Canara Plus Channel

Canara Plus Channel ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ವಾಹಿನಿ

31/10/2025

31-10-25 ನವೆಂಬರ್ ತಿಂಗಳಲ್ಲಿ ಯಾವ ಕ್ರಾಂತಿಯೂ ಇಲ್ಲ ಬರಿ ಬ್ರಾಂತಿ ಎಂದು ಹಲವು ಬಾರಿ ಹೇಳಿದ್ದೇನೆ. ಮಾಧ್ಯಮದ ತಪ್ಪಲ್ಲ, ವಿಷಯವನ್ನು ತಪ್ಪಾಗಿ ಅರ್ಥೈಸಿಕೊಂಡು ದೊಡ್ಡದಾಗಿಸಲಾಗಿದೆ,” ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು.

31/10/2025

31-10-25 ಹಿಂದುಗಳ ಆಚರಣೆಯಲ್ಲಿ ದೋಷ ತೋರಿಸುವವರೇ ಎಡಪಂಥೀಯರು. ಉಳಿದವರು ಬಲಪಂಥೀಯರು ಎಂಬುದಲ್ಲ. ಅವರನ್ನು ಭಾರತೀಯರು ಎನ್ನಬಹುದು ಎಂದು ಖ್ಯಾತ ಲೇಖಕ ಹಾಗೂ ವಾಗ್ಮಿ ಡಾ. ಜಿ.ಬಿ ಹರೀಶ್ ಅಭಿಪ್ರಾಯಪಟ್ಟರು.

31/10/2025

31-10-25 ಕುಮಟಾ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಮತ್ತು ಪೊಲೀಸ್ ಇನ್ಸ್‍ಪೆಕ್ಟರ್ ಯೋಗೇಶ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕುಮಟಾ ವೈಭವ ರದ್ದುಗೊಳಿಸುವ ಮೂಲಕ 34 ಲಕ್ಷಕ್ಕೂ ಅಧಿಕ ನಷ್ಟಕ್ಕೆ ಕಾರಣಿಕರ್ತರಾಗಿದ್ದಾರೆ. ಆ ನಷ್ಟವನ್ನು ಅವರಿಬ್ಬರೇ ಭರಿಸಿಕೊಡಬೇಕೆಂದು ಕಾನೂನು ಹೋರಾಟ ಮಾಡುತ್ತೇವೆ ಎಂದು ತಾಂಡವ ಕಲಾನಿಕೇತನ ಸಂಸ್ಥೆಯ ಅಧ್ಯಕ್ಷ ಮಂಜುನಾಥ ನಾಯ್ಕ ಮಿರ್ಜಾನ್ ಹೇಳಿದರು

31/10/2025

31-10-25 ದಾಂಡೇಲಿ ಡಿ.ವೈ.ಎಸ್.ಪಿ ಶಿವಾನಂದ ಮದರಖಂಡಿ ಅವರ ಮುಂದಾಳತ್ವದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ ರವರ 150 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಏಕತಾ ಓಟ ಮ್ಯಾರಥಾನ್ ನಡೆಯಿತು.

31/10/2025

31-10-25 ದಾಂಡೇಲಿ ನಗರದ ಜೆ.ಎನ್. ಮಾರುತಿ ಮಂದಿರದಲ್ಲಿ ನ.1 ರಂದು ಅನ್ನಕೂಟ ಮಹೋತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಟ್ರಸ್ಟ್ ಮನವಿ ಮಾಡಿದೆ

31/10/2025

31-10-25 ಶಿರಸಿ ನಗರಸಭೆ ಆವರಣದಲ್ಲಿ ನಗರಸಭೆಯ ವಿವಿಧ ಯೋಜನೆಗಳಡಿ ಸ್ವಚ್ಛತೆ ಮತ್ತು ಸುರಕ್ಷತಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ನಡೆಯಿತು

31/10/2025

31-10-25 ಕಾರವಾರ ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಶುಕ್ರವಾರ ಬೆಳಗ್ಗೆ ಏಕತಾ ಓಟ ಕಾರ್ಯಕ್ರಮ ನಡೆಯಿತು.

31/10/2025

31-10-25 ಕಾರವಾರ ನಗರದ ಸಮಸ್ಯೆಗಳನ್ನು ನಿಗಧಿತ ಸಮಯದಲ್ಲಿ ಬಗೆಹರಿಸಲು ಹಾಗೂ ಕಚೇರಿಯ ಆಡಳಿತವನ್ನು ಪಾರದರ್ಶಕವಾಗಿಡಲು ಮೊಬೈಲ್ ಆ್ಯಪ್ ಸಿದ್ದಪಡಿಸಿದ್ದು ಕೆಲವೇ ದಿನಗಳಲ್ಲಿ ಈ ಆ್ಯಪ್ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ನಗರಸಬೆಯ ಆಯುಕ್ತ ಜಗದೀಶ ಹುಲಗೆಜ್ಜು ಹೇಳಿದರು.

30/10/2025

30-10-25 ಕರಾವಳಿಯ ಎಲ್ಲಾ ಬಂದರುಗಳನ್ನು ಮೇಲ್ದರ್ಜೆಗೆರಿಸಿ ಹೂಡಿಕೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಪೂರಕ ಪರಿಸರವನ್ನು ನಿರ್ಮಿಸುತ್ತೇವೆ ಎಂದು ಮುಂಬೈನಲ್ಲಿ ನಡೆದ ಇಂಡಿಯಾ ಮ್ಯಾರಿಟೈಮ್ ವೀಕ್ 2025ರ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಹೇಳಿದರು.

30/10/2025

30-10-25 ಹೊನ್ನಾವರ ತಾಲೂಕಿನ ಹರಡಸೆಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ನಡೆದ ಕಾರ್ತಿಕ ದಿಪೋತ್ಸವದ ಭಕ್ತಿ ಭಜನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಏಕೈಕ "ಬುಲ್ ಬುಲ್ ತರಂಗ್" ವಾದಕರಾದ ವಿಶ್ವನಾಥ ಭಟ್ ಗೋಡಮಕ್ಕಿ ಹಾಗೂ ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದರು ಭಾಗಿಯಾಗಿ ಎಲ್ಲರ ಗಮನ ಸೆಳೆದರು.

30/10/2025

30-10-25 ಗೋವಾದ ಮಾಷೆಂ ಬಳಿ ನಡೆದ ಭೀಕರ ಅಪಘಾತದಲ್ಲಿ ಕಾರವಾರದ ಕ್ರಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿ, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.

30/10/2025

30-10-25 ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಜಿಲ್ಲೆಯ ರೈತರ ಬದುಕು ಕಸಿದುಕೊಂಡಿದೆ. ಕೊಯ್ಲಿಗೆ ಬಂದ ಬೆಳೆ ನೆಲಕಚ್ಚಿ ಹೋಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

Address

Old Fish Market Road
Kumta
581343

Alerts

Be the first to know and let us send you an email when Canara Plus Channel posts news and promotions. Your email address will not be used for any other purpose, and you can unsubscribe at any time.

Contact The Business

Send a message to Canara Plus Channel:

Share