VISMAYA24x7

VISMAYA24x7 VISMAYA 24x7 is a leading Kannada news portal and television channel in Karnataka, India

12/12/2025

ಬಿಜೆಪಿ ಶಿಕ್ಷಣ ಪ್ರಕೋಷ್ಟದ ರಾಜ್ಯ ಸಮೀತಿ ಸದಸ್ಯರಿಂದ ಕುಮಟಾದಲ್ಲಿ ಸುದ್ದಿಗೋಷ್ಠಿ
ನೋಂದಣಿ ಕುರಿತು ಮಾಹಿತಿ
ರಾಜ್ಯ ಸರ್ಕಾರದ ವಿರುದ್ಧ ಆರೋಪ

12/12/2025

ಬೆಳಗಾವಿ ಸುವರ್ಣಸೌಧದ ಎದುರು ಕೇಣಿ ವಾಣಿಜ್ಯ ಬಂದರು ವಿರೋಧಿ ಪ್ರತಿಭಟನೆ
ಸ್ಥಳೀಯರ ಜನಜೀವನದ ಮೇಲಾಗುವ ಸಮಸ್ಯೆಗಳ ಕುರಿತಂತೆ ಮನವರಿಕೆ
ಉಗ್ರ ಹೋರಾಟದ ಎಚ್ಚರಿಕೆ

12/12/2025

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಗೆ ತಡೆ
ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಪರಿಶೀಲನಾ ಅಭಿಯಾನ
ಕಾನೂನು ಕುರಿತು ಅರಿವು ಮೂಡಿಸುವ ಪ್ರಯತ್ನ

12/12/2025

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಕುಮಟಾ ತಾಲೂಕಿನ ಮಿರ್ಜಾನ್ ವಲಯದ ದೀವಗಿಯ ಡಿಜೆವಿಎಸ್ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಮೂರು ತಿಂಗಳ ಉಚಿತ ಟ್ಯೂಷನ್ ಕ್ಲಾಸ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದ ಹೇಮಂತ ಕುಮಾರ್ ಗಾಂವ್ಕರ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಪ್ರಗತಿಪರ ಕೆಲಸವನ್ನು ಮಾಡುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಭಾಸ್ಕರ ಜಿ ಭಟ್ ವಹಿಸಿದ್ದರು. ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ವೀಣಾ ದಿನೇಶ್, ದೀವಗಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶ್ಯಾಮಲ ಅಂಬಿಗ ಹಾಗೂ ಶಿಕ್ಷಕ ವೃಂದ ಮತ್ತು ಮುದ್ದು ಮಕ್ಕಳು ಉಪಸ್ಥಿತರಿದ್ದರು.

12/12/2025

ಮಿರ್ಜಾನಿನ ಕೋಟೆ ಕ್ರಾಸ್ ಬಳಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ಇದರಿಂದ ಕೆಲವರು ಮಾರಣಾಂತಿಕವಾಗಿ ಗಾಯವಾಗಿ, ಕೆಲವೊಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕೋಟೆ ಕ್ರಾಸ್ ಬಳಿ ಬ್ಯಾರಿಕೇಡ್ ನಿರ್ಮಾಣ ಮಾಡಲು ಕುಮಟಾ ತಾಲ್ಲೂಕ ಕರ್ನಾಟಕ ರಣಧೀರ ವೇದಿಕೆ ಅಧ್ಯಕ್ಷರಾದ ಸಮೀರ ಎಮ್. ಮಿರ್ಜಾನಕರ ಅವರು ಪೋಲಿಸ್ ವರಿಷ್ಠಾಧಿಕಾರಿಗಳಲ್ಲಿ ದೂರವಾಣಿ ಮೂಲಕ ಮನವಿ ಮಾಡಿದಾಗ ಅವರು ತಕ್ಷಣ ಅದಕ್ಕೆ ಸ್ಪಂದಿಸಿ ಕುಮಟಾ ಪೋಲಿಸ್ ಠಾಣೆಯ ಪಿಎಸ್‌ಐ ರವಿ ಗುಡ್ಡಿ ಅವರ ಮಾರ್ಗದರ್ಶನದಲ್ಲಿ ಐಆರ್‌ಬಿಯ ಸಹಕಾರದೊಂದಿಗೆ ತಾತ್ಕಾಲಿಕ ಬ್ಯಾರಿಕೇಡ್ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೇ ಮುಂದಿನ ದಿನದಲ್ಲಿ ಶಾಶ್ವತವಾಗಿ ಬ್ಯಾರಿಕೇಡ್ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

12/12/2025

ರವೀಂದ್ರ ನಗರದ ಅಭಿವೃದ್ಧಿಯ ದೃಷ್ಟಿಯಿಂದಾಗಿ ರವೀಂದ್ರ ನಗರ ಹಿತರಕ್ಷಣ ಸಮಿತಿ ರಚನೆ ಮಾಡಿದ್ದು ಡಿಸೆಂಬರ್ 13ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಬಾಲ ಭವನದಲ್ಲಿ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ರವೀಂದ್ರ ನಗರ ಹಿತರಕ್ಷಣ ಸಮಿತಿ ಅಧ್ಯಕ್ಷ ರೋಹಿದಾಸ್ ಅಂಬಿಗ ತಿಳಿಸಿದರು. ಅವರು ಪಟ್ಟಣದ ಗಂಗಾAಬಿಕ ದೇವಾಲಯದ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸಿರ್ಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಉದ್ಘಾಟಿಸಲಿದ್ದಾರೆ ಎಂದರು,.

12/12/2025

ಬೈಕ್ ಸವಾರರಿಗೆ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿದ ಘಟನೆ ಕುಮಟಾ ತಾಲೂಕಿನ ಹಿರೇಗುತ್ತಿಯ ಸ್ಮಶಾನದ ಹತ್ತಿರ ನಡೆದಿದೆ. ಚಿರತೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ವಿವಿಧ ಸಮುದಾಯಕ್ಕೆ ಸೇರಿದ ವಿಶಾಲವಾದ ಸ್ಮಶಾನವು ಅರಣ್ಯದ ಅಂಚಿನಲ್ಲಿದೆ. ಹಾಗೇ ಸರಕಾರ ನೀಡಿದ ಜಾಗದಲ್ಲಿ ಹಲವಾರು ಮನೆಗಳು ನಿರ್ಮಾಣಗೊಂಡಿದ್ದು, ಅವರು ಇದೇ ರಸ್ತೆಯ ಮೂಲಕ ಸಂಚರಿಸಬೇಕಾಗಿದೆ. ರಾತ್ರಿ ವೇಳೆ ಬೈಕ್‌ನಲ್ಲಿ ಈ ರಸ್ತೆಯ ಮೂಲಕ ಬರುತ್ತಿರುವಾಗ ಸ್ಥಳೀಯರಿಗೆ ಚಿರತೆಯೊಂದು ಕಂಡುಬಂದಿದ್ದು, ಇದರಿಂದ ಗಾಬರಿಗೊಂಡು ವೇಗವಾಗಿ ವಾಹನ ಚಲಾಯಿಸಿದ್ದಾರೆ. ಹೀಗಾಗಿ ಸಂಜೆಯಾಗುತ್ತಿದ್ಂತೆಯೇ ಈ ಭಾಗದವರು ಸಂಚರಿಸಲು ಭಯಗೊಳ್ಳುವಂತಾಗಿದೆ. ಕುರುಚಲು ಗಿಡಗಳೇ ತುಂಬಿರುವ ಈ ಬೆಟ್ಟದಲ್ಲಿ ಬೆಳಗಿನ ಸಮಯದಲ್ಲಿಯೂ ಜನರು ತೆರಳಲು ಭಯಪಡುವಂತಾಗಿದೆ. ಹಿರೇಗುತ್ತಿ ವಲಯ ಅರಣ್ಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಬೋನ್ ಮೂಲಕ ಚಿರತೆಯನ್ನು ಸೆರೆ ಹಿಡಿದು ಇಲ್ಲಿಯ ಜನರ ಆತಂಕವನ್ನು ದೂರ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

12/12/2025

ಶಾಸಕರಾದ ದಿನಕರ್ ಶೆಟ್ಟಿ ಅವರು ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರುದ್ಧ ಮತ್ತೊಮ್ಮೆ ಬೆಳಗಾವಿ ತಿಳಿಗಾಲದ ಅಧಿವೇಶನದಲ್ಲಿ ದ್ವನಿ ಎತ್ತಿದರು .ಹಾಗೆಯೇ ಈ ಯೋಜನೆ ಮಾಡೇ ಮಾಡುವೆ ಎಂದು ಪಣತೊಟ್ಟರೆ ನಮ್ಮ ಜಿಲ್ಲೆಯ ಜನ ಸಾವಿಗೂ ತಯಾರಾಗಿದ್ದೇವೆ . ಹಾಗೂ ನಮ್ಮ ಹೆಣದ ಮೇಲೆ ಯೋಜನೆಯನ್ನು ಮಾಡಬೇಕಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

12/12/2025

ಹೆರಿಗೆಗಾಗಿ ದಾಖಲಾಗಿದ್ದ ಗರ್ಭಿಣಿ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ವೇಳೆ ಸಾವು
ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಮೃತಳ ಕುಟುಂಬಸ್ಥರ ಆಕ್ರೋಶ
ಸಾರ್ವಜನಿಕರ ಆರೋಪ ಏನು?

12/12/2025

ಅಪ್ಪ ಅಲ್ಲ, ರಾಕ್ಷಸ ! ಮಗನಿಗೆ ಚಿತ್ರಹಿಂಸೆ

11/12/2025

ಶಿರಸಿ ನಗರದ ಹುಬ್ಬಳ್ಳಿ ರಸ್ತೆ ಬಸ್ ಡಿಪೋ ಎದುರು ಕಾರು ಮತ್ತು ಓಮಿನಿ ನಡುವೆ ಅಪಘಾತ

11/12/2025

ಕೈಗಾದಲ್ಲಿ ಅಣುವಿದ್ಯುತ್ ಸ್ಥಾವರ ಇರುವುದರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನವದೆಹಲಿ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾರವಾರ ವತಿಯಿಂದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಿಲ್ಲೆಯು ಯಾವ ರೀತಿ ಸನ್ನದ್ಧವಾಗಿದೆ ಎಂಬುದರ ಬಗ್ಗೆ ಅಣಕು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು

Address

#1019/1a, Postal Colony, Post, Heravatta
Kumta
581332

Alerts

Be the first to know and let us send you an email when VISMAYA24x7 posts news and promotions. Your email address will not be used for any other purpose, and you can unsubscribe at any time.

Contact The Business

Send a message to VISMAYA24x7:

Share