Sudha & Sandeep Manjunath

Sudha & Sandeep Manjunath S4 Naturals - Simple Sustainable Self- reliant Society Promoting Desi cow based natural farming.
(1)

30/07/2026

ನಮ್ಮ ಶಾಲಾ ಕಾಲೇಜುಗಳಲ್ಲಿ ನಿಜಕ್ಕೂ ಜ್ಞಾನ ಸಿಗುತ್ತಿದ್ದೆಯೇ? ಜ್ಞಾನಕ್ಕೂ ಮಾಹಿತಿಗೂ ವ್ಯತ್ಯಾಸವೇನು? Is our schools really giving Knowledge or just sharing information? Wonderful information shared by Sri Ramakrishna of AGRiS Mysore. Share with all. Let our education system change and our children get right knowledge.

ನಾಟಿ ತಿಂಗಳ ಹುರಳಿ ಕಾಯಿ. ಎಳೆಯದಿದ್ದಾಗ ಪಲ್ಯಕ್ಕೆ. ಬಲಿತರೆ ಕಾಳು ಬಿಡಿಸಿ ಸಾರು, ಬಾತ್ ಇತ್ಯಾದಿಗಳನ್ನು ಮಾಡುವುದಕ್ಕೆ ಚೆನ್ನಾಗಿರುತ್ತದೆ. ಒಟ...
30/07/2026

ನಾಟಿ ತಿಂಗಳ ಹುರಳಿ ಕಾಯಿ. ಎಳೆಯದಿದ್ದಾಗ ಪಲ್ಯಕ್ಕೆ. ಬಲಿತರೆ ಕಾಳು ಬಿಡಿಸಿ ಸಾರು, ಬಾತ್ ಇತ್ಯಾದಿಗಳನ್ನು ಮಾಡುವುದಕ್ಕೆ ಚೆನ್ನಾಗಿರುತ್ತದೆ. ಒಟ್ಟಿನಲ್ಲಿ ನಾಟಿ ತಳಿ ಬೆಳೆದರೆ ಬಲಿತ ಕಾಯಿಗಳನ್ನು ಉಪಯೋಗಿಸಬಹುದು. ಇದೇ ತಿಂಗಳ ಹುರಳಿಯ ಹೈಬ್ರಿಡ್ ಬೆಳೆದರೆ ಈ ರೀತಿ ಉತ್ತಮ ಬೀಜ ಆಗುವುದಿಲ್ಲ. ಹಾಗಾಗಿ ನಾಟಿ ತಳಿಯನ್ನು ಸ್ವಲ್ಪಮಟ್ಟಿಗಾದರೂ ಬೆಳೆಯೋಣವಲ್ಲವೇ?

ಒಬ್ಬರಿಗೆ ಬೇಡವಾದ ಕಸ ಮತ್ತೊಂದು ಜೀವಿಗೆ ಆಹಾರ… ಇತ್ತೀಚಿಗೆ ಈ ರೀತಿ ಅಕ್ಕಿ ಆಯುವ ಕೆಲಸವೇ ಇಲ್ಲವಾಗಿದೆ. ಮೊದಲೆಲ್ಲಾ ಅಮ್ಮ ಮೊರ ಹಿಡಿದು ಅಕ್ಕಿ ...
30/07/2026

ಒಬ್ಬರಿಗೆ ಬೇಡವಾದ ಕಸ ಮತ್ತೊಂದು ಜೀವಿಗೆ ಆಹಾರ…
ಇತ್ತೀಚಿಗೆ ಈ ರೀತಿ ಅಕ್ಕಿ ಆಯುವ ಕೆಲಸವೇ ಇಲ್ಲವಾಗಿದೆ. ಮೊದಲೆಲ್ಲಾ ಅಮ್ಮ ಮೊರ ಹಿಡಿದು ಅಕ್ಕಿ ಬೇಳೆ ಆಯುವುದೆಂದರೆ ಅದೊಂದು ದೊಡ್ಡ ಕೆಲಸ. ಹೊರಗೆ ಹತ್ತಾರಿ ಗುಬ್ಬಚ್ಚಿಗಳು ಇದಕ್ಕಾಗೇ ಕಾದು ಕುಳಿತಿರುತ್ತಿದ್ದವು. ಆದರೆ ಇತ್ತೀಚಿಗೆ ಎಲ್ಲವೂ ಯಾಂತ್ರೀಕರಣವಾದ್ದರಿಂದ ಅಕ್ಕಿಯಲ್ಲಿ ಅಷ್ಟಾಗಿ ಕಸ ಕಡ್ಡಿ ಹುಳುಕು ಇರುವುದಿಲ್ಲ. ಅದೇ ರೀತಿ ಗುಬ್ಬಚ್ಚಿಯೂ ಕಾಣೆಯಾಗಿದೆ. ಸದ್ಯ ನಮ್ಮ ತೋಟದಲ್ಲಿ ಇನ್ನೂ ಸ್ವಲ್ಪ ಅಕ್ಕಿ ಬೇಳೆ ಆಯುವ ಪದ್ದತಿ ಇದೆ. ಗುಬ್ಬಚ್ಚಿ ಬದಲಿಗೆ ಕೋಳಿಗಳು ನುಚ್ಚು ಇತ್ಯಾದಿ ತಿನ್ನುತ್ತವೆ.

ಕಮಲ ಮತ್ತು ನೈದಿಲೆ ಬೆಳೆಯುವ ಪ್ರಯತ್ನದ ಕಿರು ನೋಟಬೇಸಿಗೆಯಲ್ಲಿ ನಮ್ಮೂರಿನ ಕೆರೆ ಕಟ್ಟೆಗಳಲ್ಲಿ ಕಮಲಗಳು ಅರಳುವುದನ್ನು ನೋಡಿ ಬಹಳ ಸಂತಸಪಡುತ್ತಿದ...
30/07/2026

ಕಮಲ ಮತ್ತು ನೈದಿಲೆ ಬೆಳೆಯುವ ಪ್ರಯತ್ನದ ಕಿರು ನೋಟ
ಬೇಸಿಗೆಯಲ್ಲಿ ನಮ್ಮೂರಿನ ಕೆರೆ ಕಟ್ಟೆಗಳಲ್ಲಿ ಕಮಲಗಳು ಅರಳುವುದನ್ನು ನೋಡಿ ಬಹಳ ಸಂತಸಪಡುತ್ತಿದ್ದೆವು. ಬೆಂಗಳೂರಿನ ರಾಮಕೃಷ್ಣ ಆಶ್ರಮಕ್ಕೆ ಹೋದಾಗಲೂ ಗೇಟ್ ಬಳಿ ಇರುವ ಕೊಳದಲ್ಲಿ ನೀಲಿ ಬಣ್ಣದ ಕಮಲ ನೈದಿಲೆಗಳನ್ನು ನೋಡಿ ನಮ್ಮಲ್ಲೂ ಈ ರೀತಿ ಬೆಳೆಯಬೇಕು ಎಂದು ಸದಾ ಅನಿಸುತಿತ್ತು. ಮಂಗಳೂರಿನ ಶ್ರೀಮತಿ ಸ್ನೇಹಾ ರವೀಶ್ ಭಟ್ ಅವರು ಮನೆಯ ತಾರಸಿಯಲ್ಲಿ 380ಕ್ಕೂ ಹೆಚ್ಚು ಬಗೆಯ ಜಲಸಸ್ಯಗಳನ್ನು ಬೆಳೆಯುತ್ತಿರುವುದನ್ನು ಗಮನಿಸಿದೆವು. ನಮ್ಮ ಉತ್ಸಾಹ ಮತ್ತಷ್ಟು ಹೆಚ್ಚಾಯಿತು. ಸ್ನೇಹಾ ಅವರ ಮಾರ್ಗದರ್ಶನದಲ್ಲಿ ನಮ್ಮ ತೋಟದಲ್ಲಿ ಚಿಕ್ಕ ಕೊಳ ನಿರ್ಮಸಿ ಇಂದು ಅದರಲ್ಲಿ ಕಮಲದ ಗಿಡಗಳನ್ನು ನೆಟ್ಟೆವು. ನಂತರ ಅದರೊಳಗೆ ನಾಲ್ಕೈದು ಗಪ್ಪಿ ಮೀನು ಸಹ ಬಿಟ್ಟೆವು. ಅವುಗಳ ಓಡಾಟ ನಮಗೆಲ್ಲಾ ಅತೀವ ಆನಂದ ನೀಡಿತು. ನಿಮಗೂ ಈ ರೀತಿ ಮನೆಯಲ್ಲೇ ಕಮಲ ಬೆಳೆಸಬೇಕು, ಕೆರೆಯ ವಾತಾವರಣ ಸೃಷ್ಠಿಸಬೇಕೆಂದರೆ ಸ್ನೇಹಾ ಅವರು ಪೂರ್ಣ ಮಾರ್ಗದರ್ಶನ ನೀಡುತ್ತಾರೆ. ಅವರ ಬಳಿ ಗಿಡಗಳು ಮಾರಾಟಕ್ಕೆ ಲಭ್ಯವಿದೆ. ದೇಶದಾದ್ಯಂತ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ ಸ್ನೇಹಾ ಭಟ್. ಕೇವಲ ಮಾರಾಟವಷ್ಟೇ ಅಲ್ಲ. ಗ್ರಾಹಕರ ಮನೆಯಲ್ಲಿ ಹೂವು ಅರಳುವ ವರೆಗೆ ಎಲ್ಲ ರೀತಿಯ ಮಾಹಿತಿ ನೀಡಿ ಸರಿದಾರಿಯಲ್ಲಿ ನಮ್ಮನ್ನು ನಡೆಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9844643231. ಕಳೆಗಿನ ಚಿತ್ರಗಳಿಗೆ ಅಡಿ ಬರಹವಿದ್ದು ಸ್ವಲ್ಪ ಗಮನಿಸಿದರೆ ಯಾರು ಬೇಕಾದರೂ ಕಮಲ ಬೆಳೆಯಬಹುದು.

ಗುರುಪೂಜೆಯ ಶುಭದಿನದಂದು ಮಂಗಳೂರಿನ ಶ್ರೀಮತಿ ಸ್ನೇಹಾ ಭಟ್ ಅವರು ಕಮಲ ಮತ್ತು ನೈದಿಲೆ ಗಿಡಗಳನ್ನು ಕಳುಹಿಸಿದ್ದು ಅತೀವ ಸಂತಸ ತಂದಿದೆ. ಸ್ನೇಹ ಅವರ...
29/07/2026

ಗುರುಪೂಜೆಯ ಶುಭದಿನದಂದು ಮಂಗಳೂರಿನ ಶ್ರೀಮತಿ ಸ್ನೇಹಾ ಭಟ್ ಅವರು ಕಮಲ ಮತ್ತು ನೈದಿಲೆ ಗಿಡಗಳನ್ನು ಕಳುಹಿಸಿದ್ದು ಅತೀವ ಸಂತಸ ತಂದಿದೆ. ಸ್ನೇಹ ಅವರು ಮೂಲತಃ ಎಂ.ಸಿ.ಎ ಓದಿ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಮಂಗಳೂರು ಆಕಾಶವಾಣಿಯ ಉದ್ಗೋಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಕಮಲ ಮತ್ತು ವಾಟರ್ ಲಿಲ್ಲ ಮೇಲೆ ಅದೆಷ್ಟರ ಮಟ್ಟಿಗೆ ಆಸಕ್ತಿ ಎಂದರೆ 380ಕ್ಕೂ ಹೆಚ್ಚು ಪ್ರಭೇದಗಳನ್ನು ತಮ್ಮ ಮನೆಯ ತಾರಸಿಯಲ್ಲಿ ಬೆಳೆಸುತ್ತಿದ್ದಾರೆ. ಇವರ ಸಾಧನೆ ಅಮೋಘ. ನಶಿಸಿ ಹೋಗುತ್ತಿರುವ ಕೆರೆ ಕಟ್ಟೆಗಳಿಂದ ವಿವಿಧ ಬಣ್ಣದ ಕಮಲಗಳನ್ನು ಸಂಗ್ರಹಿಸುವ ಜೊತೆಗೆ ದೇಶ ವಿದೇಶದ ಹೂವುಗಳೂ ಇವರ ಬಳಿ ಇದೆ. ಕೈ ತೋಟ, ದೇವಸ್ಥಾನ, ಉದ್ಯಾನವನ, ಹೋಟೆಲ್ ರೆಸಾರ್ಟ್ ಇತ್ಯಾದಿ ತಾಣಗಳಲ್ಲಿ ಕೃತಕವಾಗಿ ಕೊಳ ನಿರ್ಮಿಸಿ ಕಮಲ ಬೆಳಸಬಹುದಾಗಿದೆ. ಮನೆ ತಾರಸಿಯಂತೂ ಕಮಲಕ್ಕೆ ಹೇಳಿ ಮಾಡಿಸಿದ ಜಾಗ. ಸ್ವಲ್ಪ ಆಸಕ್ತಿ ತೋರಿಸಿದರೆ ಸಾಕು ನಮ್ಮ ಮನೆಯಲ್ಲೇ ಕಮಲ ಅರಳುವಂತಿ ಮಾಡಬಹುದು. ಈ ವರಮಹಾಲಕ್ಷ್ಮೀ ಹಬ್ಬಕ್ಕೆ ನಮ್ಮ ಮನೆಯಲ್ಲೇ ಬೆಳೆದ ಕಮಲದ ಹೂವನ್ನು ದೇವರಿಗೆ ಸಮರ್ಪಿಸಬೇಕೆಂದು ನಾವು ಸ್ನೇಹ ಅವರಿಂದ ಕಮಲದ ಗಿಡ ತರಿಸಿದ್ದೇವೆ. ನಿಮಗೂ ಬೇಕೆಂದರೆ ಸಂಪರ್ಕಿಸಿ +91 98446 43231

ಇದು ಛಾಯ ಮಾನಸ ಗಿಡ. ಆಡು ಕುರಿಗಳಿಗೆ ಉತ್ತಮ ಮೇವು. ನಾವು ಸಹ ಅಡುಗೆಯಲ್ಲಿ ಬೇರೆ ಸೊಪ್ಪುಗಳ ರೀತಿ ಬಳಸಬಹುದು. ದಕ್ಷಿಣ ಅಮೇರಿಕ ಮತ್ತು ಈಶಾನ್ಯ ರ...
29/07/2026

ಇದು ಛಾಯ ಮಾನಸ ಗಿಡ. ಆಡು ಕುರಿಗಳಿಗೆ ಉತ್ತಮ ಮೇವು. ನಾವು ಸಹ ಅಡುಗೆಯಲ್ಲಿ ಬೇರೆ ಸೊಪ್ಪುಗಳ ರೀತಿ ಬಳಸಬಹುದು. ದಕ್ಷಿಣ ಅಮೇರಿಕ ಮತ್ತು ಈಶಾನ್ಯ ರಾಷ್ಟ್ರಗಳಲ್ಲಿ ಇದರಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಮನೆಯಂಗಳದಲ್ಲಿ ಇದೊಂದಿದ್ದರೆ ಆಪತ್ಕಾಲಕ್ಕೆ ಸೊಪ್ಪಾಗಿ ರಾಸುಗಳಿಗೆ ಮೇವಾಗಿ ಸಹಾಯಕ್ಕೆ ಬರುತ್ತದೆ.

ಗುರು ಪೂರ್ಣಿಮೆ ಪೂಜೆಗೆ ನಮ್ಮ ಅರಳಿದೆ ವಿಧವಿಧ ಪುಷ್ಪಗಳು. ಈ ವರ್ಷ ಮಳೆ ಸರಿಯಾಗಿ ಆಗಿಲ್ಲ. ಹಾಗಾಗಿ ಕೆಲ ಗಿಡಗಳಲ್ಲಿ ಬೇಗನೆ ಹೂವು ಕಾಣಿಸುತ್ತಿದ...
29/07/2026

ಗುರು ಪೂರ್ಣಿಮೆ ಪೂಜೆಗೆ ನಮ್ಮ ಅರಳಿದೆ ವಿಧವಿಧ ಪುಷ್ಪಗಳು. ಈ ವರ್ಷ ಮಳೆ ಸರಿಯಾಗಿ ಆಗಿಲ್ಲ. ಹಾಗಾಗಿ ಕೆಲ ಗಿಡಗಳಲ್ಲಿ ಬೇಗನೆ ಹೂವು ಕಾಣಿಸುತ್ತಿದೆ. ಅದರಲ್ಲೂ ಗೌರಿ ಹಬ್ಬ ಸಮಯದಲ್ಲಿ ಅರಳುತ್ತಿದ್ದ ಸ್ಫಟಿಕ ಈಗಲೇ ಅರಳುತ್ತಿದೆ. ಈ ವರ್ಷದ ಮೊದಲ ಡೇರೆ ಹೂವು ನೋಡಿ ಬಹಳವೇ ಆನಂದವಾಯಿತು. ಇನ್ನು ಪರಿಮಳ ಯುಕ್ತ ಪಾರಿಜಾತ ಯಾರಿಗೆ ಇಷ್ಟವಿಲ್ಲ ಹೇಳಿ. ಇರುವುದು ಸ್ವಲ್ಪ ಸಮಯವಾದರೂ ಒಳ್ಳೆಯ ಸುವಾಸೆ ಬೀರಿ ಬಾಡುತ್ತದೆ. ನಾವು ಅದೇ ರೀತಿ ಅರಬೇಕು ಎನ್ನುವ ಸಂದೇಶ ಮೌನವಾಗಿ ಸಾರುತ್ತದೆ. ಕೈ ತೋಟದಲ್ಲಿ ಈ ರೀತಿ ಬಗೆ ಬಗೆಯ ಹೂವುಗಳಿದ್ದರೆ ಎಷ್ಟು ತೆಂಗ ಅಲ್ಲವೇ? ನಾವೇ ಬೆಳೆದ ಹೂವುಗಳಿಂದ ದೇವರಿಗೆ ಪೂರಜೆ ಮಾಡುವಾಗ ವಿಶೇಷ ಅನುಭೂತಿಯಾಗುವುದರಲ್ಲಿ ಸಂಶಯವಿಲ್ಲ

ನಮ್ಮ ಜೀವನ ಇಂದು ಈ ಮಟ್ಟದಲ್ಲಿದೆ ಎಂದರೆ ಅದಕ್ಕೆ ಜನ್ಮ ನೀಡಿದ ತಂದೆ ತಾಯಿ, ಬಂಧು ಮಿತ್ರರು ಅದಕ್ಕಿಂತ ಮಿಗಿಲಾಗಿ ಮಾರ್ಗದರ್ಶನ ನೀಡಿದ ಗುರುಗಳು....
29/07/2026

ನಮ್ಮ ಜೀವನ ಇಂದು ಈ ಮಟ್ಟದಲ್ಲಿದೆ ಎಂದರೆ ಅದಕ್ಕೆ ಜನ್ಮ ನೀಡಿದ ತಂದೆ ತಾಯಿ, ಬಂಧು ಮಿತ್ರರು ಅದಕ್ಕಿಂತ ಮಿಗಿಲಾಗಿ ಮಾರ್ಗದರ್ಶನ ನೀಡಿದ ಗುರುಗಳು. ಗುರುಗಳೆಂದರೆ ಕೇವಲ ಶಾಲೆ ಕಾಲೇಜಿನಲ್ಲಿ ಪಾಠ ಕಲಿಸಿದವರು ಮಾತ್ರವಲ್ಲ. ನಮ್ಮ ಬದುಕಿನಲ್ಲಿ ಯಾವುದೋ ಸಮಯದಲ್ಲಿ ಹೊಸ ವಿಚಾರ, ಸರಿ ದಾರಿ, ಸ್ಫೂರ್ತಿಯ ನಾಲ್ಕು ಮಾತುಗಳು ಆಡಿದರೂ ಸಾಕು. ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಸಿಕ್ಕಹಾಗೆ ಯಾರು ಬೇಕಾದರೂ ನಮಗಿಂತ ಚಿಕ್ಕವರೂ ಹಲವು ಸಲ ನಮಗೆ ಗುರುಗಳಾಗುತ್ತರೆ. ಪ್ರತಿಯೊಬ್ಬರಲ್ಲೂ ಕಲಿಯುವುದು ಇರುತ್ತದೆ. ನಾವು ಹಲವರಿಂದ ಪ್ರೇರಣೆಗೊಂಡು ಈ ರೀತಿ ಇದ್ದೇವೆ. ಎಲ್ಲರಿಗೂ ಗುರುಪೂರ್ಣಿಮಾ ಶುಭಾಶಯಗಳು. ನಮ್ಮನ್ನು ಹೀಗೆ ಪ್ರೇರೇಪಿಸುತ್ತಿರಿ. ಸರಿಯಾದ ಮಾರ್ಗದಲ್ಲಿ ಚಲಿಸುವಂತೆ ಅನುಗ್ರಹ ಮಾಡಿ. 🙏

ಚಾಮರಾಜನಗರದ ನೈಸರ್ಗಿಕ ಕೃಷಿಕ ಶ್ರೀ ಮಹದೇವಸ್ವಾಮಿ ಅವರು ದಶಕಗಳಿಂದ APMC ಗೆ ಹೋಗದೆ ತಾವು ಬೆಳೆಯುವ ಎಲ್ಲಾ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿ...
29/07/2026

ಚಾಮರಾಜನಗರದ ನೈಸರ್ಗಿಕ ಕೃಷಿಕ ಶ್ರೀ ಮಹದೇವಸ್ವಾಮಿ ಅವರು ದಶಕಗಳಿಂದ APMC ಗೆ ಹೋಗದೆ ತಾವು ಬೆಳೆಯುವ ಎಲ್ಲಾ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಕುರಿತು ಶ್ರೀ ಸಂದೀಪ್ ಮಂಜುನಾಥ್ ಎಂ.ಎಸ್ಸಿ ಕೃಷಿ ಅವರು ಬರೆದ ಲೇಖನದ ಎರಡನೇ ಭಾಗ ಈ ವಾರದ ವಿಕ್ರಮ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಆಸಕ್ತರು ಓದಿ ಇತರರೊಂದಿಗೆ ಹಂಚಿಕೊಳ್ಳಿ. ಮಹದೇವಸ್ವಾಮಿ ಅವರ ಸಂಪರ್ಕ ಸಂಖ್ಯೆ 8971670774
ವಿಕ್ರಮ ಪತ್ರಿಕೆ ಚಂದಾದಾರರಾಗಲು ಸಂಪರ್ಕಿಸಿ 9035006777

ಹನ್ನೆರಡು ವರ್ಷದಿಂದ APMC ಗೆ ಕಾಲಿಡದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮಹದೇವಸ್ವಾಮಿ.

ಕೃಷಿ ಆರ್ಥಿಕತೆ ಮತ್ತು ಕೃಷಿ ಮನ್ನಶಾಸ್ತ್ರದ ಕುರಿತು ಹಿಂದಿನ ಅಂಕಣದಲ್ಲಿ ತಿಳಿಯುತ್ತಾ ಚಾಮರಾಜನಗರಕ್ಕೆ ಹೊಂದಿಕೊಂಡಂತೆ ಇರುವ ದೊಡ್ಡಪಾಯ ಪೇಟೆಯ ಪ್ರಗತಿಪರ ಕೃಷಿಕ ಮಹದೇವಸ್ವಾಮಿಯವರು ನಂಬರ್ ಒನ್ ಆಲೆ ಮನೆ ಕಟ್ಟಿದ್ದನ್ನು ತಿಳಿದೆವು. ಆಲೆ ಮನೆ ವ್ಯವಹಾರ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಮುಂದೊಂದು ದಿನ ನೀರಿನ ಕೊರತೆ ಅಥವಾ ಮತ್ತಾವುದಾದರೂ ಕಾರಣಕ್ಕೆ ರೈತರು ಕಬ್ಬು ಬೆಳೆಯುವುದನ್ನು ಕಡಿಮೆ ಮಾಡಿದರೆ ಈ ಉದ್ಯಮ ನಡೆಸುವುದು ಕಷ್ಟ ಎನಿಸುತ್ತದೆ. ಸಣ್ಣ ಕೆಲಸ ಮಾಡುವಾಗಲೂ ಮಹದೇವಸ್ವಾಮಿ ಹತ್ತು ಸಲ ಯೋಚಿಸುತ್ತಾರೆ. ಮುಂದಾಗಬಹುದಾದ ಆಗುಹೋಗುಗಳ ಕುರಿತು ಆಳವಾಗಿ ತಿಳಿಯುತ್ತಾರೆ. ಖರ್ಚು ಕಡಿಮೆ ಅಧಿಕ ಲಾಭ ವಾಕ್ಯವನ್ನು ಜೀವನದ ಮುಖ್ಯ ಮಂತ್ರವಾಗಿಸಿರುವ ಮಹದೇವಸ್ವಾಮಿ ಅವರಿಗೆ ನೈಸರ್ಗಿಕ ಕೃಷಿಯ ಕುರಿತು ಆಸಕ್ತಿ ಮೂಡುತ್ತದೆ. "ಯದ್ಭಾವಮ್ ತದ್ಭವತಿ"ಎನ್ನುವ ಹಾಗೆ ಅದೇ ಸಮಯದಲ್ಲಿ ಸರ್ಕಾರದ ಸಾವಯವ ಕೃಷಿ ಭಾಗ್ಯ ಯೋಜನೆ ಅವರ ಊರಿಗೆ ಬರುತ್ತದೆ. ಯೋಜನೆಯ ಮುಂದಾಳತ್ವ ವಹಿಸಿದ ಮಹದೇವಸ್ವಾಮಿ ಅವರು 2014 ರಿಂದ ಸಂಪೂರ್ಣವಾಗಿ ರಾಸಾಯನಿಕಗಳನ್ನು ಬಳಸುವುದನ್ನು ನಿಲ್ಲಿಸುತ್ತಾರೆ. ಜೀವಾಮೃತ ತಯಾರಿಸಲು ಎರಡು ತೊಟ್ಟಿಗಳನ್ನು ಆಲೆ ಮನೆ ಪಕ್ಕದಲ್ಲೇ ನಿರ್ಮಿಸುತ್ತಾರೆ. ಜಮೀನಿನಲ್ಲಿ ವಾಣಿಜ್ಯ ಬೆಳೆಗಳ ಜೊತೆ ಸ್ವಲ್ಪ ಜಾಗದಲ್ಲಿ ರಾಗಿ, ಎಳ್ಳು, ಹುಚ್ಚೇಳು, ನವಣೆ, ಹಲಸಂದೆ, ಉದ್ದು, ಹೆಸರು, ಅವರೆ, ತೊಗರಿ, ಸಾಸಿವೆ, ಬದುಗಳಲ್ಲಿ ಕುಂಬಳ, ಹೀರೆ, ಸೋರೆ, ಚಪ್ಪರದ ಅವರೆ ಹೀಗೆ 32 ಕ್ಕೂ ಹೆಚ್ಚು ಬೆಳೆ ಬೆಳೆಯಲು ಪ್ರಾರಂಭಿಸುತ್ತಾರೆ. ಇದರಿಂದ ಮನೆಗೆ ಬೇಕಾದ ಬಹುತೇಕ ಕಾಳುಗಳು ಜಮೀನಿನಲ್ಲೇ ಲಭಿಸುತ್ತದೆ. ಈ ರೀತಿ ಮನೆ ಬಳಕೆಗೆ ಬೇಕಾದ ಸಾಮಗ್ರಿಗಳನ್ನು ಹೊರಗಿನಿಂದ ಖರೀದಿಸುವುದನ್ನು ಬಿಟ್ಟರೆ ರೈತರಿಗೆ ಎಷ್ಟೋ ಉಳಿತಾಯವಾಗುತ್ತದೆ. ಅದು ಸಹ ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದಿರುವ ಕಾರಣ ಕೀಟನಾಶಗಕಳ ಉಳಿಕೆ ಅಂಶ ಇಲ್ಲದೆ ವಿಷ ಮುಕ್ತವಾದ ಆಹಾರ ದೊರೆಯುತ್ತದೆ. ಹಸುಗಳಿಗೆ ರಾಗಿ ಮತ್ತಿತ್ತರ ಬೆಳೆಗಳ ಹುಲ್ಲು ವರ್ಷ ಪೂರ್ತಿ ಒಣ ಮೇವಾಗಿ ಉಪಯೋಗವಾಗುತ್ತದೆ. ಇನ್ನು ಸಪೋಟ, ಮಾವು, ಪಪ್ಪಾಯಿ ರೀತಿಯ ಹಣ್ಣಿನ ಗಿಡಗಳನ್ನು ಅಲಲ್ಲಿ ನೆಟ್ಟಿದ್ದು ಮನೆಗೆ ಬೇಕಾದ ಹಣ್ಣು ಹಂಪಲು ಸಹ ಇದರಿಂದ ಲಭಿಸುತ್ತಿಗೆ. ರೈತರು ಯಾವುದೇ ಒಂದು ಬೆಳೆ ಬೆಳೆಯದೆ ಬಹು ಬೆಳೆ ಪದ್ದತಿ ಅದರಲ್ಲಿ ಮಾರಾಟಕ್ಕಾಗಿ ಮತ್ತು ಮನೆಗಾಗಿ ಬೆಳೆಗಳನ್ನು ಬೆಳದರೆ ಸ್ವಾವಲಂಬಿ ಬದುಕು ನಡೆಸಬಹುದಾಗಿದೆ.

ಗುತ್ತಿಗೆಗೆ ಪಡೆದ ಜಮೀನಿನಲ್ಲೂ ನೈಸರ್ಗಿಕ ಕೃಷಿ: ನಾನು ಕೆಲವೊಮ್ಮೆ ಬಾಳೆ, ಅರಿಶಿಣ ಮತ್ತು ಕಬ್ಬು ಬೆಳೆಯಲು ಇತರರ ಜಮೀನಿನ್ನು ಗುತ್ತಿಗೆಗೆ ಪಡೆಯತ್ತೇನೆ. ಸಾಮಾನ್ಯವಾಗಿ ಎಲ್ಲರೂ ಗುತ್ತಿಗೆ ಜಮೀನಿಗೆ ಹೆಚ್ಚು ತಿಪ್ಪೆಗೊಬ್ಬರ ಹಾಕುವುದಿಲ್ಲ. ಆದರೆ ನಾನು ಈ ಜಮೀನಿನಲ್ಲೂ ಯಾವುದೇ ರಾಸಾಯನಿಕ ಗೊಬ್ಬರ / ಕೀಟನಾಶಕ ಬಳಸುವುದಿಲ್ಲ. ಸರಿಯಾಗಿ ಯೋಜನೆ ಮಾಡಿ ಬೆಳೆ ಬೆಳೆದರೆ ಮೊದಲ ವರ್ಷದಲ್ಲೇ ಉತ್ತಮ ಇಳುವರಿ ಪಡೆಯಬಹುದಾಗಿದೆ. ಹೀಗೆ ಬೆಳೆದ ಕಬ್ಬನ್ನು ನಮ್ಮ ಆಲೆ ಮನೆಯಲ್ಲೇ ಸಂಸ್ಕರಿಸಿ ಬೆಲ್ಲ ತಯಾರಿಸುತ್ತೇವೆ. ಬೆಲ್ಲದ ಪುಡಿಗೆ ಬಹಳ ಬೇಡಿಕೆ ಇರುವ ಕಾರಣ ಇತ್ತೀಚಿಗೆ ಪುಡಿ ಬೆಲ್ಲವನ್ನೇ ಹೆಚ್ಚು ಉತ್ಪಾದಿಸುತ್ತೇವೆ.

ಸಾವಯವ ಸೊಪ್ಪು ತರಕಾರಿ ಕೃಷಿ ಗ್ರಾಹಕರಿಗೆ ನೇರ ಮಾರಾಟ: ನೈಸರ್ಗಿಕ ಕೃಷಿ ಮಾಡುವ ಕಾರಣ ಒಮ್ಮೊಮ್ಮೆ ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ. ಹಾಗಾಗಿ ನೈಸರ್ಗಿಕ ಕೃಷಿಕರು ತಮ್ಮ ಉತ್ಪನ್ನವನ್ನು ಕೃಷಿ ಉತ್ಪನ್ನ ಮಾರುಕಟ್ಚೆ ಸಮಿತಿಗೆ ಮಾರಾಟಕ್ಕೆ ತೆಗೆದುಕೊಂಡು ಹೋಗದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದರೆ ಸ್ವಲ್ಪ ಲಾಭ ನೋಡಬಹುದು. ಇಲ್ಲವಾದರೆ ನಾವು ಕಷ್ಟಪಟ್ಟು ದುಡಿದ್ದಿದೆಲ್ಲಾ ದಲ್ಲಾಳಿಯ ಪಾಲಾಗುತ್ತದೆ. ನಮಗೆ ಚಾಮರಾಜನಗರ ಬಹಳ ಹತ್ತಿರವಾಗಿದೆ. ಹಾಗಾಗಿ ನಾನು ಬೆಳೆಯುವ ಸೊಪ್ಪು ತರಕಾರಿಗಳನ್ನು ನಗರದಲ್ಲಿ ರಸ್ತೆ ಬದಿ ಇಟ್ಟು ಮಾರಾಟಮಾಡಲು ಪ್ರಾರಂಭಿಸಿದೆ. ಆದರೆ ಇದು ಸುಲಭದ ಮಾರ್ಗವಲ್ಲ. ಗ್ರಾಹಕರು ನಮ್ಮನ್ನು ನೂರು ಪ್ರಶ್ನೆ ಕೇಳುತ್ತಾರೆ. ಚೌಕಾಸಿ ಮಾಡುತ್ತಾರೆ. ಕೆಲವೊಮ್ಮೆ ಹೀಯಾಳಿಸುತ್ತಾರೆ. ಎಲ್ಲವನ್ನೂ ಸಮಾಧಾನದಿಂದ ಸ್ವೀಕರಿಸಬೇಕು. ಕೆಲವರು ನೀವು ಸಾವಯವದಲ್ಲಿ ಬೆಳೆದಿರುವುದಕ್ಕೆ ಏನು ಆಧಾರ? ಹೇಗೆ ನಂಬುವುದು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರವಾಗಿ ನನ್ನ ಬಾವಚಿತ್ರ ಮತ್ತು ತೋಟದ ಮಾಹಿತಿ ಇರುವ ಫಲಕ (flex banner) ಸಿದ್ದಪಡಿಸಿ ನಾನು ರಸ್ತೆ ಬದಿ ಮಾರಾಟ ಮಾಡುವ ಜಾಗದಲ್ಲಿ ಇರಿಸಿದೆ. ನಮ್ಮ ತೋಟಕ್ಕೆ ಯಾವಾಗ ಬೇಕಾದರೂ ಬಂದು ತಾವು ಪರಿಶೀಲಿಸಬಹುದು ಎಂದು ಧೈರ್ಯವಾಗಿ ಗ್ರಾಹಕರಿಗೆ ಹೇಳಿದೆ. ನಗರದ ಹೊರವಲಯದಲ್ಲಿರುವ ಕಾರಣ ಕೆಲ ಗ್ರಾಹಕರು ನೇರವಾಗಿ ತೋಟಕ್ಕೆ ಆಗಮಿಸಿ ನಾವು ಅನುಸರಿಸುತ್ತಿರುವ ಪದ್ದತಿಗಳ ಕುರಿತು ಮಾಹಿತಿ ಪಡೆದರು. ಅವರು ಬಾಯಿಂದ ಬಾಯಿಗೆ ನಮ್ಮ ಕುರಿತು ಪ್ರಚಾರ ಮಾಡುತ್ತಾ ಇಂದು ನಾನು ಮಾರಾಟ ಮಾಡಲು ಎಲ್ಲಿಗೂ ಹೋಗುವುದಿಲ್ಲ. ಬದಲಾಗಿ ಗ್ರಾಹಕರೆ ನಮ್ಮ ತೋಟಕ್ಕೆ ಆಗಮಿಸಿ ಸೊಪ್ಪು ತರಕಾರಿ ಬೆಲ್ಲ ಮತ್ತು ಆ ಸಮಯದಲ್ಲಿ ಏನು ಸಿಗುತ್ತದೋ ಎಲ್ಲವನ್ನು ಖರೀದಿಸುತ್ತಿದ್ದಾರೆ. ಇದರಿಂದ ಹೆಚ್ಚಿನ ಲಾಭ ಮತ್ತು ನನ್ನ ಸಮಯ ಉಳಿಯುತ್ತಿದೆ.

ಯುವಕರಿಗೆ ಮಾರ್ಗದರ್ಶನ: ಕೇವಲ ನಾವು ಮಾತ್ರ ಜೀವನದಲ್ಲಿ ಮುಂದೆಬರದೆ ಇತರರೂ ನನ್ನ ಹಾಗೆ ನೈಸರ್ಗಿಕ ಕೃಷಿ ಮಾಡಬೇಕು, ಭೂಮಿಯನ್ನು ಉಳಿಸಬೇಕೆಂದು ನನ್ನ ಅನುಭವ ಹಂಚಿಕೊಳ್ಳಲು ಸದಾ ಸಿದ್ದವಾಗಿದ್ದೇನೆ. ಗುಂಪಾಗಿ ಯಾರಾದರೂ ನಮ್ಮ ತೋಟಕ್ಕೆ ಆಗಮಿಸಿದರೆ ನೈಸರ್ಗಿಕ ಕೃಷಿಯ ಪೂರ್ಣ ಮಾಹಿತಿ ನೀಡಲಾಗುತ್ತದೆ. ಸದ್ಯ ನಮ್ಮ ತೋಟದಲ್ಲಿ ಬೆಳೆಯುವ ಕಬ್ಬನ್ನು ಮಾತ್ರ ನಮ್ಮ ಆಲೆ ಮನೆಯಲ್ಲಿ ಅರೆಯಲಾಗುತ್ತಿದೆ. ಅದರ ಕುರಿತು ಮಾಹಿತಿ ಬೇಕಿದ್ದರೂ ಆಲೆ ಮನೆ ನಡೆಯುವಾಗ ಆಗಮಿಸಿ ವಿಷಯ ಸಂಗ್ರಹಿಸಬಹುದು. ನನ್ನ ಬ್ಯಾಂಕ್ ಬ್ಯಾಲೆನ್ಸ್ ಅಷ್ಟಾಗಿ ಇಲ್ಲದಿದ್ದರೂ ಭೂಮಿಯ ಫಲವತ್ತತೆ ಹೆಚ್ಚಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು. ನೈಸರ್ಗಿಕ ಕೃಷಿ ಮಾಡುವುದರಿಂದ ಹಿಟ್ಟು ಬಟ್ಟೆಗೆ ಕೊರತೆಯಿಲ್ಲ. ಮೌಲ್ಯವರ್ಧನೆ ಮಾಡಿ ಗ್ರಾಹಕರಿಗೆ ನೇರವಾಗಿ ಮಾಡಿದರೆ ರೈತರು ಮತ್ತಷ್ಟು ಆರ್ಥಿಕವಾಗಿ ಸಬಲರಾಗಬಹುದು. ಹೊಸದಾಗಿ ಕೃಷಿಗೆ ಆಗಮಿಸುವವರು ಈ ವಿಷಯ ಮರೆಯಬಾರದು. ಒಂದು ವೇಳೆ ಕೂಲಿ ಕೆಲಸದವರು ಕೈ ಕೊಟ್ಟರೂ ಎಲ್ಲಾ ಕೆಲಸ ಮಾಲೀಕರೇ ಮಾಡುವಂತಿರಬೇಕು. ಎಲ್ಲದಕ್ಕೂ ಮುಂದಾಲೋಚನೆ ಮಾಡಬೇಕು. ಒಂದು ವಾರದಲ್ಲಿ ಕಟಾವಿಗೆ ಸಿದ್ದ ಎಂದು ತಿಳಿದಿರುತ್ತದೆ. ಕೂಲಿ ಆಳುಗಳ ಸಮಸ್ಯೆ ಎಂದೂ ಗೊತ್ತಿರುತ್ತದೆ. ಆದರೂ ಮೈಗಳ್ಳತನ ಮಾಡಿ ವಾರದ ನಂತರ ನೋಡೋಣ ಎಂದರೆ ಕೃಷಿಗೆ ಯಾರೂ ಬರಬೇಡಿ. ವಾರದ ಮೊದಲೇ ಆಳುಗಳಿಗೆ ಮುಂಗಡ ಹಣ ನೀಡಿ ಇಂತಹ ದಿನ ಬರಲೇಬೇಕು ಎಂದು follow up ಮಾಡಬೇಕು. ಕಟಾವಿಗೂ ಮುನ್ನ ಉತ್ಪನ್ನ ಎಷ್ಟು ಬರುತ್ತದೆ ಎಂಬ ಅಂದಾಜಿರಬೇಕು. ಅದನ್ನು ಯಾರಿಗೆ ಎಷ್ಟು ದರಕ್ಕೆ ಮಾರಬೇಕು ಎನ್ನುವ ವಿವೇಚನೆ ನಮ್ಮಲಿರಬೇಕು. ಇದು ಒಂದು ದಿನಕ್ಕೆ ಸಿದ್ದಿಸುವುದಿಲ್ಲ. ಒಂದು ಸಲಕ್ಕೆ ಯಾವುದೂ ಬರುವುದಿಲ್ಲ. ಕಾಲಕ್ರಮೇಣ ಎಲ್ಲವೂ ಭೂಮಿತಾಯಿ ಕಲಿಸುತ್ತಾಳೆ. ನಾವು ತಾಳ್ಮೆಯಿಂದ ಕಲಿಯಬೇಕು. Update ಆಗದಿದ್ದರೆ phone ಕೂಡ ಕೆಲಸ ಮಾಡುವುದಿಲ್ಲ. ಅಂತಹದರಲ್ಲಿ ಕೃಷಿ ಎನ್ನುವುದು ನಿತ್ಯ ಬದಲಾಗುವ, ಹೊಸ ಹೊಸ ಸವಾಲುಗಳು, ನಾವು ಅಂದುಕೊಳ್ಳುವುದಕ್ಕಿಂತ ವಿಬ್ಬಿನವಾಗಿರುವ ಕ್ಷೇತ್ರ. ನಮ್ಮಕಡೆ ಒಂದು ಗಾದೆ ಮಾತಿದೆ. ಜಾಣನಿಗೆ ಮೂರು ದಾರಿ ಕೋಣನಿಗೆ ಒಂದೇ ದಾರಿ ಎಂದು. ಆಯ್ಕೆ ನಮಗೆ ಬಿಟ್ಟಿದ್ದು. ಈ ರೀತಿ ಯೋಚನೆ ಮಾಡಿದಕ್ಕೆ ನಾನು 2014 ರಿಂದ ಒಮ್ಮೆಯೂ APMC ಗೆ ಕಾಲಿಟ್ಟಿಲ್ಲ. ಗೊಬ್ಬರದ ಅಂಗಡಿಯಿಂದ ಏನನ್ನೂ ಖರೀದಿಸಿಲ್ಲ. ಗ್ರಾಹಕರೇ ನಮ್ಮ ತೋಟಕ್ಕೆ ಆಗಮಿಸಿ ನಾನು ಬೆಳೆದದನ್ನು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಸುದೀರ್ಘ ಕೃಷಿ ಅನುಭವ ಹಂಚಿಕೊಳ್ಳುತ್ತಾರೆ ಮಹದೇವಸ್ವಾಮಿ. ನಿಮಗೂ ಇವರ ಉತ್ಪನ್ನಗಳು ಮತ್ತು ಮಾರ್ಗದರ್ಶನ ಬೇಕಿದಲ್ಲಿ ಸಂಪರ್ಕಿಸಿ +91 89716 70774

ಮಂಡ್ಯದ ಸುಪ್ರಸಿದ್ಧ ಸಾವಯವ ಮಳಿಗೆ  ಮತ್ತು ಸಿರಿಧಾನ್ಯ ಹೋಟಲ್ ಆದ “ದೇಸಿ ಅಂಗಡಿ” ಸಂಸ್ಥಾಪಕರಾದ ಶ್ರೀ ಮಹೇಶ್ ಬುವಳ್ಳಿ ಮತ್ತು ಶ್ರೀಮತಿ ಸೌಮ್ಯ ...
29/07/2026

ಮಂಡ್ಯದ ಸುಪ್ರಸಿದ್ಧ ಸಾವಯವ ಮಳಿಗೆ ಮತ್ತು ಸಿರಿಧಾನ್ಯ ಹೋಟಲ್ ಆದ “ದೇಸಿ ಅಂಗಡಿ” ಸಂಸ್ಥಾಪಕರಾದ ಶ್ರೀ ಮಹೇಶ್ ಬುವಳ್ಳಿ ಮತ್ತು ಶ್ರೀಮತಿ ಸೌಮ್ಯ ರವರ
ಕುರಿತು ಬರೆದ ಲೇಖನ ನಾಲ್ಕು ವರ್ಷಗಳ ಹಿಂದೆ ವಿಕ್ರಮದಲ್ಲಿ ಪ್ರಕಟವಾಗಿತ್ತು. ಆಸಕ್ತರು ಓದಿ ಇತತರೊಂದಿಗೆ ಹಂಚಿಕೊಳ್ಳಿ.
ಮಹೇಶ್ ಯವರ ಸಂಪರ್ಕಸಂಖ್ಯೆ +91 9740808010

ವಿಕ್ರಮ ಪತ್ರಿಕೆ ಚಂದಾದಾರರಾಗಲು ಸಂಪರ್ಕಿಸಿ +91 90350 06777

ಸಾಮಾನ್ಯವಾಗಿ ಅಂಗಡಿ ಎಂದರೆ ಎಲ್ಲರೂ ಮಾರಾಟ ದೃಷ್ಟಿಯಿಂದಲೇ ಪ್ರಾರಂಭಿಸಿರುತ್ತಾರೆ. ಆದರೆ ಮಂಡ್ಯದಲ್ಲಿರುವ ದೇಸಿ ಅಂಗಡಿಯಲ್ಲಿ ಹೀಗೊಂದು ಫಲಕವಿದೆ "ಜಾಗೃತಿ, ಪ್ರದರ್ಶನ ಮತ್ತು ಮಾರಾಟ.
ಅಲ್ಲಿಗೆ ಭೇಟಿ ಕೊಡುವ ಗ್ರಾಹಕರಿಗೆ ಮೊದಲು ಸಾವಯವ ಉತ್ಪನ್ನಗಳ ಕುರಿತು ಜಾಗೃತಿ, ಅಂಗಡಿಯಲ್ಲಿರುವ ವಸ್ತುಗಳ ಪ್ರದರ್ಶನ ಮತ್ತು ಕೊನೆಯದಾಗಿ ಗ್ರಾಹಕ ಇಚ್ಚಿಸಿದರೆ ಮಾತ್ರ ಮಾರಾಟ.
ಭೇಟಿಕೊಡುವ ಪ್ರತಿ ಗ್ರಾಹಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಅವರ ಅವಶ್ಯಕತೆ ಏನು ಎಂಬುದನ್ನು ತಿಳಿದುಕೊಂಡು ಅವರ ಮನಪರಿವರ್ತನೆ ಮಾಡುವಂತಹ ಕೆಲಸ ಮಾಡುತ್ತಿರುವ ಮಿತ್ರರಾದ ದೇಸಿ ಅಂಗಡಿ ಸಂಸ್ಥಾಪಕ ಮಹೇಶ್ ಬೂವಳ್ಳಿ ಮತ್ತು ಸೌಮ್ಯ ಮಹೇಶ್ ಬೂವಳ್ಳಿ ಅವರ ಕುರಿತು ಈ ಲೇಖನದಲ್ಲಿ ತಿಳಿಯುವ ಪ್ರಯತ್ನ ಮಾಡೋಣ.

ಮೂಲತಃ ಮಳವಳ್ಳಿ ಸಮೀಪದ ದೊಡ್ಡಬೂವಳ್ಳಿ ಗ್ರಾಮದವರಾದ ಮಹೇಶ್ ರವರ ತಂದೆ ಬಸವಣ್ಣನವರು ರೇಷ್ಮೆ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿರುತ್ತಾರೆ ತಾಯಿ ರತ್ನಮ್ಮ ಗೃಹಿಣಿ.

ಹತ್ತನೇ ತರಗತಿವರೆಗೂ ತಮ್ಮ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಓದಿರುವ ಮಹೇಶ್. ಇದೇ ಸಂದರ್ಭದಲ್ಲಿ ತಂದೆಯವರಿಗೆ ನೌಕರಿ ಖಾಯಂ ಆಗಿ ಚಿಕ್ಕನಾಯಕನಹಳ್ಳಿಗೆ ವರ್ಗಾವಣೆಯಾಗುತ್ತದೆ. ಮಹೇಶ್ ಅವರಿಗೆ ಬಾಲ್ಯದಿಂದಲೂ ತಾನೊಬ್ಬ ಶಿಕ್ಷಕನಾಗಬೇಕೆಂಬ ಆಸೆ ಇರುತ್ತದೆ. ಅದರಲ್ಲೂ ಕಲೆ ಸಾಹಿತ್ಯ ಎಂದರೆ ಅಪಾರ ಆಸಕ್ತಿ.
ಹಾಗಾಗಿ ಪಿಯುಸಿಯಲ್ಲಿ ಆರ್ಟ್ಸ್ ವಿಷಯವನ್ನು ಆಯ್ದುಕೊಳ್ಳುತ್ತಾರೆ. ಎರಡು ವರ್ಷ ಊರಿಂದ ದೂರವಿದ್ದರೂ ತಂದೆಯವರಿಗೆ ಮತ್ತೆ ವರ್ಗಾವಣೆಯಾಗಿ ಹುಟ್ಟೂರಿಗೆ ಬರುವ ಅವಕಾಶ ದೊರೆಯುತ್ತದೆ. ಪಿಯುಸಿ ಮುಗಿದ ನಂತರ ಟಿಸಿಎಚ್ ಪಡೆಯಲು ಪ್ರಯತ್ನಪಟ್ಟರೂ
ಕಾಲೇಜಿನಲ್ಲಿ ಸೀಟು ಸಿಗುವುದಿಲ್ಲ.
ಮಹೇಶ್ ಅವರದ್ದು ತೀರಾ ಬಡಕುಟುಂಬ ವಲ್ಲದಿದ್ದರೂ ಮಧ್ಯಮವರ್ಗದ ಕುಟುಂಬವಾಗಿತ್ತು. ತಂದೆ ದಿನಗೂಲಿ ನೌಕರರಾದ್ದರಿಂದ ಹೆಚ್ಚಿನ ಆದಾಯ ಇರಲಿಲ್ಲ.
ಹಾಗಾಗಿ ತಮ್ಮ ಶಿಕ್ಷಕರಾಗುವ ಕನಸನ್ನು ಬಿಟ್ಟು ಬೇಗನೆ ಕೆಲಸ ಸಿಗುವಂತಹ ಡಿಪ್ಲೋಮೋ ಕೋರ್ಸಿಗೆ ಸೇರಿಕೊಳ್ಳುತ್ತಾರೆ
ಮಂಡ್ಯದ ಭಾರತಿ ಕಾಲೇಜಿನಲ್ಲಿ ಡಿಪ್ಲೋಮೋ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಕೋರ್ಸ್ ಗೆ ಸೇರಿಕೊಳ್ಳುತ್ತಾರೆ.
ಮಹೇಶ್ ಅವರಿಗೆ ಹಳ್ಳಿ ಜೀವನ ಮತ್ತು ಕೃಷಿ ಎಂದರೆ ಪಂಚಪ್ರಾಣ.
ಕಾಲೇಜಿಗೆ ಹೋಗುತ್ತಲೇ ಜಮೀನಿನಲ್ಲಿ ತರಕಾರಿ ಬೆಳೆಯುವುದನ್ನು ರೂಢಿಸಿಕೊಂಡಿರುತ್ತಾರೆ.

ತಮ್ಮ ವಿದ್ಯೆಗೆ ಪೂರಕವಾಗಲೆಂದು ಒಂದು ಕಂಪ್ಯೂಟರ್ ಕೋರ್ಸ್ ಗೆ ಸೇರುತ್ತಾರೆ.
ಡಿಪ್ಲೋಮೋ ಮುಗಿದನಂತರ ತಂದೆಯವರ ಆಸೆಯಂತೆ ಬೆಂಗಳೂರಿನಲ್ಲಿ ಒಂದು ಕೆಲಸಕ್ಕೆ ಸೇರುತ್ತಾರೆ. ಸರ್ಕಾರಿ ಕಚೇರಿಗಳಲ್ಲಿ ಕಂಪ್ಯೂಟರ್ ರಿಪೇರಿ ಮಾಡುವುದು ಮಹೇಶ್ ರವರ ಪ್ರಮುಖ ವೃದ್ಧಿಯಾಗುತ್ತದೆ.
ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿದ್ದರೆ ಇನ್ನು ಉನ್ನತ ಮಟ್ಟಕ್ಕೆ ಏರಬಹುದೆಂದು ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಸೇರಿಕೊಳ್ಳುತ್ತಾರೆ.
ಇದರ ಫಲವಾಗಿ ಹಾಗೂ ಸ್ನೇಹಿತರಾದ ಶ್ರೀ ಸ್ವಾಮಿ ತಿಪಟೂರು ರವರ ಸಹಾಯದಿಂದ ಯೂನಿಸಿಸ್ ಕಂಪನಿಯಲ್ಲಿ ಉನ್ನತ ಹುದ್ದೆಗೆ ಆಯ್ಕೆಯಾಗುತ್ತಾರೆ ಮಹೇಶ್ . ಸುಮಾರು 9 ವರ್ಷಗಳ ಕಾಲ ಕಂಪನಿಯಲ್ಲಿ ಕೈತುಂಬಾ ಸಂಬಳ ಗಳಿಸಿರುತ್ತಾರೆ.
ಸಾಫ್ಟ್ವೇರ್ ಕಂಪನಿ ಆದ್ದರಿಂದ ಅನಿವಾರ್ಯವಾಗಿ ಸ್ನೇಹಿತರೊಂದಿಗೆ ಔಟಿಂಗ್ ಬೇಡದ ಪಿಜ್ಜಾ ಬರ್ಗರ್ ತಿನ್ನಲೇ ಬೇಕಾದಂತಹ ಪರಿಸ್ಥಿತಿಗಳು ಎದುರಾಗುತ್ತದೆ.
ಜೀವನ ಶೈಲಿಯ ಬದಲಾವಣೆಯಿಂದ ಕ್ರಮೇಣವಾಗಿ ಮಹೇಶ ರವರ ಆರೋಗ್ಯಸ್ಥಿತಿ ಹಾಳಾಗುತ್ತದೆ ಅದರಲ್ಲೂ ಅವರ ಪಚನಕ್ರಿಯೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಳ್ಳುತ್ತದೆ.
ಈ ಸಂದರ್ಭದಲ್ಲಿ ಸ್ನೇಹಿತರೆಲ್ಲರೂ ಒಟ್ಟಿಗೆ ಕ್ಯಾಂಟೀನ್ನಲ್ಲಿ ಊಟ ಮಾಡುತ್ತಿರುವಾಗ ಆಪ್ತಮಿತ್ರರಾದ ವಿಷ್ಣುತೀರ್ಥ ರವರ ವಾಟ್ಸಪ್ಪ್ಗೆ ಬಂದ ವಿಡಿಯೋವನ್ನು ಮಹೇಶ್ ಅವರಿಗೆ ತೋರಿಸುತ್ತಾರೆ.
ಅದು ಡಾ ಖಾದರ್ ಅವರು ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಕುರಿತು ಮಾತನಾಡಿದ ವಿಡಿಯೋ ತುಣುಕಾಗಿರುತ್ತದೆ.
ಖಾದರ್ ರವರ ವಿಡಿಯೋ ನಿಂದ ಪ್ರೇರಣೆಗೊಂಡು ತಮ್ಮ ಜೀವನಶೈಲಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಸಿರಿಧಾನ್ಯಗಳ ಸೇವನೆ, ಗಾಣದ ಎಣ್ಣೆ, ಸೈಂಧವ ಲವಣ ಹೀಗೆ ಹತ್ತು ಹಲವು ರೀತಿಯ ಬದಲಾವಣೆಗಳಾಗುತ್ತದೆ.
ಕಾಲಕ್ರಮೇಣ ಮಹೇಶ್ ರವರ ಆರೋಗ್ಯಸ್ಥಿತಿ ಉತ್ತಮಗೊಳ್ಳುತ್ತದೆ.
ಹೇಗಾದರೂ ಮಾಡಿ ಖಾದರ್ ರವರನ್ನು ಭೇಟಿ ಮಾಡಬೇಕೆಂಬ ಹಂಬಲ ದಿನೇದಿನೇ ಹೆಚ್ಚಾಗುತ್ತದೆ.
ಅಷ್ಟರಲ್ಲಿ ಮಿತ್ರರಿಂದ ಅವರ ಮೊಬೈಲ್ ನಂಬರ್ ದೊರೆಯುತ್ತದೆ.
ಕೂಡಲೇ ಅವರೊಂದಿಗೆ ಮಾತನಾಡಿ ತಮ್ಮ ಜೀವನದಲ್ಲಾದ ಬದಲಾವಣೆಯ ಕುರಿತು ವಿವರಿಸುತ್ತಾರೆ.
ನಂತರ ಖಾದರ್ ರವರ ಒಂದು ವಾಟ್ಸಾಪ್ ಗುಂಪಿನ ಸದಸ್ಯರಾಗುತ್ತಾರೆ ಮಹೇಶ್.

ಇದೇ ಬೆಳೆ ಮಹೇಶ್ ರವರಿಗೆ ಸೌಮ್ಯ ರೊಟ್ಟಿಗೆ ವಿವಾಹವಾಗುತ್ತದೆ.
ಮಹೇಶ್ ಅವರಂತೆ ಸೌಮ್ಯ ರವರು ಸಹ ಸಾವಯವ ಜೀವನ ಶೈಲಿಯ ಪ್ರತಿಪಾದಕರಾಗಿರುತ್ತಾರೆ.
ಒಂದು ದಶಕಕ್ಕೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ ಮಹೇಶ್ ಅವರಿಗೆ ತಮ್ಮ ಹುಟ್ಟೂರಿಗೆ ಹಿಂದಿರುಗಿ ಕೃಷಿಯಲ್ಲಿ ನಿರತರಾಗಬೇಕೆಂಬ ಹಂಬಲ ಉಂಟಾಗುತ್ತದೆ.
ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ (ವರ್ಕ್ ಫ್ರಮ್ ಹೋಮ್ ) ಮನೆಯಿಂದಲೇ ಕೆಲಸ ಮಾಡಲು ಅನುಮತಿ ಪಡೆಯುತ್ತಾರೆ.
ಮಹೇಶ್ ರವರು ಡಾಕ್ಟರ್ ಖಾದರ್ ಡಾಕ್ಟರ್ ಬಿ ಎಂ ಹೆಗಡೆ ರಾಜೀವ್ ದೀಕ್ಷಿತ್ ಡಾಕ್ಟರ್ ಹೆಚ್ ಎಸ್ ಪ್ರೇಮ ನಾಡೋಜ ನಾರಾಯಣ ರೆಡ್ಡಿ ಅವರ ಮಾತುಗಳಿಂದ ಬಹಳ ಪ್ರಭಾವಿತರಾಗಿರುತ್ತಾರೆ ಅವರುಗಳು ಸೂಚಿಸಿರುವ ಪದ್ಧತಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಿಂದ ತಮಗೆ ಒಳಿತಾದರೆ ಮತ್ತೊಬ್ಬರಿಗೆ ಇದನ್ನು ತಿಳಿಸುವ ಪ್ರಯತ್ನ ಮಾಡುತ್ತಿರುತ್ತಾರೆ.
ಸಾವಯವ ಜೀವನ ಪದ್ಧತಿಯಿಂದ ದಿನೇದಿನೇ ಮಹೇಶ್ ಅವರ ಜೀವನದಲ್ಲಿ ಉನ್ನತ ರೀತಿಯ ಬೆಳವಣಿಗೆಗಳಾಗುತ್ತವೆ.
ತನ್ನಂತೆಯೇ ಅನೇಕರು ಹಲವು ಸಮಸ್ಯೆಗಳು ಎದುರಿಸುತ್ತಿದ್ದಾರೆ. ಅವರಿಗೆ ಸಾವಯವ ಜೀವನಶೈಲಿಯ ಕುರಿತು ತಿಳಿಸಬೇಕು ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಬಾಲ್ಯದಿಂದಲೇ ಈ ಕುರಿತು ಅರಿವು ಮೂಡಿಸಬೇಕೆಂದು ನಿಶ್ಚಯಿಸುತ್ತಾರೆ.
ಇದಕ್ಕಾಗಿ ಒಂದು ಉತ್ತಮ ಕ್ಯಾಮೆರಾ ಪ್ರೊಜೆಕ್ಟರ್ ಮೈಕ್ ಗಳನ್ನು ಖರೀದಿಸುತ್ತಾರೆ.
ಬಿಡುವಿನ ವೇಳೆಯಲ್ಲಿ ಮಂಡ್ಯದ ಕೆಲ ಶಾಲೆಗಳಿಗೆ ಭೇಟಿಕೊಟ್ಟು 8 9 10ನೇ ತರಗತಿಯ ಮಕ್ಕಳಿಗೆ ರಾಸಾಯನಿಕ ಕೃಷಿಯ ಅಪಾಯಗಳು ಮತ್ತು ಸಾವಯವ ಕೃಷಿಯ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡುತ್ತಾರೆ.

ಇಷ್ಟರಲ್ಲಾಗಲೇ ಮಂಡ್ಯದ ಸ್ವದೇಶಿ ಜಾಗರಣಾ ಮಂಚ್, ಆರ್ಗ್ಯಾನಿಕ್ ಮಂಡ್ಯ ಹಾಗೂ ಸಾವಯವ ಬಯಲು ಸೀಮೆ ಬೆಳೆಗಾರರ ಸಂಘ ಇವರೆಲ್ಲ ಸಹೋಯೋಗದೊಂದಿಗೆ ಕೃಷತಿಂಗಳಿಗೊಮ್ಮೆ ಸಾವಯವ ಕೃಷಿ ಸಂತೆಯನ್ನು ಆಯೋಜಿಸುತ್ತಾರೆ.
ಸ್ವದೇಶಿ ಜಾಗರಣ ಮಂಚ್ ನ ಜಗದೀಶ್ ಅವರು ಮಹೇಶ್ ಅವರಿಗೆ ಪ್ರೋತ್ಸಾಹಿಸಿ ಸಂತೆಯಲ್ಲಿ ಜನರೊಂದಿಗೆ ಮಾತನಾಡಲು ವೇದಿಕೆ ಕಲ್ಪಿಸಿಕೊಡುತ್ತಾರೆ.
ಮಹೇಶ್ ರವರು ತಮ್ಮ ಜೀವನದ ಅನುಭವಗಳನ್ನು ಎಲ್ಲರೊಂದಿಗೂ ಹಂಚಿಕೊಂಡು ನಮ್ಮ ಪೂರ್ವಿಕರು ಪಾಲಿಸಿಕೊಂಡು ಬಂದಂತಹ ಜೀವನಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡುತ್ತಿರುತ್ತಾರೆ.

ಸಾವಯವ ಸಂತೆಯಲ್ಲಿ ಈಗಾಗಲೇ ಅಕ್ಕಿ, ಬೇಳೆ, ಬೆಲ್ಲ, ಗಾಣದ ಎಣ್ಣೆ ಸೇರಿದಂತೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುತ್ತಾರೆ. ಇದರ ಜೊತೆ ಮಹೇಶ್ ರವರು ತಾವು ಬಳಸುತ್ತಿದ್ದ ಸಾವಯವ ಸಾಬೂನು, ಮೈ ಉಜ್ಜಲು ಮತ್ತು ಪಾತ್ರೆ ತೊಳೆಯಲು ತುಪ್ಪದ ಹೀರೇಕಾಯಿ ನಾರು/ ಲಾವಂಚದ ಬೇರು, ರಾಜೀವ್ ದೀಕ್ಷಿತರು ಸೂಚಿಸಿರುವಂತೆ ಅಡುಗೆ ಮಾಡಲು ಮಣ್ಣಿನ ಮಡಿಕೆಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಸಾವಯವ ಸಂತೆಯಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲು ಪ್ರಾರಂಭಿಸಿದರು.
ಆರಂಭದಲ್ಲಿ ಯಾವುದೇ ಉತ್ಪನ್ನ ಮಾರಾಟವಾಗುತಿರಲಿಲ್ಲವಾದರೂ ಕಾಲಕ್ರಮೇಣ ಜನರಿಗೆ ತಿಳುವಳಿಕೆ ಬಂದನಂತರ ಸಾವಯವ ಉತ್ಪನ್ನಗಳನ್ನು ಖರೀದಿಸಲು ಮುಂದಾದರು.
ಇದೇ ವೇಳೆ ಪತ್ನಿ ಸೌಮ್ಯ ರವರು ಮನೆಯಲ್ಲಿ ಖಾದರ್ ಅವರು ಸೂಚಿಸಿರುವಂತೆ ಸಿರಿಧಾನ್ಯಗಳಿಂದ ವಿವಿಧ ಬಗೆಯ ಅಡುಗೆಗಳನ್ನು ಮಾಡುತ್ತಿದ್ದರು.
ಒಮ್ಮೆ ನವಣೆ ಮತ್ತು ಸಾಮೆಯ ಹಿಟ್ಟು ಹೆಚ್ಚಾಯಿತೆಂದು ಹಪ್ಪಳದ ರೀತಿ ತೆಳುವಾಗಿ ತಟ್ಟಿ ಒಣಗಿಸಿ ಎಣ್ಣೆಯಲ್ಲಿ ಕರೆದರು. ನೋಡನೋಡುತ್ತಲೇ ರುಚಿಕರವಾದ ಸಿರಿಧಾನ್ಯಗಳ ಹಪ್ಪಳ ಸಿದ್ಧವಾಯಿತು.
ಈ ಪ್ರಯೋಗವನ್ನು ಡಾ ಖಾದರ್ ಅವರ ವಾಟ್ಸಪ್ ಗುಂಪಿನಲ್ಲಿ ಹಂಚಿಕೊಂಡಾಗ ಎಲ್ಲರೂ ಮೆಚ್ಚುಗೆ ಸೂಚಿಸಿದರು. ಅದರಲ್ಲೂ ಖಾದರ್ ಅವರು ತಮ್ಮ ಮಗಳ ಮದುವೆಗೆ ಒಂದುವರೆ ಸಾವಿರ ಸಿರಿಧಾನ್ಯಗಳ ಹಪ್ಪಳ ಬೇಕೆಂದು ಬೇಡಿಕೆಯಿಟ್ಟರು.
ಸೌಮ್ಯ ಮತ್ತು ಮಹೇಶ್ ಅವರು ಇದು ಕೇವಲ ಮನೆ ಮಟ್ಟಿಗೆ ಮಾಡಿರುವುದಾಗಿ ಮಾರಾಟದ ದೃಷ್ಟಿಯಿಂದಲ್ಲ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ.
ಕೊನೆಗೆ ಸೌಮ್ಯರವರ ತಾಯಿ ಮನೆ ಮಟ್ಟಿಗೆ ರಾಗಿಯ ಹಪ್ಪಳವನ್ನು ತಯಾರಿಸುತ್ತಿದ್ದದು ನೆನಪಾಗಿ ಅವರ ಸಹಾಯದಿಂದಲೇ ಖಾದರ್ ರವರ ಮಗಳು ಸರಳಾ ರವರ ಮದುವೆಗೆ ಒಂದುವರೆ ಸಾವಿರ ಸಿರಿಧಾನ್ಯಗಳ ಹಪ್ಪಳ ಸಿದ್ದಪಡಿಸಿದರು.
ಮಹೇಶ್ ರವರು ಉಡುಗೊರೆಯಾಗಿ ಇದನ್ನು ನೀಡಲು ಹೊರಟರೆ ಖಾದರ್ ಅವರು ಒಪ್ಪದೆ ಹಣಕೊಟ್ಟು ಖರೀದಿಸಿದರು.
ಈ ಘಟನೆ ಮಹೇಶ್ ಮತ್ತು ಸೌಮ್ಯ ದಂಪತಿಗಳ ಜೀವನದಲ್ಲಿ ದೊಡ್ಡ ತಿರುವು ನೀಡಿತು.

ಸಿರಿಧಾನ್ಯಗಳ ಹಪ್ಪಳ ತಯಾರಿಕೆಯಲ್ಲಿ ಯಶಸ್ಸು ಕಂಡ ನಂತರ ಸಾವಯವ ಸಂತೆಯಲ್ಲಿ ಸಿರಿಧಾನ್ಯಗಳಿಂದ ಮಾಡಿದ ಕುರುಕುಲು ತಿಂಡಿಗಳನ್ನು ಮಾರಲು ಪ್ರಾರಂಭಿಸಿದರು. ಇದರ ಜೊತೆಗೆ ಆಯೋಜಕರ ಬೇಡಿಕೆಯಂತೆ ಸ್ಥಳದಲ್ಲೇ ಸಿರಿಧಾನ್ಯಗಳ ಅಡುಗೆ ಮಾಡಲು ನಿಶ್ಚಯಿಸುತ್ತಾರೆ.
ಸೌಮ್ಯ ಅವರು ಸಿರಿಧಾನ್ಯಗಳ ದೋಸೆ-ಇಡ್ಲಿ ಪಲಾವ್ ಉಪ್ಪಿಟ್ಟು ಬಿಸಿಬೇಳೆ ಬಾತ್ ಸೇರಿದಂತೆ ಹಲವು ಬಗೆಯ ತಿನಿಸುಗಳನ್ನು ಸ್ಥಳದಲ್ಲೇ ಬಿಸಿಬಿಸಿಯಾಗಿ ತಯಾರಿಸಿ ಗ್ರಾಹಕರಿಗೆ ನೀಡುತ್ತಾರೆ.
ಕೇವಲ ಸಿರಿಧಾನ್ಯಗಳ ದೋಸೆ-ಇಡ್ಲಿ ಅಷ್ಟೇ ಅಲ್ಲದೆ ಚಟ್ನಿ ತಯಾರಿಕೆಯಲ್ಲೂ ತಮ್ಮ ಪ್ರಾವೀಣ್ಯತೆ ತೋರಿಸಿರುತ್ತಾರೆ. ಒಂದೆಲಗ, ದೊಡ್ಡಿಪತ್ರೆ, ಪುದಿನಾ, ನಾಟಿ ಟೊಮೆಟೊ ಗಳನ್ನು ಬಳಸಿಕೊಂಡು ಆರೋಗ್ಯಕರ ಮತ್ತು ರುಚಿಯಾದ ಚಟ್ನಿಯನ್ನು ಗ್ರಾಹಕರಿಗೆ ಪರಿಚಯಿಸುತ್ತಾರೆ.
ಪ್ರಾರಂಭದಲ್ಲಿ ತಿಂಗಳಿಗೊಮ್ಮೆ ಇದ್ದ ಸಾವಯವ ಸಂತೆ ನಂತರ ಗ್ರಾಹಕರ ಬೇಡಿಕೆಯಂತೆ ವಾರಕ್ಕೊಮ್ಮೆ ಆರಂಭವಾಗುತ್ತದೆ.
ಅದರಲ್ಲೂ ಮಹೇಶ್ ಮತ್ತು ಸೌಮ್ಯರವರ ಉತ್ಪನ್ನಗಳಿಗೆ ಭಾರಿ ಬೇಡಿಕೆ ಉಂಟಾಗುತ್ತದೆ.
ಕೆಲ ಗ್ರಾಹಕರಂತೂ ನಮಗೆ ಪ್ರತಿನಿತ್ಯ ಸಿರಿಧಾನ್ಯಗಳ ಅಡುಗೆ ಬೇಕು ಹಾಗಾಗಿ ನೀವೊಂದು ಹೋಟೆಲ್ ಪ್ರಾರಂಭಿಸಿ ಎಂದು ಸಲಹೆ ನೀಡಿತ್ತಾರೆ.

ಡಾಕ್ಟರ್ ಖಾದರ್ ಸೇರಿದಂತೆ ಅನೇಕ ಹಿರಿಯರೊಂದಿಗೆ ಚರ್ಚಿಸಿ ಮಂಡ್ಯದ ಒಂದು ಬಡಾವಣೆಯಲ್ಲಿ ದೇಸಿ ಅಂಗಡಿ ಎಂಬ ಸಾವಯವ ಮಳಿಗೆಯನ್ನು ಪ್ರಾರಂಭಿಸುತ್ತಾರೆ.
ಕೇವಲ ಮಾರಾಟದ ದೃಷ್ಟಿಯಿಂದಷ್ಟೇ ಅಲ್ಲದೆ ಜನರಿಗೆ ಸಾವಯವ ಉತ್ಪನ್ನಗಳ ಕುರಿತು ಸಾವಯವ ಜೀವನಶೈಲಿಯ ಕುರಿತು ಪರಿಚಯಿಸಲು ಅಂಗಡಿಯನ್ನು ವೇದಿಕೆಯಾಗಿಸಿಕೊಳ್ಳುತ್ತಾರೆ.
ತಮಗೆ ಪರಿಚಯವಿರುವ ಸ್ಥಳೀಯ ರೈತರಿಂದ ಉತ್ಪನ್ನಗಳನ್ನು ಖರೀದಿಸಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಲು ನಿಶ್ಚಯಿಸುತ್ತಾರೆ.
ತಾವು ಯಾವ ರೈತರಿಂದ ಉತ್ಪನ್ನಗಳನ್ನು ಖರೀದಿಸುತ್ತೇವೆ ಎಂಬ ವಿವರಗಳನ್ನು ರೈತನ ಚಿತ್ರಸಮೇತ ಅಂಗಡಿಯಲ್ಲಿ ಹಾಕಿದ್ದಾರೆ.
ಯಾವುದೇ ಕಾರಣಕ್ಕೂ ರಾಸಾಯನಿಕ ಮತ್ತು ಕೆಮಿಕಲ್ ಪ್ರಿಸರ್ವೇಟಿವ್ಸ್ ಬಳಸಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡದಿರಲು ಪಣ ತೊಡುತ್ತಾರೆ.
ಖ್ಯಾತ ಆಯುರ್ವೇದ ತಜ್ಞರಾದ ಡಾಕ್ಟರ್ ಗಿರಿಧರ್ ಕಜೆಯವರ ವಿಡಿಯೋಗಳನ್ನು ನೋಡಿ ತುಳಸಿ, ಅಮೃತಬಳ್ಳಿ, ಹಿಪ್ಪಲಿ, ನೆಲನಲ್ಲಿ, ಕಾಳು ಮೆಣಸು, ಜೀರಿಗೆ, ದನಿಯಾ ಸೇರಿದಂತೆ ೨೦ ಬಗೆಯ ಗಿಡ ಮೂಲಿಕೆಗಳನ್ನು ಮತ್ತು
ಸಾವಯವ ಬೆಲ್ಲ ಗಳನ್ನು ಒಳಗೊಂಡ ಕಷಾಯವನ್ನು ಗ್ರಾಹಕರಿಗೆ ತಮ್ಮ ಅಂಗಡಿಯಲ್ಲಿ ಕಾಫಿ-ಟೀ ಬದಲಾಗಿ ನೀಡಲು ಮುಂದಾಗುತ್ತಾರೆ.
ಇದರ ಜೊತೆಗೆ ಸಾವಯವ ಸಂತೆಯಲ್ಲಿ ತಯಾರಿಸುತ್ತಿದ್ದ ಸಿರಿ ಧಾನ್ಯಗಳ ಅಡುಗೆಯನ್ನು ದೇಸಿ ಅಂಗಡಿ ಮತ್ತು ಸಾತ್ವಿಕ ಆಹಾರ ಎಂಬ ಹೆಸರಿನಡಿಯಲ್ಲಿ ಮಾರಾಟ ಮಾಡಲು ಆರಂಭಿಸುತ್ತಾರೆ.
ಅಂಗಡಿ ಪ್ರಾರಂಭವಾಗಿ ನಾಲ್ಕೈದು ತಿಂಗಳುಗಳಾದರೂ ಗ್ರಾಹಕರಿಂದ ಅಷ್ಟಾಗಿ ಪ್ರತಿಕ್ರಿಯೆ ಬರುವುದಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಇದೇ ಸಮಯದಲ್ಲಿ ಕರೋನಾ ಮಹಾಮಾರಿ ಇಂದ ಲಾಕ್ಡೌನ್ ಎದುರಾಯಿತು.
ಸುಮಾರು 4-5 ತಿಂಗಳು ಮಹೇಶ್ ತಮ್ಮ ಸಂಬಳದ ಹಣದಿಂದ ಅಂಗಡಿಯ ಬಾಡಿಗೆಯನ್ನು ನಿರ್ವಹಿಸುತ್ತಾರೆ.
ಇಷ್ಟಾದರೂ ಧೃತಿಗೆಡದೆ ಲಾಕ್ಡೌನ್ ಸಡಿಲಿಕೆ ನಂತರ ಮತ್ತೆ ಅಂಗಡಿಯನ್ನು ತೆರೆದಾಗ ಆಶ್ಚರ್ಯವಾಗುವ ರೀತಿಯಲ್ಲಿ ಗ್ರಾಹಕರು ಕಷಾಯವನ್ನು ಕುಡಿಯಲು ಮುಗಿಬೀಳುತ್ತಾರೆ.
ಕಷಾಯ ಮತ್ತು ಅಡುಗೆಯನ್ನು ತಯಾರಿಸಲು ಅಲುಮಿನಿಯಂ ಪಾತ್ರೆಗಳನ್ನು, ಮೈದಾಹಿಟ್ಟನ್ನು ಬಳಸುವುದಿಲ್ಲ.
ತಮ್ಮ ಪರಿಚಯಸ್ಥ ಸಾವಯವ ಕೃಷಿಕರು ಬೆಳೆಯುವ ಸೊಪ್ಪು ತರಕಾರಿಗಳನ್ನು ಖರೀದಿಸಿ ಅಡುಗೆಯಲ್ಲಿ ಬಳಸಲಾಗುತ್ತದೆ.
ಗ್ರಾಹಕರ ವಾಟ್ಸಾಪ್ ಗುಂಪನ್ನು ರಚಿಸಿ ಮರುದಿನ ಯಾವ ಸಿರಿಧಾನ್ಯದ ಅಡುಗೆಯನ್ನು ಮಾಡಲಾಗುತ್ತದೆ ಎಂಬ ಸಂದೇಶವನ್ನು ಸಂಜೆ ಕಳಿಸಲಾಗುತ್ತದೆ.
ಒಂದು ವೇಳೆ ಗ್ರಾಹಕರು ಪಾರ್ಸಲ್ ಕೊಂಡೊಯ್ಯಲು ಬಯಸಿದರೆ ತಾವೇ ಡಬ್ಬಿಯನ್ನು ಮನೆಯಿಂದ ತರಬೇಕು ಎಂದು ಮಹೇಶ್ ರವರು ತಾಕೀತು ಮಾಡಿರುತ್ತಾರೆ.
ಮಹೇಶ್ ರವರ ಈ ನಡವಳಿಕೆ ಜನರಿಗೂ ಹಿಡಿಸುತ್ತದೆ. ಸಾಮಾನ್ಯ ಜನರಲ್ಲದೆ ಸರ್ಕಾರಿ ನೌಕರರು, ಶಾಲಾ ಕಾಲೇಜಿನ ಶಿಕ್ಷಕರು, ಲಾಯರ್ ಗಳು, ತಾಶೀಲ್ದಾರ್ ಮತ್ತು ನ್ಯಾಯಾಧೀಶರು ಸಹ ಮಹೇಶ್ ಅವರ ದೇಸಿ ಅಂಗಡಿಯ ಗ್ರಾಹಕರಾಗುತ್ತಾರೆ.
ಜನಸಂದಣಿ ಹೆಚ್ಚಾದ್ದರಿಂದ ಪ್ರಸ್ತುತವಿರುವ ಅಂಗಡಿ ನಿವೇಶನ ಸರಿಹೋಗದೆಂದು ಆಲೋಚಿಸಿ ಮಂಡ್ಯದ ಅಶೋಕನಗರದ ಪ್ರಮುಖ ರಸ್ತೆಯಲ್ಲಿ ದೊಡ್ಡದಾದ ಮಳಿಗೆಯನ್ನು ಬಾಡಿಗೆಗೆ ಪಡೆದು ಒಂದು ಭಾಗದಲ್ಲಿ ದೇಸಿ ಅಂಗಡಿ ಮತ್ತೊಂದು ಭಾಗದಲ್ಲಿ ಸಿರಿಧಾನ್ಯ ಸಾತ್ವಿಕ ಆಹಾರದ ಹೋಟೆಲ್ ಪ್ರಾರಂಭಿಸುತ್ತಾರೆ.
ಅಂಗಡಿ ಪ್ರಾರಂಭಿಸುವ ಮುನ್ನ ಸೌಮ್ಯ ರವರು ಖಾಸಗಿ ಶಾಲೆಯ ಶಿಕ್ಷಕಿಯಾಗಿ ಮತ್ತು ಮಹೇಶ್ ರವರು ಒಂದು ಕಂಪನಿಯಲ್ಲಿ ವರ್ಕ್ ಫ್ರಮ್ ಹೋಮ್ ಮಾಡುತ್ತಿರುತ್ತಾರೆ.
ತಮ್ಮ ಆರೋಗ್ಯ ಮತ್ತು ಸಮಾಜದ ಆರೋಗ್ಯವೂ ಸುಧಾರಿಸಬೇಕೆಂದು ಇಬ್ಬರೂ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಪ್ರಮಾಣದ ಸಾವಯವ ಕೃಷಿಯ ಕುರಿತು ಜಾಗೃತಿ ಮತ್ತು ಅಂಗಡಿಯನ್ನು ನಿರ್ವಹಿಸುತ್ತಿದ್ದಾರೆ.
ಕೇವಲ ಸಾವಯವ ಉತ್ಪನ್ನಗಳ ಸೇವನೆಯಿಂದ ಆರೋಗ್ಯ ಸುಧಾರಿಸುವುದಿಲ್ಲ.
ನಮ್ಮ ಭಾರತೀಯ ಜೀವನಶೈಲಿ ಅಳವಡಿಸಿಕೊಂಡು ಪ್ರತಿನಿತ್ಯ ಹಿತಮಿತವಾದ ಯೋಗ-ಧ್ಯಾನ, ದೇವರ ಪೂಜೆ, ಗುರುಹಿರಿಯರಿಗೆ ಗೌರವ ಸಮರ್ಪಣೆ, ಏಕಾದಶಿಯ ಉಪವಾಸ, ಸಜ್ಜನರ ಸಹವಾಸ, ಮತ್ತು ಸದಾ ಗುಣಾತ್ಮಕ ಚಿಂತನೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಎಲ್ಲಾ ಗ್ರಾಹಕರಿಗೆ ಮನವರಿಕೆ ಮಾಡಿಕೊಡುತ್ತಾರೆ.
ಊಟ ಮಾಡುವಾಗ ಮೊಬೈಲ್, ಟಿವಿ ಇತ್ಯಾದಿ ನೋಡಬಾರದು. ಊಟಕ್ಕೆ ಮುನ್ನ ಅನ್ನಪೂರ್ಣೆ ಸದಾಪೂರ್ಣೆ ಶ್ಲೋಕವನ್ನು ಹೇಳಬೇಕು, ಊಟವಾದನಂತರ ಅನ್ನದಾತ ಸುಖಿಭವ ಎಂದು ಸಾವಯವ ಕೃಷಿಕರನ್ನು ನೆನಪಿಸಿಕೊಂಡು ಅವರಿಗೆ ಧನ್ಯವಾದ ಸಮರ್ಪಿಸಬೇಕು ಎಂಬ ಫಲಕವನ್ನು ತಮ್ಮ ಹೋಟೆಲಿನಲ್ಲಿ ಲಗತ್ತಿಸಿದಾರೆ.

ರೈತರಿಗೆ ನೆರವಾಗಲೆಂದು ಸಿರಿಧಾನ್ಯ ಮತ್ತು ತರಕಾರಿ ಬೀಜಗಳನ್ನು ಸಹ ತಮ್ಮ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ನಾವು ವೃತ್ತಿಯಲ್ಲಿ ವೈದ್ಯರಲ್ಲದಿದ್ದರೂ ರಾಜೀವ್ ಧೀಕ್ಷಿತ್, ಡಾ ಬಿಎಂ ಹೆಗಡೆ, ಖಾದರ್, ಎಚ್ಎಸ್ ಪ್ರೇಮ, ಗಿರಿಧರ್ ಕಾಜೆ ಮತ್ತಿತರ ಮಹನೀಯರ ಮಾತುಗಳನ್ನು ಕೇಳಿ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮಗೆ ಉಪಯೋಗವಾದ ನಂತರ ಅಂಗಡಿಗೆ ಬರುವವರಿಗೆ ಕೆಲ ಸಲಹೆಗಳನ್ನು ನೀಡುತ್ತೇವೆ.
ಜೀವನಶೈಲಿಯನ್ನು ಬದಲಾಯಿಸಿಕೊಂಡ ನಂತರ ಗ್ರಾಹಕರೇ ಹಿಂದಿರುಗಿ ನಿಮ್ಮ ಅಂಗಡಿಗೆ ಬಂದ ನಂತರ ನನಗೆ ಸಕ್ಕರೆ ಕಾಯಿಲೆ ಕಡಿಮೆಯಾಗಿದೆ, ರಕ್ತದೊತ್ತಡ ನಿಯಂತ್ರಣದಲ್ಲಿದೆ, ಬೊಜ್ಜು ಕರಗಿ ದೇಹ ಹಗುರವಾಗಿದೆ, ಕ್ಯಾನ್ಸರ್ನಂತಹ ಕಾಯಿಲೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದು ಗ್ರಾಹಕರು ಹೇಳುವಾಗ ಸಾರ್ಥಕ ಭಾವ ಮೂಡುತ್ತದೆ ಎಂದು ಮಹೇಶ್ ಮತ್ತು ಸೌಮ್ಯ ದಂಪತಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಅವರ ಈ ಮಹತ್ಕಾರ್ಯ ಹೀಗೆ ಮುಂದುವರೆಯಲಿ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಒಳಿತಾಗಲಿ ಎಂದು ಆಶಿಸೋಣ.
ಇಂತಹ ಅಪರೂಪದ ದಂಪತಿಗಳೊಂದಿಗೆ ಮಾತನಾಡಲು ಸಂಪರ್ಕಿಸಿ
9845382600 / 9845382630
ದೇಸಿ ಅಂಗಡಿ ಮಂಡ್ಯ - Desi Shop Mandya

Address

S4 Naturals. Opposite Hunsur Plywood Factory BM Road Hunsur
Hunsur
571105

Alerts

Be the first to know and let us send you an email when Sudha & Sandeep Manjunath posts news and promotions. Your email address will not be used for any other purpose, and you can unsubscribe at any time.

Contact The Business

Send a message to Sudha & Sandeep Manjunath:

Shortcuts

Share