Canara Plus Channel

Canara Plus Channel ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ವಾಹಿನಿ

25/06/2025

25-6-25 ಅರಣ್ಯ ಹಕ್ಕುಗಳನ್ನು ನಿರ್ವಹಿಸುವ ವಿಧಾನದಲ್ಲಿ ಬದಲಾವಣೆಯನ್ನ ಸೂಚಿಸಿ, ಪರಿಶಿಷ್ಟ ಪಂಗಡಗಳ ಮತ್ತು ಅರಣ್ಯವಾಸಿಗಳ ಹಕ್ಕುಗಳನ್ನ ಗುರುತಿಸಲು ಮತ್ತು ಸಬಲೀಕರಣಗೊಳಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರಕ್ಕೆ ಮಾನದಂಡ ನಿಗಧಿಗೊಳಿಸಿ “ದಾಜ್ಗುವಾ” ಪ್ರಕ್ರಿಯ ಯೋಜನೆ ಜಾರಿಗೆ ತಂದಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

25/06/2025

25-6-25 ಕಾರ್ಮಿಕ ಕಾನೂನುಗಳಲ್ಲಿ ಬಂಡವಾಳಗಾರರ ಪರ ತಿದ್ದುಪಡಿಗಳನ್ನು ವಿರೋಧಿ ಸಿಐಟಿಯು ಜಿಲ್ಲಾ ಸಮಿತಿಯು ಬುಧವಾರ ಕಾರವಾರ ನಗರದ ಹಬ್ಬುವಾಡಾದ ಕಾರ್ಮಿಕ ಇಲಾಖೆ ಕಚೇರಿ ಬಳಿ ಪ್ರತಿಭಟನೆ ನಡೆಸಿತು.

25/06/2025

25-6-25 ಕುಮಟಾ ತಾಲೂಕಿನ ವನ್ನಳ್ಳಿ ಕಡಲತೀರದಲ್ಲಿ ಬೃಹತ್ ಗಾತ್ರದ, ಸುಮಾರು 13.5 ಅಡಿ ಉದ್ದದ ನೀಲಿ ತಿಮಿಂಗಲ ಕಳೇಬರ ಪತ್ತೆಯಾಗಿದ್ದು, 15 ದಿನಗಳ ಹಿಂದೆಯೇ ಬ್ಲ್ಯೂ ವೇಲ್ ಮೃತಪಟ್ಟಿರುವ ಶಂಕೆ ಇದೆ.

25/06/2025

25-6-25 ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಿಂದ ರಿಯಾಯಿತಿ ದರದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಮತ್ತು ಛತ್ರಿ ವಿತರಿಸಲಾಯಿತು

25/06/2025

25-6-25 ಮಾದಕ ವ್ಯಸನದಿಂದ ಉಂಟಾಗುವ ದುಷ್ಪ್ಪರಿಣಾಮಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ಸ್ವಯಂ ಪ್ರೇರಿತರಾಗಿ ಮಾದಕ ವಸ್ತುಗಳ ಸೇವನೆಯನ್ನು ವಿರೋಧಿಸುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಡಿವೈಎಸ್ಪಿ ಶಿವಾನಂದ ಮದರಕಂಡಿ ಅವರು ದಾಂಡೇಲಿಯಲ್ಲಿ ಕರೆ ನೀಡಿದರು.

25/06/2025

25-6-25 ತಾಲೂಕಿನ ಸದಾಶಿವಗಡದ ಶ್ರೀ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಲಿಂಗರಾಜು ಕಲ್ಗುಟ್ಕರ ಅವರು ಗ್ರಾಹಕರ ಹಣವನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಬುಧವಾರ ಸೊಸೈಟಿಯ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿದರು.

25/06/2025

25-6-25 ಅಂತರಾಷ್ಟ್ರೀಯ ಮಾದಕ ದ್ರವ್ಯ ಬಳಕೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಪ್ರಯುಕ್ತ ಕುಮಟಾ ಪಟ್ಟಣದ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜ್ ವಿದ್ಯಾರ್ಥಿಗಳು ಪಟ್ಟಣದಲ್ಲಿ ಜಾಗೃತಿ ಜಾಥ ನಡೆಸಿದರು.

25/06/2025

25-6-25 ಕುಮಟಾ ತಾಲೂಕಿನಲ್ಲಿ ಮಳೆ ಅಬ್ಬರ ಕಡಿಮೆಯಾದರೂ ಆಗಾಗಾ ಅಬ್ಬರಿಸುವ ಭಾರಿ ಗಾಳಿ ಮಳೆಯಿಂದ ಅವಘಡಗಳು ಮುಂದುವರೆದಿದ್ದು, ಕೆಲವೆಡೆ ಹಾನಿಯಾಗಿದೆ.

24/06/2025

24-6-25 ಕುಮಟಾ ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಗೋಕರ್ಣದ ಹನೇಹಳ್ಳಿಯ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದು ಹಾನಿಯಾಗಿದೆ.

24/06/2025

24-6-25 ಶಿರಸಿಯ ಯಲ್ಲಾಪುರ ನಾಕಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

24/06/2025

24-6-25 33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಡುಪಿ ಕಾರ್ಕಳ ಮೂಲದ ಆರೋಪಿಯನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

24/06/2025

24-6-25 ಕಾರಿನ ಹಿಂಬದಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಕಾರುಗಳು ನಜ್ಕುಗುಜ್ಜಾದ ಘಟನೆಯು ನಗರದ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.

Address

Old Fish Market Road
Kumta
581343

Alerts

Be the first to know and let us send you an email when Canara Plus Channel posts news and promotions. Your email address will not be used for any other purpose, and you can unsubscribe at any time.

Contact The Business

Send a message to Canara Plus Channel:

Share