The Beauty Of Hassan - ಕಲೆಗಳ ಬೀಡು

The Beauty Of Hassan - ಕಲೆಗಳ ಬೀಡು ನಮ್ಮ ಹಾಸನ ಜಿಲ್ಲೆಯ ಬಗ್ಗೆ ತಿಳಿದುಕೊಳ್ಳಲು ತಪ್ಪದೇ The Beauty of Hassan - ಕಲೆಗಳ ಬೀಡು ಪೇಜ್ follow ಮಾಡಿ?
(1)

ಹೊಯ್ಸಳರ ಕಾಲದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ಜಿಲ್ಲೆ ಹಾಸನ. ಇಂದು ಈ ತಾಣ ಹೊಯ್ಸಳರ ವಾಸ್ತುಶಿಲ್ಪದಿಂದ ಜಗತ್‍ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಅನೇಕ ಹಳ್ಳಿ ಹಾಗೂ ಪಟ್ಟಣಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಶಿಲ್ಪಕಲೆಯ ಆಗರಗಳು ಗುರುತಿಸಲ್ಪಟ್ಟಿವೆ. ಐತಿಹಾಸಿಕ ಪ್ರದೇಶಗಳ ಜೊತೆ ಆರ್ಥಿಕ, ತಾಂತ್ರಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತಿದೆ. ಈ ಸುಂದರ ಜಿಲ್ಲೆಯಲ್ಲಿ ನೋಡಬಹುದಾದಂತಹ ಅನೇಕ ತಾಣಗಳಿವೆ.

ಈ ತಾಣ ಬೆಂಗಳೂರಿನಿಂದ 182.6 ಕಿ.ಮೀ. ವ್ಯಾಪ್ತಿಯಲ್ಲಿದೆ. ಹಿತಕರವಾದ

ವಾತಾವರಣ ಇರುವುದರಿಂದ ವರ್ಷದ ಎಲ್ಲಾ ಕಾಲದಲ್ಲೂ ಪ್ರವಾಸ ಕೈಗೊಳ್ಳಬಹುದು. ಕುಟುಂಬದವರೊಡನೆ, ಸ್ನೇಹಿತರೊಡನೆ ಬಂದರೂ ಸ್ವಾಗತಿಸುವ ಈ ತಾಣದ ಸೊಬಗನ್ನು ಸವಿಯುವುದೇ ಒಂದು ಚೆಂದ. ವೀಕ್ಷಿಸಬೇಕಾದ ಪ್ರವಾಸಿ ತಾಣಗಳ ಬಗ್ಗೆ ಈ ನಿಮ್ಮ ಪೇಜ್ " The Beauty Of Hassan - ಕಲೆಗಳ ಬೀಡು " ಮೂಲಕ ತಿಳಿಯೋಣ...

14/09/2025

ಮೊಸಳೆ ಹೊಸಳ್ಳಿ ದುರಂತ :ಮೃತರ ಕುಟುಂಬದ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತ ನಮ್ಮ ಮಾಜಿ ಪ್ರಧಾನ ಮಂತ್ರಿ ದೇವೇಗೌಡರು ರವರು 🙏🏻

ಹಾಸನ ತಾಲೂಕು ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ನೆನ್ನೆ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಲಾರಿ ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿ ಪೋಲೀಸರಿಂ...
13/09/2025

ಹಾಸನ ತಾಲೂಕು ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ನೆನ್ನೆ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಲಾರಿ ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿ ಪೋಲೀಸರಿಂದ ಘಟನೆ ಕುರಿತು ಮಾಹಿತಿ ಪಡೆದ ವಿರೋದ ಪಕ್ಷದ ನಾಯಕ ಆರ್ ಅಶೋಕ್ ರವರು .

ಹಾಸನ, ಸೆಪ್ಟೆಂಬರ್ 13: ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಟ್ರಕ್ ನುಗ್ಗಿ ಸಂಭವಿಸಿದ ಭೀ*ಕರ ಅಪಘಾ*ತದಲ್ಲಿ 9 ಜನ ಮೃ*ಪಟ...
13/09/2025

ಹಾಸನ, ಸೆಪ್ಟೆಂಬರ್ 13: ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಟ್ರಕ್ ನುಗ್ಗಿ ಸಂಭವಿಸಿದ ಭೀ*ಕರ ಅಪಘಾ*ತದಲ್ಲಿ 9 ಜನ ಮೃ*ಪಟ್ಟಿದ್ದು, ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಶನಿವಾರ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಹಾಸನದ ಹಿಮ್ಸ್ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿದರು. ದುರಂತದಲ್ಲಿ ಮೃ*ಪಟ್ಟವರ ಕುಟುಂಬದವರಿಗೆ ಜೆಡಿಎಸ್ ಪಕ್ಷದ ವತಿಯಿಂದ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ದೇವೇಗೌಡ ಘೋಷಣೆ ಮಾಡಿದರು. ಗ*ಭೀರವಾಗಿ ಗಾ*ಯಗೊಂಡವರಿಗೆ 25 ಸಾವಿರ ರೂ., ಸ್ವಲ್ಪ ಪ್ರಮಾಣದಲ್ಲಿ ಗಾ*ಯಗೊಂಡವರಿಗೆ 20 ಸಾವಿರ ರೂ., ಚಿಕ್ಕಪುಟ್ಟ ಗಾಯಗೊಂಡವರಿಗೆ ತಲಾ 15 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದು , ಸರ್ಕಾರ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ ದೇವೇಗೌಡ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡುತ್ತೇನೆ ಎಂದರು.

13/09/2025

ಹಾಸನದ ಮೊಸಳೆ ಹೊಸಳ್ಳಿಯಲ್ಲಿ ನಡೆದ ಭೀಕರ ದುರಂತದಲ್ಲಿ ಸಿಲುಕಿ ಮೃತಪಟ್ಟವರ ಗ್ರಾಮಕ್ಕೆ ಭೇಟಿ ನೀಡಿದ ಮಾನ್ಯ ಕಂದಾಯ ಸಚಿವರಾದ ಶ್ರೀ Krishna Byre Gowda ಅವರು ಭೇಟಿ ಮಾಡಿ, ಸಾಂತ್ವನ ಹೇಳಿದ ನಂತರ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದರು.

ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ; ಹಗಲು ರಾತ್ರಿ ಎನ್ನದೆ ನಮ್ಮ ಹಾಸನ ಜಿಲ್ಲೆಯ ನಾಯಕರು ಕ್ಷಣಾರ್ಧದಲ್ಲಿ ಆಸ್ಪತ್ರೆಗೆ ಭೇಟ...
13/09/2025

ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ; ಹಗಲು ರಾತ್ರಿ ಎನ್ನದೆ ನಮ್ಮ ಹಾಸನ ಜಿಲ್ಲೆಯ ನಾಯಕರು ಕ್ಷಣಾರ್ಧದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಎಲ್ಲರಿಗೂ ಧನ್ಯವಾದಗಳು.*

ಹಾಸನ ಗಣಪತಿ ಮೆರವಣಿಗೆಯಲ್ಲಿ ಸಂಭವಿಸಿದ ದುರಂತ ಹಾಗೂ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ  ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗ...
13/09/2025

ಹಾಸನ ಗಣಪತಿ ಮೆರವಣಿಗೆಯಲ್ಲಿ ಸಂಭವಿಸಿದ ದುರಂತ ಹಾಗೂ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಹಾಸನ ಜಿಲ್ಲೆ ಸಂಸದರಾದ ಶ್ರೇಯಸ್ ಪಟೇಲ್ ಹಾಗೂ ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಜೊತೆ ಚರ್ಚೆ ನಡೆಸಿದರು

ಹಾಸನ ಗಣೇಶ ಮೆರವಣಿಗೆ ದುರಂತ ಇದು ಅತ್ಯಂತ ನೋವಿನ ಘಳಿಗೆ. ಅಪಘಾತ ಸಂತ್ರಸ್ತ ಕುಟುಂಬಗಳ ಜೊತೆ ನಾವೆಲ್ಲರೂ ನಿಲ್ಲೋಣ. – ಸಿದ್ದರಾಮಯ್ಯ ಮುಖ್ಯಮಂತ್...
13/09/2025

ಹಾಸನ ಗಣೇಶ ಮೆರವಣಿಗೆ ದುರಂತ ಇದು ಅತ್ಯಂತ ನೋವಿನ ಘಳಿಗೆ. ಅಪಘಾತ ಸಂತ್ರಸ್ತ ಕುಟುಂಬಗಳ ಜೊತೆ ನಾವೆಲ್ಲರೂ ನಿಲ್ಲೋಣ. – ಸಿದ್ದರಾಮಯ್ಯ ಮುಖ್ಯಮಂತ್ರಿ

-ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.

ಹಾಸನ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಪ್ರಧಾನಿ -ಮೃತರ ಕುಟುಂಬಸ್ಥರಿಗೆ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಣೆ
13/09/2025

ಹಾಸನ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಪ್ರಧಾನಿ
-ಮೃತರ ಕುಟುಂಬಸ್ಥರಿಗೆ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಣೆ

13/09/2025

ಗಣಪತಿ ವಿಸರ್ಜನೆಯ ವೇಳೆ ನಡೆದ ದುರಂತದ EXCLUSIVE ದೃಶ್ಯಾವಳಿ ಮೊಬೈಲ್‌ನಲ್ಲಿ ಸೆರೆ , ಎದೆ ಜಲ್ ಎನಿಸುವ ಆ ಭೀ*ಕರ ದೃಶ್ಯ 😳

ಮೃತಪಟ್ಟವರ ವಿವರ: ಗಣಪತಿ ಮೆರವಣಿಗೆಯ ವೇಳೆ ಲಾರಿಗೆ ಡಿಕ್ಕಿ – 9 ಮಂದಿ ದುರ್ಮರಣ: ಹಾಸನ:ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ...
13/09/2025

ಮೃತಪಟ್ಟವರ ವಿವರ: ಗಣಪತಿ ಮೆರವಣಿಗೆಯ ವೇಳೆ ಲಾರಿಗೆ ಡಿಕ್ಕಿ – 9 ಮಂದಿ ದುರ್ಮರಣ:

ಹಾಸನ:
ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಗಣಪತಿ ಮೆರವಣಿಗೆಯ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಲಾರಿ ಮೆರವಣಿಗೆಯ ಮೇಲೆ ನುಗ್ಗಿದ ಪರಿಣಾಮ 9 ಮಂದಿ ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ. ಮೃತರಲ್ಲಿಂದು ಐವರು ಹಾಸನ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಗ್ರಾಮದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಜೋರಾಗಿ ಸಾಗುತ್ತಿದ್ದಾಗ, ವೇಗವಾಗಿ ಬಂದ ಲಾರಿ ಜನರ ಗುಂಪಿಗೆ ನುಗ್ಗಿದೆ. ಘಟನೆ ಕ್ಷಣಾರ್ಧದಲ್ಲಿ ನಡೆಯುತ್ತಿದ್ದಂತೆಯೇ ಅಟ್ಟಹಾಸ ಉಂಟಾಗಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಹಲವರು ಜೀವ ಉಳಿಸಿಕೊಳ್ಳಲು ಪರದಾಡಿದ್ದಾರೆ. ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ದರೂ, ಒಂಬತ್ತು ಮಂದಿ ಬದುಕುಳಿಯಲಿಲ್ಲ.

ಮೃತರ ವಿವರ:

1. ಪ್ರವೀಣ್ ಕುಮಾರ್ – ಅಂತಿಮ ಬಿಇ ವಿದ್ಯಾರ್ಥಿ, ಬಳ್ಳಾರಿ

2. ರಾಜೇಶ್ (17) – ಕೆ.ಬಿ.ಪಾಳ್ಯ, ಹಳೆಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು

3. ಈಶ್ವರ (17) – ಡನಾಯಕನಹಳ್ಳಿ ಕೊಪ್ಪಲು, ಹೊಳೆನರಸೀಪುರ ತಾಲ್ಲೂಕು

4. ಗೋಕುಲ (17) – ಮುತ್ತಿಗೆಹೀರಳ್ಳಿ ಗ್ರಾಮ, ಹೊಳೆನರಸೀಪುರ ತಾಲ್ಲೂಕು

5. ಕುಮಾರ (25) – ಕಬ್ಬಿನಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು

6. ಪ್ರವೀಣ (25) – ಕಬ್ಬಿನಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು

7. ಮಿಥುನ್ (23) – ಗವಿಗಂಗಾಪುರ ಗ್ರಾಮ, ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ

8. ಸುರೇಶ – ಬಿಇ ವಿದ್ಯಾರ್ಥಿ, ಮಣೆನಹಳ್ಳಿ ಮರ್ಲೆ ಗ್ರಾಮ, ಚಿಕ್ಕಮಗಳೂರು ಜಿಲ್ಲೆ

9. ಪ್ರಭಾಕರ್ (55) – ಬಂಟರಹಳ್ಳಿ, ಹಾಸನ ತಾಲ್ಲೂಕು

ಪೊಲೀಸರ ಕ್ರಮ:
ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಲಾರಿಯ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.

ಸಾಕ್ಷಿದಾರರ ಹೇಳಿಕೆ:
“ಮೆರವಣಿಗೆ ಸಂಭ್ರಮದಿಂದ ಸಾಗುತ್ತಿತ್ತು. ಅಷ್ಟರಲ್ಲಿ ಲಾರಿ ನುಗ್ಗಿದ ಶಬ್ದ ಕೇಳಿ ಎಲ್ಲರೂ ಗಾಬರಿಗೊಂಡರು. ಕ್ಷಣಾರ್ಧದಲ್ಲಿ ಜನರನ್ನು ಬಡಿದು ನೆಲಕ್ಕೆರುಗಿಸಿತು. ದೃಶ್ಯವೇ ಬೆಚ್ಚಿ ಬೀಳಿಸುವಂತಿತ್ತು,” ಎಂದು ಸ್ಥಳೀಯರು ಕಣ್ಣೀರಿನಿಂದ ಹೇಳಿದ್ದಾರೆ.

ಆಸ್ಪತ್ರೆ ವಾತಾವರಣ:
ಮೃತದೇಹಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಆಸ್ಪತ್ರೆಗೆ ಮುಗಿಬಿದ್ದ ಜನರು ಅಳುವಿಲಾಪದಲ್ಲಿ ಮುಳುಗಿದ್ದರು. ಕುಟುಂಬಸ್ಥರ ಕಣ್ಣೀರಿನಲ್ಲಿ ದುಃಖದ ವಾತಾವರಣ ಆವರಿಸಿತ್ತು.

ಈ ದುರ್ಘಟನೆ ಹಿನ್ನೆಲೆಯಲ್ಲಿ ಮೊಸಳೆ ಹೊಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೋಕಾಚ್ಛಾದನ ಆವರಿಸಿದೆ.

--

ಹಾಸನಾಂಬ ಉತ್ಸವ ಕುರಿತು ಶಾಸಕರು-ಸಂಸದರ ಜೊತೆ ಸಭೆಹಾಸನಾಂಬ ಉತ್ಸವವನ್ನು ಅಚ್ಚುಕಟ್ಟಾಗಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಉತ್ಸವವನ್ನು ಆಯೋಜಿಸು...
12/09/2025

ಹಾಸನಾಂಬ ಉತ್ಸವ ಕುರಿತು ಶಾಸಕರು-ಸಂಸದರ ಜೊತೆ ಸಭೆ

ಹಾಸನಾಂಬ ಉತ್ಸವವನ್ನು ಅಚ್ಚುಕಟ್ಟಾಗಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಉತ್ಸವವನ್ನು ಆಯೋಜಿಸುವ ಹಿನ್ನಲೆಯಲ್ಲಿ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಇಂದು ಜಿಲ್ಲೆಯ ಎಲ್ಲಾ ಶಾಸಕರು-ಸಂಸದರ ಜೊತೆಬೆಂಗಳೂರಿನಲ್ಲಿ ಸಭೆ ನಡೆಸಿ ಸಹಕಾರ ಕೋರಿದ್ದಾರೆ.

Address

Hassan
573201

Telephone

+919986473789

Website

Alerts

Be the first to know and let us send you an email when The Beauty Of Hassan - ಕಲೆಗಳ ಬೀಡು posts news and promotions. Your email address will not be used for any other purpose, and you can unsubscribe at any time.

Contact The Business

Send a message to The Beauty Of Hassan - ಕಲೆಗಳ ಬೀಡು:

Share

Category