Canara Plus Channel

Canara Plus Channel ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ವಾಹಿನಿ

10/05/2026

10-5-26 ಆರ್ ಎಸ್ ಎಸ್ ನ ಕುಮಟಾ ನಗರ ಸಂಘ ಚಾಲಕರಾದ ರಾಜು ಮಹಾಲೆ ಅವರು ಹೃದಯ ಸಂಬಂಧಿತ ಅನಾರೋಗ್ಯದಿಂದ ನಿಧನರಾದರು.

10/05/2026

10-5-26 ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸುವ ಬದಲೂ ನನಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮೊಬೈಲ್ ಬಳಸುತ್ತಿರುವ ಸುಳ್ಳು ಆರೋಪ ಹೊರಿಸಿ, ಅಕ್ರಮ ದಂಡ ವಸೂಲಿ ಮಾಡಿದ ಕುಮಟಾ ಪಿಎಸ್ಐ ಖಾದರ್ ಭಾಷಾ ವಿರುದ್ಧ ಯುವಕನೋರ್ವ ಎಸ್ಪಿಯವರಿಗೆ ದೂರು ಸಲ್ಲಿಸಿದ್ದಾರೆ.

10/05/2026

10-5-26 ಕುಮಟಾ ಪಟ್ಟಣದ ಹೆರವಟ್ಟಾದಲ್ಲಿ ದಕ್ಷಿಣಾಭಿಮುಖವಾಗಿ ನೆಲ್ಲೆಸಿರುವ ಶ್ರೀ ಸಾಣಿ ಅಮ್ಮ ದೇವಸ್ಥಾನದ ಅಮೃತ ಮಹೋತ್ಸವ ಸಂಭ್ರಮದ ನಿಮಿತ್ತ ಭಾನುವಾರ ನಡೆದ ಶ್ರೀ ದೇವಿಯ ನಗರೋತ್ಸವ ಗಮನ ಸೆಳೆಯಿತು.

10/05/2026

10-5-26 ಕಾರವಾರ ನಗರದ ಸಾಯಿಕಟ್ಟಾ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಸಾರ್ವಜನಿಕ ಸ್ಥಳದಲ್ಲೇ ಗಲಾಟೆ ನಡೆದ ಹಿನ್ನೆಲೆ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

10/05/2026

10-5-26 ಕಾರವಾರ ತಾಲೂಕಿನ ಶಿರವಾಡ ಜಾಂಬಾ ಕ್ರಾಸ್ ಸಮೀಪ ಇರುವ ಕಿರಾಣಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಶನಿವಾರ ನಡುರಾತ್ರಿ ನಡೆದಿದೆ.

10/05/2026

10-5-26 ಕುಮಟಾ ತಾಲೂಕಿನ ಕೂಜಳ್ಳಿ ಮತ್ತು ಮಲ್ಲಾಪುರ ಗಡಿಭಾಗದಲ್ಲಿ ನೆಲೆಸಿರುವ ಶ್ರೀ ಗಡಿ ಮಹಾಸತಿ ಮತ್ತು ಶ್ರೀ ನಾಗಯಕ್ಷೇ ದೇವರ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಮೇ. 13 ಮತ್ತು 14ರಂದು ವಿಜೃಂಭಣೆಯಿಂದ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.

09/05/2026

ವೃತ್ತಿಪರ ಹಿರಿಯ ನ್ಯಾಯವಾದಿಗಳ ಮೇಲೆ ನಡೆದ ಅಪಮಾನದವ ಘಟನೆಯನ್ನು ಜಿಲ್ಲಾ ವಕೀಲರ ಸಂಘವು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ

09/05/2026

ಡ್ರಗ್ಸ್ ಮಾರಾಟ, ಸಾಗಣೆ ಮತ್ತು ಸಂಗ್ರಹಣೆ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ದಾಂಡೇಲಿಯ ಡ್ರಗ್ ಪೆಡ್ಡರ್ ನನ್ನು ಬಂಧನದಲ್ಲಿಡಲು ಪೊಲೀಸ್ ಮಹಾನಿರೀಕ್ಷಕರು ಪಶ್ಚಿಮ ವಲಯ ಮಂಗಳೂರು ಅವರು ಆದೇಶಿಸಿದ ಹಿನ್ನಲೆಯಲ್ಲಿ ಈ ಡ್ರಗ್ ಪೆಡ್ಡರ್ ನನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ

09/05/2026

ಭಾರತೀಯ ಸೇನೆಯಲ್ಲಿ ಸುಧೀರ್ಘ 30 ವರ್ಷಗಳ ಕಾಲ ರ್ಯಾಂಕ್ ಸುಭೇದಾರ್ ಆಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿ ಕುಮಟಾಕ್ಕೆ ಆಗಮಿಸಿದ ನಾಗರಾಜ ಹೊಸಬಯ್ಯ ಗುನಗಾ ಅವರನ್ನು ಕುಮಟಾದ ನಾಗರಿಕರು ಅದ್ಧೂರಿಯಾಗಿ ಸ್ವಾಗತಿಸಿ, ಗೌರವಿಸಿದರು

09/05/2026

ಬೇಸಿಗೆಯ ಬಿರು ಬಿಸಿಲಿನ ತೀವ್ರತೆಗೆ ಹೈರಾಣರಾದ ಕುಮಟಾ ಜನರಿಗೆ ಶನಿವಾರ ಸಂಜೆ ಸುರಿದ ಮಳೆ ತಣ್ಣೆನೆಯ ಅನುಭೂತಿ ನೀಡಿದೆ

09/05/2026

ತನ್ನ ಮೇಲೆ ನಡೆದ ಕೊಲೆ ಯತ್ನ ಪ್ರಕರಣದ ದಿಕ್ಕು ಬದಲಿಸಲು ನಾಗರಾಜ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅಂಕೋಲಾ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಆರೋಪಿಸಿದರು

Address

Old Fish Market Road
Kumta
581343

Alerts

Be the first to know and let us send you an email when Canara Plus Channel posts news and promotions. Your email address will not be used for any other purpose, and you can unsubscribe at any time.

Contact The Business

Send a message to Canara Plus Channel:

Share