ್.ಎಸ್‌.ಎಸ್ ಪಥ ಸಂಚಲನ

ಚಿತ್ತಾಪುರ ಪಟ್ಟಣದಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಸುಮಾರು 300 ಜನ ಗಣವೇಶಧಾರಿಗಳಿಂದ ಯಶಸ್ಸಿಯಾಗಿ ಆರ್.ಎಸ್.ಎಸ್ ಪಥ ಸಂಚಲನವು ನಡೆಯಿತು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾದ ಪಥ ಸಂಚಲನವು ಬಸವೇಶ್ವರ ವೃತ್ತ, ಬಸ್ ನಿಲ್ದಾಣ ವೃತ್ತ, ಅಂಬೇಡ್ಕರ್ ವೃತ್ತ, ರಾಘವೇಂದ್ರ ಖಾನಾವಳಿ, ಕೆನರಾ ಬ್ಯಾಂಕ್, ತಾಪಂ ಕಚೇರಿ ವೃತ್ತದ ಮೂಲಕ ಬಜಾಜ್ ಕಲ್ಯಾಣ ಮಂಟಪಕ್ಕೆ ತಲುಪಿತು.
300 ಜನ ಗಣವೇಶಧಾರಿಗಳು ಹಾಗೂ 50 ಜನ ಘೋಷವಾದಕರಿಂದ ಪಥ ಸಂಚಲನ ನಡೆಯಿತು.
ಭಾರತ್ ಮಾತಾಕಿ ಜೈ, ವಂದೇ ಮಾತರಂ ಎಂದು ಸಹಸ್ರಾರು ಜನರು ಘೋಷಣೆ ಕೂಗಿದದರು.
ಇದೇ ವೆಳೆ ಪತಸಂಚಲನದಲ್ಲಿ ಭಾಗವಹಿಸಿದ ಗಣವೇಶದಾರಿಗಳಿಗೆ ಹಲವು ಕುಟುಂಬದ ಸದಸ್ಯರು ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಸಾವಿರಾರು ಪೊಲೀಸರು, ಹಲವು ಮುಖಂಡರು ಸೇರಿದಂತೆ ಇತರರು ಇದ್ದರು.

16/11/2025

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಕ್ಷಣಗಣನೆ
ಚಿತ್ತಾಪುರ; ದೇಶ ಹಾಗೂ ರಾಜ್ಯದ ಗಮನ ಸೆಳೆದಿರುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಚಿತ್ತಾಪುರ ಪಟ್ಟಣ ಸಜ್ಜಾಗಿದೆ.
ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ಕೇಸರಿ ಬಾವುಟಗಳು, ಬಂಟಿಂಗ್ಸ್'ಗಳು, ಪ್ಲೇಕ್ಸ್'ಗಳು ರಾರಾಜಿಸುತ್ತಿವೆ. ನಾಲ್ಕು ಕಡೆ ಪಥಸಂಚಲನಕ್ಕೆ ಸ್ವಾಗತ ಕೋರುವ ಕಮಾನುಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಇಡೀ ಪಟ್ಟಣ ಕೇಸರಿ ಮಯವಾಗಿದೆ.
ಹೈಕೋರ್ಟ್ ಅಂಗಳದಲ್ಲಿ ಚಿತ್ತಾಪುರ ತಾಲೂಕು ಆಡಳಿತ ನೀಡಿರುವ ಷರತ್ತು ಬದ್ದ ಅನುಮತಿಯೊಂದಿಗೆ ಇಂದು ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಆರ್‌ಎಸ್‌ಎಸ್‌ ಗಣವೇಷಧಾರಿಗಳ ಪಥಸಂಚಲನ ನಡೆಯಲಿದೆ.
ಪಥಸಂಚಲನದ ವೇಳೆ ಯಾವುದೇ ರೀತಿಯ ತೊಂದರೆ ಹಾಗೂ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಪಟ್ಟಣಕ್ಕೆ ಸಂಪರ್ಕಿಸುವ ನಾಲ್ಕೂ ರಸ್ತೆಗಳಲ್ಲಿ ಪೊಲೀಸ್ ನಾಕಾ ಬಂಧಿ ಹಾಕಿದ್ದು, ಪಟ್ಟಣ ಪ್ರವೇಶಿಸುವ ಬಸ್ ಸೇರಿದಂತೆ ಬಹುತೇಕ ಎಲ್ಲ ವಾಹನಗಳನ್ನೂ ತಪಾಸಣೆಗೆ ಒಳಪಡಿಸುತ್ತಿದ್ದಾರೆ.
ಪಥಸಂಚಲನ ಸಾಗುವ ಸಮಯದಲ್ಲಿ ಹತ್ತು ಡ್ರೋನ್ ಕ್ಯಾಮೆರಾಗಳು ದೃಶ್ಯ ಸೆರೆ ಹಿಡಿದು ನಿಗಾ ವಹಿಸಲು ಸಜ್ಜಾಗಿವೆ. ಸಮಗ್ರ ದೃಶ್ಯ ಸೆರೆ ಹಿಡಿಯಲೆಂದು ವಿಡಿಯೊ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.

Address

Gulbarga

Website

Alerts

Be the first to know and let us send you an email when Gulbarga Fast News 24/7 posts news and promotions. Your email address will not be used for any other purpose, and you can unsubscribe at any time.

Share