Sudha & Sandeep Manjunath

Sudha & Sandeep Manjunath S4 Naturals - Simple Sustainable Self- reliant Society Promoting Desi cow based natural farming.
(1)

ಭೂಲೋಕದ ಅದ್ಭುತ ವೈಜಯಂತಿ ಮಣಿ. ಆರೇಳು ವರ್ಷಗಳ ಹಿಂದೆ ಮೊದಲಸಲ ಈ ಜೋಗಿ ಮಣಿ ಗಿಡಗಳನ್ನು ದಿ ಕುಳ್ಳೇಗೌಡರ ತೋಟದಲ್ಲಿ ನೋಡಿದ್ದು. ಆಗಿಂದ ನಮಗೆ ಇದ...
29/05/2026

ಭೂಲೋಕದ ಅದ್ಭುತ ವೈಜಯಂತಿ ಮಣಿ. ಆರೇಳು ವರ್ಷಗಳ ಹಿಂದೆ ಮೊದಲಸಲ ಈ ಜೋಗಿ ಮಣಿ ಗಿಡಗಳನ್ನು ದಿ ಕುಳ್ಳೇಗೌಡರ ತೋಟದಲ್ಲಿ ನೋಡಿದ್ದು. ಆಗಿಂದ ನಮಗೆ ಇದರ ಮೇಲೆ ವಿಶೇಷ ಆಸಕ್ತಿ. ಸಾಕಷ್ಟು ಸಲ ಗೌಡರ ಬಳಿ ಗಿಡ ತಂದು ನೆಟ್ಟರೂ ನಮ್ಮಲಿ ಚೆನ್ನಾಗಿ ಬರಲಿಲ್ಲ. ನಂತರ ತಿಳಿಯಿತು ಈ ಸಸ್ಯ ಬೆಳೆಯಬೇಕೆಂದರೆ ಹೆಚ್ಚು ನೀರು ಬೇಕೆಂದು. ನಂತರ ಅವರ ಮಾತಿನಂತೆ ನೀರು ಹರಿಯುವ ಜಾಗದಲ್ಲಿ ನಟ್ಟಗಿಡಗಳು ಚೆನ್ನಾಗಿ ಬೆಳೆದ ಸಾಕಷ್ಟು ಮಣಿಗಳನ್ನು ನೀಡಿದವು. ಇದು ಕೇವಲ ಮಣಿಗಳಿಗೆ ಮಾತ್ರವಲ್ಲ. ಇದರ ಹುಲ್ಲು ಉತ್ತಮ ಮೇವು. ಹಸುಗಳು ಇಷ್ಟಪಟ್ಟು ತಿನ್ನುತ್ತವೆ. ಇನ್ನು ಗಿಡದಿಂದ ಉದುರಿದ ಮಣಿಗಳು ಬೇಸಿಗೆ ಮಳೆಗೆ ಮೊಳಕೆಯೊಡೆದು ಚಿಗುರಿವೆ. ಇವುಗಳನ್ನು ಕಿತ್ತು ಬೇರೆ ಕಡೆ ನಾಟಿ ಮಾಡುತ್ತಿದ್ದೇವೆ. ಆಶ್ಚರ್ಯವೆಂದರೆ ಇವುಗಳು ಮೊಳಕೆಯೊಡೆದರೂ ಮಣಿ ಮಾತ್ರ ಇನ್ನೂ ಹಾಗೇ ಇದೆ. ಈ ಮಣಿಗಳು ಎಷ್ಟು ಗಟ್ಟಿ ಎಂದರೆ ಪುಡಿ ಮಾಡಲು ಕಲ್ಲು ಅಥವಾ ಸುತ್ತಿಗೆ ಬೇಕು. ಮಾಲೆ ಮಾಡಿ ಧರಿಸಿದರೆ ಅಥವಾ ಜಪ ಮಾಡಲು ಬಳಸಿದರೆ ಸಕಾರಾತ್ಮಕ ಅನುಭವವಾಗುತ್ತದೆ. ಗಿಡದಲ್ಲಿ ಈ ರೀತಿ ಮಣಿ ಬಿಡುತ್ತದೆ ಮತ್ತು ಈ ಮಣಿಗಳಿಗೆ ನೈಸರ್ಗಿಕವಾಗೇ ರಂಧ್ರವಿದ್ದು ಪೋಣಿಸಲು ಸಹಕಾರಿಯಾಗಿರುತ್ತದೆ ಎನ್ನುವ ವಿಶಯವೇ ವಿಸ್ಮಯ. ಒಟ್ಟಿನಲ್ಲಿ ಈ ರೀತಿ ಒಂದು ಗಿಡ ಪರಿಚಯಿಸಿದ ಕುಳ್ಳೇಗೌಡರಿಗೆ ಎಷ್ಟು ಅಭಿನಂದಿಸಿದರೂ ಸಾಲದು. ಅವರಿಂದ ಈ ಮಣಿ ಗಿಡ ಸಾಕಷ್ಟು ಜನರ ಮನೆ ಮತ್ತು ತೋಟಗಳಲ್ಲಿ ಇಂದು ಬೆಳೆಯುತ್ತಿದೆ ಮತ್ತಷ್ಟು ಜನರು ಬೆಳೆಯುವಂತಾಗಲಿ.

29/05/2026

ಹುಟ್ಟು ಹಬ್ಬವನ್ನು “ಸೀಗೆ ಸೊಪ್ಪಿನ” ಗಿಡ ನೆಟ್ಟು ಆಚರಿಸಿದೆವು. ಅಳಿವಿನಂಚಿನಲ್ಲಿರುವ ಗಿಡಗಳನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ.

ಪ್ರತಿ ವರ್ಷ ಹುಟ್ಟು ಹಬ್ಬದ ದಿನ ಗಿಡ ನೆಡುವ ಅಭ್ಯಾಸ ಇರುವ ನನಗೆ ಈ ವರ್ಷದ ಹುಟ್ಟು ಹಬ್ಬ ಬಹಳ ವಿಶೇಷವಾದದ್ದು. ಈ ವರ್ಷದ ಹುಟ್ಟಹಬ್ಬಕ್ಕೆ ಅಪರೂಪ...
29/05/2026

ಪ್ರತಿ ವರ್ಷ ಹುಟ್ಟು ಹಬ್ಬದ ದಿನ ಗಿಡ ನೆಡುವ ಅಭ್ಯಾಸ ಇರುವ ನನಗೆ ಈ ವರ್ಷದ ಹುಟ್ಟು ಹಬ್ಬ ಬಹಳ ವಿಶೇಷವಾದದ್ದು. ಈ ವರ್ಷದ ಹುಟ್ಟಹಬ್ಬಕ್ಕೆ ಅಪರೂಪದ “ಸೀಗೆ ಸೊಪ್ಪಿನ” ಗಿಡ ನೆಟ್ಟೆವು. ಸಾಮಾನ್ಯವಾಗಿ ಹಣ್ಣಿನ ಅಥವಾ ಹೂವಿನ ಗಿಡಗಳನ್ನು ನರ್ಸರಿ ಅವರು ಬೆಳೆಸುತ್ತಾರೆ. ಕಾಡು ಗಿಡಗಳನ್ನು ಅರಣ್ಯ ಇಲಾಖೆಯವರು ಅಭಿವೃದ್ಧಿಮಾಡುತ್ತಾರೆ. ಆದರೆ ಈ ರೀತಿ ಮರಬಳ್ಳಿಯಾದ ಸೀಗೆ ಸೊಪ್ಪಿನ ಗಿಡಗಳನ್ನು ಅಷ್ಟಾಗಿ ಯಾರೂ ಬೀಜ ಸಂಗ್ರಹಿಸಿ ಗಿಡ ಮಾಡಿ ಬೆಳೆಸುವುದಿಲ್ಲ. ನಾವು ಕಳೆದ ವರ್ಷ ಇವುಗಳ ಬೀಜ ಸಂಗ್ರಹಿಸಿ ಸಸಿಗಳನ್ನು ಮಾಡಿ ಅನೇಕರಿಗೆ ಹಂಚಿದೆವು. ಈ ವರ್ಷ ನಮ್ಮ ತೋಟದಲ್ಲೇ ಒಂದು ಗಿಡ ಇದ್ದರೆ ಚೆಂದ ಎಂದು ಒಂದು ಸಸಿಯನ್ನು ಕಾಂಪೌಡ್ ಬಳಿ ನೆಟ್ಟೆವು. ವಿಪರೀತ ಮುಳ್ಳುಗಳಿಂದ ಕೂಡಿದ ಈ ಪ್ರಭೇದವನ್ನು ಜೀವಂತ ಬೇಲಿಯಾಗಿ ಬಳಸಬಹುದು. ಆದರೆ ಇದರಲ್ಲಿ ಸೀಗೆ ಕಾಯಿ ಬಿಡುವುದಿಲ್ಲ. ಇದರ ಎಲೆಗಳನ್ನು ಅಡುಗೆಗೆ ಬಳಸಬಹದು. ಆಧುನಿಕತೆಯಿಂದ ಕುರುಚಲು ಕಾಡು ನಾಶವಾಗಿ ಇಂದು ಇಂತಹ ಅಪರೂಪದ ಸಸ್ಯಗಳು ಅಳಿವಿನಂಚಿನಲ್ಲಿವೆ. ಇಂತಹ ಗಿಡಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದಾಗಿದೆ. ಒಟ್ಟಿನಲ್ಲಿ ಹುಟ್ಟು ಹಬ್ಬದ ದಿನವೇ ಈ ರೀತಿ ಒಳ್ಳೆಯ ಕೆಲಸ ಮಾಡಿರುವುದಕ್ಕಾಗಿ ನಮಗೂ ಸಂತೋಷವಾಗುತ್ತಿದೆ. ನಿಮಗೂ ಈ ಆನಂದ ಸಿಗಬೇಕೆಂದರೆ ನಿಮ್ಮ ಹುಟ್ಟು ಹಬ್ಬ ಅಥವಾ ವಿಶೇಷ ದಿನಗಳಲ್ಲಿ ಅಪರೂಪದ ಗಿಡಗಳನ್ನು ನೆಟ್ಟು ಬೆಳೆಸುತ್ತೀರೆಂದು ಆಶಿಸುವೆ.

ನಮ್ಮ ತೋಟದಲ್ಲಿ ಹೀಗೊಂದು ನೇರಳೆ ಪಿಕಿಂಗ್.. ಇತ್ತೀಚಿಗೆ Mango picking, litchi picking event ಗಳಲ್ಲಿ ಭಾಗವಹಿಸುವ ಅವಕಾಶವಾಗಿತ್ತು. ಇಂದು...
28/05/2026

ನಮ್ಮ ತೋಟದಲ್ಲಿ ಹೀಗೊಂದು ನೇರಳೆ ಪಿಕಿಂಗ್.. ಇತ್ತೀಚಿಗೆ Mango picking, litchi picking event ಗಳಲ್ಲಿ ಭಾಗವಹಿಸುವ ಅವಕಾಶವಾಗಿತ್ತು. ಇಂದು ನಮ್ಮ ತೋಟದಲ್ಲೇ ನೇರಳೆ ಹಣ್ಣುಗಳ ಪಿಕಿಂಗ್ ನಡೆಯಿತು. ತಾನಾಗೇ ಬೆಳೆದ ಜಂಬು ನೇರಳೆ ಮರದಲ್ಲಿ ಈಸಲ ಭರಪೂರ ಫಸಲು ಬಂದಿದೆ. ಅದು ಸಹ ಕೈಗೆ ಎಟಕುವ ಹಾಗೆ ಹಣ್ಣು ಬಿಟ್ಟಿವೆ. ಮಕ್ಕಳು ತಾವೇ ಕೈಯಿಂದ ಹಣ್ಣು ಕಿತ್ತು ತಿನ್ನುವಾಗ ನಮಗೆ ಏನೋ ಒಂದು ರೀತಿ ಆನಂದ. ಇಂದು ಅಜ್ಜಿ ಮೊಮ್ಮಕ್ಕಳು ಸೇರಿ ಹಣ್ಣು ಸವಿದದ್ದು ನಮ್ಮ ಸಂತೋಷ ಇಮ್ಮಡಿಯಾಯಿತು. ನಿಮಗೂ ಈ ಆನಂದ ಸಿಗಬೇಕೆಂದರೆ ನೀವು ಸಹ ಈ ಮಳೆಗಾಲದಲ್ಲಿ ಒಂದಷ್ಟು ಹಣ್ಣಿನ ಗಿಡಗಳನ್ನು ಬೆಳೆಸಲು ಪ್ರಯತ್ನಿಸಿ.

28/05/2026

ಜೇನಿನ ಝೇಂಕಾರ… ಬೇಸಿಗೆಯಲ್ಲಿ ಹಲವು ಬಗೆಯ ಹೂವುಗಳು ಅರಳುತ್ತವೆ. ಜೇನು ಹುಳುಗಳಿಗೆ ಮಕರಂದ ಪರಾಗ ಸಂಗ್ರಹಿಸಲು ಇದು ಸೂಕ್ತ ಕಾಲ. ಹುಣಸೆಗಾಲದ ವಿಠಲ ಅವರ ಜಮೀನಿನ ಬದುವಿನಲ್ಲಿ ಹಲವು ಕಾಡು ಜಾತಿಯ ಮರಬಳ್ಳಿಗಳಿದ್ದು ಅವುಗಳಲ್ಲಿ ಹೂವು ಬಿಟ್ಟಿದ್ದು ಜೇನು ನೊಣಗಳಿಗೆ ಹಬ್ಬವೋ ಹಬ್ಬ.

ಹುಣಸೆಗಾಲ ಗ್ರಾಮದ ಪ್ರಗತಿಪರ ಕೃಷಿಕ ಶ್ರೀ ವಿಠಲ ಅವರ ಜಮೀನಿನ ಬದುವಿನಲ್ಲಿರುವ “ಸೀಗೆ ಸೊಪ್ಪು”  ಬಿಡಿಸಿಕೊಂಡು ಬಂದೆವು. ಜೆಸಿಬಿ ಹಾವಳಿಯಿಂದ ಇಂ...
28/05/2026

ಹುಣಸೆಗಾಲ ಗ್ರಾಮದ ಪ್ರಗತಿಪರ ಕೃಷಿಕ ಶ್ರೀ ವಿಠಲ ಅವರ ಜಮೀನಿನ ಬದುವಿನಲ್ಲಿರುವ “ಸೀಗೆ ಸೊಪ್ಪು” ಬಿಡಿಸಿಕೊಂಡು ಬಂದೆವು. ಜೆಸಿಬಿ ಹಾವಳಿಯಿಂದ ಇಂದು ಬಹುತೇಕರು ಸೀಗೆ ಮೆಳೆಗಳನ್ನು ನಾಶಮಾಡಿದ್ದಾರೆ. ಆದರೂ ಅಲ್ಲಬ್ಬ ಇಲ್ಲಬರು ಬದುಗಳನ್ನು ಉಳಿಸಿರುವ ಪರಿಣಾಮ ಇಂದೂ ಸಹ ಸೀಗೆ ಸೊಪ್ಪು ಉಳಿದಿದೆ. ಇದು ತಿನ್ನುವ ಸೀಗೆ ಸೊಪ್ಪು. ಇದರಲ್ಲಿ ತಲಗೆ ಸ್ನಾನ ಮಾಡುವ ಸೀಗೆ ಕಾಯಿ ಬರುವುದಿಲ್ಲ. ನೋಡಲು ಎರಡೂ ಒಂದೇ ರೀತಿ ಇದ್ದರೂ ಈ ಪ್ರಭೇದದ ಎಲೆಗೆ ಬಹಳ ಪರಿಮಳವಿರುತ್ತದೆ. ಕೈ ಯಲ್ಲಿ ಸ್ವಲ್ಪ ಎಲೆಗಳನ್ನು ಹಿಡಿದು ಹಿಚುಕಿದರೆ ವಿಶೇಷ ಪರಿಮಳ ಬೀರುತ್ತದೆ. ವರ್ಷಕ್ಕೆ ಒಮ್ಮೆಯಾದರೂ ಸೀಗೆ ಸೊಪ್ಪು ತಿನ್ನಬೇಕನ್ನುತ್ತಾರೆ ಹಿರಿಯರು. ಅದರಲ್ಲೂ ಬಾಣಂತಿಯರಿಗೆ ಎದೆಹಾಲು ಹೆಚ್ಚಾಗಲಿ ಎಂದು ಈ ಸೊಪ್ಪನ್ನು ವಿಶೇಷವಾಗಿ ಕೊಡುತ್ತಾರೆ. ನಿಮಗೂ ಈ ಸೊಪ್ಪು ಸಿಕ್ಕರೆ ಖಂಡಿತ ಉಪಯೋಗಿಸಿ. ಬಸ್ಸಾರು ಮುದ್ದೆ ಒಳ್ಳೆಯ ಕಾಂಬಿನೇಶನ್. ಸೀಗೆ ಸೊಪ್ಪು ಬಿಡಿಸಲು ಸಹಾಯ ಮಾಡಿದ ವಿಠಲ ಅವರಿಗೆ ಧನ್ಯವಾದಗಳು. ಸೀಗೆ ಸೊಪ್ಪನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ.

ಈ ಮರವೊಂದಿದ್ದರೆ ಮನೆಯಲ್ಲಿ ಒಬ್ಬ ಡಾಕ್ಟರ್ ಇದ್ದಂತೆ ಎಂದು ಸ್ನೇಹಿತರೊಬ್ಬರು ತಿಳಿಸಿದ್ದರು. ಇದು ಸತ್ಯವೂ ಹೌದು. ಖನಿಜಗಳ ಘಣಿಯಾಗಿರುವ ನುಗ್ಗೆ ...
28/05/2026

ಈ ಮರವೊಂದಿದ್ದರೆ ಮನೆಯಲ್ಲಿ ಒಬ್ಬ ಡಾಕ್ಟರ್ ಇದ್ದಂತೆ ಎಂದು ಸ್ನೇಹಿತರೊಬ್ಬರು ತಿಳಿಸಿದ್ದರು. ಇದು ಸತ್ಯವೂ ಹೌದು. ಖನಿಜಗಳ ಘಣಿಯಾಗಿರುವ ನುಗ್ಗೆ ಸೊಪ್ಪು ಪ್ರತಿಯೊಬ್ಬರ ಮನೆಯಲ್ಲಿರಬೇಕು. ಇದರ ಸೊಪ್ಪು ಕಾಯಿ ಎಲ್ಲವೂ ಉಪಯುಕ್ತವೇ. ಈಗಷ್ಟೇ ಬೇಸಿಗೆ ಮಳೆಯಾಗಿ ಹೊಸ ಚಿಗುರು ಬರುತ್ತಿದೆ. ಇವುಗಳನ್ನು ಬಿಡಿಸಿ ಬಸ್ಸಾರು ಮುದ್ದೆ ಮಾಡಿದ್ದೆವು. ಇತ್ತೀಚಿಗೆ ನುಗ್ಗೆ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ Super food ಎಂದು ವಿದೇಶಗಳಿಗೆ ರಫ್ತು ಮಾಡುತ್ತಿರುವುದು ನಿಮಗೆ ತಿಳಿದಿರಬೇಕು. ಅಂತಹದರಲ್ಲಿ ನಮ್ಮ ಮನೆಯ ಹಿತ್ತಲಿನಲ್ಲೇ ಒಂದು ಗಿಡವಿದ್ದರೆ ಎಷ್ಟು ಚೆಂದ ಅಲ್ಲವೇ? ನಮ್ಮ ತೋಟದಲ್ಲಿ ನಾಟಿ ನುಗ್ಗೆ ಮತ್ತು ಭಾಗ್ಯ ತಳಿಗಳಿವೆ. ಬೇರೆ ಯಾವ ಸೊಪ್ಪು ತರಕಾರಿ ಇಲ್ಲದಿದ್ದರೂ ನುಗ್ಗೆ ಸೊಪ್ಪು ವರ್ಷಪೂರ್ತಿ ಸಿಗುತ್ತದೆ. ಇದರಲ್ಲಿ ವಿಟಮಿನ್ A C E K ಮತ್ತು ಕಬ್ಬಿಣ, ಸುಣ್ಣದ ಅಂಶಗಳು ಹೇರಳವಾಗಿರುತ್ತದೆ. ಸಸ್ಯಜನ್ಯವಾಗಿ ಹೆಚ್ಚು ಪ್ರೋಟೀನ್ ಬೇಕೆಂದರೆ ಅದು ನುಗ್ಗೆ ಸೊಪ್ಪಿನಲ್ಲಿ ಸಾಧ್ಯ. ಇದರ ಜೊತೆ ಅನೇಕ ಬಗೆಯ ಜೀವಸತ್ವಗಳು ನುಗ್ಗೆ ಸೊಪ್ಪಿನಲ್ಲಿರುವ ಕಾರಣ ಧಾರಾಳವಾಗಿ ಬಳಸಬಹುದು. ನುಗ್ಗೆ ಸೊಪ್ಪು ಬೇಗನೆ ಕರಗದ ಕಾರಣ ಕೆಲವರಿಗೆ ಅಜೀರ್ಣವಾಗಬಹುದು. ಹಾಗಾಗಿ ಜೀರ್ಣ ಶಕ್ತಿ ಕಡಿಮೆ ಇರುವವರು ಕಡಿಮೆ ಬಳಸಿದರೆ ಸೂಕ್ತ. ನೀವು ಹಿತಮಿತವಾಗಿ ಬಳಸುತ್ತೀರಲ್ಲವೇ? ನಿಮ್ಮ ಮನೆಯಂಗಳದಲ್ಲಿ ನುಗ್ಗೆ ಇರದಿದ್ದರೆ ಈ ಮಳೆಗಾಲದಲ್ಲಿ ಖಂಡಿತವಾಗಿ ಒಂದೆರಡು ಕಡ್ಡಿಗಳು ಅಥವಾ ಬೀಜಗಳನ್ನು ಬಿತ್ತಿ ನುಗ್ಗೆ ಮರ ಬೆಳೆಸುತ್ತೀರೆಂದು ಆಶಿಸುವೆ- ಸುಧಾ ಸಂದೀಪ್ ಎಂ.ಎಸ್ಸಿ ಕೃಷಿ S4 Naturals ಹುಣಸೂರು.

ಬಿಳಿ ಮಂದಾರ ಪುಷ್ಪ. ಸುಂದರವಾದ ಹೂವುಗಳು ನೋಡಲು ಚೆಂದ. ಎಲೆಗಳು ಉತ್ತಮ ಮೇವು.
27/05/2026

ಬಿಳಿ ಮಂದಾರ ಪುಷ್ಪ. ಸುಂದರವಾದ ಹೂವುಗಳು ನೋಡಲು ಚೆಂದ. ಎಲೆಗಳು ಉತ್ತಮ ಮೇವು.

ನಂಬಿಕೆಯೋ ಮೂಢ ನಂಬಿಕಿಯೋ ತಿಳಿಯದು. ಒಟ್ಟಿನಲ್ಲಿ ಒಂದಷ್ಟು ಒಳ್ಳೆಯ ಕೆಲಸವಾಗಿರುವುದು ಸತ್ಯ. ಆಂಧ್ರದಿಂದ ನಮ್ಮ ರಾಜ್ಯಕ್ಕೆ ಆಗಮಿಸುವ ಬಹುತೇಕ ಲಾ...
27/05/2026

ನಂಬಿಕೆಯೋ ಮೂಢ ನಂಬಿಕಿಯೋ ತಿಳಿಯದು. ಒಟ್ಟಿನಲ್ಲಿ ಒಂದಷ್ಟು ಒಳ್ಳೆಯ ಕೆಲಸವಾಗಿರುವುದು ಸತ್ಯ. ಆಂಧ್ರದಿಂದ ನಮ್ಮ ರಾಜ್ಯಕ್ಕೆ ಆಗಮಿಸುವ ಬಹುತೇಕ ಲಾರಿಗಳ ಮುಂಭಾಗದಲ್ಲಿ ಈ ರೀತಿ ಲೋಳೆಸರ ಗಿಡವನ್ನು ಸಣ್ಣ ಬಾಟಲಿಯಲ್ಲಿ ಇಟ್ಟು ಬೆಳೆಸಿರುತ್ತಾರೆ. ಇದು ಅದೃಷ್ಠದ ಸಂಕೇತ ಶುಭ ಸಂಕೇತ ಎಂದೆಲ್ಲಾ ಚಾಲಕರು ಹೇಳಿರುವುದನ್ನು ನಾನು ಕೇಳಿದ್ದೇನೆ. ಒಟ್ಟಿನಲ್ಲಿ ಅವರವರ ನಂಬಿಕೆ ಅವರರವರಿಗೆ. ಏನೋ ಆದರೂ ಇದೊಂದು ಉತ್ತಮ ಬೆಳವಣಿಗೆ. ವಾಹನದಲ್ಲೂ ಈ ರೀತಿ ಗಿಡ ಬೆಳೆಸಬಹುದು ಎಂದು ನೋಡಿ ಸಂತಸವಾಯಿತು.

ತಾನು ನೆಟ್ಟು ಬೆಳೆಸಿದ ಗಿಡದಿಂದ ಕಾಯಿ ಹಣ್ಣು ಕಟಾವು ಮಾಡುವುದೇ ಒಂದು ಸೊಗಸು. ಕೆಲದಿನಗಳ ಹಿಂದೆ ಮಕ್ಕಳೇ ಬಿತ್ತೆನೆ ಮಾಡಿದ ಧಾರವಾಡದ ನಾಟಿ ಸೌತೆ...
27/05/2026

ತಾನು ನೆಟ್ಟು ಬೆಳೆಸಿದ ಗಿಡದಿಂದ ಕಾಯಿ ಹಣ್ಣು ಕಟಾವು ಮಾಡುವುದೇ ಒಂದು ಸೊಗಸು. ಕೆಲದಿನಗಳ ಹಿಂದೆ ಮಕ್ಕಳೇ ಬಿತ್ತೆನೆ ಮಾಡಿದ ಧಾರವಾಡದ ನಾಟಿ ಸೌತೆ ಬಳ್ಳಿಯಲ್ಲಿ ಈಗ ಫಲ ಬರುತ್ತಿದೆ. ಸುಪದ ತಾನೇ ನೆಟ್ಟು ಬೆಳೆಸಿದ ಗಿಡದಿಂದ ಕಾಯಿ ಕೊಯ್ದು ಸಂಭ್ರಮಿಸಿದಳು.

ಬಿಜಾಪುರ ಜೆಲ್ಲೆಯ ಹೊನವಾಡ ಗ್ರಾಮದ ಶ್ರೀ ಬಸಂತ ರಾಯ ಮಸಲಿ ಅವರು ರಾಸಾಯನಿಕ ಮುಕ್ತವಾಗಿ ದ್ರಾಕ್ಷಿ (Thomson seedless ) ಬೆಳೆದಿರುವುದು ನಿಮಗೆ...
26/05/2026

ಬಿಜಾಪುರ ಜೆಲ್ಲೆಯ ಹೊನವಾಡ ಗ್ರಾಮದ ಶ್ರೀ ಬಸಂತ ರಾಯ ಮಸಲಿ ಅವರು ರಾಸಾಯನಿಕ ಮುಕ್ತವಾಗಿ ದ್ರಾಕ್ಷಿ (Thomson seedless ) ಬೆಳೆದಿರುವುದು ನಿಮಗೆ ತಿಳಿದಿದೆ. ಹಸಿ ದ್ರಾಕ್ಷಿಯನ್ನು ಈಗಾಗಲೇ ನೂರಾರು ಗ್ರಾಹಕರು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ “ಒಣ ದ್ರಾಕ್ಷಿ” ಮಾರಾಟಕ್ಕೆ ಸಿದ್ದವಾಗಿದ್ದು ಆಸಕ್ತರು ನೇರವಾಗಿ ರೈತ ಬಸಂತ ರಾಯರನ್ನು ಸಂಪರ್ಕಿಸಿ 8310179849 ಖರೀದಿಸಬಹುದು

Address

S4 Naturals. Opposite Hunsur Plywood Factory BM Road Hunsur
Hunsur
571105

Alerts

Be the first to know and let us send you an email when Sudha & Sandeep Manjunath posts news and promotions. Your email address will not be used for any other purpose, and you can unsubscribe at any time.

Contact The Business

Send a message to Sudha & Sandeep Manjunath:

Share