ಪ್ರಕೃತಿ ಕನ್ನಡ ನ್ಯೂಸ್

  • Home
  • India
  • Hunsur
  • ಪ್ರಕೃತಿ ಕನ್ನಡ ನ್ಯೂಸ್

ಪ್ರಕೃತಿ ಕನ್ನಡ ನ್ಯೂಸ್ ಇದು ಜನಪರ ದ್ವನಿ

21/05/2025

ಹನಗೋಡು NJM ಡಾ ಜೋಗೇಂದ್ರನಾಥ್ ಆಸ್ಪತ್ರೆ ಅದ್ದೂರಿಯಾಗಿ ಚಾಲನೆ ನೀಡಿದ ಸಮಾಜಕಲ್ಯಾಣ ಇಲಾಖೆ ಸಚಿವರಾದ ಹೆಚ್ ಸಿ DR HC Mahadevappa ಹಾಗೂ ಹಂಸಲೇಖ ಹಾಗೂ ಮಾಜಿ ಶಾಸಕರು HP ಮಂಜುನಾಥ್ ರವರು

Hunsur updates Hunsur-Taluknews.com Mysore, Karnataka ಪ್ರಕೃತಿ ಕನ್ನಡ ನ್ಯೂಸ್ Karnataka Kannada News Mysore City Hanagodu Bus Stop Hunsur, Mysore GD Harish Gowda Dr Bro ಕನ್ನಡ Siddaramaiah DK Shivakumar HP Manjunath Siddaramaiah - CM of Karnataka @

20/05/2025

I got 10 reactions and comments on one of my posts last week! Thanks everyone for your support! 🎉

17/05/2025

ಸಫಾರಿಗರಿಗೆ ಕರಡಿ ಹಾಗೂ ಮರಿ ದರ್ಶನ...ಪ್ರವಾಸಿಗರು ಖುಷ್...
ಹುಣಸೂರು
ಸಫಾರಿಗೆ ತೆರಳಿದ್ದವರಿಗೆ ಕರಡಿ ಹಾಗೂ ಕರಡಿ ಮರಿಯ ಅಪರೂಪದ ದೃಶ್ಯ ಕಂಡುಬಂದಿದೆ.
ನಾಗರಹೊಳೆಯ ಚಿಕ್ಕಪಾಲ ಕೆರೆ ಬಳಿ ಕಾಣಿಸಿಕೊಂಡಿದೆ.
ತಾಯಿ ಕರಡಿ ಬೆನ್ನು ಮೇಲೆ ಕುಳಿತಿದ್ದ ಕರಡಿ ಮರಿಯ ದೃಶ್ಯ
ಚಾಲಕ ಬೈರಾರವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕರಡಿ ಹಾಗೂ ಕರಡಿ ಮರಿ ಕಂಡು ಪ್ರವಾಸಿಗರು ಖುಷ್ ಆಗಿದ್ದಾರೆ...

Hunsur updates Hunsur-Taluknews.com ಕೆ ಆರ್ ಎಸ್ ಪಕ್ಷ ಹುಣಸೂರು - KRS Party Hunsur Karnataka Mysore, Karnataka Kannada News ಪ್ರಕೃತಿ ಕನ್ನಡ ನ್ಯೂಸ್ Mysore City Hanagodu Bus Stop Hunsur, Mysore

17/05/2025

ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮಕ್ಕೆ ಶಾಸಕ ದರ್ಶನ್ ಧೃವನಾರಾಯಣ್ ಹಾಗೂ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಭೇಟಿ ನೀಡಿ ಗ್ರಾಮಸ್ಥರ ಜೊತೆ ಸಭೆ ನಡೆಸಿದರು. ಡಾ. ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿರುವ ಹಿನ್ನಲೆ ಕಿಡಿಗೇಡಿಗಳನ್ನ ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.ಗ್ರಾಮದಲ್ಲಿ ಗಂಭೀರ ವಾತಾವರಣ ಉದ್ಭವಿಸಿತ್ತು.ಈ ಹಿನ್ನಲೆ ಗ್ರಾಮದ ಮುಖಂಡರ ಜೊತೆ ಸಭೆ ನಡೆಸಿದ ದರ್ಶನ್ ಧೃವನಾರಾಯಣ್ ಹಾಗೂ ಎಸ್ಪಿ ವಿಷ್ಣುವರ್ಧನ್ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿದರು. ಇಂತಹ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಶಾಸಕ ದರ್ಶನ್ ದ್ರುವ ನಾರಾಯಣ್ ಭರವಸೆ ನೀಡಿದರು.ಎಸ್ಪಿ ವಿಷ್ಣುವರ್ಧನ್ ರವರ ಜೊತೆಗೂಡಿ ಗ್ರಾಮದ ಮುಖಂಡರಿಂದ ಮಾಹಿತಿ ಪಡೆದುಕೊಂಡರು.ತಪ್ಪು ಮಾಡಿದವರಿಗೆ ಶಿಕ್ಷೆ ಖಂಡಿತ ಆಗುತ್ತದೆ ಗ್ರಾಮದಲ್ಲಿ ಶಾಂತಿಯುತವಾದ ಬದುಕಿಗೆ ಅವಕಾಶ ಕಲ್ಪಿಸಿಕೊಡಲು ನಾನು ಬದ್ಧ ಎಂದು ಭರವಸೆ ನೀಡಿದರು.ಮೈಸೂರು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರಾಷ್ಟ್ರ ನಾಯಕರಿಗೂ ಅಪಮಾನ ಮಾಡಲು ಕಿಡಿಗೇಡಿಗಳು ಬೆಚ್ಚಿ ಬೀಳಬೇಕು ಅಂತಹ ಕಠಿಣವಾದ ಕಾನೂನು ಕ್ರಮಕ್ಕೆ ನಾನು ಪೊಲೀಸರಲ್ಲಿ ಆಗ್ರಹಿಸಿದ್ದೇನೆ ಎಂದು ಶಾಸಕ ದರ್ಶನ್ ಗ್ರಾಮಸ್ಥರಿಗೆ ತಿಳಿಸಿದರು. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ನಾವು ಅನುವು ಮಾಡಿಕೊಡುತ್ತೇವೆ ಎಂದು ಎಸ್ ಪಿ .ಡಾ.ವಿಷ್ಣುವರ್ಧನ್ ಭರವಸೆ ನೀಡಿದರು...

ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ತಹಸೀಲ್ದಾರ್ ಶಿವಕುಮಾರ್ ಕಾಸನೂರ್ ರವರು, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷರಾದ ಎಸ್. ಸಿ ಬಸವರಾಜ್ , ಡಿವೈಎಸ್ಪಿ ರಘು ಕೆ. ಮಾರುತಿ ನಾಗೇಶ್ ರಾಜ್ , ನಾಗರಾಜ್ ಮಹದೇವ್ ಸೇರಿದಂತೆ ಹಲವು ಮುಖಂಡರು ಇದ್ದರು

Mysore, Karnataka Karnataka Hunsur-Taluknews.com Hunsur updates ಪ್ರಕೃತಿ ಕನ್ನಡ ನ್ಯೂಸ್ Mysore City Kannada News DK Shivakumar DR HC Mahadevappa Siddaramaiah - CM of Karnataka Siddaramaiah Dr Bro ಕನ್ನಡ Hunsur, Mysore Karnataka, Bangalore GD Harish Gowda ಕೆ ಆರ್ ಎಸ್ ಪಕ್ಷ ಹುಣಸೂರು - KRS Party Hunsur BENGALURU CITY POLICE Hanagodu Bus Stop @

15/05/2025

ಏನ್ ಜೆ ಎಂ . ಡಾ. ಜೋಗೇಂದ್ರನಾಥ್ ಆಸ್ಪತ್ರೆ
ಇದೆ ತಿಂಗಳು 18/05/2025 ರಂದು ಉದ್ಘಾಟನಾ ಸಮಾರಂಭ. ಸ್ಥಳ :ಹನಗೋಡು. ಸರ್ಕಾರಿ ಪದವಿ ಪೂರ್ವ ಕಾಲೇಜ್ ಎದುರು ಹುಣಸೂರು ರಸ್ತೆ

Hunsur updates Hunsur-Taluknews.com Hunsur, Mysore ಕೆ ಆರ್ ಎಸ್ ಪಕ್ಷ ಹುಣಸೂರು - KRS Party Hunsur Karnataka Mysore, Karnataka ಪ್ರಕೃತಿ ಕನ್ನಡ ನ್ಯೂಸ್ Kannada News Mysore City Hanagodu Bus Stop GD Harish Gowda DR HC Mahadevappa DK Shivakumar Siddaramaiah - CM of Karnataka Karnataka, Bangalore Siddaramaiah Dr Bro ಕನ್ನಡ @ಕನ್ನಡವಾರ್ತೆ #ಸೇಹಜೀವಿ

08/05/2025

ಮೈಸೂರಿನಲ್ಲಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣ...ಮಹಿಳೆ ಸೇರಿ 7 ಮಂದಿ ಬಂಧನ...ಎಸ್ಪಿ ವಿಷ್ಣುವರ್ಧನ್ ಸುದ್ದಿಗೋಷ್ಠಿ...

ಮೈಸೂರು

ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಾರ್ತಿಕ್ ಕೊಲೆ ಆಗಿದೆ.
ಕಾರ್ತಿಕ್ ಮೂಲತಃ ಮೈಸೂರು ಮೂಲದ ವ್ಯಕ್ತಿ.ಈತನ ವಿರುದ್ಧ ರೌಡಿ ಶೀಟರ್ ಕೂಡ ಇದೆ
ಕೊಲೆಯಾದ ಬಳಿಕ 3 ತಂಡ ರಚನೆ ಮಾಡಿ ಆರೋಪಿಗಳ ವಶಕ್ಕೆ ಬಲೆ ಬೀಸಿದ್ದೆವು.ಮಹಿಳೆ ಸೇರಿ 7
ಆರೋಪಿಗಳು ಸಿಕ್ಕಿಬಿದ್ದು ಅಪರಾಧ ಕೃತ್ಯ ಒಪ್ಪಿಕೊಂಡಿದ್ದಾರೆ.ಆರಂಭದಲ್ಲಿ ಹಣದ ವಿಚಾರಕ್ಕೆ ಕೊಲೆ ಆಗಿದೆ ಅಂತ ತನಿಖೆ ಮಾಡಿದೆವು.ನಂತರ
ಒಂದು ಹುಡುಗಿ ವಿಚಾರಕ್ಕೆ ಕೊಲೆ ಆಗಿದೆ ಅಂತ ಗೊತ್ತಾಯ್ತು.
ಕಾರ್ತಿಕ್ ಈ ಹಿಂದೆ ಪ್ರವೀಣ್ ಗೆ ಕೊಲೆ ಬೆದರಿಕೆ ಹಾಕಿದ್ದ.
ಈ ಹಿನ್ನಲೆ ಪ್ರವೀಣ್ ಗುಂಪು ಕಟ್ಟಿಕೊಂಡು ಕಾರ್ತಿಕ್ ಹತ್ಯೆ ಮಾಡಿದ್ದಾನೆ.
ಪ್ರವೀಣ್ ಈ ಹಿಂದೆ ಕಾರ್ತಿಕ್ ಕಾರ್ ಡ್ರೈವರ್ ಆಗಿರುತ್ತಾನೆ.
ಕೊಲೆಯಲ್ಲಿ ಮಹಿಳೆಯ ಕೈವಾಡವೂ ಇದೆ.
ಕಾರ್ತಿಕ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಿದ್ದ.ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲರೂ ಕಾರ್ತಿಕ್ ಗೆ ಪರಿಚಯ ಇತ್ತು.
ಹೇಗೆ ಆತನನ್ನು ಟ್ರ್ಯಾಪ್ ಮಾಡಿದ್ರು ಪ್ಲಾನ್ ಹೇಗೆ ಮಾಡಿದ್ರು ಅಂತ ಸಂಪೂರ್ಣ ಮಾಹಿತಿ ತನಿಖೆ ಬಳಿಕ ತಿಳಿಸುತ್ತೇವೆ.ಕಾರ್ತಿಕ್ ಜೊತೆ ಇವರೆಲ್ಲರಿಗೂ ಪರ್ಸನಲ್ ಎನಿಮಿಟಿ ಇತ್ತು.ಪ್ರವೀಣ್ ಗೆ ಕಾರ್ತಿಕ್ ನಿಂದ ಜೀವ ಭಯ ಇತ್ತು
ಹೀಗಾಗಿ ಇವನನ್ನು ಬಿಟ್ರೆ ನನ್ನ ಮುಗಿಸುತ್ತಾನೆ ಅಂತ ಪ್ಲಾನ್ ಮಾಡಿ ಪ್ರವೀಣ್ ಗ್ಯಾಂಗ್ ಆತನನ್ನು ಮುಗಿಸಿದೆ.
ಎಸ್ಪಿ ವಿಷ್ಣುವರ್ಧನ್ ಹೇಳಿಕೆ...

Mysore, Karnataka Hunsur updates Karnataka ಪ್ರಕೃತಿ ಕನ್ನಡ ನ್ಯೂಸ್ Hunsur-Taluknews.com Kannada News BENGALURU CITY POLICE Mysore City

10/04/2025

ಜಮೀನು ವಿವಾದ...ಸಂಭಂಧಿಕರ ನಡುವೆ ಗಲಾಟೆ...ಕ್ರಿಮಿನಾಶಕ ಸೇವಿಸಿ ರೈತ ಮಹಿಳೆ ಆತ್ಮಹತ್ಯೆಗೆ ಯತ್ನ...

ಹುಣಸೂರು,ಏ8,Tv10 ಕನ್ನಡ

ಜಮೀನು ವಿವಾದ ಹಿನ್ನಲೆ ಒಂದೇ ಕುಟುಂಬದವರ ನಡುವೆ ನಡೆದ ಗಲಾಟೆ ಹಿನ್ನಲೆ ಮನನೊಂದ ರೈತ ಮಹಿಳೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಣಸೂರು ತಾಲೂಕು ಅಂಗಟಹಳ್ಳಿನಡೆದಿದೆ.ಶಿಲ್ಪಾ (26) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು.ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಲ್ಪಾ ಸ್ಥಿತಿ ಗಂಭೀರವಾಗಿದ್ದು ಜಮೀನಿಗಾಗಿ ಗಲಾಟೆ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಶಿಲ್ಪಾ ಪತಿ ಕೆಂಗಣ್ಣ ತಾಯಿ ನಾಗಮ್ಮ ಹೆಸರಲ್ಲಿ ಒಂದು ಎಕ್ರೆ ಜಮೀನಿದೆ.ಕೆಂಗಣ್ಣ ಗೆ ಓರ್ವ ಸಹೋದರ ಮತ್ತು ಸಹೋದರಿ ಇದ್ದಾರೆ.ಒಂದು ಎಕ್ರೆ ಜಮೀನಿಗಾಗಿ ಒಂದೇ ಕುಟುಂಬದವರ ನಡುವೆ ಭಿನ್ನಭಿಪ್ರಾಯವಿದೆ.ತಾಯಿಯಿಂದ ಕೆಂಗಣ್ಣ ಅಕ್ಕ ಸುಮಾ ಜಮೀನು ಬರೆಸಿಕೊಂಡಿದ್ದಾರೆಂದು ಆರೋಪಿಸಿ ನ್ಯಾಯ ಕೇಳಲು ಹೋಗಿದ್ದಾರೆ.ಈ ವೇಳೆ ಸುಮ,ಚಂದ್ರು,ಗವಿರಾಜು ಹಾಗೂ ಮಲ್ಲ ರವರು ಕೆಂಗಣ್ಣ ಹಾಗೂ ಪತ್ನಿ ಶಿಲ್ಪಾ ಮೇಲೆ ಮುಗಿಬಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.ಇದರಿಂದ ಮನನೊಂದ ಶಿಲ್ಪಾ ಕ್ರಿಮಿನಾಶಕ ಸೇವಿಸಿದ್ದಾರೆ.ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಶಿಲ್ಪಾ ನನ್ನ ಪರಿಸ್ಥಿತಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಈ ಸಂಭಂಧ ನಾಲ್ವರ ವಿರುದ್ದ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ...

Hunsur, Mysore
Hunsur updates Mysore, Karnataka Hunsur-Taluknews.com ಪ್ರಕೃತಿ ಕನ್ನಡ ನ್ಯೂಸ್ GD Harish Gowda Karnataka

09/04/2025

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ತರಾಟೆ...ಭೂಮಿ ಸ್ವಾಧೀನಕ್ಕೆ ತೀವ್ರ ವಿರೋಧ...ಬರಿಗೈಲಿ ಹಿಂದಿರುಗಿದ ಅಧಿಕಾರಿಗಳು...

ಹುಣಸೂರು,ಏ8,

ಶ್ರೀರಂಗಪಟ್ಟಣ-ಕುಶಾಲನಗರ ನಡುವೆ ನಿರ್ಮಾಣವಾಗಲಿರುವ ರಾಷ್ಟ್ರೀಯ ಹೆದ್ದಾರಿ ಹಿನ್ನಲೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗಾಗಿ ಬಂದ ಅಧಿಕಾರಿಗಳನ್ನ ರೈತರು ತರಾಟೆಗೆ ತೆಗೆದುಕೊಂಡ ಘಟನೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.ರೈತರ ಆಕ್ರೋಷಕ್ಕೆ ತಲೆಬಾಗಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಬರಿಗೈಲಿ ಹಿಂದಿರುಗಿದ್ದಾರೆ.

ಕಟ್ಟೆಮಳಲವಾಡಿ ಕೊಪ್ಪಲು ಸರ್ವೆ ನಂ 142/2 ಎ ಎಕ್ರೆ 32 ಗುಂಟೆ ಜಮೀನನ್ನ ಗುರುತಿಸಲಾಗಿದ್ದು ಸ್ವಾಧೀನ ಪ್ರಕ್ರಿಯೆಗಾಗಿ ಪ್ರಾಧಿಕಾರದ ಅಧಿಕಾರಿಗಳು ಬಂದಿದ್ದಾರೆ.ಈ ವೇಳೆ ಭೂಮಿಯ ಮಾಲೀಕರಾದ ಸ್ವಾಮಿಗೌಡ ಮತ್ತು ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಜಮೀನಿನಲ್ಲಿ 150 ತೆಂಗಿನ ಮರ 2 ಬೋರ್ ಹಾಕಲಾಗಿದೆ.ಕೃಷಿ ಜಮೀನನ್ನ ಅವೈಜ್ಞಾನಿಕವಾಗಿ ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಇಡೀ ಕುಟುಂಬ ಅಧಿಕಾರಿಗಳ ವಿರುದ್ದ ತಿರುಗಿ ಬಿದ್ದಿದೆ.ಕುಟುಂಬದ ಆಕ್ರೋಷಕ್ಕೆ ಮಣಿದ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.

ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಿಸುತ್ತಿದ್ದಾರೆಂದು ಆರೋಪಿಸುವ ಸ್ವಾಮಿಗೌಡ ಪರಿಹಾರ ನೀಡುವಲ್ಲಿ ತಾರತಮ್ಯ ಎಸಗುತ್ತಿದ್ದಾರೆಂದು ಆಕ್ರೋಷ ವ್ಯಕ್ತಪಡಿಸಿದರು.ವಿವಿದ ತಾಲೂಕುಗಳಿಗೆ ವಿವಿದ ರೀತಿಯ ಪರಿಹಾರ ನೀಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.ಸಧ್ಯ ಪ್ರಕ್ರಿಯೆ ಕೈ ಬಿಟ್ಟ ಅಧಿಕಾರಿಗಳು ಹಿಂದಿರುಗಿದ್ದಾರೆ...

:
:
:
:
Hunsur-Taluknews.com ಪ್ರಕೃತಿ ಕನ್ನಡ ನ್ಯೂಸ್ Karnataka Mysore, Karnataka GD Harish Gowda Hunsur, Mysore Hunsur updates Siddaramaiah - CM of Karnataka

27/01/2025

ಸರಗೂರು: ಗಣರಾಜ್ಯೋತ್ಸವ ಆಚರಿಸದ ಗ್ರಾ.ಪಂ...ಅಧಿಕಾರಿ ವಿರುದ್ದ ಸ್ಥಳೀಯರ ಆಕ್ರೋಷ...ಸಿಬ್ಬಂದಿಗಳಿಲ್ಲವೆಂದು ಅಸಹಾಯಕತೆ...

Kannada News Mysore, Karnataka Karnataka DR HC Mahadevappa Siddaramaiah - CM of Karnataka DK Shivakumar chikkamadu

Hunsur updates   ಮೈಕ್ರೋ ಪೈನಾನ್ಸ್‌ ಕಿರುಕುಳ - ಬ್ರಾಂಚ್‌ ಮ್ಯಾನೇಜರ್‌  ಬಂಧನ.ಪಿರ್ಯಾದುದಾರರು ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಗೆ ಹಾಜರ...
20/01/2025

Hunsur updates


ಮೈಕ್ರೋ ಪೈನಾನ್ಸ್‌ ಕಿರುಕುಳ - ಬ್ರಾಂಚ್‌ ಮ್ಯಾನೇಜರ್‌ ಬಂಧನ.

ಪಿರ್ಯಾದುದಾರರು ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ, ಪಿರ್ಯಾದುದಾರರಿಗೆ, ಬಿಡದಿಯ ಖಾಸಗಿ ಮೈಕ್ರೋ ಪೈನಾನ್ಸ್‌ ನ ಕಡೆಯವರು ರಾಮನಗರ ತಾಲ್ಲೂಕು, ಕೂನಮುದ್ದನಹಳ್ಳಿ ಗ್ರಾಮಕ್ಕೆ ಬಂದು, 7-8 ಜನರಿರುವ ಗುಂಪನ್ನು ಮಾಡಿ, ನಾವು ನಿಮಗೆ ಸಾಲ ನೀಡುತ್ತೇವೆ ಹೇಳಿದ್ದು, ಅದರಂತೆ ಪಿರ್ಯಾದುದಾರರು ಸೇರಿ 7 ಜನರಿರುವ ಒಂದು ಗುಂಪನ್ನು ಮಾಡಿಕೊಂಡಿದ್ದು, ಸದರಿ ಗುಂಪಿಗೆ ಬಿಡದಿಯ ಖಾಸಗಿ ಮೈಕ್ರೋ ಪೈನಾನ್ಸ್‌ ರವರು 52000/- ರೂ ಗಳ ಸಾಲವನ್ನು ಪಿರ್ಯಾದುದಾರರ ಖಾತೆ ಜಮಾ ಮಾಡಿದ್ದು, ಅದರಂತೆ ಪ್ರತಿ ತಿಂಗಳು ಮೊದಲ ವಾರದಲ್ಲಿ 2810/- ರೂ ಗಳನ್ನು ಕಟ್ಟುತ್ತಿದ್ದು, ಈಗ್ಗೆ 3 ತಿಂಗಳಿಂದ ಪಿರ್ಯಾದುದಾರರಿಗೆ ಹಣಕಾಸಿನ ತೊಂದರೆ ಉಂಟಾಗಿ ಕಂತು ಕಟ್ಟಲು ಆಗಿರುವುದಿಲ್ಲ. ಈ ವಿಚಾರವಾಗಿ ಬಿಡದಿಯ ಖಾಸಗಿ ಮೈಕ್ರೋ ಪೈನಾನ್ಸ್‌ ಬ್ರಾಂಚ್‌ ಮ್ಯಾನೇಜರ್‌ ರವರು ದಿನಾಂಕ:20.12.2024 ರಂದು ಗ್ರಾಮಕ್ಕೆ ಬಂದು ತಮ್ಮ ಮೇಲೆ ಗಲಾಟೆ ಮಾಡಿ ಅವಮಾನವಾಗುವ ರೀತಿಯಲ್ಲಿ ಬೈಯ್ದು ಸಾಲ ಕಟ್ಟುವಂತೆ ಬೆದರಿಕೆ ಹಾಕಿ, ನಮಗೆ ಬೆದರಿಸುವಂತೆ ಮನೆ ಬಾಗಿಲಿಗೆ ನೋಟಿಸ್‌ ಅಂಟಿಸಿ ತೊಂದರೆ ಮಾಡಿರುತ್ತಾರೆ ಎಂದು, ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ 16/2025 ಕಲಂ: 126, 352, 351, 74 ಬಿ.ಎನ್.ಎಸ್‌ ರೀತ್ಯಾ ಪ್ರಕರಣ ದಾಖಲು ಮಾಡಿ, ತನಿಖೆ ಕೈಗೊಂಡು, ಸದರಿ ಪ್ರಕರಣದ ಆರೋಪಿಯಾದ ಬಿಡದಿಯ ಖಾಸಗಿ ಮೈಕ್ರೋ ಪೈನಾನ್ಸ್‌ ನ ಬ್ರಾಂಚ್‌ ಮ್ಯಾನೇಜರ್‌ ರವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ.

Address

Hunsur

Alerts

Be the first to know and let us send you an email when ಪ್ರಕೃತಿ ಕನ್ನಡ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಪ್ರಕೃತಿ ಕನ್ನಡ ನ್ಯೂಸ್:

Share