Canara Plus Channel

Canara Plus Channel ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ವಾಹಿನಿ

10/09/2026

10-9-26 ಜಿಲ್ಲೆಯ ಬಹುಸಂಖ್ಯಾತ ಒಕ್ಕಲಿಗ ಸಮಾಜಕ್ಕೆ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಕೆ.ಪಿ.ಸಿ.ಸಿ ಜಿಲ್ಲಾ ಸಂಯೋಜಕರಾದ ಭಾಸ್ಕರ ಪಟಗಾರರವರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಉತ್ತರಕನ್ನಡ ಜಿಲ್ಲೆಯ ಸಮಸ್ತ ಒಕ್ಕಲಿಗ ಸಮಾಜವು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರಿಗೆ ಮನವಿ ಸಲ್ಲಿಸಿ, ಆಗ್ರಹಿಸಿತು.

10/09/2026

10-9-26 ಮಹಿಳೆಯರು ಮನೆಯಲ್ಲಿ ತಾವು ಸಹ ಸಾಂಪ್ರದಾಯಿಕ ಮಲೆನಾಡು ಭಾಗದ ಕಜ್ಜಾಯಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ತರುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಬೇಕು ಎಂದು ತೋಟಗಾರರ ಕಲ್ಯಾಣ ಸಂಘ ಉಪಾಧ್ಯಕ್ಷ ಎಂ.ವಿ ಜೋಶಿ ಅಭಿಪ್ರಾಯ ಪಟ್ಟರು.

10/09/2026

10-9-26 ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಲು ಅವಕಾಶ ನೀಡದೇ ತಡೆಯೊಡ್ಡಿದ ದಾಂಡೇಲಿಯ ಬಂಗುರುನಗರ ಸರಕಾರಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರ ಅಧಿಕಾರ ದುರುಪಯೋಗದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬುಧವಾರ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಆರ್. ನಾಯ್ಕ ಅವರು ಹಳೆಯ ವಿದ್ಯಾರ್ಥಿಗಳು, ನಾಗರಿಕ ಪ್ರಮುಖರ ಜೊತೆ ಹಾಗೂ ಶಾಲಾ ಅಭಿವೃದ್ದಿ ಸಮಿತಿ ಮತ್ತು ಶಿಕ್ಷಕಿಯರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿ ನಡೆದಿರುವ ಘಟನೆಯ ಮಾಹಿತಿ ಪಡೆದರು.

10/09/2026

10-9-26 ಸಾಮಾನ್ಯನೂ ದೇಶದ ಆಡಳಿತದ ಗದ್ದುಗೆ ಏರಬಹುದು ಎಂಬುದನ್ನು ಸಮಸ್ತ ಕನ್ನಡಿಗರಿಗೆ ತಿಳಿಸುವ `ಕಾಮನ್ ಮ್ಯಾನ್ ನಾನೇ ಸಿ ಎಂ' ಚಲನಚಿತ್ರ ಸೆಪ್ಟೆಂಬರ್ 25 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಕದಂಬ ಸೈನ್ಯದ ರಾಜ್ಯಾಧ್ಯಕ್ಷರಾದ ಬೇಕರಿ ರಮೇಶ್ ತಿಳಿಸಿದರು.

10/09/2026

10-9-26 ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಕನಸು ಕಂಡು ಬಡವರು ದೀನ ದಲಿತರ ಧ್ವನಿಯಾಗಿ ದುಡಿದ ಮಹಾನ್ ವ್ಯಕ್ತಿತ್ವ ದಿನಕರ ದೇಸಾಯಿಯವರದು ಎಂದು ಹಿರಿಯ ಸಾಹಿತಿ ತಮ್ಮಣ್ಣ ಬೀಗಾರ ಹೇಳಿದರು.

10/09/2026

10-9-26 ಸಿದ್ದಾಪುರ ತಾಲೂಕಿನ ಕೋಲಸಿರ್ಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದಲ್ಲಿ ನಡೆದಿರುವ ಬರೋಬ್ಬರಿ 11 ಕೋಟಿ ರೂ.ಗೂ ಅಧಿಕ ಮೊತ್ತದ ಆರ್ಥಿಕ ಹಗರಣದ ಹಿನ್ನೆಲೆಯಲ್ಲಿ ಹಾಲಿ ನಿರ್ದೇಶಕ ಮಂಡಳಿಯನ್ನು ತಕ್ಷಣವೇ ವಜಾಗೊಳಿಸಿ, ಆಡಳಿತಾಧಿಕಾರಿ ನೇಮಕದ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸಂಘದ ಶೇರುದಾರರು ತೀವ್ರ ಆಕ್ರೋಶದೊಂದಿಗೆ ಒತ್ತಾಯಿಸಿದ್ದಾರೆ.

10/09/2026

10-9-26 ಬಿ.ನ್ಯೂಸ್ ಪತ್ರಿಕೆ ಮತ್ತು ವಾಹಿನಿ ಹಾಗೂ ಸಿರಿಗನ್ನಡ ಪೌಂಡೇಷನ್ ವತಿಯಿಂದ ನೀಡಲಾಗುವ ರಾಷ್ಟ್ರೀಯ ಶಿಕ್ಷಣ ತಜ್ಞ ಪ್ರಶಸ್ತಿಯನ್ನು ಕುಮಟಾ ಪಟ್ಟಣದ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಚಿತ್ರಕಲಾ ಶಿಕ್ಷಕ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಹೇಶ ಆಚಾರಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

10/09/2026

10-9-26 ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ದಾಂಡೇಲಿಯ ಉದ್ಯಮಿ ಪ್ರೇಮಾನಂದ ಗವಸ ಅವರು ಪರಿಸರ ಸಂರಕ್ಷಣೆ ನಮ್ಮ ಸಂಕಲ್ಪ ಎಂಬ ಆಶಯದಡಿ "ಮನೆಗೆರಡು ಗಿಡ" ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು, ಒಟ್ಟು 20,000 ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಅವರು ತಿಳಿಸಿದರು.

10/09/2026

10-9-26 ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ವಕೀಲ ಜಿ.ಟಿ. ನಾಯ್ಕ ಸಿದ್ದಾಪುರ ಅವರನ್ನು ಎಐಸಿಸಿ ನೇಮಕ ಮಾಡಿದೆ.

10/09/2026

10-9-26 ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರತಿದಿನ ಅರಣ್ಯಮಾರ್ಗದಲ್ಲಿ ಸುಮಾರು 5 ಕಿ.ಮೀ. ಸಂಚರಿಸಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸೇವೆಯನ್ನು ಗುರುತಿಸಿ ಕಾರವಾರ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ನಗೆ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನ ಸಮಾರಂಭ ಆಯೋಜಿಸಲಾಯಿತು.

Address

Old Fish Market Road
Kumta
581343

Alerts

Be the first to know and let us send you an email when Canara Plus Channel posts news and promotions. Your email address will not be used for any other purpose, and you can unsubscribe at any time.

Contact The Business

Send a message to Canara Plus Channel:

Shortcuts

Share