ಹಾಸನ ಟಿವಿ - Hassan tv

ಹಾಸನ ಟಿವಿ - Hassan tv Contact information, map and directions, contact form, opening hours, services, ratings, photos, videos and announcements from ಹಾಸನ ಟಿವಿ - Hassan tv, Media/News Company, Hassan Tv, Hassan.

ಹಾಸನದ ಚರಿತ್ರೆ, ಇತಿಹಾಸ, ಜನಪದ , ಸಂಸ್ಕೃತಿಯ ಬಗ್ಗೆ ತಿಳಿಯೋಣ. ನಮ್ಮ ಹುಟ್ಟೂರು, ನೀವಿರುವ ಊರು, ನಿಮಗಿಷ್ಟವಾದ ಊರಿನ ಬಗ್ಗೆ, ಅದರ ಇತಿಹಾಸ, ಸಂಸ್ಕೃತಿ, ಜನಪದ ಆಚರಣೆಗಳನ್ನು ಹೊರಜನರಿಗೆ ತಿಳಿಸೋಣ.... ❤️

ಅ.30 ರಂದು ಬೃಹತ್ ಉದ್ಯೋಗ ಮೇಳ: ಸಿದ್ದತೆಗೆ ಸೂಚನೆ ಹಾಸನ - ಜಿಲ್ಲೆಯ ಯುವ ಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ...
11/09/2025

ಅ.30 ರಂದು ಬೃಹತ್ ಉದ್ಯೋಗ ಮೇಳ: ಸಿದ್ದತೆಗೆ ಸೂಚನೆ ಹಾಸನ - ಜಿಲ್ಲೆಯ ಯುವ ಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಅ.30 ರಂದು ನಗರದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಆಯೋಜನೆಗೆ ಕ್ರಮಕೈಗೊಳ್ಳುವಂತೆ ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ ಪಟೇಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿAದು ಉದ್ಯೋಗ ಮೇಳ ಕುರಿತು ಅಧಿಕಾರಿಗಳೊಂದಿಗೆ ಪೂರ್ವ ಸಿದ್ದತಾ ಸಭೆ ನಡೆಸಿ ಮಾತನಾಡಿದ ಅವರು ಯುವ ಜನತೆ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಿಂದಲೂ ಪ್ರಚಾರ ನೀಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಉದ್ಯೋಗ ಮೇಳದ ಕುರಿತು ಎಲ್ಲೆಡೆ ಮಾಹಿತಿಗಾಗಿ ಪೋಸ್ಟರ್‌ಗಳನ್ನು ಅಳವಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು, ಉದ್ಯೋಗ ಮೇಳದಲ್ಲಿ ಭಾಗವಹಿಸಲು ನೊಂದಣಿ ಮಾಡಿಕೊಳ್ಳುವಂತೆ ಅರಿವು ಮೂಡಿಸಿ ಎಂದು ತಿಳಿಸಿದರು.

ಎಸ್.ಎಸ್‌ಎಲ್.ಸಿ, ಪಿಯುಸಿ, ಐಟಿಐ ಡಿಪ್ಲೋಮೊ, ಪದವಿ ವ್ಯಾಸಾಂಗ ಮಾಡಿರುವರಿಗೂ ಕೂಡ ಉದ್ಯೋಗ ಕಲ್ಪಿಸಲು ಹೆಚ್ಚಿನ ಉದ್ಯೋಗದಾತ ಕಂಪನಿಗಳನ್ನು ಆಹ್ವಾನಿಸುವಂತೆ ಉದ್ಯೋಗಾಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಮಟ್ಟದಲ್ಲಿಯೂ ಕೂಡ ತಹಸಿಲ್ದಾರ್ ಹಾಗೂ ಕಾರ್ಯನಿರ್ವಹಕ ಅಧಿಕಾರಿಗಳು ಸಭೆಯ ಸ್ಥಳೀಯವಾಗಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಂಡು ಭಾಗವಹಿಸಲು ಅರಿವು ಮೂಡಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಅವರು ಕೃಷಿ ಪ್ರಧಾನವಾದ ಜಿಲ್ಲೆಯಾಗಿರುವುದರಿಂದ ಕೃಷಿ ಒತ್ತು ನೀಡುವ ಕಂಪನಿಗಳನ್ನು ಉದ್ಯೋಗ ಮೇಳಕ್ಕೆ ಆಹ್ವಾನಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಮಾತನಾಡಿ ಗ್ರಾಮ ಪಂಚಾಯಿತಿ ಹಂತದಲ್ಲಿ ಹೆಚ್ಚಿನ ಪ್ರಚಾರ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಹೆಚ್ಚಿನ ಯುವಜನತೆ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಉತ್ತೇಜಿಸಲಾಗುವುದು ಎಂದು ತಿಳಿಸಿದರು.
ಈ ವೇಳೆಯಲ್ಲಿ ಇಂಡಿಯಾ ಸ್ಕಿಲ್ಸ್-2025ರ ಕುರಿತಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಉದ್ಯೋಗಧಿಕಾರಿ ವಿಜಯಲಕ್ಷಿö್ಮ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
*******-

10/09/2025

ಹಾಸನ್ ಮಹಾರಾಜ್ " ದೊಡ್ಡಗಣಪತಿ
ಹೇಮಾವತಿ ನಗರ ಹಾಸನ

ಹಾಸನಾಂಬೆಯ ಸನ್ನಿಧಿಗೆ ಬರುವಾಗ, ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಸ್ತ್ರ ಧರಿಸುವ ಮೂಲಕ ಸನಾತನ ಧರ್ಮಕ್ಕೆ ಗೌರವ ಸಲ್ಲಿಸೋಣ. 🙏✅ ಹೀಗೆ ಮಾ...
08/09/2025

ಹಾಸನಾಂಬೆಯ ಸನ್ನಿಧಿಗೆ ಬರುವಾಗ, ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಸ್ತ್ರ ಧರಿಸುವ ಮೂಲಕ ಸನಾತನ ಧರ್ಮಕ್ಕೆ ಗೌರವ ಸಲ್ಲಿಸೋಣ. 🙏

✅ ಹೀಗೆ ಮಾಡಿ (Do’s): ಸಂಪ್ರದಾಯಬದ್ಧ ವಸ್ತ್ರ ಧರಿಸಿ, ಸಂಸ್ಕೃತಿಯನ್ನು ಉಳಿಸೋಣ.

❌ ಹೀಗೆ ಮಾಡಬಾರದು. (Don’ts): ದೇವಾಲಯದೊಳಗೆ ಪಾಶ್ಚಾತ್ಯ ವಸ್ತ್ರ ಧರಿಸಲು ಅವಕಾಶವಿಲ್ಲ.

ದೇವಾಲಯದ ಪಾವಿತ್ರ್ಯವನ್ನು ಗೌರವ ಮತ್ತು ಭಕ್ತಿಯಿಂದ ಕಾಪಾಡೋಣ. 🌿
Dress with Devotion at Hassanaamba Temple ✨
When we step into the divine presence of Hassanaamba, let’s honor the tradition with our attire. 🙏

✅ Do’s: Wear traditional dress that reflects our culture & respect.
❌ Don’ts: Avoid western or casual wear inside the sacred premises.
Let’s preserve the sanctity of the temple with dignity and devotion. 🌿
ಹಾಸನ ನಮ್ಮ ಊರು - Haasana Namma Ooru
ಹಾಸನ ಟಿವಿ - Hassan tv ಹಾಸನ ಟಿವಿ ಹಾಸನ ಟಿವಿ

08/09/2025

ಕಾಲಭೈರವೇಶ್ವರ ದೇವಸ್ಥಾನ - ಆದಿಚುಂಚನಗಿರಿ

ಹಾಸನಾಂಬ ದೇವಾಲಯದ ಪವಿತ್ರ ಪ್ರಾಂಗಣವನ್ನು ಪರಿಶುದ್ಧವಾಗಿಯೂ, ಹಸಿರಾಗಿಯೂ ಇಡೋಣ.ದೇವಾಲಯದ ಸುತ್ತಮುತ್ತ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧಿಸಲಾಗಿದೆ....
07/09/2025

ಹಾಸನಾಂಬ ದೇವಾಲಯದ ಪವಿತ್ರ ಪ್ರಾಂಗಣವನ್ನು ಪರಿಶುದ್ಧವಾಗಿಯೂ, ಹಸಿರಾಗಿಯೂ ಇಡೋಣ.
ದೇವಾಲಯದ ಸುತ್ತಮುತ್ತ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧಿಸಲಾಗಿದೆ. ಪ್ಲಾಸ್ಟಿಕ್‌ಗೆ ಬಳಸದೇ ಇರುವ ಸಂಕಲ್ಪ ಮಾಡುವ ಮೂಲಕ ನಾವು ಪರಿಸರವನ್ನು ಕಾಪಾಡುವ ಕಾರ್ಯಕ್ಕೆ ಮನಮಾಡೋಣ.
🙏 ಭಕ್ತಿಯನ್ನು ಹೃದಯದಲ್ಲಿ ಇಟ್ಟು, ಪರಿಸರ ಸ್ನೇಹಿಯಾಗಿ ವರ್ತಿಸೋಣ.

ಹಾಸನಾಂಬೆಯ ಸನ್ನಿಧಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಕಂಕಣಬದ್ಧರಾಗೋಣ.
Let us keep the sacred premises of Hassanaamba Temple clean and green. 🙏
Plastic is banned around the temple. By taking a pledge to avoid the use of plastic, let us commit ourselves to protecting the environment.
🙏 With devotion in our hearts, let us act in an eco-friendly manner.
Let us unite to make Hassanaamba’s abode plastic-free.
ಹಾಸನ ನಮ್ಮ ಊರು - Haasana Namma Ooru
ಹಾಸನ ಟಿವಿ ಹಾಸನ ಟಿವಿ ಹಾಸನ ಟಿವಿ - Hassan tv

*ಶ್ರೀ ಗುರು ಜೇನುಕಲ್ ಸಿದ್ದೇಶ್ವರ ಸ್ವಾಮಿ ಯವರ ಹುಣ್ಣಿಮೆ ಚಿತ್ರಣಗಳು*🙏
07/09/2025

*ಶ್ರೀ ಗುರು ಜೇನುಕಲ್ ಸಿದ್ದೇಶ್ವರ ಸ್ವಾಮಿ ಯವರ ಹುಣ್ಣಿಮೆ ಚಿತ್ರಣಗಳು*🙏

06/09/2025

ಹಾಸನ ಮಹಾ ಗಣಪತಿ ವಿಸರ್ಜನೆ

06/09/2025

ಹಾಸನ ಮಹಾ ಗಣಪತಿ ರಿಂಗ್ ರಸ್ತೆ ಹಾಸನ

ಹಾಸನಾಂಬ ದೇವಾಲಯದ ಪವಿತ್ರ ಪ್ರಾಂಗಣದಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ದೇವಿಯ ಸಮೀಪ ಸಾಗಲು ಇಡುವ ಹೆಜ್ಜೆ.ಚಪ್ಪಲಿ ಹಾಗೂ ಪಾದರಕ್ಷೆಗಳನ್ನು ಬಸ್...
06/09/2025

ಹಾಸನಾಂಬ ದೇವಾಲಯದ ಪವಿತ್ರ ಪ್ರಾಂಗಣದಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ದೇವಿಯ ಸಮೀಪ ಸಾಗಲು ಇಡುವ ಹೆಜ್ಜೆ.
ಚಪ್ಪಲಿ ಹಾಗೂ ಪಾದರಕ್ಷೆಗಳನ್ನು ಬಸ್‌ಸ್ಟ್ಯಾಂಡ್‌ / ಪಾರ್ಕಿಂಗ್‌ನಲ್ಲಿರುವ ನಿಗದಿತ ಸ್ಟ್ಯಾಂಡ್‌ಗಳಲ್ಲಿ ಇಡಬೇಕು. ಇದು ಕೇವಲ ನಿಯಮವಲ್ಲ — ನಮ್ಮ ದೇವಿಗೆ ಸಲ್ಲಿಸುವ ಗೌರವ ಹಾಗೂ ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡುವ ನಮ್ಮ ಸಂಪ್ರದಾಯ.

ಎಲ್ಲರೂ ಬನ್ನಿ, ಸಂಪ್ರದಾಯವನ್ನು ಪಾಲಿಸಿ, ಪಾವಿತ್ರ್ಯವನ್ನು ಕಾಪಾಡಿ, ಹಾಸನಮ್ಮನ ಆಶೀರ್ವಾದವನ್ನು ನಿಜವಾದ ಭಕ್ತಿಯಿಂದ ಪಡೆಯೋಣ.

🙏 At the sacred Hassanamba Temple, every step you take inside is a step closer to divinity.
Slippers and footwear are to be left outside at the designated stands in bus stands and parking areas. This is not just a rule — it is a way of showing respect to our goddess and keeping the temple pure for all devotees.
Let us honor the tradition, preserve the sanctity, and experience the blessings barefoot.

ನಿಸ್ವಾರ್ಥ ಸೇವೆ ಶಿಕ್ಷಕರದ್ದು : ಶಾಸಕ ಸ್ವರೂಪ್ ಪ್ರಕಾಶ್ಹಾಸನ ಸೆ.05 ಶಿಕ್ಷಕರ ಸೇವೆ ನಿಸ್ವಾರ್ಥ ಸೇವೆಯಾಗಿದ್ದು, ಶಿಕ್ಷಕರು ಪವಿತ್ರ ಕೆಲಸವನ್...
05/09/2025

ನಿಸ್ವಾರ್ಥ ಸೇವೆ ಶಿಕ್ಷಕರದ್ದು : ಶಾಸಕ ಸ್ವರೂಪ್ ಪ್ರಕಾಶ್
ಹಾಸನ ಸೆ.05 ಶಿಕ್ಷಕರ ಸೇವೆ ನಿಸ್ವಾರ್ಥ ಸೇವೆಯಾಗಿದ್ದು, ಶಿಕ್ಷಕರು ಪವಿತ್ರ ಕೆಲಸವನ್ನು ಮಾಡುತ್ತಿದ್ದಾರೆ ಎಂದರಲ್ಲದೆ, ಎಲ್ಲರೂ ತಾವು ಓದಿದ ಶಾಲೆಗೆ, ವಿದ್ಯೆ ಕಲಿಸಿದ ಗುರುಗಳಿಗೆ ಧನ್ಯವಾದಗಳನ್ನು ತಿಳಿಸಬೇಕು ಎಂದು ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್‌ರವರ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ ಅವುಗಳ ಜೀರ್ಣೋದ್ಧಾರ ಮಾಡುವ ಕೆಲಸವನ್ನು ಕೈಗೆತ್ತುಕೊಳ್ಳುತ್ತೇನೆ ಎಂದರಲ್ಲದೆ, ಚುನಾವಣೆ ವೇಳೆ ಹಾಗೂ ಮತ್ತಿತರ ಸಂದರ್ಭದಲ್ಲಿ ಶಿಕ್ಷಕರುಗಳು ತಮ್ಮ ಕಷ್ಟಗಳನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದೀರಿ ನಿಮಗೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದರು.

ಇತ್ತೀಚೆಗೆ ರೈತರು ಮಕ್ಕಳ ಶಾಲೆಗೆ ಕಳುಹಿಸುವ ಬದಲು ಹೊಲದ ಕೆಲಸ ಮಾಡಿಸಿ ಕೊಳ್ಳುತ್ತಿದ್ದಾರೆ. ಹಾಗೆ ಮಾಡದೇ ಶಾಲೆಗೆ ಕಳುಹಿಸಬೇಕು ಎಂದರಲ್ಲದೆ, ತಮ್ಮ ತಂದೆಯ ಹೆಸರಿನಲ್ಲಿ ಎರಡು ಶಾಲೆಗಳನ್ನು ತೆರೆೆಯುವುದಾಗಿ ತಿಳಿಸಿದರು. ಇದೇ ವೇಳೆ ಎಲ್ಲಾ ಶಿಕ್ಷಕರು ಗುರುಭವನವನದ ಕೆಲಸ ಮಾಡಿಸಿ ಕೊಡಲು ಮನವಿ ಮಾಡಿದರು. ಆ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಶಾಸಕರು ಮುಂದಿನ ವರ್ಷದೊಳಗೆ ಕೆಲಸ ಮಾಡಿಸಿ ಕೊಡುತ್ತೇನೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಮಾತನಾಡಿ ಶಿಕ್ಷಕರು ನಮ್ಮ ಜೀವನದ ಅವಿಭಾಜ್ಯ ಅಂಗ. ಮೊದಲಿಂದಲೂ ಶಿಕ್ಷಣವೆಂದರೆ ನನಗೆ ಒಲವು, ನಾವು ಉನ್ನತ ಪದವಿ ಹೊಂದಲು ಶಿಕ್ಷಕರೇ ಕಾರಣ ಹಾಗಾಗಿ ನಮ್ಮ ಗುರುಗಳಿಗೆ ನಮನಗಳ ಹೇಳಬೇಕು. ನಿಸ್ವಾರ್ಥವಾಗಿ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟು ಜೀವನ ಮಾಡುತ್ತಿರುವವರು ಶಿಕ್ಷಕರು. ಪ್ರತಿಯೊಂದು ವಿಷಯದಲ್ಲಿಯೂ ಗುರುಗಳನ್ನು ಕಾಣುವಂತಹ ಸಂಸ್ಕೃತಿ ಇರುವ ದೇಶ ನಮ್ಮದು. ಗುರುವಿನಿಂದ ಶಿಕ್ಷಣ ಕಲಿಯುವುದೇ ನಿಜವಾದ ಕಲಿಕೆ ಎಂದರು.

ಸAಪೂರ್ಣ ವ್ಯಕ್ತಿತ್ವ ರೂಪಿಸಲು ಗುರುವಿನ ಶಿಕ್ಷಣದಿಂದ ಮಾತ್ರ ಸಾಧ್ಯ. ಯಾವುದೇ ತಂತ್ರಜ್ಞಾನ ಮುಂದುವರೆದರು, ಕೃತಕ ಬುದ್ಧಿಮತ್ತೆ ಬಂದರು ಶಿಕ್ಷಕರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದ ಅವರು ಶಿಕ್ಷಕರಿಂದ ಮಾತ್ರ ಕಲಿಯುವಂತಹದಿಲ್ಲ ಅದರ ಜೊತೆಗೆ ಪ್ರತಿಯೊಬ್ಬರಿಂದಲೂ ಪ್ರತಿಕ್ಷಣವು ಕಲಿಯುವಂತಹದ್ದು ಇದೆ. ನಿಜವಾಗಿಯೂ ಸಂತೋಷವಾಗಿರುವ ಶಿಕ್ಷಕನೇ ಒಳ್ಳೆಯ ಉತ್ತಮ ಶಿಕ್ಷಕರು ಅವರೇ ಒಳ್ಳೆಯ ಶಿಕ್ಷಣ ನೀಡಲಿಕ್ಕೆ ಸಾಧ್ಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಚಂದ್ರಕುಮಾರ್ ಎಂಬುವವರು ಉತ್ತರ ಬಡಾವಣೆ ಶಾಲೆಗೆ ಹತ್ತು ಸಾವಿರ ದೇಣಿಗೆಯನ್ನು ಆ ಶಾಲೆಯ ಮುಖ್ಯ ಶಿಕ್ಷಕರಿಗೆ ಜಿಲ್ಲಾಧಿಕಾರಿ ಅವರ ಮೂಲಕ ನೀಡಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ ಅವರು ಪ್ರತಿಯೊಬ್ಬರು ಅವರವರ ಸಾಮರ್ಥ್ಯದ ಮೇರೆಗೆ ಸರ್ಕಾರಿ ಶಾಲೆ ಉಳಿಸಲು ಪ್ರಯತ್ನಿಸಬೇಕು ಎಂದರು.

ಶಿಕ್ಷಣಕ್ಕೆ ಸಾವಿತ್ರಿ ಭಾಪುಲೆ, ಜ್ಯೋತಿ ಭಾಪುಲೆ, ರಾಧಾಕೃಷ್ಣ ಅವರಿಂದ ಎಲ್ಲರ ಕೊಡುಗೆ ಅಪಾರ. ಸರ್ಕಾರಿ ಶಾಲೆ ಉಳಿಸಿ ಅಭಿವೃದ್ಧಿ ಪಡಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ನೀವೆಲ್ಲರೂ ಮನಸ್ಸು ಮಾಡಿದ್ದೀರಿ. ಆ ಕನಸು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಮಹಾನಗರ ಪಾಲಿಕೆಯ ಮಹಾಪೌರರಾದ ಹೇಮಾಲತ ಕಮಲಕುಮಾರ್ ಎಂ.ಕೆ ಅವರು ಮಾತನಾಡಿ ಶಿಕ್ಷಕರನ್ನು ವಿದ್ಯಾರ್ಥಿಗಳು ಪೂಜ್ಯ ಭಾವನೆಯಲ್ಲಿ ನೋಡಿದರೆ ಉನ್ನತ ಸ್ಥಾನ ಹೊಂದುತ್ತಾರೆ. ಅವರಿಗೆ ದೇವರು ಒಳ್ಳೆಯ ಪ್ರತಿಫಲ ಕೊಡುತ್ತಾನೆ. ತಾಯಿಯೇ ಮೊದಲ ಗುರುವು ಆದರೂ ಕ್ರಮಬದ್ಧವಾಗಿ ಶಿಕ್ಷಣ ಕಲಿಯಲು ಗುರುಗಳು ಬೇಕು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಪಿ ಕೃಷ್ಣೇಗೌಡ ಅವರು ಮಾತನಾಡಿ ಓದುವ ಹಂತದಲ್ಲಿಯೇ ಪ್ರಶ್ನಿಸುವ ಮನೋಭಾವ ಬೆಳೆಸಿ ಕೊಂಡಿದ್ದವರು ರಾಧಕೃಷ್ಣನ್ ಅವರು ಶಿಕ್ಷಣಕ್ಕೆ ನೀಡಿರುವ ಕೊಡುಗೆ ಅಪಾರ ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು.

ಜಾನಪದ ವಿದ್ವಾಂಸರು ಮತ್ತು ವಿಶ್ರಾಂತ ಪ್ರಾಧ್ಯಾಪಕರಾದ ಹಂಪನಹಳ್ಳಿ ತಿಮ್ಮೇಗೌಡ ಅವರು ಮಾತನಾಡಿ ಗುರುವಿಗೆ ಬಹಳಷ್ಟು ಸ್ಥಾನಮಾನಗಳಿವೆ, ರಾಧಾಕೃಷ್ಣನ್ ಯಾವ ಪ್ರಶಸ್ತಿಗೂ ಅವಲಂಬಿಸಿ ಹೋಗಲಿಲ್ಲ ಬದಲಿಗೆ ಪ್ರಶಸ್ತಿಗಳೇ ಅವರನ್ನು ಹುಡುಕಿಕೊಂಡು ಬಂದಿವೆ. ಕಾರಣ ಅವರು ಸಮಾಜದ ಬದಲಾವಣೆಗೆ ತೊಡಗಿಸಿ ಕೊಂಡಿದ್ದರಿAದ ಹಾಗಾಗಿ ಪ್ರತಿಯೊಬ್ಬ ಶಿಕ್ಷಕರು ಜನಪ್ರಿಯ ಶಿಕ್ಷಕರಾಗುವುದಕ್ಕಿಂತ ಪರಿಣಾಮಕಾರಿ ಶಿಕ್ಷಕರಾಗಿ ಎಂದು ಹೇಳಿದರು.

ಶಿಕ್ಷಕರನ್ನು ಗುರುತಿಸಿ ವಿದ್ಯೆ ಕಲಿತ ವಿದ್ಯಾರ್ಥಿಗಳು, ಸಮಾಜ ಈ ದಿನವನ್ನು ಆಚರಿಸಬೇಕು ಎಂದರಲ್ಲದೆ, ಶಿಕ್ಷಕರಿಗೆ ಸಮಾಜದಲ್ಲಿರುವ ಗೌರವ ಸಮಾಜದಲ್ಲಿ ಬೇರೆಯವರಿಗಿಲ್ಲ. ಶಿಕ್ಷಕರ ಹುದ್ದೆ ನಿಷ್ಕಳಂಕವಾದುದು, ಶಿಕ್ಷಕರು ಆತ್ಮ ವಿಶ್ವಾಸ, ಆತ್ಮ ವಿಮರ್ಶೆ, ಬದ್ಧತೆಯಿಂದ ಇರುವುದನ್ನು ಕಲಿತುಕೊಳ್ಳಬೇಕು. ಶಿಕ್ಷಣ ಇಂದು ಜ್ಞಾನದಿಂದ, ಅರಿವಿನಿಂದ, ವಿವೇಕದಿಂದ ದೂರ ಆಗುತ್ತಿದೆ ಅದನ್ನು ಉಳಿಸುವ ಕೆಲಸ ನೀವು ಮಾಡಬೇಕು ಎಂದು ರಾಧಕೃಷ್ಣನ್ ಅವರ ಕುರಿತು ಸವಿವರವಾಗಿ ಉಪನ್ಯಾಸ ಮಾಡಿದರು.

ಇದೇ ವೇಳೆ ಸಂಸದರಾದ ಶ್ರೇಯಸ್ ಎಂ.ಪಟೇಲ್ ಅವರ ಅನುಪಸ್ಥಿತಿಯಲ್ಲಿ ಅವರು ಕಳುಹಿಸಿದ ಸಂದೇಶವನ್ನು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಲರಾಮ ಅವರು ಪ್ರಸ್ತುತ ಪಡಿಸಿದರು. ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಮತ್ತು ಜಿಲ್ಲೆಯ ಎಲ್ಲಾ ಶಾಲೆಯ ಶಿಕ್ಷಕರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
*******

 #ಶ್ರೀ_ಹಾಸನಾಂಬ_ದೇವಿ_ದರ್ಶನ2025_ವೇಳಾಪಟ್ಟಿ
05/09/2025

#ಶ್ರೀ_ಹಾಸನಾಂಬ_ದೇವಿ_ದರ್ಶನ2025_ವೇಳಾಪಟ್ಟಿ

04/09/2025

ಅರಸೀಕೆರೆ ತಾಲ್ಲೂಕು ಮಾಡಾಳು ಶ್ರೀ ಸ್ವರ್ಣಗೌರಿ ದೇವಿಯ ವಿಸರ್ಜನಾ ಮಹೋತ್ಸವವು ಇಂದು ಸಂಜೆ ಭಕ್ತಜನಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.

Address

Hassan Tv
Hassan
573201

Telephone

+919886463333

Website

Alerts

Be the first to know and let us send you an email when ಹಾಸನ ಟಿವಿ - Hassan tv posts news and promotions. Your email address will not be used for any other purpose, and you can unsubscribe at any time.

Share