News88kannada

News88kannada "Ganavi Media Source Pvt Ltd" Karnataka's Premier Media And Entertainment Company

ಉತ್ತರ ಭಾರತದ ಅಘೋರಿಗಳು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ ಆಶೀರ್ವದಿಸಿದರು
20/12/2025

ಉತ್ತರ ಭಾರತದ ಅಘೋರಿಗಳು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ ಆಶೀರ್ವದಿಸಿದರು

ಹಳೆ ವಾಹನ ಹೊಂದಿರುವವರಿಗೆ ಶಾಕ್​​ ಕೊಟ್ಟ ಸಾರಿಗೆ ಸಚಿವರು: 15 ವರ್ಷ ಮೀರಿದ ವೆಹಿಕಲ್ಸ್​​ ಜಪ್ತಿ https://news88kannada.in/archives/480...
19/12/2025

ಹಳೆ ವಾಹನ ಹೊಂದಿರುವವರಿಗೆ ಶಾಕ್​​ ಕೊಟ್ಟ ಸಾರಿಗೆ ಸಚಿವರು: 15 ವರ್ಷ ಮೀರಿದ ವೆಹಿಕಲ್ಸ್​​ ಜಪ್ತಿ

https://news88kannada.in/archives/480

ಬೆಂಗಳೂರು, ಡಿಸೆಂಬರ್​​ 17: ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದರೂ, ಹಳೆಯ ವಾಹನಗಳು ಮಾತ್ರ ಇನ್ನ...

17/12/2025

ಧಾರವಾಡದ ಕೌಲಗೇರಿ ಶಿವಾನಂದ ಮಠದ ಸರಸ್ವತಿ ಸ್ವಾಮೀಜಿ ಕಾಮ ಪುರಾಣ:ಮಹಿಳೆಯರಿಂದ ಮಸಾಜ್ ಮತ್ತು ಎಣ್ಣೆ ಸ್ನಾನ ಬೇಕಂತೆ ದಿನಾಲೂ ಈ ಆಸಾಮಿಗೆ

ಟ್ರೆಂಡಿಗ್ ಸ್ಟಾರ್  ಮ್ಯೂಸಿಕ್ ಮೈಲಾರಿ ವಿರುದ್ಧ ಪೋಕ್ಸೋ  ಪ್ರಕರಣ ದಾಖಲು..ಆಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ..ಉತ್ತರ ಕರ್ನಾಟಕದ...
16/12/2025

ಟ್ರೆಂಡಿಗ್ ಸ್ಟಾರ್ ಮ್ಯೂಸಿಕ್ ಮೈಲಾರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು..
ಆಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ..

ಉತ್ತರ ಕರ್ನಾಟಕದಲ್ಲಿ ಜಾನಪದ ಹಾಡುಗಳ ಮೂಲಕ ಖ್ಯಾತಿ ಗಳಿಸಿರುವ ಟ್ರೆಂಡಿಂಗ್ ಸ್ಟಾರ್ ಮ್ಯೂಸಿಕ್ ಮೈಲಾರಿ ಉರ್ಫ್ ಮೈಲಾರಿ ಕುಡಗುಂಟಿ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಆಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅವರ ವಿರುದ್ಧ ಪೊಕ್ಸೊ (POCSO) ಪ್ರಕರಣ ದಾಖಲಾಗಿದೆ.

ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ ಸೇರಿ ಒಟ್ಟು ನಾಲ್ವರ ವಿರುದ್ಧ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಹಾಲಿಂಗಪುರ ಪಟ್ಟಣದಲ್ಲಿ ನಡೆದ ಆರ್ಕೆಸ್ಟ್ರಾ ಕಾರ್ಯಕ್ರಮವೊಂದಕ್ಕೆ ಕರೆದೊಯ್ದು ಈ ಕೃತ್ಯ ಎಸಗಲಾಗಿದೆ ಎಂದು ಬಾಲಕಿಯ ಕುಟುಂಬಸ್ಥರು ದೂರು ನೀಡಿದ್ದಾರೆ.
ಈ ಕುರಿತು ಪ್ರಕರಣವು ಆರಂಭದಲ್ಲಿ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಘಟನೆ ನಡೆದ ಸ್ಥಳ ಮಹಾಲಿಂಗಪುರವಾದ ಕಾರಣ, ಪ್ರಕರಣವನ್ನು ಮಹಾಲಿಂಗಪುರ ಠಾಣೆಗೆ ವರ್ಗಾಯಿಸಲಾಗಿದೆ. ಸದ್ಯ ಉತ್ತರ ಕರ್ನಾಟಕದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಗಾಯಕನ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ತೀವ್ರ ಸಂಚಲನ ಮೂಡಿಸಿದೆ....

14/12/2025

ಹುಬ್ಬಳ್ಳಿಯ ಉತ್ತರ ಸಂಚಾರ ಪೊಲೀಸ್ ಠಾಣೆ ಎದುರು ಡಿವೈಡರ್ ಹತ್ತಿದ ಲಾರಿ...!

13/12/2025

ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ಮಕ್ಕಳ ಮನೋರಂಜನೆಗೆ ಮಸ್ತಿ ಗೇಮ್ ಜೋನ್..!

Second floor urban oasis mall gokul road hubli...!

ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಜೈಲಾಧಿಕಾರಿಗಳ ಬೆವರಿಳಿಸಿದ ಅಲೋಕ್​​ ಕುಮಾರ್.ಬೆಂಗಳೂರು : ಕಾರಾಗೃಹ ಇಲಾಖೆಯ ನೂತನ ಡಿಜಿಪಿಯಾಗಿ ಅಧಿಕಾರ ವಹಿ...
13/12/2025

ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಜೈಲಾಧಿಕಾರಿಗಳ ಬೆವರಿಳಿಸಿದ ಅಲೋಕ್​​ ಕುಮಾರ್.

ಬೆಂಗಳೂರು : ಕಾರಾಗೃಹ ಇಲಾಖೆಯ ನೂತನ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಅಲೋಕ್​​ ಕುಮಾರ್ ಮೊದಲ ದಿನವೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್‌ ಬಳಕೆ ಹಾಗೂ ಎಣ್ಣೆ ಪಾರ್ಟಿ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಅಲೋಕ್​ ಕುಮಾರ್​​​​ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಜೈಲು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ರಾಜಾತಿಥ್ಯದ ವಿಡಿಯೋ ಯಾವಾಗ ನಡೆದಿದೆ? ವೈರಲ್​​​ ಮಾಡಿದ್ದು ಯಾರು ಅಂತ ಗೊತ್ತಾಗಬೇಕು ಎಂದು ಹೇಳಿದ್ದಾರೆ.

ವೈರಲ್‌ ವಿಡಿಯೋದ ಕುರಿತು ವರದಿ ನೀಡುವಂತೆ ಅಲೋಕ್‌ ಕುಮಾರ್‌ ಕೇಳಿದ್ದಾರೆ. ವೈರಲ್‌ ವಿಡಿಯೋ ಪ್ರಕರಣದಲ್ಲಿ ಯಾವ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ ಎನ್ನುವ ರಿಪೋರ್ಟ್‌ ಬೇಕು. ಸುಖಾಸುಮ್ಮನೆ ತನಿಖೆ, ವಿಚಾರಣೆ ಆಗುತ್ತಿದೆ ಎನನ್ನುವುದು ಬೇಡ. ಒಂದು ವರ್ಷದಲ್ಲಿ ದಾಖಾಲಾದ ಪ್ರಕರಣಗಳು, ತನಿಖಾ ಹಂತದ ಬಗ್ಗೆ ಡಿಜಿಪಿ ಅಲೋಕ್​ ಕುಮಾರ್​ ವರದಿ ಕೇಳಿದ್ದಾರೆ.

ಸಭೆಯಲ್ಲಿ ಜೈಲು ಅಧಿಕಾರಿ ಈವರೆಗೆ ಜೈಲಿನಲ್ಲಿ ಪತ್ತೆ ಆಗಿರುವ ಮೊಬೈಲ್‌ನ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವರ್ಷದಲ್ಲಿ 67 ಮೊಬೈಲ್ ಸಿಕ್ಕಿದೆ, 48 ಸಿಮ್ ಹಾಗೂ ಚಾಕುಗಳು ಸಿಕ್ಕಿದೆ. ಇದರ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಲೋಕ್‌ ಕುಮಾರ್‌ ಅವರು, ಜೈಲಿನಲ್ಲಿ ಇಷ್ಟು ಭದ್ರತೆಯಿದ್ದರೂ ಹೇಗೆ ಮೊಬೈಲ್‌ ಜೈಲಿನಲ್ಲಿ ಬಳಕೆ ಆಗುತ್ತಿದೆ? ಈ ರೀತಿ ಮೊಬೈಲ್‌ ಬಳಕೆ ಆಗುತ್ತಿದೆ ಎಂದ್ರೆ ನಮ್ಮವರೂ ಶಾಮೀಲು ಆಗಿದ್ದಾರೆ ಎಂದರ್ಥವಲ್ಲವೇ? ಅವರು ಯಾರು ಏನ್ನುವುದರ ಬಗ್ಗೆ ತನಿಖೆ ನಡೆಸಿ ವರದಿ ನೀಡಿ. ಜೊತೆಗೆ ಯಾವ ಕೈದಿಗೂ ಯಾವುದೇ ರಾಜಾತಿಥ್ಯ ಕೊಡಲು ಸರ್ಕಾರ ಹೇಳಿಲ್ಲ, ಅದು ಮೀರಿ ರಿಸ್ಕ್ ತಗೊಂಡು ರಾಜಾತಿಥ್ಯ ನೀಡಿದ್ರೆ ನಿಮ್ಮ ತಿಥಿ ಮಾಡ್ತೀನಿ ಎಂದು ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅದೇ ರೀತಿ ಕಾರಾಗೃಹ ಇಲಾಖೆಯ ಡಿಜಿಪಿಯಾಗಿರುವ ಅಧಿಕಾರ ಸ್ವೀಕರಿಸಿರುವ ಅಲೋಕ್​ ಕುಮಾರ್​ ಅವರಿಗೆ ಮೊದಲ ದಿನವೇ ಸ್ಥಳೀಯರು ದೂರು ನೀಡಿದ್ದಾರೆ.

10/12/2025

ಇದೇನು ಕಾಲೇಜಾ ಅಥವಾ ಲಾಡ್ಜ್...! ಜ್ಞಾನ ದೇಗುಲದಲ್ಲಿ ಇದೆಂತಾ ಅಪಚಾರ...?

08/12/2025

ಹುಬ್ಬಳ್ಳಿಯಲ್ಲಿ ಹೆಚ್ಚಾದ ಬೀದಿ ನಾಯಿಗಳ ಹಾವಳಿ:ಪಾಲಿಕೆ ವಿರುದ್ಧ ಹರಿಹಾಯ್ದ ಕಾಂಗ್ರೇಸ್ ಮುಖಂಡ ಅಷ್ಪಾಕ್ ಕುಮಟಾಕರ್...!

06/12/2025

ಧಾರವಾಡ ಜಿಲ್ಲೆಯಲ್ಲಿ ಅಸಮರ್ಪಕವಾಗಿ ನಡೆಯುತ್ತಿರುವ ವೈದ್ಯಕೀಯ ತ್ಯಾಜ್ಯ ಸಂಗ್ರಹ...!

ಅಣ್ಣಿಗೇರಿ ಬಳಿ ಭೀಕರ ರಸ್ತೆ ಅಪಘಾತ ಇನಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಸ್ಥಳದಲ್ಲೇ ಸಾವು..!
05/12/2025

ಅಣ್ಣಿಗೇರಿ ಬಳಿ ಭೀಕರ ರಸ್ತೆ ಅಪಘಾತ ಇನಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ಸ್ಥಳದಲ್ಲೇ ಸಾವು..!

ಧಾರವಾಡ ಜಿಲ್ಲೆ ಅಣ್ಣಿಗೇರಿ ಬಳಿಯಲ್ಲಿ ಭೀಕರ ಅಪಘಾತ ಸಂಭಾಬಿಸಿದ ಪರಿಣಾಮ ಇನಸ್ಪೆಕ್ಟರ್ ಸ್ಥಳದಲ್ಲೇ ಸಾವನಪ್ಪಿದ ಘಟನೆ ನಡೆದಿದೆ..

05/12/2025

ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಅದ್ದೂರಿಯಾಗಿ ವೀರಭದ್ರೇಶ್ವರ ಕಾರ್ತಿಕೋತ್ಸವ...!

Address

Bangalore, India
Hubli

Alerts

Be the first to know and let us send you an email when News88kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News88kannada:

Share