Active News 24×7

  • Home
  • Active News 24×7
*ಅರಕಲಗೂಡು ತಾಲೂಕಿನ. ಮಲ್ಲಿಪಟ್ಟಣ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ* ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಜಿಲ್ಲಾ ಏಡ್ಸ್ ನ...
13/08/2025

*ಅರಕಲಗೂಡು ತಾಲೂಕಿನ. ಮಲ್ಲಿಪಟ್ಟಣ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ* ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಸನ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗ ಹಾಗೂ ಗ್ರಾಮ ಪಂಚಾಯತ ಮಲ್ಲಿಪಟ್ಟಣ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಸನ ಇವರುಗಳ ಸಹಯೋಗದಲ್ಲಿ ಮಲ್ಲಿಪಟ್ಟಣದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕರಾದ ಪರಶುರಾಮ ಶಿರೂರ ಅವರು ಮಾತನಾಡಿ ಆರೋಗ್ಯ ಇಲಾಖೆಯ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಸನದ ಅಡಿಯಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಹಾಸನ ಜಿಲ್ಲೆಯಲ್ಲಿ ನೂರು ಹೈ ರಿಸ್ಕ್ ಇರುವಂತಹ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಆ ಗ್ರಾಮಗಳಲ್ಲಿ ವಲಸಿಗರು ಹಾಗೂ ಟ್ರಕ್ಕರ್ ಮತ್ತು ಡ್ರೈವರ್ ಮುಂತಾದ ರಿಸ್ಕ್ ವರ್ತನೆಯಲ್ಲಿರುವಂತ ಜನರನ್ನ ಗುರುತಿಸಿ ಅವರುಗಳಿಗೆ ಸೂಕ್ತವಾದ ಹೆಚ್ಐವಿ ತಪಾಸಣೆಗಳನ್ನು ಮಾಡುವುದರ ಮೂಲಕ ಪ್ರತಿಯೊಂದು ಗ್ರಾಮಗಳಲ್ಲಿಯೂ ಈ ರೀತಿಯಲ್ಲಿ ತಪಾಸಣಾ ಶಿಬಿರಗಳ ಮೂಲಕ ಹೆಚ್ಐವಿ ಕಾಯಿಲೆ ಹರಡುವ ವಿಧಾನ ಹಾಗೂ ಹೆಚ್ಐವಿ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳನ್ನ ಕುರಿತು ಜನರಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದು ಇತ್ತೀಚಿನ ದಿನಗಳಲ್ಲಿ ಸಲಿಂಗ-ಕಾಮ ಲೈಂಗಿಕ ಕ್ರಿಯೆ ಹೆಚ್ಚು ಕಂಡು ಬರುತ್ತಿರುವುದರಿಂದ ಅವಿವಾಹಿತ ಯುವಕರಲ್ಲಿ ಎಚ್ಐವಿ ಖಚಿತ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿರುವುದು ನೋವಿನ ಸಂಗತಿ ಯಾಗಿದೆ. ಆದ್ದರಿಂದ ರಾಜ್ಯದಲ್ಲಿ ಹಾಸನ ಜಿಲ್ಲೆ ಹೆಚ್ ಐ ವಿ ಸೊಂಕೀತರಲ್ಲಿ 13 ನೇ ಸ್ಥಾನದಲ್ಲಿದೆ ಜಿಲ್ಲೆಯಲ್ಲಿ ಒಟ್ಟು 12 ಸಾವಿರಕ್ಕಿಂತ ಹೆಚ್ಚು ಜನರು ಹೆಚ್ ಐ ವಿ ಸೊಂಕಿತರಿದ್ದು ತಾಲೂಕಿನಲ್ಲಿ 350 ಹೆಚ್ಚು ಜನರು ಸೊಂಕಿತರಿದ್ದು ಹೆಚ್ ಐ ವಿ ಕಾಯಿಲೆಗೆ ಸಂಬಂಧ ಪಟ್ಟಂತೆ ಮಾತ್ರೆಗಳನ್ನು ಕುಡಿಯುತ್ತಿದ್ದಾರೆ. ಆದ್ದರಿಂದ ಈ ರೀತಿಯ ತಪಾಸನ ಶಿಬಿರಗಳ ಮೂಲಕ ಪ್ರತಿಯೊಂದು ಗ್ರಾಮಗಳಲ್ಲಿ ಎಚ್ಐವಿ ಕ್ಷಯ ರೋಗ ಸಿಪಿಲಿಸ್ ಹೆಪಟೈಟಿಸ್ ಡೆಂಗ್ಯೂ ಕಾಯಿಲೆಯ ಕುರಿತು ಜನರಲ್ಲಿ ಜಾಗೃತಿ ಹಾಗೂ ತಪಾಸಣೆ ಕೈಗೊಳ್ಳುವಂತದ್ದು ಈ ತರದ ಶಿಬಿರಗಳ ಮುಖ್ಯ ಉದ್ದೇಶವಾಗಿರುತ್ತದೆ. ಸಾರ್ವಜನಿಕರ ತಮ್ಮ ವೈಯಕ್ತಿಕ ವೈಯಕ್ತಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಏನಾದರೂ ಸಂಶಯಗಳಿದ್ದರೆ ಸರ್ಕಾರದ ಹೆಲ್ಪ್ ಲೈನ್ ಆಗಿರುವ 1097 ನಂಬರಿಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುಬೇಕೆಂದು ತಿಳಿಸಲಾಯಿತು ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು ಹಾಗೂ ಸೊಳ್ಳೆಯಿಂದ ರಕ್ಷಣೆ ಪಡೆಯುವಂತಹ ಮಾರ್ಗೋಪಾಯಗಳನ್ನ ಅನುಸರಿಸಿಕೊಂಡು ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಬೇಟಿಯಾಗಿ ರಕ್ತ ತಪಾಸನೆಗಳನ್ನ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. NCD ವಿಭಾಗದ ಆಪ್ತಸಮಾಲೋಚಕರಾದ ಉಮೇಶ ಅವರು ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದ ಒತ್ತಡ ಹಾಗೂ ಮಧುಮೇಹ ಕಾಯಿಲೆಗಳನ್ನು ಪತ್ತೆ ಮಾಡುವುದು ಕಾಯಿಲೆ ಬಂದರೆ ಜೀವನ ಶೈಲಿಯನ್ನು ಮತ್ತು ಊಟದ ವಿಧಾನಗಳನ್ನು ಬದಲಾಯಿಕೊಳ್ಳಬೇಕು ಅದರಿಂದ ಆಗುವಂತ ದುಷ್ಪರಿಣಾಮಗಳನ್ನು ಮುನ್ನೆಚರಿಕಾ ಕ್ರಮಗಳನ್ನು ಕುರಿತು ಮಾಹಿತಿ ನೀಡಿದರು ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ ಎಚ್ಐವಿ ಅಂತ ಮಾರಕ ಕಾಯಿಲೆಗಳನ್ನು ಪತ್ತೆ ಹಚ್ಚುವಂತಹ ಕಾರ್ಯಕ್ರಮ ಈ ರೀತಿಯ ಶಿಬಿರಗಳಲ್ಲಿ ಕಂಡುಬರುತ್ತದೆ ಆದ್ದರಿಂದ ಜನರು ಈ ರೀತಿಯ ಉಚಿತ ತಪಾಸಣಾ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕೆಂದು ಮಾತನಾಡಿದರು ಸುಮಾರು 75 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು 75 ಜನರು ಮಧುಮೇಹ ಅಧಿಕ ರಕ್ತದ ಒತ್ತಡ ಹೆಚ್ಐವಿ ಹಾಗೂ ಕ್ಷಯ ರೋಗ ಪರೀಕ್ಷೆಯನ್ನು ಮಾಡಿಸಿಕೊಂಡರು. ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮಲ್ಲಿಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಐಸಿಟಿಸಿ ಪ್ರಯೋಗಶಾಲಾ ತಂತ್ರಜ್ಞರಾದ ಗೌರಮ್ಮ ಹಾಗೂ ಎನ್ ಸಿ ಡಿ ವಿಭಾಗದ ವೈದ್ಯಾಧಿಕಾರಿಗಳಾದ ಡಾಕ್ಟರ್ ಪ್ರೀತಮ್ ಹಾಗೂ ಆಪ್ತಸಮಾಲೋಚಕರಾದ ಉಮೇಶ್ ಶುಶ್ರೂಷಕರಾದ ಲಲಿತಾ ಹಾಸನದ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತಾಲೂಕಾ ಕ್ಷೇತ್ರಕಾರ್ಯಕರ್ತರಾದ ಚಂದ್ರಶೇಖರ್ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು ಇತರರು ಶಿಬಿರದಲ್ಲಿ ಭಾಗವಹಿಸಿದ್ದರು

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಆರ್‌ಸಿಬಿ ಅಭಿಮಾನಿಗಳು ಸಾ*ನ್ನಪ್ಪಿದ್ದರು. ಇದಕ್ಕೆ ಕಾಂಗ್ರೆಸ್‌ ಸರ್ಕಾರದ...
11/08/2025

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಆರ್‌ಸಿಬಿ ಅಭಿಮಾನಿಗಳು ಸಾ*ನ್ನಪ್ಪಿದ್ದರು.

ಇದಕ್ಕೆ ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷ್ಯವೆ ಕಾರಣ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮೈತ್ರಿಕೂಟದ ಹಾಗೂ ಪಕ್ಷಗಳ ಶಾಸಕರು ಮತ್ತು ಪರಿಷತ್ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಿದರು.

11/08/2025

ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಪರಿಸರಕ್ಕಾಗಿ ನಾವು. ನೆನಪಿನ ಉದ್ಯಾನವನ ಸ್ವಚ್ಚತಾ ಕಾರ್ಯಕ್ರಮ
ಪರಿಸರಕ್ಕಾಗಿ ನಾವು ನೆನಪಿನ ಉದ್ಯಾನವನ ಅಭಿವೃದ್ಧಿಪಡಿಸಲು ಅರಕಲಗೂಡು ಮತ್ತು ಹಾಸನ ಜಿಲ್ಲೆಯಾದ್ಯಂತ ಸರಿಸುಮಾರು 250ಕ್ಕೂ ಹೆಚ್ಚು ಜನ ಇಂದು ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯ ಎಸ್ಎಂ ಕೃಷ್ಣ ನಗರದಲ್ಲಿ ಇರುವ ಮೂರು ಎಕರೆ ವಿಸ್ತೀರ್ಣದ ಉದ್ಯಾನವನವನ್ನು ಇಂದು ಬೆಳಗ್ಗೆ 6 ಗಂಟೆಯಿಂದಲೇ ಶ್ರಮದಾನ ಮಾಡಿದರು ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಹಾಸನ ಮಹಾನಗರ ಪಾಲಿಕೆಯ ಮೇಯರ್ ರವರು ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಟಿ ರಾಮಸ್ವಾಮಿ ರವರು ಆಕಾಶವಾಣಿ ಹಾಸನ ಅಧಿಕಾರಿಯದ ವಿಜಯ ಅಂಗಡಿಯವರು ಹಾಸನ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಕೈಜೋಡಿಸಿ ಪ್ರತಿವಾರ ಕೈ ಜೋಡಿಸುವುದಾಗಿ ಭರವಸೆ ನೀಡಿದ್ದಾರೆ.

ಇಂದು ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹಾಗೂ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಹೆಚ್.ಪಿ...
11/08/2025

ಇಂದು ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹಾಗೂ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಹೆಚ್.ಪಿ.ಶ್ರೀಧರ್ ಗೌಡ ರವರು ಅನ್ನಭಾಗ್ಯ ಯೋಜನೆಯಲ್ಲಿ 10 ಕೆ.ಜಿ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ದೊಡ್ಡಮಗ್ಗೆ ಹೋಬಳಿಯ ಹುಲ್ಲಿಕಲು ಗ್ರಾಮದ ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು.

ಪಂಚ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಹೆಚ್ಚು ಸಹಾಯವಾಗುತ್ತದೆಂದು ತಿಳಿಸಿ.ಗ್ಯಾರಂಟಿ ಯೋಜನೆಗಳ ಅನುಕೂಲತೆಗಳ ಬಗ್ಗೆ ಜಾಗೃತಿಮೂಡಿಸಿಸದರು ಹಾಗೂ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಸದಸ್ಯರುಗಳು,ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದ್ಯಸರುಗಳು,ಆಹಾರ ಇಲಾಖೆಯ ಶಿರಸ್ತಾರದ ಮಂಜುನಾಥ್ ರವರು,ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು,ಕಂದಾಯ ನಿರೀಕ್ಷಕರು,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವರು,ಗ್ರಾಮ ಲೆಕ್ಕಾಧಿಕಾರಿ ರವರು,ವಿದ್ಯುತ್ ಇಲಾಖೆಯ ಅಧಿಕಾರಿಗಳು,ಗ್ರಾಮದ ಮುಖಂಡರುಗಳು,ಪಕ್ಷದ ಮುಖಂಡರುಗಳು ಹಾಗೂ ಫಲಾನುಭವಿಗಳು ಹಾಜರಿದ್ದರು.

10/08/2025

ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಪರಿಸರಕ್ಕಾಗಿ ನಾವು. ನೆನಪಿನ ಉದ್ಯಾನವನ ಸ್ವಚ್ಚತಾ ಕಾರ್ಯಕ್ರಮ.
ಪರಿಸರಕ್ಕಾಗಿ ನಾವು ನೆನಪಿನ ಉದ್ಯಾನವನ ಅಭಿವೃದ್ಧಿಪಡಿಸಲು ಅರಕಲಗೂಡು ಮತ್ತು ಹಾಸನ ಜಿಲ್ಲೆಯಾದ್ಯಂತ ಸರಿಸುಮಾರು 250ಕ್ಕೂ ಹೆಚ್ಚು ಜನ ಇಂದು ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯ ಎಸ್ಎಂ ಕೃಷ್ಣ ನಗರದಲ್ಲಿ ಇರುವ ಮೂರು ಎಕರೆ ವಿಸ್ತೀರ್ಣದ ಉದ್ಯಾನವನವನ್ನು ಇಂದು ಬೆಳಗ್ಗೆ 6 ಗಂಟೆಯಿಂದಲೇ ಶ್ರಮದಾನ ಮಾಡಿದರು ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಹಾಸನ ಮಹಾನಗರ ಪಾಲಿಕೆಯ ಮೇಯರ್ ರವರು ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಟಿ ರಾಮಸ್ವಾಮಿ ರವರು ಆಕಾಶವಾಣಿ ಹಾಸನ ಅಧಿಕಾರಿಯದ ವಿಜಯ ಅಂಗಡಿಯವರು ಹಾಸನ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಕೈಜೋಡಿಸಿ ಪ್ರತಿವಾರ ಕೈ ಜೋಡಿಸುವುದಾಗಿ ಭರವಸೆ ನೀಡಿದ್ದಾರೆ.

10/08/2025

ಪರಿಸರಕ್ಕಾಗಿ ನಾವು. ನೆನಪಿನ ಉದ್ಯಾನವನ ನಿರ್ಮಾಣಕ್ಕಾಗಿ ಶ್ರಮಾದಾನ. ಎ.ಟಿ.ರಾಮಸ್ವಾಮಿ.

ಪರಿಸರಕ್ಕಾಗಿ ನಾವು, ನೆನಪಿನ ಉದ್ಯಾನವನ ಅಭಿವೃದ್ಧಿಪಡಿಸಲು ಅರಕಲಗೂಡು ಮತ್ತು ಹಾಸನ ಜಿಲ್ಲೆಯಾದ್ಯಂತ ಸರಿಸುಮಾರು 250ಕ್ಕೂ ಹೆಚ್ಚು ಜನ ಇಂದು ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯ ಎಸ್ಎಂ ಕೃಷ್ಣ ನಗರದಲ್ಲಿ ಇರುವ ಮೂರು ಎಕರೆ ವಿಸ್ತೀರ್ಣದ ಉದ್ಯಾನವನವನ್ನು ಇಂದು ಬೆಳಗ್ಗೆ 6 ಗಂಟೆಯಿಂದಲೇ ಶ್ರಮದಾನ ಮಾಡಿದರು ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಹಾಸನ ಮಹಾನಗರ ಪಾಲಿಕೆಯ ಮೇಯರ್ ರವರು ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಟಿ ರಾಮಸ್ವಾಮಿ ರವರು ಆಕಾಶವಾಣಿ ಹಾಸನ ಅಧಿಕಾರಿಯದ ವಿಜಯ ಅಂಗಡಿಯವರು ಹಾಸನ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಕೈಜೋಡಿಸಿ ಪ್ರತಿವಾರ ಕೈ ಜೋಡಿಸುವುದಾಗಿ ಭರವಸೆ ನೀಡಿದ್ದಾರೆ
#ಎಟಿ_ರಾಮಸ್ವಾಮಿ #ಮಾಜಿಶಾಸಕರು #ಅರಕಲಗೂಡು #ಹಾಸನ #ಪರಿಸರ #ಉದ್ಯಾನವನ #ಪಾರ್ಕ್

10/08/2025

ತಾಖತ್ ಇದ್ರೆ DK ಮುಖ್ಯಮಂತ್ರಿ ಮಾಡಿ | ನಾನು ಗೌಡ | ಕುರುಬ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿದ ವ್ಯಕ್ತಿ..!?

10/08/2025

ಬೆಂಗಳೂರು : ಡಾ ವಿಷ್ಣುವರ್ಧನ್ ಸ್ಮಾರಕ ರಾತ್ರೋ ರಾತ್ರಿ ತೆರವು. ಅಭಿಮಾನಿಗಳ ಅಸಮಾಧಾನ...

ಬೆಂಗಳೂರು ನಮ್ಮ ಮೆಟ್ರೋದ ಹಳದಿ ಮಾರ್ಗ ಉದ್ಘಾಟನೆಗೆ ಆಗಮಿಸಿದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ರವರನ್ನು ಅರಕಲಗೂಡು  ಶಾಸಕರ...
10/08/2025

ಬೆಂಗಳೂರು ನಮ್ಮ ಮೆಟ್ರೋದ ಹಳದಿ ಮಾರ್ಗ ಉದ್ಘಾಟನೆಗೆ ಆಗಮಿಸಿದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ರವರನ್ನು ಅರಕಲಗೂಡು ಶಾಸಕರಾದ ಎ ಮಂಜು ರವರು ಹಾಗೂ ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಬಾಲಕೃಷ್ಣ ರವರು ಸ್ವಾಗತಿಸಿದ ಸಂದರ್ಭ....
#ಅರಕಲಗೂಡು #ಶಾಸಕರು #ಎಮಂಜು #ನರೇಂದ್ರ‌ಮೋದಿ #ಪ್ರಧಾನಮಂತ್ರಿ #ನಮ್ಮಮೆಟ್ರೋ

09/08/2025

ಅರಕಲಗೂಡು ಟೌನ್ ಪ್ಲಾನ್ ವಿಚಾರ. ಶಾಸಕರೆ ಗಾಳಿಯಲ್ಲಿ ಗುಂಡು ಹೊಡೆಯವ ಕೆಲಸ ಮಾಡಬೇಡಿ. ಭ್ರಷ್ಟರ ಹೆಸರು ನೇರವಾಗಿ ಹೇಳಿ. ಕೆಳ ಮಟ್ಟದ ರಾಜಕೀಯ ಬಿಟ್ಟು ಪಟ್ಟಣದ ಅಭಿವೃದ್ಧಿಗೆ ಕೆಲಸ ಮಾಡಿ. ಎಂದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರುಮೂರ್ತಿ.

ಪಟ್ಟಣದ ಸಾಲಗೆರಿ ರಸ್ತೆ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೆ ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮನೆ, ಸೈಟ್ ಬಿಟ್ಟುಕೊಟ್ಟವರಿಗೆ ಪರಿಹಾರ ನೀಡಿ ನಂತರ ರಸ್ತೆಗೆ ಬಳಸಿಕೊಳ್ಳಲಿ ಯಾರು ಬೇಡ ಎಂದವರು ಎನ್ನುವ ಮೂಲಕ‌ ತಿರುಗೇಟು ನೀಡಿದರು.

09/08/2025

ಅರಕಲಗೂಡು : ಶಾಸಕರ ಮೇಲೆ ಆಧಾರ ರಹಿತ ಆರೋಪ ಬಿಟ್ಟು ಅಭಿವೃದ್ಧಿ ಸಹಕರಿಸಲಿ. ಶ್ರೀಧರ್ ಗೌಡ ವಿರುದ್ಧ ಜೆಡಿಎಸ್ ಮುಖಂಡರ ಅಸಮಾಧಾನ.

09/08/2025

ಅರಕಲಗೂಡು. ಪೆನ್ ಡ್ರೈವ್ ಆಡಿಯೋ ಸಾಕ್ಷಿ ಹಿಡಿದು ಆಣೆ ಪ್ರಮಾಣಕ್ಕೆ ಶಾಸಕರನ್ನು ಕಾದು ಕುಳಿತು ವಾಪಸ್ ಆದ ಶ್ರೀಧರ್ ಗೌಡ.

ತಾರಕಕ್ಕೆ ಏರಿದ ಸುನಂದ ಫೀಡ್ ಫ್ಯಾಕ್ಟರಿ ವಿಚಾರ.

15% ಶೇರು ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ಆರೋಪಿದ್ದ ಶ್ರೀಧರ್ ಗೌಡ‌

ಟೌನ್ ಪ್ಲಾನಿಂಗ್ ವಿಚಾರ ಅಧಿಕಾರಿಗಳನ್ನು ಭೇಟಿ ಮಾಡಿ ಫೋಟೋ ಹಾಕಿಕೊಂಡಿದ್ದು ನಾನೆ.

ಕೈಗಾರಿಕೋದ್ಯಮಕ್ಕೆ 200 ಎಕರೆ ಮೀಸಲು ಇಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೆ.

ಉದ್ಯೋಗ ಸೃಷ್ಟಿಯೇ ನನ್ನ ಗುರಿ.

ಶಾಸಕರೆ ಒಂದು ದಿನಾಕ ನಿಗದಿ ಮಾಡಲಿ ನಾನು ಬರುವೆ ಎಂದ ಶ್ರೀಧರ್ ಗೌಡ.

#ಅರಕಲಗೂಡು

Address


Alerts

Be the first to know and let us send you an email when Active News 24×7 posts news and promotions. Your email address will not be used for any other purpose, and you can unsubscribe at any time.

Contact The Business

Send a message to Active News 24×7:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share