AVS TIMES

AVS TIMES AIMA MEDIA

02/06/2025

ಮೋದಿ ವಿಶ್ವಗುರು ಪಟ್ಟ ಏನಾಯುತು?
ಡೊನಾಲ್ಡ್ ಟ್ರಂಪ್ ನಮ್ಮ ಗೆಳೆಯ ಗೆಳೆಯ ಅಂತ ಮಾತಾಡುತ್ತಾ ಇದ್ದವರು ಇವಾಗ ಏನಾತುಯ್ತು.

ಇತ್ತೀಚಿಗೆ ಬೆಂಗಳೂರಿನಲ್ಲಿ ಶ್ರೀ ಪ್ರಿಯಾಂಕ್ ಖರ್ಗೆ ಸರ್ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿ ರವರ ಅಧ್ಯಕ್ಷತೆಯಲ್ಲಿ ಕಲಬುರಗಿ ಜಿಲ್ಲೆ...
02/06/2025

ಇತ್ತೀಚಿಗೆ ಬೆಂಗಳೂರಿನಲ್ಲಿ ಶ್ರೀ ಪ್ರಿಯಾಂಕ್ ಖರ್ಗೆ ಸರ್ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿ ರವರ ಅಧ್ಯಕ್ಷತೆಯಲ್ಲಿ ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಹಾಗೂ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಬಗ್ಗೆ ಚರ್ಚಿಸಲಾಯಿತು.

23/05/2025

ಇಂದು ಕಲಬುರಗಿ ಜಿಲ್ಲಾ ಪತ್ರಿಕಾ ಭವನ್ ದಲ್ಲಿ ಮಾಜಿ ಸಚಿವರು ಕೆಪಿಸಿಸಿ ಉಪಾಧ್ಯಕ್ಷರು ಶ್ರೀ ಎಚ್ ಆಂಜನೇಯ ಅವರು ಒಳಮೀಸಲಾತಿ ಸಮೀಕ್ಷೆ ಜಾಗೃತಿ ಮೂಡಿಸುವ ಬಗ್ಗೆ ಮತ್ತು ನಮ್ಮ ಕಾಂಗ್ರೆಸ್ ಸರ್ಕಾರ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ನಮಗೆ ನ್ಯಾಯ ಕೊಟ್ಟೆ ಕೊಡುತ್ತಾರೆ ಎಂದು ಭರವಸೆ ನಮ್ಮಗೆ ಇದೆ ಎಂದು ಸಡಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
#ಮಾದಿಗ #ನ್ಯಾಯ

26/11/2024
25/11/2024

31/07/2024

RDPR & ITBT ಸಚಿವರು ಕಲಬುರಗಿ ಉಸ್ತುವಾರಿ ಶ್ರೀ ಹಾಗೂ KKRDB ಅಧ್ಯಕ್ಷರು ಶ್ರೀ ಅಜಯ್ ಧರಮ್ ಸಿಂಗ್ ನೇತೃತ್ವದಲ್ಲಿ ಕಲಬುರಗಿ
ಬಹಮನಿ ಕೋಟೆಗೆ ಹೊಸ ಕಳೆ
ಕೋಟೆಯ ಸುತ್ತಲಿನ ಕಂದಕಗಳು ಸ್ವಚ್ಛ ಕೊಳಚೆ ನೀರು ಸೇರದಂತೆ ವಿಭಜನೆ ಮಾಡಲಾಗಿದೆ ಮತ್ತು ಐತಿಹಾಸಿಕ ಬಹಮನಿ ಕೋಟೆಗೆ ಈಗ ಹೊಸ ಕಳೆ
ಬರುತ್ತಿದೆ. KKRDB ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗದಲ್ಲಿ ನಡೆಯುತ್ತಿದ್ದು, ಕೋಟೆಯ ಸುತ್ತ ಅಸ್ವಚ್ಛತೆ, ಕೊಳಚೆಗೆ ಮುಕ್ತಿ ದೊರೆಯುತಿದೆ.
ಕಲಬುರಗಿಯ ಕೋಟೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಕೋಟೆಯ ಸುತ್ತಲಿನ ಕಂದಕಗಳಲ್ಲಿ ಚರಂಡಿ ನೀರು ತುಂಬಿತ್ತು. ದನ ಕರುಗಳು, ಎಮ್ಮೆಗಳು ಈಜಾಡುತ್ತಿದ್ದವು. ಇದರಿಂದ ಈ ಕೋಟೆಯನ್ನು ಅಭಿವೃದ್ಧಿಪಡಿಸಬೇಕೆಂದು ಮಹಾನಗರ ಪಾಲಿಕೆ ಅಧಿ ಕಾರಿಗಳು ಪ್ಲಾನ್ ಮಾಡಿ ಕೆಕೆಆರ್‌ಡಿಬಿಗೆ ಹಾಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರಿಂದ ಈಗ ಕೆಕೆಆರ್‌ಡಿಬಿ ಬಿಡುಗಡೆ ಮಾಡಿದ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ಆರಂಭವಾಗಿದ್ದು, ಕೋಟೆಯ ಸುತ್ತಲಿನ ಚಿತ್ರಣ ಬದಲಾಗುತ್ತಿದೆ.
ಸೌಂದರ್ಯೀಕರಣ ಬಾಕಿ ಅಂದು.

ಇಂದು
ಕೆಕೆಆರ್‌ಡಿಬಿಯಿಂದ 3.41 ಕೋಟಿ ಅನುದಾನ
ಕಲಬುರಗಿಯ ಬಹಮನಿ ಕೋಟೆಯ ಅಭಿವೃದ್ಧಿ ಕಾರ್ಯ ಈಗ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ
ಮಂಡಳಿಯು ಬಿಡುಗಡೆ ಮಾಡಿರುವ 3.41 ಕೋಟಿ ರೂ.ಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಈಗಾಗಲೇ ಕೋಟೆಯ 800 ಮೀಟರ್‌ನಲ್ಲಿ ಮಾತ್ರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಈ ಪ್ರದೇಶದಲ್ಲಿ ಕಂದಕದಲ್ಲಿನ ಹೊಲಸು ನೀರು ತೆರವು, ಗಿಡಗಳ ಕಟಿಂಗ್ ಆಗಿದೆ. ಕೋಟೆಯ ಒಳಗಿರುವ ಏಳು
ಬಾವಿಗಳು ಕ್ಲೀನ್ ಆಗಿವೆ. ಕೋಟೆಗೆ ಸೇರುತ್ತಿದ್ದ ಚರಂಡಿ ಹೊಲಸು ನೀರನ್ನು ಡೈನೇಜ್ ಮಾಡಿ ಡೈವಟ್ ೯ ಮಾಡಲಾಗಿದೆ. ಇದರಿಂದ ಕೋಟೆಯ ಕಂದಕಕ್ಕೆ ಈಗ ಹೊಲಸು ನೀರು ಸೇರುತ್ತಿಲ್ಲ.
ಕೋಟೆಯ ಸುತ್ತ ಇನ್ನೂ ಏನೇನು ಆಗಬೇಕು ? ಪ್ರಸ್ತುತ ಡಿ ಸಿಲ್ಡಿಂಗ್‌ ಸಂಪೂರ್ಣ ಮಾಡಲಾಗಿದೆ. ಡೆನೇಜ್ ಮಾಡಿ ಹೊಲಸು ನೀರು ಬರುವುದನ್ನು ತಡೆಯಲಾಗಿದೆ. ಈಗ ಸ್ಟೋನ್ ಪಿಚಿಂಗ್ ಮಾಡಲಾಗುತ್ತಿದೆ. ಬಳಿಕ ಕಾಂಪೌಂಡ್ ಗೋಡೆ ನಿರ್ಮಾಣ, ಕಾಂಪೌಂಡ್ ಗ್ರಿಲ್ ಮಾಡುವ ಕಾರ್ಯಗಳು ಆಗಬೇಕಿದೆ.ಕೋಟೆ ಸುತ್ತ ಅಭಿವೃದ್ಧಿ ಕಾರ್ಯ ಮಾಡುವುದು ಸಂಪೂರ್ಣ 2.5 ಕಿಮೀ ಇದೆ. ಈಗ ಕೆಕೆಆರ್‌ ಡಿಬಿಯಿಂದ ಅಭಿವೃದ್ಧಿ ಆಗುತ್ತಿರುವುದು ಕೇವಲ 850 ಮೀಟರ್ ಮಾತ್ರ. ಈ ಹಿನ್ನೆಲೆಯಲ್ಲಿ ಉಳಿದ ಪ್ರದೇಶವನ್ನೂ ಅಭಿವೃದ್ಧಿ ಮಾಡಲು ಸರಕಾರಕ್ಕೆ ಈಗಾಗಲೇ 20 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಅನುದಾನ ಬಿಡುಗಡೆಯಾದರೆ ಕಂದಕ ಕ್ಲೀನ್ ಮಡುವುದು, ಸೌಂದರ್ಯೀಕರಣ ಮಾಡುವುದು, ಲೈಟಿಂಗ್ ಮಾಡಿಸುವುದು, ಪಾರ್ ಲೈಟಿಂಗ್ ಅಳವಡಿಸುವುದು ಸೇರಿ ಇತರೆ ಕೆಲಸಗಳಿಗೆ ಒಟ್ಟು 14.5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಡಿಪಿಆರ್ ತಯಾರಿಗಿಲ್ಲ. ಅನುದಾನ ಬಿಡುಗಡೆ ನಂತರ ಡಿಪಿಆರ್ ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ
ಪ್ರಸ್ತುತ ಕೋಟೆಗೆ ಹರಿಯುವ ನಾಲಾ ನೀರು ಬಂದ್‌ ಮಾಡಿದ್ದರಿಂದ ಕೋಟೆ ಕಂದಕಕ್ಕೆ ನೀರು ಬಿಡಲು 4 ಎಂಎಲ್‌ಡಿ ವಾಟರ್ ಟ್ರೇಟ್‌ಮೆಂಟ್ ಪ್ಲಾಂಟ್‌ಗೆ 4.50 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ನೀರು ಶುದ್ದೀಕರಣಗೊಳಿಸಿ ಕೋಟೆಯ ಕಂದಕಕ್ಕೆ ಬಿಡುವುದು, ಇನ್ನು ಶ್ರೀ ಶರಣಬಸವೇಶ್ವರ ಅಪ್ಪನ ಕೆರೆಗೆ ವಾಟರ್ ಟ್ರೇಟ್‌ಮೆಂಟ್ ಪ್ಲಾಂಟ್ ನೀರು ಬಿಡುತ್ತಿರುವುದರಿಂದ ಹೂಳು ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಸೆಟಲೆಂಟ್ ಟ್ಯಾಂಕ್ ಹೂಳು ಬೇರ್ಪಡಿಸಿ ನೀರನ್ನು ಕೆರೆಗೆ ಮತ್ತು ಕೋಟೆಗೆ ಬಳಕೆಗೆ ಅನುಕೂಲ ಆಗಲಿದೆ. ಇದಕ್ಕೆ 1 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಒಟ್ಟು 20 ಕೋಟಿ ರೂ. ಸರಕಾರಕ್ಕೆ ಕೇಳಲಾಗಿದೆ.

ಸಿ.ಅನಿರುದ್ಧ ಶ್ರವಣ ಕನಸು ಕೋಟೆಯನ್ನು ಅಭಿವೃದ್ಧಿ ಮಾಡಬೇಕು ಎಂಬುದು ಈ
ಹಿಂದೆ ಕೆಕೆಆರ್ ಡಿಬಿಯ ಕಾರ್ಯದರ್ಶಿ ಆಗಿದ್ದ ಅನಿರುದ್ಧ ಶ್ರವಣ ಅವರ ಕನಸಾಗಿತ್ತು. ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಭಾರತದ ಪುರಾತತ್ವ ಇಲಾಖೆ (ಎಎಸ್‌ಐ) ಅವರು
ಅವಕಾಶ ನೀಡಿದ್ದಿಲ್ಲ. ಆದರೆ, ಅನಿರುದ್ಧಶ್ರವಣ್ ಅವರು ವಿಶೇಷ ಮುತುವರ್ಜಿವಹಿಸಿ ಅಭಿವೃದ್ಧಿಗೆ ಪರವಾನಗಿ ಪಡೆದಿದ್ದರು. ಇದರಿಂದ ಈಗ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

ಪ್ರಸ್ತುತ ಕೆಕೆಆರ್‌ ಡಿಬಿ ಬಿಡುಗಡೆ ಮಾಡಿರುವ 3.41 ಕೋಟಿ ರೂ.ಯಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಕೇವಲ 850 ಮೀಟರ್‌ನಲ್ಲಿ ಕೆಲಸ ನಡೆಯುತ್ತಿದೆ. ಉಳಿದ ಕೆಲಸಗಳಿಗೆ ಸರಕಾರಕ್ಕೆ ಒಟ್ಟು 20 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ಬಿಡುಗಡೆ ನಂತರ ಎಲ್ಲ ಸೌಂದರ್ಯೀಕರಣ, ವಾಟರ್ ಟ್ರೇಟ್‌ಮೆಂಟ್ ಪ್ಲಾಂಟ್ ಸೇರಿ ಇತರೆ ಕಾರ್ಯಗಳು ಆಗಲಿವೆ.
- ಆರ್.ಪಿ.ಜಾಧವ್ ಉಪ ಆಯುಕ್ತ ಮಹಾನಗರ ಪಾಲಿಕೆ
https://youtu.be/rVRTYawMiWc?si=apckokOLOI0nzFxC

ಲಲಿತ ಅಕಾಡೆಮಿ ಮಾಜಿ ಅಧ್ಯಕ್ಷರು, ನಾಡಿನ ಹಿರಿಯ‌ ಕಲಾವಿದರಾದ ಪ್ರೋ ವಿ.ಜಿ.ಅಂದಾನಿಯವರ 75 ನೇ ವರ್ಷದ ವಜ್ರ ಮಹೋತ್ಸವ ಹಾಗೂ ಬಯಲ ಬೆಳಕು ಅಭಿನಂದನ...
13/07/2024

ಲಲಿತ ಅಕಾಡೆಮಿ ಮಾಜಿ ಅಧ್ಯಕ್ಷರು, ನಾಡಿನ ಹಿರಿಯ‌ ಕಲಾವಿದರಾದ ಪ್ರೋ ವಿ.ಜಿ.ಅಂದಾನಿಯವರ 75 ನೇ ವರ್ಷದ ವಜ್ರ ಮಹೋತ್ಸವ ಹಾಗೂ ಬಯಲ ಬೆಳಕು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿ, ಮಾತನಾಡಿದೆ.

ಕಲಬುರಗಿ ಸೇರಿದಂತೆ ಅನೇಕ ಜಿಲ್ಲೆಗಳು ಹಾಗೂ ಹೊರ ರಾಜ್ಯದಲ್ಲೂ ಶಿಷ್ಯ ಬಳಗವನ್ನು ಹೊಂದಿರುವ ಪ್ರೋ.ವಿ.ಜಿ‌ ಅಂದಾನಿ ಅವರು ಕಲಾವಿದರಾಗಿ, ಶಿಕ್ಷಣ ತಜ್ಞರಾಗಿ ಅವಿರತ ಸಾಧನೆಗೈದಿದ್ದಾರೆ.

ಪ್ರೋ.ವಿ.ಜಿ ಅಂದಾನಿ ಅವರ ಶಿಷ್ಯ ಬಳಗ ಸೇರಿ 'ಬಯಲ ಬೆಳಕು' ಅಭಿನಂದನಾ ಗ್ರಂಥ ರೂಪಸಿ, ಬಿಡುಗಡೆಗೊಳಿಸಿರುವುದು ಸಂತಸ ತಂದಿದೆ.

ಸಮಾರಂಭದಲ್ಲಿ ಕಲಬುರಗಿ ಸಂಸದರಾದ ಶ್ರೀ , ವೈದ್ಯಕೀಯ ಶಿಕ್ಷಣ ಸಚಿವರು ಶ್ರೀ ಹಾಗೂ ಗಣ್ಯರು, ಪ್ರೋ.ವಿ.ಜಿ.ಅಂದಾನಿಯವರ ಅಭಿಮಾನಿಗಳು, ಶಿಷ್ಯಂದಿರು, ಕುಟುಂಬ ವರ್ಗದವರು ಉಪಸ್ಥಿತರಿದ್ದರು.

28/06/2024

A couple of days back, I reviewed the progress of all the budget announcements and department programs of the Dept of E & IT/BT.

We are on track to deliver the new initiatives within the next 45-60 days including policies for Biotechnology and Cybersecurity.

ಕೆಲದಿನಗಳ ಹಿಂದೆ, ನಾನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಬಿಟಿ ಇಲಾಖೆಯ ಬಜೆಟ್ ಘೋಷಣೆಗಳು ಹಾಗು ಇಲಾಖೆಯ ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದೆ.

ಮುಂದಿನ 45 ರಿಂದ 60 ದಿನಗಳಲ್ಲಿ ಬಯೋ ಟೆಕ್ನಲಾಜಿ ಮತ್ತು ಸೈಬರ್‌ ಸುರಕ್ಷತೆಯ ನೀತಿಗಳನ್ನು ಒಳಗೊಂಡಂತೆ ಹೊಸ ಯೋಜನೆಗಳನ್ನು ಜಾರಿಗೊಳಿಸಲು ನಾವು ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ.

कुछ दिन पहले मैंने इलेक्ट्रॉनिक्स एवं आईटी बीटी विभाग की बजट घोषणाओं एवं विभागीय कार्यक्रमों की प्रगति समीक्षा बैठक की थी।

अगले 45 से 60 दिनों में हम जैव प्रौद्योगिकी और साइबर सुरक्षा पर नीतियों सहित नई योजनाओं को लागू करने की रूपरेखा तैयार कर रहे हैं।.

Asia’s biggest integrated technology conclave Bengaluru Tech Summit 2023 wins Grand Conference at Exhibition Excellence ...
28/06/2024

Asia’s biggest integrated technology conclave Bengaluru Tech Summit 2023 wins Grand Conference at Exhibition Excellence Awards!

This marks the 2nd consecutive year that BTS has been honored as the Top Knowledge Hub. Our Government’s steadfast commitment to supporting innovation, infrastructure and investments has propelled Karnataka as a major global technological hub and a sought-after investment destination. BTS continues to be a pivotal platform for global industries and technologies, exploring the latest innovations and their impact on businesses and daily life.

As we prepare for the 27th edition, this recognition reinforces Bengaluru Tech Summit’s enduring legacy.

ಎಕ್ಸಿಬಿಷನ್ ಎಕ್ಸಲೆನ್ಸ್ ಅವಾರ್ಡ್'ನಲ್ಲಿ ಏಷ್ಯಾದ ಅತಿದೊಡ್ಡ ಇಂಟಿಗ್ರೇಟೆಡ್ ಟೆಕ್ನಾಲಜಿ ಕಾನ್ಕ್ಲೇವ್ ಆಗಿರುವ 'ಬೆಂಗಳೂರು ಟೆಕ್ ಸಮ್ಮಿಟ್-2023' ಪ್ರತಿಷ್ಠಿತ ಮಹಾ ಸಮ್ಮೇಳನ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಈ ಮೂಲಕ ಬೆಂಗಳೂರು ಟೆಕ್ ಸಮ್ಮಿಟ್ ಸತತ 2ನೇ ವರ್ಷವೂ ಉತ್ಕೃಷ್ಟ ಜ್ಞಾನ ಕೇಂದ್ರ ಎಂಬ ಗೌರವಕ್ಕೆ ಪಾತ್ರವಾಗಿದೆ. ನಾವೀನ್ಯತೆ, ಮೂಲಸೌಕರ್ಯ ಮತ್ತು ಹೂಡಿಕೆಗಳನ್ನು ಬೆಂಬಲಿಸುವ ನಮ್ಮ ಸರ್ಕಾರದ ಬದ್ದತೆಯಿಂದಾಗಿ ಕರ್ನಾಟಕವು ಜಾಗತಿಕ ತಂತ್ರಜ್ಞಾನದ ಹಬ್ ಹಾಗು ಹೂಡಿಕೆಯ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ. ಬೆಂಗಳೂರು ಟೆಕ್ ಸಮ್ಮಿಟ್ ಜಾಗತಿಕ ಉದ್ಯಮಗಳಿಗೆ ಮತ್ತು ತಂತ್ರಜ್ಞಾನಗಳಿಗೆ ಒಂದು ಪ್ರಮುಖ ವೇದಿಕೆಯಾಗಿಯಾಗಿದ್ದು, ನೂತನ ಆವಿಷ್ಕಾರ ಮತ್ತು ದೈನಂದಿನ ಜೀವನದ ಮೇಲೆ ಅವುಗಳ ಪ್ರಭಾವಗಳಿಗೆ ಕಾರಣವಾಗುತ್ತಿದೆ.

ನಾವು 27 ನೇ ಆವೃತ್ತಿಗೆ ತಯಾರಿ ನಡೆಸುತ್ತಿರುವಾಗ, ಈ ಜಾಗತಿಕ ಮನ್ನಣೆಯು ಬೆಂಗಳೂರು ಟೆಕ್ ಶೃಂಗಸಭೆಯ ನಿರಂತರ ಪರಂಪರೆಗೆ ಮತ್ತಷ್ಟು ಬಲ ನೀಡಿದೆ.

ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಪ್ರಾರಂಭಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ದ್ವಿಭಾಷಾ ಬೋಧನಾ ವ...
18/06/2024

ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಪ್ರಾರಂಭ

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ದ್ವಿಭಾಷಾ ಬೋಧನಾ ವಿಧಾನವನ್ನು ಅಳವಡಿಸಲು ನಮ್ಮ ಸರ್ಕಾರವು ನಿರ್ಧರಿಸಿದ್ದು ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಐತಿಹಾಸಿಕ ಹೆಜ್ಜೆಯಾಗಲಿದೆ.

ಪ್ರಸಕ್ತ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ 872 ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕನ್ನಡ ಮತ್ತು ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಭದ್ರಬುನಾದಿ ಹಾಕಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಈ ದ್ವಿಭಾಷಾ ಬೋಧನಾ ವ್ಯವಸ್ಥೆಯು ಸಹಕಾರಿಯಾಗಲಿದೆ.

ಕಲ್ಯಾಣ ಭಾಗದಲ್ಲಿ ಕಲಿಕಾ ಸೌಲಭ್ಯ ವಂಚಿತ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ.

Address

Khb Colony Old Jewargi Road
Gulbarga
585102

Website

Alerts

Be the first to know and let us send you an email when AVS TIMES posts news and promotions. Your email address will not be used for any other purpose, and you can unsubscribe at any time.

Share