18/10/2025
ನಾವು ಆರ್.ಎಸ್.ಎಸ್.ಗೆ ಟಾರ್ಗೆಟ್ ಮಾಡ್ತಿಲ್ಲ...ಯಾವುದೇ ಸಂಘ ಸಂಸ್ಥೆಯಾಗಲಿ ಅನುಮತಿ ಕಡ್ಡಾಯ.
ಮೈಸೂರು: ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಣೆ ಮಾಡಿದ ವಿಚಾರದಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಅಲ್ಲೇನು ಆಗಿದೆ ಗೊತ್ತಿಲ್ಲ ನೋಡಿ ಪ್ರತಿಕ್ರಿಯೆ ಕೊಡ್ತೀನಿ ಎಂದಿದ್ದಾರೆ.
ನಾವು ಆರ್.ಎಸ್.ಎಸ್ ಟಾರ್ಗೆಟ್ ಮಾಡಿಲ್ಲ.
ಇದು ಎಲ್ಲಾ ಸಂಘ ಸಂಸ್ಥೆಗಳಿಗೂ ಅನ್ವಯ ಆಗತ್ತೆ.ಈ ಹಿಂದೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಕಡ್ಡಾಯ ಎಂದು ಜಾರಿ ಮಾಡಿದರು.ಅವಾಗ ಯಾರು ಕೇಳಲಿಲ್ಲ
ಇದು ಬಿಜೆಪಿ ರಾಜಕೀಯ ಅಷ್ಟೇ.ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇಲ್ಲ.
ಬಿಜೆಪಿ ಜನರ ಕೆಲಸ ಮಾಡಲ್ಲ ಕೇವಲ ರಾಜಕೀಯ ಮಾಡ್ತಿದೆ ಅಷ್ಟೇ ಎಂದಿದ್ದಾರೆ.
ರಾಜ್ಯಪಾಲರಿಗೆ ಗುತ್ತಿಗೆದಾರರು ಪತ್ರ ವಿಚಾರ
ಅವರ ಜೊತೆ ಮಾತನಾಡುತ್ತೇವೆ ಎಂದ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಉದ್ಯೋಗ ಮೇಳ ಹಮ್ಮುಕೊಳ್ಳುವುದಾಗಿ ತಿಳಿಸಿದರು.
Mysore, Karnataka Karnataka Siddaramaiah DK Shivakumar Hunsur updates Mysore City Karnataka, Bangalore Hunsur, Mysore ಪ್ರಕೃತಿ ಕನ್ನಡ ನ್ಯೂಸ್ Mysore,India Friends of RSS Karnataka News Karnataka Kannada News India Hunsur-Taluknews.com