VISMAYA24x7

VISMAYA24x7 VISMAYA 24x7 is a leading Kannada news portal and television channel in Karnataka, India

ಗೋವಾದ ಬೇತುಲ್ ಸಮುದ್ರ ವ್ಯಾಪ್ತಿಯಲ್ಲಿ ಆಳಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದ ಕಾರವಾರ ಮೂಲದ ಪರ್ಶಿಯನ್ ಬೋಟ್ ಆಕಸ್ಮಿಕವಾಗಿ ಮುಳುಗಡೆಯಾಗಿದ್ದ...
12/05/2026

ಗೋವಾದ ಬೇತುಲ್ ಸಮುದ್ರ ವ್ಯಾಪ್ತಿಯಲ್ಲಿ ಆಳಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದ ಕಾರವಾರ ಮೂಲದ ಪರ್ಶಿಯನ್ ಬೋಟ್ ಆಕಸ್ಮಿಕವಾಗಿ ಮುಳುಗಡೆಯಾಗಿದ್ದು, ಅದರಲ್ಲಿದ್ದ 22 ಮೀನುಗಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಕಾರವಾರ ತಾಲೂಕಿನ ಮುದಗಾದ 'ಶ್ರೀ ಅಮ್ಮ' ಹೆಸರಿನ ಬೋಟ್ ಬಂದರಿನಿoದ ಸುಮಾರು ಒಂದು ವಾರದ ಹಿಂದೆ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಗಳ ರಭಸಕ್ಕೆ ಸಿಕ್ಕು ಮುಳುಗಡೆಯಾಗಿದೆ. ಈ ವೇಳೆ ಸಮೀಪದಲ್ಲಿದ್ದ ಇತರ ಬೋಟ್‌ಗಳ ಮೀನುಗಾರರು ಕೂಡಲೇ ತೆರಳಿ 22 ಮೀನುಗಾರರ ರಕ್ಷಣೆ ಮಾಡಿದ್ದಾರೆ.

12/05/2026

ಶಾoತಿಕಾ ಪರಮೇಶ್ವರಿ ದೇವಿ ಸಾಣಿ ಅಮ್ಮ ದೇವಸ್ಥಾನದ ಅಮೃತ ಮಹೋತ್ಸವ

ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕ ದುರ್ಮರಣ :  ಬಡ ಕುಟುಂಬದ ಆಕ್ರಂದನ ಅಂಕೋಲಾ: ತಾಲೂಕಿನ ಬಾವಿಕೇರಿಯಲ್ಲಿ ತೆಂಗಿನ ಮರ ಹತ್ತಿ ತೆಂಗಿನಕಾಯಿ...
12/05/2026

ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕ ದುರ್ಮರಣ : ಬಡ ಕುಟುಂಬದ ಆಕ್ರಂದನ

ಅಂಕೋಲಾ: ತಾಲೂಕಿನ ಬಾವಿಕೇರಿಯಲ್ಲಿ ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೊಯ್ಯುತ್ತಿದ್ದ ಕೂಲಿ ಕಾರ್ಮಿಕನೋರ್ವ ಆಕಸ್ಮಿಕವಾಗಿ ಮರದಿಂದ ಬಿದ್ದು ಮೃತಪಟ್ಟ ದುರ್ಘಟನೆ ನಡೆದಿದೆ. ಅವರ್ಸಾ ಸಕಲಬೇಣ ನಿವಾಸಿ ಸೂರ್ಯಕಾಂತ ದಾಮೋದರ ಗೌಡ(43) ಮೃತ ದುರ್ದೈವಿ. ಕಟ್ಟಡ ಕಾರ್ಮಿಕ ಹಾಗೂ ತೆಂಗಿನಕಾಯಿ ಕೊಯ್ಯುವ ಕೆಲಸ ಮಾಡುತ್ತಿದ್ದ ಅವರು, ಬಾವಿಕೇರಿಯ ವ್ಯಕ್ತಿಯೋರ್ವರ ತೆಂಗಿನ ತೋಟದಲ್ಲಿ ತೆಂಗಿನ ಕಾಯಿ ಕೊಯ್ಲು ಮಾಡಲು ಬಂದಿದ್ದರು. ಮನೆಯ ಮುಂಬದಿ ಹಾಗೂ ಅಕ್ಕ ಪಕ್ಕದ ಸುಮಾರು ಹತ್ತಕ್ಕೂ ಹೆಚ್ಚು ಮರಗಳನ್ನು ಏರಿ ಕಾಯಿ ಕೊಯ್ಲು ಮಾಡಿ ಮುಗಿಸಿದ್ದ ಅವರು,ಬೇರೊಂದು ಮರ ಹತ್ತಿ ಕಾಯಿ ಕೊಯ್ಲು ಮುಂದುವರಿಸಲು ಹೋದಾಗ ಈ ಆಕಸ್ಮಿಕ ಅವಘಡ ಸಂಭವಿಸಿದೆ. ಮರ ಹತ್ತುವ ವೇಳೆ ಕಾಲಿನ ಹಿಡುಪಿಗೆ ಬಳಸುವ ಸಾಧನದ ಪಟ್ಟಿ ತುಂಡಾಗಿದ್ದ ರಿಂದಲೋ ಇಲ್ಲವೇ ಅದಾವುದೋ ಕಾರಣದಿಂದ ಆಯತಪ್ಪಿ ಕೆಳಗೆ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವೇಳೆ ದುರದೃಷ್ಟ ಎನ್ನುವಂತೆ ಮರದ ಅಂಚಿಗೆ ಇದ್ದ ಕಾಂಪೌಂಡ್ ಗೋಡೆಗೆ ಅವರ ಮುಖ ಮತ್ತಿತರ ಭಾಗಗಳಿಗೆ ಜಜ್ಜಿಕೊಂಡು,ಗಂಭೀರ ಗಾಯ ನೋವು ಆಗಿರುವ ಸಾಧ್ಯತೆ ಇದೆ.ಘಟನಾ ಸ್ಥಳದಲ್ಲಿ ಅದೇ ಗಿಡದ ತೆಂಗಿನ ಗರಿ ಒಂದು ಸಹ ತುಂಡಾಗಿ ಬಿದ್ದಂತಿದ್ದು, ಈ ಆಕಸ್ಮಿಕ ಅವಘಡದ ಸಾಕ್ಷಿ ಹೇಳುವಂತಿದೆ.

11/05/2026

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಂದಿಗವಾಡದ ಜ್ಞಾನಜ್ಯೋತಿ ಪಬ್ಲಿಕ್ ಸ್ಕೂಲ್ ನಲ್ಲಿ ವಿವಿಧ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಪೂರ್ವ ಪ್ರಾಥಮಿಕ ಶಿಕ್ಷಕರ ಒಟ್ಟು 6 ಹುದ್ದೆಗಳು ಖಾಲಿ ಇದ್ದು, ಇವುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಕರಾವಳಿ ಭಾಗದ ಶಿಕ್ಷಕರಿಗೆ ಮೊದಲ ಪ್ರಾಶಸ್ತö್ಯ ನೀಡಲಾಗಿದೆ. ಯಾವುದೇ ಪದವಿ, ಬಿ.ಎಡ್, ಡಿ.ಎಡ್. ಎನ್.ಟಿ.ಸಿ. ಆದವರು ಅರ್ಜಿ ಸಲ್ಲಿಸಬಹುದು. ಆಕರ್ಷಕ ವೇತನ, ಉಚಿತ ಊಟ & ವಸತಿ ಸೌಲಭ್ಯವಿದೆ . ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೆಟಾವನ್ನು ಈ ನಂಬರಿಗೆ ವಾಟ್ಸಪ್ ಮೂಲಕ ಕಳಿಸಲು ಅಥವಾ ಸಂಪರ್ಕಿಸಲು ಕೋರಲಾಗಿದೆ.

11/05/2026

ರಾಜ್ಯ ಸರಕಾರವು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿದ್ದು, ರಾಜ್ಯಾದ್ಯಂತ ಒಟ್ಟು 293 ಪೊಲೀಸ್ ಇನ್ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದರ ಅಂಗವಾಗಿ ಶಿರಸಿ ವೃತ್ತ ನಿರೀಕ್ಷಕರಾಗಿ ಸಂಪತ್ ಕುಮಾರ ಅವರನ್ನು ನೂತನವಾಗಿ ನೇಮಕ ಮಾಡಲಾಗಿದೆ ಹಾಗೂ ನಿರ್ಗಮಿತ ಸಿ.ಪಿ.ಐ ಶಶಿಕಾಂತ್ ಬಿ. ವರ್ಮಾ ಅವರನ್ನು ಬೆಳಗಾವಿಗೆ ವರ್ಗಾಯಿಸಲಾಗಿದೆ. ಕಳೆದ 2 ವರ್ಷಗಳಿಂದ ಶಿರಸಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದ ಸಿ.ಪಿ.ಐ. ಶಶಿಕಾಂತ ಬಿ. ವರ್ಮಾ ಅವರನ್ನು ಬೆಳಗಾವಿ ನಗರದ ತಿಲಕವಾಡಿ ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಶಶಿಕಾಂತ ವರ್ಮಾ ಅವರ ತೆರವಾದ ಜಾಗಕ್ಕೆ ನೂತನ ಸಿ.ಪಿ.ಐ. ಆಗಿ ಸಂಪತ್ ಕುಮಾರ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರು ಈ ಹಿಂದೆ ಕುಮಟಾ,ಅಂಕೋಲಾ ಸೇರಿದಂತೆ ಜಿಲ್ಲೆಯ ಹಲವೆಡೆ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

11/05/2026

ಎoಜಿಸಿ ಕಾಲೇಜ್ ಸಮೀಪ ರಸ್ತೆ ಅಪಘಾತ
ಆಂಬ್ಯುಲೆನ್ಸ್ಗಾಗಿ ಕಾಯದೆ ಶಾಸಕರ ಸಮಯ ಪ್ರಜ್ಞೆ
ಮಾನವೀಯತೆ ಮೆರೆದ ಭೀಮಣ್ಣ ನಾಯ್ಕ ಕಾರ್ಯಕ್ಕೆ ಮೆಚ್ಚುಗೆ

11/05/2026

ಶಿರಸಿ ನಗರದ ಮಾರಿಕಾಂಬ ಸ್ಟೇಡಿಯಂ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಶಿರಸಿಯ ಎಂಇಎಸ್ ಕಾಲೇಜು ಪಕ್ಕದ ತಿರುವಿನಲ್ಲಿ ಈ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಕಾರು ತಿರುವಿನಲ್ಲಿ ನಿಯಂತ್ರಣ ಸಿಗದೇ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಜೋರಾಗಿ ಅಪ್ಪಳಿಸಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊAಡಿದೆ. ಅದೃಷ್ಟವಶಾತ್ ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದ್ದು, ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬರಬೇಕಿದೆ.

11/05/2026

ಶಿರಸಿ-ಹಾವೇರಿ ಹೆದ್ದಾರಿ ಕಾಮಗಾರಿಯ ಅತಿಯಾದ ವಿಳಂಬದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಶಿರಸಿಯ ಹೆಸರಾಂತ ವೈದ್ಯರಾದ ಡಾ. ರವಿಕಿರಣ ಪಟವರ್ಧನ ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ದೂರಿಗೆ ಕೊನೆಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿಕ್ರಿಯಿಸಿದ್ದು, ಯೋಜನೆಯ ಸ್ಥಿತಿಗತಿ ಹಾಗೂ ಪೂರ್ಣಗೊಳ್ಳುವ ಕಾಲಮಿತಿಯ ಬಗ್ಗೆ ಸ್ಪಷ್ಟನೆ ನೀಡಿದೆ.

11/05/2026

ಗುಡ್ಡಕ್ಕೆ ಗುದ್ದಿದ ಮದುವೆ ಬಸ್
ತಪ್ಪಿತು ಸಂಭಾವ್ಯ ಅನಾಹುತ
ಯಲ್ಲಾಪುರ ರಾಷ್ಟಿçÃಯ ಹೆದ್ದಾರಿಯಲ್ಲಿ ಘಟನೆ

11/05/2026

ಕಾರವಾರ ನಗರದ ಬಿಎಸ್‌ಎನ್‌ಎಲ್ ಕಚೇರಿಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಸುಮಾರು 28 ಸಾವಿರ ರೂ. ಮೌಲ್ಯದ ಎರಡು ಬ್ಯಾಟರಿಗಳನ್ನು ಕಳವು ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೇ 1ರ ಸಂಜೆ 7ರಿಂದ ಮೇ 2ರ ಬೆಳಿಗ್ಗೆ 10 ಗಂಟೆ ನಡುವೆ ಕಳ್ಳತನ ನಡೆದಿದ್ದು, ಬಾಗಿಲಿನ ಕೊಂಡಿ ಮುರಿದು ಒಳಬಂದ ಕಳ್ಳರು, ಅಲ್ಲಿ ಇರಿಸಲಾಗಿದ್ದ 'ಎಕ್ಸೆಡ್' ಕಂಪನಿಯ ಎರಡು ಬ್ಯಾಟರಿಗಳನ್ನು ಹೊತ್ತೊಯ್ದಿದ್ದಾರೆ. ಕಚೇರಿಯ ಕಿರಿಯ ದೂರ ಸಂಪರ್ಕ ಅಧಿಕಾರಿ ವಿನಾಯಕ ಲಕ್ಷ್ಮಣ ನಾಯಕ ಈ ಕುರಿತು ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

11/05/2026

ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕನ ದುರ್ಮರಣ
ಅಂಕೋಲಾ ತಾಲೂಕಿನ ಬಾವಿಕೇರಿಯಲ್ಲಿ ಘಟನೆ
ಆಸರೆಯಾಗಿದ್ದವನನ್ನು ಕಳೆದೊಂಡ ಕುಟುಂಬದವರ ಆಕ್ರಂದನ

Address

#1019/1a, Postal Colony, Post, Heravatta
Kumta
581332

Alerts

Be the first to know and let us send you an email when VISMAYA24x7 posts news and promotions. Your email address will not be used for any other purpose, and you can unsubscribe at any time.

Contact The Business

Send a message to VISMAYA24x7:

Share