Sudha & Sandeep Manjunath

Sudha & Sandeep Manjunath S4 Naturals - Simple Sustainable Self- reliant Society Promoting Desi cow based natural farming.

Very nice story telling by K*m Vaidehi daughter of team GoPals founder Sri Ramasubramaniyam. Those who tamil please list...
25/09/2025

Very nice story telling by K*m Vaidehi daughter of team GoPals founder Sri Ramasubramaniyam. Those who tamil please listen to this beautiful story about Goumtha.

ಬಹುಬೆಳೆ ಪದ್ದತಿಯಲ್ಲಿ ಬರದಲ್ಲೂ ಬಂಗಾರದ ಬೆಳೆ ಪಡೆದು, ಎಲ್ಲ ರೈತ ಮಹಿಳೆಯರಿಗೂ ಸ್ಫೂರ್ತಿಯಾದ ಮಧುಗಿರಿ ತಾ।ಲಕ್ಷ್ಮಿದೇವಿಪುರದ ಶ್ರೀಮತಿ ಸಂಧ್ಯಕ...
25/09/2025

ಬಹುಬೆಳೆ ಪದ್ದತಿಯಲ್ಲಿ ಬರದಲ್ಲೂ ಬಂಗಾರದ ಬೆಳೆ ಪಡೆದು, ಎಲ್ಲ ರೈತ ಮಹಿಳೆಯರಿಗೂ ಸ್ಫೂರ್ತಿಯಾದ ಮಧುಗಿರಿ ತಾ।ಲಕ್ಷ್ಮಿದೇವಿಪುರದ ಶ್ರೀಮತಿ ಸಂಧ್ಯಕ್ಕ ಅವರ ಕುರಿತು ಶ್ರೀಮತಿ ಸುಧಾ ಸಂದೀಪ್ ಎಂ.ಎಸ್ಸಿ.ಕೃಷಿ ಅವರು ಬರೆದ ಲೇಖನ ವಿಕ್ರಮ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆಸಕ್ತರು ಓದಿ ಇತತರೊಂದಿಗೆ ಹಂಚಿಕೊಳ್ಳಿ.
ಸಂಧ್ಯಕ್ಕ ಅವರ ಸಂಪರ್ಕ ಸಂಖ್ಯೆ
+91 77956 16408

ವಿಕ್ರಮ ಪತ್ರಿಕೆ ಚಂದಾದಾರರಾಗಲು ಸಂಪರ್ಕಿಸಿ +91 90350 06777

ಮೊನ್ನೆ ಬೆಂಗಳೂರಿನ ನೆಂಟರ ಮನೆಗೆ ಹೋದಾಗ ಚೀಲದ ತುಂಬ ತಾಜಾ ಸೊಪ್ಪು ತರಕಾರಿಗಳಿದ್ದವು. ಇಂತಹ ಬರದಲ್ಲೂ ಇಷ್ಟು ಒಳ್ಳೆ ತಾಜಾ ತರಕಾರಿ ಯಾರು ತಂದುಕೊಟ್ಟರಕ್ಕ ಎಂದು ನಮ್ಮ ಅತ್ತೆ ಮಗಳನ್ನು ಕೇಳಿದಾಗ ಅವರ ತಂಗಿ ಸಂಧ್ಯಾ ಊರಿನಿಂದ ನಮಗಷ್ಟೇ ಅಲ್ಲದೆ ಉಳಿದ ನಾಲ್ಕಾರು ನೆಂಟರಿಷ್ಟರ ಮನೆಗಳಿಗೆ ಪ್ರತಿ ವಾರ ಸೊಪ್ಪು ತರಕಾರಿ ಕಳುಹಿಸುತ್ತಾಳೆ ಎಂದರು. ಈಗಾಗಲೇ ಈ ಅಂಕಣದ ಹಲವು ಲೇಖನಗಳಲ್ಲಿ ಸಂಧ್ಯಕ್ಕನ ಬಗ್ಗೆ ಉಲ್ಲೇಖಿಸಿದ್ದರೂ ಅವರ ಕುರಿತಾದ ಪ್ರತ್ಯೇಕ ಲೇಖನ ಬರೆದಿರಲಿಲ್ಲ. ೧೮ನೇ ವಯಸ್ಸಿಗೆ ಮದುವೆಯಾಗಿ ಎರಡು ಮಕ್ಕಳು ಚಿಕ್ಕವರಿರುವಾಗಲೇ ಗಂಡ ತೀರಿಕೊಳ್ಳುತ್ತಾರೆ. ಆದರೂ ಧೃತಿಗೆಡದೆ ಇಬ್ಬರು ಮಕ್ಕಳನ್ನು ಇಂಜಿನಿಯರ್ ಗಳನ್ನಾಗಿ ಮಾಡಿರುವ ಸಂಧ್ಯಕ್ಕ ನಿಜವಾಗಿಯೂ ನಮಗೆಲ್ಲಾ ಸ್ಫೂರ್ತಿ.

ನನಗೆ ೩ ವರ್ಷ ವಿರುವಾಗ ನನ್ನ ತಂದೆ ತೀರಿಕೊಳ್ಳುತ್ತಾರೆ. ತಾಯಿ ಕಮಲಮ್ಮರಿಗೆ ಮೂವರು ಸಣ್ಣ ಮಕ್ಕಳು. ಅದರಲ್ಲಿ ನಾನೇ ಕೊನೆಯವಳು. ಎಲ್ಲಾ ಮಕ್ಕಳನ್ನು ಒಬ್ಬರೇ ಸಾಕುವುದು ಕಷ್ಟವೆಂದು ಸೋದರಮಾವ ನನ್ನನು ಅವರ ಊರಾದ ಕೊರಟಗೆರೆಯ ಬುರುಗನಹಳ್ಳಿಗೆ ಕರೆದೊಯ್ದರು. ಮಾವನ ಮಕ್ಕಳೊಂದಿಗೆ ನಾನು ಹತ್ತನೇ ತರಗತಿವರೆಗೆ ಅಲ್ಲೇ ವ್ಯಾಸಂಗ ಮಾಡಿದೆ. ಅಲ್ಲೇ ನನಗೆ ಮಾವನ ಕಿರಿ ಮಗಳಾದ ಸಂಧ್ಯಕ್ಕ ಪರಿಚಯವಾಗಿದ್ದು. ಬಾಲ್ಯದಲ್ಲಿ ಉಮಕ್ಕ ನಂತರ ಸಂಧ್ಯಕ್ಕ ನನಗೆ ತಲೆಗೆ ಸ್ನಾನಮಾಡಿಸಿ, ಬಟ್ಟೆ ಸ್ವಚ್ಛ ಮಾಡಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ನಮ್ಮದ್ದು ವ್ಯವಸಾಯ ಕುಟುಂಬವಾದರೂ ಮಕ್ಕಳು ಚೆನ್ನಾಗಿ ಓದಲೆಂದು ಕೃಷಿಕಾರ್ಯಗಳಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳುತಿರಲಿಲ್ಲ. ಸಂಧ್ಯಕ್ಕನಿಗೆ ಇನ್ನು ಸರಿಯಾಗಿ 18 ತುಂಬಿರಲಿಲ್ಲ ಆದರೂ ಸಂಬಂಧ ಕೂಡಿಬಂತೆಂದು ಮಧುಗಿರಿ ಸಮೀಪದ ಲಕ್ಷ್ಮೀದೇವಿಪುರಕ್ಕೆ ಮದುವೆ ಮಾಡಿಕೊಟ್ಟರು. ಕಾಂತರಾಜ್ ಅವರದ್ದು ಕೂಡು ಕುಟುಂಬ. ಅಣ್ಣ ತಮ್ಮಂದಿರೆಲ್ಲಾ ಸೇರಿ ಕೆರೆ ಪಕ್ಕದಲ್ಲಿರುವ ಹಳ್ಳದ ಜಮೀನಿನಲ್ಲಿ ಭತ್ತ ಮತ್ತು ದಿಣ್ಣೆ ಮೇಲಿರುವ ಜಮೀನಿನಲ್ಲಿ ಮಳೆಯಾಶ್ರಿತ ಬೆಳೆ ಬೆಳೆಯುತ್ತಿದ್ದರು. ಸ್ವಲ್ಪ ಭಾಗದಲ್ಲಿ ಬೆಳೆಯುತ್ತಿದ್ದ ರೇಷ್ಮೆಯಿಂದ ಬದುಕು ಸಾಗಿಸುತ್ತಿದ್ದರು. ಸಂಧ್ಯಕ್ಕನಿಗಾಗ 27 ಇರಬೇಕು. ಇಬ್ಬರು ಗಂಡುಮಕ್ಕಳನ್ನು ಇನ್ನೇನು ಶಾಲೆಗೆ ಸೇರಿಸಬೇಕೆನ್ನುವಷ್ಟರಲ್ಲಿ ಪತಿ ತೀರಿಕೊಳ್ಳುತ್ತಾರೆ. ಸಂಧ್ಯಕ್ಕನಿಗೆ ಆಗಸವೇ ತಲೆಮೇಲೆ ಬಿದ್ದಹಾಗೆ ಆಗುತ್ತದೆ. ಆದರೂ ಮಕ್ಕಳಿಗೋಸ್ಕರ ಸಂಧ್ಯಕ್ಕ ಜೀವಗಟ್ಟಿಯಾಗಿ ಹಿಡಿದುಕೊಂಡು ಏನಾದರೂ ಮಾಡಿ ಮಕ್ಕಳನ್ನು ದಡಸೇರಿಸಬೇಕೆಂದು ನಿಶ್ಚಯಿಸುತ್ತಾರೆ. ಪತಿ ತೀರಿಕೊಂಡ ನಂತರ ಕುಟುಂಬದಲ್ಲಿ ವೈಮನಸ್ಯ ಪ್ರಾರಂಭವಾಗುತ್ತದೆ. ಆದರೂ ಸಂಧ್ಯಕ್ಕ ತನ್ನ ಪಾಲಿನ ಭೂಮಿ ಕಷ್ಟಪಟ್ಟು ಪಡೆಯುತ್ತಾರೆ. ಇನ್ನು ಹರೆಯದ ಒಂಟಿ ಹೆಣ್ಣನ್ನು ಸಮಾಜ ಹೇಗೆ ನೋಡುತ್ತದೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೂ ಧೃತಿಗೆಡದೆ ಸಂಧ್ಯಕ್ಕ ಎಲ್ಲವನ್ನು ನಿಭಾಯಿಸುತ್ತಾರೆ. ಅದೇ ಸಮಯದಲ್ಲಿ ಅಂಗನವಾಡಿ ಶಿಕ್ಷಕರ ನೇಮಕಾತಿ ನಡೆಯುತಿರುತ್ತದೆ. ಸಂಧ್ಯಕ್ಕನಿಗೆ ಬೆಂಗಳೂರಿನಲ್ಲಿ ಕೆಲಸ ಸಿಗುತ್ತದೆ. ಆದರೂ ಸಂಧ್ಯಕ್ಕನ ಮನಸ್ಸು ಊರಿನಲ್ಲಿತ್ತು. ಸಾಮಾನ್ಯವಾಗಿ ಹಳ್ಳಿಯಿಂದ ಪೇಟೆಗೆ ಕೆಲಸಕ್ಕೆ ಹೋಗುತ್ತಾರೆ. ಆದರೆ ಸಂಧ್ಯಕ್ಕ ಬೆಂಗಳೂರಿನಿಂದ ಊರಿಗೆ ವರ್ಗಾವಣೆ ಬಯಸಿ ಪರಸ್ಪರ ಹೊಂದಾಣಿಕೆ ಮೇಲೆ ಊರಿನ ಹತ್ತಿರವಿರುವ ಅಂಗನವಾಡಿಗೆ ವರ್ಗಾವಣೆಗೊಳ್ಳುತ್ತಾರೆ. ತವರಿನಲ್ಲಿ ಅಷ್ಟಾಗಿ ವ್ಯವಸಾಯ ಮಾಡದಿದ್ದರೂ ಈಗ ಅವರಿವರನ್ನು ನೋಡಿ ಕೇಳಿ ತಿಳಿದು ವ್ಯವಸಾಯ ಮಾಡಲು ಪ್ರಾರಂಭಿಸುತ್ತಾರೆ. ಪ್ರತಿ ನಿತ್ಯ ಸೂರ್ಯ ಹುಟ್ಟುವ ಮೊದಲೇ ಜಮೀನಿನ ಕೆಲಸ ಮಾಡಿ ಮತ್ತೆ ಮನೆಗೆ ಬಂದು ಅಡುಗೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಿ ತಾನೂ ನಾಲ್ಕಾರು ಕಿಮೀ ನಡೆದು ಅಂಗನವಾಡಿಗೆ ಹೋಗುತ್ತಿರುತ್ತಾರೆ. ಸಂಜೆ ಅಂಗನವಾಡಿ ಕೆಲಸ ಮುಗಿಸಿ ಜಮೀನಿಗೆ ಬಂದು ಕೆಲಸಮಾಡಿ ಮಕ್ಕಳನ್ನು ನೋಡಿಕೊಳ್ಳುತಿರುತ್ತಾರೆ. ಸಾಧ್ಯವಾದಷ್ಟು ಆಳುಗಳಲ್ಲಿದ್ದೆ ತಾವೇ ಎಲ್ಲ ಕೆಲಸ ಮಾಡಿಕೊಳ್ಳುತ್ತಾರೆ.

ಕರ್ನಾಟಕದಲ್ಲೇ ಅತ್ಯಂತ ಹೆಚ್ಚು ಬರಪೀಡಿತ ಪ್ರದೇಶ ಎನ್ನಬಹುದಾದ ಮಧುಗಿರಿ ಸಮೀಪದ ಹಳ್ಳಿಯಲ್ಲೂ ಸಂಧ್ಯಕ್ಕನ ಜಮೀನು ಕೆರೆಯ ಪಕ್ಕದಲ್ಲಿರುವ ಕಾರಣ ಬಾವಿಯಲ್ಲಿ ಸದಾ ನೀರಿರುತ್ತದೆ. ಹಳ್ಳದ ಜಮೀನಿನಲ್ಲಿ ಭತ್ತ ಮತ್ತು ಹತ್ತಿ ಬೆಳೆಯುತ್ತಾರೆ. ಮಳೆಬಾರದೆ ಬರ ಎದುರಾದರೂ ಬಯಲು ಸೀಮೆಯ ಕಲ್ಪವೃಕ್ಷ ಎನ್ನಬಹುದಾದ ಹುಣಸೇ ಹಣ್ಣು ಕೈಹಿಡಿಯುತ್ತದೆ.
ಬೇಸಿಗೆಯಲ್ಲಿ ಸಂಧ್ಯಕ್ಕ ತಮ್ಮ ಎರಡು ಹುಣಸೆ ಮರಗಳ ಜೊತೆಗೆ ಅಕ್ಕಪಕ್ಕದ ಹುಣಸೆ ಮರಗಳನ್ನು ಗುತ್ತಿಗೆ ಪಡೆದು ಹುಣಸೆ ಹಣ್ಣು ಕೊಡವಿಸುತ್ತಾರೆ. ನಂತರ ಬಿಡಿಸಿ ಹಣ್ಣನ್ನು ಮಾರುತ್ತಾರೆ. ಅಂತರ ಬೆಳೆಯಾಗಿ ಬೆಳೆದ ಹರಳಿನಿಂದ ಹರಳೆಣ್ಣೆ ಬೇಯಿಸುತ್ತಾರೆ. ಹರಳೆಣ್ಣೆ ಬೇಯಿಸುವುದೇ ಒಂದು ವಿಶೇಷ. ಊರಿನ ನಾಲ್ಕಾರು ಹೆಂಗಸರು ಒಟ್ಚಾಗಿ ತಾವು ಕೂಡಿಟ್ಚ ಹರಳು ಬೀಜಗಳನ್ನು ಒಂದೆಡೆ ಬಾಣಲೆಯಲ್ಲಿ ಹುರಿಯುತ್ತಾರೆ. ನಂತರ ಎಲ್ಲರೂ ಸರತಿಯಲ್ಲಿ ದೊಡ್ಡ ಗುಂಡುಕಲ್ಲಿನ ಸಹಾಯದಿಂದ ರುಬ್ಬುತ್ತಾರೆ. ಈ ರುಬ್ಬಿದ ಮುದ್ದೆಯನ್ನು ದೊಡ್ಡ ಹಂಡೆಗೆ ಹಾಕುತ್ತಾರೆ. ರಾತ್ರಿಯಲ್ಲಾ ಸೌದೆ ಹಾಕಿ ಹಂಡೆಯಲ್ಲಿ ನೀರಿನ ಜೊತೆ ಹರಳಿನ ಮುದ್ದೆಯನ್ನು ಐದಾರು ಗಂಟೆ ಕುದಿಸುತ್ತಾರೆ. ಹಿರಿಯ ಮತ್ತು ಅನುಭವಸ್ತರಿಗೆ ಹದ ಗೊತ್ತಾಗುತ್ತದೆ. ತಕ್ಷಣ ಒಲೆ ಆರಿಸಿ ಎಣ್ಣೆಯನ್ನು ಬಗ್ಗಿಸಿಕೊಳ್ಳಬೇಕು. ಇಷ್ಟು ಮಾಡುವುದರಲ್ಲಿ ಬೆಳಗಾಗಿರುತ್ತದೆ. ಬಹುಶಃ ಇದಕ್ಕೆ ಏನೋ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸಮಾಡಬೇಕು ಎನ್ನುವ ಮಾತು ಹುಟ್ಟಿರುವುದು. ಇಷ್ಟೆಲ್ಲಾ ಆದಮೇಲೆ ದೇಹಕ್ಕೆ ತಂಪು ನೀಡುವ ಗಮಗಮ ಹರಳೆಣ್ಣೆ ಸಿದ್ದವಾಗುತ್ತದೆ. ನಂತರ ಎಲ್ಲ ಮಹಿಳೆಯರು ತಮ್ಮ ಪಾಲಿನ ಹರಳಿಗೆ ಅನುಸಾರವಾಗಿ ಎಣ್ಣೆ ಹಂಚಿಕೊಳ್ಳುತ್ತಾರೆ. ಇಂದು ಬಹುತೇಕ ಹಳ್ಳಿಗಳಲ್ಲಿ ಇಂತಹ ಕೂಡುವಿಕೆಯ ವಾತಾವರಣವೇ ಇಲ್ಲವಾಗಿರುವುದು ಆತಂಕ ಮೂಡಿಸುತ್ತದೆ.

ನಾವು ಮದುವೆಯಾದ ಮೇಲೆ ಪತಿ ಸಂದೀಪನಿಗೆ ಸಂಧ್ಯಕ್ಕ ಪರಿಚಯವಾಗುತ್ತಾರೆ. ಸಂಧ್ಯಕ್ಕ ಎಂದರೆ ಅವರಿಗೆ ಬಹಳ ಗೌರವ. ಸುಭಾಷ್ ಪಾಳೇಕರ್ ತರಬೇತಿ ಕಾರ್ಯಕ್ರಮಕ್ಕೂ ಸಂಧ್ಯಕ್ಕನನ್ನು ಕರೆದು ಕೊಂಡು ಹೋಗಿದ್ದೆವು. ಮೊದಲಿಂದಲೂ ಅಷ್ಟಾಗಿ ಗೊಬ್ಬರ ಉಪಯೋಗಿಸುತ್ತಿರಲ್ಲಿಲವಾದರೂ ಹತ್ತಿ ಬೆಳೆಗೆ ಸ್ವಲ್ಪ ಪ್ರಮಾಣದ ರಾಸಯನಿಕ ಗೊಬ್ಬರ ಬಳಸುತ್ತಿದ್ದರು. ತರಬೇತಿಯ ನಂತರ ಹಲವು ಬಗೆಯ ಸಿರಿಧಾನ್ಯಗಳನ್ನು ಮಿಶ್ರ ಬೆಳೆಪದ್ದತಿಯಲ್ಲಿ ಬೆಳೆದರು. ಸಿದ್ದಸಣ್ಣ ಭತ್ತ ಬೆಳೆದು ನಮಗೂ ರುಚಿಹತ್ತಿಸಿದರು. ಇವತ್ತಿಗೂ ನಮ್ಮ ಮನೆಯಲ್ಲಿ ಸೋನಾಮಸೂರಿ ಬದಲಿಗೆ ಸಿದ್ದಸಣ್ಣ ಬಳಸುತ್ತಿದ್ದೇವೆ ಎಂದರೆ ಅದಕ್ಕೆ ಸಂಧ್ಯಕ್ಕನೇ ಕಾರಣ. ಭತ್ತ ಬೆಳೆದು ಸಂಧ್ಯಕ್ಕ ಮತ್ತು ಮಕ್ಕಳೇ ಕಟಾವು ಮಾಡುತ್ತಾರೆ. ಹೊರೆಕಟ್ಟಲು ಕತ್ತಾಳೆ ಎಲೆಗಳನ್ನು ಜೋಪಾನವಾಗಿ ಕತ್ತರಿಸಿ ಅದರಿಂದ ನಾರು ತೆಗೆದು ಹೊರೆಕಟ್ಟುತ್ತಾರೆ. ಕತ್ತಾಳೆ ಎಲೆ ಕತ್ತರಿಸುವುದು ಅಷ್ಟು ಸುಲಭವಲ್ಲ. ಒಂದಿಷ್ಚು ಯಾಮಾರಿದರೂ ಅದರಿಂದ ಬರುವ ರಸದಿಂದ ಚರ್ಮ ತುರಿಸುತ್ತದೆ. ಸುಲಭವಾಗಿ ನೈಲಾನ್ ದಾರ ಸಿಗುವ ಈ ಸಮಯದಲ್ಲಿ ಇಂತಹ ನೈಸರ್ಗಿಕ ನಾರು ತೆಗೆಯುವ ಕಲೆ ಅಳಿವಿನಂಚಿನಲ್ಲಿರುವುದು ನೋವಿನ ಸಂಗತಿಯಾಗಿದೆ.

ಮೊದಲ ಮಳೆಗೆ ಭೂಮಿ ಹದ ಮಾಡಿ ನೆಲಗಡಲೆ, ಅದರ ಮಧ್ಯೆ ಅಲಸಂದೆ, ಹೆಸರು, ಉದ್ದು, ತೊಗರಿ, ಹರಳು, ಜೋಳ, ಬೆಂಡೆ, ಬದನೆ, ಮೆಣಸಿನಕಾಯಿ ಮತ್ತಿತ್ತರ ಸೊಪ್ಪು ತರಕಾರಿಗಳನ್ನು ಅಕ್ಕಡಿಸಾಲಿನಲ್ಲಿ ಬಿತ್ತನೆ ಮಾಡುತ್ತಾರೆ. ಮುಂಗಾರು ಪ್ರಾರಂಭವಾಗುವ ಹೊತ್ತಿಗೆ ಬಹುತೇಕ ತರಕಾರಿಗಳು ಕಟಾವಿಗೆ ಸಿದ್ದವಾಗುತ್ತದೆ.
ಉಪ್ಪು, ಸೋಪು, ಬಟ್ಟೆಯಂತಹ ವಸ್ತುಗಳು ಬಿಟ್ಟರೆ ಸಂಧ್ಯಕ್ಕ ಯಾವುದನ್ನು ಕೊಂಡುಕೊಳ್ಳುವುದಿಲ್ಲ. ಗಂಡನಿಲ್ಲವೆಂಬ ಕೊರಗನ್ನು ಮೀರಿ ಸದಾ ನಗುತ್ತಲೇ ಎಲ್ಲರೊಂದಿಗೆ ಬೆರೆಯುತ್ತಾರೆ. ಯಾರ ಮನೆಯಲ್ಲಾದರೂ ಶುಭಕಾರ್ಯಗಳಿದ್ದರೆ ಎರಡು ದಿನ ಮುಂಚಿತವಾಗಿ ಹೋಗಿ ಎಲ್ಲ ಕೆಲಸ ಮಾಡಿಕೊಡುತ್ತಾರೆ. ತವರು ಮನೆಯ ಹಬ್ಬಗಳಲ್ಲೂ ತಾಯಿಗೆ ಎಲ್ಲರೀತಿ ಸಹಾಯ ಮಾಡುತ್ತಾರೆ. ತಾವು ಬೆಳೆದ ಸೊಪ್ಪು ತರಕಾರಿಗಳನ್ನು ನೆಂಟರಿಷ್ಚರಿಗೆಲ್ಲಾ ನೀಡುತ್ತಾರೆ. ಈಗಲೂ ಅಪರೂಪದ ಮಿಣಕೆ ಹಣ್ಣು, ಬಿಳಿ ಬೆಂಡೆ, ಹುಳಿ ಸೊಪ್ಪು, ಸಣ್ಣ ಕಾಳಿನ ನಾಟಿ ತೊಗರಿ ಮತ್ತು ರಾಗಿ ಬೀಜಗಳ ಸಂಗ್ರಹ ಸಂಧ್ಯಕ್ಕನಲ್ಲಿವೆ. ಹೈಸ್ಕೂಲ್ ವರೆಗೆ ಮಕ್ಕಳಿಬ್ಬರೂ ಮೊರಾರ್ಜಿ ಶಾಲೆಯಲ್ಲಿ ಓದಿದರು. ರಜೆಯಿದ್ದಾಗಲೆಲ್ಲಾ ಹೊಲದ ಕೆಲಸದಲ್ಲಿ ಅಮ್ಮನಿಗೆ ಸಹಾಯಮಾಡುತ್ತಿದ್ದರು. ಹಿರಿಮಗ ತೇಜು ಪ್ರತಿಷ್ಠಿತ ಬಸವನಗುಡಿಯ ಬಿಎಮ್ಎಸ್ ಕಾಲೇಜಿನಲ್ಲಿ ಎಲಿಕ್ಟ್ರಿಕಲ್ ಇಂಜಿನಿಯರಿಂಗ್ ಮುಗಿಸಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ ಕಿರಿಮಗ ರಂಜಿತ್ ಸಹ ಅದೇ ಕಾಲೇಜಿನಲ್ಲಿ ಇನ್ನೇನು ಇಂಜಿನಿಯರಿಂಗ್ ಪದವಿಧರನಾಗಲಿದ್ದಾನೆ. ಒಟ್ಟಿನಲ್ಲಿ ಮಕ್ಕಳಿಗೆ ಅಪ್ಪನಿಲ್ಲವೆಂಬ ಕೊರಗನ್ನು ಒಂದು ದಿನಕ್ಕೂ ನೆನಪಿಸಲಿಲ್ಲ ಸಂಧ್ಯಕ್ಕ.
ಈಗ ಮಕ್ಕಳು ದಿಣ್ಣೆ ಜಮೀನಿಗೆ ಬೋರ್ ಕೊರಿಸಿ ಒಂದು ಎಕರೆಯಲ್ಲಿ ಅಡಿಕೆ ತೋಟಮಾಡಿದ್ದಾರೆ. ಗಿಡಗಳು ಸಣ್ಣದಿರುವ ಕಾರಣ ಅಂತರ ಬೆಳೆಯಾಗಿ ತೊಗರಿ, ನೆರಳಿಗಾಗಿ ಹರಳು ಮತ್ತು ಅಗಸೆ, ಬದುಗಳಲ್ಲಿ ಅರಣ್ಯ ಪ್ರಭೇದಗಳಾದ ತೇಗ, ಸಿಲ್ವರ್, ನುಗ್ಗೆ ನಿಂಬೆ ಮತ್ತಿತ್ತರ ಮರಗಳಾಗುವ ಗಿಡಗಳನ್ನು ನೆಟ್ಟಿದ್ದಾರೆ. ಅಗಸೆ ಸೊಪ್ಪನ್ನು ಕುರಿ - ಮೇಕೆ ಸಾಕುವವರಿಗೆ ಮಾರುತ್ತಾರೆ. ಸ್ವಲ್ಪ ಜಾಗದಲ್ಲಿ ಕನಕಾಂಬರ ಅದರೊಟ್ಟಿಗೆ ಸಬ್ಸಿಗೆ, ದಂಟು, ಟಮೋಟ ಬೆಳೆದಿದ್ದಾರೆ. ಸದಾ ಚಟುವಟಿಕೆಯಿಂದಿದ್ದು ಯಾರ ಬಗ್ಗೆಯೂ ಯಾರೊಂದಿಗೂ ಮಾತನಾಡದೆ ಎಲ್ಲರೊಡನೆ ಪ್ರೀತಿಯಿಂದಿರುತ್ತಾರೆ ಸಂಧ್ಯಕ್ಕ. ವ್ಯವಸಾಯದಿಂದ ಬಂದ ಆದಾಯದಿಂದಲೇ ಹಳೆ ಮನೆಯನ್ನು ನವೀಕರಿಸಿ ದವಸ ಧಾನ್ಯ ಶೇಖರಿಸಲು ಅನುವು ಮಾಡಿಕೊಂಡಿದ್ದಾರೆ.

ನಾಡಿನ ಹೆಸರಾಂತ ಗಾಣದ ಎಣ್ಣೆ ತಯಾರಕರಾದ ದೇಸಿರಿ ನವೀನ್ ರವರು ಗಾಣ ಪ್ರಾರಂಭಿಸಿದಾಗ ಮೊದಲು ನೆಲಗಡಲೆ ಖರೀದಿಸಿದ್ದು ಸಂಧ್ಯಕ್ಕರವರಿಂದ. ಯಾವುದೇ ರಾಸಾಯನಿಕ ಬಳಸದಿದ್ದರಿಂದ ನವೀನ್ ರವರು ಅಂದಿನ ಮಾರುಕಟ್ಟೆ ದರಕ್ಕಿಂತ ಹೆಚ್ಚು ಹಣಕೊಟ್ಟು ನೆಲಗಡಲೆ ಖರೀದಿಸಿದರು. ಮರು ವರ್ಷ ನೆಲಗಡಲೆ ಬೆಲ ಕುಸಿದಾಗಲೂ ಕೇವಲ ಸಂಧ್ಯಕ್ಕ ಅಷ್ಟೇ ಅಲ್ಲದೆ ಇಡೀ ಗ್ರಾಮದವರಿಂದ ಉತ್ತಮ ದರಕ್ಕೆ ನೆಲಗಡಲೆ ಖರೀದಿಸಿದರು ನವೀನ್. ಲಕ್ಷ್ಮೀದೇವಿಪುರದಲ್ಲಿ ಅಂದಿನಿಂದ ಬಹಳಷ್ಟು ಮಂದಿ ರಾಸಯನಿಕ ಗೊಬ್ಬರ ಬಳಸುವುದನ್ನು ಕಡಿತಗೊಳಿಸಿದ್ದಾರೆಂದರೆ ಸಂಧ್ಯಕ್ಕನ ಪ್ರಭಾವ ಎಷ್ಚಿದೆ ಎಂದು ನಿಮಗೆ ಅರಿವಾಗಬಹುದು. ಇದರ ಜೊತೆಗೆ ತನ್ನಂತೆ ಯಾವ ಹೆಂಗಸರು ಕಷ್ಟ ಪಡಬಾರದೆಂದು ಸ್ತ್ರೀ ಶಕ್ತಿ ಸಂಘ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡುತ್ತಿದ್ದಾರೆ. ಹೇಳಲು ಇನ್ನು ಸಾಕಷ್ಟಿದೆ. ಸಣ್ಣ ಸಣ್ಣ ಕಾರಣಗಳಿಗೆ ಖಿನ್ನತೆ / ಆತ್ಮಹತ್ಯೆಗೆ ಮೊರೆಹೋಗುವ ಈ ದಿನಗಳಲ್ಲಿ ಸಂಧ್ಯಕ್ಕ ಆದರ್ಶವಾಗುತ್ತಾರಲ್ಲವೇ? ಸಂಧ್ಯಕ್ಕನೊಡನೆ ಮಾತನಾಡಲು ಸಂಪರ್ಕಿಸಿ 7795616408
ಸುಧಾ ಸಂದೀಪ್ ಎಂ.ಎಸ್ಸಿ ಕೃಷಿ
ಹುಣಸೂರು.

ಭೈರಪ್ಪನವರ ಕಾಲಘಟ್ಟದಲ್ಲಿ ನಾವು ಬದುಕಿದ್ದೀವಿ ಎನ್ನುವುದೇ ನಮ್ಮ ಭಾಗ್ಯ. ನಿಮಗೆ ಮೋಕ್ಷ ಸಿಗಲಿ. ಓಂ ಶಾಂತಿ. ನಾವಿಂದು ಪತ್ರಿಕೆಗಳಲ್ಲಿ ನೂರಾರು ...
24/09/2025

ಭೈರಪ್ಪನವರ ಕಾಲಘಟ್ಟದಲ್ಲಿ ನಾವು ಬದುಕಿದ್ದೀವಿ ಎನ್ನುವುದೇ ನಮ್ಮ ಭಾಗ್ಯ. ನಿಮಗೆ ಮೋಕ್ಷ ಸಿಗಲಿ. ಓಂ ಶಾಂತಿ.
ನಾವಿಂದು ಪತ್ರಿಕೆಗಳಲ್ಲಿ ನೂರಾರು ಲೇಖನ ಬರೆದಿದ್ದೇವೆ ಎಂದರೆ ಅದಕ್ಕೆ ಸ್ಫೂರ್ತಿ ಡಾ ಎಸ್ ಎಲ್ ಭೈರಪ್ಪನವರು. ಕಾಲೇಜು ದಿನಗಳಲ್ಲಿ ಅವರ ಪುಸ್ತಕ ಓದುವ ಗೀಳುಹಿಡಿಯಿತು. ಒಂದೆರಡು ಬಿಟ್ಟು ಬಹುತೇಕ ಅವರ ಎಲ್ಲಾ ಕಾದಂಬರಿಗಳನ್ನು ಓದಿದ್ದೇವೆ. ಉತ್ತರಕಾಂಡ ಪುಸ್ತಕವನ್ನು prebook ಮಾಡಿ ಮೊದಲದಿನ ಖರೀದಿಸಿದ ಮಜವೇ ಬೇರೆಯಿತ್ತು. ಯಾನ ಪುಸ್ತಕ ಒಂದೇ ದಿನದಲ್ಲಿ ಓದಿಸಿಕೊಂಡು ಹೋಯಿತು. ಪರ್ವ ಪುಸ್ತಕ ಓದಿನ ಜೊತೆಗೆ ಪ್ರಕಾಶ್ ಬೆಲವಾಡಿಯವರ ನಾಟಕ ಮನಸಿನಲ್ಲೇ ಅಚ್ಚಾಗಿದೆ. ಆವರಣವಂತೂ ಕೇವಲ ನಾವಷ್ಟೇ ಓದದೆ ಅನೇಕರಿಗೆ ಉಡುಗೊರೆಯಾಗಿ ನೀಡಿದ್ದೇವೆ. ಭೀಮಕಾಯ ನಮ್ಮ ಕಣ್ಣೆದುರೇ ಕುಸ್ತಿ ನಡೆಯಿತೋ ಎನ್ನುವಷ್ಟು ಸೊಗಸಾಗಿದೆ. ಮಂದ್ರ, ಜಲಪಾತ, ದೂರ ಸರಿದರು, ತಬ್ಬಲಿ ನೀನಾದೆ ಮಗನೆ ಓದಿದಾಗ ಕಣ್ಣಾಲೆಗಳು ಒದ್ದೆಯಾಗಿದ್ದವು. ಹೇಳಲು ಸಾಕಷ್ಟಿದೆ. ನಿಮ್ಮಂತಹ ಬರಹಗಾರ ಹಿಂದೆ ಇರಲಿಲ್ಲ. ಮುಂದೆ ಬರುವುದಿಲ್ಲ. ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ. ನಾವು ಪ್ರತಿ ಸಲ ಲೇಖನ ಬರೆಯುವಾಗಲೂ ನೀವು ನೆನಪಾಗುತ್ತೀರಾ. ನಿಮ್ಮಂತೆ ಬರೆಯಬೇಕೆಂಬ ಆಸೆ. ಅಂತೂ ಕನ್ನಡ ಸಾಹಿತ್ಯ ಲೋಕದ ಕಣ್ಮಣಿ ಕಣ್ಮರೆಯಾಗಿರುವುದು ನೋವು ತಂದಿದೆ.

24/09/2025
ನವರಾತ್ರಿಯ ದೇವಿ ಪೂಜೆಗೆ ಬಳಸಿ ಪರಿಶುದ್ಧ ಕುಂಕುಮ. ನಾವು ಅರಿಶಿಣದ ಗೋಟುಗಳಿಗೆ ನಿಂಬೆರಸ, ಬಿಳಿಗಾರ, ಪಟಿಗಾರ ಮತ್ತು ಸ್ವಲ್ಪ ಪ್ರಮಾಣದ ಸುಣ್ಣದ ...
24/09/2025

ನವರಾತ್ರಿಯ ದೇವಿ ಪೂಜೆಗೆ ಬಳಸಿ ಪರಿಶುದ್ಧ ಕುಂಕುಮ. ನಾವು ಅರಿಶಿಣದ ಗೋಟುಗಳಿಗೆ ನಿಂಬೆರಸ, ಬಿಳಿಗಾರ, ಪಟಿಗಾರ ಮತ್ತು ಸ್ವಲ್ಪ ಪ್ರಮಾಣದ ಸುಣ್ಣದ ತಿಳಿ ನೀರು ಬಳಸಿ ಸಾಂಪ್ರದಾಯಿಕ ಪದ್ದತಿಯಲ್ಲಿ ಕುಂಕುಮ ಸಿದ್ದಪಡಿಸುತ್ತಿದ್ದೇವೆ. ನಿಮಗೂ ಬೇಕಿದ್ದರೆ ಸಂಪರ್ಕಿಸಿ 094807 97169 ಬೆಲೆ 250ಗ್ರಾಮ್ ಗೆ 300ರೂ.

ಸಹೋದರ ಆದಿತ್ಯ ಬೆಂಗಳೂರಿನ ಮೈಸೂರು ರಸ್ತೆಯ ಸಮೀಪ ಇರುವ ಸ್ವಲ್ಪ ಜಾಗದಲ್ಲಿ ಅಣಬೆ ಬೇಸಾಯದೊಂದಿಗೆ ಪಪ್ಪಾಯ ಬೆಳೆದಿರುತ್ತಾನೆ. ಇಂದು ಮೊದಲ ಸಲ ಹಣ್...
23/09/2025

ಸಹೋದರ ಆದಿತ್ಯ ಬೆಂಗಳೂರಿನ ಮೈಸೂರು ರಸ್ತೆಯ ಸಮೀಪ ಇರುವ ಸ್ವಲ್ಪ ಜಾಗದಲ್ಲಿ ಅಣಬೆ ಬೇಸಾಯದೊಂದಿಗೆ ಪಪ್ಪಾಯ ಬೆಳೆದಿರುತ್ತಾನೆ. ಇಂದು ಮೊದಲ ಸಲ ಹಣ್ಣುಗಳನ್ನು ಕಟವಾ ಮಾಡಲಾಗಿದೆ. ಇಂಜಿನೇಯರಿಂಗ್ ನಂತರ ಖಾಸಗಿ ಕಂಪೆನಿಯ ಉದ್ಯೋಗ ಬಿಟ್ಟು ಕೃಷಿಯಲ್ಲಿ ಏನಾದರೂ ಸಾಧಿಸಲು ಹೊರಟಿರುವ ಆದಿತ್ಯನಿಗೆ ಶುಭವಾಗಲಿ. ನಿಮಗೂ ಅಣಬೆ ಮತ್ತು ಪಪ್ಪಾಯ ಬೇಕಿದ್ದರೆ ಸಂಪರ್ಕಿಸಿ +91 89717 48710

22/09/2025

🌿 𝐒𝐞𝐯𝐚 𝐟𝐨𝐫 𝐭𝐡𝐞 𝐒𝐨𝐮𝐥 – 𝐈𝐧𝐚𝐮𝐠𝐮𝐫𝐚𝐥 𝐆𝐨 𝐒𝐮𝐧𝐝𝐚𝐲!🌿
A bi-weekly community initiative from GoPals & Youth For Seva

🗓 𝟐𝟖𝐭𝐡 𝐒𝐞𝐩𝐭 𝟐𝟎𝟐𝟓 | 𝟖:𝟎𝟎 – 𝟗:𝟏𝟓 𝐀𝐌
📍 𝐒𝐫𝐢 𝐊𝐮𝐦𝐚𝐫𝐚 𝐒𝐮𝐛𝐫𝐚𝐦𝐧𝐲𝐚 𝐉𝐚𝐠𝐢𝐫𝐝𝐚𝐫 𝐣𝐢 𝐆𝐨𝐮𝐬𝐡𝐚𝐥𝐚, 𝐒𝐡𝐞𝐬𝐡𝐚𝐝𝐫𝐢𝐩𝐮𝐫𝐚𝐦, 𝐁𝐞𝐧𝐠𝐚𝐥𝐮𝐫𝐮

✨ 𝐌𝐨𝐫𝐧𝐢𝐧𝐠 𝐨𝐟 𝐒𝐞𝐯𝐚:
✅ Clean & care for Goshala
✅ Discover native cow breeds
✅ Learn the science of Gomata
✅ Connect with “Go Sunday” vision

👉 Free Registration: tinyurl.com/Go-Sunday

Your Seva is Priceless. 🙏

Youth For Seva

ಕೆಲ ವರ್ಷಗಳ ಹಿಂದೆ ಸುಪದ ನೆಟ್ಟ ಕಮಲಾಕ್ಷಿ ಹಣ್ಣಿನ ಗಿಡ ಬೆಳೆದು ಭರಪೂರ ಹಣ್ಣು ಬಿಡುತ್ತಿವೆ. ಇಂದು ಮಕಳ್ಳೇತಮ್ಮ ಪುಟ್ಟ ಕೈಗಳಲ್ಲಿ ಹಣ್ಣು ಕೊಯ್...
22/09/2025

ಕೆಲ ವರ್ಷಗಳ ಹಿಂದೆ ಸುಪದ ನೆಟ್ಟ ಕಮಲಾಕ್ಷಿ ಹಣ್ಣಿನ ಗಿಡ ಬೆಳೆದು ಭರಪೂರ ಹಣ್ಣು ಬಿಡುತ್ತಿವೆ. ಇಂದು ಮಕಳ್ಳೇ
ತಮ್ಮ ಪುಟ್ಟ ಕೈಗಳಲ್ಲಿ ಹಣ್ಣು ಕೊಯ್ದು ಸವಿದರು. ಇದಕ್ಕಿಂತ ಆನಂದ ಮತ್ತೊಂದಿಲ್ಲ.

21/09/2025

ಪಿತೃಪಕ್ಷ ಎಂದರೆ ದಾಸಪ್ಪ ಗರುಡಗಂಬ ಶಂಖ ಜಾಗಟೆ.

ಮಹಾಲಯ ಅಮವಾಸ್ಯೆಯ ದಿನದಂದು ಸ್ವರ್ಗಸ್ಥರಾದ ಹಿರಿಯರಿಗೆ ಎಡೆಯಿಟ್ಟು ಧೂಪ ಹಾಕಿ ಅವರನ್ನು ಸ್ಮರಿಸಿದೆವು. ನಮ್ಮ ಭಾಗದಲ್ಲಿ ದಾಸಪ್ಪನವರು ಮನೆ ಮನೆಗ...
21/09/2025

ಮಹಾಲಯ ಅಮವಾಸ್ಯೆಯ ದಿನದಂದು ಸ್ವರ್ಗಸ್ಥರಾದ ಹಿರಿಯರಿಗೆ ಎಡೆಯಿಟ್ಟು ಧೂಪ ಹಾಕಿ ಅವರನ್ನು ಸ್ಮರಿಸಿದೆವು. ನಮ್ಮ ಭಾಗದಲ್ಲಿ ದಾಸಪ್ಪನವರು ಮನೆ ಮನೆಗೆ ಗರುಡ ಗಂಬ ಹಿಡಿದು ಬಂದು ಶಂಖ ಜಾಗಟೆ ಬಡಿದು ಗೋವಿಂದ ಗೋವಿಂದ ಎಂದು ಕೂಗಿ ಶುಭವಾಗಲಿ ಎನ್ನುತ್ತಾರೆ. ಗರುಡಗಂಬಕ್ಕೆ ಕಕ್ಕೆ ಮರದ ಎಲೆಗಳಿಂದ ಸಿಂಗರಿಸಿರುತ್ತಾರೆ. ಆಹಾರ ಇತ್ಯಾದಿಗಳನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುವಾಗ ಕಕ್ಕೆ ಎಲೆಗಳನ್ನು ತೆಗೆದುಕೊಂಡು ಹೋಗುವುದು ವಾಡಿಕೆ.
ಪಿತೃಪಕ್ಷ ಎಂದರೆ ಕೆಲವರು ಗಂಡಸರಿಗೆ ಮಾತ್ರ ತರ್ಪಣ ಬಿಡುವುದು ಅಥವಾ ಅವರನ್ನು ಮಾತ್ರ ನೆನಪಿಸಿಕೊಳ್ಳುವುದು ಎಂದು ತಪ್ಪು ತಿಳಿದಿದ್ದಾರೆ. ನಮ್ಮ ಮನೆಯಲ್ಲಿ ತಂದೆ, ತಾತ ಅಜ್ಜಿ ಎಲ್ಲರಿಗೂ ಪ್ರತ್ಯೇಕ ಕಳಸಗಳನ್ನು ಮಾಡಿ ಅದರ ಎದುರು ಅವರಿಗೆ ಇಷ್ಟವಾದ ಅಡುಗೆ ಮಾಡಿ ಬಡಿಸುತ್ತೇವೆ. ತರ್ಪಣ ಬಿಡುವಾಗಲೂ ತಂದೆಯ ಕಡೆ ಹಿರಿಯರು ಮತ್ತು ತಾಯಿಯ ಕಡೆ ಹಿರಿಯರು, ಅಷ್ಟೇ ಏಕೆ ಸ್ನೇಹಿತರ ಹೆಸರುಗಳನ್ನೂ ಸ್ಮರಿಸುವುದಿದೆ. ಎಷ್ಟು ಚೆಂದ ಅಲ್ಲವೆ ನಮ್ಮ ಆಚರೆಣೆಗಳು?

Address

S4 Naturals. Opposite Hunsur Plywood Factory BM Road Hunsur
Hunsur
571105

Alerts

Be the first to know and let us send you an email when Sudha & Sandeep Manjunath posts news and promotions. Your email address will not be used for any other purpose, and you can unsubscribe at any time.

Contact The Business

Send a message to Sudha & Sandeep Manjunath:

Share