ಪ್ರಕೃತಿ ಕನ್ನಡ ನ್ಯೂಸ್

  • Home
  • India
  • Hunsur
  • ಪ್ರಕೃತಿ ಕನ್ನಡ ನ್ಯೂಸ್

ಪ್ರಕೃತಿ ಕನ್ನಡ ನ್ಯೂಸ್ ಇದು ಜನಪರ ದ್ವನಿ

18/10/2025

ನಾವು ಆರ್.ಎಸ್.ಎಸ್.ಗೆ ಟಾರ್ಗೆಟ್ ಮಾಡ್ತಿಲ್ಲ...ಯಾವುದೇ ಸಂಘ ಸಂಸ್ಥೆಯಾಗಲಿ ಅನುಮತಿ ಕಡ್ಡಾಯ.

ಮೈಸೂರು: ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಣೆ ಮಾಡಿದ ವಿಚಾರದಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಅಲ್ಲೇನು ಆಗಿದೆ ಗೊತ್ತಿಲ್ಲ ನೋಡಿ ಪ್ರತಿಕ್ರಿಯೆ ಕೊಡ್ತೀನಿ ಎಂದಿದ್ದಾರೆ.
ನಾವು ಆರ್.ಎಸ್.ಎಸ್ ಟಾರ್ಗೆಟ್ ಮಾಡಿಲ್ಲ.
ಇದು ಎಲ್ಲಾ ಸಂಘ ಸಂಸ್ಥೆಗಳಿಗೂ ಅನ್ವಯ ಆಗತ್ತೆ.ಈ ಹಿಂದೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಕಡ್ಡಾಯ ಎಂದು ಜಾರಿ ಮಾಡಿದರು.ಅವಾಗ ಯಾರು ಕೇಳಲಿಲ್ಲ
ಇದು ಬಿಜೆಪಿ ರಾಜಕೀಯ ಅಷ್ಟೇ.ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇಲ್ಲ.
ಬಿಜೆಪಿ ಜನರ ಕೆಲಸ ಮಾಡಲ್ಲ ಕೇವಲ ರಾಜಕೀಯ ಮಾಡ್ತಿದೆ ಅಷ್ಟೇ ಎಂದಿದ್ದಾರೆ.

ರಾಜ್ಯಪಾಲರಿಗೆ ಗುತ್ತಿಗೆದಾರರು ಪತ್ರ ವಿಚಾರ
ಅವರ ಜೊತೆ ಮಾತನಾಡುತ್ತೇವೆ ಎಂದ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಉದ್ಯೋಗ ಮೇಳ ಹಮ್ಮುಕೊಳ್ಳುವುದಾಗಿ ತಿಳಿಸಿದರು.

Mysore, Karnataka Karnataka Siddaramaiah DK Shivakumar Hunsur updates Mysore City Karnataka, Bangalore Hunsur, Mysore ಪ್ರಕೃತಿ ಕನ್ನಡ ನ್ಯೂಸ್ Mysore,India Friends of RSS Karnataka News Karnataka Kannada News India Hunsur-Taluknews.com

25/09/2025

ಮಹಿಷಾಸುರ ಕಂಡ್ರೆ ಯಾಕೆ ಭಯ...! ಡಿಸಿ. ಜಿಲ್ಲಾ ಡಳಿತದ ವಿರುದ್ಧ ಧಾರ್ಮಿಕ ಹಕ್ಕು ಚ್ಯುತಿ ಕೇಸ್ ಹಾಕ್ತೀವಿ. ಜ್ಞಾನ ಪ್ರಕಾಶ ಸ್ವಾಮೀಜಿ...!

Dasara at Mysore Kannada News Karnataka Mysore, Karnataka Siddaramaiah DK Shivakumar Hunsur updates Karnataka, Bangalore Karnataka Mysore City Hunsur-Taluknews.com Hunsur, Mysore ಪ್ರಕೃತಿ ಕನ್ನಡ ನ್ಯೂಸ್ India Mysore,India Karnataka News

24/09/2025
ಕೊಡಗು ಜಿಲ್ಲೆ ಪಾಲಿಬೆಟ್ಟ ಆರೋಗ್ಯ ಕೇಂದ್ರ ತಜ್ಞ ವೈದ್ಯರಿಗೆ ಶೋಕಾಸ್ ನೋಟೀಸ್.ಸಮಜಾಯಿಷಿ ನೀಡುವಂತೆ 3 ದಿನಗಳ ಗಡುವು...!ಮಡಿಕೇರಿ. ಸೆ23. ಪ್ರಕ...
24/09/2025

ಕೊಡಗು ಜಿಲ್ಲೆ ಪಾಲಿಬೆಟ್ಟ ಆರೋಗ್ಯ ಕೇಂದ್ರ ತಜ್ಞ ವೈದ್ಯರಿಗೆ ಶೋಕಾಸ್ ನೋಟೀಸ್.ಸಮಜಾಯಿಷಿ ನೀಡುವಂತೆ 3 ದಿನಗಳ ಗಡುವು...!

ಮಡಿಕೇರಿ. ಸೆ23. ಪ್ರಕೃತಿ ನ್ಯೂಸ್ ಕರ್ನಾಟಕ

ಮಡಿಕೇರಿ ಜಿಲ್ಲೆ ಪಾಲಿಬೆಟ್ಟ ಆರೋಗ್ಯ ಕೇಂದ್ರ ತಜ್ಞ ವೈದ್ಯ ಡಾ.ಲೋಹಿತ್ ರವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಖಾಸಗಿ ಜಾಲತಾಣ,ಟಿವಿ ಮಾಧ್ಯಮ,ರಾಜಕೀಯ ಪ್ರೇರಿತ ಪೋಸ್ಟರ್ ಗಳಲ್ಲಿ ನಿಮ್ಮ ಛಾಯಾಚಿತ್ರಗಳು ಕಂಡು ಬರುತ್ತಿದೆ.ಸರ್ಕಾರಿ ನೌಕರರಾದ ನೀವು ಮೇಲಧಿಕಾರಿಗಳಿಂದ ಅನುಮತಿ ಪಡೆಯದೆ ಪತ್ರಿಕಾ ಪ್ರಕಟಣೆ ಹೊರಡಿಸುತ್ತಿರುವುದಾಗಿ ಉಲ್ಲೇಖಿಸಿದ್ದು ಮೂರು ದಿನಗಳ ಒಳಗೆ ಈ ಆರೋಪಕ್ಕೆ ಸಮಜಾಯಿಷಿ ನೀಡುವಂತೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ.ಸದರಿ ವೈದ್ಯರು ತಮ್ಮ ಹುದ್ದೆಗೆ ಸ್ವ ಇಚ್ಛೆ ನಿವೃತ್ತಿ ಪತ್ರ ಸಲ್ಲಿಸಿರುವ ಮಾಹಿತಿಯೂ ಇದೆ.ಆದ್ರೆ ಇದುವರೆಗೆ ಈ ಪತ್ರ ಮಡಿಕೇರಿ ಜಿಲ್ಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಲುಪಿಲ್ಲವೆಂಬ ಮಾಹಿತಿ ಇದೆ.ಈ ಹಿನ್ನಲೆ ಡಾ.ಲೋಹಿತ್ ಇನ್ನೂ ಸರ್ಕಾರಿ ನೌಕರರಾಗೇ ಇರುವುದರಿಂದ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ

Karnataka Mysore, Karnataka Hunsur updates Karnataka Hunsur-Taluknews.com GD Harish Gowda Mysore City Kannada News ಪ್ರಕೃತಿ ಕನ್ನಡ ನ್ಯೂಸ್ Hunsur, Mysore Mysore,India India Karnataka, Bangalore DK Shivakumar Siddaramaiah Karnataka News

Celebrating my 3rd year on Facebook. Thank you for your continuing support. I could never have made it without you. 🙏🤗🎉
16/09/2025

Celebrating my 3rd year on Facebook. Thank you for your continuing support. I could never have made it without you. 🙏🤗🎉

11/09/2025

ಸರ್ಕಾರ ಶಾಂತಿ ಸಭೆ ಕರೆದ್ರು ಯಾಕೆ ಬಂದಿಲ್ಲ ನಿಮ್ಮ ಉದ್ದೇಶ ಆದ್ರು ಏನು...?

Karnataka Siddaramaiah Mysore, Karnataka Kannada News DR HC Mahadevappa DK Shivakumar Mysore City Hunsur updates Karnataka Karnataka, Bangalore ಪ್ರಕೃತಿ ಕನ್ನಡ ನ್ಯೂಸ್ India Hunsur, Mysore Hunsur-Taluknews.com GT Devegowda Mysore,India Dasara at Mysore GD Harish Gowda Darmasthala Darmastala Darmastala Darmastala

11/09/2025

I got over 10 reactions on one of my posts last week! Thanks everyone for your support! 🎉

http://prakrutinewskarnataka.blogspot.com/2025/08/blog-post.html
30/08/2025

http://prakrutinewskarnataka.blogspot.com/2025/08/blog-post.html

ಪ್ರಕೃತಿ ನ್ಯೂಸ್ ಕರ್ನಾಟಕ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಘಟನೆ…ಮೈಸೂರು, ಕನ್ನಡಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕರ್ತವ್ಯ ನಿ....

https://youtu.be/FuzGCyZ0IPM?si=IzP1yibF05dy2TkH
29/08/2025

https://youtu.be/FuzGCyZ0IPM?si=IzP1yibF05dy2TkH

ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಆಯ್ಕೆ ಹಿಂಪಡೆಯಿರಿ...ಮೈಸೂರಿನಲ್ಲಿ ಪ್ರತಿಭಟನೆ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್...

29/08/2025

Mysore, Karnataka ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಆಯ್ಕೆ ಹಿಂಪಡೆಯಿರಿ.ಮೈಸೂರಿನಲ್ಲಿ ಪ್ರತಿಭಟನೆ
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಆಯ್ಕೆ ಮಾಡಿರುವ ವಿಚಾರ ದಿನೇ ದನೇ ವಿರೋಧ ಹೆಚ್ಚಾಗುತ್ತಿದೆ.ಆಯ್ಕೆ ಹಿಂಪಡೆಯುವಂತೆ ಅಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆದಿದೆ.
ಹಳೇ ಜಿಲ್ಲಾಧಿಕಾರಿ ಬಳಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.
ತಾಯಿ ಚಾಮುಂಡೇಶ್ವರಿಯನ್ನ ನವರಾತ್ರಿಯ 9 ದಿನಗಳ ಕಾಲ ಆರಾಧಿಸುವ ಹಿಂದೂಗಳು ಈ ಆಯ್ಕೆಯನ್ನ ವಿರೋಧಿಸುತಿದ್ದೇವೆ.
ಕನ್ನಡಾಂಬೆ ತಾಯಿ ಭುವನೇಶ್ವರಿಯ ಬಗ್ಗೆ, ಅರಿಶಿನ ಕುಂಕುಮದ ಬಗ್ಗೆ, ಕನ್ನಡ ಭಾಷೆಯ ವೈಶಾಲ್ಯತೆಯ ಬಗ್ಗೆ, ನಾಡಿನ ಸಂಸ್ಕೃತಿಯ ಬಗ್ಗೆ ಸಂಕುಚಿತವಾಗಿ ಮಾತನಾಡಿದ್ದಾರೆ.
ಕನ್ನಡಿಗರ ಭಾವನೆಗೆ ಬಾನು ಮುಷ್ತಾಕ್ ಧಕ್ಕೆ ತಂದಿರುತ್ತಾರೆ.ದೇಶದ ಸಂಸ್ಕೃತಿ, ಆಚಾರ ವಿಚಾರಗಳಿಗೆ ಗೌರವ ಕೊಡದೆ ಇರುವವರಿಗೆ ನಮ್ಮ ಧಾರ್ಮಿಕ ನಾಡಹಬ್ಬವನ್ನು ಉದ್ಘಾಟಿಸುವ ಅರ್ಹತೆ ಇಲ್ಲ.ಕನ್ನಡವನ್ನು ಭುವನೇಶ್ವರಿ ಆಗಿ ಒಪ್ಪದ ಭಾನು ಮುಷ್ತಾಕ್ ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿ, ಪುಷ್ಪಾರ್ಚನೆ ಮಾಡಿ ಮಂಗಳಾರತಿ ತೆಗೆದುಕೊಳ್ಳುತ್ತಾರ..?
ಕರ್ನಾಟಕ ರಾಜ್ಯ ಸರ್ಕಾರವು ತಕ್ಷಣ ಬಾನುಮುಸ್ತಾಕ್ ಆಯ್ಕೆಯನ್ನ ಹಿಂಪಡೆಯಬೇಕು.
ನಮ್ಮ ರಾಜ್ಯದಲ್ಲಿ ಅನೇಕ ಹಿರಿಯ ಘಟಾನುಘಟಿ ಸಾಧಕರುಗಳಿದ್ದಾರೆ.
ಮಾಜಿ ಪ್ರಧಾನಿ, ಹೆಚ್ ಡಿ ದೇವೇಗೌಡ, ಕನ್ನಡದ ಕಟ್ಟಾಳು ಹೋರಾಟಗಾರ ವಾಟಾಳ್ ನಾಗರಾಜ್, ಪದ್ಮಭೂಷಣ ಪ್ರಶಸ್ತಿ ಪಡೆದ ನಟ ಅನಂತನಾಗ್, ಸಾಲುಮರದ ತಿಮ್ಮಕ್ಕ, ಸಮಾಜ ಸೇವಕಿ ಕೊಡುಗೈದಾನಿ ಇನ್ಫೋಸಿಸ್ ನ ಸುಧಾ ಮೂರ್ತಿ, ಭೂಕರ್ ಪ್ರಶಸ್ತಿ ಬರಲು ಮುಖ್ಯ ಕಾರಣಕರ್ತರಾಗಿರುವ ಅನುವಾದಕಿ ದೀಪ ಬಸ್ತಿ ಅವರನ್ನ ಆಯ್ಕೆ ಮಾಡಿ.
ಮೈಸೂರಿನಲ್ಲಿ ಕರ್ನಾಟಕ ಸೇನಾ ಪಡೆ ಒತ್ತಾಯಿಸಿದೆ

:
:
:
Siddaramaiah DK Shivakumar Karnataka DR HC Mahadevappa Kannada News Mysore City Karnataka Karnataka, Bangalore Mysore,India GT Devegowda India ಪ್ರಕೃತಿ ಕನ್ನಡ ನ್ಯೂಸ್ Dasara at Mysore Dasara Ambari Elephant Statue Mysore Dasara

ನಾನು ದಲಿತ ವಿರೋಧಿಯಲ್ಲ,ಅಧಿವೇಶನದಲ್ಲಿನ...ನಾನು ದಲಿತ ವಿರೋಧಿಯಲ್ಲ, ಅಧಿವೇಶನದಲ್ಲಿನ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ :...
28/08/2025

ನಾನು ದಲಿತ ವಿರೋಧಿಯಲ್ಲ,

ಅಧಿವೇಶನದಲ್ಲಿನ...
ನಾನು ದಲಿತ ವಿರೋಧಿಯಲ್ಲ, ಅಧಿವೇಶನದಲ್ಲಿನ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ : ಜಿ.ಟಿ.ದೇವೇಗೌಡ
ನಾನು ದಲಿತ ವಿರೋಧಿಯಲ್ಲ, ಅಧಿವೇಶನದಲ್ಲಿನ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ : ಜಿ.ಟಿ.ದೇವೇಗೌಡ
ಮೈಸೂರು, ಆ.26 : ನಾನು ಎಂದೂ ಮೀಸಲಾತಿ, ದಲಿತರ ವಿರೋಧಿಯಲ್ಲ. ವಿಧಾನಸಭಾ ಅಧಿವೇಶನದಲ್ಲಿ ಸಹಕಾರ ಸಂಘದ ಬಿಲ್‌ ಮಂಡನೆ ವೇಳೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ದಲಿತರು ಪ್ರತಿಭಟನೆ ಮಾಡುತ್ತಿದ್ದಾರೆ. ನನ್ನ ಹೇಳಿಕೆಯಿಂದ ದಲಿತ ಸಮುದಾಯದವರ ಮನಸ್ಸಿಗೆ ನೋವಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದು ಎಂದು ಜವಹಾರ್ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಅವರೇ ಹೇಳಿದ್ದಾರೆ. ಇಂದು ಹಲವಾರು ಸಹಕಾರ ಸಂಘಗಳು ಮುಚ್ಚಿಹೋಗಿವೆ. ಕೆಲವು ಸಂಘಗಳಲ್ಲಿ ವೇತನ ನೀಡಲು ಆಗುತ್ತಿಲ್ಲ. ಹಾಗಾಗಿ ಸರಕಾರದ ಪಾಲುಗಾರಿಕೆ ಇರುವ ಸಹಕಾರ ಸಂಘಗಳಿಗೆ ಮಾತ್ರ ಮೀಸಲಾತಿ ಅನ್ವಯ ಮಾಡಿ ಎಂಬ ಉದ್ದೇಶದಿಂದ ನಾನು ಹೇಳಿದ್ದೇನೆಯೇ ಹೊರತು ಬೇರೆ ಉದ್ದೇಶದಿಂದ ನಾನು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ನೀಡಿದರೆ ಸ್ವಾಗತ ಮಾಡುತ್ತೇನೆ. ಎಸ್ಸಿ, ಎಸ್ಟಿ ಗಳಿಗೆ ಮೂರು ಸ್ಥಾನಕ್ಕೆ ನಾಮ ನಿರ್ದೇಶನ ಮಾಡುವ ಜೊತಗೆ ಹಿಂದುಳಿದವರಿಗೂ ಮೀಸಲಾತಿ ನೀಡಿ ನಾಲ್ಕು ನಿರ್ದೇಶನ ಮಾಡಿ ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಅಧಿವೇಶನದಲ್ಲಿ ನಾನು ಮೀಸಲಾತಿ ವಿರೋಧಿಸಿ ಮಾತನಾಡಲಿಲ್ಲ. ಸಹಕಾರ ಸಂಘದಲ್ಲಿನ ಬದಲಾವಣೆ ಸೇರಿದಂತೆ ಹಲವು ನಿರ್ಣಯ ಕೈಗೊಳ್ಳಲು ಲಕ್ಷ್ಮಣ್ ಸವಧಿ ಅವರು ಸಹಕಾರ ಸಚಿವರಾಗಿದ್ದ ವೇಳೆ ನಾಲ್ಕು ಜನರ ಕಮಿಟಿ ರಚಿಸಲಾಗಿದೆ. ಆ ಕಮಿಟಿ ವರದಿ ಪಡೆಯದೇ ಬಿಲ್ ಮಂಡನೆ ಮಾಡಿದ್ದರಿಂದ ನಾನು ಮಾತನಾಡಿದ್ದೇನೆ. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡು ನನ್ನ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ನಾನು ಸಂವಿಧಾನ ವಿರೋಧಿಯಲ್ಲ, ನನ್ನ ಹೇಳಿಕೆ ಖಂಡಿಸಿ ಹಲವಾರು ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ನನ್ನ ವಿರುದ್ಧ ಅಸಂವಿಧಾನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನನ್ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದಿದೆ. ಅವರು ದೂರು ಕೊಟ್ಟರೂ ನಾನು ಅವರ ವಿರುದ್ಧ ಮಾತನಾಡುವುದಿಲ್ಲ ಎಂದು ಹೇಳಿದರು.

ನಾನು ದಲಿತರ ಒಡನಾಟದಲ್ಲೇ ಬೆಳೆದವನು, ನಮ್ಮ ಊರಿನ ಪಕ್ಕದ ಹಳ್ಳಿಯಲ್ಲಿ ದಲಿತರಿಗೆ ಭೂಮಿ ಕೊಡಿಸಲು ನಾನು ಮತ್ತು ತಂದೆ ಹೋರಾಟ ಮಾಡಿದ್ದೇವೆ. ದಲಿತರ ಜಗಲಿಯಲ್ಲಿ ಮಲಗಿ ಬೆಳೆದಿದ್ದೇನೆ. ನಾನು ದಲಿತರ ವಿರೋಧಿಯಲ್ಲ, ಯಾವ ಸಮುದಾಯದ ವಿರೋಧಿಯೂ ಅಲ್ಲ ಎಂದು ಹೇಳಿದರು.

ನ್ಯಾ.ನಾಗಮೋಹನ್ ದಾಸ್ ಅವರು ಸಂವಿಧಾನ ಓದು ಪುಸ್ತಕವನ್ನು ಬೆಂಗಳೂರಿನಲ್ಲಿ ನನ್ನ ನೇತೃತ್ವದಲ್ಲಿ ಮಾಡಿಸಿದ್ದಾರೆ. ಕಡಕೋಳ ನಾಗರಾಜ್ ಎಂಬ ದಲಿತ ಹುಡುಗನನ್ನು ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷನನ್ನಾಗಿ ಮಾಡಿದ್ದೇನೆ. ಮೈಸೂರು ನಗರದ ಸೌಹಾರ್ಧ ಸಹಕಾರ ಮಹಾಮಂಡಲದ ಅಧ್ಯಕ್ಷರನ್ನಾಗಿ ಬನ್ನೂರಿನ ನಂಜುಂಡಸ್ವಾಮಿ ಅವರನ್ನು ಮಾಡಿದ್ದೇನೆ. ನಾನು ಎಂದೂ ದಲಿತ ವಿರೋಧಿಯಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರುಗಳಾದ ಬೆಳವಾಡಿ ಶಿವಕುಮಾರ್ ಸ್ವಾಮಿ ಸೇರಿದಂತೆ ಚಾಮುಂಡೇಶ್ವರಿ ಕ್ಷೇತ್ರದ ಹಲವು ದಲಿತ ಮುಖಂಡರು ಉಪಸ್ಥಿತರಿದ್ದರು

Address

Hunsur

Alerts

Be the first to know and let us send you an email when ಪ್ರಕೃತಿ ಕನ್ನಡ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಪ್ರಕೃತಿ ಕನ್ನಡ ನ್ಯೂಸ್:

Share