The Beauty Of Hassan - ಕಲೆಗಳ ಬೀಡು

The Beauty Of Hassan - ಕಲೆಗಳ ಬೀಡು ನಮ್ಮ ಹಾಸನ ಜಿಲ್ಲೆಯ ಬಗ್ಗೆ ತಿಳಿದುಕೊಳ್ಳಲು ತಪ್ಪದೇ The Beauty of Hassan - ಕಲೆಗಳ ಬೀಡು ಪೇಜ್ follow ಮಾಡಿ?

ಹೊಯ್ಸಳರ ಕಾಲದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ಜಿಲ್ಲೆ ಹಾಸನ. ಇಂದು ಈ ತಾಣ ಹೊಯ್ಸಳರ ವಾಸ್ತುಶಿಲ್ಪದಿಂದ ಜಗತ್‍ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಅನೇಕ ಹಳ್ಳಿ ಹಾಗೂ ಪಟ್ಟಣಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಶಿಲ್ಪಕಲೆಯ ಆಗರಗಳು ಗುರುತಿಸಲ್ಪಟ್ಟಿವೆ. ಐತಿಹಾಸಿಕ ಪ್ರದೇಶಗಳ ಜೊತೆ ಆರ್ಥಿಕ, ತಾಂತ್ರಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತಿದೆ. ಈ ಸುಂದರ ಜಿಲ್ಲೆಯಲ್ಲಿ ನೋಡಬಹುದಾದಂತಹ ಅನೇಕ ತಾಣಗಳಿವೆ.

ಈ ತಾಣ ಬೆಂಗಳೂರಿನಿಂದ 182.6 ಕಿ.ಮೀ. ವ್ಯಾಪ್ತಿಯಲ್ಲಿದೆ. ಹಿತಕರವಾದ

ವಾತಾವರಣ ಇರುವುದರಿಂದ ವರ್ಷದ ಎಲ್ಲಾ ಕಾಲದಲ್ಲೂ ಪ್ರವಾಸ ಕೈಗೊಳ್ಳಬಹುದು. ಕುಟುಂಬದವರೊಡನೆ, ಸ್ನೇಹಿತರೊಡನೆ ಬಂದರೂ ಸ್ವಾಗತಿಸುವ ಈ ತಾಣದ ಸೊಬಗನ್ನು ಸವಿಯುವುದೇ ಒಂದು ಚೆಂದ. ವೀಕ್ಷಿಸಬೇಕಾದ ಪ್ರವಾಸಿ ತಾಣಗಳ ಬಗ್ಗೆ ಈ ನಿಮ್ಮ ಪೇಜ್ " The Beauty Of Hassan - ಕಲೆಗಳ ಬೀಡು " ಮೂಲಕ ತಿಳಿಯೋಣ...

ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಜಿಲ್ಲೆಯ ಹಿರಿಯ ಸಾಹಿತಿ ಶ್ರೀಮತಿ ಭಾನು ಮುಷ್ತಾಕ್ ಮತ್ತು ದೀಪ ಭಾಸ್ತಿ ರವರಿಗೆ ನಾಗರಿಕಾ ಸನ್ಮಾನ ...
09/06/2025

ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಜಿಲ್ಲೆಯ ಹಿರಿಯ ಸಾಹಿತಿ ಶ್ರೀಮತಿ ಭಾನು ಮುಷ್ತಾಕ್ ಮತ್ತು ದೀಪ ಭಾಸ್ತಿ ರವರಿಗೆ ನಾಗರಿಕಾ ಸನ್ಮಾನ ಕಾರ್ಯಕ್ರಮ ಇಂದು ನಗರದ ಕಲಾಭವನದಲ್ಲಿ ನಡೆಯಿತು 💚💚💚..

ಎದೆಯ ಹಣತೆ (ಹಾರ್ಟ್ ಲ್ಯಾಂಪ್) ಕೃತಿಗೆ ಬೂಕರ್ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಚಾರ. ಇತಿಹಾಸದ ಪುಟಗಳಲ್ಲಿ ಸೇರುವ ದಿನ ಇದಾಗಿದೆ. ಬಾನು ಮುಷ್ತಾಕ್ ಅವರು ಪ್ರಪಂಚದ ಹೆಮ್ಮೆ. ನಾನು ಸಂಸದನಾಗಿದ್ದಾಗ ಜಿಲ್ಲೆಗೆ ಬೂಕರ್ ಸಿಕ್ಕಿದ್ದು ಅವಿಸ್ಮರಣೀಯ. ಇಡೀ ಪ್ರಪಂಚ ಬಾನು ಮುಷ್ತಾಕ್ ಮೇಡಂ ಅವರನ್ನು ಮೆಚ್ಚಿಕೊಂಡಿದೆ.

ಎದೆಯ ಹಣತೆ ಪುಸ್ತಕವನ್ನು ಎಲ್ಲರೂ ಓದಬೇಕು. ಮಹಿಳಾ ಸ್ಥಿತಿಗತಿಯನ್ನು ಪ್ರತಿಬಿಂಬಿಸುವ ಅಪರೂಪದ ಕಥೆಗಳು ಪುಸ್ತಕದಲ್ಲಿದೆ. ಬಾನು ಮುಷ್ತಾಕ್ ಅವರಿಂದ ಹಾಸನ ಜಿಲ್ಲೆಯ ಹೆಸರು ವಿಶ್ವಕ್ಕೆ ಪರಿಚಯವಾಗಿದೆ. ಜಿಲ್ಲಾಡಳಿತದಿಂದಲೂ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗುವುದು. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

09/06/2025

ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿಯ ದರ್ಶನ | ಹೊಳೆನರಸಿಪುರ | ಹಾಸನ..

ಮುಸಲ್ಮಾನರ ಪವಿತ್ರ ಹಬ್ಬವಾದ ಬಕ್ರೀದ್ ಹಬ್ಬದ ಪ್ರಯುಕ್ತ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ರವರು ಇಂದು 80ಫೀಟ್ ರಸ್ತೆಯಲ್ಲಿರುವ ಹ...
07/06/2025

ಮುಸಲ್ಮಾನರ ಪವಿತ್ರ ಹಬ್ಬವಾದ ಬಕ್ರೀದ್ ಹಬ್ಬದ ಪ್ರಯುಕ್ತ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ರವರು ಇಂದು 80ಫೀಟ್ ರಸ್ತೆಯಲ್ಲಿರುವ ಹೊಸ ಈದ್ಗಾ ಮೈದಾನದ ಬಳಿ ಸಮಸ್ತ ಮುಸಲ್ಮಾನ ಭಾಂದವರಿಗೆ ಹಬ್ಬದ ಶುಭಾಶಯಗಳನ್ನು ಹಾರೈಸಿದರು .

" ತ್ಯಾಗ, ಬಲಿದಾನ, ಭಕ್ತಿ ಮತ್ತು ಸಹಾನುಭೂತಿಯ ಪ್ರತೀಕವಾದ ಬಕ್ರಿದ್ ಎಲ್ಲರಿಗೂ ಒಳಿತು ಮಾಡಲಿ. ಎಲ್ಲರ ಬಾಳು ಆನಂದಮಯವಾಗಿರಲಿ " -

ನಾಡಿನ ಸಮಸ್ತ ಮುಸಲ್ಮಾನ ಬಾಂಧವರಿಗೆ ಪವಿತ್ರ ಬಕ್ರೀದ್ ಹಬ್ಬದ ಶುಭಾಶಯಗಳು 🌙 🌛
07/06/2025

ನಾಡಿನ ಸಮಸ್ತ ಮುಸಲ್ಮಾನ ಬಾಂಧವರಿಗೆ ಪವಿತ್ರ ಬಕ್ರೀದ್ ಹಬ್ಬದ ಶುಭಾಶಯಗಳು 🌙 🌛

ಸಕಲೇಶಪುರ ಬಿಸಿಲೆ ಘಾಟ್ ಸೌಂದರ್ಯದ ಒಂದು ರಮಣೀಯ ದೃಶ್ಯ.
07/06/2025

ಸಕಲೇಶಪುರ ಬಿಸಿಲೆ ಘಾಟ್ ಸೌಂದರ್ಯದ ಒಂದು ರಮಣೀಯ ದೃಶ್ಯ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಮಳೆ ಹಾನಿ ಪ್ರದೇಶಗಳ ವೀಕ್ಷಣೆ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ...
29/05/2025

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಮಳೆ ಹಾನಿ ಪ್ರದೇಶಗಳ ವೀಕ್ಷಣೆ

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಖುಷ್ಬು ಗೋಯಲ್ ಚೌಧರಿ ಅವರು ಇಂದು ಹಾಸನ ಜಿಲ್ಲೆಯ ಮಳೆಹಾನಿ ಪ್ರದೇಶ ಹಾಗೂ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಪ್ರವೀಣ್,ಉಪ ವಿಭಾಗಾಧಿಕಾರಿ ಶೃತಿ ಹಾಗೂ ಮತ್ತಿತರರ ಅಧಿಕಾರಿಗಳು ಹಾಜರಿದ್ದರು.

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ ರಸ್ತೆಗೆ ಕುಸಿಯುತ್ತಿರುವ ಮಣ್ಣು
26/05/2025

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ ರಸ್ತೆಗೆ ಕುಸಿಯುತ್ತಿರುವ ಮಣ್ಣು

ರಾಷ್ಟೀಯ ಹೆದ್ದಾರಿ 75 ರಲ್ಲಿ ಭೂ ಕುಸಿತವಾಗಿರುವ ಪ್ರದೇಶಗಳಿಗೆ ಇಂದು ಸಂಸದರಾದ ಶ್ರೇಯಸ್ ಪಟೇಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕ...
26/05/2025

ರಾಷ್ಟೀಯ ಹೆದ್ದಾರಿ 75 ರಲ್ಲಿ ಭೂ ಕುಸಿತವಾಗಿರುವ ಪ್ರದೇಶಗಳಿಗೆ ಇಂದು ಸಂಸದರಾದ ಶ್ರೇಯಸ್ ಪಟೇಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಸುಗಮ ಸಂಚಾರಕ್ಕೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇನ್ನು ಎರಡು ಕಿ.ಮೀ ರಸ್ತೆ ಕಾಮಗಾರಿಗೆ ಭೂಕುಸಿತವೇ ದೊಡ್ಡ ಸವಾಲಾಗಿದೆ, ತಡೆಗೊಡೆ ಕಟ್ಟಿರುವ ಕೆಲವು ಕಡೆಗಳಲ್ಲಿ ಮಣ್ಣು ಕುಸಿದಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಜವಾಬ್ದಾರಿಯುತವಾಗಿ ಕೆಲಸ ನಿರ್ವಹಣೆ ಮಾಡುವಂತೆ ಎನ್.ಹೆಚ್.ಎ.ಐ ಅಧಿಕಾರಿಗಳಿಗೆ ಸೂಚಿಸಿದರು.

ಈ ಬಾರಿಯೂ ಕೂಡ ಭೂ ಕುಸಿತ ಉಂಟಾಗಿದೆ ಆದರೆ ಕಳೆದ ಬಾರಿ ಮುಂಜಾಗ್ರತ ಕ್ರಮವನ್ನು ಕೈಕೊಂಡಿದ್ದರಿAದ ಆನೆ ಮಹಲ್ ಹಾಗೂ ಮತ್ತಿತರ ಸ್ಥಳಗಳಲ್ಲಿ ಸ್ವಲ್ಪ ಭೂ ಕುಸಿತ ಉಂಟಾಗುತ್ತಿರುವುದರಿAದ ಉಪ ವಿಭಾಗಾಧಿಕಾರಿ ಹಾಗೂ ಎನ್.ಹೆಚ್.ಎ.ಐ ಪ್ರಾಧಿಕಾರದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ನಾವು ಕಳೆದ ಬಾರಿ ಭೇಟಿ ನೀಡಿದಾಗ ಹಾಗೂ ಇಂದು ಭೇಟಿ ನೀಡಿ ನೋಡಿದಾಗ ಸಾಕಷ್ಟು ಕೆಲಸಗಳಾಗಿವೆ. ಆದರೂ ಯಾವ ರೀತಿಯಾಗಿ ವಿಫಲರಾಗಿದ್ದಾರೆ ಎಂದು ಪರಿಶೀಲಿಸಿದಾಗ ಮಣ್ಣು ಬಹಳ ತೇವಾಂಶಯುತವಾಗಿರುವುದರಿAದ ಕುಸಿತ ಉಂಟಾಗುತ್ತಿದೆ, ಹೆದ್ದಾರಿಯ ಬಲಭಾಗದಲ್ಲಿ ರಸ್ತೆ ಸಂಚಾರಕ್ಕೆ ದಾರಿ ಮಾಡಿಕೊಡುತ್ತೇವೆ ಒಟ್ಟಾರೆಯಾಗಿ ಸಾರ್ವಜನಿಕರಿಗೆ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದAತೆ ನೋಡಿಕೊಳ್ಳುತ್ತೇವೆ ಎಂದರು.

ಕೇಂದ್ರ ಸಾರಿಗೆ ಸಚಿವರನ್ನು ಈಗಾಗಲೇ ಭೇಟಿ ಮಾಡಿದ್ದು, 13 ಕೋಟಿಯ ವೈಜ್ಞಾನಿಕ ಯೋಜನೆಯನ್ನು ಸಿದ್ಧಪಡಿಸಿದ್ದಾರೆ. ಈಗಾಗಲೇ ಟೆಂಡರ್ ಕೂಡಾ ಕರೆಯಲಾಗಿದೆ. ವೆಸ್ಟ್ ಬೆಂಗಾಳ್ ಮಾದರಿಯಲ್ಲಿ ಟರ್ಫಿಂಗ್ ಕೆಲಸ ಮಾಡಲು ಏಜೆನ್ಸಿ ಕೂಡ ಫಿಕ್ಸ್ ಆಗಿದೆ ಎಂದ ಅವರು ಕೆಲಸ ಮುಂದಿನ ಮಾನ್ಸೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಮುಂದೆ ಯಾವುದೇ ರೀತಿಯ ಭೂ ಕುಸಿತ ಉಂಟಾಗುವುದಿಲ್ಲ ಎಂದು ತಿಳಿಸಿದರು.

ಯಾವುದೇ ರೀತಿಯ ಪ್ರಾಣಪಾಯವಾಗದ ರೀತಿಯಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲು ನಾವೆಲ್ಲರೂ ಸನ್ನಧ್ಧರಾಗಿದ್ದೇವೆ ಎಂದು ಹೇಳಿದರು.

ಕಾಮಗಾರಿ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ, ಕಳಪೆ ಕಾಮಗಾರಿ ಮಾಡಿದ್ದರೆ ಪರಿಶೀಲಿಸಿ ಅದರ ಸತ್ಯತೆಯನ್ನು ತಿಳಿದು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ಮಳೆಯ ಕಾಲ ಮುಗಿಯುವವರೆಗೂ ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದರು.

ಉಪ ವಿಭಾಗಾಧಿಕಾರಿ ಶೃತಿ, ಎನ್ ಹೆಚ್.ಎ.ಐ ಅಧಿಕಾರಿಗಳು ಹಾಜರಿದ್ದರು.

25/05/2025

ಸಕಲೇಶಪುರ ತಾಲ್ಲೂಕಿನ, ಉದೇವಾರ ಗ್ರಾಮದಲ್ಲಿ ಆಹಾರ ಅರಸಿ ಮರಿಯೊಂದಿಗೆ ಮನೆಯ ಬಾಗಿಲಿಗೆ ಬಂದ ದೈತ್ಯಾಕಾರದ ಕಾಡಾನೆ ಭೀಮ,

ಬೆಳ್ಳಂಬೆಳಿಗ್ಗೆ ಕೆ.ಎಚ್.ಬಸವರಾಜು ಎಂಬುವವರ ಮನೆಯ ಬಳಿ ಬಂದು ನಿಂತ ಕಾಡಾನೆ.ಕಾಡಾನೆಗಳು ಮನೆಯ ಬಳಿ ಬಂದು ನಿಲ್ಲುತ್ತಿದ್ದಂತೆ ಕಿಟಕಿಯಿಂದ ಮನೆ ಮಂದಿ ಕೂಗಿದ ತಕ್ಷಣವೇ ನಿಧಾನವಾಗಿ ಮರಿ ಜೊತೆ ವಾಪಾಸ್ ಹೊರಟ ಭೀಮ..

ನೀರು ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಗಾಂಧಿಬಜಾರ್ ಹಾಸನ
24/05/2025

ನೀರು ಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಗಾಂಧಿಬಜಾರ್ ಹಾಸನ

ಶ್ರೀ ಕೆಂಚಾಂಬ ದೇವಿಯ ಪಾದ ತೂಗುವ ಜಾತ್ರೆ 💚..ಶ್ರೀ ಹಾಸನಾಂಬೆಯ ಸಹೋದರಿ ಕೆಂಚಾಂಬ ದೇವಿಯು ಮಲೆನಾಡ ಕೆ.ಹೊಸಕೋಟೆಯ ಹರಿಹಳ್ಳಿಯಲ್ಲಿ ನೆಲೆಸಿರುವ ಭ...
08/05/2025

ಶ್ರೀ ಕೆಂಚಾಂಬ ದೇವಿಯ ಪಾದ ತೂಗುವ ಜಾತ್ರೆ 💚..

ಶ್ರೀ ಹಾಸನಾಂಬೆಯ ಸಹೋದರಿ ಕೆಂಚಾಂಬ ದೇವಿಯು ಮಲೆನಾಡ ಕೆ.ಹೊಸಕೋಟೆಯ ಹರಿಹಳ್ಳಿಯಲ್ಲಿ ನೆಲೆಸಿರುವ ಭಕ್ತರ ಆರಾಧ್ಯ ದೇವಿ..

07/05/2025

ಶ್ರೀ ಕೆಂಚಾಂಬ ದೇವಿಯ ಪಾದ ತೂಗುವ ಜಾತ್ರೆ 💚..

ಶ್ರೀ ಹಾಸನಾಂಬೆಯ ಸಹೋದರಿ ಕೆಂಚಾಂಬ ದೇವಿಯು ಮಲೆನಾಡ ಕೆ.ಹೊಸಕೋಟೆಯ ಹರಿಹಳ್ಳಿಯಲ್ಲಿ ನೆಲೆಸಿರುವ ಭಕ್ತರ ಆರಾಧ್ಯ ದೇವಿ..

Address

Hassan
573201

Telephone

+919986473789

Website

Alerts

Be the first to know and let us send you an email when The Beauty Of Hassan - ಕಲೆಗಳ ಬೀಡು posts news and promotions. Your email address will not be used for any other purpose, and you can unsubscribe at any time.

Contact The Business

Send a message to The Beauty Of Hassan - ಕಲೆಗಳ ಬೀಡು:

Share

Category