Prajodaya News ಪ್ರಜೋದಯ ನ್ಯೂಸ್

  • Home
  • India
  • Hassan
  • Prajodaya News ಪ್ರಜೋದಯ ನ್ಯೂಸ್

Prajodaya News   ಪ್ರಜೋದಯ ನ್ಯೂಸ್ ಪ್ರಜೋದಯ NEWS HASSAN

03/09/2025

ಹಾಸನದ ಪಾಂಚಜನ್ಯ ಹಿಂದೂ ಗಣಪತಿಯ ವಿಸರ್ಜನೆ ಕಾರ್ಯಕ್ರಮ ರಾಜ ಬೀದಿಗಳಲ್ಲಿ ಮೆರವಣಿಗೆ 2025

03/09/2025

ಪಾಂಚಜನ್ಯ ಹಿಂದು ಗಣಪತಿ ವಿಸರ್ಜನಾ ಮಹೋತ್ಸವ

ಈಡುಗಾಯಿ ಒಡೆದ ಪ್ರೀತಮ್ ಗೌಡ-ಹೆಚ್.ಪಿ. ಸ್ವರೂಪ್

29/08/2025

ಸಕಲೇಶಪುರ ದೈತ್ಯಾಕಾರದ ಒಂಟಿಸಲಗ ಶನಿವಾರ ರಾತ್ರಿ ರಸ್ತೆ ಅಡ್ಡಗಟ್ಟಿ ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಿರುವ ಘಟನೆ ತಾಲೂಕಿನ ಹಳ್ಳಿಬೈಲು ಗ್ರಾಮದಲ್ಲಿ ನಡೆಯಿತು.

ಬೈನೆ ಮರವನ್ನು ನೆಲಕ್ಕುರುಳಿಸಿ ತಿಂದು ನಿಂತಿದ್ದ ಕಾಡಾನೆ, ವಾಹನಗಳ ಓಡಾಟಕ್ಕೆ ತೊಂದರೆ ಉಂಟುಮಾಡಿತು. ಇದರಿಂದಾಗಿ ಹಲವಾರು ವಾಹನಗಳು ರಸ್ತೆಯಲ್ಲೇ ನಿಂತುಕೊಳ್ಳಬೇಕಾಯಿತು. ಮಳೆ ಸುರಿಯುತ್ತಿದ್ದ ಕಾರಣ ವಾಹನ ಸವಾರರು ಪರದಾಡಬೇಕಾಯಿತು.

ಚಾಲಕರು ಘಟನೆಯ ವಿಡಿಯೋ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಟಿಎಫ್ ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಾನೆಯನ್ನು ಹಿಂದಕ್ಕೆ ಓಡಿಸಿದರು. ಪಟಾಕಿ ಶಬ್ದಕ್ಕೆ ಹೆದರಿದ ಒಂಟಿಸಲಗ ಕಾಡಿನೊಳಗೆ ಹಿಂತಿರುಗಿತು.

ಸುರಿಯುತ್ತಿದ್ದ ಮಳೆಯಲ್ಲಿಯೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದರು.

*ಜಾಹಿರಾತು* *ADVERTISEMENT**ಕೆ.ಜಿ.ಪಿ ಗೋಲ್ಡ್ ಪ್ಯಾಲೇಸ್  ವತಿಯಿಂದ ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು..** ಕೆಜಿಪಿ ಗೋಲ...
27/08/2025

*ಜಾಹಿರಾತು* *ADVERTISEMENT*

*ಕೆ.ಜಿ.ಪಿ ಗೋಲ್ಡ್ ಪ್ಯಾಲೇಸ್ ವತಿಯಿಂದ ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು..*

* ಕೆಜಿಪಿ ಗೋಲ್ಡ್ ಪ್ಯಾಲೇಸ್ ಪ್ರೈ.ಲಿ.*
📍 ದೇವಿಗೆರೆ ವೃತ, ಕಸ್ತೂರಿಬಾ ರಸ್ತೆ, ಹಾಸನ
ಹಾಸನ

27/08/2025

ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು💐💐💐

22/08/2025

ಸುಪ್ರೀಂ‌ ಕೋರ್ಟ್ ನೋಟಿಸ್ ಸ್ವೀಕರಿಸದ ಸಂಸದ

ವಕೀಲ ಪೂರ್ಣಚಂದ್ರ ಆಕ್ರೋಶ

21/08/2025

ರೀಲ್ಸ್ ಶೂಟಿಂಗ್ ನಲ್ಲೇ ಟ್ರ್ಯಾಕ್ಟರ್
ಪಲ್ಟಿ: ಯುವಕ ಸಾ*
#ಹಾಸನ

20/08/2025

ಅರೇಹಳ್ಳಿ ಪಟ್ಟಣಕ್ಕೆ ಒಂಟಿ ಸಲಗ ಲಗ್ಗೆ

ಕ್ಯಾಪ್ಟನ್‌ ದಾಳಿಗೆ ನಜ್ಜುಗುಜ್ಜಾದ ಆಲ್ಟೊ ಕಾರು

ವರ್ಷದ ಹಿಂದೆ ಕಾಡಾನೆ 'ಕರಡಿ'ಯೊಂದಿಗೆ ಕಾಳಗ ನಡೆಸಿದ್ದ ಕ್ಯಾಪ್ಟನ್ ಮತ್ತೆ ಪ್ರತ್ಯಕ್ಷ

20/08/2025

ಕೇರಳ ಅರಣ್ಯ ಇಲಾಖೆ ನಿನ್ನೇಷ್ಟೂ ಕ್ರೂರಿ

19/08/2025

#ಹಿಮ್ಸ್ ಆಸ್ಪತ್ರೆ ಗೋಳು ಕೇಳೋರಿಲ್ಲ!
# ಮೂರನೇ ಮಹಡಿ 340 ವಾರ್ಡ್ ಗೆ ನುಗ್ಗಿದ ಬೀದಿ ನಾಯಿ

ಹಾಸನ: ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ತೊಡಕಾಗುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಆಸ್ಪತ್ರೆಯ ಮೂರನೇ ಮಹಡಿಯ ವಾರ್ಡ್ ನಂಬರ್ 340ಕ್ಕೆ ಬೀದಿ ನಾಯಿಯೊಂದು ನುಗ್ಗಿರುವ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರಾತ್ರಿ ವೇಳೆ ರೋಗಿಗಳು ಚಿಕಿತ್ಸೆ ಪಡೆದು ಮಲಗಿರುವಾಗ ಬೀದಿ ನಾಯಿಯೊಂದು ವಾರ್ಡ್‌ನೊಳಗೆ ಓಡಾಡಿದ ಘಟನೆ ರೋಗಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳ ನಿರ್ಲಕ್ಷ್ಯದಿಂದಾಗಿ ನಾಯಿಯೊಂದು ಮೂರನೇ ಅಂತಸ್ತಿನವರೆಗೆ ತಲುಪಿ ವಾರ್ಡ್‌ಗೆ ಪ್ರವೇಶಿಸಿದೆ ಎಂದು ಆರೋಪಿಸಲಾಗಿದೆ.

ರೋಗಿಗಳ ಕಡೆಯವರು ಆಸ್ಪತ್ರೆಗೆ ಬಂದಾಗ ಉಡಾಫೆಯಿಂದ ವರ್ತಿಸುವ ಸೆಕ್ಯೂರಿಟಿ ಗಾರ್ಡ್‌ಗಳು, ಬೀದಿ ನಾಯಿಯೊಂದು ವಾರ್ಡ್‌ಗೆ ನುಗ್ಗಿದಾಗ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ನಾಯಿಯು ವಾರ್ಡ್‌ನಲ್ಲಿ ಸುತ್ತಾಡಿ, ಯಾವುದೇ ತೊಂದರೆಯಾಗದೆ ಹೊರಗೆ ತೆರಳಿದ್ದರೂ, ಈ ಘಟನೆ ಆಸ್ಪತ್ರೆಯ ಭದ್ರತೆ ಮತ್ತು ಸ್ವಚ್ಛತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಹಾಸನದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರು ಈಗಾಗಲೇ ಆತಂಕ ವ್ಯಕ್ತಪಡಿಸಿದ್ದು, ಜಿಲ್ಲಾಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಿ, ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Address

Hassan

Alerts

Be the first to know and let us send you an email when Prajodaya News ಪ್ರಜೋದಯ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Share